Tuesday, December 2, 2008

ಮಗುವೇ ತಂದೆಯ ಕೊಲೆ ಮಾಡುತ್ತದೆ

ಆಕೆ ನಡುಗಿ ಹೋದಳು. ಅವಳ ಗಂಡ ಜೋರಾಗಿ ನಕ್ಕು ಮಗುವನ್ನು ಹತ್ತಿರಕ್ಕೆಳೆದುಕೊಂಡ . ಜ್ಯೋತಿಷಿ ಮಾತ್ರ ಗಂಭೀರವಾಗಿ ಮೇಲಿನ ಮಾತನ್ನು ಹೇಳಿದ."ಸ್ವಾಮಿ ನೀವು ಹೇಳ್ತಿರೋದು ನಿಜಾನಾ? ಇನ್ನೊಂದು ಸಲ ನೋಡಿ . ಎಲ್ಲೋ ಜಾತಕ ಬದಲಾಗಿರಬೇಕು" ಆಕೆ ಗಡಿಬಿಡಿಯಿಂದ ಹೇಳಿದಳು.
"ಇಲ್ಲ ನಿಮ್ಮ ಮಗುವಿನ ರಾಶೀನೆ ಹಾಗಿದೆ.ಅವನ ಜಾತಕದಲ್ಲೇ ಈ ಥರ ಇದೆ."ಅವಳು ಜೋರಾಗಿ ಉಸಿರೆಳೆದುಕೊಂಡಳುಒಮ್ಮೆ ಮಗುವನ್ನು ಗಂಡನನ್ನು ನೋಡಿದಳು . ತನ್ನ ಮಾಂಗಲ್ಯವನ್ನು ತನ್ನ ಕರುಳ ಕುಡಿಯೇ ಕೀಳುತ್ತಾನೆಯೇ?.
ಇನ್ನೂ ಹಾಲುಗಲ್ಲದ ಮಗು .ಹತ್ತು ವರ್ಷ ಮಕ್ಕಳಿಲ್ಲದೆ ದೇವರಲ್ಲಿ ಬೇಡಿ ಕೊನೆಗೆ ಹುಟ್ಟಿದ ಮಗು. ತನ್ನ ಅಪ್ಪನನ್ನೇ ಕೊಲ್ಲುತ್ತಾನೆಯೇ?ಆತನೋ ಪ್ರಖ್ಯಾತ ಜ್ಯೋತಿಷಿ . ಅವನ ಮಾತು ಎಂದಿಗೂ ಸುಳ್ಳಾದದ್ದು ಇಲ್ಲಹೋಗಲಿ ಕೊಲೆ ಯಾವಾಗ ನಡೆಯುತ್ತದೆ ಎಂಬ ಅವಳ ಪ್ರಶ್ನೆಗೆ ಮಗುವಿಗೆ ಐದು ತುಂಬುವುದರೊಳಗಾಗಿ ಎಂದು ಉತ್ತರ ಬಂತು
ಅವಳ ಗಂಡ ಆ ಜ್ಯೊತಿಷಿಗೆ ತಲೆ ಕೆಟ್ಟಿದೆ ಎಂದ. ಯಾಕೆಂದರೆ ಮಾರನೆಯ ದಿನವೇ ಮಗುವಿನ ಐದನೆಯ ಹುಟ್ಟಿದ ಹಬ್ಬ.ಅವಳು ಮಗುವನ್ನು ಶಪಿಸಿಕೊಂಡಳು. ಇಂಥ ಕೊಲೆಗಾರ ಮಗು ಏಕೆ ಹುಟ್ಟಿತು ಎಂದು ಬೈದುಕೊಂಡಳು.
ಮಗು ಮಾತ್ರ ಮುಗ್ದವಾಗಿ ನಕ್ಕಿತು. ಗಂಡ ಅವಳಿಗೆ ಸಮಾಧಾನ ಮಾಡಿದ . ಇದನ್ನೆಲ್ಲಾ ನಂಬಬೇಡ . ದುಡ್ದು ಮಾಡುವುದಕ್ಕೆ ಒಂದು ಸುಳ್ಳು ಎಂದ.ಆಕೆ ಮಾತ್ರ ಅಳುತ್ತಲೇ ಇದ್ದಳು.
ಮಾರನೆಯ ದಿನ
ಮಗು ಬಾಲ್ಕನಿಯಲ್ಲಿ ಆಟವಾಡುತ್ತಿತ್ತು.
ಅವಳು ದೇವರ ಮುಂದೆ ಕುಳಿತಿದ್ದಳು.ಗಂಡ ಟಿ.ವಿ ನೋಡುತ್ತಿದ್ದ.ದೊಡ್ಡ ಬಂಗಲೆ ಅದು.ಮನೆಯಲ್ಲಿ ಹಲವಾರು ಜನ ಕೆಲಸ ಮಾಡುತ್ತಿದ್ದರು.ತೋಟದಾಳು ಸಿದ್ದ ಬೆಳಗ್ಗೆ ಏನೂ ತರಲೆಂದು ಹೋದವನು ಇನ್ನೂ ಬಂದಿರಲಿಲ್ಲ. ಹೆಂಡತಿ ದೇವರ ಪೂಜೆಗೆ ಸಾಮಾನು ತರಲು ಕಳಿಸಿದ್ದಳು.. ಪರಿಹಾರಕ್ಕಾಗಿ ದೊಡ್ಡ ಹೋಮ ಮಾಡಬೇಕಿತ್ತು
ಗಂಡ ಇದ್ದಕಿದ್ದಂತೆ ಎದ್ದ . ಮಗುವನ್ನು ಪಾರ್ಕಿಗೆ ಕರೆದುಕೊಂಡು ಹೋಗುತ್ತೇನೆ ಎಂದ.ಅವಳು ಇಂದು ಮಾತ್ರ ಬೇಡ . ಇಂದು ಕಳೆದರೆ ಸಾಕು ಎಂದು ಗೋಗರೆದಳುಗಂಡ ಕೇಳಲಿಲ್ಲಅದೇನಾಗುತ್ತೋ ನೋಡೋಣ ಎಂದು ಮಗುವನ್ನು ಕರೆದುಕೊಂಡು ಹೊರಟೇ ಬಿಟ್ಟ.ಹೆಂಡತಿ ಅಳು ಜೋರಾಯ್ತು.
ಇತ್ತ ಪಾರ್ಕಿನಲ್ಲಿ ಮಗುವನ್ನು ಆಟವಾಡಿಸುತ್ತಾ ಅವಳ ಗಂಡ ಆ ಘಳಿಗೆಗಾಗಿ ಕಾಯುತ್ತಿದ್ದ.
ಕೊನೆಗೂ ವ್ಯಕ್ತಿ ಕಾಣಿಸಿದಅವನನ್ನು ಮಾತಾಡಿಸಿದ"ಯಾಕೋ ಸಿದ್ದ ಮಾರ್ಕೆಟಿಗೆ ಹೋಗಿ ಬಾ ಅಂದರೆ ಇಲ್ಲೇನು ಮಾಡ್ತಾ ಇದ್ದೀಯಾ?"ಸಿದ್ದ ಮಾತಾಡಲಿಲ್ಲ
ಮಗು ಸಿದ್ದನ್ನನ್ನು ಕಂಡಕೂಡಲೆ "ಸಿದ್ದಾ" ಎಂದು ತಬ್ಬಿಕೊಂಡಿತು. ಆತ ಮಗುವನ್ನು ದೂರ ತಳ್ಳಿದ." ಸಿದ್ದ ಯಾಕೋ ಕೋಪ " ಮತ್ತೆ ಅವನ ಮೇಲೆ ಬಿದ್ದಿತು . ಅವನಿಗೊ ಮಗುವಿಗೂ ತುಂಬಾ ಪ್ರೀತಿ .
ಆತ ಮತ್ತೆ ಗಾಭರಿಯಿಂದ ನೂಕಿದ.ಮಗುವಿಗೂ ಕೋಪ ಬಂತು . ತಂದೆಯ ಕೈ ಹಿಡಿದುಕೊಂಡು ನಿಂತಿತು
ಗಂಡ ಸಿದ್ದನನ್ನು ಮನೆಗೆ ಕರೆದ . ಸಿದ್ದನಿಗೆ ಒಪ್ಪದೆ ವಿಧಿ ಇರಲಿಲ್ಲ ವಾದ್ದರಿಂದ ಅವನೊಂದಿಗೆ ಹೊರಟ
ದಾರಿಯಲ್ಲಿ"ಸಿದ್ದ ನಂಗೆಲ್ಲಾ ಗೊತ್ತು. ಏನು ಗೊತ್ತಾಗಬಾರದು ಅಂತಿದ್ರೋ ಅದು ನಂಗೆ ತಿಳೀತು ಆದರೆ ನಾನೇನು ಮಾಡಲ್ಲ ಹೆದರ್ಕೋಬೇಡ" ಸಿದ್ದ ಬೆವೆತಿದ್ದ ಗಡ ಗಡ ನಡುಗುತ್ತಿದ್ದ.ಆ ತೋಟದ ಮನೆಯ ಹತ್ತಿರ ಬರುತ್ತಿದ್ದಂತೆ "ಬುದ್ದಿ ತಪ್ಪಾಯ್ತು ನಾನೆಷ್ಟು ಹೇಳಿದರು ಅಮ್ಮಾವ್ರು ಕೇಳಲಿಲ್ಲ" ಕಾಲಿಗೆ ಬಿದ್ದ.ಹೋಗಲಿ ಬಿಡು ಅಳಬೇಡ ಆಗಿದ್ದಾಗಿ ಹೋಯ್ತು . ಇನ್ನು ಇವತ್ತು ಮಗುವಿನ ಐದನೇ ಹುಟ್ಟುಹಬ್ಬ .ಫಂಕ್ಶ್ನ‌ಗೆ ರೆಡಿ ಮಾಡೋಣ"ಮೇಲೆದ್ದ ಸಿದ್ದನಿಗೆ ಯಾರೋ ನೂಕಿದಂತಾಯ್ತು .
ಆಯ ತಪ್ಪಿದ ಆತ ಬಾವಿಗೆ ಬಿದ್ದ. ಬೀಳುವಾಗ ಆ ಮಗು ಕೇಕೆ ಹಾಕಿ ನಕ್ಕಿದ್ದು ಕಂಡಿತು.ಒಂದೇ ಚೀತ್ಕಾರದ ನಂತರ ಇಡೀ ತೋಟ ನಿಶ್ಯಬ್ಧವಾಯ್ತು .ಸಿದ್ದ ಬಿದ್ದ ಸಿದ್ದ ಬಿದ್ದ ಎಂದು ಮಗು ನಗುತ್ತಿತ್ತು
ಆಗಲೆ ಅವನು ತನ್ನನ್ನು ನೂಕಿದ ಸೇಡನ್ನು ಮಗು ತೀರಿಸಿಕೊಂಡಿತ್ತು.ಸ್ವಲ್ಪ ಸಮಯದ ನಂತರ ಆತ ಮೊಬೈಲ್ ತೆಗೆದು ಫೋನ್ ಮಾಡಿದ"ಸಾರ್ ನಿಮ್ಮಿಂದ ದೊಡ್ಡ ಸಹಾಯವಾಯ್ತು . ನನ್ನ ಮಗುವಿನ ತಂದೆಯನ್ನು ಮಗುವಿನ ಕೈನಲ್ಲೇ ಕೊಲ್ಲಿಸಿದೆ.ನನಗೆ ಈಗ ತೃಪ್ತಿಯಾಯ್ತು ""ಒಕೆ ಒಕೆ" ಅದು ಜ್ಯೋತಿಷಿಯ ದನಿ
ಸ್ವಲ್ಪ ಹೊತ್ತಿನ ನಂತರ ಮಗುವಿನ ಕೈ ಹಿಡಿದುಕೊಂಡು ಮನೆಗೆ ಬಂದ"ಆ ಜ್ಯೋತಿಷಿ ಹೇಳಿದ್ದೆಲ್ಲಾ ಸುಳ್ಳು. ಪಾಪು ಸಿದ್ದನನ್ನು ಬಾವಿಗೆ ಬೀಳಿಸ್ತು. ಸುಮ್ಮನ್ದೆ ನನ್ನ ಕೊಲೆ ಮಾಡುತ್ತೆ ಅಂತ ಹೇಳಿದ"ಅವಳ ಮುಖ ಬಿಳುಚಿಕೊಂಡಿತು."ಮಗು ಸಾಯ್ಸಿದ್ದ್ದು ಅಂತ ಯಾರಿಗೂ ಹೇಳಬೇಡ . ಸುಮ್ಮನ್ದೆ ಇಲ್ಲ ಸಲ್ಲದ ತೊಂದರೆ . ಆಯ್ತಾ "ಅವಳ ಕಂಗಳು ಕಣ್ಣೀರಿನಿಂದ ತುಂಬಿತ್ತು . ಆಯಿತು ಎನ್ನುವಂತೆ ತಲೆ ಆಡಿಸಿದಳು
ಕೊನೆ ಕೊಸರು: ಸಿದ್ದನನ್ನು ಬಾವಿಗೆ ಬೀಳಿಸಿದ್ದು ಮಗು ಅಲ್ಲ ಮಗುವಿನ ತಾಯಿಯ ಗಂಡ . ಆ ಸತ್ಯ ರಹಸ್ಯವಾಗಿಯೇ ಉಳಿಯಿತು ಹಾಗೆಯೇ ಆ ಮಗುವಿನ ತಂದೆ ಸಿದ್ದ ನೆಂಬ ರಹಸ್ಯ ತಾಯಿಗಲ್ಲದೆ ಬೇರಾರಿಗೂ ಗೊತ್ತಿಲ್ಲವೆಂದು ಅವಳು ತಿಳಿದಿದ್ದಳು ಕೊನೆಯವರೆಗೂ

ಮಕ್ಕಳ ಹಾಡುಗಳು ಮೆಲುಕುವುದಕ್ಕೆ

ನನ್ನ ಮಗಳಿಗೆ ಇಂಗ್ಲೀಷ್ ರೈಮ್ಸ್ ಅನ್ನು ಕನ್ನಡಕ್ಕೆ ಅನುವಾದಿಸಿ ಹೇಳ್ಬೇಕು ಆಗ ಹೊಳೆದ ಕೆಲವು ಸಾಲುಗಳು
ಪುಟ್ಟಿ ಜೊತೆ ಇತ್ತೊಂದು ಕುರಿಮರಿಅದರ ಆಟ ಏನ್ಹೇಳ್ತೀತಿರಿ ರೀ
ಬಣ್ಣ ಅದರದು ಬಿಳುಪು ಕಣ್ಣ್ಣು ಫಳ ಫಳ ಹೊಳಪು
ಎಲ್ಲಿಗೋದ್ರೂ ಪುಟ್ಟಿ , ಅವಳ ಬೆನ್ನು ಹತ್ತಿಮರಿ ಹೋಗ್ತಿತ್ತು ಬಿಟ್ಟು ತನ್ನ ಹಟ್ಟಿ
ಒಮ್ಮೆ ಹೋಗಿ ಪುಟ್ಟಿ ಶಾಲೆಗೆಮಾಡ್ತು ತುಂಬಾ ದಾಂಧಲೆಟೀಚರಮ್ಮ ಹೊಡ್ಯೋಕೆ ಹೋದರೆಓಡ್ತು ಬ್ಯ್ಬಾ ಬ್ಯಾ ಅಂತಲೇ
ಹೊಳೆ ಹೊಳೆಯುವ ನಕ್ಷತ್ರ ಬಾರೋ ಒಮ್ಮೆ ನನ್ಹತ್ರಅದು ಹೆಂಗೆ ಹೋಗಿ ಸೇರಿದೆ ಆಕಾಶನನ್ನೂ ಕರ್ಕೊಂಡು ಹೋಗು ಬಾಬಾರಾ
ಗುಂಡ ಗುಂಡಿ ನೀರಿಗೋದ್ರು ಕೆರೆಯ ಏರಿಗೆಗುಂಡ ಗುಂಡಿ ಜಾರಿ ಬಿದ್ರು ನಡು ದಾರಿಗೆ
ದೂರ ಹೋಗು ಮಳೆರಾಯಆಟ ಆಡ್ಬೇಕು ನಾನಯ್ಯ
ನೀನು ಬಾ ನಾಳೆಸ್ಕೂಲಿಗೆ ಹೋಗೋ ಟೈಮಲ್ಲೇಅಮ್ಮ ನೋಡಿ ನಿನ್ನ ಬೇಡ ಸ್ಕೂಲಿಗೆ ಅಂತಾಳೆ

Monday, December 1, 2008

qan

ನಮ್ಮ ತಾಯಿಯ ಅಜ್ಜಿಯ ಊರು ಈ ಕಣಕಟ್ಟೆ. ಅಲ್ಲಿನ ದೇವಿ ದುಗ್ಗಮ್ಮನನ್ನು ನೋಡಲು ಹೊರಟಿದ್ದಾದರೂ ನಮ್ಮ ಮುತ್ತಜ್ಜಿಯ ಊರು , ಅಲ್ಲಿನ ನಮ್ಮ ಅಜ್ಜಿಯ ಮನೆ, ಎಲ್ಲವನ್ನೂ ನೋಡುವ ಆಸೆಯೇ ನಮ್ಮಲ್ಲಿ ಹೆಚ್ಚಾಗಿದ್ದು ಸುಳ್ಳಲ್ಲ.ನಾವು ಶುಕ್ರವಾರ ಸಂಜೆ ವೇಳೆ ಹೊರಟ್ಟಿದ್ದರಿಂದ ಅರಸೀಕೆರೆ ಸೇರಿದ್ದು ರಾತ್ರಿ ಹನ್ನೆರೆಡು ಘಂಟೆಗೆ . ಹರಿಹರಪುರ ಶ್ರೀಧರ್‌ರವರು ಸಲಹೆಯಂತೆ ಅಲ್ಲಿನ ಮಯೂರ ಲಾಡ್ಜ್‌ನಲ್ಲಿ ಅಂದು ತಂಗಿದೆವು. ಬೆಳಗ್ಗೆ ೮.೩೦ ಗೆ ಹೊಟ್ಟೆ ತುಂಬಿಸಿಕೊಳ್ಳಲು ಅಯೋಧ್ಯ ಹೋಟೆಲ್‌ಗೆ ನುಗ್ಗಿದೆವು. ರುಚಿಯಾದ ತಿಂಡಿಗಳು, ನಿಜಕ್ಕೂ ಹೋಟೆಲ್ ಚಿಕ್ಕದಾದರೂ ತಿಂಡಿ ಬಹಳ ರುಚಿ. ನಿಲ್ಲಲೂ ಜಾಗವಿಲದಂತಹ ಪರಿಸ್ಥಿತಿಯಲ್ಲೂ ತಮ್ಮ ಸರದಿಗಾಗಿ ಜನ ಕಾಯುತ್ತಿರುತ್ತಾರೆ.ಅಲ್ಲಿಂದ ಹೊರಟಿದ್ದು ಸೀದಾ ಕಣಕಟ್ಟೆಗೆ ಬಾಣಾವರದ ದಾಟಿ ಹೋಗುತ್ತಿದಂತೆ ಅಲ್ಲಿನ ಹಸಿರು ಕಣ್ಣು ತುಂಬಿತು . ತೀರ ಬಯಲು ಸೀಮೆಯಲ್ಲಿ ಬೆಳೆದ ನಮಗೆ ನಮ್ಮ ಮಕ್ಕಳಿಗೆ ಅವನ್ನು ನೋಡುವುದೇ ಒಂಥರಾ ಪರಮಾನಂದ. ನಮ್ಮ ತಾಯಿಗಂತೂ ಸಡಗರ . ಎಷ್ಟಾದರೂ ತಮ್ಮ ಅಜ್ಜಿಯ ಊರಲ್ಲವೇ?ಅಂತೂ ಇಂತೂ ನಾವು ಬಯಸುತ್ತಿದ್ದ ಕಣಕಟ್ಟೆ ಬಂದೇ ಬಿಟ್ಟಿತು ಅಮ್ಮ ಅಲ್ಲಿನ ಅಂಗಡಿಯೊಂದರಲ್ಲಿ ಮಾತಾಡಿದರು . ನರಸಕ್ಕ(ನಮ್ಮ ಮುತ್ತಜ್ಜಿಯ ಹೆಸರು) ತುಂಬಾನೆ ಪ್ರಸಿದ್ದವಾದ ಹೆಸರು ಅಲ್ಲಿನ ಊರಿನವರಿಗೆ . ಅವರು ಈಗ ಇಲ್ಲವಾದರೂ ಅವರ ಹೆಸರು ಮಾತ್ರ ಜನರ ನಾಲಿಗೆಯ ಮೇಲೆ ಇನ್ನೂ ಹರಿದಾಡುತ್ತಿದೆ. ನರಸಕ್ಕನ ಮೊಮ್ಮಗಳು ತನ್ನ ಮೊಮ್ಮ್ಮಕ್ಕಳೊಂದಿಗೆ ಊರಿಗೆ ಭೇಟಿ ನೀಡಿದ್ದೇ ಅಲ್ಲಿನ ಜನರ ಕೌತಕಕ್ಕೆ ಕಾರಣವಾಗಿತ್ತು.ಮೊದಲು ದೇವಿಯ ದರ್ಶನ ನಂತರ ಊರನ್ನು ನೋಡುವುದು ಎಂದು ನಿರ್ಧಾರವಾಯ್ತು ದುಗ್ಗಮ್ಮ್ಮ ಅಲ್ಲಿನ ಕಣಕಟ್ಟೆ ಕೆರೆಯ ಏರಿಯ ಮೇಲೆ ಉದ್ಭವಾಗಿರುವಂತಹ ದೇವಿ . ಕಣಕಟ್ಟೆ ಊರಿನ ಜನರ ರಕ್ಷೆಗೆಂದೆ ಉದ್ಭವಿಸಿರುವಂತಹವಳೆಂದು ಪ್ರತೀತಿ. ನಮ್ಮ ತಾಯಿಯ ಮನೆಯವರೆಲ್ಲಾ ಯಾವುದೇ ಶುಭ ಕಾರ್ಯಕ್ಕೆ ಹೋಗುವ ಮುನ್ನ ಆ ದೇವಿಯ ದರ್ಶನ ಪಡೆದೇ ಹೋಗುತ್ತಾರೆ .

ಅಲ್ಲಿ ನಾವುಗಳೇ ದೇವಿಗೆ ಗರ್ಭಗುಡಿಯೊಳಗೆ ಹೋಗಿ ಪೂಜೆ ಮಾಡಬಹುದು. ಜಾತಿಯ ಪ್ರಶ್ನೆ ಅಂತಲ್ಲ ಆದರೆ ಬ್ರಾಹ್ಮಣರಿಗೆ ಮಾತ್ರ ಅಲ್ಲಿನ ಪೂಜಾರಿಗಳು ಕೊಡುವ ಮರ್ಯಾದೆ ಇದು.

ನಾವು ಹೋದಾಗ ದೇವಸ್ಥಾನ ಬಾಗಿಲು ಹಾಕಿತ್ತು. ನಮ್ಮ ಭಾವ ಹಾಗು ಅಮ್ಮ ಪೂಜಾರಿಯನ್ನು ಕರೆದುಕೊಂಡು ಬರಲು ಮತ್ತೆ ಊರಿಗೆ ಹೋದರು.

ಅಷ್ಟು ಹೊತ್ತಿಗಾಗಲೇ ಆ ಪೂಜಾರಿಗೆ ಯಾರು ಬ್ರಾಮ್ರು ಅಮ್ಮಾವರ ದರ್ಶನಕ್ಕೆ ಬಂದವ್ರೆ ಎಂಬ ವಿಶ್ಯ ಗೊತ್ತಾದದ್ದರಿಂದ ಆತ ಕೂಡಲೆ ಬಸ್ ಮಾಡಿಕೊಂಡು ಬಂದಿದ್ದ್ದ . ನಂತರ ನಮ್ಮ ಭಾವನಿಗಾಗಿ ಕಾದು ಕೊನೆಗೆ ಸುಮಾರು ಒಂದು ಘಂಟೆ ಕಾಯುವಂತಾಯ್ತು .

ಕೊನೆಗೂ ಆ ತಾಯಿಯ ದರ್ಶನ ಮಾಡಿಕೊಂಡು , ಪೂಜೆ ಮಾಡಿ ಅಲ್ಲಿನ ದೇವಸ್ಥಾನದ , ಕೆರೆಯ ಒಂದಷ್ಟು ಫೋಟೊ ತೆಗೆದುಕೊಂಡು ನಂತರ ಇನ್ನೇನು ಹೊರಡಬೇಕೆಂದುಕೊಂಡೆವು ಆಗ ನಮ್ಮ ಅತ್ತೆ ಬೆಳಗೂರು ಶ್ರೀ ಆಂಜನೇಯ ಸ್ವಾಮಿಯ ದರ್ಶನ ಮಾಡಿಕೊಂಡು ಹೊರಡೋಣ ಎಂದರು.

ಅಂತೆಯೇ ದರ್ಶನ ಮುಗಿಸಿಕೊಂಡು ಬರುವಷ್ಟರಲ್ಲಿ ಕಣಕಟ್ಟೆಗೆ ಬರುವಷ್ಟರಲ್ಲಿ ಸಂಜೆ ಏಳು ಘಂಟೆಯಾಗಿತ್ತು . ಅಮ್ಮನ ಅಜ್ಜಿಯ ಮನೆ ನೋಡುವ ಕಾತುರ ನಮಗೆ ಇನ್ನೂ ಹೆಚ್ಚಾಗಿತ್ತು.

ಅಂತೂ ಇಂತು ನಮ್ಮ ಮುತ್ತಜ್ಜಿಯ ಮನೆ ಇದ್ದ ಜಾಗಕ್ಕೆ ಬಂದೆವು . ನಮ್ಮ ಆಸೆ ಎಲ್ಲಾ ಟುಸ್ ಆಯಿತು ಏಕೆಂದರೆ ನಮ್ಮ ಮುತ್ತಜ್ಜಿಯ ಮನೆ ಇದ್ದ ಜಾಗ ಏರ್‌ಟೆಲ್ ಟವರ್‌ಗೆ ಆಶ್ರಯವಾಗಿತ್ತು ನಮ್ಮ ಮುತ್ತಜ್ಜಿಯ ಮನೆ ಈಗ ಅಲ್ಲಿತ್ತು ಎಂಬುದಕ್ಕೆ ಕುರುಹೂ ಇರಲಿಲ್ಲ . ಅಲ್ಲಿಗೆ ಹೋಗುವುದಿರಲಿ ನೋಡುವುದಕ್ಕೂ ಬಹಳ ಕಷ್ಟ ಪಡಬೇಕಿತ್ತು. ರಾತ್ರಿ ಯಾದ್ದರಿಂದ ಫೋಟೋಗೂ ಸಿಗಲಿಲ್ಲ . ಆದರೂ ನಮ್ಮ ಯಜಮಾನರು ಬಂದದ್ದು ಬರಲಿ ಎಂದು ಒಂದಷ್ಟು ಕ್ಲಿಕ್ಕಿಸಿದರು.

ಊರು ಬಣ ಬಣ ಅನ್ನುತ್ತಿತ್ತು . ಅಲ್ಲಿ ಮನೆಗಳಿದ್ದರೂ ವಾಸಿಸಲು ಜನರೇ ಇಲ್ಲ ಹಾಗೂ ಹೀಗೂ ನಮ್ಮ ತಾಯಿಯ ಚಿಕ್ಕಮ್ಮನ ವಾರಿಗೆಯವರೊಬ್ಬರು ಸಿಕ್ಕರು. ಅಲ್ಲಿ ಇನ್ನೊಂದೆರೆಡು ನಿಮಿಷ ಇದ್ದರೆ ತಲೆ ಚಿಟ್ಟು ಹಿಡಿಯುತ್ತದೆಯೇನೋ ಎಂಬ ಅನುಮಾನ ಕಾಡತೊಡಗಿತು ಕೇವಲ ಏಳು ಘಂಟೆ ಅಂಥ ನೀರವ ಮೌನ , ಕತ್ತಲು ನಾನೆಂದೂ ಕಂಡಿದ್ದಿಲ್ಲ.

ಅಲ್ಲೆ ಕೊಂಚ ಮೇಲೆ ಶ್ರೀ ಲಕ್ಶ್ಮಿ ನಾರಾಯಣ ಸ್ವಾಮಿಯ ದೇವಸ್ಥಾನವಿತ್ತು . ಅದರ ಅರ್ಚಕರ ಮನೆಯೂ ಹತ್ತಿರವೇ ಇತ್ತು. ಅವರೂ ಕೂಡಲೆ ಬಂದರು . ಆ ದೇವರ ಮಹಾತ್ಮೆಯನ್ನು ಕೇಳಿ ಅಲ್ಲಿನ ಪೂಜೆ ಮುಗಿಸಿಕೊಂಡು ಬಂದು ಅಲ್ಲೇ ಇದ್ದ ಮುಕ್ಕಣ್ಣ ಮಾರಮ್ಮ ಎಂಬ ದೇವಿಯ ದೇವಸ್ಥಾನಕ್ಕೆ ಬಂದೆವು . ಅಂದು ನಮ್ಮ ಅದೃಷ್ಟವೋ ಏನೊ ದೇವಿ ಹೊರಡಿಸುವುದು(ದೇವಿ ಮೈ ಮೇಲೆ ಬರುವ ಸನ್ನಿವೇಶ) ನಡೆಯುತ್ತಿತ್ತು. ಒಂದಷ್ಟು ಜನರು ತಮ್ಮ ತಮ್ಮ ಸಮಸ್ಯೆಗಳನ್ನು ದೇವಿಯ ಮುಂದೆ ಇಡುತ್ತಿದ್ದರು. ದೇವಿಯ ದೊಡ್ಡ ಮುಖವಾಡ ಧರಿಸಿದ ವ್ಯಕ್ತಿಯೂಬ್ಬರ ಮೈ ಮೇಲೆ ದೇವಿ ಬಂದಿತ್ತಂತೆ.
ನಾವು ಹೊರಡಬೇಕು ಎಂದುಕೊಳ್ಳುತ್ತಿದ್ದಂತೆ ದೇವಿಯಿಂದ ನಾವಲ್ಲೇ ಇರಬೇಕೆಂಬ ಅಪ್ಪಣೆಯಾಯಿತು .
ಫೋಟೋ ಕ್ಲಿಕ್ಕಿಸಲು ಭಯ. ಹಾಗಾಗಿ ಫೋಟೊ ತೆಗೆಯಲಿಲ್ಲ
ಅಷ್ಟರಲ್ಲಿ ನನ್ನ ಮಗಳು ಆ ಮಾಮಿಯನ್ನು(ದೇವಿಯನ್ನು) ಮುಟ್ಟಬೇಕು ಎಂದು ಹಟ ಹಿಡಿದಳು.
ಕೊನೆಗೂ ಹೊರಡಬಹುದೆಂದು ನಮಗೆ ಅಪ್ಪಣೆಯಾಯಿತು . ನನ್ನ ಮಗಳು ದೇವಿಯ ಮುಖವಾಡವನ್ನು ಮುಟ್ಟಿ ಬಂದಳು.
ಕೊನೆಗೂ ಕಟ್ಟೆಯಿಂದ ಹೊರಡುತ್ತಿದ್ದಂತೆ ಅಮ್ಮನ ಕಣ್ಣಲ್ಲಿ ನೀರು .

ಯಾವುದೋ ಹಳೆಯ ನೆನಪು .ನಮ್ಮ ಅಜ್ಜಿಯ ಮನೆಗಾಗಿದ್ದ ಗತಿ ಅವಳಿಗೆ ನೋವು ತಂದಿತ್ತು
ಸಾಧ್ಯವಾದರೆ ಆ ಜಾಗವನ್ನು ಕೊಂಡುಕೊಳ್ಳುವುದೆಂದು ನಿರ್ಧರಿಸಿದೆ.
ನಂತರ ಮತ್ತೆ ಅರಸೀಕೆರೆ ಎಡೆಗೆ ಪಯಣ . ಮುತ್ತಜ್ಜಿಯ ಮನೆ ಊರು ಇವುಗಳ ಬಗ್ಗೆ ಅತೀವ ನಿರೀಕ್ಷೆ ಇಟ್ಟುಕೊಂಡಿದ್ದ ನಮಗೆ ಅಲ್ಲಿನ ಪಾಳು ಜಾಗ, ಪಾಳು ಬಿದ್ದ ಓರು ನಿರ್ಜನ ಬೀದಿಗಳ ನೋಡಿದ ಮೇಲೆ ಮನಸ್ಸು ಭಾರವಾಗಿತ್ತು

Tuesday, November 25, 2008

ಕ್ಶಮಿಸು ನಾ ರಾಧೆಯಲ್ಲ

ಅಂದು ಮತ್ತೆ ಕಿರಣ್ ಬಂದ ."ಪ್ರಿಯಾ" ಮೊತ್ತ ಮೊದಲ ಬಾರಿಗೆ ನನ್ನ ಹೆಸರನ್ನು ಕರೆದಾಗ ಮೈಯಲ್ಲಿ ಎನೋ ಅರಿಯದ ಪುಳಕ. ಅಭಿ ಮೊದಲ ರಾತ್ರಿ ಹತ್ತಿರ ಬಂದಾಗಲೂ ಹೀಗಾಗಿರಲಿಲ್ಲವೇನೋ "ಸಾರಿ ನಾನು ತುಂಬಾ ದಿನ ಹೀಗೆ ನಿರೀಕ್ಷೆ ಇಟ್ಟುಕೊಂಡು ಇರೋಕೆ ಆಗ್ತಾ ಇಲ್ಲ, ನಾನು ಹೇಳುತ್ತಿರೋದು ಮಾಡುತ್ತಿರೋದು ತಪ್ಪು ಅಂತ ನನಗೂ ಗೊತ್ತು . ಆದರೂ ಒಂದು ಮಾತನ್ನು ನಿಮ್ಮ ಹತ್ತಿರ ಕೇಳಲೇಬೇಕು ಅಂತ ನಿರ್ಧಾರ ಮಾಡಿದ್ದೇನೆ"
ನನಗೆ ಗೊತ್ತಿತ್ತು ಅವನು ಏನು ಕೇಳುತ್ತಾನೆಂದು ಆದರೆ ನಾನು ಅದಕ್ಕೆ ಮಾನಸಿಕವಾಗಿ ಸಿದ್ದಳಿರಲಿಲ್ಲ . ಹೇಗಾದರೂ ತಪ್ಪಿಸಿಕೊಳ್ಳಬೇಕಿತ್ತು. "ಕಿರಣ್ ನನಗೆ ಇವತ್ತು ಮನಸು ಸರಿ ಇಲ್ಲ . ಮಾತಿಗಿಂತ ಏಕಾಂತವೇ ಲೇಸಾಗಿದೆ . ಇಂದು ನಾನು ಯಾವ ಮಾತಿಗೂ ಬರೋದಿಲ್ಲ. ಲೀವ್ ಮಿ ಅಲೋನ್ ಪ್ಲೀಸ್"
ಕಿರಣ್ ಸಪ್ಪೆ ಮುಖ ಮಾಡಿಕೊಂಡು ಹೊರಟು ಹೋದ .
ಮನದಲ್ಲಿ ಏನೋ ನೋವು.ತನಗೂ ಅವನಿಗೂ ಯಾವರೀತಿಯಲ್ಲಿ ಸಮ?ವಯಸ್ಸಿನಲ್ಲಿ ಹುದ್ದೆಯಲ್ಲಿ ಎಲ್ಲಾ ರೀತಿಯಿಂದಲೂ ಆತ ಇನೂ ಚಿಗುರು ನಾನೋ ಬಲಿತ ಮರ.
ಚಿಗುರಿಗೆ ಮರ ಆಸರೆಯಾಗಬಲ್ಲುದೆ ಹೊರತು ಮರಕ್ಕೆ ಚಿಗುರು ಎಲ್ಲಿಯ ಆಸರೆ.ಆದರೇನು ಮನಸ್ಸು ಮರ್ಕಟ , ವಿವೇಕದ ಮಾತನ್ನು ಆಲಿಸಲು ಒಪ್ಪುತ್ತಿಲ್ಲ.
ವಿವೇಕ ಹಾಗು ಆಸೆಯ ಮಧ್ಯೆ ಯಾವತ್ತಿಗೂ ಆಸೆಗೆ ಜಯ ಹಾಗೆಯೇ ನನಗೂ ಆಗುತ್ತೇನೋ . ?
ಮುಂದೊಂದೆರೆಡು ದಿನ ಅವನನ್ನು ಭೇಟಿಯಾಗುವ ಅವಕಾಶ ತಪ್ಪಿಸಿಕೊಂಡೆ
ಆದರೂ ಅವನನ್ನು ನೋಡಬೇಕೆಂಬ ಆಸೆ ಬಲವಾಗಿಯೇ ಇತ್ತು.ಅದರಿಂದ ತಪ್ಪಿಸಿಕೊಳ್ಳಲಾಗಲಿಲ್ಲ
ರಾತ್ರಿಗಳಲ್ಲಿ ಅಭಿಯಿಂದ ದೂರ ಉಳಿಯಲಾರಂಭಿಸಿದೆ.
ಅಭಿಗೂ ಅಂತಹ ಅನುಮಾನ ಬರಲಿಲ್ಲ.
ಇಂತಹ ಇಕ್ಕಟ್ಟಿನ ಸಂಧರ್ಭದಲ್ಲೆ ಜರ್ಮನಿಯ ಪ್ರಾಜೆಕ್ಟ್ ಒಂದಕ್ಕೆ ನನ್ನ ಮೂರು ತಿಂಗಳ ಸಮಯ ಬೇಕಿತ್ತು.
ಇಂತಹದೊಂದು ಅವಕಾಶಕ್ಕೆ ನಾನು ಕಾಯುತ್ತಿದ್ದೆ. ನಾನು ನಿರ್ಧರಿಸಬೇಕಿತ್ತು. ಅದಕ್ಕೆ ಎಲ್ಲರಿಂಡ ದೂರವಾಗಿ ಇರುವುದು ಬಹು ಮುಖ್ಯವಾಗಿತ್ತು.
ಚಿದುವನ್ನು ನೋಡಿಕೊಳ್ಳಲು ತಾಯಿಯನ್ನು ಬರಹೇಳಿದೆ.
ಅಭಿ ಖುಶಿಯಾಗಿಯೇ ಕಳಿಸಲು ಒಪ್ಪಿದ.
ಬೇಸರವಾಗಿದ್ದು ಮಾತ್ರ ಕಿರಣ್‌ಗೆ
"ಪ್ರಿಯಾ ನಾನು ನನ್ನಮನಸಿನ ಮಾತು ಹೇಳೋಕೆ ನೀವು ಸಮಯವನ್ನೇ ಕೊಡಲಿಲ್ಲ ಈಗ ಮೂರು ತಿಂಗಳು ನೀವಿಲ್ಲದೆ ನಾನು ಹೇಗಿರಲಿ?"
ನಾನು ಮೌನವಾಗಿದ್ದೆ. ನನಗೆ ಗೊತ್ತು ನನ್ನ ಪ್ರತಿಯೊಂದು ಮಾತು ಬಹಳ ಎಚ್ಚರಿಕೆಯಿಂದ ಆಡಬೇಕಿದೆ. ನನ್ನ ಮಾತು ಅವನಲ್ಲಿ ಯಾವ ಆಸೆಯನ್ನೂ ಉಂಟು ಮಾಡಬಾರದು .
ಈಗ ನಾನು ಎಲ್ಲರಿಂದ ದೂರದಲ್ಲಿ ಬಹುದೂರದಲ್ಲಿದ್ದೇನೆ
ನನ್ನ ಭವಿಷ್ಯದ ಹೆದ್ದಾರಿಯನ್ನು ಹುಡುಕುತ್ತಿದ್ದೇನೆ
ಬಂದು ಎರೆಡು ದಿನಗಳಾಗಿದ್ದವು
ಕಿರಣ್ ಎರೆಡು ಸಲ್ ಫೋನ್ ಮಾಡಿದ್ದ. ಜೀವನದಲ್ಲಿ ಏನೋ ಕಳೆದುಕೊಂಡಿದ್ದೇನೆ ಅನ್ನಿಸುತ್ತಿದೆ ಎಂದು ಮರುಗಿದ್ದ
ಅಭಿಯ ಮೈಲ್ ಮಾತ್ರ ಬಂದಿತ್ತು. ಮನೆಯ ವಾರ್ತೆಗಳ ಬಗ್ಗೆ ಕೊರೆದಿದ್ದ. ತನ್ನ ಕೆಲಸ ಹಾಗು ಮನೆಯ ಮಧ್ಯೆ ಸಮಯವೇ ಇಲ್ಲದಂತಾಗಿದೆ ಎಂದಿದ್ದ.
ನನ್ನ ಕೆಲಸವೂ ಸಾಗುತ್ತಿತ್ತು
ಕಿರಣನ ಇಲ್ಲದಿರುವಿಕೆ ಮೊದಮೊದಲು ಕಾಡತೊಡಗಿತು .
ಅವನ ನೆನಪು ಹಿಂಸಿಸಿತು. ನಂತರ ಮೂರು ದಿನಕ್ಕೆ ಮರೆಯಲಾರಂಭಿಸಿದೆ.
ಚಿದು ಬಳಿಯಲ್ಲಿ ಇಲ್ಲದಿರುವುದು ಹೃದಯಕ್ಕೆ ನೋವುಂಟಾಗತೊಡಗಿತು
ಅವನ ಅಮ್ಮ ಎಂಬ ಮಾತು ತಂಟೆ, ಚೇಷ್ಟೇ ನೆನಪಾಗತೊಡಗಿದವು
ನಾಲ್ಕನೆಯದಿನಕ್ಕೆ
ಅಭಿ ಫೋನ್ ಮಾಡಿದ್ದ
"ಪ್ರಿಯಾ ನೀನಿಲ್ಲ ಅಂದ್ರೆ ಎಷ್ಟು ಬೇಜಾರಾಗುತ್ತೆ ಅಂತ ನಂಗೆ ಈಗ ಗೊತ್ತಾಗ್ತಿದೆ. ನಿನ್ನ ಇಂಪಾರ್ಟೆನ್ಸ್ ನಂಗೆ ಈಗ ತುಂಬಾ ಗೊತ್ತಾಗ್ತಿದೆ. ಯಾವಾಗ ಮೂರು ತಿಂಗಳು ಕಳೆಯುತ್ತೋ ಅನ್ನಿಸ್ತಿದೆ"
ಚಿದೂ ಫೋನ್‍ನಲ್ಲೆ ಅಳಲಾರಂಭಿಸಿದ. ನನಗೂ ಅಳು ಉಕ್ಕಿತು.
ಚಿದು ಹುಟ್ಟಿದ ದಿನದ ನೆನಪಾಯ್ತು.
ಬೆನ್ನ ಹಿಂದೆಯೇ ನನ್ನ ಅಭಿಯ ದಾಂಪತ್ಯ ಜೀವನದ ಸುಖೀ ಕ್ಷಣಗಳು ಅರಿವಿಗೆ ಬರಲಾರಂಭಿಸಿದವು.
ಕಿರಣ್ ಮತ್ತೆ ಮೈಲ್ ಮಾಡಿದ
"ಪ್ರಿಯಾ ಐ ಅಮ್ ಬಿಕಮಿಂಗ್ ಮ್ಯಾಡ್. ಯಾವಾಗ ನೋಡ್ತೀನೋ ಅಂತ ಅಗಿದೆ, ನಾನು ನಿಮ್ಮ ಹತ್ತಿರ ತುಂಬಾ ಅಂದ್ರೆ ತುಂಬಾ ಮಾತಾಡಬೇಕಿದೆ. ಅದೆಲ್ಲಾ ಹೇಳದೆ ಎಲ್ಲಿ ಸತ್ತು ಹೋಗ್ತೀನೊ ಅಂತನ್ನಿಸ್ತಿದೆ"ಅವಲತ್ತುಕೊಂಡ
ರಿಪ್ಲೈ ಮಾಡಲಿಲ್ಲ ಈ ಸಲ.
ಹೀಗೆ ಮೂರು ಸಲವಾದ ನಂತರ ಕಿರಣ್ ಮತ್ತೆ ಮೈಲ್ ಮಾಡಲಿಲ್ಲ. ಮಾಡಿದರೂ ಕೆಲಸದ ವಿಷಯಕ್ಕೆ ಮಾತ್ರ ಮಾಡಿದ್ದಷ್ಟೆ.
ಎರೆಡು ತಿಂಗಳು ಕಳೆಯಿತು.
ಮನಸ್ಸು ಸದೃಡವಾಗಿತ್ತು
ರಾಧೆ ಏಕೆ ಕೃಷ್ಣನ ಮಡದಿಯಾಗಲಿಲ್ಲ ಎಂಬ ಪ್ರಶ್ನೆ ನನ್ನನ್ನು ಆಗಾಗ ಕಾಡಿತ್ತು .ಆದರೆ ಅದಕ್ಕೆ ಉತ್ತರ ಇತ್ತೀಚಿಗೆ ಹೊಳೆಯಲಾರಂಭಿಸಿತು.
ನನಗೆ ಬೇಕಿದ್ದುದ್ದು ನನಗಾಗಿ ಬೇಡುವ ಜೀವ ನಾನಿಲ್ಲದೆ ಬದುಕೇಇಲ್ಲ ಎನ್ನುವ ಮನಸ್ಸು ಅದು ನನ್ನ ಅಭಿಯದೇ ಆಗಿತ್ತು.
ಸಂಸಾರದ ಜವಾಬ್ದಾರಿಯ ಕಾರಣದಿಂದ ಒಬ್ಬರಿಗೊಬ್ಬರು ಅಪರಿಚಿತರಂತೆ ಇದ್ದರೂ ಜೀವನದಲ್ಲಿ ಇಬ್ಬರಿಗೂ ಇಬ್ಬರೂ ಬೇಕಿದ್ದರು
ಆದರೆ ಅದು ನನಗೆ ಕಾಣದೇ ಹೋಯ್ತು. ಕಿರಣನ ಆಕರ್ಷಣೆ ಆ ಅಗತ್ಯವನ್ನು ಮರೆಮಾಚಿತ್ತು.
ಅಭಿಯ ಸಾಂಗತ್ಯದ ಕೊರತೆ ಕಾಡಿದಷ್ಟು ಕಿರಣ್‍ನ ನೆನಪು ಕಾಡಲಿಲ್ಲ.
ಪ್ರಾಜೆಕ್ಟ್ ಯಶಸ್ವಿಯಾಗಿ ಮುಗಿಯಿತು.
ನನ್ನ ಭವಿಷ್ಯದ ಹೆದ್ದಾರಿಯೂ ಸ್ಪಷ್ಟವಾಯ್ತು.
ಮೂರುತಿಂಗಳ ಸುಧೀರ್ಘ ಅವಧಿಯ ನಂತರ ನಾನು ಮನೆಗೆ ಹೋಗಿದ್ದಕ್ಕೆ ಮನೆಯಲ್ಲಿ ಸಂತಸ , ಸಂಭ್ರಮ, ಅಭಿಯಂತೂ "ಇನ್ನೊಮ್ಮೆ ಈ ತರಹ ದೂರ ಕಳಿಸಿದರೆ ಕೆಲಸವೇ ಬೇಡ . ನಂಗೆ ನೀನಿರದೆ ಇರಕಾಗಲ್ಲ. " ಎಂದು ಬೈದ.
ಚಿದೂವಂತೂ ನನ್ನ ಸೆರಗನು ಕಟ್ಟಿಕೊಂಡೆ ಓಡಾಡುತ್ತಿದ್ದ .
ಮೊದಲಬಾರಿಗೆ ನನ್ನ ಅವಶ್ಯಕತೆ, ಜವಾಬ್ದಾರಿ, ಸ್ಥಾನ ಅರ್ಥವಾಯ್ತು. ಇದನ್ನು ಬಿಟ್ಟು ಪ್ರೇಮವೆಂಬ ಮಾಯಾಜಿಂಕೆಯ ಹಿಂದೆ ಓಡುತ್ತಿದ್ದೆನಲ್ಲ ನಾನೆಂಥಾ ಫೂಲ್ ಛೆ.
ಆಫೀಸಿಗೆ ಬಂದೆ .
ಕಿರಣ್‍ನ್ ಕಣ್ಣಲ್ಲಿ ಕಾತುರ, ಸಂತೋಷ ಎಲ್ಲವೂ ಇದ್ದವು.
"ಪ್ರಿಯಾ ಕೊನೆಗೂ ಬಂದಿರಲ್ಲ . ನಿಮ್ಮ್ಮ ಹತ್ತಿರ ತುಂಬಾ ಮಾತಾಡಬೇಕಿದೆ"
ನಾನು ಈ ಸಲ ತಲೆ ಕಣ್ಣನ್ನೇ ದಿಟ್ಟಿಸುತ್ತಾ ನುಡಿದೆ
"ನಿಮ್ಮನ್ನ ಇಲ್ಲಿಂದ ಜಯನಗರ ಬ್ರಾಂಚ್‌ಗೆ ಹಾಕಿದಾರೆ ಅಲ್ಲಿ ನಿಮ್ಮ ಅವಶ್ಯಕತೆ ಇದೆ."
"ಹಾಕಿದ್ದಾರೊ ಅಥವಾ ಹಾಕಿಸಿದ್ದಾರೋ ಪ್ರಿಯಾ "
"ಪ್ಲೀಸ್ ಕಾಲ್ ಮಿ ಮೇಡಮ್. ನಾನು ನಿಮಗಿಂತ ಹತ್ತು ವರ್ಷ ದೊಡ್ಡವಳು . ಮತ್ತೆ ನಿಮಗಿಂತ ಸೀನಿಯರ್. ನೆನಪಿರಲಿ"
"ಮೇಡಮ್ ನನ್ನ ಮನಸಿನ ಮಾತು ?"
"ಕಿರಣ್ ಇದು ಆಫೀಸ್ ನಾನು ನಿಮ್ಮ ಹೆಡ್, ನೀವು ನನ್ನ ಸಬ್ ಆರ್ಡಿನೇಟ್. ಆ ವಿಷ್ಯವಾಗಿ ಏನೊ ಬೇಕಾದರೂ ಮಾತಾಡಲೂ ನಾನು ರೆಡಿ. ಅದಿಲ್ಲವಾದರೆ ನಾನು ನಿಮ್ಮ ಮನಸಿನ ಮಾತಿಗೆ ಸಿಗಲು ಸರಿಯಾದ ವ್ಯಕ್ತಿ ಅಲ್ಲ."
ತಲೆ ತಗ್ಗಿಸಿಕೊಂಡು ಹೋಗುತ್ತಿದ್ದವನನ್ನೆ ನೋಡುತ್ತಾ ಮನಸ್ಸು ಹೇಳಿತು
"ಕ್ಷಮಿಸು ನಾ ರಾಧೆಯಲ್ಲ ಅಗುವುದೂ ಇಲ್ಲ"




ಒಲವೋ ಅಥವ ಸಂಸಾರವೋ -ಭಾಗ -೧

"ಪ್ರಿಯಾ ಇವತ್ತಿನಿಂದ ನಿಮ್ಮ ಡಿವಿಸನ್‌ಗೆ ಹೊಸ ಮೆಂಬರ್ . " ಶ್ರೀನಾಥ್ ಪರಿಚಯಿಸಿದಾಗ ಕಂಪ್ಯೂಟರ್ ಪರದೆಯಿಂದ ತಲೆ ಎತ್ತಿದವಳಿಗೆ ಹಸನ್ಮುಖಿಯಾದ ಆ ಯುವಕ ಕಾಣಿಸಿದ. ಎಲ್ಲೋ ನೋಡಿದಂತಿದೆ ಎನಿಸಿತಾದರೂ as a Division head ಏನನ್ನೂ ತೋರದೆ ಹಲೊ ಎಂದು ಕೈ ನೀಡಿದೆ ಆತನೂ ತನ್ನ ಹೆಸರನ್ನೂ ಕಿರಣ್ ಎಂದು ಪರಿಚಯಿಸಿಕೊಂಡ ಕ್ಯಾಂಪಸ್ ಇಂಟರ್ವ್ಯೂ ನಲ್ಲಿ ಸೆಲೆಕ್ಟ್ ಆಗಿದ್ದ ಪ್ರತಿಭಾನ್ವಿತ ಯುವಕ ಆತ ಎಂದೂ ತಿಳಿಯಿತು . ಹೆಡ್ ಆಫೀಸ್‍ನಲ್ಲಿ ಟ್ರೈನಿಂಗ್ ಯಶಸ್ವಿಯಾಗಿ ಮುಗಿಸಿ ಇಂದಿನಿಂದ ಡ್ಯೂಟಿಗೆ ರಿಪೋರ್ಟ್ ಮಾಡಿಕೊಳ್ಳಬೇಕಿತ್ತು.
ಆತನ ಮುಖದಲ್ಲಿ ಗಲಿಬಿಲಿ ಗಾಬರಿ ಎದ್ದು ಕಾಣುತ್ತಿತ್ತು. ಸ್ವಲ್ಪ ಹೊತ್ತಿನ ನಂತರ ನೆನೆಪಿಗೆ ಬಂದಿತು . ಇಂದು ಬೆಳಗ್ಗೆ ಕಾರ್ ಡ್ರೈವ್ ಮಾಡುವಾಗ ಬೈಕ್‌ನಲ್ಲಿ ಸಿಕ್ಕ ಯುವಕ ಈತನೇ ಅಲ್ಲವೇ? ಒಮ್ಮೆ ಕಣ್ಣು ಹೊಡೆದು ಸಿಳ್ಳೆ ಹಾಕಿ , ಬ್ಯೂಟಿಫುಲ್ ಎಂದು ಉಸುರಿ ಮಿಂಚಿನಂತೆ ಮಾಯವಾಗಿದ್ದ.
ಮನಸಿನಲ್ಲೇ ಈಡಿಯಟ್ ಎಂದು ಬೈದುಕೊಂಡೆ
ಮದುವೆಯಾಗಿ ಒಂದು ಮಗುವಿನ ತಾಯಿ ತಾನು ತನಗೆ ಇನ್ನೂ ಇಪ್ಪತ್ತು ಮೂರರ ಈ ಫೋರ ಲೈನ್ ಹಾಕುವುದೇ. ಬೆಳಗ್ಗೆ ಸಿಡಿಮಿಡಿಗೊಂಡಿದ್ದ ಮನಸಿಗೆ ಈಗ ಅವನನ್ನು ನೋಡಿ ಇನ್ನಷ್ಟು ಕೋಪ ಬಂದಿತು.
ಅವನಿಗೊಬ್ಬ ಮೆಂಟಾರ್‍ ಅನ್ನು ನೇಮಿಸಿದೆ. ಕಲಾ ಹೋದ ವರ್ಷ ತಾನೆ ಸೇರಿದ್ದಳು ಬಲು ಚುರುಕು ಅವಳು ಮಾಡಬೇಕಾದ ಕೆಲಸವನ್ನೆಲ್ಲಾ ಹೇಳಿ ಕ್ಯಾಬಿನ್‌ಗೆ ಆಗಮಿಸಿದೆ. ಕೆಲಸದಲ್ಲಿ ತನ್ಮಯಳಾದೆ
"ಮೇಡಮ್ " ಕೆಲಸಕ್ಕೆ ಭಂಗ ಬಂದಿತು ತಲೆ ಎತ್ತಿದೆ ಕಿರಣ್ ಬಂದು ನಿಂತಿದ್ದ
ಮೇಡಮ್ ಐಯಾಮ್ ಸಾರಿ ಫಾರ್ ವಾಟ್ ಹ್ಯಾಪೆನ್ಡ್ ಇನ್ ದ ಮಾರ್ನಿಂಗ್" ತಲೆ ಕೆಳಗೆ ಹಾಕಿ ಜೋಲು ಮೋರೆ ಮಾಡಿಕೊಂಡು ಉತ್ತರಿಸಿದ.
ಬೈಯ್ಯಬೇಕೆಂದವಳಿಗೆ ಏಕೊ ಮಾತುಗಳೇ ಬರಲಿಲ್ಲ . ಆತನ ಮುಖ ಲಕ್ಷಣವೇ ಹಾಗಿತ್ತೇನೂ ತಿಳಿಯಲಿಲ್ಲ.
" ಪರವಾಗಿಲ್ಲ ಬಿಡಿ . ನಿಮ್ಮ ವಯಸಿನಲ್ಲಿ ಇದೆಲ್ಲಾ ಕಾಮನ್. ಇನ್ನು ಚಿಕ್ಕ ವಯಸ್ಸು ಹಾಗೆ ಆಡಬೇಕನ್ನಿಸುತ್ತೆ . ಆದರೆ ನನ್ನ ಜಾಗದಲ್ಲಿ ಬೇರಾರಾದರೂ ಇದ್ದರೆ ಖಂಡಿತಾ ಪ್ರಾಬ್ಲಮ್ ಆಗ್ತಿತ್ತು."
"ಇಲ್ಲ ಮೇಡಮ್ ನೀವು ದೊಡ್ಡ ವೇದಾಂತಿ ಥರ ಮಾತಾಡ್ತಾ ಇದೀರಲ್ಲ ನಿಮಗೇನು ತುಂಬಾ ವಯಸ್ಸಾಗಿದೆಯಲ್ಲ. ಇಷ್ಟು ಚಿಕ್ಕ ವಯಸಿನಲ್ಲಿ ಇಡೀ ಡಿವಿಸನ್ ಹೆಡ್ ಆಗಿದೀರಾ ಅಂದ್ರೆ ರಿಯಲ್ಲಿ ಗ್ರೇಟ್ "
"ನಿಮಗ್ಯಾರು ಹೇಳಿದ್ರು ನಂಗೆ ಚಿಕ್ಕ ವಯಸ್ಸು ಅಂತ. ಅಲ್ರೆಡಿ ಐಯಮ್ 32 ಇಯರ್ಸ್ ಒಲ್ಡ್ ಯು ನೊ?" ಮಾತು ಹಳಿ ತಪ್ಪಿತು ಅನ್ನಿಸಿತು. ಆದರೆ ಜಾರಿಯಾಗಿತ್ತು ಮಾತು.
" 32 ಮತ್ತೆ ನೀವು . ಮೇಡಮ್ ಐ ಕಾಂಟ್ ಬಿಲೀವ್ ಇಟ್, ನೀವು ಸುಳ್ಳು ಹೇಳಿ ನನ್ನ ಅವಾಯ್ಡ್ ಮಾಡ್ತಾ ಇದೀರಾ" ಆತ ಉದ್ಗರಿಸಿದವನ ಮುಖದಲ್ಲಿ ಏನೂ ಒಂಥರಾ ಆಕರ್ಷಣೆ ಎನಿಸಿತು.
"ನಾನು ನಿಮಗ್ಯಾಕೆ ಸುಳ್ಳು ಹೇಳಲಿ. ಅಂಡ್ ವೈ ಶುಡ್ ಐ ಅವಾಯ್ಡ್ ಯು?"
ಕಾಫೀ ಟೈಮ್ ಆದದ್ದರಿಂದ ನಗುತ್ತಾ ಹೊರಗೆ ಬಂದೆ.
ಹೀಗೆ ಶುರುವಾದ ನಮ್ಮ ಸ್ನೇಹ ನಮ್ಮನ್ನು ಹತ್ತಿರ ತಂತು
ಕಿರಣ್‌ನ ನಗು ಆತನ ಮಾತು ಮಿಂಚಿನಂತಹ ನಡೆ ನನ್ನನ್ನು ಮೋಡಿ ಮಾಡಿತ್ತು
ದಿನೇ ದಿನೇ ಆತ ನನ್ನನ್ನು ಹೊಗಳುವುದು ಹೆಚ್ಚಾಗುತಿತ್ತು. ಮದುವೆಯಾಗಿ ಇಷ್ಟು ದಿನವಾದರೊ ಅಭಿ ಒಮ್ಮೆಯೂ ನನ್ನ ಬಗ್ಗೆ ಇಂತಹ ಮೆಚ್ಚುಗೆಯ ಮಾತಾಡಿರಲಿಲ್ಲ.
ಪ್ರಾಜೆಕ್ಟ್ ಅದೂ ಇದೂ ಅಂತ ಟೂರ್‌ನಲ್ಲೇ ಇರುತ್ತಿದ್ದ ಆತ ಬಸವಳಿದಿರುತ್ತಿದ್ದ . ನಾನು ಮನೆಗೆ ರಾತ್ರಿ ೧೦ಕ್ಕೆ ಹೋದರೆ ಆತ ನಿದ್ರಿಸಿರುತ್ತಿದ್ದ . ಬೆಳಗ್ಗೆ ನಾನು ಏಳುವ ವೇಳೆಗೆ ಕೆಲಸಕ್ಕೆ ಹೊರಟಿರುತಿದ್ದ. ನಮ್ಮಿಬ್ಬರ ಮಾತುಗಳು, ಭೇಟಿಗಳು , ಮಿಲನಎಲ್ಲವೂ ಕೇವಲ ಶನಿವಾರ ಅಥವ ಭಾನುವಾರ ಅದೂ ನಮ್ಮಿಬ್ಬರಿಗೂ ಕೆಲಸದ ಒತ್ತಡ ಇಲ್ಲದಾಗ. ಬೇರೆ ದಿನ ಮೈಲ್ನಲ್ಲಿ ತಪ್ಪಿದರೆ ಮೊಬೈಲ್ ನಲ್ಲಿ ಮಾತಾಡಿಕೊಂಡು ತೃಪ್ತಿಯಾಗುತ್ತಿದ್ದೆವು
ಚಿದೂ ನಾನು ಹೋಗುವ ವೇಳೆಗಾಗಲೆ ಕೆಲಸದಾಳು ಸರಸ್ವತಿಯ ಬಳಿಯಲ್ಲೇ ಜೋಗುಳ ಹಾಡಿಸಿಕೊಂಡು ಮಲಗಿರುತ್ತಿದ್ದ.
ಅಮ್ಮನ ನೆನಪೂ ಅವನಿಗಾಗುತಿರಲಿಲ್ಲವೇನೂ.
ಇಂತಹ ಸಂಧರ್ಭದಲ್ಲಿ ನನಗೆ ಕಿರಣ್ ಹೆಚ್ಚು ಆಪ್ತನಾಗುತ್ತಿದ್ದ.
ಆತ ನನಗಷ್ಟೆ ಅಲ್ಲ ಆಫೀಸಿನ ಎಲ್ಲರಿಗೂ ಅಚ್ಚು ಮೆಚ್ಚಿನವನಾಗುತ್ತಿದ್ದ .ಆದರೆ ನನ್ನೊಡನೆ ಮಾತಾಡುವಾಗ ಅವನ ಕಣ್ಣಲ್ಲಿ ಕಾಣುತಿದ್ದ ಒಲವನ್ನು ಗ್ರಹಿಸಲಾರದಷ್ಟು ಅಪ್ರಬುದ್ದಳೇನಾಗಿರಲಿಲ್ಲ ನಾನು.
ನಾನು ಅವನಿಗೆ ಅಪ್ರೈಸಲ್ ವಿಷಯದಲ್ಲಾಗಲಿ ಕೆಲಸದ ವಿಚಾರದಲ್ಲಾಗಲಿ ಹೆಚ್ಚಿನ ಸಹಾಯ ಮಾಡಲಾರಂಭಿಸಿದೆ.
ಜೊತೆ ಜೊತೆಗೆ ನನಗೇನೂ ಭಯವಾಗತೊಡಗಿತು . ನಾನು ತಪ್ಪು ಮಾಡುತ್ತಿಲ್ಲವಷ್ಟೆ? ನನ್ನ ಅವನ ಸ್ನೇಹ ಬರೀ ಸ್ನೇಹ ವಾಗದೆ ಇನ್ನೇನೋ ಆಗಬಹುದೆಂಬ ಅಂಜಿಕೆ ಅದು.
ತಿಂಗಳಾರು ಕಳೆಯಿತು.
ಕಿರಣ್ ನನ್ನನ್ನು ನೋಡದಿದ್ದರೆ ಚಡಪಡಿಸುತ್ತಿದ್ದ ಅದನ್ನು ಮಾತಿನಲ್ಲೂ ವ್ಯಕ್ತ ಮಾಡುತ್ತಿದ್ದ
ಒಮ್ಮೆ ಜ್ವರ ಬಂದು ಮಲಗಿದಾಗ ದಿನಕ್ಕೊಮ್ಮೆಯಾದರೂ ಮನೆಗೆ ಬಂದು ಹೋಗುತ್ತಿದ್ದ. ಚಿದುವನ್ನು ಸ್ನೇಹ ಪೂರ್ವಕವಾಗಿ ಮಾತಾಡಿಸುತ್ತಿದ್ದ.
ಅಭಿಗೆ ನಾನು ಅನ್ಯಾಯ ಮಾಡ್ತಾ ಇದೀನಾ ? ಇದು ತಪ್ಪಲ್ಲವಾ. ಮನಸಿನ ಕೂಗು
ಮನಸ್ಸು ಆತ್ಮೀಯರನ್ನು ಬಯಸುತ್ತಿದೆ ಅಷ್ಟೆ . ಇನ್ನೇನೂ ಅಲ್ಲ ನಾನೆ ಸಮಾಧಾನ ಮಾಡಿಕೊಂಡೆ.
ಕಿರಣ್ ಅಂದು ಅವನ ಮನಸ್ಸನ್ನು ಬಿಚ್ಚಿದ "ಮೇಡಮ್ ನಾನು ತುಂಬಾ ಹುಡುಗೀರ್‍ಅನ್ನು ನೋಡಿದೀನಿ . ಆದರೆ ನಿಮ್ಮಂತಹ ವಿಶೇಷವಾದವರನ್ನು ಕಂಡಿರಲಿಲ್ಲ. ನಿಮಗೇನಾದರೂ ಸೆಕಂಡ್ ಆಪ್ಷನ್ ಇದ್ದರೆ ಅದು ನಾನೆ ಆಗಿರಬೇಕಂತ ನನ್ನ ಆಸೆ"
ನಾನು ಏನೂ ಹೇಳಿರಲಿಲ್ಲ ಸುಮ್ಮನೆ ನೆಲ ನೋಡಿದೆ
ಆತ ಉತ್ತೇಜಿತನಾದನೋ ಏನೋ ಅವನ ನನ್ನ ಒಡನಾಟ ಹೆಚ್ಚಾಗತೊಡಗಿತು.

ಕಿರಣನ ನನ್ನ ಮೇಲಿನ ಪ್ರೀತಿ ಕೇವಲ ದೈಹಿಕ ಆಕರ್ಷಣೆಯಾಗಿದ್ದರೆ ಏನು ಗತಿ?
ಅದಕ್ಕೆ ಯಾವ ಆಧಾರವೂ ಸಿಗಲಿಲ್ಲ ಇಂದಿನವರೆಗೆ ಕಿರಣ ತನ್ನ ಬಳಿ ಒಮ್ಮೆಯೂ ಕೆಟ್ಟದಾಗಿ ನಡೆದಿರಲಿಲ್ಲ .
ಅಭಿಯ ಜೋತು ಬಿದ್ದ, ಕಳೆಯಾಗಲಿ ಒಲವಾಗಲಿ ಇರದ ಆ ಮೊಗವೆಲ್ಲಿ? ಸ್ನೇಹ ತುಂಬಿದ ನಡೆ, ಒಲವು ತುಂಬಿದ ಕಂಗಳು, ಎಂಥಹವರನ್ನೂ ಅರಳಿಸಬಲ್ಲಂಥ ಆ ನಗೆ ತುಂಬಿರುವ ಕಿರಣನೆಲ್ಲಿ?
ಅಭಿ ನನ್ನ ಸಾಮೀಪ್ಯವನ್ನೂ ಗ್ರಹಿಸದವನ ಹಾಗೆ ನಿರ್ಜೀವ ಮನುಷ್ಯ, ಆದರೆ ಕಿರಣ ನನ್ನಿರುವಿಕೆಯಿಂದಲೇ ಇಡಿ ಪ್ರಪಂಚವನ್ನು ಗೆಲ್ಲುತ್ತೇನೆಂಬ ಹುಮ್ಮಸ್ಸು ತುಂಬಿರುವ ವ್ಯಕ್ತಿ. ನಿರ್ಜೀವ ವ್ಯಕ್ತಿಯಲ್ಲೂ ಚೈತನ್ಯ ತುಂಬುವಂತಹ ವ್ಯಕಿತ್ವ

ನಾನು ನಿರ್ಧಾರ ಮಾಡಬೇಕಿತ್ತು, ಒಲವೋ ಅಥವ ಸಂಸಾರವೋ

Wednesday, August 6, 2008

ಮುಪ್ಪಾಗಬಾರದು

ಆಕೆ ಸುಂದರಿ ಎನ್ನುವ ಪದಕ್ಕೂ ನಿಲುಕದಷ್ಟು ಸುಂದರಿ. ತನ್ನ ಸೌಂದರ್ಯದ ಬಗ್ಗೆ ಬಹಳ ಹೆಮ್ಮೆ ಅವಳಿಗೆ .
ಕೆಲವೇ ತಿಂಗಳ ಹಿಂದೆ ಮದುವೆಯಾಗಿತ್ತು . ಒಮ್ಮೆ ತಮಾಷೆಗೆ ಗಂಡ ಹೇಳಿದ " ಈ ನಿನ್ನ ಸೌಂದರ್ಯ ಎಲ್ಲಾ ನಶ್ವರ ಏನಿದ್ರೂ ಯೌವ್ವನ ಇರುವ ತನಕ . ಆಮೇಲೆ ನಿನ್ನ ಬದಲಿಗೆ ಮತ್ತೊಬ್ಬ ಹೆಣ್ಣು ಸುಂದರಿ ಅಂತ ಅನಿಸ್ಕೋತಾಳೆ"
ಆತ ಮರೆತೂ ಬಿಟ್ಟ ಆದರೆ ಈಕೆ ಮರೆಯಲಿಲ್ಲ. ಅದನ್ನೇ ಯೋಚಿಸುತ್ತಾ ಕೂತವಳಿಗೆ ಒಂದು ಉಪಾಯ ಹೊಳೆಯಿತು. ತನಗೆ ಗೊತ್ತಿದ್ದ ಮಂತ್ರವಾದಿಯೊಬ್ಬರಿಂದ ದೇವರನ್ನು ಒಲಿಸಿಕೊಳ್ಳುವ ಮಂತ್ರ ಪಡೆದು ಗಂಡನಿಗೆ ಯಾವುದೋ ನೆಪ ಹೇಳಿ ಯಾರು ಇಲ್ಲದ ಸ್ಥಳವೊಂದಕ್ಕೆ ಹೋಗಿ ದೇವರನ್ನು ಜಪಿಸಲು ಆರಂಭಿಸಿದಳು
ಸುಮಾರು ದಿನಗಳ ಜಪದಿಂದ ದೇವರು ಸಂತುಷ್ಟನಾದ
ಅವಳ ಮುಂದೆ ಪ್ರತ್ಯಕ್ಶನಾಗಿ ಏನು ಬೇಕೆಂದು ಕೇಳಿದ
ಆಕೆ ಕೇಳಿದಳು
"ನನ್ನ ಈ ಸೌಂದರ್ಯ ಹೀಗೆ ಇರಬೇಕು. ಮುಪ್ಪು ನನ್ನ ನೆರಳನ್ನೂ ಸೋಕಬಾರದು, ಸಾವು ಹತ್ತಿರವೂ ಬರಬಾರದು . ಸದಾ ಚಿರಯೌವ್ವನಿಗಳೆನಿಸಿಕೊಳ್ಳಬೇಕು"
"ಇದರಿಂದ ಉಪಕಾರಕ್ಕಿಂತ ಅಪಾಯವೇ ಹೆಚ್ಚು ಯೋಚಿಸು ಬೇರೇನಾದರೂ ಕೇಳು" ಎಂದ
"ಇಲ್ಲ ಈ ವರ ಕೊಡಲಾಗದಿದ್ದರೆ ನೀನು ದೇವರಲ್ಲ "ಎಂದಳು
"ಸರಿ ನಿನ್ನ ವರ ನಿನಗೆ ಶಾಪವಾದರೆ ನಾನು ಹೊಣೆಯಲ್ಲ . ಆದರೆ ನೀನು ಮತ್ತೆ ಸಾವು ಹಾಗು ಮುಪ್ಪು ಕೇಳಲು ಬಹಳ ಕಠಿಣ ತಪಸ್ಸು ಮಾಡಬೇಕಾಗಬಹುದು" ಎಂದು ಹೇಳಿ ತಥಾಸ್ತು ಎಂದು ಹರಸಿ ಮಾಯವಾದ
ಆಕೆ ಹರ್ಷಚಿತ್ತಳಾಗಿ ಮನೆಗೆ ಬಂದಳು
ವರ್ಷಗಳು ಉರುಳಿದವು.
ಅವಳಿಗೆ ಒಬ್ಬ ಮಗ ಹಾಗು ಮಗಳು ಜನಿಸಿದರು
ಇಬ್ಬರೂ ಬೆಳೆಯುತ್ತಾ ಹೋದರು
ಅವಳ ಗಂಡನಿಗೆ ಅವಳ ಮೇಲೆ ಪ್ರೀತಿ ಜಾಸ್ತಿ ತನ್ನ ಹೆಂಡತಿ ಇಷ್ಟು ವರ್ಷಗಳಾದರೂ ನವಯುವತಿಯಂತಿದ್ದಾಳೆಂದು. ಅವಳಿಗಂತೂ ಸಂಸಾರ ಸ್ವರ್ಗವಾಗಿತ್ತು ತನ್ನ ಓರಗೆಯವರೆಲ್ಲಾ ಆಗಲೆ ದಪ್ಪವಾಗುತಿದ್ದರು ಆದರೆ ಈಕೆ ಮಾತ್ರ ಬಳುಕುವ ಬಳ್ಳಿಯಂತೆ ಇದ್ದಳು.
ಮಕ್ಕಳೂ ಕಾಲೇಜಿಗೆ ಹೋಗಲಾರಂಭಿಸಿದರು
ಗಂಡ ಊದತೊಡಗಿದ ತಲೆಯಲ್ಲಿ ನೆರೆ ಕೂದಲು ಕಾಣತೊಡಗಿದವು . ಈಕೆ ಮಾತ್ರ ಹದಿನೆಂಟರ ಯುವತಿ
ಮಗ ಅಮ್ಮನಿಗೆ ತನ್ನ ಜೊತೆ ಬರಬಾರದಾಗಿ ತಾಕೀತು ಮಾಡಿದ .
ಅವನ ಗೆಳೆಯರೆಲ್ಲಾ ಅವಳು ತನ್ನ ಅಮ್ಮ ಅಂದರೆ ನಂಬುತ್ತಿರಲಿಲ್ಲ .
ಮಗನಿಗೆ ಮದುವೆಯಾಯ್ತು.
ಸೊಸೆ ಬಂದಳು
ಇತ್ತ ಇವಳ ಗಂಡನಿಗೆ ಹೆಂಡತಿಗೇಕೆ ವಯಸ್ಸಾಗುತ್ತಿಲ್ಲ ಎಂಬುದು ಪ್ರಶ್ನೆಯಾಯಿತು.
ಅವಳ ಮೇಲೇ ಅನುಮಾನ ಪಡಲಾರಂಭಿಸಿದ ಅವಳ ಯಾರ ಜೊತೆಯಲ್ಲಾದರೂ ಸಂಭಂಧವಿರಿಸಿಕೊಳ್ಳಬಹುದೆಂದು .
ಕೊನೆಗೂ ಅದೇ ಚಿಂತೆಯಲ್ಲಿ ಸತ್ತ
ಇವಳು ಮಾತ್ರ ನವಯುವತಿಯಂತೆ ಅದೇ ಕಾಯ ಅದೇ ಸೌಂದರ್ಯದಿಂದ ಕಂಗೊಳಿಸುತ್ತಿದ್ದಳು.
ಮಗಳು ಅಮ್ಮನಿಗೆ ಮನೆಗೆ ಬರಬಾರದೆಂದು ಹೇಳಿದಳು. ಅವಳಿಗೆ ಅವಳ ಗಂಡ ಎಲ್ಲಿ ಅಮ್ಮನ ಸೌಂದರ್ಯಕ್ಕೆ ಮರುಳಾಗುತ್ತಾನೋ ಎಂಬ ಭಯ
ಅವಳಿಗೆ 60 ರ ಪ್ರಾಯ .
ಮಗನಿಗೂ ವಯಸ್ಸಾಗತೊಡಗಿತು
ಸೊಸೆಯೂ ಅಷ್ಟೆ ಬೊಜ್ಜಿನಿಂದ ಊದತೊಡಗಿದಳು.
ಮೊಮ್ಮಗ ಕಾಲೇಜಿಗೆ ಹೋಗಲಾರಂಭಿಸಿದ.
ಅವನಿಗೆ ಇವಳನ್ನು ಅಜ್ಜಿ ಎಂದು ಕರೆಯಲೇ ಮುಜುಗರ.
ಹೀಗಿದ್ದಾಗ ಅವಳ ಮಗಳು ಯಾವುದೋ ಒಂದು ಕಾಯಿಲೆ ಬಂದು ಸತ್ತಳು
ಸ್ವಲ್ಪ ದಿನವಾದ ಮೇಲೆ ಮಗನೂ ಹಾಗು ಸೊಸೆಯೂ ತಮ್ಮ ದೇಹ ತ್ಯಜಿಸಿದರು
ತನ್ನ ಕಣ್ಣ ಮುಂದೆ ತನ್ನ ಕುಡಿಗಳು ಕಳಚುತ್ತಿರುವುದ ನೋಡಿ ಮೌನವಾಗಿ ರೋಧಿಸಿದಳು
ಈಗ ಅವಳಿಗೆ ೭೫ ವರ್ಷಗಳಾಗಿದ್ದವು
ಮೊಮ್ಮಗನ ಮದುವೆಯಾಯ್ತು ಅವನ ಮನೆಯಲ್ಲೇ ವಾಸವಿದ್ದಳು.
ಏಕೋ ತನ್ನ ಕಾಲದಲ್ಲಿದ್ದಂತೆ ಈಗ ಯಾವುದೂ ಇಲ್ಲ ಆನಿಸತೊಡಗಿದವು. ಹೊರಗೆ ಹೋಗುವುದಕ್ಕೆ ಒಂದು ರೀತಿಯ ಹಿಂಜರಿಕೆ ತಾನು ಹೇಗೆ ಇರಬೇಕು. ಅಜ್ಜಿಯ ಮನಸ್ಸು, ನವಯುವತಿಯ ದೇಹ ಹೊತ್ತುಕೊಂಡಿತ್ತು.
ಮನಸಿಗೆ ವಯಸ್ಸಾದ ಹಾಗೆ ಅನ್ನಿಸುತಿತ್ತು. ಹುರುಪಿಲ್ಲ. ಅತ್ತ ಹೊರಗಡೆ ಹೊರಟರೆ ಈಗಷ್ಟೆ ಚಿಗುರು ಮೀಸೆ ಬಂಡ ಹುಡುಗರು ಇವಳನ್ನು ತಿಂದೇ ಬಿಡುವ ನೋಟ ಹರಿಸುತ್ತಿದ್ದರು. ಅತ್ತ ಇವಳ ಮೊಮ್ಮಕ್ಕಳ ವಯಸಿನ ಹೆಂಗಸರು ಹಿಡಿ ಹಿಡಿ ಶಾಪ ಹಾಕುತಿದ್ದರು.
ಮನೆಯಲ್ಲಿ ಯಾವುದೇ ಗೌರವ ವಿರಲಿಲ್ಲ
ಸ್ವಂತ ಮೊಮ್ಮಗನ ಹೆಂಡತಿಗೆ ಇವಳ ಮೇಲೆ ಅನುಮಾನ. ತನ್ನ ಗಂಡನನ್ನು ಬಲೆಗೆ ಹಾಕಿಕೊಳ್ಳುತಾಳೇನು ಎಂಬ ಭಯ
ಹಾಗೂ ಹೀಗೂ ದಿನ ತಳ್ಳುತಿದ್ದಳು. ಅವಳ ಬದುಕಿಗೆ ಅಂತ್ಯವೇ ಇರಲಿಲ್ಲವಲ್ಲ
ಇನ್ನೂ ಕೆಲವು ವರ್ಷಗಳು ಕಳೆದವು ಮರಿಮಗ ಕಾಲೇಜಿಗೆ ಹೋಗಲಾರಂಭಿಸಿದ
ಒಮ್ಮೆ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಅಜ್ಜಿಯ ಬಳಿ ಬಂದ
" ನೋಡು ನೀನು ಹ್ಯಾಗೆ ಹೀಗೆ ಮೈಂಟೇನ್ ಮಾಡ್ತಿದೀಯಾ ಅಂತ ಗೊತ್ತಿಲ್ಲ. ಹ್ಯಾಗಿದ್ದರೂ ನಿಂಗೆ ಗಂಡ ಇಲ್ಲ. ಹಾಗೆ ಇಷ್ಟು ವರ್ಷ ಕಳೆದಿದ್ದೀಯಾ. ನಂಗೂ ಏನೂ ಗೊತ್ತಿಲ್ಲ . ಸ್ವಲ್ಪ ನಂಗೆ ಅದರ ಅನುಭವ ಕೊಡ್ತೀಯಾ ಪ್ಲೀಸ್ ಇಲ್ಲ ಅನ್ಬೇಡ. ಒಳ್ಳೇ ತಾಜಾ ತರಕಾರಿ ಥರ ಇದ್ದೀಯಾ. ಬಾ " ಎಂದು ಅವಳ ಮೇಲೆ ಬೀಳಲು ಹೋದ. ಅವನಿಂದ ತಪ್ಪಿಸಿಕೊಂಡು ಮೊಮ್ಮಗನಿಗೆ ಈ ವಿಷಯ ಹೇಳಿದಳು
" ಹೌದು ಪ್ರತಿ ಮನುಷ್ಯನಿಗೂ ಹುಟ್ಟು ಸಾವು, ಬಾಲ್ಯ ಹರೆಯ, ಮುಪ್ಪು ಅಂತ ಇರುತ್ತೆ. ಆದರೆ ನಿಂಗೆ ಅದು ಯಾವುದೂ ಇಲ್ಲ ಎಷ್ಟು ವರ್ಷ ಹೀಗೆ ಇರ್ತೀಯಾ ಯಾವಾಗ ಸಾಯ್ಟಿಯಾ ಅಂತಾನೂ ಗೊತ್ತಿಲ್ಲ ನಂಗೇನೋ ನೀನು ಅಜ್ಜಿ . ಆದ್ರೆ ಮುಂದೇನು ಹೀಗೆ ಇದ್ರೆ ನನ್ನ ಮಗ ಅವನ ಮಗಾನೋ ಮಗಳೋ ನಿನ್ನ ಖಂಡಿತಾ ನೋಡ್ಕೊಳೋದಿಲ್ಲ .ನೀನು ಎಲ್ಲರ ಹಾಗೆ ಮುದುಕಿಯಾದ್ರೂ ಪರವಾಗಿಲ್ಲ . ನಿಂಗೆ ಪ್ರತ್ಯೇಕ ರಕ್ಷಣೆ ಕೊಡ್ಬೇಕು ಅಂದ್ರೆ ನಂಗೆ ಆಗಲ್ಲ. ಈಗ ಕಾಲ ಬೇರೆ ಕೆಟ್ಟು ಹೋಗಿದೆ . ಮನೇಲಿ ಹೀಗೆ ಹರೆಯದ ಹೆಣ್ಣು ಇದ್ರೆ ಎಂಥ ಹುಡುಗರಿಗೂ ಆಸೆ ಬರೋದು ಸಹಜ ಅವನ ತಪ್ಪಲ್ಲ ನಿಂಗೆ ಮುಪ್ಪಿಲ್ಲವಲ್ಲ ಅದು ನಿನ್ನ ತಪ್ಪು " ಎಂದ
ಮೊದಲ ಬಾರಿಗೆ ತಾನು ಮುದುಕಿಯಾಗಿದ್ದರೆ ಎಷ್ಟು ಚೆಂದ ಅನ್ನಿಸತೊಡಗಿದವು
ಮರಿಮಗನ ಕಾಟ ಅತಿಯಾಗತೊಡಗಿದವು ಮನೆಯಲ್ಲಿ ಇದ್ದ ಆದರವೂ ಈಗ ಇರಲಿಲ್ಲ.
ಸಾಯಬೇಕೆಂದರೆ ಸಾವು ಯಾವ ದಾರಿಯಲ್ಲೊ ಅವಳಿಗೆ ಒದಗಲಿಲ್ಲ.
ಕೊನೆಗೊಮ್ಮೆ ಮತ್ತದೇ ಸ್ಟಳಕ್ಕೆ ಹೋದಳು ದೇವರನ್ನು ಹುಡುಕಿಕೊಂಡು ಆದರೆ ಆ ಸ್ಥಳದಲ್ಲಿ ದೊಡ್ಡದೊಂದು ಕಾಂಪ್ಲೆಕ್ಸ್ ತಲೆ ಎತ್ತಿತು
ಅವಳಿಗೆ ಏಕಾಂತವಿರುವ ಯಾವ ಸ್ಥಳವೂ ತೋರಲಿಲ್ಲ .
ಎಲ್ಲೆಡೆ ಜನಸಾಗರ . ಹುಚ್ಚರಂತೆ ಮೊಬೈಲ್ ನಲ್ಲಿ ಮಾತಾಡುತ್ತಾ ಸುತ್ತಾ ಜನರ ಪರಿವೇ ಇಲ್ಲದಂತೆ ಓಡಾಡುವ ಜನ.
ಅಲ್ಲಲ್ಲಿ ಮೇಲೆ ಬೀಳಲು ಬರುವ ಹುಡುಗರು, ಸಿಕ್ಕ ಸಿಕ್ಕವರನ್ನು ಕೊಚ್ಚುವ ರೌಡಿಗಳು.
ದೇವಸ್ಥಾನಗಳೂ ಹೈಟೆಕ್ ಆಗಿದವು .
ಸುಲಭವಾಗಿ ಅವಳಿಗೆ ಪ್ರವೇಶ ಸಿಗಲಿಲ್ಲ. ಅಲ್ಲೂ ಪುರೋಹಿತರ ಕಾಟ . ಹೆಣ್ಣು ಒಂಟಿಯಾಗಿದ್ದಾಳೆಂದು ಅವರಿಗೂ ಆಸೆ .
ಅಲ್ಲಿಂದ ಕೊನೆಗೆ ತನ್ನ ಹಳೇ ಮನೆಗೆ ಬಂದು ಬಾಗಿಲು ಹಾಕಿಕೊಂಡು ಜಪಿಸತೊಡಗಿದಳು.
ಬಹಳ ಕಠಿಣ ತಪದಿಂದ ದೇವರು ಪ್ರತ್ಯಕ್ಷನಾದ
"ದೇವರೆ ನನಗೆ ಸಾವು ಕೊಡು" ಅರ್ಧಳಾಗಿ ಬೇಡಿಕೊಂಡಳು
ದೇವರು ನಕ್ಕ
"ಅದಕ್ಕೆ ಪ್ರತಿಯೂಬ್ಬರಿಗೂ ಸಾವು, ಮುಪ್ಪು ಇರುವುದು ಅದ ಅರ್ಥ ಮಾಡಿಕೊಳ್ಳದಾಗಲೇ ಈ ರೀತಿ ಆಗುವುದು"
"ದೇವರೆ ನನಗೆ ಒಮ್ಮೆಯಾದರೂ ಮುದುಕಿಯಾಗುವ ಅವಕಾಶ ಕೊಡು"
ಅವಳ ಆಸೆ ಈಡೇರಿತು . ಆ ಅವಸ್ಥೆಯನ್ನು ತುಂಬು ಹೃದಯದಿಂದ ಅನುಭವಿಸಿದಳು
ಹಾಗೆ ಅವಳ ಆತ್ಮ ಪಂಚಭೂತದಲ್ಲಿ ಲೀನವಾಯಿತು

Wednesday, June 11, 2008

ಬಿಡುಗಡೆ

ಗಾರ್ಮೆಂಟ್ಸ್ ನಿಂದ ಆಗ ತಾನೆ ಬಂದು ಉಸ್ ಅಂತ ಕೂತವಳಿಗೆ ಮಗಳ ನೆನಪು ಬಂತು ಕೂಡಲೆ ಪಕ್ಕದ ಮನೆಗೆ ಹೋದಿ ಕರೆ ತಂದಳು.ಗಂಡ ಇನ್ನೂ ಬಂದಿರಲಿಲ್ಲ .ಮಗಳಿಗೆ ಕಾಫಿ ಕೊಟ್ಟು ತಾನುಹಾಲಿಲ್ಲದ ಕಾಫಿ ಹೀರುತ್ತಿದ್ದಂತೆ ಆ ಕಾಫಿಯ ಕಪ್ಪೆಲ್ಲ ತನ್ನ ಬದುಕಲ್ಲೆ ತುಂಬಿದಂತೆ ಭಾಸವಾಗತೊಡಗಿತು.

ಬದುಕಿನ ಅನಿಶ್ಚಿತತೆ ಕಾಡತೊಡಗಿತು

ಅವಳಿಗೆ ಗೊತ್ತಿತು ಹೀಗೆ ಆಗುತ್ತದೆ ಎಂದು

ಅವಳ ಅಮ್ಮ ಮನೆ ಚಾಕರಿ ಮಾಡುತಾ ಇವಳನ್ನೂ ಅದೇ ಚಾಕರಿಗೆ ಹಾಕಿ ಬದುಕಲ್ಲಿ ಓದಿಗೆ ಅವಕಾಶವಿಲ್ಲದಂತೆ ಮಾಡಿದಳು

ಹಾಗೆ ಚಾಕ್ರಿಗೆ ಹೋಗುತ್ತಲೆ ಸಿದ್ದನ ಪರಿಚಯವಾಗಿ ಪ್ರೇಮ ಪ್ರೀತಿ ಶುರುವಾಗಿ

ಊರಿನಿಂದ ಓಡಿ ಬಂದು ಬೆಂಗಳೂರಿಗೆ ನೆಲೆಸಿದರು.

ಮದುವೆ ಎಂಬ ಶಾಸ್ತ್ರವೂ ನಡೆಯಿತು.

ಹೊಟ್ಟೆಯಲ್ಲಿ ಮಗಳು ಇದ್ದಾಗಲೆ ಅವಳಿಗೆ ಬಡತನದ ಬೆಂಕಿ ಮುಂಚಿಗಿಂತಲೂ ತೀಕ್ಷ್ಣವಾಗಿ ಸುಡತೊಡಗಿತು

ಅಲ್ಲಿಯಾದರೆ ಅಮ್ಮ ಇವಳ ಸಮಕೂ ದುಡಿಯುತಿದ್ದಳು

ಆದರೆ ಇಲ್ಲಿ ಸಿದ್ದ ಕೆಲಸಕ್ಕೆ ಹೋಗೊ ಮಾತೆ ಆಡಲಿಲ್ಲ

ಕೆಲಸಕ್ಕೆ ಹೋಗು ಎಂದು ಕೇಳಿದರೆ ಹಿಡಿದು ಹಿಗ್ಗಾ ಮುಗ್ಗ ಹೊಡೆಯುತ್ತಿದ್ದ . ಕುಡಿತ ಇಲ್ಲದಿದ್ದರೆ ಬದುಕೇ ಇಲ್ಲ ಅವನಿಗೆ.

ಹಾಗಾಗಿ ಗಾರ್ಮೆಂಟ್ಸ್ ಒಂದರಲಿ ಕೆಲಸಕ್ಕೆ ಹೆಲ್ಪರ್ ಅಗಿ ಸೇರಿದಳು.

ಇವಳು ದುಡಿದು ತಂದ ಹಣವನ್ನೆಲ್ಲಾ ಕುಡಿತಕ್ಕೆ ಪೋಲು ಮಾಡುತ್ತಿದ್ದ.

ಮಗಳು ಹುಟ್ಟಿದ ನಂತರ ಮತ್ತೆ ಅದೇ ಬದುಕು.

ಪಕ್ಕದ ಮನೆಯಲ್ಲಿ ಮಗಳನ್ನು ಬಿಟ್ಟು ಹೋಗುತ್ತಿದ್ದಳು .

ಬದುಕು ಹೇಗೋ ಸಾಗುತ್ತಿತ್ತು ಆ ಚಂದನ್ ಎಂಬ ವ್ಯಕ್ತಿ ಇವಳ ಮಾಸ್ಟರ್ (ಸೂಪರ್ ವೈಸರ್ )ಆಗಿ ಬರುವವರೆಗೆ. ಗಾರ್ಮೆಂಟ್ಸ್ ಹೆಂಗಳೆಯರಲ್ಲಿ ಯಾರಾದರೂ ಗಮನ ಸೆಳೆಯುವಂತಿದ್ದರೆ ಅವರು ಅವನನ್ನು ಓಲೈಸಿಅಬೇಕಿತ್ತು. ಈ ಸಲ ಈಕೆ ಅವನ ಬಲಿ ಪಶುವಾಗಬೇಕಿತ್ತು ಇಲ್ಲವಾದರೆ ನಾಳೆಯಿಂದ ಅವಳು ಅಲ್ಲಿ ಇರುವಂತಿರಲಿಲ್ಲ .

ಇವತ್ತು ಏನಾದ್ರೂ ಮಾಡಿ ಸಿದ್ದನ ಅತ್ರ ಮಾತಾಡಿ ಏಳ್ಬಿಡಬೇಕು . ತನ್ನಲ್ಲಿ ಯೋಚಿಸಿಕೊಂಡಳು

ರಾತ್ರಿ ಬಂದಾಗ ತನ್ನ ಕಷ್ಟವನ್ನೆಲ್ಲಾ ಹೇಳಿಕೊಂಡು ಅತ್ತಳು . ನೀನೊಬ್ಬ ಸರಿಯಾಗಿದ್ರೆ ನಮ್ಮ ಬಾಳು ಇಂಗೆ ಇರ್ತಿರ್ಲಿಲ್ಲ ಅಂತ ಅತ್ತುಕೊಂಡಳು.

ಸಿದ್ದ ಕರಗಿ ಹೋದ

ಆಯ್ತು ಕಣೆ ಇನ್ನು ಈ ನನ್ನ ಮಗೀ ಮೇಲೆ ಆಣೆ ಇನ್ ಮ್ಯಾಕೆ ಕುಡಿಯಾಕಿಲ್ಲ. ಅವಂಗೆ ಒಂದು ಗತಿ ಕಾಣಿಸ್ತೀನಿ ನಾಳಿಕಿಂದ ನೀ ಏನ್ ಕೆಲ್ಸಕ್ಕೆ ಓಗ್ಬೇಡ ನಾನೇ ಓಯ್ತೀನಿ.

"ಎಲ್ಲಾ ಸರಿ ಆದ್ರೆ ನಾ ಮುಂಚಿದ್ನಲ್ಲ ಕೆಲ್ಸಕ್ಕೆ ಅವನತ್ರ ಕಾಸು ತಕ್ಕೊಂಡಿದೀನಿ ಅವನು ಕೆಲ್ಸ ಕೇಳೊಕೆ ಓದ್ರೆ ಕಾಸು ಕೇಳ್ತಾನೆ . ಅಲ್ಲಿ ಕೆಲ್ಸ ಬೋ ಆರಾಮಾಗಿರ್ತದೆ."

"ಏಟ್ ಕೊಡ್ವೇಕು ನೀನು ಅವಂಗೆ’ ಕೇಳಿದಳು

" ಒಂದಾರು ಸಾವ್ರ ಕೊಡ್ಬೇಕು"

"ಆಟೊಂದು ದುಡ್ದು ಯಾಕ್ ತಗೋಂಡಿದ್ದಿ ನೀನು"

"ಅದು -----------ಅದು --------- ಏ ಓಗ್ಲಿ ಬಿಡ್ಲೆ ನಾನೆ ಏನಾರ ಮಾಡಿ ಸಾಲ ತೀರ್ಸ್ಕೊಂತೀನಿ"

"ಬೇಡ ಬಿಡು ನೀ ಕೆಲ್ಸಕ್ಕೆ ಓದ್ರೆ ಏಟು ಬೇಕಾದ್ರೆ ಸಂಪಾದ್ನೆ ಮಾಡ್ಬೋದು. ನನ್ತಾವ ಒಂದೀಟು ದುಡ್ಡು ಇಟ್ಕಂಡಿದೀನಿ ಕೊಡ್ತೀನಿ ತಾಳು"

ಅಂದಿನ ಸಂವಾದ ಅವಳ ಹೊಸ ಬದುಕಿಗೆ ನಾಂದಿಯಾಯಿತು

ಮಾರನೆಯ ದಿನ ಅವಳು ಕೆಲಸಕ್ಕೆ ಹೋಗಲಿಲ್ಲ. ಸಿದ್ದ ಬೆಳಗ್ಗೆ ಬೇಗ ಎದ್ದು ಕೆಲಸಕ್ಕೆ ಹೋದ.

ಇವಳು ಮಗಳಿಗೆ ಸ್ನಾನ ಮಾಡಿಸಿ ಅಡಿಗೆ ಮಾಡಿ ಬಡಿಸಿ ಮನೆಯಲ್ಲಿ ನಲಿಯುತಲಿದ್ದಳು. ಸಂಬ್ರಮಿಸಿದಳು. ತನ್ನ ಕಷ್ಟ ಕೊನೆಯಾಗಿಸಿದ ದೇವರಿಗೆ ವಂದಿಸಿದಳು

ಸಂಜೆಯಾಯಿತು ಹೂವಾ ಮುಡಿದುಕೊಂಡು ಗಂಡನಿಗಾಗಿ ಕಾಯುತ್ತಿದ್ದಳು . ರಾತ್ರಿ ಹತ್ತಾದರೂ ಸಿದ್ದ ಕಾಣಲಿಲ್ಲ. ಮಗಳು ಮಲಗಿದ್ದಳು

ಹಾಗೆ ಮಂಪರು ಬಂದಂತಾಯಿತು.

"ಏಯ್ ಏಳೆ ಮ್ಯಾಕೆ ಹಾದ್ರ ಮಾಡಿದ್ದ ಕಾಸು ಕೊಟ್ಟು ನನ್ನ್ ಕೆಲ್ಸಕ್ಕೆ ಕಳ್ಸ್ತೀ ಏನ್ಲೆ? "ಸಿದ್ದನ ಗಡಸು ತುಂಬಿದ ದನಿಗೆ ಬೆಚ್ಚಿ ಎದ್ದಳು

ಸಿದ್ದ ಕಂಠ ಪೂರ್ತಿ ಕುಡಿದು ಜೋಲಿ ಹೊಡೆಯುತಿದ್ದ.

"ನಂಗೇನು ತಿಳ್ಯಾಕಿಲ್ವೇನೆ ನಿನ್ನ ಬುದ್ದಿ . ನಿಂತಾವ ಆಟೋಂದು ದುಡ್ಡು ಎಂಗೆ ಬತ್ತದೆ. ಯಾವ್ಯಾವನತ್ರ ಓಗಿದ್ಯೋ ಯಾರಿಗ್ ಗೊತ್ತು. "

ಅವಳು ಕಷ್ಟ ಪಟ್ಟು ಕೂಡಿಟ್ಟ ಹಣ ಅದು.

ಇನ್ನೂ ಬಯ್ಯುತ್ತಲೇ ಇದ್ದ . ಅಕ್ಕ ಪಕ್ಕದವರೆಲ್ಲಾ ನಿಂತು ತಮಾಷೆ ನೋಡುತ್ತಿದ್ದರು.

ರಾತ್ರಿ ಎಲ್ಲಾ ನಿದ್ರಿಸಲಿಲ್ಲ ಇವನು ಏಳ್ದ ಹಾಗೆ ಹಾದ್ರನಾದರೂ ಮಾಡಿದ್ರೆ ಏಟೊಂದು ದುಡ್ಡು ಸಂಪಾದ್ನೆ ಮಾಡ್ಬೋದಿತ್ತು . ನೀತಿ ನಿಯತ್ತಿಗೆ ಕಾಲವಿದಲ್ಲ ಎನಿಸಿತಾದರೂ ಮನಸ್ಸು ಬರಲಿಲ್ಲ

ಬೆಳಗಿನ ಜಾವ. ಸಿದ್ದ ರಾತ್ರಿಯ ನಶೆ ಇಂದ ಇನ್ನೊ ಎದ್ದಿರಲಿಲ್ಲ

ಇವಳು ಮಗಳನ್ನು ಕರೆದುಕೊಂಡು ಆ ಕೇರಿ ಬಿಟ್ಟು ಊರು ಬಿಟ್ಟು ಅಮ್ಮನ ಊರು ಸೇರಿಕೊಳ್ಳಲು ಮುನ್ನಡೆದಳು.




Monday, June 2, 2008

ಜವರಾಯನಿಗಿಲ್ಲ ಕರುಣೆ

ನಡುಬೀದಿಯಲ್ಲಿ ನಿಂತ ಅವಳು ಗಿರಾಕಿಗಾಗಿ ಅತ್ತಿತ್ತ ನೋಡುತ್ತಿದ್ದರೂ ಮನಸಿನ ಕಣ್ಣಿನ ಮುಂದೆ ಮಾತ್ರ ಹಸಿವು ಎಂದು ಅಳುತ್ತಿದ್ದ ತನ್ನ ಕಂದನ ಚಿತ್ರವೇ ಕುಣಿಯುತ್ತಿತು. ಯಾರದರೂ ಸಿಕ್ಕರೆ ಸಾಕು ಕಾಸು ತೆಗೆದುಕೊಂಡು ಮೊದಲು ಮಗುವಿಗೆ ಇಡ್ಲಿ ಕೊಡಿಸಿ ನಂತರ ಬರುವುದಾಗಿ ಹೇಳಬೇಕು
ನೆನ್ನೆವರೆಗೆ ಬಂದ ಹಣವನ್ನೆಲ್ಲಾ ಸಾರಾಯಿ ಅಂಗಡಿಗೆ ಸುರಿದಿದ್ದ ಅವಳನ್ನು ಈ ದಂಧೆ ಇಳಿಸಿದವ---ಬೇರಾರು ಅಲ್ಲ ಅವಳ ಗಂಡನೇ .ಆ ಊರಿನಿಂದ ಈ ಕಾಣದ ಊರಿಗೆ ಕರೆತಂದು ಒಂದು ಲಾಡ್ಜ್ನಲ್ಲಿ ಇಳಿಸಿ ಒಂದಷ್ಟು ಗಿರಾಕಿಗಳನ್ನು ಕರೆತಂದ . ನಂತರ ಅವರಿಂದ ಹಣ ಪಡೆದುಕೊಂಡವ ಪತ್ತೆಯೇ ಇಲ್ಲ ಬೆಳಗಿನಿಂದ.
ಮಗು ಹಸಿವೂ ಎಂದು ಭೋರ್‍ಗರೆದು ಅಳುತ್ತಿತು. ಬೆಳಗ್ಗೆ ಎದ್ದಾಗ ಬಿಸ್ಕೆಟ್ ಕೊಟ್ಟದ್ದಷ್ಟೆ .ಅವಳ ಹೊಟ್ಟೆಗೂ ಏನೂ ಇಲ್ಲ ಮಗುವಿಗೂ ಏನೂ ಇಲ್ಲ. ಏನಾದರಾಗಲಿ ಎಂದು ಮಗುವನ್ನು ಮಲಗಿಸಿ ಬಳಿಯಲ್ಲೇ ಇದ್ದ ಬಸ್ ಸ್ಟಾಪ್‌ಗ್ಗೆ ಬಂದು ನಿಂತಿದ್ದಳು.
ಅವಳನ್ನು ಗಂಡಸರು ನೋಡುತಿದ್ದರೇನೊ ನಿಜ ಆದರೆ ಬಳಿ ಬರುವ ಧೈರ್ಯ ಇರಲಿಲ್ಲವೆನ್ನಿಸುತವಳಿಗೆ
ಹಾಗಾಗಿ ಕಣ್ಣಲ್ಲೆ ಸನ್ನೆ ಮಾಡಿದಳು .
ಅವಳ ವಯಸು 30 ರ ಸಮೀಪ ಇರಬಹುದೇನೊ ಆದರೆ ಸಮಯ ಅದನ್ನು ಇನ್ನೂ ಹೆಚ್ಚಿಸಿತ್ತು. ಗುಳಿ ಬಿದ್ದ ಕಣ್ಣುಗಳಿಗೆ ಹಚ್ಚಿದ ಕಾಡಿಗೆ ಇಂದ ಇನ್ನೂ ಭಯಂಕರವಾಗಿ ಕಾಣುತಿದ್ದಳು.
ಹ್ಯಾಗೊ ಒಬ್ಬ ಬಂದ . ಚೌಕಾಸಿ ಮಾಡಿ 500 ರೂ ಗಳಿಂದ 200 ಕ್ಕೆ ಇಳಿಯಿತು ಅವಳ ರೇಟ್.
ಮಗುವಿಗೆ ಇಡ್ಲಿ ಕೊಡಿಸಿ ಇಲ್ಲೇ ಬರುವುದಾಗಿ ಹೇಳಿ ಬಳಿಯಲ್ಲಿನ ಅಂಗಡಿಯಿಂದ ಇಡ್ಲಿ , ಚಾಕ್ಲೆಟ್ ತೆಗೆದುಕೊಂಡು ಸಂಭ್ರಮದಿಂದ ಲಾಡ್ಜಿನೆಡ್ಗೆ ಧಾವಿಸುತ್ತಿದ್ದಂತೆ......................
ಅದ್ಲ್ಲಿದ್ದನೋ ಜವರಾಯ ಲಾರಿಯೊಂದರ ರೂಪದಲ್ಲಿ ಬಂದವನೇ ಅವಳ ಪ್ರಾಣ ಹೀರಿ ನಡೆದೇ ಬಿಟ್ಟ.
ಲಾರಿ ಹೋದ ನಂತರ ಅಲ್ಲಿದ್ದಿದ್ದು ಅವಳ ಜಜ್ಜಿ ಹೋದ ಶರೀರ ಹಾಗೂ ಚೆಲ್ಲಾಪಿಲ್ಲಿಯಾದ ಇಡ್ಲಿ , ಚಾಕ್ಲೆಟ್......................................................................


ಇತ್ತ ಮಗು ಅಮ್ಮ ಬರುತ್ತಾಳೆ ಎಂದು ಅಳುತ್ತಾ ಕಾಯುತ್ತಲೇ ಇತ್ತು................................................

Friday, May 9, 2008

ಅತ್ಯಾಚಾರ ಮತ್ತು ಕಾರಣಗಳು

ಇಂದು ಅಕಸ್ಮಾತ್ ಆಗಿ ಟೀನಾ ರವರ ಬ್ಲಾಗ್ಗೆ ಭೇಟಿ ನೀಡಿದೆ ಅಲ್ಲಿ ನಡೆಯುತಿದ್ದ ಕೆಲವು ಚರ್ಚೆಗಳು ಸ್ವಾರಸ್ಯ ಹಾಗು ಯೋಚಿಸಬೇಕಾದ ಗಂಭೀರ ವಿಚಾರಗಳೇ ಸರಿ.

ಹೆಣ್ಣಿನ ಮೇಲೆ ಅತ್ಯಾಚಾರ ಯಾಕೆ ನಡೆಯುತ್ತದೆ ಎಂಬುದನ್ನು ಮೊದಲು ವಿಶ್ಲೇಷಿಸಿದಾಗ ಈ ಕಾರಣಗಳು ನನಗೆ ಹೊಳೆದವು. ನನ್ನ ಜೀವನ ಯಾತ್ರೆಯಲ್ಲಿ ಕೆಲವು ಇಂತಹ ಸಂಗತಿಗಳೂ ನಡೆದಿವೆ. ಅದನ್ನೂ ಇಲ್ಲಿ ಬರೆದ್ದಿದ್ದೇನೆ
ಸಂಧರ್ಭ:
ಗಂಡಸರು ಅನುಕೂಲಸಿಂಧುಗಳು.
ಇಂದು ಕ್ಲೋಸ್ ಫ್ರೆಂಡ್ ಆಗಿರುವುವನೇ ನಾಳೆ ರೇಪಿಸ್ಟ್ ಆಗಬಹುದು.
ನಾನು ಹಿಂದೆ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿನ ಲೈಬ್ರರಿಯಲ್ಲಿ ಶನಿವಾರ (ಅಂದು ರಜಾ) ಭೇಟಿ ಕೊಟ್ಟಿದ್ದೆ.
ಯಾರು ಇರಲಿಲ್ಲ ವಾದ್ದರಿಂದ ಆತನ ಬುದ್ದಿಗೇನಾಯಿತೊ ಮೇಲೆ ಬೀಳಲು ಹವಣಿಸಿದ.
ಇಷ್ಟು ದಿನ ಕ್ಲೋಸ್ ಆಗಿ ಮಾತಾಡುತ್ತಿದ್ದೆಯಲ್ಲ . ಇಂದು ಇದಕ್ಕೂ ಒಪ್ಪಿಕೋ ಎಂದ./ ಹ್ಯಾಗೊ ಅವನಿಂದ ತಪ್ಪಿಸಿಕೊಂಡು ಬಂದಾಗಲಷ್ಟೆ ನೆಮ್ಮದಿಯ ಉಸಿರು ಬಿಟ್ಟೆ. ಯಾರಿಗೂ ಹೇಳಲಿಲ್ಲ . ಹೇಳಿದರೆ ನೀನ್ಯಾಕೆ ರಜಾದಿನದಲ್ಲಿ ಹೋದೆ . ನಿನ್ನದೇ ತಪ್ಪು ಅಂತಾರೆ.

ಹೆಣ್ಣಿನ ಸ್ಥಿತಿ
ಅಕಸ್ಮಾತ್ ಹೆಣ್ಣು ಗಂಡಿಗಿಂತ ಆರ್ಥಿಕವಾಗಿಯೋ ಅಥವ ದೈಹಿಕವಾಗಿಯೊ ದುರ್ಬಲಳಾಗಿದ್ದರೆ ಅವಳು ಗಂಡಿಗೆ ಬಡಿಸಿಟ್ಟ ಎಲೆ ಎಂದುಕೊಳ್ಳುತ್ತಾನೆ . ಸಾಮಾನ್ಯವಾಗಿ ಹುಡುಗಿಯರು ತಮ್ಮ ಕೆಲಸದಲ್ಲಿ ಅಥವ ಕಾಲೇಜಿನಲ್ಲಿ ಇಂತಹ ಸಂಧರ್ಭ ಎದುರಿಸಬೇಕಾಗುತ್ತದೆ.
ಗಂಡಿನ ಸ್ಥಿತಿ
ಗಂಡು ಕೆಲವೊಮ್ಮೆ ಇಲ್ಲೀವರೆಗೆ ಹೆಣ್ಣನ್ನೂ ಕಾಣದಿದ್ದಾಗ(ಬ್ರಹ್ಮಚಾರಿಗಳಾಗಿದ್ದವರು) ಮತ್ತು ತಮ್ಮ ಕಾಮ ತೀವ್ರತೆಯನ್ನು ಹತೋಟಿಯಲ್ಲಿಟ್ಟುಕೊಳ್ಳದೇ ಇದ್ದಾಗ ಅತ್ಯಾಚಾರಕ್ಕೆ ದಾರಿ ಯಾಗಬಹುದು.
ಹೆಣ್ಣಿನ ನಡತೆ
ಯಾರೇನೆ ಅಂದರೂ ಹೆಣ್ಣು ಯಾರೊಡನೆಯಾದರೂ ನಗುತ್ತಾ ಮಾತನಾಡಿದರೆ ಅವಳು ’ಅದಕ್ಕೆ ಕೊಡುವ ಇಂಡೈರೆಕ್ಟ್ ಇನ್ವಿಟೇಶನ್ ಅಂತ ಅಂದುಕೊಳ್ಳುವ ಸಮಾಜ ಇನ್ನೂ ಬದಲಾಗುವುದಿಲ್ಲ. ಆಗುವುದೂ ಇಲ್ಲ.

ಒಮ್ಮೆ ಒಂದು ಸಂಸ್ಥೆಯ ಅಧಿಕಾರಿಯಾಗಿ ನಾನು ಒಬ್ಬ ವಿದ್ಯಾರ್ಥಿಯೊಡನೆ ರಸ್ತೆಯಲ್ಲಿ ಸಿಕ್ಕನೆಂದು ಮಾತನಾಡಿ ಸ್ವಲ್ಪ ದೂರ ಬಂದೊಡನೆ ಯಾರೋ " ಅವನ ಜೊತೇಲಿ ಮಾತ್ರ ಬರ್ತೀರ ನಮ್ಮ ಜೊತೆ ಬರಲ್ಲ್ವಾ " ಅಂತ ಕೆಟ್ಟಾದಾಗಿ ಕೇಳಿದಾಗ ಇನ್ನೊಮ್ಮೆ ಯಾರೊಡನೆಯೂ ರಸ್ತೆಯಲ್ಲಿ ಮಾತನಾಡುತ್ತಾ ನಿಲ್ಲಬಾರದು ಎನಿಸಿತು.
ಹೆಣ್ಣಿನ ಉಡುಪು
ಖಂಡಿತಾ ಇದು ಸತ್ಯ.
ಈಗಿನ ಫ್ಯಾಶನ್ ಕಡಿಮೆ ಬಟ್ಟೆ ಹಾಕುವುದು. ಅದು ನಿಜ . ನಾನೂ ಒಪ್ಪುತ್ತೇನೆ. ಅದು ಎಲ್ಲಿವರೆಗೆ?
ನಾವು ಸಮಾಜದಲ್ಲಿ ಬದುಕುತ್ತಿದ್ದಾಗ ಸಮಾಜದ ಕಟ್ಟುಪಾಡುಗಳು ಅತಿ ಮುಖ್ಯ. ಅದನ್ನು ಮೀರಿದವಳು, ’ಅಂತಹವಳು’ ಎಂದು ಬ್ರಾಂಡ್ ಆಗುವುದು ನಿಜ. ಅಂತಹವರು ಗಂಡನ್ನು ಪ್ರಚೋದಿಸುವುದೂ ನಿಜ
ನಾನು ಚಿಕ್ಕವಳಿದ್ದಾಗ (೧೫ ವರ್ಷದವಳು)ಒಂದು ನಗರವಾಗುತ್ತಿರುವ ಹಳ್ಳಿಯಲ್ಲಿ ಕೆಲ ಕಾಲ ಇದ್ದೆವು . ಕೇವಲ ಪ್ಯಾಂಟ್ ಶರ್ಟ್ ಧರಿಸಿ ನಾನು ಆ ಹಳ್ಳಿಯಲ್ಲಿ ಬರುತ್ತಿದ್ದಾಗ ಸಭ್ಯತೆಯ ಎಲ್ಲೆ ಮೀರಿ ಅಲ್ಲಿನ ಗಂಡಸರು ಮಾತನಾಡಿದ್ದು ನೆನಪಿದೆ.. ಅಂದಿನಿಂದ ಆ ಹಳ್ಳಿಯಲ್ಲಿ ಇರುವಷ್ಟು ದಿನ ನಾನು ಚೂಡಿದಾರ ಹಾಕಿಯೇ ಒಡಾಡುತ್ತಿದೆ. ಅಂತಹ ಪ್ರಸಂಗ ನನಗೆ ಎದುರಾಗಲೇ ಇಲ್ಲ.
ಪಾಶ್ಚಾತ್ಯ ರಾಷ್ತ್ರಗಳಲ್ಲಿ ಹೇಗೊ ಗೊತ್ತಿಲ್ಲ .
ಆದರೆ ನಮ್ಮ ಸಮಾಜದ ಲಕ್ಶ್ಮಣ ರೇಖೆ ಯನ್ನೂ ದಾಟದೇ ಇರುವ ವರೆಗೂ ಹೆಣ್ಣು ಎಂದಿಗೂ ಈ ಅತ್ಯಾಚಾರಕ್ಕೆ ಬಲಿಯಾಗುವುದು ಕಡಿಮೆ

ಹೆಣ್ಣು ಇದಕ್ಕೆ ಏನು ಮಾಡಬಹುದು
ನನ್ನ ಅನಿಸಿಕೆಗಳು
ಆದಷ್ಟು ರಾತ್ರಿ ಒಬ್ಬಳೆ ಒಡಾಡುವುದನ್ನು ಕಡಿಮೆ ಮಾಡಬೇಕು ಇಲ್ಲವಾದರೆ ಜನರಿರುವ ರಸ್ತೆಯಲ್ಲಿ ಓಡಾಡಬೇಕು ಇಲ್ಲವಾದರೆ ಯಾರಾದರೂ ಗೊತ್ತಿರುವವರು ಜೊತೆ ಇರಬೇಕು
ಟೀನಾರವರು ಹೇಳಿದಂತೆ ಆತ್ಮರಕ್ಶಣೆಯ ಕಲೆಯನ್ನು ರೂಡಿಸಿಕೊಳ್ಳಬೇಕು, ಜೊತೆಯಲ್ಲಿ ಪೆಪ್ಪರ್ ಸ್ಪ್ರೇ ಆಥವ ಆ ಥರಹದ ಇನ್ನೇನಾದರೂ ಇಟ್ಟುಕೊಳ್ಳಾಬೇಕು
ನಾನು ಯಾವುದೇ ಸಮಯ್ದಲ್ಲೂ ಆಟೊನಲ್ಲಿ ಅಥವ ಟ್ಯಾಕ್ಸಿಯಲ್ಲಿ ಬರುತ್ತಿದ್ದಾಗಲೆಲ್ಲಾ . ಆ ಡ್ರೈವರ್‌ನ ಪೋಲಿಸ್ ನಂಬರನ್ನು ನನಗೆ ತಿಳಿದವರಿಗೆ ಎಸ್. ಎಮ್ .ಎಸ್ ಮಾಡುತ್ತೇನೆ. ದಾರಿಯಲ್ಲಿ ಫೋನನ್ನಲ್ಲಿ ಮಾತಾಡುತ್ತಾ ನನಗೆ ತಿಳಿದವರು ಈ ರಸ್ತೆಯಲ್ಲಿ ಸಿಕ್ಕಿ ಹತ್ತುತ್ತಾರೆ ಎಂಬುದನ್ನು ಅವನಿಗೆ ಸೂಚ್ಯವಾಗಿ ಹೇಳುತ್ತೇನೆ. ನಂತರ ಅವನ ಜೊತೆ ಮಾತನಾಡಲಾರಂಭಿಸುತ್ತೇನೆ. ಅವನ ಜೊತೆ ಮಾತಾನಾಡುತ್ತಾ ಒಂದು ರೀತಿಯ ಅತ್ಮೀಯ ವಾತವರಣ ನಿರ್ಮಿಸುತ್ತೇನೆ ಅಂತಹ ಪರಿಸ್ಥಿತಿಯಲ್ಲಿ ಯಾವುದೇ ಜಾರಿಕೆಯ ಮಾತಾಗಲಿ , ವೈಯುಕ್ತಿಕ ವಿಷಯ ವಾಗಲಿ ನುಸುಳದಂತೆ ಎಚ್ಚರ ವಹಿಸುತ್ತೇನೆ.
ತನ್ನ ಬಟ್ಟೆ ಹಾಗೂ ತನ್ನ ನಡುವಳಿಕೆಯ ಮೇಲೆ ಗಮನ(ಎಚ್ಚರ ) ವಿರಬೇಕು. ಯಾವುದೇ ಕಾರಣಕೂ ತನ್ನ ಉಡುಪಿನಿಂದ ಅಂಗಾಂಗ ಪ್ರದರ್ಶನವಾಗಬಾರದು (ಯಾವುದೇ ಉಡುಪು ಧರಿಸಿದರೂ). ಹಾಗೂ ಎಷ್ಟೆ ಮಾತನಾಡಿದರೂ ದೈಹಿಕ ಸ್ಪರ್ಶವನ್ನು ಕಡಿಮೆ ಮಾಡಬೇಕು. (ಹೆಂಗಸರು ತಮ್ಮ ಗೆಳತಿಯರಂತೆ ತಮ್ಮ ಗೆಳೆಯರ ಮೇಲೂ ಕೈ ಹಾಕಿ ನಡೆಯುವುದನ್ನು ನಾನು ನೋಡಿದ್ದೇನೆ).
ಸಣ್ಣ ಪುಟ್ಟ ಸಹಾಯ ಡ್ರಾಪ್ ಮಾಡು ಕಾಫಿ ಕೊಡಿಸು. ತೆಗೆದುಕೊಂಡು ಬಾ ಎಂಬ ತಾವೆ ಮಾಡಬಹುದಾದಂತಹ ಕೆಲಸಗಳಿಗೆ ಗಂಡಸರ ಸಹಾಯ ಪಡೆಯುವುದು ತಪ್ಪು

ಇದನ್ನೆಲ್ಲಾ ಮಾಡಿದರೆ ಅತ್ಯಾಚಾರ ಎನ್ನುವುದೇ ಇಲ್ಲವಾಗುತ್ತವೆ ಎಂಬುದು ಸುಳ್ಳು
ಮುಖ್ಯವಾಗಿ ಗಂಡಸರಲ್ಲಿ ಹೆಣ್ಣಿನ ಬಗ್ಗೆ ಗೌರವ ಮೂಡಬೇಕು. ಅದನ್ನು ಮೂಡಿಸುವ ಕೆಲಸ ಆಗಬೇಕು ಅದು ಹೆಂಗಸರಿಂದ (ನಮ್ಮಿಂದಲೇ) ಆಗುವ ಕೆಲಸ

ಗಮನಿಸಿ . ಇಲ್ಲಿ ಯಾವುದನ್ನು ಜೆನರಲೈಸ್ಡ್ ಆಗಿ ಹೇಳಿಲ್ಲ .

Friday, May 2, 2008

ಗುರಿ

ಗುರಿ
ಬಿಡದ ಛಲದ ನಂಬಿಕೆ
ಮನದ ಹಠದ ಕೂಗಿಗೆ
ಶರಣಾಗಿ ಬಂದೆ ನಾ ನಿನಗೆ

ದೂರದಿ ಕಂಡು
ನನ್ನ ಸನಿಹ ಕರೆದು
ನಡೆದಿಹೆ ನೀ ಮುಂದು

ಪ್ರೀತಿ ಬಿಟ್ಟು, ಸ್ನೇಹ ಬಿಟ್ಟು
ನಿನ್ನರಸಿ ಬಂದೆ
ನಾನೆಲ್ಲಾ ಬಿಟ್ಟು

ಹರೆಯದಾಟ ಬೇಡ ಎಂದೆ
ಬರಿಯ ಹಣ ಒಲ್ಲೆ ಎಂದೆ
ನಿನ್ನ ತಲುಪಲೆನ್ನ ಗಮನ ಒಂದೆ

ನೀ ಬದುಕಿನರ್ಥ ನನಗೆ
ನಿನ್ನ ಹುಡುಕಿ ಮನದಿ ಮಿಡುಕಿ
ಬಾಳು ವ್ಯರ್ಥ ವಾಗದೆನಗೆ

ನೀ ಸಿಗುವ ತನಕ ಸಾಯಲಾರೆ
ನಿನ ಹಿಡಿಯದೆ ಹೋಗಲಾರೆ
ನೀನಿರದ ಎಡೆಯ ಬಯಸಲಾರೆ

ಎಲ್ಲಿಯೋ ನೀನಿರುವೆ
ಇಲ್ಲಿಯೇ ನಾನಿರುವೆ
ನಮ್ಮಿಬ್ಬರ ಮಿಲನಕಾಗೆ ನಾ ಕಾದಿರುವೆ
---
----
----

ಓ ಗುರಿ

Thursday, May 1, 2008

ಕತೆಯಾಗದ ಹುಡುಗಿ

ಆಕೆ ಈಗಷ್ಟೆ ಅರಳಿದ ಸುಂದರ ಪುಷ್ಪ. ಮುಗ್ಧತೆಯೇ ಮೈವೆತ್ತಿದ ಹುಡುಗಿ. ಪ್ರೀತಿ ಪ್ರೇಮದ ಹಂಬಲಕ್ಕೆ ಬಿದ್ದವಳಲ್ಲ. ಯಾರ ಹೃದಯದ ಬಾಗಿಲನ್ನೂ ಬಡಿದವಳಲ್ಲ. ತನ್ನ ಎದೆಯ ಕದವ ತಟ್ಟಿದವರಿಗೆ ಕದ ತೆರೆದವಳಲ್ಲ. ಕಾಲೇಜಿಗೆ ಒಂದು ಥರದ ಮಾದರಿಯಾಗಿದ್ದಳು.
ಆಕೆ ಒಮ್ಮೆ ಅವನನ್ನ ನೋಡಿದಳು ಅವನು ಅಂದರೆ ಆ ಸಿನಿಮಾದ ಹೀರೊ. ಟಿವಿಯಲ್ಲಿ ಆ ಹೀರೊನ ಹಾಡು ನೋಡಿ ಅವನ ರೂಪಕ್ಕೆ ಮನ ಸೋತಳು. ಅವನ ಕಣ್ಣ ಭಾವಕ್ಕೆ , ನರ್ತಿಸುವ ಶೈಲಿಗೆ ಮಾರು ಹೋದಳು
ಚಿತ್ರ ನೋಡಿ ಬಂದ ಮೇಲಂತೂ ಅವನದೇ ’ಧ್ಯಾನ’ವಾಯಿತು . ಅವನು ಇನ್ನೂ ಬ್ಯಾಚುಲರ್ ಎಂಬುದನ್ನು ಕೇಳಿದ ಮೇಲೆ ತಾನೆ ಅವನ ’ಮೊನಾಲೀಸ ’ ಎಂದು ತೀರ್ಮಾನಿಸಿದಳು. ಎಲ್ಲಿ ನೋಡಿದರೂ ಅವನ ಹೆಸರನ್ನೇ ಗೀಚುತ್ತಿದ್ದಳು. ಕಷ್ಟ ಪಟ್ಟು ಅವನ ಆಡ್ರೆಸ್ ಹುಡುಕಿ ಅವನಿಗೊಂದು ಪ್ರೀತಿ ತುಂಬಿದ ಪತ್ರ ಹಾಗು ತನ್ನ ಭಾವಚಿತ್ರ ಕಳಿಸಿದಳು.
ಅವನೋ ಯಾರೋ’ಹುಡುಗಾಟಕ್ಕೆ ’ ಕಳಿಸಿದ ಪತ್ರವಿರಬೇಕು ಎಂದು ಮೊದಲು ಕಡೆಗಣಿಸಿದನಾದರೂ , ನಂತರ ಭಾವಚಿತ್ರಕ್ಕೆ ಮನಸೋತನು . ಅವಳ ಪ್ರೀತಿಯ ’ಮುಂಗಾರು ಮಳೆ"ಯಲ್ಲಿ ತೋಯ್ದು ಹೋದನು . ಅವಳಿಗೆ ಮರು ಓಲೆ ಕಳಿಸಿದ . "ಚೆಲುವಿನ ಚಿತ್ತಾರ"ವೆಲ್ಲಾ ತನ್ನ ಹೃದಯ ಚೋರನು ಕಳಿಸಿದ ಪತ್ರದಲ್ಲೆ ಇದೆ ಎಂದೆನಿಸಿತು. ಪ್ರೀತಿ ಆರಂಭವಾಯಿತು. ಅಥವ ಹಾಗೆಂದುಕೊಂಡಳು.
ಒಮ್ಮೆ ಅವನನ್ನು ಭೇಟಿ ಮಾಡುವ ಇಂಗಿತ ವ್ಯಕ್ತ ಪಡಿಸಿದಳು.. ಹೀರೊ ತಥಾಸ್ತು ಎಂದ.
ಇಬ್ಬರೂ ಭೇಟಿಯಾದರು. ತನ್ನ ಮನದಾಸೆಯನ್ನು ಅವನ ಮುಂದೆ ತೋಡಿಕೊಂಡಳು. ತಾನು ಮದುವೆ ಎನ್ನುವುದಾದರೆ ನಿನ್ನನ್ನೇ ಎಂದಳು. ಅದಕ್ಕೇನು ಪುರಾವೆ ಎಂದು ಕೇಳಿದ. ತನ್ನ ಚೆಲುವೆಲ್ಲಾ ನಿನ್ನದೆ ಎಂದು ತನ್ನನ್ನು ತಾನೆ ಅರ್ಪಿಸಿಕೊಂಡಳು. ಆತನೋ ಜಾಣ ಏನನ್ನೂ ಬಾಯಿ ಬಿಡದೆ ಏನನ್ನೂ ಕೇಳದೆ ಎಲ್ಲಾ ಪಡೆದುಕೊಂಡ. ಎಲ್ಲವನ್ನೂ ಸೂರೆಹೊಡೆದ.
ಚೆಲುವೆ ತನ್ನ ಬಾಳು ಪಾವನವಾಯ್ತು ಎಂದುಕೊಂಡಳು.
ಸರಿ ಮನೆಯವರನ್ನು ಒಪ್ಪಿಸಿ ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಹೇಳಿ ಅವಳನ್ನು ಮರಳಿ ಕಳಿಸಿದ.
ಕೊಂಚ ದಿನದಲ್ಲೇ ಆತ ಪ್ರಸಿದ್ದ ನಾಯಕನಾಗಿ ಬದಲಾದ ಅವನಿಗಾಗಿ ಕೋಟಿ ಕೋಟಿ ಸುರಿಯಲು ನಿರ್ಮಾಪಕರು ಸಾಲು ನಿಂತರು. ಸಾಲು ಸಾಲಾಗಿ ಚಿತ್ರ ಬಿಡುಗಡೆಯಾಗತೊಡಗಿದವು. ಹುಡುಗಿಯ ಕೈಗೆ ಸಿಗಲೂ ಆತ ಬಿಡುವಾಗಲಿಲ್ಲ
ಕೆಲವು ದಿನದಲ್ಲೆ ಆತನ ಮದುವೆ ಸುದ್ದಿ ಪತ್ರಿಕೆಗಳಲ್ಲಿ ಬಂತು. ಹುಡುಗಿ ಗಾಬರಿಯಾದಳು. ಹೀರೋನ ಮನೆ ಮುಂದೆ ಹೋಗಿ ಅತ್ತುಕೊಂಡಳು. ನಿಂಥರ ಎಷ್ಟೊಂದು ಹುಡುಗೀರು ಬರ್ತಾರೆ ಗೊತ್ತ. ಒಬ್ಬ ದೊಡ್ಡ ಹೀರೋ ಅಂದ್ರೆ ಅವನ ಹೆಸರು ಕೆಡಿಸೋಕೆ ಜನ ಕಾಯ್ತಾ ಇರ್ತಾರೆ ಎಂದು ಅಲ್ಲಿದ್ದ ಜನ ಅವಳನ್ನ ಓಡಿಸಿದರು.
ಮನೆಗೆ ಬಂದವಳೇ ಆಳಲೂ ಶಕ್ತಿ ಇಲ್ಲದವಳಂತೆ ಕೂತಳು . ಇನ್ನೂ ಹದಿನೆಂಟು ತುಂಬದ ವಯಸ್ಸು. ಆತ ತನ್ನವನಾಗಲಿಲ್ಲ ಎಂಬ ಬೇಗುದಿ ಒಂದೆಡೆಯಾದರೆ, ತಾನು ಯಾರವಳೂ ಆಗಲಾಗದ ದಳ್ಳುರಿ ಸುಡಲಾರಂಭಿಸಿತು. ಮುಂದೆ...........
ಆ ಹೀರೋನ ಮದುವೆ ವಿಜ್ರಂಭಣೆಯಿಂದ ಜರುಗಿತು.
ಪತ್ರಿಕೆಗಳಲ್ಲಿ ಈ ಸುದ್ದಿಯ ಜೊತೆ ಕೆಳಗಡೆ ಇಂತಹ ಹೀರೊ ಮದುವೆಯಾಗುತ್ತಿದ್ದಾನೆಂದು ಸಹಿಸದ ಹುಡುಗಿಯೊಬ್ಬಳ ಆತ್ಮಹತ್ಯೆ ಎಂಬ ಬರಹ ಕಾಣಿಸಿತು.
ಆ ಹೀರೊ " ಸಿನಿ ನಾಯಕರೂ ನಿಮ್ಮ ಹಾಗೆ ಮನುಶ್ಯರು . ಅವರೇ ನಿಮ್ಮ ಹೀರೊಗಳಲ್ಲ. ದಯವಿಟ್ಟು ಇಂಟಹ ನಿರ್ಧಾರ ತೆಗೆದುಕೊಳ್ಳಬೇಡಿ " ಎಂದು ಹುಡುಗಿಯರಿಗೆ ಕಿವಿ ಮಾತು ಹೇಳಿದ.
ಜನ ಚಪ್ಪಾಳೆ ಹೊಡೆದರು.

Tuesday, April 29, 2008

ಪ್ರೀತಿಗೆ ಸ್ನೇಹಾನ ಮರೆಸೋ ಶಕ್ತಿ ಇರುತ್ತಾ?

ಬಸ್ ಸ್ಟಾಪ್‌ನಲ್ಲಿ ನೆಪ ಮಾತ್ರಕ್ಕೆ ಕುಳಿತಿದ್ದರು ಆ ಇಬ್ಬರು ಸ್ನೇಹಿತೆಯರು ಬರೀ ಸ್ನೇಹಿತೆಯರೆಂದರೆ ಸಾಲದು ದೇಹ ಪ್ರಾಣ ಎಂಬತಿದ್ದರು. ಕಾಲೇಜ್ ಬಿಟ್ಟೊಡನೆ ಸೀದ ಮನೆಗೆ ಹೋಗುವ ಮಾತೆ ಅವರಲ್ಲಿರಲಿಲ್ಲ. ಬಸ್ ಸ್ಟಾಪ್‍ನಲ್ಲಿ ಕೂರುವುದು ಪಾರ್ಕ್ಗೆ ಹೋಗುವುದು . ದುಡ್ಡಿದ್ದರೆ ಬೇಕರಿಗೆ ಹೋಗಿ ತಿಂದುಕೊಂಡು ಮಾತಾಡುವುದು. ಮಾತಿಗೆ ಬರವೇ ಇರಲಿಲ್ಲ
ಮೂರು ಜನ್ಮಕ್ಕೆ ಸಾಲುವಷ್ಟು ಮಾತಿತ್ತೇನೊ ಅವರಲ್ಲಿ. ಇಂದೂ ಹಾಗೆ ಮಾತು ನಡೆಯುತ್ತಿತ್ತು
"ಏ ಪ್ರಿಯ ಯಾಕೆ ಸ್ವಲ್ಪ ದಿನದಿಂದ ಏನೊ ಒಂಥರ ಇದೀಯ ಏನೊ ಕಳ್ಕೊಂಡವಳ ಹಾಗೆ . ಸುಮ್ಮ್ನೆ ಕೂತ್ಕೊಂಡೀರ್ತೀಯ . ಏನು ವಿಷಯ ? ಲವ್ವಾ?"
ಪ್ರಿಯ ನಾಚಿಕೆಯಿಂದ ತಲೆಯಾಡಿಸಿದಳು
" ಏ ಕಳ್ಳಿ ಯಾರೆ ಅದು .ದಿನದಲ್ಲಿ ಮುಕ್ಕಾಲು ಪಾಲು ನಂಜತೆನೇ ಇರ್ತೀಯ . ಇದು ಹ್ಯಾಗೆ ಸಾಧ್ಯ.
ಹೋಗಲಿ ಯಾರೆ ಅವನು ನನ್ನ ಗೆಳತೀ ಮನಸನ್ನ ಹಾರಿಸಿಕೊಂಡವನು?" ಸ್ನೇಹಾಳ ಪ್ರಶ್ನೆಗೆ ಉತ್ತರಿಸಲಾರೆ ಎಂಬಂತೆ ತಲೆ ಆಡಿಸಿದಳು ಪ್ರಿಯ.
"ನನ್ನ ಹತ್ತಿರ ಮುಚ್ಚಿಡಬೇಡ . ನಂಗೆ ಹೇಳೆ ಪ್ಲೀಸ್"
ಪ್ರಿಯ ತನ್ನಲ್ಲಿದ್ದ ರೆಕಾರ್ಡ್ ಬುಕ್ ತೆಗೆದು ಅದರಲ್ಲಿದ್ದ ಲೇಬಲ್‍ನ ಮೇಲಿದ್ದ ಹೆಸರನ್ನು ತೋರಿದಳು.
ಹೆಸರು ನೋಡುತಿದ್ದಂತೆ ನಂಬಲಾಗದವಳಂತೆ ಅಚ್ಚರಿಯಿಂದ ಪ್ರಿಯಳನ್ನು ನೋಡಿದಳು.
ಅದು ಅವರಿಬ್ಬರ ಕ್ಲೋಸ್ ಫ್ರೆಂಡ್ ರವಿಯ ಬುಕ್ .
ಈ ಮೂವರು ಭೂಮಿಯ ಮೇಲೆ ಹುಟ್ಟಿದ್ದೇ ಈ ಸ್ನೇಹಕ್ಕಾಗಿ ಎಂಬಂತಿದ್ದರು.
ಕಾಲೇಜಿನ ಯಾವ ಮೂಲೆಯಲ್ಲಾದರೂ ಒಬ್ಬರಿದ್ದರೆ ಇನ್ನಿಬ್ಬರು ಇರುತ್ತಾರೆ ಎನ್ನುವಂತಿತ್ತು.
ಯಾರಾದರೂ ಒಬ್ಬರಿಗೆ ಯಾರಿಂದಲೋ ನೋವಾಗಿದೆ ಎಂದರೆ ಮೂರು ಜನ ಜಗಳಕ್ಕೆ ರೆಡಿ.
ಯಾರೋ ಒಬ್ಬರು ರಜಾ ಹಾಕಿದರೆ ಇನ್ನಿಬ್ಬರಿಗೆ ಕ್ಲಾಸ್ ಬೋರು ಕೂಡಲೆ ಕ್ಲಾಸ್‌ನಿಂದ ಮಾಯವಾಗುತ್ತಿದ್ದರು.
ಎಲ್ಲರೂ ರವಿಗೆ ರೇಗಿಸುತ್ತಿದ್ದರು. ಇಬ್ಬರು ಹುಡುಗಿಯರನ್ನು ಪಟಾಯಿಸಿಬಿಟ್ಟಿದ್ದೀಯಾ ಅಂತ.
ಆದರೆ ರವಿ ಇವರಿಬ್ಬರ ಬಗ್ಗೆ ಎಂದೂ ಅಂತಹ ಭಾವನೆಯನ್ನ ವ್ಯಕ್ತ ಪಡಿಸಿರಲಿಲ್ಲ.
" ಹೆಯ್ ಪ್ರಿಯ ಆರ್ ಯು ಶ್ಯೂರ್ ? ಇದು ರವಿಗೆ ಗೊತ್ತಾ?"
"ಇಲ್ಲಾ ಕಣೆ ಅವನಿಗೆ ಹೇಗೆ ಹೇಳಲಿ ಅಂತ ತಿಳೀತಿಲ್ಲ. ಅವನು ಯಾವತ್ತು ನನ್ನ ಜೊತೆ ಆ ಥರ ಬಿಹೇವ್ ಮಾಡಿಲ್ಲ . ಅವನಿಗೆ ಈ ವಿಷಯ ಹೇಳೊ ಕೆಲಸಾನ್ ನೀನೆ ಮಾಡಬೇಕು. ಪ್ಲೀಸ್ ಕಣೇ"
"ಸರಿ ಕಣೆ ಲೆಟ್ ಮಿ ಟ್ರೈ."
" ಪ್ಲೀಸ ಸ್ನೇಹ ನಂಗೆ ಅವನಲ್ಲದೆ ಬೇರೆ ಯಾರು ಹಿಡಿಸ್ತಾ ಇಲ್ಲ. ಊಟ ತಿಂಡಿ ಸಹಾ ಬೇಡ ಅನ್ನಿಸ್ತಿದೆ. ನೀನವನ್ನ ಒಪ್ಪಿಸಲೇ ಬೇಕು"
"ಆಯ್ತು " ಜೋರಾಗಿಯೆ ಕಿರುಚಿದಳು
ಅಷ್ಟ್ರಲ್ಲಿ ಗಾಡಿ ಬಂದು ನಿಂತ ಶಬ್ಧವಾಯಿತು . ರವಿ ಬಂದು ನಿಂತಿದ್ದ.
"ಏನ್ರೇ ಇನ್ನೂ ಮೀಟಿಂಗ್ ಮುಗ್ದಿಲ್ಲವಾ, ನಡೀರಿ ಟಿಕೆಟ್ ತಂದಿದೀನಿ ಹೋಗೋಣಾ"
"ರವಿ ಇವತ್ತು ರಾಗಿಗುಡ್ಡ ದೇವಸ್ಥಾನಕ್ಕೆ ಹೋಗೋಣ. ಫಿಲ್ಮ್ ಬೇಡ " ಸ್ನೇಹ ನುಡಿದಳು.
" ಯಾಕೆ ನೆನ್ನೆ ತಾನೆ ಹೇಳ್ತಿದ್ರಿ . ಹೋಗೋಣ ಅಂತ ಇದೇನು ಹೊಸಾ ಆಟ?"
"ಪ್ಲೀಸ್ ಕಣೋ . ಟಿಕೆಟ್ನ ಮಹೇಶಗೆ ಕೊಟ್ಬಿಡು ಅವನು ಅವನ ಫ್ರೆಂಡ್ ನೋಡ್ಕೋತಾರೆ."
"ಆಯ್ತು ಅದಿರ್ಲಿ ಯಾಕೆ ಪ್ರಿಯಂಗೆ ಏನಾಯಿತು ಒಂಚೂರು ಬಾಯೆ ಬಿಡ್ತಿಲ್ಲ"
"ಅದನ್ನೆ ಮಾತಾಡ್ಬೇಕು . ನೀನು ಹಿಂದೆ ಬಾ ನಾವು ಆಟೋನಲ್ಲಿ ಹೋಗ್ತೀವಿ"
"ಸರಿ"
ದೇವಸ್ಥಾನದ ಹತ್ತಿರ
ಪ್ರಿಯ ಒಂದೆಡೆ ಕುಳಿತಿದ್ದಳು. ಸ್ವಲ್ಪ ದೂರದಲ್ಲಿ ಸ್ನೇಹ ಹಾಗು ರವಿಯ ಮಾತು ಕತೆ ನಡೆಯುತ್ತಿತು
ರವಿ " ಸ್ನೇಹ ಇದೇನಿದು ಹೊಸ ನಾಟಕ ನಿಮ್ಮಿಬ್ಬರದು. ನಾನು ಯಾವತ್ತು ಪ್ರಿಯನ್ನಾಗಲಿ ನಿನ್ನಾಗಲಿ ಆ ದೃಷ್ಟಿನಲ್ಲಿ ನೋಡಿಲ್ಲ. ತಮಾಷೆ ಮಾಡಬೇಡ"
"ಇಲ್ಲ ನಾನು ತಮಾಷೆ ಮಾಡ್ತಿಲ್ಲ . ನೋಡು ಈ ಮಾತನ್ನು ಅವಳ ಮುಂದೆ ಆಡಬೇಡ. ಏನಾಗಿದೆಯೋ ಪ್ರಿಯಾಗೆ ಒಳ್ಳೆ ಗೊಂಬೆ ಥರಾ ಇದ್ದಾಳೆ . ಬೇರೆ ಹುಡುಗರೆಲ್ಲಾ ಅವಳ ಹಿಂದೆ ಬೀಳ್ತಾರೆ . ಅಂತಹದ್ರಲ್ಲಿ ನೀನು. ಹ್ಯಾಗೂ ನಾವೆಲ್ಲಾ ಒಂದೆ ಕ್ಯಾಸ್ಟ್. ಇನ್ನೇನಪ್ಪ ಯೋಚನೆ."
" ಸ್ನೇಹಾ ಅದು................"
"ಅದೂ ಇಲ್ಲ ಇದೂ ಇಲ್ಲಾ. ನೀನೀಗ ಪ್ರಿಯ ಹತ್ರ ಹೋಗಿ ಐ.ಲೌ. ಯು ಅಂತ ಹೇಳ್ತೀಯ ಸರೀನಾ . ಹೋಗೊ"
ಸ್ನೇಹ ಅಲ್ಲಿಯೇ ನಿಂತಳು. ರವಿ ಪ್ರಿಯಾಳ ಬಳಿ ಹೋಗಿ ಹೇಳಿದ . ಪ್ರಿಯಾಳ ಮುಖ ಅರಳಿತು.
ಸ್ನೇಹಾಳ ಮನಸಲ್ಲಿ ಏನೂ ಒಂಥರ ಹೇಳಲಾರದ ನೋವು. ಯಾಕೆ ಅಂತ ತಿಳಿಯಲಿಲ್ಲ.
----------------------------------------------------
ಮಾರನೆಯ ದಿನ

" ಅಯ್ಯೊ ಪಾಪ ಜೀವ ಹೊರಟು ಹೋಗಿದೆ ನೋಡಪ್ಪ ಪಾಪ ಬರಿ ದೇಹ ಮಾತ್ರ ಕ್ಲಾಸ್‌ನ್ನಲ್ಲಿ ಕೂತಿದೆ." ಕವಿತಾ ರೇಗಿಸುತ್ತಿದ್ದಳು .
ಅವತ್ತು ಕಾಲೇಜಿಗೆ ಬಂದಾಗಿನಿಂದ ಮೊದಲ ದಿನ ಸ್ನೇಹ ಒಂಟಿಯಾಗಿ ಕುಳಿತಿದ್ದಳು. ರವಿ ಪ್ರಿಯ ಅಂದು ಕ್ಲಾಸ್‌ಗೆ ಚಕ್ಕರ್ ಹಾಕಿ ಎಲ್ಲೊ ಹೋಗಿದ್ದರು.
"ಏನೆ ಸ್ನೇಹ ನೀನೇನೊ ಬ್ರೋಕರ್ ಕೆಲಸ ಬೇರೆ ಮಾಡಿದಿಯಂತೆ. ಇವಾಗ ಎಲ್ಲಿ ನಿನ್ನ ಪ್ರಾಣ ಸ್ನೇಹಿತರುಗಳು ಪ್ರಾಣ ತೆಕ್ಕೊಂಡು ಹೋಗಿಬಿಟ್ಟರಾ."ಕವಿತಾಳ ವ್ಯಂಗ್ಯ ಮುಂದುವರಿಯುತಿತ್ತು
" ಕವಿತಾ ಪ್ಲೀಸ್ ಶಟ್ ಅಪ್ "
ಕ್ಲಾಸ್ ನಲ್ಲಿ ಕೂರಲಾರದೆ ಹೊರಗೆ ಬಂದಳು ಜೀವನದಲ್ಲಿ ಮೊದಲಬಾರಿಗೆ ಒಂಟಿ ಎಂಬ ಭಾವನೆ ಬಂದಿತು.

ಅಂದಿನಿಂದ ರವಿ ಪ್ರಿಯ ಹೊರಗಡೆ ಹೋಗುವುದು . ಸ್ನೇಹಳನ್ನು ಅವಾಯ್ಡ್ ಮಾಡುವುದು ನಡೆಯಿತು.

ಸ್ನೇಹಾ ಈಗ ಇದಕ್ಕೆ ಅಭ್ಯಾಸವಾಗಿ ಹೋದಳು.
ಆದರೆ ಅವಳ ಮನಸಲ್ಲಿ ಮೂಡಿದ ಪ್ರಶ್ನೆಯೊಂದಕ್ಕೆ ಉತ್ತರ ಸಿಗಲ್ಲಿಲ್ಲ.
ಪ್ರೀತಿಗೆ ಸ್ನೇಹಾನ ಮರೆಸೋ ಶಕ್ತಿ ಇರುತ್ತಾ?
ಆ ಪ್ರಶ್ನೆಗೆ ಉತ್ತರ ಹೇಳಲಾಗುವುದಾ

Saturday, April 26, 2008

ಗೆಳೆಯನಲ್ಲದ ಗೆಳೆಯನಿಗೆ

ಗೆಳೆಯನಲ್ಲದ ಗೆಳೆಯನಿಗೆ

ಬಾಳಿನುದ್ದಕ್ಕೂ ನಿನ್ನ ಜೊತೆಗಿರುವೆ
ಎಂದ ನೀ ಈಗ ಎಲ್ಲಿರುವೆ
ಬಾಳ ಎಲ್ಲೆಯಲಿ ನನ್ನ ಕಾವಲಾಗಿ
ಜೀವನದ ಆಸರೆಯಾಗಿ
ಹೃದಯದ ಮಾತಾಗಿ
ಜೊತೆ ಹೆಜ್ಜೆ ಹಾಕುವೆ ಎಂದ ನೀ
ಹೇಗಿರುವೆ ಈಗ ಬೇರಾಗಿ

ಪ್ರತಿ ಹೆಜ್ಜೆಗೂ ನಿನ್ನ ಹಿತ ನುಡಿ
ಕಾವಲಾಗಿತ್ತು ನನ್ನ ದಿನವಿಡೀ

ಹೊರಟೆ ನೀ ಹೇಳದೆ
ಭವಬಂಧನ ಬೇಡೆಂದೆ
ನನ್ನೊಂದು ಮಾತು ಕೇಳದೆ

Friday, April 25, 2008

ಸಾಯಬೇಕು ಅನ್ನಿಸಿದ ಆ ಕ್ಶಣ

ಇದು ಏಳು ವರ್ಷದ ಹಿಂದಿನ ಮಾತು ಆಗ ತಾನೆ ಡಿಪ್ಲಮೋ ಮುಗಿಸಿದ್ದೆ. ನನ್ನ ಸಹಪಾಠಿಗಳಿಗಿಂತ ಮುಂಚೆ ಸಾಫ್ಟ್ವೇರ್ ಕಂಪೆನಿಯ ಡಾಟ್ ಕಾಂ ಶಾಖೆಯಲ್ಲಿ ಸಿಕ್ಕಿತು. 2000 ದಲ್ಲಿ ನನ್ನ ಅದೃಷ್ಟವೋ ಏನೊ ಐದಂಕಿಯ ಸಂಬಳ ಅದೂ ಬರೀ ಡಿಪ್ಲೊಮಾಗೆ . ಹದಿ ವಯಸು ನನ್ನ ಅಹಂ ಮೇರೆ ಮೀರಿತ್ತು. ಅದೃಷ್ಟ, ವಿಧಿ, ದೇವರಿಗಿಂತ ನನ್ನ ಸ್ವಯಂ ಶಕ್ತಿಯ ಮೇಲೆ ಅತಿಯಾದ ಆತ್ಮ ವಿಶ್ವಾಸ. ಹೀಗೆ ಸಾಗಿತ್ತು ಬದುಕು. ಸಾಫ್ಟ್ವೇರ್ ಉದ್ಯೋಗ ಅಂದ ಮೇಲ್ ಅದಕ್ಕೆ ತಕ್ಕ ಹಾಗೆ ಮನೆ ಬದಲಾಯಿಸಿದ್ದೆ. ಅಮ್ಮನ್ನ ಟ್ಯೂಶನ್ ಮಾಡಬೇಡ ಇಲ್ಲಿಯವರೆಗೆ ಪಟ್ಟ ಕಷ್ಟಾ ಸಾಕು ಅಂಟ ಹೇಳಿ ನಿಲ್ಲಿಸಿದ್ದೆ.ಕೆಲಸ ಸಿಕ್ಕಿ 8 ತಿಂಗಳ ಮೇಲೆ ಅಕ್ಕನಿಗ್ಗೊಂದು ಗಂಡೂ ಸಿಕ್ಕಿ ಅವಳ ಮದುವೆಗೆ ದುಡ್ಡು ಹೊಂಚುವ ಜವಾಬ್ದಾರಿ . ಮದುವೆ 2001 ಆಗಸ್ಟ ಅಂತ ನಿಷ್ಕ್ಲರ್ಶೆ ಯಾಯಿತು. ಜೋರಾಗೇ ನಡೆಯುತ್ತಿತು ನನ್ನ ದರ್ಬಾರು.
ಜನವರಿ 2001ಅದ್ಯಾರ ಕಣ್ಣು ಬಿತ್ತೋ . ನಮ್ಮ ಕಂಪೆನಿಯೂ (ಅದೀಗ ಕಾಲ್ ಸೆಂಟರ್ ಬಿಪಿಒ ಅಗಿ ಬದಲಾಗಿದೆ) ರೆಸೆಶನ್ ಪಿರಿಯಡ್ಗೆ ಈಡಾಯಿತು. ಹಾಗಾಗಿ ಸುಮಾರು ೪ ಬ್ಯಾಚ್ ನ ಜನರನ್ನು ಲೇ ಆಫ್ ಮಾಡುತ್ತಾರೆ ಎಂಬ ಮಾಹಿತಿ ಸಿಕ್ಕಿತು . ಹೆಚ್ಚು ಪ್ರಾಜೆಕ್ಟ್ ಸಿಗುತ್ತೆ ಎಂದು ಜಾಸ್ತಿ ಜನರನ್ನು ತೆಗೆದುಕೊಂಡ ಪರಿಣಾಮ ಕಂಪೆನಿಗೆ ಅಲ್ಲಿಂದ ಪ್ರಾಜೆಕ್ಟ್ ಕಡಿಮೆಯಾದಾಗ ನಾವೆಲ್ಲ ಹೊರೆ ಎನಿಸಿದೆವು.ಆ ಬ್ಯಾಚ್ ನಲ್ಲಿ ನನ್ನ್ ಬ್ಯಾಚ್ ಒಂದು . ಆದರೂ ನನಗೆ ನನ್ನ ಸಾಮರ್ಥ್ಯದ ಮೇಲೆ ಅತಿಯಾದ ನಂಬಿಕೆ . ಹಾಗಾಗಿ ನಾನು ಆ ಲಿಸ್ಟನಲ್ಲಿ ಸೇರುವುದಿಲ್ಲ ಎಂಬುದೇ ನನ್ನ ನಂಬಿಕೆ ಯಾಗಿತ್ತು. ಕೊನೆ ಕ್ಷಣ್ದದವರೆಗೂ ನನಗೆ ಮೈಲ್ ಬರುವವರೆಗೂ . " you are requested to attend a meeting at the down stair assemble hall " ಅಂತ .
ಮನೆಯ ಸ್ಠಿತಿ , ಸಾಲ , ಕೆಲಸ ಹುಡುಕುವ ಕಷ್ಟ, ಅಕ್ಕನ ಮದುವೆ ಗೆ ಇನೂ ೮ ತಿಂಗಳು. ದುಡ್ಡು ಹೊಂಚುವ ಬಗೆ ನೆನೆಸಿಕೊಂದರೆ ಕಣ್ಣು ಕತ್ತಲೆಯಾಗುತಿತ್ತು. ಹಾಗೂ ಹೀಗೂ ಮೀಟೀಂಗ್ಗೆ ಹೋದೆ. ಒಂದಷ್ಟು ಜನ ಮ್ಯಾನೇಜಮೆಂಟ್ನ ಜೊತೆ ಜಗಳ ವಾಡುತ್ತ್ತಿದ್ದರು. ಏನೋ ಮಾತು ಕತೆ. ಕೊನೆಗೆ ಏನೋ ಉಪಕಾರ ಮಾಡುವಂತೆ ಎರೆಡು ತಿಂಗಳ ಸಂಬಳವನ್ನು ಪರಿಹಾರವಾಗಿ ಕೊಡುವ ಮತು ನಡೆಯುತ್ತಿತು.ಮಾತು ಮುಗಿಯುತ್ತಿದ್ದಂತೆ ನಾನು ಅಲ್ಲಿಂದ ಸೀದ ೫ ನೇ ಅಂತಸ್ತಿಗೆ ಬಂದೆ. ಹ್ಯಾಗೆ ಮುಂದೆ ಏನು ಮಾಡಬೇಕು ಎಂದು ತೋಚಲಿಲ್ಲ. ಅಕ್ಕನ ಮದುವೆಗೆ ಸಾಲ ಈಗ ಯಾರು ಕೊಡುತ್ತಾರೆ . ಅಮ್ಮನಿಗೆ ಹೇಗೆ ಮುಖ ತೋರಿಸುವುದು. ಬರೀ ಪ್ರಶ್ನೆಗಳೆ ಕಣ್ಣ ಮುಂದೆ . ಮೊದಲ ಬಾರಿ ನನ್ನ ಸಾಮರ್ಥ್ಯದ ಮೇಲೆ ನಂಬಿಕೆ ಹೊರಟು ಹೋಗಿತ್ತು. ನಾನು ಅಪ್ರಯೋಜಕಳು . ಹಾಗಿಲ್ಲದಿದ್ದಲ್ಲಿ ನನ್ನನ್ನು ಕೆಲಸದಲ್ಲಿ ಮುಂದುವರೆಸುತಿದ್ದರುನನ್ನಂಥವಳು ಭೂಮಿಯ ಮೇಲೆ ಯಾಕಿರಬೇಕು ಎಂಬ ಅನಿಸಿಕೆ ಬಂದ ಕೂಡಲೆ ನನಗೆ ಹೊಳೆದಿದ್ದು ಇಲ್ಲಿಂದ ಜಿಗಿದು ಪ್ರಾಣ ಬಿಡುವ ಯೋಚನೆ.ಅದನ್ನು ಕಾರ್ಯರೂಪಕ್ಕೆ ಇಳಿಸಲು ಕಟ್ಟೆಯ ಹತ್ತಿರ ಬಂದೆ ಸುತ್ತ ಯಾರೂ ಇರಲಿಲ್ಲ . ಸಾವಿನ ಭಯ ಆ ಕ್ಷಣ ಕಾಡಲೇ ಇಲ್ಲ. ಇನ್ನೆನು ಜಿಗಿಯಬೇಕು ಎಂದು ಗಟ್ಟ್ ಮನಸ್ಸು ಮಾಡಿಕೊಂಡೆ ಎನ್ನುವಾಗ .................ಹೆಗಲ ಮೇಲೆ ಕೈ ಒಂದು ಬಿತ್ತು . ಅದು ನನ್ನ ಸಹೋದ್ಯೋಗಿ ಅನೂ ಳದ್ದು."hey roopa what ru doing here. . come let us go down" ಎಂದಳು" ನೊ ಅನು ನಂಗೆ ಬದುಕಿರೋಕೆ ಇಷ್ಟ ಇಲ್ಲ . ಇವರು ಇದ್ದಕಿದ್ದಂತೆ ಹೀಗೆ ಮಾಡಿದರೆ ಹ್ಯಾಗೆ. ಒಂದೆ ಸಲ ಅಕಾಶಕ್ಕೇರಿಸಿ ಅಲ್ಲಿಂದ ಕೆಳಗೆ ತಳ್ಲಿಬಿಬಟ್ಟರಲ್ಲ ಪಾತಾಳಕ್ಕೆ" ಎಂದೆ"ಏ ರೂಪ ನಿಂಗೆ ಹುಚ್ಚು ಹಿಡಿದಿದೆಯಾ . ನಾನು ಒಂದು ಮಾತು ಕೇಳ್ತೀನಿ ಅದಕ್ಕೆ ಉತ್ತರ ಹೇಳಿ ನೀನು ಸಾಯಿ ಅಥವ ಬದುಕು ನಿನ್ನಿಷ್ಟ "ಎಂದಳು" ನೀನು ಅಮ್ಮನ ಹೊಟ್ಟೇಲಿ ಇದ್ದಾಗ ನಿಂಗೆ ಗೊತ್ತಿತ್ತ *** ಕಂಪೆನಿ ಇದೆ ಅಂತ? ನೀನು ಇದನ್ನೆ ನಂಬಿಕೊಂಡು ಹುಟ್ಟಿದ್ಯಾ? ಕಷ್ಟ ಎಲ್ಲರಿಗೂ ಇದ್ದದ್ದೇ .ಆದರೆ ಅದಕ್ಕೆ ಈ ರೀತಿಯ ಕೊನೆ ಬೇಕಾಗಿಲ್ಲ . ನನ್ನನ್ನೇ ನೋಡು ೩೦ ವರ್ಷ ಆಯ್ತು ಮದುವೆ ಇಲ್ಲ ಬಂದೋರೆಲ್ಲಾ ನಾನು ಚೆನಾಗಿಲ್ಲ ಅಂತ ಹೇಳಿ ದೂರ ಹೋಗ್ತಿದ್ದಾರೆ. ಹಾಗಂತ ನಾನು ಸಾಯೋದಿಲ್ಲ ಅಲ್ಲವಾ? ನಿಂಗೆ ಇನೂ ಚಿಕ್ಕ ವಯಸ್ಸು ನಿಮ್ಮ ಅಮ್ಮ ನಿನ್ನ ಮೇಲೆ ಏನೇನೂ ಆಸೆ ಇಟಿದ್ದಾರೆ ಅವ್ರೆಲ್ಲಾ ಏನು ಮಾಡಬೇಕು ಹೇಳು ?
ಅಷ್ಟು ಹೊತ್ತಿಗೆ ನನ್ನ ಆವೇಶ ಕುಗ್ಗಿತು ಏನಾದರೂ ಆಗಲಿ ಎಂದು ಕೆಳಗೆ ಬಂದೆ. ಅವಳ ಆ ಹೊತ್ತಿಗೆ ಬರದಿದ್ದರೆ ಇದನ್ನು ಹೇಳಲು ನಾನು ಬದುಕಿಯೇ ಇರುತ್ತಿರಲಿಲ್ಲ. ಅವಳು ಈಗ ಹೇಗಿದ್ದಾಳೋ ಎಲ್ಲಿದ್ದಾಳೋ ಗೊತ್ತಿಲ್ಲ .ಆದರೆ ಅವಳನ್ನಂತೂ ಮರೆಯಲಾಗುವುದಿಲ್ಲಹಾಗೂ ಹೀಗೂ ನಮ್ಮಕ್ಕನ ಮದುವೆಗೂ ಸುಸ್ಸೊತ್ರವಾಗಿ ನಡೆಯಿತು ಅದೇ ಆಗಸ್ಟನಲ್ಲಿ .
ಆದರೆ ಅಲ್ಲಿಂದ ಹೊರಗೆ ಬಂದ ಮೇಲೆ ನಾನನುಭವಿಸಿದ ಕಷ್ಟ ವಿದೆಯಲ್ಲ ಅದೇ ಇನ್ನೊಂದು ಕತೆ. ಅದನ್ನು ಇನ್ನೊಮ್ಮೆ ಬರೆಯುತ್ತೇನೆ
ನೆನ್ನೆ ಡೈರಿ ತೆಗೆದು ಓದಿದಾಗ ನಾನು ಅಟೆಂಡ್ ಮಾಡಿದ ಇಂಟರ್ ವ್ಯೂ ಗಳು ಅವಗಳ ಅಡ್ರೆಸ್ ನೋಡಿದಾಗ ಎಲ್ಲಾ ನೆನಪಾಯಿತು.

Thursday, April 24, 2008

ಅನಾಮಿಕ

ಹೆಸರಿಲ್ಲದವನಿಗೆನಾನು ನೆನ್ನೆ ನಿನ್ನ ನೋಡಿದೆ ೧೦ ವರ್ಷಗಳ ಈ ಸುಧೀರ್ಘ ಅವಧಿಯ ನಂತರ. ಸಮಯ ನನ್ನಲ್ಲೂ, ನನ್ನ್ ಜೀವನದಲ್ಲೂ ಏನೇನೋ ಬದಲಾವಣೆ ಮಾಡಿದೆ. ಹಾಗೆಯೆ ನಿನ್ನ ಮುಖದಲ್ಲೂ .ಹಿಂದಿನ ಆ ದಿನಗಳನ್ನು ಮತ್ತೊಮ್ಮೆ ನೆನಪಿಸಿಕೊಂಡರೆ ಈಗಲೂ ಕಿರುನಗೆ ಬರುತ್ತದೆ.ನನ್ನ ಜೀವನದಲ್ಲಿ ಆಗಷ್ಟೆ ವಸಂತ ಕಾಲ . ಸ್ಕೂಲಿಗೆ ಹೋಗುವುದು , ಹರಟೆ ಹೊಡೆಯುವುದು, ಜಗಳ ಮಾಡುವುದು ಇವಿಷ್ಟೆ ಪ್ರಪಂಚ ನಮಗೆಲ್ಲಾ.ಆ ದಿನ ಬಸ್ ಕೆಟ್ಟು ನಿಂತು ಹೋಗಿತ್ತು ಅದೇ ಗೋವರ್ಧನ ಸ್ಟಾಪ್ ನಲ್ಲಿ .ನಮಗೆಲ್ಲ ಮನೆಗೆ ಲೇಟ್ ಆಗಿ ಹೋಗಬಹುದಲ್ಲ ಎಂಬ ಖುಷಿ .ಆಗಲೆ ಗೆಳತಿಯೊಬ್ಬಳು "ಏಯ್ ನೋಡೆ ಅಲ್ಲಿ ಯಾರೊ ಹ್ಯಾಗೆ ತಿನ್ನೋ ಹಾಗೆ ನೋಡ್ತಾ ಇದಾನೆ " ಅಂದಳು .ಇನ್ನೊಬ್ಬಳು " ಅಯ್ಯೊ ಬಿಡ್ರೆ ಅವರಿರೋದೆ ನೋಡೋಕೆ " ಅಂತ ಹೇಳಿದಳುಆದರೂ ಕಳ್ಳ ಮನಸ್ಸು ನೋಡೆ ಬಿಡುವ ಎಂದು ತಿರುಗಿದೆ. ಅದನ್ನೆ ಕಾಯುತ್ತಿರುವ್ವನಂತೆ ನೀನು ಕಣ್ಣು ಮಿಟುಕಿಸಿದೆ (ಹೊಡೆದೆ). ಕೋಪದಿಂದ ರಾಸ್ಕಲ್ ಎಂದು ಅಂದಿದ್ದನ್ನು ನೀನು ಕೇಳಿಸಿಕೋಡೆಯೇನೂ . ಸೀದಾ ನನ್ನ ಬಳಿಯೇ ಬರುವುದೇ?ನನ್ನ ಸ್ನೇಹಿತೆ" ಯಾಕೆ ಏನಾದ್ರೂ ಚಪ್ಪಲೀಲಿ ಬೇಕಿತ್ತಾ " ಅಂತ ಕೇಳಿದಾಗ ,"ಓ ಅವರು ಕೊಟ್ಟರೆ ತಗೋಳಕ್ಕೆ ರೆಡಿ " ಆಂತ ಹೇಳಿದೆ ನನ್ನತ್ತ ಕೈ ತೋರಿ.ನಾನ್ಯಾಕೆ ಅಲ್ಲಿ ನಿಂತಿರಬೇಕು? ಸ್ನೇಹಿತೆಯ ಕೈ ಹಿಡಿದು ಕೊಂಡು ಸಿಕ್ಕ ಬಸ್ ಹತ್ತಿದೆ.ಅದರೆ ನೀನು ಮತ್ತೆ ಮತ್ತೆ ನನ್ನ ಹಿಂದೆ ಬಂದು ನಿಂತೆ ಹಿಂದೆ ತಿರುಗಿದಾಗಲೆಲ್ಲಾ ಒಂದು ಸ್ಮೈಲ್ ಕೊಡುತ್ತಿದ್ದ್ದೆ
ಅಷ್ಟೆ ಅಲ್ಲ ನಾನಿಳಿಯುವ ಸ್ಟಾಪ್ ನಲ್ಲೇ ಇಳಿದೆ .
ಬಸ್ ಸ್ಟಾಪ್ ನಿಂದ ನಮ್ಮ ಮನೆಯ ವರೆಗೂ ನನ್ನ ಹಿಂದೆ ಹಿಂದೆಯೆ ಬರುತ್ತಿದ್ದಾ ಗ ಹೆದರಿಕೆ ಜಾಸ್ತಿಯೇ ಆಗಿತ್ತು.ಆದರೆ ನೀನು ನಮ್ಮ ಮನೆಯ ಮುಂದೆಯೇ ಹೋಗಿ ಇನ್ನೂ ಕೆಳಗಡೆ ಹೋದಾಗ ತಿಳಿಯಿತು ನಿಮ್ಮ ಮನೆಯೂ ಅಲ್ಲೇ ಎಂದು .ಅಂದಿನಿಂದ ಶುರು ನಿನ್ನ ಕೀಟಲೆ ನಾನು ಸ್ಕೂಲಿಗೆ ಹೊರಡುವ ಸಮಯಕ್ಕೆ ನೀನೂ ಹಾಜಾರ್ ಮನೆಯ ಮುಂದೆ . ಕಲರ್ ಡ್ರೆಸ್ ಹಾಕಿದಾಗ ನಾನ್ಯಾವ ಬಟ್ಟೆ ಹಾಕುತ್ತಿದ್ದೇನೊ ನೀನೂ ಅದೇ ಕಲರ್ ಬಟ್ಟೆ ಹಾಕುತ್ತಿದ್ದೆ. ವಾಪಸ್ ಬರುವ ಸಮಯಕ್ಕೆ ನೀನು ಬರುತ್ತಿದೆ ಹಿಂದೆಯೇ. ಕಾಲೇಜ್ ಅಟೆಂಡ್ ಮಾಡುತ್ತಿದ್ದೆಯೋ ಇಲ್ಲವೋ. ನನ್ನ ಬರ್ತ್ ಡೆ ದಿನ ದೂರದಿಂದಲೆ ನನ್ನ ಉಡುಗೆಯ ಬಗ್ಗೆ ಬೊಂಬಾಟ್ ಎಂಬ ಸನ್ನೆ ಮಾಡಿದ್ದೆ.ಗೆಳತಿಯರ ರೇಗಿಸುವಿಕೆಯಿಂದ ನಾನು ನಿನ್ನನ್ನು ಇಷ್ಟ ಪಡುತ್ತಿದ್ದ್ದೇನೆಂದು ಅಂದುಕೊಂಡೆ. ನಾವೆಲ್ಲಾ ನಿನಗೆ ಲಾಲ್ ಅಂತ ಹೆಸರಿಟ್ಟಿದ್ದೆವು (ಲಾಲ್ ಅಂದರೆ ಕೆಂಪು ಅಂತ. ನೀನು ಕೆಂಪು ಬಟ್ಟೆ ಹಾಕಿದ್ದೆ ಅಂದು ಮೊದಲ ದಿನ).ಹೀಗೆ ಗೊತ್ತಿಲ್ಲದೆ ನೀನು ನನ್ನ ನಾನು ನಿನ್ನ ಕಾಯಲು ಶುರು ಮಾಡಲಾರಂಭಿಸಿದೆವು . ಒಮ್ಮೆಯೂ ನಿನ್ನೊಡನೆ ಮಾತಾಡಿರಲಿಲ್ಲ ನಾನು. ನೀನು ಮಾತಾಡಲು ಬಂದಾಗಲೆಲ್ಲಾ ಓಡಿ ಹೋಗುತ್ತಿದ್ದೆ ನಾನು. ಮನೆಯ ಪರಿಸ್ಥಿತಿ ನನ್ನನ್ನು ದುಡುಕದಂತೆ ತಡೆದಿತ್ತು.
ಕೆಲವು ದಿನಗಳ ನಂತರ ಅಂದು ದಿನಸಿ ಅಂಗಡಿಯಲ್ಲಿ ಏನೂ ತೆಗೆದುಕೊಳಲು ಬಂದೆ ನಾನು . ಅಲ್ಲೆ ನೀನು ಕಾಣಿಸಿದೆ . ಹೆದರಿಕೆಯಿಂದ ಹೃದಯ ಹೊಡೆದುಕೊಂಡಿತು. ನಿನ್ನ ಜೊತೆಯಲ್ಲಿ ನಿಮ್ಮ ತಂದೆ ನಿಂತಿದ್ದರು. ಅವರಿಗೆ ಏನೂ ಹೇಳಿ ಓಡಿ ಬಂದವನೇ ." ನಮ್ಮ ಅಪ್ಪಂಗೆ ಬಾಂಬೆಗೆ ಟ್ರಾನ್ಸ್ಫೆರ್ ಆಗಿದೆ . ಇದು ಅಲ್ಲಿನ ಆಡ್ಡ್ರೆಸ್ . ನಾನು ಮಾತಾಡೋಕೆ ಬಂದಾಗಲೆಲ್ಲ ತುಂಬ ಹೆದರ್ಕೋತಿದ್ದ್ರಿ ನೀವು . ನಂಗೆ ನೀವಂದ್ರೆ ತುಂಬ ಇಷ್ಟ . ಐ ಲೌ ಯು " ಅಂತ ಹೇಳಿ ಯಾವುದೋ ಮಾಯ್ದಲ್ಲಿ ಕೈಗೆ ಆ ಚೀಟಿ ತುರುಕಿ ಓಡಿ ಹೋಗಿದ್ದೆ .ನಾನೋ ಹೆದರಿಕೆಇಂದ ಆ ಚೀಟಿಯನ್ನು ಅಲ್ಲೇ ಬೀಳಿಸಿ ಮನೆಗೆ ಓಡಿದ್ದೆ.ಅದಾದ ಮೇಲೆನೀನು ಕಾಣಲಿಲ್ಲನಾವೂ ಅಲ್ಲಿಂದ ಬೇರೆ ಊರಿಗೆ ಹೋದೆವು .ಅದಾದ ಮೇಲೆ ನನಗೆ ನಿನ್ನ ನೆನಪು ಬರಲೇ ಇಲ್ಲ. ಬಂದರೂ ಸಹಾ ಅದು ಕೇವಲ ಆಕರ್ಷಣೆ ಮಾತ್ರ ಅಂದುಕೊಂಡು ನನ್ನ ಗುರಿ ಸಾಧಿಸುವತ್ತ ಹೆಜ್ಜೆ ಹಾಕಿದೆ .ಈಗ ಮದುವೆಯೂ ಆಗಿದೆ ಮಗುವೂ ಇದೆ.
ಆದರೆ ನೆನ್ನೆ ನೀನು ಕಾಣಿಸಿದೆ . ಇವರಿಗೆ ನಿನ್ನ ವಿಷ್ಯ ಗೊತ್ತಿದೆ . ನಾನು ನಿನ್ನನ್ನು ತೋರಿಸಿದೆ.
ಅಷ್ಟರಲ್ಲಿ ನಿನ್ನ ಪಕ್ಕದಲ್ಲಿ ಮತ್ತೊಬ್ಬರು ಕಾಣಿಸಿಕೊಂಡಳು ಅವಳು ನಿನ್ನ ಹೆಂಡತಿ ಇರಬಹುದೆನಿಸಿತು.
ಅವಳ ಕಂಕುಳಲ್ಲೂ ಮಗು. ನಿನ್ನ ಮುಖದಲ್ಲಿ ನನ್ನನ್ನು ಕಂಡು ಗಲಿಬಿಲಿ. ಕೂಡಲೆ ಅಲ್ಲಿಂಡ ಓಟ ಕಿತ್ತೆ
ಜೀವನ ಎಷ್ಟು ವಿಚಿತ್ರ ಅಲ್ಲವೇ?
ಇತೀ ನಿನ್ನಒಂದು ಕಾಲದ ಸಹ ಪ್ರಯಾಣಿಕಳು
(ಇದು ವಿಕದ ಸಿಂಪ್ಲಿಸಿಟಿ ಪೇಜಿನ ಈ ಗುಲಾಬಿಯು ನಿನಗಾಗಿ ಯಿಂದ ಪ್ರೇರಿತ, ಇದು ಯಾರ ಕತೆ ಎಂದುದಕ್ಕೆ ಉತ್ತರ " ಎಲ್ಲರ ಕತೆ" )

RajanikaMt

ಹೋದವಾರ ಸೇಲಮ್ ನಿಂದ ಬೆಂಗಳೂರಿಗೆ ಬರುತ್ತಿದ್ದೆವುಕಾವೇರಿ ಪಟ್ಟಣಮ್ ನ ಬಳಿಯಲ್ಲಿ ಟೀ ಕುಡಿಯಲು ಕಾರ್ ನಿಲ್ಲಿಸಿದ್ದೆವು.ಟೀ ಕುಡಿದು ಹೊರಗೆ ಬರುತ್ತಿದ್ದ್ದಂತೆನಮ್ಮ ಕೆ.ಎಸ್.ಅರ್.ಟಿ.ಸಿ ಶಿವಮೊಗ್ಗ ಹರಿಹರ ಕ್ಕೆ ಹೋಗುವ ಬಸ್ ಬಂದಿತು
ಆ ಪ್ರದೇಶದವನೇ ಇರಬೇಕು ಒಬ್ಬಏನೋ ಮೂಟೆಯನ್ನು ಹೊತ್ತು ತಂದಿದ್ದಬಸ್ ಕಂಡಕ್ಟರ್ ಕರ್ನಾಟಕದವನು ಆ ಮೂಟೆಯನ್ನು ಬಸ್ ಮೇಲಿಡಬೇಕೆಂದು ಹೇಳುತ್ತಿದ್ದಈತ ಅದನ್ನು ಬಸ್ ನಲ್ಲಿಡಬೇಕೆಂದು ಹಠ ಮಾಡುತ್ತಿದ್ದ
ಕಂಡಕ್ಟರ್ ಒಪ್ಪದಾಗಏನೋ ತಮಿಳಿನಲ್ಲಿ ಬೈಯ್ತಿದ್ದ(ಇವರು ಹೇಳಿದ್ದು ನೀವು ಕನ್ನಡಾದವರು ಎಲ್ಲಾವುದಕ್ಕೂ ಗಲಾಟೆ ಮಾಡ್ತೀರ. ಮೊನ್ನೆ ನೀರು ಕೊಡಲ್ಲ ಅಂದಿರಿ, ನೆನ್ನೆ ಜಾಗ ಕೊಡಲ್ಲ ಅಂದ್ರಿ . ಈಗ ಬಸ್ ನಲ್ಲಿ ಜಾಗ ಬಿಡಲ್ಲ ಅಂತೀರಾ? ಅಂತ )ಅಷ್ಟೆ ಅಲ್ಲದೆ ವಾಂಗೊ, ವಾಡ , ಅಂತ ಎಲ್ಲಾ ಸುತ್ತಮುತ್ತಲ್ಲಿದ್ದ ತಮಿಳಿನ ಜನರನ್ನ ಕರೆದು ಬಸ್ನ ಹ್ಯಾಗೊ ಮುಂದೆ ತಗೋತೀಯ್ ನೋಡೋಣ ಎಂದು ಸವಾಲ್ ಹಾಕಿದ. ಕನಡಕಾರ್ಂಗಳ್ ಆಂತ ಬೈತಾನೆ ಇದ್ದ. ಸುತ್ತ ಮುತ್ತಲಿನ ಎಲ್ಲಾ ಜನ ಅವನ ಬೆಂಬಲಕ್ಕೆ ನಿಂತರು.ಪಾಪ ಕಂಡಕ್ಟರ ಹಾಗು ಡ್ರೈವರ್ ಅವರನ್ನು ರಮಿಸುವ ಪ್ರಯತ್ನ ಮಾಡುತ್ತಿದ್ದರು.ನಾವು ಅವರ ಪರವಾಗಿ ಮಾತಾಡೋಣ ಅಂದುಕೊಳ್ಳುತ್ತಿದ್ದಂತೆ"ಅಂಗೆ ಪಾರ ಡಾ . ಕರ್ನಾಟಕ ವಂಡಿ" ಅಂತ ಒಂದಷ್ಟು ಜನ ನಮ್ಮ ಕಾರಿನ ಬಳಿ ಬಂದರು (ನಮ್ಮದು ಕರ್ನಾಟಕ ರಿಜಿಸ್ತ್ರೇಶನ್)ಕೂಡಲೆ ಗಾಡಿ ಸ್ಟಾರ್ಟ್ ಮಾಡಿಕೊಂಡು ಅಲ್ಲಿಂದ ಜಾಗ ಖಾಲಿ ಮಾಡಿದೆವು.ಆಮೇಲಾನಾಯ್ತೊ ಅಂತ ತಿಳಿಯಲಿಲ್ಲ
ವಿವಾದದ ಸಮಯದಲ್ಲಿ ಕೊಂಚ ವಿರೋಧ ತೋರಿಸುವ ನಮ್ಮ ಚಳುವಳಿಕಾರರಿಗೆ ಒದೆಯಿರಿ ಎನ್ನುವ ರಜನಿಕಾಂತ್ ತಮ್ಮ ಬೇಳೆ ಬೇಸಿಕೊಳ್ಳಲು ಗಡಿ ನೆಪ ಮಾಡುವ ಇಂತಹ ಅವರ ತಮಿಳುನಾಡಿನ ಗಲಭೆಕೋರರಿಗೆ ಏನು ಮಾಡಬೇಕೆನ್ನುತ್ತಾರೆ?

Sunday, April 20, 2008

" ಹೌದಾ ಅಹಲ್ಯಾ . ನಾನೆಷ್ಟು ಲಕ್ಕಿ ಗೊತ್ತಾ. actually this honour was expected a long back. ಹೋಗಲಿ ಬಿಡು ಈಗಾದರೂ ಪ್ರಶಸ್ತಿ ಬಂತಲ್ಲಾ" ಪ್ರಜೇಶ್ ಮಾತನಾಡುತ್ತಲೇ ಇದ್ದ ಫೋನ್ ನಲ್ಲಿಗೌರಿ ಅಚ್ಚರಿ ಇಂದ ಅವನನ್ನು ನೋಡಿದಳು ಬೇರೆಯವರೊಡನೆ ಹೀಗೆ ನಗು ನಗತ್ತಾ ಮಾತನಾಡುವ ಇವನಿಗೆ ಹೆಂಡತಿಯ ಜೊತೆ ಮಾತನಾಡುವಾಗ ಏನಾಗುತ್ತೋ . ಸದಾ ಸಿಡುಕು ಮುಖ ತನ್ನೊಡನೇ ಮಾತ್ರ. ಆದರೂ ಕೇಳಿದಳು " ಏನ್ರಿ ನಿಮಗೆ ಪ್ರಶಸ್ತಿ ಬಂತಾ. ? ಯಾವುದಕ್ಕೆ"
" ಏಯ್ ನೀನ್ಯಾಕೆ ಇಲ್ಲಿಗೆ ಬಂದೆ . ಚಂಪಾ ಇಸ್ಕೊ ಕ್ಯೋ ಬೇಜಾ ಇದರ್? ರೂಮ್ ಸೆ ಬಾಹರ ನಹಿ ಆನಾ ಚಾಹಿಯೆ ಯೆ" ಪ್ರಜೇಶ್ ಚಂಪಾಳನ್ನು ಕರೆದು ಬೈದ. ಚಂಪಾ ಅವರ ಮನೆಯ ಆಳು.
" ರೀ ಯಾಕ್ರಿ ನಂಗೆ ಹೀಗೆ ಗೃಹ ಬಂಧನ . ನಾನೇನು ತಪ್ಪು ಮಾಡಿತೀನಿ ಅಂತ ಈ ತರಹ ಶಿಕ್ಷೆ?" ಗೌರಿ ಗೋಗರೆದಳು" ಏಯ್ ಗೌರಿ ನಾನು ಫೇಮಸ್ ಇಂಗ್ಲೀಶ್ ಆಥರ್. ಹೊ!ಚೆ! ನಿಂಗೆಲ್ಲಿ ಅರ್ಥ ಆಗುತ್ತೆ . ನಾನು ಪ್ರಸಿದ್ದ ಇಂಗ್ಲೀಶ್ ಲೇಖಕ . ನೀನೊ ಹಳ್ಳಿ ಗುಗ್ಗು ಇಂಗ್ಲಿಷನಲ್ಲಿ ಎಷ್ಟು ಅಕ್ಷರಗಳಿವೆ ಅಂತಾನೂ ಗೊತ್ತಿರದವಳು .ನಿನ್ನಂತ ಗುಗ್ಗು ನನ್ನ ಹೆಂಡತಿ ಅಂದ್ರೆ ನನ್ನ ಪ್ರೆಸ್ಟೀಜ್ ಏನಾಗಬೇಕು? ಅಂದ್ರೆ ನನ್ನ ಅಂತಸ್ತು ಏನಾಗಬೇಕು? ನಂಗೆ ಬೆಸ್ಟ್ ಆಥರ್ ಅಂತ ಅವಾರ್ಡ್ ಬಂದಿದೆ ಅದಕ್ಕೆ ನೂರಾರು ಫೋನ್ ಬರುತ್ತೆ ಸಾವಿರಾರು ಜನ ನನ್ನ ಅಭಿನಂದಿಸಕ್ಕೆ ಬರ್ತಾರೆ ನಿನ್ನ ನೋಡಿದರೆ ಅಷ್ಟೆ . ಅದಕ್ಕೆ ನೀನು ನಿನ್ನ ರೂಮ್ ಬಿಟ್ಟು ಹೊರಗೆ ಬರಬಾರದು. ಚಂಪಾ ನಿಂಗೆ ಎಲ್ಲಾ ವ್ಯವಸ್ತೆ ಮಾಡಿಕೊಡ್ತಾಳೆ ಊಟ ತಿಂಡಿ ಎಲ್ಲಾ ಮೇಲೆನೆ ಕೆಳಗಡೆ ಬಂದ್ರೆ ಸರಿ ಇರೋದಿಲ್ಲ."ಚಂಪಾಳತ್ತ ತಿರುಗಿ "ಲೇ ಜಾವ್ ಇಸ್ಕೊ" ಎಂದಚಂಪಾ ಅವಳನ್ನು ಅಕ್ಷರಶ ಎಳೆದುಕೊಂಡೇ ರೂಮಿಗೆ ಕರೆದು ಕೊಂಡು ಬಂದಳು"ದೇಖೊ ತುಮ್ ಇದರ್ ಸೆ ಹಿಲ್ನಾ ಮತ್. ಅಗರ್ ತುಮ್ ಬಾಹರ ಆಯೆ ತೋ ಮೈ ಚುಪ್ ನಿ ರಹ್ನೆವಾಲಿ ಹೂ" " ನೋಡಮ್ಮ ನಂಘೆ ನೀನೇನು ಮಾತಾಡ್ತಿದ್ದೀಯ ಅಂತ ಗೊತ್ತಾಗಲ್ಲ . ಕನ್ನಡದಲ್ಲಿ ಮಾತಾಡು . ನಂಗೆ ಅದೊಂದು ಬಿಟ್ಟಾರೆ ಬೇರೇನು ತಿಳಿಯಲ್ಲ" ಗೌರಿಯ ಬೇಡಿಕೆಗೆ ಅಸಡ್ಡೆಯ ನೋಟ ಬೀರಿ ಹೊರಟು ಹೋದಳು ಚಂಪಾ. ಹೊರಗಡೆಯಿಂದ ಚಿಲಕ ಹಾಕಿದ್ದು ಕೇಳಿಸಿತು."ತಾನು ಗುಗ್ಗು?"ಪ್ರಶ್ನಿಸಿಕೊಂಡಳು ಗೌರಿ. ನೆನಪು ಹಿಂದೆ ಓಡಿತು
ನೋಡಿ ರಾಯರೇ ಗೌರಿ ಎಲ್ಲಾ ವಿಷ್ಯದಲ್ಲೂ ಚುರುಕು ಆದರೆ ಇಂಗ್ಲೀಶ್ ಮತ್ತೆ ಹಿಂದಿನಲ್ಲಿ ಮಾತ್ರ ಸ್ವಲ್ಪ ......... "ಸುಮ್ಮನಿರ್ರಿ ಮೇಷ್ಟ್ರೆ ಅವಳು ಸ್ವಲ್ಪ ಅಲ್ಲ ಪೂರ್ತಿ ಸೊನ್ನೆ. ಎಷ್ಟು ಸಲ ಅಂತ ಏಳನೆ ತರಗತಿ ಪರೀಕ್ಶೆಗೆ ಕೂರೋದು . ಇವಳ ಜೊತೆಗಾತಿಯರೆಲ್ಲಾ ಆಗಲೆ ಹತ್ತನೇ ತರಗತಿ ಮುಗಿಸಿ ಕಾಲೇಜ್ ಮೆಟ್ಟ್ಲ್ಯ್ ಹತ್ತಿದ್ದಾರೆ. ಅಬ್ಬಾ ನಮಮ್ ಕುಟುಂಬದಲ್ಲಿ ಯಾವಾಗಲೂ ದಡ್ಡ ಶಿಖಾಮಣಿ ಹುಟ್ಟಿರಲಿಲ್ಲ. ಮೊದಲು ಇವಳಿಗೊಂದು ಮದುವೆ ಮಾಡಿ ಕೈ ತೊಳೆದು ಕೊಂಡರೆ ಸಾಕು ಅಂತ ಅನ್ನಿಸುತ್ತಿದೆ"ರಾಯರೆ ನೀವು ತಪ್ಪು ತಿಳಿದುಕೊಂಡಿದ್ದೀರಾ ಗೌರಿ ದಡ್ಡ ಶಿಖಾಮಣಿ ಅಲ್ಲ ಹಾಗಿದ್ದರೆ ಗಣಿತದಲ್ಲಿ ಅವಳು ನೂರಕ್ಕೆ ನೂರು ಅಂಕ ಪಡೀತಾ ಇರಲಿಲ್ಲ.ಎಲ್ಲಾರಿಗೂ ಕಷ್ಟದ ವಿಜ್ನಾನದ ಸೂತ್ರಗಳನ್ನು ಅರಳು ಹುರಿದ ಹಾಗೆ ಹೇಳುತ್ತಾಳೆ. ಈ ವಯಸ್ಸಿನಲ್ಲೇ ಒಳ್ಳೊಳ್ಳೇ ಕತೆ ಕವನ ಬರೀತಾಳೆಏನಿದ್ರೇನು ಪ್ರಯೋಜನ . ನನ್ನ ತಂಗಿ ಮಗನಿಗೆ ಇವಳನ್ನು ಕೊಡೋಣ ಅಂತ ಆಸೆ ಇತ್ತು . ಅವನೋ ಇಂಗ್ಳಿಷ ನಲ್ಲಿ ಅದೇನೊ ಪಿ . ಎಚ್ ಡಿ ಮಾಡಿದಾನೆ. ಇವಳನ್ನು ಮದುವೆ ಆಗೋದಂತೂ ದೂರದ ಮಾತು." ನಿಟ್ಟುಸಿರಿಟ್ಟರು " ಇನ್ನು ಮೇಲೆ ಶಾಲೆಗೂ ಕಳಿಸೋದು ಬೇಡ ಅಂತ ಅನ್ಕೊಂಡಿದೀನಿ..........""ರಾಯರೆ . ಹೋಗಲಿ ಅವಳನ್ನು ಸ್ಕೂಲಿಗೆ ಕಳಿಸೋದಿಲ್ಲ ಅಂದ್ರೆ ಪರವಾಗಿಲ್ಲ . ಅವಳ ಸಾಹಿತ್ಯಾಭಿಲಾಷೆಗೆ ನೀರಾನ್ನಾದರೂ ಎರೆಯೋಣ. ಅವಳಿಗೆ ಒಳ್ಳೆ ಸೃಷ್ತಿ ಕಲೆ ಇದೆ. ಅದನ್ನ ಅವಳಲ್ಲಿ ಇನೂ ಬೆಳೆಸೋಣ ಅಂತ ಅನ್ಕೊಂಡಿದ್ದೀನಿ. "


"ಆಯ್ತು ಮೇಷ್ಟೆ ನಿಮ್ಮಿಷ್ಟ ನಿಮ್ಮ ಶಿಷ್ಯೆ . ನೀವೆ ತಿದ್ದಿ ತೀಡಿ ಅವಳಿಗೊಂದು ರೂಪು ಕೊಡಿ" ಮಾತು ಮುಗಿದಿತ್ತು . ಗೌರಿ ಶಾಲೆಗೆ ತಿಲಾಂಜಲಿ ಇಟ್ಟು ಮೇಷ್ಟ್ರಲ್ಲಿ ಕನ್ನಡವನ್ನು ಇನ್ನೂ ಹೆಚ್ಚಾಗಿ ಅಧ್ಯಯನ ಮಾಡತೊಡಗಿದಳು. ಚಿನ್ನಕ್ಕೆ ಪುಟವಿಟ್ಟಂತೆ ಅವಳ ಕನ್ನಡ ಜ್ನಾನ ಇನ್ನೂ ಬೆಳೆಯತೊಡಗಿತು.


ಅದೇ ವೇಳೆಗೆ ಪ್ರಜೇಶ್ ಗೌರಿಯ ಸೋದರತ್ತೆಯ ಮಗ ಊರಿಗೆ ಬಂದಿದ್ದ . ಮದುವೆಯ ಪ್ರಸ್ತಾಪನೆಗೆ ಮೊದಲು ಒಪ್ಪಲಿಲ್ಲ ನಂತರ ಅದೇನಾಯ್ತೋ ಒಪ್ಪಿಕೊಂಡ.


ಮದುವೆ ಆಯಿತು. ಮೊದಲ ರಾತ್ರಿಯೆ ಗೌರಿ ಕೇಳಿದಳು ." ರೀ ನಂಗೆ ಇಂಗ್ಲೀಶ್ ಹೇಳಿಕೊಡಿ"


" ಗೌರಿ ಕೆಲವರಿಗೆ ಏನೂ ಮಾಡಿದರೂ ಕೆಲವೊಂದು ವಿಷ್ಯಗಳು ತಲೆಗೆ ಹೋಗುವುದಿಲ್ಲ . ಅಷ್ಟಕ್ಕೂ ನಿಂಗ್ಯಾಕೆ ಇಂಗ್ಲೀಷ್ . ನಾನೆ ಇದ್ದೀನಲ್ಲ. ಇಂಗ್ಲೀಶ್ ಪ್ರೊಫೆಸ್ಸರ್. ನೀನೇನೊ ಕತೆ ಕಾದಂಬರಿ ಬರೀತಿಯಲ್ಲ . ಬರೀ ಯಾರಿಗೆ ಗೊತ್ತು ಈಗ ನಗೋ ಹಾಗಿದ್ರೂ ಮುಂದೆ ಚೆನಾಗಿ ಬರೆದ್ರೂ ಬರೀಬಹುದು"


ಹೀಗೆ ಸಾಗಿದ ಅವರ ಸಂಸಾರ ಮುಂದೆ ಡೆಲ್ಲಿಗೆ ಬಂದಿತು .


ಕಾಣದ ಊರು. ಕೇಳದ ಭಾಷೆ . ಕಂಗಾಲಾದಳು ಗೌರಿ. ಕನ್ನಡ ಬಿಟ್ಟರೆ ಬೇರೆ ಭಾಷೆ ಬಾರದ ಆಕೆಗೆ ಬರಹವೊಂದೇ ಜೀವ ವಾಯಿತು. ಪ್ರಜೆಶ್ಗೆ ತೋರಿಸುವುದು ಅವನು ಚೆನ್ನಾಗಿಲ್ಲ ಎನ್ನುವುದು ನಿರಂತರವಾಗರತೊಡಗಿದವು. ಏನೆ ಆದರೂ ಬರೆಯುವದನ್ನು ನಿಲ್ಲಿಸದಿರುವಂತೆ ಹೇಳಿದ


ನಂತರದ ದಿನಗಳಲ್ಲಿ ಪ್ರಜೇಶ್ ಬೆಳೆಯತೊಡಗಿದ ಪ್ರಖ್ಯಾತ ಬರಹಗಾರನಾಗಿ ಹೆಸರು ಪಡೆದ. ಅವನನ್ನು ಸಂದರ್ಶಿಸಲು ನೂರಾರು ಜನ ಬರತೊಡಗಿದರು.


ಹಾಗಾಗಿ ಗೌರಿಯನ್ನು ಮೇಲೆ ಇರಲು ಆಜ್ನೆ ಮಾಡಿದ್ದ . ಅವಳು ಹಾಗೆ ಮಾಡದಾಗ ಚಂಪಾ ಎಂಬ ಹೆಂಗಸಿನ ಕಣ್ಗಾವಲಿನಲ್ಲಿ ಇರಿಸಿದ. ಅವನು ಇವಳೊಡನೆ ಪ್ರೀತಿಯಿಂದ ಇರುತ್ತಿದ್ದುದ್ದು ಎರೆಡೇ ಸಂಧರ್ಭದಲ್ಲಿ . ಒಂದು ಅವಳೊಡನೆ ಸರಸದಿಂದ ಇರುವಾಗ . ಹಾಗು ಅವಳ ಬರಹ ಕತೆ ಓದುವಾಗ. ಅವರ ಸಂಭಂಧ ಬಿರುಕು ಬಿಡತೊಡಗಿದ್ದವು. ಸರಸಕ್ಕೂ ಸಮಯ ಸಿಗುತ್ತಿರಲಿಲ್ಲ ಅವನಿಗೆ. ಕೆಲವೊಮ್ಮೆ ರಾತ್ರಿ ಮನೆಗೆ ಬರುತ್ತಿರಲಿಲ್ಲ


ಬಾಗಿಲು ತೆಗೆದ ಸದ್ದಾದಾಗ ನೆನಪಿನ ರೈಲಿನಿಂದ ಕೆಳಗಿಳಿದಳು.


ಹೊರಗಡೆ ಗದ್ದಲ ಬಹಳ ಜನ ಬಂದಿರುವಂತಿತ್ತು. ಚಂಪಾ ಊಟ ತಂದಿದ್ದಳು. ಅವಳು ಮತ್ತೇನೋ ತರುವುದುಕ್ಕೆ ಹೋದಾಗ ರೂಮಿನ ಹೊರಗಡೆ ಬಂದು ನಿಂತಳು ಅಬ್ಬ ದೊಡ್ಡ ಪಾರ್ಟಿ ಅಂತನ್ನಿಸುತ್ತಿತ್ತು.


ಎಲ್ಲರೂ ಪ್ರಜೇಶನ ಸುತ್ತಾ ಸೇರಿ ಏನೂ ಕೇಳುತ್ತಿದ್ದರು . ಸಂದರ್ಶನ ವೇನೊ ಎಂದು ಕೊಳ್ಳುತ್ತಿದ್ದಂತೆ. ಯಾರೊ ಒಬ್ಬ ಅವಳತ್ತ ಕೈ ತೋರಿ ಏನೂ ಕೇಳುತ್ತಿದ್ದ . ಪ್ರಜೇಶ್ ಅವರಿಗೆಲ್ಲ ತನ್ನ ಬಗ್ಗೆ ಏನೊ ಹೇಳುತ್ತಿದ್ದಂತೆ ಅನ್ನಿಸಿತು. ಎಲ್ಲರೂ ಅವಳತ್ತ ತಿರುಗಿ ನೋಡಿ ಏನೊ ಹೇಳಿದರು . ಆ ಜನ್ರ ನಡುವಲ್ಲಿ ಒಬ್ಬ ಮಾತ್ರ ತನ್ನನ್ನೆ ನೋಡುತ್ತಿದ್ದಂತೆ ಅಲ್ಲಿ ನಿಲ್ಲಲಾಗದೆ ಮತ್ತೆ ರೂಮಿಗೆ ಬಂದು ಕುಳಿತಳು.


ತಾನು ಈ ಸಮುದ್ರದಲ್ಲಿ ಬದುಕಲು ಆಗುತ್ತದೆಯೇ? ಹೇಳಿಕೊಳ್ಳುವುದಕ್ಕೆ , ಮನದ ದುಗುಡ ತೋಡಿಕೊಳ್ಳುವುದಕ್ಕೆ ತನ್ನದೇ ಆದ ಒಂದು ಜೀವವೂ ಇಲ್ಲ. ದೂರದ ಅಪ್ಪ ಹಾಗು ಅಮ್ಮನನ್ನು ನೆನೆಸಿಕೊಂಡು ಅಳತೊಡಗಿದಳು. ಪ್ರಜೇಶ್ ಕೆಲಸಕ್ಕೆ ಹೋದರೆ ಜೊತೆಗೆ ಎಂದೂ ಯಾರೂ ಇಲ್ಲ . ಆ ಚಂಪಾ ಮಾಡಿ ಹಾಕುವ ಆಡಿಗೆ ಅವಳಿಗೆ ಕೊಂಚವೂ ಹಿಡಿಸುತ್ತಿರಲಿಲ್ಲ. ಆಡಿಗೆ ಮಾಡಿಟ್ಟು ಬೀಗ ಹಾಕಿಕೊಂಡು ಮನೆಗೆ ಹೋದರೆ ಚಂಪಾ ಬರುತ್ತಿದ್ದುದ್ದೇ ರಾತ್ರಿಗೆ . ಅಲ್ಲಿಯವರೆಗೆ ಮತ್ತೆ ಒಂಟಿ. ಹೊರಗಡೆಯ ಬೆಳಕನ್ನು ಕಂಡೇ ಬಹಳ ದಿನಗಳಾಗಿದ್ದವು.


ಕೆಳಗಿನ ಗದ್ದಲ ನಿಂತು ಹೋಗಿತ್ತು . ಅದೇನೊ ಚಂಪ ರೂಮ್ ಬೀಗ ಹಾಕಿರಲಿಲ್ಲ . ಹೊರಗಡೆ ಬಂದು ನೋಡಿದರೆ ಯಾರೂ ಕಾಣಲಿಲ್ಲ. ಹೋ ಎಲ್ಲಾ ಮುಗಿದಿರಬೇಕನ್ನಿಸಿತು.


ಕೆಳಗೆ ಬಂದು ಪ್ರಜೇಶನ ರೂಮಿಗೆ ಬಂದಳು . ಕಾಪಾಟಿನಲ್ಲಿ ಮನೆಯ ಇನ್ನೊಂದು ಕೀ ಇದ್ದಿದು ಅವಳಿಗೆ ತಿಳಿದಿತ್ತು. ಕೀ ತೆಗೆದುಕೊಂಡು ಮನೆಯ ಬಾಗಿಲು ತೆಗೆದಳು .


ಅವಳ ಸಂತಸಕ್ಕೆ ಪಾರವೇ ಇರಲಿಲ್ಲ. ಮುಂದಿನ ಹೂದೋಟದಲ್ಲಿ ಬಣ್ಣದ ಬಣ್ಣಾದ ಹೂಗಳು. ಅಗಾಧ ಬೆಳಕಿನ ರಾಶಿ. ಹುಲ್ಲಿ ಹಾಸು. ತೋಟದಲ್ಲಿ ಒಮ್ಮೆ ಸುತ್ತಾಡಿ ಬಂದಳು. ಅವಳೇ ಇಂದು ರಾಣಿಯಾಗಿದ್ದಳು. ಪುಟ್ಟ ಹುಡುಗಿಯಂತೆ ಕುಣಿದಳು. ಕುಣಿಯುತ್ತಿದ್ದಾಗಲೆ ಅವಳ ಮನದಲ್ಲಿ ಒಂದು ಕವನ ಮೂಡಿತು


ಸೀದ ಹೋಗಿ ಪುಸ್ತಕ ಹಾಗು ಪೆನ್ ತಂದು ತನ್ನ ಮನದ ಭಾವನೆಗಳನ್ನು ಕಾಗದದಲ್ಲಿ ಮೂಡಿಸತೊಡಗಿದಳು.


ಪಂಜರದ ಗಿಣಿ ಹಾರಬಯಸಿ


ಹಾಕಿದೆ ಏಣಿ ಸ್ವತಂತ್ರವರಸಿ


ಪ್ರೀತಿ ಮನದ ನೆಲೆಯ ಹುಡುಕಿ


ಮೂಲ ಮರೆತು ವಲಸೆ ಹೊರಟು


ಪಂಜರದಿ ಬಂಧಿಯಾಯಿತು

ಕತೆಯಾಗಿ

ಭಾವನೆಗಳ ಭರಪೂರದಲ್ಲಿ ಕಳೆದು ಹೋಗಿದ್ದವಳಿಗೆ ಗೇಟ್ ತೆಗೆದು ಯಾರೋ ತನ್ನೆದುರಲ್ಲಿ ನಿಂತಿದ್ದು ತಿಳಿಯಲ್ಲಿಲ್ಲ

ತನ್ನ ಮೇಲೆ ಬಿದ್ದ ನೆರಳನ್ನು ನೋಡಿ ತಲೆ ಎತ್ತಿದಳು ಆಗಲೆ ಕೆಳಗಡೆ ತನ್ನತ್ತಲೇ ನೋಡುತ್ತಿದ್ದವನು ಎಂದು ತಿಳಿಯಿತು. ಗಾಬರಿಯಿಂದ ಪುಸ್ತಕ ಹಾಗು ಪೆನ್ ಕೆಳಗಡೆ ಬೀಳಿಸಿ ಒಳಗಡೆ ಓಡುತ್ತಿದ್ದ್ದಂತೆ

" ನಿಮ್ಮ ಪುಸ್ತಕ ಕೆಳಗೆ ಬಿದ್ದಿದೆ "

ದ್ವನಿ ಬಂದತ್ತ ತಿರುಗಿದಳು. ಕನ್ನಡ ತನ್ನ ಕನ್ನಡವನ್ನು ಉಲಿಯಬಲ್ಲ ಮತ್ತೊಂದು ದನಿ ಇಂದು ಅವಳಿಗೆ ಸಿಕ್ಕಿತು.

ಅವಳಿಗರಿವಿಲ್ಲದೆ ಕಾಲುಗಳು ಆ ದನಿಯತ್ತ ಓಡಿದವು.

" ನೀವು .............ಕರ್ನಾಟಕದವರಾ?" ಸಂತಸಭರಿತ ದನಿಯಲ್ಲಿ ಕೇಳಿದಳು

" ಹೌದು ನಾನು ಅನಂತ್ ಅಂತ ಅರುಣದಯ ಪತ್ರಿಕೆಯ ವರದಿಗಾರ. ಯಾಕೆ ಇಷ್ಟೊಂದು ಆಶ್ಚರ್ಯವಾಗಿ ಕೇಳ್ತಿದೀರಾ?"

" ಇಲ್ಲಿ ಕನ್ನಡದವರು ಸಿಗೋದೇ ಇಲ್ಲ ಅದಕ್ಕೆ"

" ಅರೆ ನೀವಿರೋದೇ ಕನ್ನಡಿಗರ ಕಾಲೋನಿಯಲ್ಲಿ . ನಿಮಗೆ ಹೇಗೆ ಗೊತ್ತಿಲ್ಲ, ಹೋಗ್ಲಿ ಬಿಡಿ ಈ ಕವಿತೆ ಬರೆದಿರೋದು ನೀವೇನಾ. ತುಂಬಾ ಚೆನ್ನಾಗಿದೆ" ಮೆಚ್ಚುಗೆಯಿಂದ ನುಡಿದ

ಗೌರಿಯ ಕಣ್ಣಾಲಿ ತುಂಬಿ ಬಂದವು ಇಂತಹ ಮೆಚ್ಚುಗೆಯ ನುಡಿ ಕೇಳಿ ಬಹಳ ವರ್ಷಗಳಾಗಿದ್ದವು.

" ಹೌದು ಇದನ್ನು ನಾನೆ ಬರೆದಿರೋದು. ನಾನು ತುಂಬಾ ಕವನ ಕತೆ ಬರೀತೀನಿ ಆದರೆ ಯಾವದೂ ಸರಿ ಇಲ್ಲ ಅಂತ ನಮ್ಮ ಯಜಮಾನರು ಹೇಳಿ ಎಲ್ಲಾ ಮೇಲಕ್ಕೆ ಹಾಕ್ಬಿಡ್ತಾರೆ."

"ನಿಮ್ಮೆಜಮಾನರಾ? ಯಾರು?" ಅಚ್ಚರಿಯಿಂದ ಪ್ರಶ್ನಿಸಿದ

" ಪ್ರಜೇಶ ರವರು "

"ಪ್ರಜೇಶಾ?"

" ಹೌದು ಯಾಕೆ"

" ಸರಿ ಏನಿಲ್ಲ ಬಿಡಿ. ಏನೇನ್ ಕತೆ ಬರ್ದಿದೀರ ತೋರಿಸಿ"

ಗೌರಿ ಚಿಕ್ಕ ಹುಡುಗಿಯಂತೆ ತನ್ನ ಕತೆಗಳ ಕಡತವನ್ನೆಲ್ಲಾ ತಂದು ತೋರಿಸಿದಳು

ಅವಳ ಉತ್ಸಾಹವನ್ನು ಕಂಡು ಮೂಕನಾದ.

ಇಂತಹ ಹೆಣ್ಣಿಗೆ ಹುಚ್ಚಿ ಹಾಗೂ ಅನಾಥ ಪಟ್ಟ ಕಟ್ಟಿದ ಪ್ರಜೇಶ್ ಮೇಲೆ ಕೋಪವೂ ಬಂದಿತು

ಅಯ್ದ ಕೆಲವನ್ನು ಓದುತ್ತಿದ್ದಂತೆ ಅನಂತಗೆ ಇದೆಲ್ಲವನ್ನೂ ಎಲ್ಲೋ ಓದಿದಂತೆ ಭಾಸವಾಗತೊಡಗಿತು.

ಆದರೂ ಕತೆ ನಿರೂಪಣೆ ಬಹಳ ಸುಂದರವಾಗಿದ್ದವು

"ಇದು ನೋಡಿ ನಾನು ಇತ್ತೀಚಿಗೆ ಬರೆದಿದ್ದು . ಅದಕ್ಕೆ ತುತ್ತ ತುದಿಯಲ್ಲಿ ಅಂತ ಹೆಸರನ್ನು ಕೊಟ್ಟೆ ಆದರೆ ಇವರು ಒಂಚೂರು ಚೆನ್ನಾಗಿಲ್ಲ ಅಂತ ಬೈದುಬಿಟ್ಟರು." ದೂರು ನೀಡುವ ರೀತಿಯಲ್ಲಿ ನುಡಿದಳು

ತುತ್ತ ತುದಿಯಲ್ಲಿ ಈ ಹೆಸರು "on the edge" ನ ರೀತಿಯೇ ಇದೆಯಲ್ಲ ಆ ಕತೆಗೆ ತಾನೆ ಶ್ರೇಷ್ಟ ಲೇಖಕ ಬಿರುದು ಬಂದಿದ್ದು ಪ್ರಜೇಷಗೆ. ಅನಂತನ ಮನಸ್ಸಿನಲ್ಲಿ ಏನೂ ಲೆಕ್ಕಾಚಾರ ನಡೆಯುತ್ತಿತು.

ಕತೆ ಓದುತಿದ್ದಂತೆ ಅದರ ಪ್ರತಿ ಪಾತ್ರ, ನುಡಿ , ಪ್ರಸಂಗ ಎಲ್ಲವೂ ಅದೇ ಕತೆಯದಂತೆ ಇತ್ತು ಎನಿಸಲಾರಂಭಿಸಿತು.

ಪ್ರಜೇಶ್ ಹೇಳಿದಂತೆ ಈಕೆ ಹುಚ್ಚಿ ಇರಬೇಕನಿಸಿತು.

"ಅಲ್ಲ ಮೇಡಮ ನಿಮ್ಮೆಜಮಾನರ ಇಂಗ್ಲೀಷ ಕತೇನ ಕನ್ನಡ್ದಲ್ಲಿ ಬರೆದರೆ ಅದು ನಿಮ್ಮದಾಗುತ್ತಾ?"

"ಆ ಏನಂದ್ರಿ. ಇದು ನಾನೆ ಬರೆದ್ದಿದ್ದು. ಹಾಗೆ ಓದಿ ಬರೆಯೋಕೆ ನಂಗೆ ಇಂಗ್ಲೀಶ್ ಬರೋದೇ ಇಲ್ಲ"

ಕ್ಶಣಮಾತ್ರದಲ್ಲಿ ಅನಂತನಿಗೆ ಎಲ್ಲಾ ಹೊಳೆಯಿತು. ಅರಿಯದ ಹೆಣ್ಣಿನ ಮುಗ್ದತೆಯನ್ನು ಬಹು ಕೆಳಮಟ್ಟದಲ್ಲಿ ಉಪಯೋಗಿಸಿಕೊಂಡಿದ್ದ ಪ್ರಜೇಶ್.

ಒಬ್ಬ ಲೇಖಕನಿಗಿರಬೇಕಾದ ಮೌಲ್ಯಗಳನ್ನೆಲ್ಲಾ ಗಾಳಿಗೆ ತೂರಿ ಮತ್ತೊಬ್ಬರ ಬರಹವನ್ನು ಪ್ರಸಿದ್ದಿಯ ಹುಚ್ಚಿಗೆ ತನ್ನದೆಂದು ಪ್ರಕಟಿಸಿದ್ದ.

ಇದನ್ನೆಲ್ಲಾ ಗೌರಿಯ ಮುಂದೆ ವಿವರಿಸಿದ . ತನ್ನ ಕತೆಗಳು ತನ್ನ ಮುಂದೆಯೇ ಲೂಟಿ ಹೋಗುತಿದ್ದರೂ ಕುರುಡಿಯಾಗಿ ಕುಳಿತಿದ್ದಳು.

" ಈಗ ಏನು ಮಾಡ್ತೀರಾ?"

" ಏನಿಲ್ಲಾ ಇಷ್ಟು ದಿನ ಗೊತ್ತಿಲ್ಲದೆ ಬರೆದು ಕೊಡಿತಿದ್ದೆ . ಇನ್ನುಮೇಲೆ ಗೊತ್ತಾಗಿ ಬರೆದು ಕೊಡ್ತೀನಿ. ಇನ್ನೂ ಚೆನ್ನ್ನಾಗಿ .........." ಅವಳ ಕಣ್ಣಿನಿಂದ ನೀರು ಧಾರಾಕಾರವಾಗಿ ಸುರಿಯುತಿತ್ತು. ಖ್ಯಾತ ಕತೆಗಾರ್ತಿಯಾಗಬೇಕೆಂಬ ಅವಳ ಕನಸು ಕನಸಾಗೇ ಉಳಿಯುವ ಅಪಾಯವಿತ್ತು ಅವಳ ನಿರ್ಧಾರದಿಂದ.

" ಹಾಗಿದ್ದರೆ ನಿಮ್ಮ ವ್ಯಕ್ತಿತ್ವವನ್ನು ಬಲಿ ಕೊಡ್ತೀರಾ?"

"ಹೌದು. ಯಾಕೆಂದರೆ ನಾನು ಭಾರತೀಯ ಹೆಣ್ಣು. ಒಬ್ಬ ಭಾರತೀಯ ಹೆಣ್ಣಿಗೆ ವ್ಯಕ್ತಿತ್ವಕ್ಕಿಂತ ಸಂಸಾರವೆ ಹೆಚ್ಚು.

"ಆದರೆ ನೀವು ಅವರ ಸಂಸಾರವಲ್ಲವಲ್ಲ"

"ಅಂದ್ರೆ?"

ಆನಂತ ಕನ್ನಡದ ಪತ್ರಿಕೆಯ ಹೇಳಿಕೆಯೊಂದನ್ನು ಅವಳ ಮುಂದೆ ಹಿಡಿದ

ಅದು ಪ್ರಜೇಶ್ ಹಾಗು ಖ್ಯಾತ ಸಿನಿ ನಟಿ ಅಹಲ್ಯಾರವರ ಮದುವೆಯ ವರದಿ.

"ನೀವು ಲೋಕ್ದ ಜನರ ಪ್ರಕಾರ ಒಬ್ಬ ಹುಚ್ಚಿ ಹಾಗು ಅನಾಥೆ . ನಿಮ್ಮನ್ನು ಪ್ರಜೇಶ್ ಸಾಕುತ್ತಿದ್ದಾರೆ. "

ದಿಗ್ಬ್ರಾಂತಳಾದಳು.

" ಈಗೇನು ಮಾಡಲಿ"

" ಮೇಡಮ್ ನೀವು ಹೀಗೆ ಕೂರಬೇಕಿಲ್ಲ ನಿಮ್ಮಲ್ಲಿ ಪ್ರತಿಭೆ ಇದೆ. ನಿಮ್ಮ ಕತೆಗಳು ನಮ್ಮ ಕನ್ನಡಕ್ಕೆ ಬಂದ್ರೆ ಕನ್ನಡಕ್ಕೆ ಹೆಸರು. ನೀವು ನಮ್ಮ ಬೆಂಗಳೂರಿಗೆ ಬನ್ನಿ . ಕೃತಿಚೌರ್ಯದ ಆರೋಪಾನ ಪ್ರಜೇಶ್ ಮೇಲೆ ಕೇಸ ಹಾಕೋಣ ನ್ಯಾಯ ನಮಗೆ. ಯಾಕೆಂದರೆ ಅವುಗಳ ತಾಯಿ ನೀವೆ ನನ್ನ ಮೇಲೆ ಭರವಸೆ ಇಟ್ಟು ಬನ್ನಿ ಅಂತ ಹೇಳ್ತಿಲ್ಲ . ನಿಮ್ಮ ಪ್ರತಿಭೆಯ ಮೇಲೆ ನಂಬಿಕೆ ಇಟ್ಟು ಬನ್ನಿ. ಲೋಕದಲ್ಲಿ ಕನ್ನಡದ ಮೇಲೆ ಆಗುತ್ತಿರುವ ದೌರ್ಜನ್ಯಕ್ಕೆ ಇದೊಂದು ಉದಾಹರಣೆ"

ಗೌರಿಯ ಹೆಜ್ಜೆಗಳು ಅನಂತನನ್ನು ಹಿಂಬಾಲಿಸತೊಡಗಿದವು

---------------------------------*******************------------------------------























Wednesday, April 2, 2008

ಕೊಂದವರು ಯಾರು

ವರುಣ್
ಥೂ ಇಂಥ ಹಲ್ಕಾ ಅಂತ ಗೊತ್ತಿದ್ದರೆ ಇವನ ಹತ್ತಿರ ಕೆಲ್ಸಕ್ಕೆ ಸೇರ್ತಿರಲಿಲ್ಲ. ಎಷ್ಟು ಕಷ್ಟ ಪಟ್ಟಿದ್ದೆ ಇವನಿಗೋಸ್ಕರ. ಮದುವೆಗೂ ಕೇವಲ್ ಮೂರೆ ದಿನ ರಜಾ ಕೊಟ್ಟಿದ್ದ . ಆದರೂ ಅದೇನು ಒಳ್ಳೆಯ ಬುದ್ದಿ ಬಂತ್ಟೊ ಮದುವೆಗೆ ಬಂದ ಹೋದ ಮೇಲೆ ಪ್ರಮೋಷನ್ ಕೊಟ್ಟ . ಮನೆ ಕಟ್ಟಿಸುವಂತೆ ಹೇಳಿದ ಸಾಲಕ್ಕೆ ಶಿಫಾರಸ್ಸು ಮಾಡಿದ. ಹೆಂಡತಿ ದಿವ್ಯಳ ಮೈ ಮೇಲೆ ಒಡವೆಗಳನ್ನು ಮಾಡಿಸಿಕೊಡುವಂತೆ ಹೇಳಿದ . ಕಾರು ಎಲ್ಲ ಕೊಡಿಸಿದ . ಎಲ್ಲಾ ದಿವ್ಯಾಳ ಕಾಲ್ಗುಣ ಎಂದುಕೊಂಡರೆ ಅದು ಅವಳ ಅಂದದಿಂದ ಎಂದು ತಿಳಿದಿದ್ದು ಬಹಳ ತಡವಾಗಿ.
ಅವನು ಹೇಳಿದ್ದು ಎಷ್ಟು ಅಸಹ್ಯವಾಗಿತ್ತು "ವರುಣ್ ನೋಡು ಒಬ್ಬೊಬ್ಬರಿಗೂ ಒಂದೊಂದು ವೀಕ್ನೆಸ್ ಇರುತ್ತೆ ನಿಂಗೆ ಹಣದ ಅವಶ್ಯಕತೆ ಇತ್ತು ಹಾಗಾಗಿ ಸಾಲ ಮಾಡಿದೆ . ಈಗ ಮೈ ತುಂಬ ಸಾಲ . ಅದು ನಿನ್ನ ವೀಕ್ನೆಸ್. ನಂಗೆ ಹಣ ಇದೆ ಆದರೆ ಅದೇನೋ ಚೆನ್ನಾಗಿರೋ ಹುಡುಗೀರನ್ನ ನೋಡಿದರೆ ಮೈ ಅವರನ್ನು ಪಡೀಬೇಕು ಅನ್ನಿಸುತ್ತೆ . ನನ್ನ್ ವೀಕ್ ನೆಸ್ ಅದು . ಈಗ ನಿನ್ನ ಹೆಂಡತೀನ ಮದುವೇಲಿ ನೋಡಿದೆ . ಅಷ್ಟೆ ಆಗಿನಿಂದ ಅವಳನ್ನ ಹೇಗೆ ಜೊತೆ ಮಾಡ್ಕೊಬೇಕು ಅಂತ ಯೋಚಿಸಿದೆ. ಕೊನೆಗೆ ನಿನ್ನ ಸಾಲದ ಬಲೇಲಿ ಸಿಗಿಸಿದರೆ ಇದೆಲ್ಲಾ ಅಗುತ್ತೆ ಅಂತ ಪ್ಲಾನ್ ಮಾಡಿದೆ . ಈಗ ನೀನು ಒಪ್ಪಲೇಬೇಕು . ನಾಳೆ ಟುಲಿಪ್ ರೆಸಾರ್ಟನಲ್ಲಿ ರೂಮ್ ಬುಕ್ ಮಾಡು ಅವಳನ್ನ ಕರ್ಕೊಂಡು ಬಾ ಹಾಗೆ ಡ್ರಿಂಕ್ಸ್ ಅರೇಂಜ್ ಮಾಡು ಇಲ್ಲ ಅಂದರೆ ಕೆಲಸ ಇಲ್ಲ ಸಾಲದ ಬ್ಯಾಂಕ್ ನವರಿಗೂ ಇನ್ಫಾರ್ಮ್ ಮಾಡ್ತೀನಿ . ಅಷ್ಟೆ ನಿನ್ನ ಗತಿ ಏನಾಗುತ್ತೆ ನೋಡ್ತಿರು "
ನಾನು ಏನು ಮಾಡಲಿ ಈಗ ಹ್ಯಾಗೆ ಇದರಿಂದ ಪಾರಾಗಿ ಹೋಗಲಿ . ಇದಕ್ಕೋಸ್ಕರ ದಿವ್ಯಾನ ಬಲಿ ಕೊಡುವುದೇ ಅಥವಾ?
ಮತ್ತೊಮೆ ಆ ಚಂದ್ರಕಾಂತ್ ಹೇಳಿದೆ ಮಾತು ನೆನಪಾಯಿತು "ಡ್ರಿಂಕ್ಸ್ ರೆಡಿಮಾಡಿಕೊಂಡು ಬಾ" ಏನೋ ಹೊಳೆಯಿತು ಮನಸಿಗೆ ದೃಢ ನಿರ್ಧಾರ ಮಾಡಿಕೊಂಡು ಅವನಿಗೆ ಫೋನ್ ಮಾಡಿದೆ " ಸಾರ್ ನಾಳೆ ನಾನು ಬರ್ತಾ ಇದೀನಿ"
" ನೀನು ಬಂದು ಏನು ಪ್ರಯೋಜನ ?ಅವಳು ?" "ಅವಳು ಬರ್ತಾಳೆ ಸಾರ್" "ಸರಿ
ವೆರಿ ಗುಡ್" ಫೋನ್ ಕಟ್ ಮಾಡಿದ ಮೇಲೆ ಮುಂದಿನ ಕೆಲಸಕ್ಕೆ ಸಿದ್ದತೆ ಮಾಡಲಾರಂಭಿಸಿದೆ.
ಪ್ರೀತಿ
ಇವನು ನನ್ನ ಜೀವನಾನೆ ಹಾಳು ಮಾಡಿಬಿಟ್ಟ . ಮನೆಯವರೂ ಅಷ್ಟೆ ಇವನ ಆಸ್ತಿ ನೋಡಿ ೨೦ರ ನನ್ನನ್ನ ೪೫ರ ಅವನಿಗೆ ಕಟ್ಟಿಬಿಟ್ಟರು . ಆದರೆ ನಾನು ದಿನ ದಿನಕ್ಕೆ ನರಕ ಯಾತನೆ ಅನುಭವಿಸ್ತಾ ಇದೀನಿ.
ವಯಸ್ಸಾಗಿದ್ದರೆ ಏನು ಗಂಡ ಅಲ್ಲವಾ ಜೀವನ ಸಾಗಿಸೋಣ ಎಂದರೆ ಇವನೋ ಹಿಂಸಾ ಪಶು ಮತ್ತೊಬ್ಬರ ಅಳು ನೋಡಿ ನಗುವವನು . ನನ್ನನ್ನ ಎಷ್ಟು ಹಿಂಸೆ ಮಾಡುತ್ತಿದ್ದಾನೆ . ಸೆಕ್ಸ್ ಎಂದರೆ ಇವನಿಗೆ ಹೆಣ್ಣನ್ನು ಗೋಳು ಹಾಕಿಕೊಳ್ಳ್ಳುವುದು ಎಂದಾಗಿದೆ.
ಹಗಲೆಲ್ಲಾ ಅನುಮಾನಿಸಿ ಹಿಂಸೆ ಕೊಡುತ್ತಿದ್ದರೆ ರಾತ್ರಿಯೆಲ್ಲ ನರಕ ದರ್ಶನ ಮಾಡಿಸುತ್ತಿದ್ದ .
ಕಷ್ಟ ತಾಳಾಲಾರದೆ ಓಡಿ ಹೋಗ ಬೇಕೆಂದರೆ ಇವನು ಹೊರಗೆ ಹೋಗುವಾಗ ಬಾಗಿಲಿಗೆ ಬೀಗ ಹಾಕಿಕೊಂಡು ಹೋಗುತ್ತಾನೆ. ಒಬ್ಬರ ಜೊತೆ ಮಾತಾಡುವ ಹಾಗಿಲ್ಲ . ಮಾನಸಿಕ ದೈಹಿಕ ವಾಗಿ ನಾನು ಕುಸಿದುಹೋಗಿದ್ದೇನೆ.
ಇದೇನು ಈಗ ಬಂದವನು "ಏಯ್ ಪ್ರೀತಿ ನಾಳೆ ಸಂಜೆ ನಂಗೆ ಹನಿಮೂನ್ . ಒಂದು ಮುದ್ದಾಗಿರೋ ಮೂಗ್ಗಿನ ಜೊತೆ. ಇವತ್ತು ರಾತ್ರಿ ನಿಂಗೇನು ಕೆಲಸ್ ಇಲ್ಲ ಹೋಗು ಬಿದ್ದುಕೋ"
ಇವನ ಕಾಮಕ್ಕೆ ಅದೆಷ್ಟು ಮಂದಿ ಬಲಿಯಾಗಿದ್ದಾರೋ . ಮಾಲಿಯ ೧೩ ವರ್ಷದ ಮಗಳನ್ನೂ ಬಿಡದೆ ಆಕೆಯನ್ನು ಜೀವಂತ ಶವವನ್ನಾಗಿ ಮಾಡಿದ್ದಾನೆ.
ಆದರೆ ಮಾಲಿ ಇವನ ವಿರುದ್ದ ಹೋಗಲಾರದೆ ಇಲ್ಲೇ ಇದ್ದಾನೆ. ಹೇಗೆ ಇವನಿಂದ ಮುಕ್ತಿ ಸಿಗುತ್ತೋ ದೇವರೇ ಏನಾದರೂ ದಾರಿ ತೋರಿಸು.
ಹೌದು ಇವನಿಂದ ಮುಕ್ತಿ ಪಡೆಯಲು ಒಂದೇ ದಾರಿ . ನಾನು ಜೈಲಿಗೆ ಹೋದರೂ ಪರವಾಗಿಲ್ಲ . ಸತ್ತರೂ ಎಷ್ಟೊ ಜನರಿಗೆ ಒಳ್ಳೇದು ಮಾಡಿದ ಹಾಗೆ ಆಗುತ್ತೆ .
ಹೇಗೆ
ಒಳಗೆ ಅವನು ಕೆಮ್ಮಿದ ದನಿ ಕೇಳಿಸಿತು "ಲೇಯ್ ಕಾಫ್ ಸಿರಪ್ ತೊಗಂಬಾ. ಇದೊಂದು ಕೆಮ್ಮು ಇಲ್ಲ ಅಂದಿದ್ದರೆ ನಾನು ಒಳ್ಳೆ ೨೦ ವರ್ಷದವನ್ ಥರ ಇರಬಹುದಿತ್ತು. ನಾಳೆ ನಾನು ಹೋಗುವಾಗ ಅದನ್ನು ಬ್ಯಾಗ್ನಲ್ಲಿ ಹಾಕಿ ಕಳಿಸು " ಕೆಮ್ಮಿನಲ್ಲೇ ಹೇಳಿದ . ಇವನಿಗೆ ಇದೊಂದೇ ರೋಗ ಅ ದೂ ಆ ಸಿರಪ್ ತೊಗಂಡ್ರೆ............. ಕೂಡಲೆ
ಮಿಂಚು ಹೊಡೆದಂತೆ ಮನಸಿಗೆ ಏನೊ ಹೊಳೆಯಿತು. ದೇವರು ದಾರಿ ತೋರಿಸಿದ್ದ
ಸಿದ್ದ -ಮಾಲಿ
ಈವಯ್ಯ ಮಾಡಿದ ಮೋಸಕ್ಕೆ ತಕ್ಕದಾಗಿ ದೇವರು ಶಿಕ್ಷೆ ಕೊಡಲಿಲ್ಲ ಅಂದ್ರೂ ನಾನು ಬಿಡಲ್ಲ . ನಾನು ಇವನ್ ಜೊತೇನೆ ಇದ್ದುಕೊಂಡು ಇವನಿಗೆ ಎಂಗಾರ ಮಾಡಿ ಪ್ರಾಣ ತಗಂತೀನಿ
ಅಂಗ್ ಮಾಡಿದ್ರೆ ನನ್ಮ ಮಗೂಗೆ ಆದ ಬ್ಯಾನೆ ಬ್ಯಾರೆ ಯಾರಿಗೂ ಅಗಲ್ಲ . ಆ ಪ್ರೀತಿಯಮ್ಮ್ನ್ನ ಎಷ್ಟು ಗೋಳು ಹಾಕಂತಾನೆ ಈವಯ್ಯ .
ಕೆಂಪೀ ಆಡೊ ಅಸುಗೂಸನ್ನ ಮನೆಗೆ ಅವ್ವೋರ ಜೊತೆ ಇರಲಿ ಅಂತ ಕಳಿಸಿದಾರೆ ಅವಳ ಜೀವನಾನೆ ಆಳು ಮಾಡಿಬಿಟ್ಟವನೆ . ಪಾಪ ಅದು ಉಚ್ಚಿ ತರ ಆಡ್ತೈತೆ ಈವಯ್ಯನ್ನ ಹೆಂಗೆ ಕೊನೆ ಗಾಣ್ಸೋದು .
"ಲೋ ಸಿದ್ದ ಬಾರೊ ಇಲ್ಲಿ ನಾಳೆ ರಾತ್ರಿ ಒಂದು ಉತ್ಸವ ಇದೆ . ಹೂವಾ ಎಲ್ಲ ಚೆನ್ನಾಗಿ ಪ್ಯಾಕ್ ಮಾಡಿ ಕೊಡು . ಎಲೇನೂ ಇರಲಿ . ಅಲ್ಲಿ ಹೋಗಿ ಮಂಚಕ್ಕೆ ಹಾಕ್ತ್ರೀನಿ "
ಆವಯ್ಯ ಬಂದು ಹೇಳಿದ .
ಈವಯ್ಯನ್ನ ಹೆಂಗೆ ಕೊನೆ ಗಾಣ್ಸೋದು . ಅಂತ ಯೋಚಿಸ್ತಾ ಇದ್ದಾಗ ಅಲ್ಲಿ ನಾಗ್ರಾವು ಕಾಣಿಸ್ತು. ಇನ್ನೂ ಎಳೇದಂತನಿಸುತ್ತೆ . ನಂಗೇನೊ ಅನ್ನಿಸ್ತು . ತಕ್ಷಣ ಅದನ್ನ ಎತ್ತಿ ಹಿಡಿದು ಒಂದು ಬುಟ್ಟೀಲಿ ಆಕ್ಕೊಂಡೆ.
ಸೂರ್ಯಕಾಂತ :
ಅಣ್ಣ ಅಂತ ಕರ್ಯೋಕೆ ಬೇಸರ ಆಗುತ್ತೆ ಆದರೆ ಏನು ಮಾಡಲಿ . ಅಪ್ಪ ಅಮ್ಮ ಇಬ್ಬರೂ ಸತ್ತು ಹೋದಾಗ ನನ್ನ ಬೆಳೆಸಿದ್ದು ಇವನೇ . ಆದರೆ ಓದಿಸಲಿಲ್ಲ .
ಯಾಕೆ ಬೆಳೆಸಿದ ಅಂದ್ರೆ ಅಪ್ಪ ಸಾಯುವಾಗ ಇನ್ನೂ ಚಿಕ್ಕವನಾಗಿದ್ದ ತನ್ನ ಹೆಸರಿಗೆ ಆಸ್ತಿಯನ್ನೆಲ್ಲಾ ಬರೆದು ಸತ್ತಿದ್ದರು .
ಅವರಿಗೂ ಸಾಯುವಾಗ ಗೊತ್ತಿತ್ತೇನೋ ಇವನ್ ಬುದ್ದಿ.
ತನಗೇನು ಗೊತ್ತಿತ್ತು ಇವನ್ ಬುದ್ದಿ ೧೮ ವರ್ಷವಾದಾಗ ಆಸ್ತಿಯನ್ನೆಲ್ಲ ಇವನ್ ಹೆಸರಿಗೆ ಬರೆಸಿಕೊಂಡ ಮೇಲೆ .
ನನ್ನನ್ನು ಸಾಯಿಸಲು ಬಹಳ ಸಲ ನೋಡಿದ ಆದರೆ ದೇವರ್ ದಯೆ ಇಂದ ನಾನು ಬದುಕ್ಕೊಂಡೆ. ನನಗೆ ಗಾಡಿ ಓಡಿಸೋದು ಬಿಟ್ಟರೆ ಏನು ಬರುತ್ತೆ ಬದುಕು ಅಂತ ನೋಡ್ಕೊಳ್ಳೊಕೆ .
ನನಗೂ ಒಂದು ಆಸೆ ಗುರಿ ಎಲ್ಲಾ ಇದ್ದರು ಅಣ್ಣ ಅನಿಸಿಕೊಂಡ ಇವನನ್ನ ಏನು ಮಾಡಲೂ ಆಗದೇ ಒದ್ದಾಡ್ಥಾ ಇದೀನಿ.
"ಲೋ ಸೂರ್ಯ ಗಾಡಿ ಎಲ್ಲ ಕ್ಲೀನ್ ಮಾಡಿಡು . ನಾಳೆ ನಿನ್ನ ಇನ್ನೊಂದು ಒಂದು ದಿನದ ಅತ್ತಿಗೆ ಜೊತೆ ಫಸ್ಟ್ ನೈಟ್ ಇದೆ " ಮೈ ಎಲ್ಲ ಉರಿಯುತ್ತೆ .
ಇಷ್ಟು ವಯಸ್ಸಾದರೂ ಅಷ್ಟು ಚೆಂದದ ಹೆಂಡತಿ ಇದ್ದರೂ ದಿನಕ್ಕೆ ಒಬ್ಬ ಹೊಸ ಹೆಣ್ಣು ಬೇಕು
ಅದೇ ೨೫ ವರ್ಷದ ತಾನು ನೀತುವನ್ನು ಪ್ರೀತಿಸಿದ್ದಕ್ಕೆ ಅವಳನ್ನೆ ಕೇಳುತ್ತಿದ್ದಾನೆ . "ಇವನ್ನ ಹ್ಯಾಗೆ ಮುಗಿಸೋದು. ಯಾರಿಗೂ ಅನುಮಾನ ಬರದ ರೀತಿ ಇವನ್ನ ಸಾಯ್ಸಿ ನೀತು ಜೊತೆ ಹಾಯಾಗಿ ಇರ್ಬೋದು . ಅತ್ತಿಗೆಗೂ ಇನ್ನೊಂದು ಮದುವೆ ಮಾಡ್ಕೊಳ್ಳೋದಿಕ್ಕೆ ಹೇಳ್ತೀನಿ ಪಾಪ ಚಿಕ್ಕ ವಯಸ್ಸಿನ ಅತ್ತಿಗೆ .
ಆದರೆ ಹ್ಯಾಗೆ?
ಗಾಡಿ ಸರಿ ಮಾಡುತ್ತಿದ್ದಂತೆ ಬ್ರೇಕ್ ಮೇಲಿಟ್ಟ ಕೈ ಏನೋ ಹೇಳಿತು. ಮನಸ್ಸು ಅದಕ್ಕೆ ಆಯಿತು ಎಂದಿತು
ಮಾರನೆ ದಿನ
ಚಂದ್ರಕಾಂತ
ಅಬ್ಬಾ ನನ್ನ ಸಾಯ್ಸೋಕೆ ಏನೆಲ್ಲಾ ಪ್ಲಾನ್ ಮಾಡಿದ್ರು ಹೆಂಡತಿ ತಮ್ಮ ಮಾಲಿ , ವರುಣ್ . ಹ್: ಅಷ್ಟೊಂದು ಸುಲಭಾನ ನನ್ನ ಸಾಯ್ಸೋದು
ಯಾವಗ್ಲೂ ನನ್ನ ನೋಡಿದ್ರೆ ಒಳಗೆ ಇರ್ತಿದ್ದ ಪ್ರೀತಿ ಇವತ್ತು ಬಂದು ರೀ ಕಾಫ್ ಸಿರಪ್ ತಗೊಳ್ಳಿ ಅಂದಾಗಲೇ ಅನುಮಾನ ಬಂತು.
ಆ ಸಿದ್ದ ಅಷ್ಟೊಂದು ಹೂವ ಎಲೆ ಎಲ್ಲ ಚೆನ್ನಾಗಿ ಅಲಂಕಾರ ಮಾಡಿ ಕಟ್ತ್ ಕೊಟ್ಟಾಗ ಏನೋ ಇದೆ ಅಂತ ಅನ್ನಿಸಿತು.
ನನ್ನ ತಮ್ಮ "ಅಣ್ಣ ಇವತ್ತು ನಾನು ಬರೋದಿಕ್ಕೆ ಆಗಲ್ಲ ಹುಷಾರಿಲ್ಲ ಅಂದಾಗ ಬೇಕಂತಲೇ ಅವನು ತೋರಿಸಿದ ಕಾರಲ್ಲಿ ಆ ಮ್ಯಾನೇಜರ್‌ನ ಕಳಿಸಿ ನಾನು ಇನ್ನೊಂದು ಕಾರು ಹತ್ಕೊಂಡು ಬಂದೆ ದಾರೀಲಿ ಆ ಮ್ಯಾನೇಜರ್ ಕಾರ್ ಬ್ರೇಕ ತಪ್ಪಿ ಗುಂಡಿಗೆ ಬಿತ್ತು . ಅವನು ಸತ್ತ .
ನಾನು ಬದುಕಿದೆ ಈ ರೆಸಾರ್ಟ್‌ಗೆ ಬಂದ ತಕ್ಷಣ ಆ ಕಾಫ್ ಸಿರಪನ್ ಅಲ್ಲೇ ಇದ್ದ ನಾಯಿಗೆ ಹಾಕಿದೆ ಅದು ವಿಲ ವಿಲ ಅಂತ ಒದ್ದಾಡಿ ಸತ್ತು ಹೋಯಿತು . ಅದು ವಿಷ ಅಂತ ಗೊತ್ತಾಯಿತು.
ಆ ರೂಮ್ ಬಾಯ್ ಗೆ ಹೂವನ್ನು ಬಿಚ್ಚಲು ಹೇಳಿದೆ ಅದರಲ್ಲಿ ಹಾವು . ಅವನನ್ನ ಅದೇನೋ ಕಚ್ಹಲಿಲ್ಲ . ಅವನ ಆಯಸ್ಸು ಗಟ್ಟಿ ಇತ್ತು
ಆದರೆ ಆ ವರುಣ್ ಕಳಿಸಿದ್ದ ವಿಸ್ಕಿಯನ್ನು ಟೇಸ್ಟ್ ಮಾಡಲು ಹೇಳಿದಾಗ ಕುಡಿದವ ರಕ್ತ ಕಾರಿಕೊಂಡ.
ಅದನ್ನೆಲ್ಲಾ ಕ್ಲೀನ್ ಮಾಡಲು ಹೇಳಿ ಹೊರಗಡೆ ಬಂದೆ
ನನ್ನ ಸಾಯ್ಸೋಕೆ ಆ ಬ್ರಹ್ಮನೇ ಬಂದರೂ ಆಗಲ್ಲ .
ಒಳ್ಳೇ ಬೆಳಕಿನ ಸ್ಠಳ.
ಮೊಬೈಲ್ ತೆಗೆದು ವರುಣ್ಗೆ ಫೋನ್ ಮಾಡಿದೆ "ನಿನ್ನಾಟ ನಡೆಯಲ್ಲ ನಾನು ಚಿರಾಯು . ಮೊದಲು ನಿನ್ನ ಹೆಂಡತೀನ ಕರ್ಕೊಂಡು ಬಾ ಇಲ್ಲ ಅಂದರೆ ನಾನೇ ಬರ್ತೀನಿ" ಆಫ್ ಮಾಡಿದೆ
ಇನ್ಸ್ಪೆಕ್ಟರ್ ಶಿವು
ಫೋನ್ ರಿಂಗಿಸಿದಾಗ ರಾತ್ರಿ ಡ್ಯುಟಿ . ಅತ್ತಕಡೆಯಿಂದ ಸುದ್ದಿ ಬಂತು " ಚಂದ್ರಕಾಂತ್ ಕೊಲೆ ಯಾಗಿದ್ದಾರೆ " ಕೂಡಲೆ ಟುಲಿಪ್ ರೆಸಾರ್ಟ್ಗೆ ಬನ್ನಿ" ನಂಗೆ ಶಾಕ್ . ಆದರೂ ಕೊಲೆ ಮಾಡಿದ ಆ ಮಹಾನುಭಾವನಿಗೆ ಮನದಲ್ಲೇ ವಂದನೆ ಹೇಳಿದೆ . ಆ ಚಂದ್ರಕಾಂತ ಮೇಲೆ ಎಷ್ಟೊ ದೂರುಗಳು ಬಂದ್ರೂ ಸೂಕ್ತ ಸಾಕ್ಷಿಗಳಿಲ್ಲದೇ ಅವನನ್ನು ಹಿಡಿಯಲು ಆಗಿರಲಿಲ್ಲ.
ಟುಲಿಪ್ ರೆಸಾರ್ಟ್ ನಲ್ಲಿ ಹೋದ ಮೇಲೆ ಗೊತ್ತಾದ ವಿಷಯವೆಂದರೆ ಇವನ್ನನ್ನು ಕೊಲ್ಲಲ್ಲು ಇನ್ನೂ ನಾಲ್ಕು ಮಂದಿ ಪ್ಲಾನ್ ಮಾಡಿದ್ದರು . ಅವರೆಂದರೆ ಚಂದ್ರಕಾಂತನ ಮಡದಿ ಪ್ರೀತಿ ,ತಮ್ಮ ಸೂರ್ಯಕಾಂತ , ಮಾಲಿ ಸಿದ್ದ , ಪಿ.ಎ ವರುಣ್
ಆದರೆ ಪಾಪಿ ಚಿರಾಯು ಅನ್ನುವಂತೆ ಅವನು ಉಳಿದಿದ್ದ ಆದರೆ ಯಾರೋ ಅವನ ತಲೆಗೆ ಬಲವಾದ ಪೆಟ್ಟು ಕೊಟ್ಟು ಒಂದೆ ಏಟಿಗೆ ಕೊಂದಿದ್ದರು . ಅವರು ಉಪಯೋಗಿಸಿದ್ದ ಆ ಮರದ ಹಲಗೆ ಕೂಡ ಹಾಗೆ ಅಲ್ಲಿಯೇ ಇತ್ತು. ಆದರೆ ಬೆರಳಿನ ಗುರುತು ಯಾವದೂ ಇರಲಿಲ್ಲ
ರೆಸಾರ್ಟ್ನವರ ಪ್ರಕಾರ ಅಲ್ಲಿಗೆ ಅಲ್ಲಿನ ಕೆಲಸದವರನ್ನು ಬಿಟ್ಟರೆ ಬೇರೆ ಯಾರೂ ಬಂದಿರಲಿಲ್ಲ . ಅಲ್ಲಿರುವ ಯಾರಿಗೂ ಅವನ ಮೇಲೆ ದ್ವೇಷವಿರಲಿಲ್ಲ
ಹಾಗಾದರೆ ----------
ಮುಂದುವರಿಯುವುದು
ಚಂದ್ರಕಾಂತನ ಕೊಲೆ ಮಾಡಿದವರು ಯಾರು ಎಂಬುದನ್ನು ಊಹಿಸಬಲ್ಲೀರಾ?

Monday, March 24, 2008

ಇದನ್ನು ನಾನು 8ನೇ ತರಗತಿಯಲ್ಲಿ ಇದ್ದಾಗ ಬರೆದದ್ದು. ಹಾಗೆ ಯಥಾವತ್ತಾಗಿ ಟೈಪಿಸಿದ್ದೇನೆ. ಬಾಲಿಶ ಮನಸು. ಏನು ತೋಚಿತ್ತೋ ಅದನ್ನೆ ಬರೆದಿದ್ದೆ. ಯಾವುದೇ ವ್ಯಾಕರಣವಾಗಲಿ ಅಥವ ರೂಢಿಯನ್ನಾಗಲಿ ಬಳಸಿಕೊಂಡಿರಲಿಲ್ಲ
ಇದನ್ನು ಸಿದ್ದಲಿಂಗ ಪಟ್ಟಣಾ ಶೆಟ್ಟಿಯವರಿಗೆ ಒಮ್ಮೆ ತೋರಿಸಿದ್ದೆ.
ಒಬ್ಬಳನ್ನ ನಿಭಾಯಿಸೋದೇ ಕಷ್ಟ . ಇನ್ನೂ ನೂರು ಜನ್ರನ್ನು ಗಂಡು ಹೇಗೆ ನಿಭಾಯಿಸುತ್ತಾನೆ ಎಂದು ನಕ್ಕಿದ್ದರು.
ಆದರೆ ಆಗಿನ ಪರಿಸ್ಥಿತಿಗೂ ಈಗಿನ ಪರಿಸ್ಥಿತಿಗೂ ನಾವು (ಹೆಂಗಳೆಯರು) ಬಹು ಮುಂದುವರೆದಿದ್ದೇವೆ . ಆದರೂ ಒರೆ ಕೊರೆಗಳು ಇದ್ದೆ ಇವೆ

ಹೆಣ್ಣು
ಹೆಣ್ಣಲ್ಲ ಅಬಲೆ
ಆಕೆ ಈಗ ಸಬಲೆ
ನೋಡಲ್ಲ ಗುಡುಗು ಮಿಂಚು ಮಳೆ
ದುಡಿಯುವಳು ಒಂದೆ ಸಮನೆ
ಆದರೂ ಹಲವರದು ಈ ಪ್ರಶ್ನೆ
ಹೆಣ್ಣು ಗಂಡಿಗೆ ಸಮಳೆ?

ಹೆಣ್ಣಾದರೆ ವಿಧವೆ
ಮತ್ತಿಲ್ಲ ಆಕೆಗೆ ಮದುವೆ
ಗಂಡಾದರೆ ವಿಧುರ
ಆಗುವನು ನೂರೆಂಟು ಮದುವೆಗೆ ವರ

ಹೆಂಗಸಿಗೆಲ್ಲಿದೆ ಸ್ವತಂತ್ರ
ಜೀವನವಿಡೀ ಅತಂತ್ರ

ಬಾಲ್ಯದಲ್ಲಿ ತಂದೆಯಾಸರೆ
ಯವ್ವನದಲ್ಲಿ ಗಂಡನಾದರೆ
ಮುಪ್ಪಿನಲ್ಲಿ ಮಗನಾಸರೆ
ಎಂದು ಎಲ್ಲರೂ ಹಳಿಯುವವರೇ
ಪ್ರಕೃತಿಗಿಲ್ಲ ಗಂಡು ಹೆಣ್ಣೆಂಬ ಬೇಧ
ಹಾಗಂತ ಹೇಳಿಲ್ಲ ವೇದ
ಆದರೂ ಹೆಣ್ಣೆಂದರೆ ಹಲವರಿಗೆ ವಿನೋದ

ಬಾಲ್ಯದಲ್ಲಿ ಸಲಹುವ ತಾಯಿ ಹೆಣ್ಣು
ಯವನದಲ್ಲಿ ಪ್ರೀತಿಸುವ ಹೆಂಡತಿ ಹೆಣ್ಣು
ಮುಪ್ಪಿನಲ್ಲಿ ಸಾಕುವ ಮಗಳೂ ಹೆಣ್ಣು
ಎಂಬ ಅರಿವನ್ನು
ಇನ್ನಾದರೂ ಮೂಡಿಸಿಕೊಳ್ಳುವಿರೇನು?

Thursday, March 20, 2008

ಆ ಹುಡುಗ 21ರ ಆಸುಪಾಸಿನವನಿರಬೇಕು . ಪ್ರತಿಷ್ಟಿತ ಕಾಲೇಜಿನಲ್ಲಿ ಉತ್ತಮ ವಿದ್ಯಾರ್ಥಿ ಎನಿಸಿಕೊಂಡಿದ್ದ. ಓದಿನಲ್ಲಿ ನಡತೆಯಲ್ಲಿ ನಂಬರ್ 1 . ಯಾವ ಹುಡುಗಿಯರ ಹಿಂದೆ ಬಿದ್ದ ಉದಾಹರಣೆ ಇರಲಿಲ್ಲ

ಹೀಗಿದ್ದ ಹುಡುಗ ಒಮ್ಮೆ ಚಾಟ್ ಮಾಡುವಾಗ ಕಾಣಿಸಿತು ಆ ಹೆಸರು "ಐಶ್ವರ್ಯ" ಹೆಸರಿನ ಮಹಾತ್ಮೆ ಯಿಂದಲೋ ಅಥವ ಕುತೂಹಲದಿಂದಲೋ ಆ ಹೆಸರಿನ ಜೊತೆ ಚಾಟ್ ಮಾಡಿದ. ಆ ಕಡೆಯವಳು ಮಂಗಳೂರಿನವಳು ಎಂದು ತಿಳಿಯಿತು. ಅವಳ ಹೆಸರೇ ಐಶ್ವರ್ಯ ಎಂದೂ ಅರಿವಾಯಿತು ಚಾಟ್ ಮಾಡುತ್ತಾ ಮಾಡುತ್ತಾ ಅವರಿಬ್ಬರ ಆಸಕ್ತಿ, ಗುರಿ , ಓದು ಎಲ್ಲಾ ಒಂದೇ ಅಗಿದ್ದು ಕೂಡ ತಿಳಿಯಿತು. ಮತ್ತೆ ಇನ್ನೇನು ಬೇಕು ಸ್ನೇಹಕ್ಕೆ . ನೆಟ್‌ನಲ್ಲಿ ಸ್ನೇಹ ಬೆಳೆಯಿತು. ನಂತರ ಕೆಲದಿನಗಳಲ್ಲಿ ಸ್ನೇಹ ಪ್ರೀತಿಯಾಗಿ ಬದಲಾಗುವಾಗ ಆತನ ಸ್ನೇಹಿತರು ಎಚ್ಚರಿಸಿದರು" ಆ ಕಡೆ ಇರುವವರು ಹುಡುಗಿ ಎಂದು ಹೇಗೆ ಹೇಳುವೆ? ಮೊದಲು ಫೋನ್ ನಂಬರ್ ಕೇಳು" ಎಂದರು. ಈತ ಕೇಳಿದ ಆಕೆ ತಾನು ಚಾಟ್ ಮಾಡುವ ಸೆಂಟರ್‌ನ ನಂಬರ್ ಕೊಟ್ಟಳು . ಈ ಹುಡುಗ ಅಲ್ಲಿಗೆ ಫೋನ್ ಮಾಡಿದ . ಅಲ್ಲಿ ಫೋನ್ ಎತ್ತಿದ್ದು ಆಕೆಯೆ . ಆಕೆಯ ಮಧುರ ವಾಣಿ ಕೇಳುತ್ತಲೇ ಈ ಹುಡುಗ ಕುಣಿದಾಡಿದ . ಫೋನ್‌ನಲ್ಲಿ ಕೆಲ ವಿಚಾರಗಳನ್ನು ಹಂಚಿಕೊಂಡರು. ಕೆಲದಿನಗಳಾದ ಮೇಲೆ ಅವಳ ಫೋಟೊ ಕೇಳಿದ ಆಕೆ ಕಳಿಸಿದಳು . ಫೋಟೊ ನೋಡಿ ದಂಗಾದ. ಅಷ್ಟು ಸುಂದರಿಯಾಗಿದ್ದಳು. ಸಾಕ್ಷಾತ್ ಐಶ್ ಸಹ ಅವಳ ಮುಂದೆ ಏನೂ ಇಲ್ಲ ಅನಿಸಿತು. ಅಂತಹ ಸುಂದರಿ ತನಗೆ ಸಿಕ್ಕಿದ್ದು ತನ್ನ ಲಕ್ ಎಂದೆ ಭಾವಿಸಿದ.
ನಂತರ ಪ್ರೇಮವನ್ನು ನಿವೇದಿಸಿದ . ಅವಳಿಂದ ಒಪ್ಪಿಗೆ ಸಿಕ್ಕಿದ ಮೇಲೆ ಶುರುವಾಯಿತು ಇವರ ಮೈಲ್ ಲವ್.
ಅವನಿಗೆ ಓದು ಬೇಕಿರಲಿಲ್ಲ .ಅವಳ ಮೇಲ್ ಒಂದು ದಿನ ಬರಲಿಲ್ಲವೆಂದರೂ ಚಡಪಡಿಸುತಿದ್ದ.
ಹೀಗಿದ್ದಾಗ ಬಂತು ವ್ಯಾಲೆಂಟಿನೆ ಡೇ . ಏನು ಉಡುಗೊರೆ ಕೊಡುವೆ ಎಂದು ಕೇಳಿದಳು. ಕಾದು ನೋಡು ಎಂದು ಮೇಲ್ ಕಳಿಸಿದ . ಕೆಲ ದಿನಗಳಲ್ಲಿ ಅವನ ಎದೆಯ ಮೇಲೆ ತೋಳಿನ ಮೇಲೆ ಐಶ್ವರ್ಯ ಎಂಬ ಹೆಸರು ಹಚ್ಚೆ ಹಾಕಿಸಿಕೊಂಡಿದ್ದ . ನಿನಗಾಗಿ ಏನು ಮಾಡಲೂ ಸಿದ್ದ ಎಂದು ರಕ್ತದಲ್ಲಿ ಬರೆದ ಹಾಳೆ ಹಾಗು ತನ್ನ ಎದೆ ತೋಳಿನ ಮೇಲೆ ಬರೆದು ಕೊಂಡಿದ್ದ ಹಚ್ಚೆಯನ್ನು ಫೋಟೊ ತೆಗೆದು ಸ್ಕಾನ್ ಮಾಡಿ ಕಳಿಸಿದ
ಅಷ್ಟೇ ನಂತರದ ದಿನಗಳಲ್ಲಿ ಅವಳಿಂದ ಒಂದು ಮೈಲ್ ಅಥವ ಒಂದು ಫೋನ್ ಸಹ ಬರಲಿಲ್ಲ . ಕೆಲ ದಿನಗಳು ಕಾದು ಆ ಸೆಂಟರ್‌ಗೆ ಫೋನ್ ಮಾಡಿದ . ಅಲ್ಲಿ ಆ ಹೆಸರಿನವರು ಯಾರು ಇಲ್ಲವೆಂದರು. ನಂತರ ಅವಳು ಹೇಳಿದ್ದ ಕಾಲೇಜಿಗೆ ಫೋನ್ ಮಾಡಿ ವಿಚಾರಿಸಿದರೆ ಅಲ್ಲೂ ಅದೇ ಉತ್ತರ.
ಈ ಹುಡುಗ ಗೊಂದಲದಿಂದ ಹಣ್ಣಾಗಿದ್ದ . ಯಾರೋ ತನ್ನ ಐಶ್ ಅನ್ನು ಎಗರಿಸಿದ್ದಾರೆ. ಅವಳು ಆಪತ್ತಿನಲ್ಲಿದ್ದಾಳೆ ಎಂದುಕೊಂಡು ಅವಳನ್ನು ನೋಡಲು ಅವಳಿರುವ ಮಂಗಳೂರಿಗೆ ಹೋಗಬೇಕೆನ್ನುವಾಗ ಅವನ ಮೇಲ್‌ಗೆ ಬಂತೊಂದು ಪತ್ರ
ಅನಾಮಿಕ ಎಂದಿದ್ದ್ ಆ ಪತ್ರ ಹೀಗಿತ್ತು
ಹಾಯ್
ನಿಮಗೆ ವಿಷಯ ತಿಳಿಸುವ ಮೊದಲು ನಿಮ್ಮ ಕ್ಷಮೆಯನ್ನು ಕೇಳುವೆ.
ನಾನು ಮಂಗಳೂರಿನ ಒಬ್ಬ ಹುಡುಗ. ಹುಡುಗಿಯರ ಹಿಂದೆ ಬೀಳುವ ಹುಡುಗರನ್ನು ಗೋಳು ಹೊಯ್ದುಕೊಳ್ಳುವುದೇ ನನ್ನ ಕೆಲಸ. ನಾನು ಮಿಮಿಕ್ರಿಯಲ್ಲಿ ಪರಿಣಿತ.ನೀವು ಐಶ್ ಎಂದು ಭಾವಿಸಿ ಮಾತನಾಡಿದ್ದು ಚಾಟ್ ಮಾಡಿದ್ದು ನನ್ನೊಡನೆಯೇ. ನಾನು ಕಳಿಸಿದ ಫೋಟೊ ನಮ್ಮ ಅಜ್ಜಿಯ ಚಿಕ್ಕ ವಯಸ್ಸಿನದು . ಅವರು ಈಗ ಭೂಮಿಯ ಮೇಲೆ ಇಲ್ಲ ಹಾಗಾಗಿ ಅವರ ಫೋಟೊವನ್ನು ಬಣ್ಣ ಹಚ್ಚಿ ಅದಕ್ಕೆ ಮಾಡ್ ಉಡುಪು ಆಂಟಿಸಿ ಕಳಿಸಿದೆ. ನಾನು ಈ ರೀತಿ ಎಲ್ಲರಿಗೂ ಮಾಡುತ್ತಿದ್ದೆ. ಆದರೆ ನಿಮ್ಮ ಪ್ರೇಮದ ತೀವ್ರತೆ ಅದಕ್ಕೆ ನೀವು ಕೊಡುತಿದ್ದ ಗೌರವ ನನ್ನನ್ನು ಮೂಕನನ್ನಾಗಿ ಮಾಡಿದೆ. ಇನ್ನೂ ನಿಮ್ಮನ್ನ ಆ ಪ್ರೇಮದ ಹುಚ್ಚಿನಲ್ಲಿ ಇಡುವುದು ಸರಿಯಲ್ಲ ಅನಿಸಿತು . ಆ ಐಶ್ವರ್ಯ ಎನ್ನುವುದು ಒಂದು ಕಲ್ಪನೆ . ಅದನ್ನು ಮರೆತು ಬಿಡಿ
ಯಾರೋ ಗೊತ್ತಿಲ್ಲದವಳಿಗಾಗಿ ನಿಮ್ಮ ರಕ್ತ , ದೇಹವನ್ನು ಹಾನಿ ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ
ಮತ್ತೊಮ್ಮೆ
ನಿಮ್ಮ ಭಾವನೆಗಳೊಂದಿಗೆ ಚೆಲ್ಲಾಟ ವಾಡಿದ್ದಾಕ್ಕಾಗಿ ಕ್ಷಮಿಸಿ
ಅನಾಮಿಕ
ಮೇಲ್ ನೋಡಿ ಏನು ಮಾಡಬೇಕೊ ಎಂದು ತಿಳಿಯಲಿಲ್ಲ . ಅವಳು ಕಲ್ಪನೆ ಎಂದು ಮನಸ್ಸು ಒಪ್ಪಲು ಸಾಧ್ಯವಿರಲಿಲ್ಲ . ರೂಮಿಗೆ ಹೋಗಿ ಬಿಕ್ಕಳಿಸಿ ಅಳಲಾರಂಭಿಸಿದ.
8 ವರ್ಷಗಳ ನಂತರ
ಆ ಹುಡುಗ ಈಗ ಗೃಹಸ್ತನಾಗಿ ಬದಲಾಗಿದ್ದ. ಹೆಂಡತಿಯ ಬಲವಂತ ತಾಳಲಾರದೆ ಅವಳನ್ನು ಮಲ್ಪೆ ಬೀಚ್‌ಗೆ ಕರೆದು ತಂದಿದ್ದ . ಹೆಂಡತಿ ಮಗನೊಡನೆ ಆಟವಾಡುತ್ತಿದ್ದಾಗ ,
ಆ ಜೋಡಿ ಕಣ್ಣಿಗೆ ಬಿತ್ತು ಆಕೆಯ ಮುಖ ಬಹಳ ಪರಿಚಿತ ಅನ್ನಿಸಿತು. ಮಿಂಚು ಹೊಡೆದಂತಾಯಿತು. ಹೌದು ಅವಳೇ ತನ್ನ ಐಶ್ವರ್ಯ . ಫೋಟೋದಲ್ಲಿ ನೋಡಿದ್ದ ಮುಖ ಅವಳದೇ... ಹಾಗಿದ್ದರೇ ಅವಳು ಕಲ್ಪನೆಯಲ್ಲವಾ?
ಆಕೆ ಇವನನ್ನು ಒಮ್ಮೆ ನೋಡಿ ತನ್ನ ಸಂಗಾತಿಯ ಕೈ ಹಿಡಿದುಕೊಂಡು ದೂರ ಕರೆದುಕೊಂಡು ಹೋದಳು.
ಹೋಗುವಾಗ ಇವನನ್ನು ಮತ್ತೊಮ್ಮೆ ನೋಡಿದಳು . ಕಣ್ಣಲ್ಲಿ ನೀರಿತ್ತಾ ? ಅವನಿಗೆ ತಿಳಿಯಲಿಲ್ಲ . ಆದರೆ ಅವಳೆ ಐಶ್ ಎಂದು ಖಾತರಿಯಾಯಿತು. ಹಾಗೆ ನೋಡುತ್ತಲೇ ಇದ್ದ . ಅವಳು ಮರೆಯಾಗುವ ವರೆಗೆ.......

[ಓದುಗರಿಗೆ. ಇಲ್ಲಿ ಐಶ್ ಯಾಕೆ ಹಾಗೆ ಮಾಡಿದಳು ಅಥವ ಅವಳು ಅವಳೇನಾ ಅಥವ ಅಲ್ಲವ ಎಂಬುದನ್ನು ನೀವೆ ಊಹಿಸಿ . ಹಾಗು ನಮ್ಮೊಡನೆ ಹಂಚಿಕೊಳ್ಳಿ]

Wednesday, March 19, 2008

ಆತ

ಆಟೊನಲ್ಲಿ ಬಸ್ ಸ್ಟಾಂಡ್‌ಗೆ ಬಂದಿಳಿದ ಕವಿತಾ ಮಣಭಾರದ ಲಗೇಜ್‌ ಹೊತ್ತುಕೊಂಡು ನಡೆಯುತಿದ್ದಳು. " ಬೆಂಗಳೂರಿಗೆ ಯಾವಾಗ ಹೋಗುತ್ತೇನೋ ಎಂಬಂತೆ ಆಗಿತ್ತು.ಈ ಹಾಳಾದ ಎಕ್ಸಾಮ್ ಇದ್ದಾಗಲೇ ಅಕ್ಕನ ಮದುವೆ ಆದಾಗ ಬಹಳ ಬೇಸರವಾಗಿತ್ತು.ಮದುವೆಗೂ ಹೋಗಲಾಗಿರಲಿಲ್ಲ . ಅಕ್ಕನದು ಲೌ ಮ್ಯಾರೇಜ್ .ಕಳ್ಳಿ ನನಗೆ ಒಂದಿಷ್ಟೂ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ. ಮನದಲ್ಲೇ ಬೈದುಕೊಂಡಳು.ಅಲ್ಲಿದ್ದ ಸಾವಿರಾರು ಕಂಗಳು ಇವಳನ್ನೇ ದಿಟ್ಟಿಸುತ್ತಿದ್ದವು . ಒಬ್ಬನಂತೂ ಇನ್ನೇನು ನುಂಗಿಯೇ ಬಿಡುವೆನು ಎಂಬಂತೆ ಬಾಯಿ ತೆಗೆದಿದ್ದ. ಅದೆಲ್ಲಾ ಸಾಮಾನ್ಯ ವಾಗಿದ್ದರಿಂದ ಗಮನ ಕೊಡದೇ ಬಸ್‌ಗೆಂದು ಇತ್ತ ತಿರುಗಿದವಳಿಗೆ ಶಾಕ್‌ ಆದಂತೆ ಒಬ್ಬ ನಕ್ಕ . ಅಥವ ನಕ್ಕನೇನೊ. ಎಂಥ ಆಕರ್ಷಕ ವ್ಯಕ್ತಿತ್ವ . ಕಣ್ಣನ್ನು ಬೇರೆಡೆಗೆ ತಿರುಗಿಸಲು ಯತ್ನಿಸಿದಳು ಆಗಲಿಲ್ಲ . ಹೃದಯದ ಬಡಿತ ಅವಳಿಗರಿವಿಲ್ಲದಂತೆ ಜೋರಾಗಿತ್ತು.ಆಷ್ಟರಲ್ಲಿ ಬೆಂಗಳೂರಿನ ಬಸ್ ಅಡ್ಡ ಬಂದು ಅವನನ್ನು ಮರೆ ಮಾಡಿತು.
ಯಾವದೋ ಮಾಯೆಗೆ ಒಳಗಾದಂತೆ ಬಸ್ ಹತ್ತಿದವಳಿಗೆ ಮತ್ತೆ ಕಾಣಿಸಿದ್ದು ಅದೇ ಚೆಲುವ. ಸೀಟ್‌ಗಾಗಿ ಹುಡುಕುತಿದ್ದ ಇವಳನ್ನು ಕರೆದು ತನ್ನ ಪಕ್ಕದ ಸೀಟ್ ಕೊಟ್ಟ. ಮಾತಾಡದೇ ಕುಳಿತಳು . ಅವನೇ ಇವಳ ಲಗೇಜ್ ತಂದು ಬಸ್‌ನಲ್ಲಿ ಇಟ್ಟ." ಹೆಲ್ಲೊ ನೀವು ತಪ್ಪು ತಿಳಿಯದೇ ಇದ್ರೆ ನಾನು ನಿಮ್ಮ ಜೊತೆ ಮಾತಾಡ್ತಿರಬಹುದಲ್ಲವಾ? ಯಾಕೆಂದರೆ ಈ ಪ್ರಯಾಣದ ಸಮಯದಲ್ಲಿ ಪಕ್ಕದಲ್ಲಿ ಕುಳಿತೋರೇ ಸ್ನೇಹಿತರು. ಈ 4 ಅವರ್ಸ್ ಬೋರಿಲ್ಲದೇ ಕಳಿಬಹುದು"ಕವಿತ ತಲೆಯಾಡಿಸಿದಳು.ಹೀಗೆ ಪ್ರಾರಂಭವಾದ ಮಾತು ಇಬ್ಬರ ಬಗ್ಗೆ ಇಬ್ಬರ ಇಷ್ಟದ ಬಗ್ಗೆ , ಇಬ್ಬರ ಕನಸಿನ ಬಗ್ಗೆ , ಗುರಿ ಗಳನ್ನೆಲ್ಲಾ ಸುತ್ತಾಡಿ ಬಂತು. ಆ ಸಮಯದಲ್ಲಿ ಅವನ ಹೆಸರು ಹೇಮಂತ್ ಹಾಗು ಎಂ‌ಬಿಎ ಮಾಡಿ ಒಂದು ದೊಡ್ಡ ಕಂಪೆನಿಯಲ್ಲಿ ಇದ್ದಾನೆಂಬುದು ತಿಳಿಯಿತು.ಹೀಗೆ ಮಾತುಕತೆಯಾಗುವ ಸಂದರ್ಭ್ಹದಲ್ಲಿ ಕವಿತ ಒಂದು ಅಂಶವನ್ನು ಗಮನಿಸಿದಳು. ಬೇರೆ ಯಾರಾದರೂ ಆಗಿದ್ದರೆ ಕೈ ತಾಕಿಸುವುದು, ಕಾಲು ತಾಕಿಸುವುದನ್ನಾದರೂ ಮಾಡುತಿದ್ದರು . ಆದರೆ ಹೇಮಂತ್‌ ಹಾಗೆ ಒಮ್ಮೆಯೂ ಮಾಡಲಿಲ್ಲ . ಒಬ್ಬ ಪರ್ಫೆಕ್ಟ್ ಜೆಂಟಲ್ ಮ್ಯಾನ್ ಇರಬೇಕು.ಆತ ಎನೇನೋ ಮಾತನಾಡುತಿದ್ದ. ಕಿವಿ ಕೇಳುತಿದ್ದರೂ ಮನಸ್ಸು ಆಗಲೇ ಒಂದು ಸಣ್ಣ ಕನಸನ್ನು ಸೃಷ್ಟಿಸಿತ್ತು. ಹೇಮಂತ್ ತನ್ನನ್ನು "ಐ ಲೌ ಯು " ಎಂದು ಹೇಳಿದಂತೆ ತಾನು ಒಪ್ಪಿದಂತೆ ಇಬ್ಬರ ಮನೆಯಲ್ಲೂ ಇದಕ್ಕೆ ಒಪ್ಪಿಗೆ ಸಿಕ್ಕಿ ಮದುವೆಯೂ ಆದ ಹಾಗೆ ಏನೆನೋ ಕನಸು .ಹೀಗೆ ಕನಸು ಕಾಣುವುದು ಇದೇ ಮೊದಲ ಸಲವಲ್ಲ ಹಿಂದೆಯೂ ಕಾಲೇಜಿನಲ್ಲಿ ರಿಶಿಯನ್ನು ಕಂಡಾಗ ಹೀಗೆ ಆಗಿತ್ತು ಆದರೆ ರಿಶಿ ರಶ್ಮಿಯ ಹಿಂದೆ ಬಿದ್ದಾಗ ಆ ಕನಸು ಮಾಯವಾಗಿತ್ತು. ಅಷ್ಟೇಕೆ ಮ್ಯಾತೆಮೆಟಿಕ್ ಲೆಕ್ಚ್‌ರ್ರ್ ಸಂದೀಪ್‌ರನ್ನು ಕಂಡಾಗಲೂ ಹೀಗೆ. ಆದರೆ ಅವರ ಮದುವೆ ಆಗಲೇ ಆಗಿತ್ತು .ಹಾಗೆಂದು ಅವಳನ್ನು ಯಾರೂ ಇಷ್ಟ ಪಡಲಿಲ್ಲವೆಂದಲ್ಲ .ಆದರೆ ಅವಳಿಗಿಷ್ಟವಾದವರಿಗೆ ಅವಳು ಇಷ್ಟಾ ವಾಗಿರಲಿಲ್ಲ. ಅವಳನ್ನು ಬಯಸಿದವರು ಅವಳಿಗೆ ಹಿಡಿಯಲಿಲ್ಲಮಧ್ಯದಲ್ಲಿ ಬಸ್ ನಿಂತಾಗ ಹೇಮಂತ್ ಊಟ ಕೊಡಿಸಿದ .
ಹೀಗೆ ಮಾತನಾಡುತ್ತಲೇ ಬೆಂಗಳೂರು ಬಂದೇ ಬಿಟ್ಟಿತು. ಒಂದೇ ಕ್ಷಣದಲ್ಲಿ ಹೇಮಂತ್ ಇವಳ ಬ್ಯಾಗ್ , ಲಗೇಜ್ ಎಲ್ಲಾ ಹೊತ್ತುಕೊಂಡು ಇಳಿದೇ ಬಿಟ್ಟ, "ಹೆಲ್ಲೊ ನಿಲ್ಲಿ ನಿಲ್ಲಿ" ಎಂದು ಎಷ್ಟು ಹೇಳಿದರೂ ಕೇಳದೇ ಕೆಲ ಕ್ಶಣದಲ್ಲಿ ಜನರಲ್ಲಿ ಮರೆಯಾಗಿ ಹೋದ . ನಯ ವಂಚಕ. ಬರೀ ಮಾತಿನಲ್ಲಿ ಮರುಳು ಮಾಡಿ ಎಲ್ಲವನ್ನು ಹಾರಿಸಿಕೊಂಡು ಹೋದ.ಕವಿತಾಗೆ ಸಂದರ್ಭದ ಅರಿವಾಗುತ್ತಲ್ಲೇ ಅಳು ಬಂದು ಬಿಟ್ಟಿತು . ತನ್ನ ಪುಸ್ತಕ, ದುಡ್ಡು , ಮೊಬೈಲ್ , ಬಟ್ಟೆ , ಎಲ್ಲವನ್ನೂ ಕಳೆದುಕೊಂಡಿದ್ದಳು.ಮನೆಯಲ್ಲಿ ಏನು ಹೇಳುವುದು . ಯಾವನೋ ತನ್ನ ಲಗೇಜ್ ಹೊಡೆದುಕೊಂಡು ಹೋದ ಎಂದರೆ ಹೇಗೆ ಅಂತ ಕೇಳುತ್ತಾರೆ. ಈ ವಿಷಯವನ್ನು ಹೇಗೆ ಹೇಳುವುದು . ದಿಕ್ಕೆಟ್ಟ್ವಳಂತೆ ನಿಂತಿದ್ದಳು. ಅಷ್ಟರಲ್ಲೆ ಕಾಣಿಸಿದಳು ಅಕ್ಕಅರೇ ಅಕ್ಕನ ಬಳಿಯಲ್ಲೇ ತನ್ನೆಲ್ಲ ಲಗೇಜ್ ಇದೆ. ಹಾಗಿದ್ದರೇ ಆ ಈಡಿಯಟ್ ....................ಆತ ಅಕ್ಕನ ಬಳಿಯಲ್ಲೇ ನಿಂತಿದ್ದ . ಇಬ್ಬರೂ ಮುಸಿ ಮುಸಿ ನಗುತ್ತಿದ್ದರು."ಹೋದೆಯಾ ಮೋಸ ಕವಿತಾ . ಹೇಗಿತ್ತು ನಿಮ್ಮ ಭಾವನ ನಾಟಕ . ಯಾವಾಗಲೂ ನನ್ನ ಗೋಳು ಹಾಕ್ಕೊಳಿತಿದ್ದೆಯಲ್ಲಾ. ಇವತ್ತು ಹೇಗಿತ್ತು, ನಿಮ್ಮ ಭಾವ ನಿನ್ನ ಕರ್ಕೊಂಡು ಬರ್ತೀನಿ ಅಂತ ಹೇಳಿದ್ದರು. ಹಾಗೆ ಅವಳಿಗೆ ನೀವು ಯಾರು ಅಂತ ಹೇಳ್ಬೇಡಿ ಅಂತ ನಾನೆ ಹೇಳಿದ್ದೆ "ಕೆಲ ಕ್ಶಣ ದಲ್ಲಿ ಎಲ್ಲಾ ಅರಿವಾಗಿತ್ತು. ಕವಿತ ಅವಳ ಭಾವನನ್ನು ನೋಡಿರಲಿಲ್ಲವಾದ್ದರಿಂದ ಹೇಮಂತ್ ಯಾರು ಎಂದು ಅವಳಿಗೆ ತಿಳಿಯಲಿಲ್ಲ ." ಸಾರಿ ಕವಿತ . ನಿಮ್ಮಕ್ಕನ ಆಜ್ನೆ ಮೀರಬಾರದು ಅಂತ ನಾನು ನಿಂಗೆ ವಿಷಯ ಹೇಳಲಿಲ್ಲ" ಹೇಮಂತ್ ಮತ್ತೊಮ್ಮೆ ನಕ್ಕ.ಕೆಲ ನಿಮಿಷ ಮನಸ್ಸು ಮುದುಡಿತು. ಆದರೂ ಇಂತಹ ಗಂಡು ಅಕ್ಕನಿಗೆ ಸಿಕ್ಕಿದ್ದಕ್ಕಾಗಿ ಮನಸ್ಸು ಖುಷಿ ಪಟ್ಟಿತು . ರಿಶಿ, ಸಂದೀಪ್ ರಂತೆ ಇದೂ ಒಂದು ಘಟನೆ ಎಂದುಕೊಂಡು ಸುಮ್ಮನಾದರೆ ಆಯಿತು ಎಂದುಕೊಂಡು ಕಾರನ್ನೇರಿದಳು.

Sunday, February 24, 2008

ಈ ಹುಡುಗರೇಕೆ ಹೀಗೆ

ಇದು ಎಲ್ಲಾ ಕಡೆಗೂ ಸರ್ವ ಕಾಲಕ್ಕೂ ಸಲ್ಲಬೇಕಾದ ಪ್ರಶ್ನೆ
ನಮ್ಮ ಸಂಸ್ಥೆಯಲ್ಲಿ ಕಲಿಯುವದಕ್ಕೆಂದು ಸುಮಾರು ಹುಡುಗರು ಹುಡುಗಿಯರು ಬರುತ್ತಾರೆ. ಅವರಲ್ಲಿ ಒಬ್ಬ ಹುಡುಗ ಮಾತ್ರ ಸುಮಾರು 23 ವರ್ಷದವನಿರಬಹುದು . ಮಾತಿನಲ್ಲಿ ಬಹಳ ಚುರುಕು . ಮಂಡ್ಯನವನಿರಬೇಕು. ಬಹಳ ಜೋರು ಮಾತಿನವನು. ಓದಿನಲ್ಲಿ ಮಾತ್ರ ಬಹಳ ಹಿಂದೆ . ಯಾವುದೋ ಕಂಪನಿಯಲ್ಲಿ ದಿನಗೂಲಿ ನೌಕರ ಆದರೂ ಅವನ ಅಕ್ಕರೆಯ ಮಾತಿಗೆ ನಾವೆಲ್ಲ ಸ್ಪಂದಿಸುತಿದ್ದೆವು . ನಮ್ಮೆಲ್ಲರನ್ನೂ ಮಾತಿನಲ್ಲೇ ನಗಿಸುತಿದ್ದನುಅಂತಹವನು 3 ತಿಂಗಳಿಂದ ಯಾಕೊ ಸರಿ ಇರಲಿಲ್ಲ ಮಾತು ಕಡಿಮೆಯಾಗಿತ್ತು . ಕ್ಲಾಸ್‍ಗೂ ಸರಿಯಾಗಿ ಬರುತ್ತಿರಲಿಲ್ಲ. ನಾನು ನನ್ನ ಕೆಲಸಗಳ ಮಧ್ಯ ಇದಕ್ಕೆ ತಲೆ ಕೆಡಿಸಿಕೊಳ್ಳಲಿಲ್ಲ .ಒಮ್ಮೆ ಆತ ಸೀದ ನನ್ನ ಮನೆಗೆ ಬಂದ."ಮೇಡಮ್ ನಾನೊಂದು ವಿಷಯ ಹೇಳಬೇಕು . ""ಏನಪ್ಪ ಪರ್ಸನಲ್ ಅಥವ ಅಫ್ಫಿಶಿಯಲ್"" ಪರ್ಸನಲ್ ಮೇಡಮ್ " ಎಂದ ಎಲ್ಲೊ ಏನೊ ಎಡವಟ್ಟಾಗಿದೆ ಅನಿಸಿತು."ಏನು ಏನಾದ್ರೂ ಲವ್ ಗಿವ್ " ಎಂದು ಕೇಳಿದೆ." ಹೌದು ಮೇಡಮ್ , ನಂದೇನು ತಪ್ಪಿಲ್ಲ . ಅವಳೆ ಫಸ್ಟ್ ನಂಜೊತೆ ಚೆನ್ನಾಗಿದ್ದು ಈಗ ನೀನು ನನ್ನ ಬ್ರದರ್ ಥರ್ ಅಂತಾ ಇದಾಳೆ. ನಂಗೆ ಸಾಯೊ ಅಷ್ಟು ಬೇಸರವಾಗಿದೆ"ಅಷ್ಟರಲ್ಲಿ ಇವರೂ ಬಂದರು.ಯಾರಪ್ಪ ಅದು ಎಂದಿದ್ದಕ್ಕೆ ಆತ ಹೆಸರು ಹೇಳಿದನಂಗೆ ಶಾಕ್ಆ ಹುಡುಗಿ ನಮ್ಮ ಸಂಸ್ಥೆಯಲ್ಲಿ ಬಹಳ ಒಳ್ಳೆಯ ನಡುವಳಿಕೆಗೆ ಹೆಸರಾದವಳು. ಮೇಲಾಗಿ ಒಳ್ಳೆಯ ಕಂಪನಿಯೊಂದರಲ್ಲಿ ದೊಡ್ಡಾ ಹುದ್ದೆಯಲ್ಲಿ ಇದ್ದವಳು ಹಾಗೆ ಅಷ್ಟೆ ಒಳ್ಳೆಯ ಸಂಬಳ ಪಡೆಯುತಿದ್ದವಳು.ಅವಳನ್ನು ಅನುಮಾನಿಸಲು ಕಾರಣವೇ ಇರಲಿಲ್ಲಅವನನ್ನು ಸಮಾಧಾನಗೊಳಿಸಿ ಹಾಗು ಹೀಗು ಸಾಗ ಹಾಕಿದೆವು.
ನಂತರ ಅವಳನ್ನು ಕರೆದು ಕೇಳಿದಾಗ ತಿಳಿದಿದ್ದುಆ ಹುಡುಗ ಇಂಗ್ಲೀಶ್ ನಲ್ಲಿ ವೀಕ್ . ಹಾಗಾಗಿ ಇವಳು ಅವನಿಗೆ ಸಹಾಯ ಮಾಡುತಿದ್ದಳಂತೆ. ಅದನ್ನು ತಪ್ಪಾಗಿ ಅರ್ಥ ಮಾಡಿಕೊಂಡ ಅವನು ಹೀಗೆ ಆಡುತಿದ್ದಾನೆ.ಅವನ ಕಾಟ ಅಧಿಕವಾಗತೊಡಗಿತು . ಆಕೆ ಎಲ್ಲಿ ಹೋದರೂ ಹಿಂಬಾಲಿಸುವುದು. ಕ್ಲಾಸ್ನಲ್ಲಿ ತೊಂದರೆ ಕೊಡುವುದು ಅತಿಯಾಗತೊಡಗಿತು.ಹುಚ್ಚನಂತೆ ಆಡತೊಡಗಿದ.ನಂತರ ಅವನನ್ನು ಕೆಲಸದಿಂದ ತೆಗೆದು ಹಾಕಿದರು. ನಾವು ನಮ್ಮ ಸಂಸ್ಥೆಯಿಂದ ಅವನ್ನನ್ನು ಬಿಡಿಸಿದೆವು.ಒಮ್ಮೆ ಆ ಹುಡುಗನ ಅಮ್ಮ ನಮ್ಗೆ ಫೋನ್ ಮಾಡಿದ್ದರು. ಆ ಹುಡುಗನಿಗೆ ತಂದೆ ಇಲ್ಲ ಹಾಗು ಅವನೇ ಮನೆ ಪೂರ್ತಿ ನೋಡಿಕೊಳ್ಳಬೇಕು.ಇಷ್ಟೊಂದು ಜವಾಬ್ದಾರಿಯಿದ್ದ ಹುಡುಗ ಯಾಕೆ ಹೀಗೆ ಮಾಡಿದ ಅನ್ನುವುದು ನಮ್ಗೆ ಅರಿವಾಗಲಿಲ್ಲ.ಅವನು ಊರಿಗೂ ಹೋಗಲಿಲ್ಲವಂತೆ. ನಮ್ಮ ಸುತ್ತ ಮುತ್ತ ಎಲ್ಲ್ಲೂ ಕಾಣಲಿಲ್ಲ
ಒಮ್ಮೆ ಅವನನ್ನ ನಮ್ಮೆಜಮಾನರು ಎಲ್ಲೋ ಮಲ್ಲೇಶ್ವರಂ ನಲ್ಲಿ ನೋಡಿದರಂತೆ ತಿನ್ನಲೂ ಏನೂ ಇರದಂತಹ ಸ್ತಿತಿಯಲ್ಲಿ ಇದ್ದನಂತೆ ಅವನಿಗೆ ಊಟಕ್ಕೆ ಹಾಗು ಊರಿಗೆ ಹೋಗಲು ಹಣ ಕೊಟ್ಟು ಬುದ್ದಿ ಮಾತು ಹೇಳಿ ಬಂದರಂತೆ. ನಂತರ ಏನಾಯಿತೋ ತಿಳಿಯಲ್ಲಿಲ
ಇದು ಆ ಹುಡುಗನೊಬ್ಬನದೆ ವಿಷಯವಲ್ಲ. ಸಾಮಾನ್ಯ ವಾಗಿ ಇಂತಹ ರಿಯಲ್ ಕತೆಗಳು ಎಲ್ಲೆಡೆ ಇರುತ್ತವೆ. ಎಲ್ಲಾ ಕಾಲಕ್ಕೂ ಸಲ್ಲುತ್ತವೆಆದರೆ ನನಗೆ ಒಂದು ವಿಷಯ ಅರಿವಾಗಲಿಲ್ಲ. ಈ ಹುಡುಗರೇಕೆ ಹುಡುಗಿಯರು ಸಹಾಯ ಮಾಡಿದರೆ ತಮ್ಮನ್ನ ಲವ್ ಮಾಡುತಿದ್ದಾರೆ ಎಂದು ತಿಳಿಯುತ್ತಾರೆ.?
ಅವರೂ ಅವರಂತೆ ಮತ್ತೊಬ ಮನುಷ್ಯ ಜೀವಿ ಎಂದೇಕೆ ತಿಳಿಯುವುದಿಲ್ಲ. ಮನುಷ್ಯ ಮನುಶ್ಯನಿಗೆ ಸಹಾಯ ಮಾಡುವುದು ಸಾಮಾನ್ಯ ಅಲ್ಲವೇ ?

ಎರೆಡು ಪತ್ರಗಳು

ಪತ್ರ ಒಂದು
ಪ್ರೀತಿಯ ಅಪ್ಪನಿಗೆ.
ನೆನ್ನೆ ನಿನ್ನ ಫೋನಿಂದ ಮನಸ್ಸು ಕದಡಿಹೋಗಿದೆ. ನೀವು ನೋಡಿದ ಹುಡುಗ ಅಲ್ಲ ಬೇರೆ ಯಾವ ಹುಡುಗನೊಡನೆಯೂ ಮದುವೆ ಎಂಬ ಬಂಧನಕ್ಕೆ ಬೀಳಲು ನಾನು ಸಿದ್ದ ಇಲ್ಲ.ದಯವಿಟ್ಟು ಕ್ಷಮಿಸು.
ಯಾವದೋ ಗುರುತಿರದ ವ್ಯಕ್ಸ್ತಿಯ ಜೊತೆ ನನ್ನ ಬಾಳನ್ನೆಲ್ಲಾ ಕಳೆಯಲು ನನಗೆ ಇಷ್ಟ ಇಲ್ಲ . ನೀನು ಅಮ್ಮ ಬದುಕುತ್ತಿರಬಹುದು. ಅಮ್ಮನಿಗೆ ಯಾವದೇ ಸಿದ್ದಾಂತವಿರಲಿಲ್ಲ .ಆದರೆ ನನಗೆ ನನ್ನದೇ ಆದ ಗುರಿ ಇದೆ. ಹೊಸ ಹೊಸ ಪ್ರಯೋಗಕ್ಕೆ ಮನ ತುಡಿಯುತ್ತಿರುತ್ತದೆ.
ಇಲ್ಲಿ ನನ್ನ ಫ್ರೆಂಡ್ ಆಕಾಶ್ ಅದಕ್ಕೆ ಒತ್ತಾಸೆಯಾಗಿ ನಿಂತಿದ್ದಾನೆ. ನನ್ನ ರೀತಿ ಅವನಿಗೂ ಮದುವೆಯಲ್ಲಿ ನಂಬಿಕೆ ಇಲ್ಲ. ಸಾಂಸರಿಕ ‍ಕಮಿಟ್‍ಮೆಂಟ್ ಇಲ್ಲದ ಜೀವನ ನಮಗಿಬ್ಬರಿಗೂ ಬೇಕಿದೆ ಹಾಗಾಗಿ ನಾವಿಬ್ಬರೊ ಲೀವ್ - ಇನ್ ರೀತಿಯಲ್ಲಿ ಬಾಳಲು ಯೋಚಿಸಿದ್ದೇವೆ. ಬಾಳ ದಾರಿ ಸ್ವಷ್ಟ ವಾಗಿಯೀ ಇದೆ.
ದಯವಿಟ್ಟು ನಮ್ಮ ದಾರಿಗೆ ಅಡ್ಡವಾಗಿ ಬರಬೇಡಿ. ಅಪ್ಪ ಅಮ್ಮನಾಗಿ ನಿಮ್ಮ ಕರ್ತವ್ಯ ನೀವು ಮಾಡಿದ್ದೀರ. ಇನ್ನು ನಾನು ಸ್ವತಂತ್ರವಾಗಿ ಹಾರಲು ಅವಕಾಶ ಮಾಡಿಕೊಡಿ. ನಾನು ಜೀವನದಲ್ಲಿ ಸುಖವಾಗಿ ಇರುತ್ತೇನೆ ಎಂಬ ನಂಬಿಕೆ ನನಗಿದೆ. ನನಗಾಗಿ ಅಳಬೇಡಿ. ಹಾಗು ನನಗಾಗಿ ಹುಡುಕಬೇಡಿ.
ಮುಂದೆ ನನ್ನನ್ನು ಇದೇ ರೀತಿಯಲ್ಲಿ ಒಪ್ಪಿಕೊಳ್ಳುವ ಮನಸ್ಥಿತಿ ನಿಮಗಿಬ್ಬರಿಗೂ ಬಂದ ಮೇಲೆ ನಾನಾಗೆ ಬರುತ್ತೇನೆ
ನಿಮ್ಮ ಮುದ್ದಿನ ಸಾಧನ
ಪತ್ರ ಎರೆಡು
ಪ್ರೀತಿಯ ಅಪ್ಪನಿಗೆ(ಹಾಗೆ ಕರೆಯಲು ಅವಕಾಶವಿದೆಯಾ?)
ಅಪ್ಪ ಎರೆಡು ವರ್ಷಗಳಾದ ಮೇಲೆ ಅಪ್ಪ ನಿನ್ನನ್ನು ನೋಡಿ ಓಡಿ ಬಂದು ನಿನ್ನ ಕಾಲಿಗೆ ಬಿದ್ದು ಜೋರಾಗಿ ಅಳಬೇಕೆಂದು ಅನಿಸಿತು. ಆದರೆ ಯಾವ ಮುಖ ಹೊತ್ತಿ ಬರಲಿ.ಹಾಗಾಗಿ ನಿನ್ನನ್ನು ನೋಡಿದ ಕೂಡಲೆ ಅವಿತುಕೊಂಡೆ. ಆದರೂ ನೀನು ನನ್ನನ್ನು ಹುಡುಕಿಕೊಂಡು ಬಂದೆ . ನನ್ನ ರೀತಿಯನ್ನು ಒಪ್ಪಿಕೊಂಡು ಇರುವಿರೆಂದು ಹೇಳಿದಿರಿ.
ಆದರೆ ಅಪ್ಪ ನಾನು ಈ ಎರೆಡು ವರ್ಷಗಳಲ್ಲಿ ಏನಾಗಿದ್ದೇನೆಂದು ನಿಮಗೆ ತಿಳಿದಿದೆಯಾ?
ನಿಮ್ಮನ್ನು ದಿಕ್ಕರಿಸಿ ಬಂದ ನನಗೆ ಆಕಾಶ್ ಜೀವವಾಗಿದ್ದ. ಸಂಸಾರ ಬೇಡವೆಂದವಳಿಗೆ ಆಕಾಶ್ ಇಷ್ಟವಾಗತೊಡಗಿದ. ನನ್ನ ಹೊಟ್ಟೆಯಲ್ಲಿ ಅವನ ನನ್ನ ಪ್ರೀತಿಯ ಫಲ ಚಿಗುರಿದಾಗ ಅದನ್ನು ಚಿವುಟಲು ಹೇಳಿದ. ನಾನು ಅದಕ್ಕೆ ಒಪ್ಪಲಿಲ್ಲವೆಂದಾಗ ನಮ್ಮ ಲೀವ್-ಇನ್ ಟುಗೆದರ್ ಮುರಿದು ಬಿತ್ತು. ನಮ್ಮಲ್ಲಿ ಯಾವದೇ ಕಮಿಟ್‍ಮೆಂಟ್ ಇರಲಿಲ್ಲವಲ್ಲ. ನನ್ಗೆ ಬಾಯ್ ಹೇಳಿ ಬೇರೆಡೆ ಹೋದ. ಆದರೆ ಅವನಿಗೂ ಮದುವೆ ಬೇಕಿತ್ತೇನೋ ಹಾಗೆ ಹೋಗಿ ಎರೆಡೇ ತಿಂಗಳಲ್ಲೇ ಬಹಳ ವಿಜ್ರಂಭಣೆಯಿಂದಲಿ ಮದುವೆಯಾದ. ನನಗೂ ಅಹ್ವಾನ ಪತ್ರಿಕೆ ಬಂದಿತ್ತು. ಆದರೆ ನಾನು ಹೋಗಲಿಲ್ಲ
ಹೊಟ್ಟೆಯಲ್ಲಿ ಮಗು, ಕತ್ತಿನಲ್ಲಿ ತಾಳಿ ಇಲ್ಲವೆಂದಾಗ ಸಹೋದ್ಯೋಗಿಗಳು ನಗಲು ಆರಂಭಿಸಿದರು. ನಾವೆಷ್ಟೆ ಮುಂದುವರಿದರೂ ನಮ್ಮದು ಭಾರತೀಯ ಮನಸು,ಪ್ರಜ್ನೆ ಅದು ಬದಲಾಗಲು ಸಾಧ್ಯವೇ ಇಲ್ಲ.
ಹಾಗು ಹೀಗೊ ನಿನ್ನ ಮೊಮ್ಮಗಳು ಭೂಮಿಗೆ ಬಂದಳು . ಆ ಸಮಯದಲ್ಲಿ ನಾ ಪಟ್ಟ ಮಾನಸಿಕ ಹಿಂಸೆ ಅಷ್ಟಿಷ್ಟಲ್ಲ. ಆದರೆ ಈ ವಿಷಯ ನಿಮ್ಗೆ ತಿಳಿಸಬಾರದು ಎಂದು ನಾನು ಪಣ ತೊಟ್ಟಿದ್ದೆ. ಈಗ ಅವಳೇ ನನ್ನ ಜೀವ
ಈಗ ನನಗೆ ಹಣದ ವಿಷಯವಾಗಿ ಯಾವದೇ ತೊಂದರೆ ಇಲ್ಲ . ಆದರೆ ನನ್ನ ಕಾವ್ಯ ನಿಮ್ಮ ಮೂಮ್ಮಗಳು ಅಪ್ಪ. ನಿಮ್ಮ ಜೊತೆಯಲ್ಲಿಯೇ ಬೆಳೆಯಲಿ ಎಂಬುದು ನನ್ನ ಆಸೆ. ಸಾಧ್ಯವಾದರೆ ಈಡೇರಿಸು. ನಾನು ತಪ್ಪು ಮಾಡಿದಾಗಲೆಲ್ಲ ಬೈತಿದ್ದೆ . ಆದರೆ ನನ್ನನೆಂದು ದೂರ ಮಾಡಲಿಲ್ಲ ನೀನು. ಈಗಲೂ ಹಾಗೇ ಇರುವೆ ಎಂದು ಭಾವಿಸಲಾ ನಾನು?
ಅಪ್ಪ ನನ್ಗೆ ಒಂದು ವಿಷ್ಯ ಅರ್ಥವಾಗಿದೆ. ನೀನು ಅಮ್ಮ ಆಗಲಿ ಮದುವೆಯಾದ ಬೇರೆಯವರಾಗಲಿ ಸಂಸಾರವನ್ನು ಬಂಧನವೆಂದು ಪರಿಗಣಿಸದೆ ಅದನ್ನು ಸ್ವರ್ಗವೆಂದು ಭಾವಿಸಿ ಅದನ್ನೆ ಪ್ರೀತಿಸಿದಿರಿ. ಆದರೆ ನಾನು ಹಕ್ಕಿಯಾಗಿ ಹಾರಾಡುತ್ತೇನೆಂದುಕೊಂಡು ಬಾಳಿನ ಬಿಸಿಲಲ್ಲಿ ಸುಸ್ತಾಗಿ ರೆಕ್ಕೆ ಮುರಿದುಕೊಂಡು ಬಿದ್ದಿದ್ದೇನೆ. ನನಗೆ ಒಂದಷ್ಟು ಪ್ರೀತಿ ಅಕ್ಕರೆ. ಸಾಂತ್ವಾನ ಬೇಕಾಗಿದೆ . ಕೊಡುತೀರ ಎಂದು ಭಾವಿಸುತಾ ಈ ಭಾನುವಾರ ಮನೆಗೆ ಬರುತಿದ್ದೇನೆ.
ನನ್ನನ್ನು ಸ್ವೀಕರಿಸುತ್ತೀರಲ್ಲಾ?
ನಿಮ್ಮ ಮಗಳಾಗೇ ಉಳಿಯಬಯಸುವ
ಸಾಧನ.