Tuesday, April 29, 2008

ಪ್ರೀತಿಗೆ ಸ್ನೇಹಾನ ಮರೆಸೋ ಶಕ್ತಿ ಇರುತ್ತಾ?

ಬಸ್ ಸ್ಟಾಪ್‌ನಲ್ಲಿ ನೆಪ ಮಾತ್ರಕ್ಕೆ ಕುಳಿತಿದ್ದರು ಆ ಇಬ್ಬರು ಸ್ನೇಹಿತೆಯರು ಬರೀ ಸ್ನೇಹಿತೆಯರೆಂದರೆ ಸಾಲದು ದೇಹ ಪ್ರಾಣ ಎಂಬತಿದ್ದರು. ಕಾಲೇಜ್ ಬಿಟ್ಟೊಡನೆ ಸೀದ ಮನೆಗೆ ಹೋಗುವ ಮಾತೆ ಅವರಲ್ಲಿರಲಿಲ್ಲ. ಬಸ್ ಸ್ಟಾಪ್‍ನಲ್ಲಿ ಕೂರುವುದು ಪಾರ್ಕ್ಗೆ ಹೋಗುವುದು . ದುಡ್ಡಿದ್ದರೆ ಬೇಕರಿಗೆ ಹೋಗಿ ತಿಂದುಕೊಂಡು ಮಾತಾಡುವುದು. ಮಾತಿಗೆ ಬರವೇ ಇರಲಿಲ್ಲ
ಮೂರು ಜನ್ಮಕ್ಕೆ ಸಾಲುವಷ್ಟು ಮಾತಿತ್ತೇನೊ ಅವರಲ್ಲಿ. ಇಂದೂ ಹಾಗೆ ಮಾತು ನಡೆಯುತ್ತಿತ್ತು
"ಏ ಪ್ರಿಯ ಯಾಕೆ ಸ್ವಲ್ಪ ದಿನದಿಂದ ಏನೊ ಒಂಥರ ಇದೀಯ ಏನೊ ಕಳ್ಕೊಂಡವಳ ಹಾಗೆ . ಸುಮ್ಮ್ನೆ ಕೂತ್ಕೊಂಡೀರ್ತೀಯ . ಏನು ವಿಷಯ ? ಲವ್ವಾ?"
ಪ್ರಿಯ ನಾಚಿಕೆಯಿಂದ ತಲೆಯಾಡಿಸಿದಳು
" ಏ ಕಳ್ಳಿ ಯಾರೆ ಅದು .ದಿನದಲ್ಲಿ ಮುಕ್ಕಾಲು ಪಾಲು ನಂಜತೆನೇ ಇರ್ತೀಯ . ಇದು ಹ್ಯಾಗೆ ಸಾಧ್ಯ.
ಹೋಗಲಿ ಯಾರೆ ಅವನು ನನ್ನ ಗೆಳತೀ ಮನಸನ್ನ ಹಾರಿಸಿಕೊಂಡವನು?" ಸ್ನೇಹಾಳ ಪ್ರಶ್ನೆಗೆ ಉತ್ತರಿಸಲಾರೆ ಎಂಬಂತೆ ತಲೆ ಆಡಿಸಿದಳು ಪ್ರಿಯ.
"ನನ್ನ ಹತ್ತಿರ ಮುಚ್ಚಿಡಬೇಡ . ನಂಗೆ ಹೇಳೆ ಪ್ಲೀಸ್"
ಪ್ರಿಯ ತನ್ನಲ್ಲಿದ್ದ ರೆಕಾರ್ಡ್ ಬುಕ್ ತೆಗೆದು ಅದರಲ್ಲಿದ್ದ ಲೇಬಲ್‍ನ ಮೇಲಿದ್ದ ಹೆಸರನ್ನು ತೋರಿದಳು.
ಹೆಸರು ನೋಡುತಿದ್ದಂತೆ ನಂಬಲಾಗದವಳಂತೆ ಅಚ್ಚರಿಯಿಂದ ಪ್ರಿಯಳನ್ನು ನೋಡಿದಳು.
ಅದು ಅವರಿಬ್ಬರ ಕ್ಲೋಸ್ ಫ್ರೆಂಡ್ ರವಿಯ ಬುಕ್ .
ಈ ಮೂವರು ಭೂಮಿಯ ಮೇಲೆ ಹುಟ್ಟಿದ್ದೇ ಈ ಸ್ನೇಹಕ್ಕಾಗಿ ಎಂಬಂತಿದ್ದರು.
ಕಾಲೇಜಿನ ಯಾವ ಮೂಲೆಯಲ್ಲಾದರೂ ಒಬ್ಬರಿದ್ದರೆ ಇನ್ನಿಬ್ಬರು ಇರುತ್ತಾರೆ ಎನ್ನುವಂತಿತ್ತು.
ಯಾರಾದರೂ ಒಬ್ಬರಿಗೆ ಯಾರಿಂದಲೋ ನೋವಾಗಿದೆ ಎಂದರೆ ಮೂರು ಜನ ಜಗಳಕ್ಕೆ ರೆಡಿ.
ಯಾರೋ ಒಬ್ಬರು ರಜಾ ಹಾಕಿದರೆ ಇನ್ನಿಬ್ಬರಿಗೆ ಕ್ಲಾಸ್ ಬೋರು ಕೂಡಲೆ ಕ್ಲಾಸ್‌ನಿಂದ ಮಾಯವಾಗುತ್ತಿದ್ದರು.
ಎಲ್ಲರೂ ರವಿಗೆ ರೇಗಿಸುತ್ತಿದ್ದರು. ಇಬ್ಬರು ಹುಡುಗಿಯರನ್ನು ಪಟಾಯಿಸಿಬಿಟ್ಟಿದ್ದೀಯಾ ಅಂತ.
ಆದರೆ ರವಿ ಇವರಿಬ್ಬರ ಬಗ್ಗೆ ಎಂದೂ ಅಂತಹ ಭಾವನೆಯನ್ನ ವ್ಯಕ್ತ ಪಡಿಸಿರಲಿಲ್ಲ.
" ಹೆಯ್ ಪ್ರಿಯ ಆರ್ ಯು ಶ್ಯೂರ್ ? ಇದು ರವಿಗೆ ಗೊತ್ತಾ?"
"ಇಲ್ಲಾ ಕಣೆ ಅವನಿಗೆ ಹೇಗೆ ಹೇಳಲಿ ಅಂತ ತಿಳೀತಿಲ್ಲ. ಅವನು ಯಾವತ್ತು ನನ್ನ ಜೊತೆ ಆ ಥರ ಬಿಹೇವ್ ಮಾಡಿಲ್ಲ . ಅವನಿಗೆ ಈ ವಿಷಯ ಹೇಳೊ ಕೆಲಸಾನ್ ನೀನೆ ಮಾಡಬೇಕು. ಪ್ಲೀಸ್ ಕಣೇ"
"ಸರಿ ಕಣೆ ಲೆಟ್ ಮಿ ಟ್ರೈ."
" ಪ್ಲೀಸ ಸ್ನೇಹ ನಂಗೆ ಅವನಲ್ಲದೆ ಬೇರೆ ಯಾರು ಹಿಡಿಸ್ತಾ ಇಲ್ಲ. ಊಟ ತಿಂಡಿ ಸಹಾ ಬೇಡ ಅನ್ನಿಸ್ತಿದೆ. ನೀನವನ್ನ ಒಪ್ಪಿಸಲೇ ಬೇಕು"
"ಆಯ್ತು " ಜೋರಾಗಿಯೆ ಕಿರುಚಿದಳು
ಅಷ್ಟ್ರಲ್ಲಿ ಗಾಡಿ ಬಂದು ನಿಂತ ಶಬ್ಧವಾಯಿತು . ರವಿ ಬಂದು ನಿಂತಿದ್ದ.
"ಏನ್ರೇ ಇನ್ನೂ ಮೀಟಿಂಗ್ ಮುಗ್ದಿಲ್ಲವಾ, ನಡೀರಿ ಟಿಕೆಟ್ ತಂದಿದೀನಿ ಹೋಗೋಣಾ"
"ರವಿ ಇವತ್ತು ರಾಗಿಗುಡ್ಡ ದೇವಸ್ಥಾನಕ್ಕೆ ಹೋಗೋಣ. ಫಿಲ್ಮ್ ಬೇಡ " ಸ್ನೇಹ ನುಡಿದಳು.
" ಯಾಕೆ ನೆನ್ನೆ ತಾನೆ ಹೇಳ್ತಿದ್ರಿ . ಹೋಗೋಣ ಅಂತ ಇದೇನು ಹೊಸಾ ಆಟ?"
"ಪ್ಲೀಸ್ ಕಣೋ . ಟಿಕೆಟ್ನ ಮಹೇಶಗೆ ಕೊಟ್ಬಿಡು ಅವನು ಅವನ ಫ್ರೆಂಡ್ ನೋಡ್ಕೋತಾರೆ."
"ಆಯ್ತು ಅದಿರ್ಲಿ ಯಾಕೆ ಪ್ರಿಯಂಗೆ ಏನಾಯಿತು ಒಂಚೂರು ಬಾಯೆ ಬಿಡ್ತಿಲ್ಲ"
"ಅದನ್ನೆ ಮಾತಾಡ್ಬೇಕು . ನೀನು ಹಿಂದೆ ಬಾ ನಾವು ಆಟೋನಲ್ಲಿ ಹೋಗ್ತೀವಿ"
"ಸರಿ"
ದೇವಸ್ಥಾನದ ಹತ್ತಿರ
ಪ್ರಿಯ ಒಂದೆಡೆ ಕುಳಿತಿದ್ದಳು. ಸ್ವಲ್ಪ ದೂರದಲ್ಲಿ ಸ್ನೇಹ ಹಾಗು ರವಿಯ ಮಾತು ಕತೆ ನಡೆಯುತ್ತಿತು
ರವಿ " ಸ್ನೇಹ ಇದೇನಿದು ಹೊಸ ನಾಟಕ ನಿಮ್ಮಿಬ್ಬರದು. ನಾನು ಯಾವತ್ತು ಪ್ರಿಯನ್ನಾಗಲಿ ನಿನ್ನಾಗಲಿ ಆ ದೃಷ್ಟಿನಲ್ಲಿ ನೋಡಿಲ್ಲ. ತಮಾಷೆ ಮಾಡಬೇಡ"
"ಇಲ್ಲ ನಾನು ತಮಾಷೆ ಮಾಡ್ತಿಲ್ಲ . ನೋಡು ಈ ಮಾತನ್ನು ಅವಳ ಮುಂದೆ ಆಡಬೇಡ. ಏನಾಗಿದೆಯೋ ಪ್ರಿಯಾಗೆ ಒಳ್ಳೆ ಗೊಂಬೆ ಥರಾ ಇದ್ದಾಳೆ . ಬೇರೆ ಹುಡುಗರೆಲ್ಲಾ ಅವಳ ಹಿಂದೆ ಬೀಳ್ತಾರೆ . ಅಂತಹದ್ರಲ್ಲಿ ನೀನು. ಹ್ಯಾಗೂ ನಾವೆಲ್ಲಾ ಒಂದೆ ಕ್ಯಾಸ್ಟ್. ಇನ್ನೇನಪ್ಪ ಯೋಚನೆ."
" ಸ್ನೇಹಾ ಅದು................"
"ಅದೂ ಇಲ್ಲ ಇದೂ ಇಲ್ಲಾ. ನೀನೀಗ ಪ್ರಿಯ ಹತ್ರ ಹೋಗಿ ಐ.ಲೌ. ಯು ಅಂತ ಹೇಳ್ತೀಯ ಸರೀನಾ . ಹೋಗೊ"
ಸ್ನೇಹ ಅಲ್ಲಿಯೇ ನಿಂತಳು. ರವಿ ಪ್ರಿಯಾಳ ಬಳಿ ಹೋಗಿ ಹೇಳಿದ . ಪ್ರಿಯಾಳ ಮುಖ ಅರಳಿತು.
ಸ್ನೇಹಾಳ ಮನಸಲ್ಲಿ ಏನೂ ಒಂಥರ ಹೇಳಲಾರದ ನೋವು. ಯಾಕೆ ಅಂತ ತಿಳಿಯಲಿಲ್ಲ.
----------------------------------------------------
ಮಾರನೆಯ ದಿನ

" ಅಯ್ಯೊ ಪಾಪ ಜೀವ ಹೊರಟು ಹೋಗಿದೆ ನೋಡಪ್ಪ ಪಾಪ ಬರಿ ದೇಹ ಮಾತ್ರ ಕ್ಲಾಸ್‌ನ್ನಲ್ಲಿ ಕೂತಿದೆ." ಕವಿತಾ ರೇಗಿಸುತ್ತಿದ್ದಳು .
ಅವತ್ತು ಕಾಲೇಜಿಗೆ ಬಂದಾಗಿನಿಂದ ಮೊದಲ ದಿನ ಸ್ನೇಹ ಒಂಟಿಯಾಗಿ ಕುಳಿತಿದ್ದಳು. ರವಿ ಪ್ರಿಯ ಅಂದು ಕ್ಲಾಸ್‌ಗೆ ಚಕ್ಕರ್ ಹಾಕಿ ಎಲ್ಲೊ ಹೋಗಿದ್ದರು.
"ಏನೆ ಸ್ನೇಹ ನೀನೇನೊ ಬ್ರೋಕರ್ ಕೆಲಸ ಬೇರೆ ಮಾಡಿದಿಯಂತೆ. ಇವಾಗ ಎಲ್ಲಿ ನಿನ್ನ ಪ್ರಾಣ ಸ್ನೇಹಿತರುಗಳು ಪ್ರಾಣ ತೆಕ್ಕೊಂಡು ಹೋಗಿಬಿಟ್ಟರಾ."ಕವಿತಾಳ ವ್ಯಂಗ್ಯ ಮುಂದುವರಿಯುತಿತ್ತು
" ಕವಿತಾ ಪ್ಲೀಸ್ ಶಟ್ ಅಪ್ "
ಕ್ಲಾಸ್ ನಲ್ಲಿ ಕೂರಲಾರದೆ ಹೊರಗೆ ಬಂದಳು ಜೀವನದಲ್ಲಿ ಮೊದಲಬಾರಿಗೆ ಒಂಟಿ ಎಂಬ ಭಾವನೆ ಬಂದಿತು.

ಅಂದಿನಿಂದ ರವಿ ಪ್ರಿಯ ಹೊರಗಡೆ ಹೋಗುವುದು . ಸ್ನೇಹಳನ್ನು ಅವಾಯ್ಡ್ ಮಾಡುವುದು ನಡೆಯಿತು.

ಸ್ನೇಹಾ ಈಗ ಇದಕ್ಕೆ ಅಭ್ಯಾಸವಾಗಿ ಹೋದಳು.
ಆದರೆ ಅವಳ ಮನಸಲ್ಲಿ ಮೂಡಿದ ಪ್ರಶ್ನೆಯೊಂದಕ್ಕೆ ಉತ್ತರ ಸಿಗಲ್ಲಿಲ್ಲ.
ಪ್ರೀತಿಗೆ ಸ್ನೇಹಾನ ಮರೆಸೋ ಶಕ್ತಿ ಇರುತ್ತಾ?
ಆ ಪ್ರಶ್ನೆಗೆ ಉತ್ತರ ಹೇಳಲಾಗುವುದಾ

Saturday, April 26, 2008

ಗೆಳೆಯನಲ್ಲದ ಗೆಳೆಯನಿಗೆ

ಗೆಳೆಯನಲ್ಲದ ಗೆಳೆಯನಿಗೆ

ಬಾಳಿನುದ್ದಕ್ಕೂ ನಿನ್ನ ಜೊತೆಗಿರುವೆ
ಎಂದ ನೀ ಈಗ ಎಲ್ಲಿರುವೆ
ಬಾಳ ಎಲ್ಲೆಯಲಿ ನನ್ನ ಕಾವಲಾಗಿ
ಜೀವನದ ಆಸರೆಯಾಗಿ
ಹೃದಯದ ಮಾತಾಗಿ
ಜೊತೆ ಹೆಜ್ಜೆ ಹಾಕುವೆ ಎಂದ ನೀ
ಹೇಗಿರುವೆ ಈಗ ಬೇರಾಗಿ

ಪ್ರತಿ ಹೆಜ್ಜೆಗೂ ನಿನ್ನ ಹಿತ ನುಡಿ
ಕಾವಲಾಗಿತ್ತು ನನ್ನ ದಿನವಿಡೀ

ಹೊರಟೆ ನೀ ಹೇಳದೆ
ಭವಬಂಧನ ಬೇಡೆಂದೆ
ನನ್ನೊಂದು ಮಾತು ಕೇಳದೆ

Friday, April 25, 2008

ಸಾಯಬೇಕು ಅನ್ನಿಸಿದ ಆ ಕ್ಶಣ

ಇದು ಏಳು ವರ್ಷದ ಹಿಂದಿನ ಮಾತು ಆಗ ತಾನೆ ಡಿಪ್ಲಮೋ ಮುಗಿಸಿದ್ದೆ. ನನ್ನ ಸಹಪಾಠಿಗಳಿಗಿಂತ ಮುಂಚೆ ಸಾಫ್ಟ್ವೇರ್ ಕಂಪೆನಿಯ ಡಾಟ್ ಕಾಂ ಶಾಖೆಯಲ್ಲಿ ಸಿಕ್ಕಿತು. 2000 ದಲ್ಲಿ ನನ್ನ ಅದೃಷ್ಟವೋ ಏನೊ ಐದಂಕಿಯ ಸಂಬಳ ಅದೂ ಬರೀ ಡಿಪ್ಲೊಮಾಗೆ . ಹದಿ ವಯಸು ನನ್ನ ಅಹಂ ಮೇರೆ ಮೀರಿತ್ತು. ಅದೃಷ್ಟ, ವಿಧಿ, ದೇವರಿಗಿಂತ ನನ್ನ ಸ್ವಯಂ ಶಕ್ತಿಯ ಮೇಲೆ ಅತಿಯಾದ ಆತ್ಮ ವಿಶ್ವಾಸ. ಹೀಗೆ ಸಾಗಿತ್ತು ಬದುಕು. ಸಾಫ್ಟ್ವೇರ್ ಉದ್ಯೋಗ ಅಂದ ಮೇಲ್ ಅದಕ್ಕೆ ತಕ್ಕ ಹಾಗೆ ಮನೆ ಬದಲಾಯಿಸಿದ್ದೆ. ಅಮ್ಮನ್ನ ಟ್ಯೂಶನ್ ಮಾಡಬೇಡ ಇಲ್ಲಿಯವರೆಗೆ ಪಟ್ಟ ಕಷ್ಟಾ ಸಾಕು ಅಂಟ ಹೇಳಿ ನಿಲ್ಲಿಸಿದ್ದೆ.ಕೆಲಸ ಸಿಕ್ಕಿ 8 ತಿಂಗಳ ಮೇಲೆ ಅಕ್ಕನಿಗ್ಗೊಂದು ಗಂಡೂ ಸಿಕ್ಕಿ ಅವಳ ಮದುವೆಗೆ ದುಡ್ಡು ಹೊಂಚುವ ಜವಾಬ್ದಾರಿ . ಮದುವೆ 2001 ಆಗಸ್ಟ ಅಂತ ನಿಷ್ಕ್ಲರ್ಶೆ ಯಾಯಿತು. ಜೋರಾಗೇ ನಡೆಯುತ್ತಿತು ನನ್ನ ದರ್ಬಾರು.
ಜನವರಿ 2001ಅದ್ಯಾರ ಕಣ್ಣು ಬಿತ್ತೋ . ನಮ್ಮ ಕಂಪೆನಿಯೂ (ಅದೀಗ ಕಾಲ್ ಸೆಂಟರ್ ಬಿಪಿಒ ಅಗಿ ಬದಲಾಗಿದೆ) ರೆಸೆಶನ್ ಪಿರಿಯಡ್ಗೆ ಈಡಾಯಿತು. ಹಾಗಾಗಿ ಸುಮಾರು ೪ ಬ್ಯಾಚ್ ನ ಜನರನ್ನು ಲೇ ಆಫ್ ಮಾಡುತ್ತಾರೆ ಎಂಬ ಮಾಹಿತಿ ಸಿಕ್ಕಿತು . ಹೆಚ್ಚು ಪ್ರಾಜೆಕ್ಟ್ ಸಿಗುತ್ತೆ ಎಂದು ಜಾಸ್ತಿ ಜನರನ್ನು ತೆಗೆದುಕೊಂಡ ಪರಿಣಾಮ ಕಂಪೆನಿಗೆ ಅಲ್ಲಿಂದ ಪ್ರಾಜೆಕ್ಟ್ ಕಡಿಮೆಯಾದಾಗ ನಾವೆಲ್ಲ ಹೊರೆ ಎನಿಸಿದೆವು.ಆ ಬ್ಯಾಚ್ ನಲ್ಲಿ ನನ್ನ್ ಬ್ಯಾಚ್ ಒಂದು . ಆದರೂ ನನಗೆ ನನ್ನ ಸಾಮರ್ಥ್ಯದ ಮೇಲೆ ಅತಿಯಾದ ನಂಬಿಕೆ . ಹಾಗಾಗಿ ನಾನು ಆ ಲಿಸ್ಟನಲ್ಲಿ ಸೇರುವುದಿಲ್ಲ ಎಂಬುದೇ ನನ್ನ ನಂಬಿಕೆ ಯಾಗಿತ್ತು. ಕೊನೆ ಕ್ಷಣ್ದದವರೆಗೂ ನನಗೆ ಮೈಲ್ ಬರುವವರೆಗೂ . " you are requested to attend a meeting at the down stair assemble hall " ಅಂತ .
ಮನೆಯ ಸ್ಠಿತಿ , ಸಾಲ , ಕೆಲಸ ಹುಡುಕುವ ಕಷ್ಟ, ಅಕ್ಕನ ಮದುವೆ ಗೆ ಇನೂ ೮ ತಿಂಗಳು. ದುಡ್ಡು ಹೊಂಚುವ ಬಗೆ ನೆನೆಸಿಕೊಂದರೆ ಕಣ್ಣು ಕತ್ತಲೆಯಾಗುತಿತ್ತು. ಹಾಗೂ ಹೀಗೂ ಮೀಟೀಂಗ್ಗೆ ಹೋದೆ. ಒಂದಷ್ಟು ಜನ ಮ್ಯಾನೇಜಮೆಂಟ್ನ ಜೊತೆ ಜಗಳ ವಾಡುತ್ತ್ತಿದ್ದರು. ಏನೋ ಮಾತು ಕತೆ. ಕೊನೆಗೆ ಏನೋ ಉಪಕಾರ ಮಾಡುವಂತೆ ಎರೆಡು ತಿಂಗಳ ಸಂಬಳವನ್ನು ಪರಿಹಾರವಾಗಿ ಕೊಡುವ ಮತು ನಡೆಯುತ್ತಿತು.ಮಾತು ಮುಗಿಯುತ್ತಿದ್ದಂತೆ ನಾನು ಅಲ್ಲಿಂದ ಸೀದ ೫ ನೇ ಅಂತಸ್ತಿಗೆ ಬಂದೆ. ಹ್ಯಾಗೆ ಮುಂದೆ ಏನು ಮಾಡಬೇಕು ಎಂದು ತೋಚಲಿಲ್ಲ. ಅಕ್ಕನ ಮದುವೆಗೆ ಸಾಲ ಈಗ ಯಾರು ಕೊಡುತ್ತಾರೆ . ಅಮ್ಮನಿಗೆ ಹೇಗೆ ಮುಖ ತೋರಿಸುವುದು. ಬರೀ ಪ್ರಶ್ನೆಗಳೆ ಕಣ್ಣ ಮುಂದೆ . ಮೊದಲ ಬಾರಿ ನನ್ನ ಸಾಮರ್ಥ್ಯದ ಮೇಲೆ ನಂಬಿಕೆ ಹೊರಟು ಹೋಗಿತ್ತು. ನಾನು ಅಪ್ರಯೋಜಕಳು . ಹಾಗಿಲ್ಲದಿದ್ದಲ್ಲಿ ನನ್ನನ್ನು ಕೆಲಸದಲ್ಲಿ ಮುಂದುವರೆಸುತಿದ್ದರುನನ್ನಂಥವಳು ಭೂಮಿಯ ಮೇಲೆ ಯಾಕಿರಬೇಕು ಎಂಬ ಅನಿಸಿಕೆ ಬಂದ ಕೂಡಲೆ ನನಗೆ ಹೊಳೆದಿದ್ದು ಇಲ್ಲಿಂದ ಜಿಗಿದು ಪ್ರಾಣ ಬಿಡುವ ಯೋಚನೆ.ಅದನ್ನು ಕಾರ್ಯರೂಪಕ್ಕೆ ಇಳಿಸಲು ಕಟ್ಟೆಯ ಹತ್ತಿರ ಬಂದೆ ಸುತ್ತ ಯಾರೂ ಇರಲಿಲ್ಲ . ಸಾವಿನ ಭಯ ಆ ಕ್ಷಣ ಕಾಡಲೇ ಇಲ್ಲ. ಇನ್ನೆನು ಜಿಗಿಯಬೇಕು ಎಂದು ಗಟ್ಟ್ ಮನಸ್ಸು ಮಾಡಿಕೊಂಡೆ ಎನ್ನುವಾಗ .................ಹೆಗಲ ಮೇಲೆ ಕೈ ಒಂದು ಬಿತ್ತು . ಅದು ನನ್ನ ಸಹೋದ್ಯೋಗಿ ಅನೂ ಳದ್ದು."hey roopa what ru doing here. . come let us go down" ಎಂದಳು" ನೊ ಅನು ನಂಗೆ ಬದುಕಿರೋಕೆ ಇಷ್ಟ ಇಲ್ಲ . ಇವರು ಇದ್ದಕಿದ್ದಂತೆ ಹೀಗೆ ಮಾಡಿದರೆ ಹ್ಯಾಗೆ. ಒಂದೆ ಸಲ ಅಕಾಶಕ್ಕೇರಿಸಿ ಅಲ್ಲಿಂದ ಕೆಳಗೆ ತಳ್ಲಿಬಿಬಟ್ಟರಲ್ಲ ಪಾತಾಳಕ್ಕೆ" ಎಂದೆ"ಏ ರೂಪ ನಿಂಗೆ ಹುಚ್ಚು ಹಿಡಿದಿದೆಯಾ . ನಾನು ಒಂದು ಮಾತು ಕೇಳ್ತೀನಿ ಅದಕ್ಕೆ ಉತ್ತರ ಹೇಳಿ ನೀನು ಸಾಯಿ ಅಥವ ಬದುಕು ನಿನ್ನಿಷ್ಟ "ಎಂದಳು" ನೀನು ಅಮ್ಮನ ಹೊಟ್ಟೇಲಿ ಇದ್ದಾಗ ನಿಂಗೆ ಗೊತ್ತಿತ್ತ *** ಕಂಪೆನಿ ಇದೆ ಅಂತ? ನೀನು ಇದನ್ನೆ ನಂಬಿಕೊಂಡು ಹುಟ್ಟಿದ್ಯಾ? ಕಷ್ಟ ಎಲ್ಲರಿಗೂ ಇದ್ದದ್ದೇ .ಆದರೆ ಅದಕ್ಕೆ ಈ ರೀತಿಯ ಕೊನೆ ಬೇಕಾಗಿಲ್ಲ . ನನ್ನನ್ನೇ ನೋಡು ೩೦ ವರ್ಷ ಆಯ್ತು ಮದುವೆ ಇಲ್ಲ ಬಂದೋರೆಲ್ಲಾ ನಾನು ಚೆನಾಗಿಲ್ಲ ಅಂತ ಹೇಳಿ ದೂರ ಹೋಗ್ತಿದ್ದಾರೆ. ಹಾಗಂತ ನಾನು ಸಾಯೋದಿಲ್ಲ ಅಲ್ಲವಾ? ನಿಂಗೆ ಇನೂ ಚಿಕ್ಕ ವಯಸ್ಸು ನಿಮ್ಮ ಅಮ್ಮ ನಿನ್ನ ಮೇಲೆ ಏನೇನೂ ಆಸೆ ಇಟಿದ್ದಾರೆ ಅವ್ರೆಲ್ಲಾ ಏನು ಮಾಡಬೇಕು ಹೇಳು ?
ಅಷ್ಟು ಹೊತ್ತಿಗೆ ನನ್ನ ಆವೇಶ ಕುಗ್ಗಿತು ಏನಾದರೂ ಆಗಲಿ ಎಂದು ಕೆಳಗೆ ಬಂದೆ. ಅವಳ ಆ ಹೊತ್ತಿಗೆ ಬರದಿದ್ದರೆ ಇದನ್ನು ಹೇಳಲು ನಾನು ಬದುಕಿಯೇ ಇರುತ್ತಿರಲಿಲ್ಲ. ಅವಳು ಈಗ ಹೇಗಿದ್ದಾಳೋ ಎಲ್ಲಿದ್ದಾಳೋ ಗೊತ್ತಿಲ್ಲ .ಆದರೆ ಅವಳನ್ನಂತೂ ಮರೆಯಲಾಗುವುದಿಲ್ಲಹಾಗೂ ಹೀಗೂ ನಮ್ಮಕ್ಕನ ಮದುವೆಗೂ ಸುಸ್ಸೊತ್ರವಾಗಿ ನಡೆಯಿತು ಅದೇ ಆಗಸ್ಟನಲ್ಲಿ .
ಆದರೆ ಅಲ್ಲಿಂದ ಹೊರಗೆ ಬಂದ ಮೇಲೆ ನಾನನುಭವಿಸಿದ ಕಷ್ಟ ವಿದೆಯಲ್ಲ ಅದೇ ಇನ್ನೊಂದು ಕತೆ. ಅದನ್ನು ಇನ್ನೊಮ್ಮೆ ಬರೆಯುತ್ತೇನೆ
ನೆನ್ನೆ ಡೈರಿ ತೆಗೆದು ಓದಿದಾಗ ನಾನು ಅಟೆಂಡ್ ಮಾಡಿದ ಇಂಟರ್ ವ್ಯೂ ಗಳು ಅವಗಳ ಅಡ್ರೆಸ್ ನೋಡಿದಾಗ ಎಲ್ಲಾ ನೆನಪಾಯಿತು.

Thursday, April 24, 2008

ಅನಾಮಿಕ

ಹೆಸರಿಲ್ಲದವನಿಗೆನಾನು ನೆನ್ನೆ ನಿನ್ನ ನೋಡಿದೆ ೧೦ ವರ್ಷಗಳ ಈ ಸುಧೀರ್ಘ ಅವಧಿಯ ನಂತರ. ಸಮಯ ನನ್ನಲ್ಲೂ, ನನ್ನ್ ಜೀವನದಲ್ಲೂ ಏನೇನೋ ಬದಲಾವಣೆ ಮಾಡಿದೆ. ಹಾಗೆಯೆ ನಿನ್ನ ಮುಖದಲ್ಲೂ .ಹಿಂದಿನ ಆ ದಿನಗಳನ್ನು ಮತ್ತೊಮ್ಮೆ ನೆನಪಿಸಿಕೊಂಡರೆ ಈಗಲೂ ಕಿರುನಗೆ ಬರುತ್ತದೆ.ನನ್ನ ಜೀವನದಲ್ಲಿ ಆಗಷ್ಟೆ ವಸಂತ ಕಾಲ . ಸ್ಕೂಲಿಗೆ ಹೋಗುವುದು , ಹರಟೆ ಹೊಡೆಯುವುದು, ಜಗಳ ಮಾಡುವುದು ಇವಿಷ್ಟೆ ಪ್ರಪಂಚ ನಮಗೆಲ್ಲಾ.ಆ ದಿನ ಬಸ್ ಕೆಟ್ಟು ನಿಂತು ಹೋಗಿತ್ತು ಅದೇ ಗೋವರ್ಧನ ಸ್ಟಾಪ್ ನಲ್ಲಿ .ನಮಗೆಲ್ಲ ಮನೆಗೆ ಲೇಟ್ ಆಗಿ ಹೋಗಬಹುದಲ್ಲ ಎಂಬ ಖುಷಿ .ಆಗಲೆ ಗೆಳತಿಯೊಬ್ಬಳು "ಏಯ್ ನೋಡೆ ಅಲ್ಲಿ ಯಾರೊ ಹ್ಯಾಗೆ ತಿನ್ನೋ ಹಾಗೆ ನೋಡ್ತಾ ಇದಾನೆ " ಅಂದಳು .ಇನ್ನೊಬ್ಬಳು " ಅಯ್ಯೊ ಬಿಡ್ರೆ ಅವರಿರೋದೆ ನೋಡೋಕೆ " ಅಂತ ಹೇಳಿದಳುಆದರೂ ಕಳ್ಳ ಮನಸ್ಸು ನೋಡೆ ಬಿಡುವ ಎಂದು ತಿರುಗಿದೆ. ಅದನ್ನೆ ಕಾಯುತ್ತಿರುವ್ವನಂತೆ ನೀನು ಕಣ್ಣು ಮಿಟುಕಿಸಿದೆ (ಹೊಡೆದೆ). ಕೋಪದಿಂದ ರಾಸ್ಕಲ್ ಎಂದು ಅಂದಿದ್ದನ್ನು ನೀನು ಕೇಳಿಸಿಕೋಡೆಯೇನೂ . ಸೀದಾ ನನ್ನ ಬಳಿಯೇ ಬರುವುದೇ?ನನ್ನ ಸ್ನೇಹಿತೆ" ಯಾಕೆ ಏನಾದ್ರೂ ಚಪ್ಪಲೀಲಿ ಬೇಕಿತ್ತಾ " ಅಂತ ಕೇಳಿದಾಗ ,"ಓ ಅವರು ಕೊಟ್ಟರೆ ತಗೋಳಕ್ಕೆ ರೆಡಿ " ಆಂತ ಹೇಳಿದೆ ನನ್ನತ್ತ ಕೈ ತೋರಿ.ನಾನ್ಯಾಕೆ ಅಲ್ಲಿ ನಿಂತಿರಬೇಕು? ಸ್ನೇಹಿತೆಯ ಕೈ ಹಿಡಿದು ಕೊಂಡು ಸಿಕ್ಕ ಬಸ್ ಹತ್ತಿದೆ.ಅದರೆ ನೀನು ಮತ್ತೆ ಮತ್ತೆ ನನ್ನ ಹಿಂದೆ ಬಂದು ನಿಂತೆ ಹಿಂದೆ ತಿರುಗಿದಾಗಲೆಲ್ಲಾ ಒಂದು ಸ್ಮೈಲ್ ಕೊಡುತ್ತಿದ್ದ್ದೆ
ಅಷ್ಟೆ ಅಲ್ಲ ನಾನಿಳಿಯುವ ಸ್ಟಾಪ್ ನಲ್ಲೇ ಇಳಿದೆ .
ಬಸ್ ಸ್ಟಾಪ್ ನಿಂದ ನಮ್ಮ ಮನೆಯ ವರೆಗೂ ನನ್ನ ಹಿಂದೆ ಹಿಂದೆಯೆ ಬರುತ್ತಿದ್ದಾ ಗ ಹೆದರಿಕೆ ಜಾಸ್ತಿಯೇ ಆಗಿತ್ತು.ಆದರೆ ನೀನು ನಮ್ಮ ಮನೆಯ ಮುಂದೆಯೇ ಹೋಗಿ ಇನ್ನೂ ಕೆಳಗಡೆ ಹೋದಾಗ ತಿಳಿಯಿತು ನಿಮ್ಮ ಮನೆಯೂ ಅಲ್ಲೇ ಎಂದು .ಅಂದಿನಿಂದ ಶುರು ನಿನ್ನ ಕೀಟಲೆ ನಾನು ಸ್ಕೂಲಿಗೆ ಹೊರಡುವ ಸಮಯಕ್ಕೆ ನೀನೂ ಹಾಜಾರ್ ಮನೆಯ ಮುಂದೆ . ಕಲರ್ ಡ್ರೆಸ್ ಹಾಕಿದಾಗ ನಾನ್ಯಾವ ಬಟ್ಟೆ ಹಾಕುತ್ತಿದ್ದೇನೊ ನೀನೂ ಅದೇ ಕಲರ್ ಬಟ್ಟೆ ಹಾಕುತ್ತಿದ್ದೆ. ವಾಪಸ್ ಬರುವ ಸಮಯಕ್ಕೆ ನೀನು ಬರುತ್ತಿದೆ ಹಿಂದೆಯೇ. ಕಾಲೇಜ್ ಅಟೆಂಡ್ ಮಾಡುತ್ತಿದ್ದೆಯೋ ಇಲ್ಲವೋ. ನನ್ನ ಬರ್ತ್ ಡೆ ದಿನ ದೂರದಿಂದಲೆ ನನ್ನ ಉಡುಗೆಯ ಬಗ್ಗೆ ಬೊಂಬಾಟ್ ಎಂಬ ಸನ್ನೆ ಮಾಡಿದ್ದೆ.ಗೆಳತಿಯರ ರೇಗಿಸುವಿಕೆಯಿಂದ ನಾನು ನಿನ್ನನ್ನು ಇಷ್ಟ ಪಡುತ್ತಿದ್ದ್ದೇನೆಂದು ಅಂದುಕೊಂಡೆ. ನಾವೆಲ್ಲಾ ನಿನಗೆ ಲಾಲ್ ಅಂತ ಹೆಸರಿಟ್ಟಿದ್ದೆವು (ಲಾಲ್ ಅಂದರೆ ಕೆಂಪು ಅಂತ. ನೀನು ಕೆಂಪು ಬಟ್ಟೆ ಹಾಕಿದ್ದೆ ಅಂದು ಮೊದಲ ದಿನ).ಹೀಗೆ ಗೊತ್ತಿಲ್ಲದೆ ನೀನು ನನ್ನ ನಾನು ನಿನ್ನ ಕಾಯಲು ಶುರು ಮಾಡಲಾರಂಭಿಸಿದೆವು . ಒಮ್ಮೆಯೂ ನಿನ್ನೊಡನೆ ಮಾತಾಡಿರಲಿಲ್ಲ ನಾನು. ನೀನು ಮಾತಾಡಲು ಬಂದಾಗಲೆಲ್ಲಾ ಓಡಿ ಹೋಗುತ್ತಿದ್ದೆ ನಾನು. ಮನೆಯ ಪರಿಸ್ಥಿತಿ ನನ್ನನ್ನು ದುಡುಕದಂತೆ ತಡೆದಿತ್ತು.
ಕೆಲವು ದಿನಗಳ ನಂತರ ಅಂದು ದಿನಸಿ ಅಂಗಡಿಯಲ್ಲಿ ಏನೂ ತೆಗೆದುಕೊಳಲು ಬಂದೆ ನಾನು . ಅಲ್ಲೆ ನೀನು ಕಾಣಿಸಿದೆ . ಹೆದರಿಕೆಯಿಂದ ಹೃದಯ ಹೊಡೆದುಕೊಂಡಿತು. ನಿನ್ನ ಜೊತೆಯಲ್ಲಿ ನಿಮ್ಮ ತಂದೆ ನಿಂತಿದ್ದರು. ಅವರಿಗೆ ಏನೂ ಹೇಳಿ ಓಡಿ ಬಂದವನೇ ." ನಮ್ಮ ಅಪ್ಪಂಗೆ ಬಾಂಬೆಗೆ ಟ್ರಾನ್ಸ್ಫೆರ್ ಆಗಿದೆ . ಇದು ಅಲ್ಲಿನ ಆಡ್ಡ್ರೆಸ್ . ನಾನು ಮಾತಾಡೋಕೆ ಬಂದಾಗಲೆಲ್ಲ ತುಂಬ ಹೆದರ್ಕೋತಿದ್ದ್ರಿ ನೀವು . ನಂಗೆ ನೀವಂದ್ರೆ ತುಂಬ ಇಷ್ಟ . ಐ ಲೌ ಯು " ಅಂತ ಹೇಳಿ ಯಾವುದೋ ಮಾಯ್ದಲ್ಲಿ ಕೈಗೆ ಆ ಚೀಟಿ ತುರುಕಿ ಓಡಿ ಹೋಗಿದ್ದೆ .ನಾನೋ ಹೆದರಿಕೆಇಂದ ಆ ಚೀಟಿಯನ್ನು ಅಲ್ಲೇ ಬೀಳಿಸಿ ಮನೆಗೆ ಓಡಿದ್ದೆ.ಅದಾದ ಮೇಲೆನೀನು ಕಾಣಲಿಲ್ಲನಾವೂ ಅಲ್ಲಿಂದ ಬೇರೆ ಊರಿಗೆ ಹೋದೆವು .ಅದಾದ ಮೇಲೆ ನನಗೆ ನಿನ್ನ ನೆನಪು ಬರಲೇ ಇಲ್ಲ. ಬಂದರೂ ಸಹಾ ಅದು ಕೇವಲ ಆಕರ್ಷಣೆ ಮಾತ್ರ ಅಂದುಕೊಂಡು ನನ್ನ ಗುರಿ ಸಾಧಿಸುವತ್ತ ಹೆಜ್ಜೆ ಹಾಕಿದೆ .ಈಗ ಮದುವೆಯೂ ಆಗಿದೆ ಮಗುವೂ ಇದೆ.
ಆದರೆ ನೆನ್ನೆ ನೀನು ಕಾಣಿಸಿದೆ . ಇವರಿಗೆ ನಿನ್ನ ವಿಷ್ಯ ಗೊತ್ತಿದೆ . ನಾನು ನಿನ್ನನ್ನು ತೋರಿಸಿದೆ.
ಅಷ್ಟರಲ್ಲಿ ನಿನ್ನ ಪಕ್ಕದಲ್ಲಿ ಮತ್ತೊಬ್ಬರು ಕಾಣಿಸಿಕೊಂಡಳು ಅವಳು ನಿನ್ನ ಹೆಂಡತಿ ಇರಬಹುದೆನಿಸಿತು.
ಅವಳ ಕಂಕುಳಲ್ಲೂ ಮಗು. ನಿನ್ನ ಮುಖದಲ್ಲಿ ನನ್ನನ್ನು ಕಂಡು ಗಲಿಬಿಲಿ. ಕೂಡಲೆ ಅಲ್ಲಿಂಡ ಓಟ ಕಿತ್ತೆ
ಜೀವನ ಎಷ್ಟು ವಿಚಿತ್ರ ಅಲ್ಲವೇ?
ಇತೀ ನಿನ್ನಒಂದು ಕಾಲದ ಸಹ ಪ್ರಯಾಣಿಕಳು
(ಇದು ವಿಕದ ಸಿಂಪ್ಲಿಸಿಟಿ ಪೇಜಿನ ಈ ಗುಲಾಬಿಯು ನಿನಗಾಗಿ ಯಿಂದ ಪ್ರೇರಿತ, ಇದು ಯಾರ ಕತೆ ಎಂದುದಕ್ಕೆ ಉತ್ತರ " ಎಲ್ಲರ ಕತೆ" )

RajanikaMt

ಹೋದವಾರ ಸೇಲಮ್ ನಿಂದ ಬೆಂಗಳೂರಿಗೆ ಬರುತ್ತಿದ್ದೆವುಕಾವೇರಿ ಪಟ್ಟಣಮ್ ನ ಬಳಿಯಲ್ಲಿ ಟೀ ಕುಡಿಯಲು ಕಾರ್ ನಿಲ್ಲಿಸಿದ್ದೆವು.ಟೀ ಕುಡಿದು ಹೊರಗೆ ಬರುತ್ತಿದ್ದ್ದಂತೆನಮ್ಮ ಕೆ.ಎಸ್.ಅರ್.ಟಿ.ಸಿ ಶಿವಮೊಗ್ಗ ಹರಿಹರ ಕ್ಕೆ ಹೋಗುವ ಬಸ್ ಬಂದಿತು
ಆ ಪ್ರದೇಶದವನೇ ಇರಬೇಕು ಒಬ್ಬಏನೋ ಮೂಟೆಯನ್ನು ಹೊತ್ತು ತಂದಿದ್ದಬಸ್ ಕಂಡಕ್ಟರ್ ಕರ್ನಾಟಕದವನು ಆ ಮೂಟೆಯನ್ನು ಬಸ್ ಮೇಲಿಡಬೇಕೆಂದು ಹೇಳುತ್ತಿದ್ದಈತ ಅದನ್ನು ಬಸ್ ನಲ್ಲಿಡಬೇಕೆಂದು ಹಠ ಮಾಡುತ್ತಿದ್ದ
ಕಂಡಕ್ಟರ್ ಒಪ್ಪದಾಗಏನೋ ತಮಿಳಿನಲ್ಲಿ ಬೈಯ್ತಿದ್ದ(ಇವರು ಹೇಳಿದ್ದು ನೀವು ಕನ್ನಡಾದವರು ಎಲ್ಲಾವುದಕ್ಕೂ ಗಲಾಟೆ ಮಾಡ್ತೀರ. ಮೊನ್ನೆ ನೀರು ಕೊಡಲ್ಲ ಅಂದಿರಿ, ನೆನ್ನೆ ಜಾಗ ಕೊಡಲ್ಲ ಅಂದ್ರಿ . ಈಗ ಬಸ್ ನಲ್ಲಿ ಜಾಗ ಬಿಡಲ್ಲ ಅಂತೀರಾ? ಅಂತ )ಅಷ್ಟೆ ಅಲ್ಲದೆ ವಾಂಗೊ, ವಾಡ , ಅಂತ ಎಲ್ಲಾ ಸುತ್ತಮುತ್ತಲ್ಲಿದ್ದ ತಮಿಳಿನ ಜನರನ್ನ ಕರೆದು ಬಸ್ನ ಹ್ಯಾಗೊ ಮುಂದೆ ತಗೋತೀಯ್ ನೋಡೋಣ ಎಂದು ಸವಾಲ್ ಹಾಕಿದ. ಕನಡಕಾರ್ಂಗಳ್ ಆಂತ ಬೈತಾನೆ ಇದ್ದ. ಸುತ್ತ ಮುತ್ತಲಿನ ಎಲ್ಲಾ ಜನ ಅವನ ಬೆಂಬಲಕ್ಕೆ ನಿಂತರು.ಪಾಪ ಕಂಡಕ್ಟರ ಹಾಗು ಡ್ರೈವರ್ ಅವರನ್ನು ರಮಿಸುವ ಪ್ರಯತ್ನ ಮಾಡುತ್ತಿದ್ದರು.ನಾವು ಅವರ ಪರವಾಗಿ ಮಾತಾಡೋಣ ಅಂದುಕೊಳ್ಳುತ್ತಿದ್ದಂತೆ"ಅಂಗೆ ಪಾರ ಡಾ . ಕರ್ನಾಟಕ ವಂಡಿ" ಅಂತ ಒಂದಷ್ಟು ಜನ ನಮ್ಮ ಕಾರಿನ ಬಳಿ ಬಂದರು (ನಮ್ಮದು ಕರ್ನಾಟಕ ರಿಜಿಸ್ತ್ರೇಶನ್)ಕೂಡಲೆ ಗಾಡಿ ಸ್ಟಾರ್ಟ್ ಮಾಡಿಕೊಂಡು ಅಲ್ಲಿಂದ ಜಾಗ ಖಾಲಿ ಮಾಡಿದೆವು.ಆಮೇಲಾನಾಯ್ತೊ ಅಂತ ತಿಳಿಯಲಿಲ್ಲ
ವಿವಾದದ ಸಮಯದಲ್ಲಿ ಕೊಂಚ ವಿರೋಧ ತೋರಿಸುವ ನಮ್ಮ ಚಳುವಳಿಕಾರರಿಗೆ ಒದೆಯಿರಿ ಎನ್ನುವ ರಜನಿಕಾಂತ್ ತಮ್ಮ ಬೇಳೆ ಬೇಸಿಕೊಳ್ಳಲು ಗಡಿ ನೆಪ ಮಾಡುವ ಇಂತಹ ಅವರ ತಮಿಳುನಾಡಿನ ಗಲಭೆಕೋರರಿಗೆ ಏನು ಮಾಡಬೇಕೆನ್ನುತ್ತಾರೆ?

Sunday, April 20, 2008

" ಹೌದಾ ಅಹಲ್ಯಾ . ನಾನೆಷ್ಟು ಲಕ್ಕಿ ಗೊತ್ತಾ. actually this honour was expected a long back. ಹೋಗಲಿ ಬಿಡು ಈಗಾದರೂ ಪ್ರಶಸ್ತಿ ಬಂತಲ್ಲಾ" ಪ್ರಜೇಶ್ ಮಾತನಾಡುತ್ತಲೇ ಇದ್ದ ಫೋನ್ ನಲ್ಲಿಗೌರಿ ಅಚ್ಚರಿ ಇಂದ ಅವನನ್ನು ನೋಡಿದಳು ಬೇರೆಯವರೊಡನೆ ಹೀಗೆ ನಗು ನಗತ್ತಾ ಮಾತನಾಡುವ ಇವನಿಗೆ ಹೆಂಡತಿಯ ಜೊತೆ ಮಾತನಾಡುವಾಗ ಏನಾಗುತ್ತೋ . ಸದಾ ಸಿಡುಕು ಮುಖ ತನ್ನೊಡನೇ ಮಾತ್ರ. ಆದರೂ ಕೇಳಿದಳು " ಏನ್ರಿ ನಿಮಗೆ ಪ್ರಶಸ್ತಿ ಬಂತಾ. ? ಯಾವುದಕ್ಕೆ"
" ಏಯ್ ನೀನ್ಯಾಕೆ ಇಲ್ಲಿಗೆ ಬಂದೆ . ಚಂಪಾ ಇಸ್ಕೊ ಕ್ಯೋ ಬೇಜಾ ಇದರ್? ರೂಮ್ ಸೆ ಬಾಹರ ನಹಿ ಆನಾ ಚಾಹಿಯೆ ಯೆ" ಪ್ರಜೇಶ್ ಚಂಪಾಳನ್ನು ಕರೆದು ಬೈದ. ಚಂಪಾ ಅವರ ಮನೆಯ ಆಳು.
" ರೀ ಯಾಕ್ರಿ ನಂಗೆ ಹೀಗೆ ಗೃಹ ಬಂಧನ . ನಾನೇನು ತಪ್ಪು ಮಾಡಿತೀನಿ ಅಂತ ಈ ತರಹ ಶಿಕ್ಷೆ?" ಗೌರಿ ಗೋಗರೆದಳು" ಏಯ್ ಗೌರಿ ನಾನು ಫೇಮಸ್ ಇಂಗ್ಲೀಶ್ ಆಥರ್. ಹೊ!ಚೆ! ನಿಂಗೆಲ್ಲಿ ಅರ್ಥ ಆಗುತ್ತೆ . ನಾನು ಪ್ರಸಿದ್ದ ಇಂಗ್ಲೀಶ್ ಲೇಖಕ . ನೀನೊ ಹಳ್ಳಿ ಗುಗ್ಗು ಇಂಗ್ಲಿಷನಲ್ಲಿ ಎಷ್ಟು ಅಕ್ಷರಗಳಿವೆ ಅಂತಾನೂ ಗೊತ್ತಿರದವಳು .ನಿನ್ನಂತ ಗುಗ್ಗು ನನ್ನ ಹೆಂಡತಿ ಅಂದ್ರೆ ನನ್ನ ಪ್ರೆಸ್ಟೀಜ್ ಏನಾಗಬೇಕು? ಅಂದ್ರೆ ನನ್ನ ಅಂತಸ್ತು ಏನಾಗಬೇಕು? ನಂಗೆ ಬೆಸ್ಟ್ ಆಥರ್ ಅಂತ ಅವಾರ್ಡ್ ಬಂದಿದೆ ಅದಕ್ಕೆ ನೂರಾರು ಫೋನ್ ಬರುತ್ತೆ ಸಾವಿರಾರು ಜನ ನನ್ನ ಅಭಿನಂದಿಸಕ್ಕೆ ಬರ್ತಾರೆ ನಿನ್ನ ನೋಡಿದರೆ ಅಷ್ಟೆ . ಅದಕ್ಕೆ ನೀನು ನಿನ್ನ ರೂಮ್ ಬಿಟ್ಟು ಹೊರಗೆ ಬರಬಾರದು. ಚಂಪಾ ನಿಂಗೆ ಎಲ್ಲಾ ವ್ಯವಸ್ತೆ ಮಾಡಿಕೊಡ್ತಾಳೆ ಊಟ ತಿಂಡಿ ಎಲ್ಲಾ ಮೇಲೆನೆ ಕೆಳಗಡೆ ಬಂದ್ರೆ ಸರಿ ಇರೋದಿಲ್ಲ."ಚಂಪಾಳತ್ತ ತಿರುಗಿ "ಲೇ ಜಾವ್ ಇಸ್ಕೊ" ಎಂದಚಂಪಾ ಅವಳನ್ನು ಅಕ್ಷರಶ ಎಳೆದುಕೊಂಡೇ ರೂಮಿಗೆ ಕರೆದು ಕೊಂಡು ಬಂದಳು"ದೇಖೊ ತುಮ್ ಇದರ್ ಸೆ ಹಿಲ್ನಾ ಮತ್. ಅಗರ್ ತುಮ್ ಬಾಹರ ಆಯೆ ತೋ ಮೈ ಚುಪ್ ನಿ ರಹ್ನೆವಾಲಿ ಹೂ" " ನೋಡಮ್ಮ ನಂಘೆ ನೀನೇನು ಮಾತಾಡ್ತಿದ್ದೀಯ ಅಂತ ಗೊತ್ತಾಗಲ್ಲ . ಕನ್ನಡದಲ್ಲಿ ಮಾತಾಡು . ನಂಗೆ ಅದೊಂದು ಬಿಟ್ಟಾರೆ ಬೇರೇನು ತಿಳಿಯಲ್ಲ" ಗೌರಿಯ ಬೇಡಿಕೆಗೆ ಅಸಡ್ಡೆಯ ನೋಟ ಬೀರಿ ಹೊರಟು ಹೋದಳು ಚಂಪಾ. ಹೊರಗಡೆಯಿಂದ ಚಿಲಕ ಹಾಕಿದ್ದು ಕೇಳಿಸಿತು."ತಾನು ಗುಗ್ಗು?"ಪ್ರಶ್ನಿಸಿಕೊಂಡಳು ಗೌರಿ. ನೆನಪು ಹಿಂದೆ ಓಡಿತು
ನೋಡಿ ರಾಯರೇ ಗೌರಿ ಎಲ್ಲಾ ವಿಷ್ಯದಲ್ಲೂ ಚುರುಕು ಆದರೆ ಇಂಗ್ಲೀಶ್ ಮತ್ತೆ ಹಿಂದಿನಲ್ಲಿ ಮಾತ್ರ ಸ್ವಲ್ಪ ......... "ಸುಮ್ಮನಿರ್ರಿ ಮೇಷ್ಟ್ರೆ ಅವಳು ಸ್ವಲ್ಪ ಅಲ್ಲ ಪೂರ್ತಿ ಸೊನ್ನೆ. ಎಷ್ಟು ಸಲ ಅಂತ ಏಳನೆ ತರಗತಿ ಪರೀಕ್ಶೆಗೆ ಕೂರೋದು . ಇವಳ ಜೊತೆಗಾತಿಯರೆಲ್ಲಾ ಆಗಲೆ ಹತ್ತನೇ ತರಗತಿ ಮುಗಿಸಿ ಕಾಲೇಜ್ ಮೆಟ್ಟ್ಲ್ಯ್ ಹತ್ತಿದ್ದಾರೆ. ಅಬ್ಬಾ ನಮಮ್ ಕುಟುಂಬದಲ್ಲಿ ಯಾವಾಗಲೂ ದಡ್ಡ ಶಿಖಾಮಣಿ ಹುಟ್ಟಿರಲಿಲ್ಲ. ಮೊದಲು ಇವಳಿಗೊಂದು ಮದುವೆ ಮಾಡಿ ಕೈ ತೊಳೆದು ಕೊಂಡರೆ ಸಾಕು ಅಂತ ಅನ್ನಿಸುತ್ತಿದೆ"ರಾಯರೆ ನೀವು ತಪ್ಪು ತಿಳಿದುಕೊಂಡಿದ್ದೀರಾ ಗೌರಿ ದಡ್ಡ ಶಿಖಾಮಣಿ ಅಲ್ಲ ಹಾಗಿದ್ದರೆ ಗಣಿತದಲ್ಲಿ ಅವಳು ನೂರಕ್ಕೆ ನೂರು ಅಂಕ ಪಡೀತಾ ಇರಲಿಲ್ಲ.ಎಲ್ಲಾರಿಗೂ ಕಷ್ಟದ ವಿಜ್ನಾನದ ಸೂತ್ರಗಳನ್ನು ಅರಳು ಹುರಿದ ಹಾಗೆ ಹೇಳುತ್ತಾಳೆ. ಈ ವಯಸ್ಸಿನಲ್ಲೇ ಒಳ್ಳೊಳ್ಳೇ ಕತೆ ಕವನ ಬರೀತಾಳೆಏನಿದ್ರೇನು ಪ್ರಯೋಜನ . ನನ್ನ ತಂಗಿ ಮಗನಿಗೆ ಇವಳನ್ನು ಕೊಡೋಣ ಅಂತ ಆಸೆ ಇತ್ತು . ಅವನೋ ಇಂಗ್ಳಿಷ ನಲ್ಲಿ ಅದೇನೊ ಪಿ . ಎಚ್ ಡಿ ಮಾಡಿದಾನೆ. ಇವಳನ್ನು ಮದುವೆ ಆಗೋದಂತೂ ದೂರದ ಮಾತು." ನಿಟ್ಟುಸಿರಿಟ್ಟರು " ಇನ್ನು ಮೇಲೆ ಶಾಲೆಗೂ ಕಳಿಸೋದು ಬೇಡ ಅಂತ ಅನ್ಕೊಂಡಿದೀನಿ..........""ರಾಯರೆ . ಹೋಗಲಿ ಅವಳನ್ನು ಸ್ಕೂಲಿಗೆ ಕಳಿಸೋದಿಲ್ಲ ಅಂದ್ರೆ ಪರವಾಗಿಲ್ಲ . ಅವಳ ಸಾಹಿತ್ಯಾಭಿಲಾಷೆಗೆ ನೀರಾನ್ನಾದರೂ ಎರೆಯೋಣ. ಅವಳಿಗೆ ಒಳ್ಳೆ ಸೃಷ್ತಿ ಕಲೆ ಇದೆ. ಅದನ್ನ ಅವಳಲ್ಲಿ ಇನೂ ಬೆಳೆಸೋಣ ಅಂತ ಅನ್ಕೊಂಡಿದ್ದೀನಿ. "


"ಆಯ್ತು ಮೇಷ್ಟೆ ನಿಮ್ಮಿಷ್ಟ ನಿಮ್ಮ ಶಿಷ್ಯೆ . ನೀವೆ ತಿದ್ದಿ ತೀಡಿ ಅವಳಿಗೊಂದು ರೂಪು ಕೊಡಿ" ಮಾತು ಮುಗಿದಿತ್ತು . ಗೌರಿ ಶಾಲೆಗೆ ತಿಲಾಂಜಲಿ ಇಟ್ಟು ಮೇಷ್ಟ್ರಲ್ಲಿ ಕನ್ನಡವನ್ನು ಇನ್ನೂ ಹೆಚ್ಚಾಗಿ ಅಧ್ಯಯನ ಮಾಡತೊಡಗಿದಳು. ಚಿನ್ನಕ್ಕೆ ಪುಟವಿಟ್ಟಂತೆ ಅವಳ ಕನ್ನಡ ಜ್ನಾನ ಇನ್ನೂ ಬೆಳೆಯತೊಡಗಿತು.


ಅದೇ ವೇಳೆಗೆ ಪ್ರಜೇಶ್ ಗೌರಿಯ ಸೋದರತ್ತೆಯ ಮಗ ಊರಿಗೆ ಬಂದಿದ್ದ . ಮದುವೆಯ ಪ್ರಸ್ತಾಪನೆಗೆ ಮೊದಲು ಒಪ್ಪಲಿಲ್ಲ ನಂತರ ಅದೇನಾಯ್ತೋ ಒಪ್ಪಿಕೊಂಡ.


ಮದುವೆ ಆಯಿತು. ಮೊದಲ ರಾತ್ರಿಯೆ ಗೌರಿ ಕೇಳಿದಳು ." ರೀ ನಂಗೆ ಇಂಗ್ಲೀಶ್ ಹೇಳಿಕೊಡಿ"


" ಗೌರಿ ಕೆಲವರಿಗೆ ಏನೂ ಮಾಡಿದರೂ ಕೆಲವೊಂದು ವಿಷ್ಯಗಳು ತಲೆಗೆ ಹೋಗುವುದಿಲ್ಲ . ಅಷ್ಟಕ್ಕೂ ನಿಂಗ್ಯಾಕೆ ಇಂಗ್ಲೀಷ್ . ನಾನೆ ಇದ್ದೀನಲ್ಲ. ಇಂಗ್ಲೀಶ್ ಪ್ರೊಫೆಸ್ಸರ್. ನೀನೇನೊ ಕತೆ ಕಾದಂಬರಿ ಬರೀತಿಯಲ್ಲ . ಬರೀ ಯಾರಿಗೆ ಗೊತ್ತು ಈಗ ನಗೋ ಹಾಗಿದ್ರೂ ಮುಂದೆ ಚೆನಾಗಿ ಬರೆದ್ರೂ ಬರೀಬಹುದು"


ಹೀಗೆ ಸಾಗಿದ ಅವರ ಸಂಸಾರ ಮುಂದೆ ಡೆಲ್ಲಿಗೆ ಬಂದಿತು .


ಕಾಣದ ಊರು. ಕೇಳದ ಭಾಷೆ . ಕಂಗಾಲಾದಳು ಗೌರಿ. ಕನ್ನಡ ಬಿಟ್ಟರೆ ಬೇರೆ ಭಾಷೆ ಬಾರದ ಆಕೆಗೆ ಬರಹವೊಂದೇ ಜೀವ ವಾಯಿತು. ಪ್ರಜೆಶ್ಗೆ ತೋರಿಸುವುದು ಅವನು ಚೆನ್ನಾಗಿಲ್ಲ ಎನ್ನುವುದು ನಿರಂತರವಾಗರತೊಡಗಿದವು. ಏನೆ ಆದರೂ ಬರೆಯುವದನ್ನು ನಿಲ್ಲಿಸದಿರುವಂತೆ ಹೇಳಿದ


ನಂತರದ ದಿನಗಳಲ್ಲಿ ಪ್ರಜೇಶ್ ಬೆಳೆಯತೊಡಗಿದ ಪ್ರಖ್ಯಾತ ಬರಹಗಾರನಾಗಿ ಹೆಸರು ಪಡೆದ. ಅವನನ್ನು ಸಂದರ್ಶಿಸಲು ನೂರಾರು ಜನ ಬರತೊಡಗಿದರು.


ಹಾಗಾಗಿ ಗೌರಿಯನ್ನು ಮೇಲೆ ಇರಲು ಆಜ್ನೆ ಮಾಡಿದ್ದ . ಅವಳು ಹಾಗೆ ಮಾಡದಾಗ ಚಂಪಾ ಎಂಬ ಹೆಂಗಸಿನ ಕಣ್ಗಾವಲಿನಲ್ಲಿ ಇರಿಸಿದ. ಅವನು ಇವಳೊಡನೆ ಪ್ರೀತಿಯಿಂದ ಇರುತ್ತಿದ್ದುದ್ದು ಎರೆಡೇ ಸಂಧರ್ಭದಲ್ಲಿ . ಒಂದು ಅವಳೊಡನೆ ಸರಸದಿಂದ ಇರುವಾಗ . ಹಾಗು ಅವಳ ಬರಹ ಕತೆ ಓದುವಾಗ. ಅವರ ಸಂಭಂಧ ಬಿರುಕು ಬಿಡತೊಡಗಿದ್ದವು. ಸರಸಕ್ಕೂ ಸಮಯ ಸಿಗುತ್ತಿರಲಿಲ್ಲ ಅವನಿಗೆ. ಕೆಲವೊಮ್ಮೆ ರಾತ್ರಿ ಮನೆಗೆ ಬರುತ್ತಿರಲಿಲ್ಲ


ಬಾಗಿಲು ತೆಗೆದ ಸದ್ದಾದಾಗ ನೆನಪಿನ ರೈಲಿನಿಂದ ಕೆಳಗಿಳಿದಳು.


ಹೊರಗಡೆ ಗದ್ದಲ ಬಹಳ ಜನ ಬಂದಿರುವಂತಿತ್ತು. ಚಂಪಾ ಊಟ ತಂದಿದ್ದಳು. ಅವಳು ಮತ್ತೇನೋ ತರುವುದುಕ್ಕೆ ಹೋದಾಗ ರೂಮಿನ ಹೊರಗಡೆ ಬಂದು ನಿಂತಳು ಅಬ್ಬ ದೊಡ್ಡ ಪಾರ್ಟಿ ಅಂತನ್ನಿಸುತ್ತಿತ್ತು.


ಎಲ್ಲರೂ ಪ್ರಜೇಶನ ಸುತ್ತಾ ಸೇರಿ ಏನೂ ಕೇಳುತ್ತಿದ್ದರು . ಸಂದರ್ಶನ ವೇನೊ ಎಂದು ಕೊಳ್ಳುತ್ತಿದ್ದಂತೆ. ಯಾರೊ ಒಬ್ಬ ಅವಳತ್ತ ಕೈ ತೋರಿ ಏನೂ ಕೇಳುತ್ತಿದ್ದ . ಪ್ರಜೇಶ್ ಅವರಿಗೆಲ್ಲ ತನ್ನ ಬಗ್ಗೆ ಏನೊ ಹೇಳುತ್ತಿದ್ದಂತೆ ಅನ್ನಿಸಿತು. ಎಲ್ಲರೂ ಅವಳತ್ತ ತಿರುಗಿ ನೋಡಿ ಏನೊ ಹೇಳಿದರು . ಆ ಜನ್ರ ನಡುವಲ್ಲಿ ಒಬ್ಬ ಮಾತ್ರ ತನ್ನನ್ನೆ ನೋಡುತ್ತಿದ್ದಂತೆ ಅಲ್ಲಿ ನಿಲ್ಲಲಾಗದೆ ಮತ್ತೆ ರೂಮಿಗೆ ಬಂದು ಕುಳಿತಳು.


ತಾನು ಈ ಸಮುದ್ರದಲ್ಲಿ ಬದುಕಲು ಆಗುತ್ತದೆಯೇ? ಹೇಳಿಕೊಳ್ಳುವುದಕ್ಕೆ , ಮನದ ದುಗುಡ ತೋಡಿಕೊಳ್ಳುವುದಕ್ಕೆ ತನ್ನದೇ ಆದ ಒಂದು ಜೀವವೂ ಇಲ್ಲ. ದೂರದ ಅಪ್ಪ ಹಾಗು ಅಮ್ಮನನ್ನು ನೆನೆಸಿಕೊಂಡು ಅಳತೊಡಗಿದಳು. ಪ್ರಜೇಶ್ ಕೆಲಸಕ್ಕೆ ಹೋದರೆ ಜೊತೆಗೆ ಎಂದೂ ಯಾರೂ ಇಲ್ಲ . ಆ ಚಂಪಾ ಮಾಡಿ ಹಾಕುವ ಆಡಿಗೆ ಅವಳಿಗೆ ಕೊಂಚವೂ ಹಿಡಿಸುತ್ತಿರಲಿಲ್ಲ. ಆಡಿಗೆ ಮಾಡಿಟ್ಟು ಬೀಗ ಹಾಕಿಕೊಂಡು ಮನೆಗೆ ಹೋದರೆ ಚಂಪಾ ಬರುತ್ತಿದ್ದುದ್ದೇ ರಾತ್ರಿಗೆ . ಅಲ್ಲಿಯವರೆಗೆ ಮತ್ತೆ ಒಂಟಿ. ಹೊರಗಡೆಯ ಬೆಳಕನ್ನು ಕಂಡೇ ಬಹಳ ದಿನಗಳಾಗಿದ್ದವು.


ಕೆಳಗಿನ ಗದ್ದಲ ನಿಂತು ಹೋಗಿತ್ತು . ಅದೇನೊ ಚಂಪ ರೂಮ್ ಬೀಗ ಹಾಕಿರಲಿಲ್ಲ . ಹೊರಗಡೆ ಬಂದು ನೋಡಿದರೆ ಯಾರೂ ಕಾಣಲಿಲ್ಲ. ಹೋ ಎಲ್ಲಾ ಮುಗಿದಿರಬೇಕನ್ನಿಸಿತು.


ಕೆಳಗೆ ಬಂದು ಪ್ರಜೇಶನ ರೂಮಿಗೆ ಬಂದಳು . ಕಾಪಾಟಿನಲ್ಲಿ ಮನೆಯ ಇನ್ನೊಂದು ಕೀ ಇದ್ದಿದು ಅವಳಿಗೆ ತಿಳಿದಿತ್ತು. ಕೀ ತೆಗೆದುಕೊಂಡು ಮನೆಯ ಬಾಗಿಲು ತೆಗೆದಳು .


ಅವಳ ಸಂತಸಕ್ಕೆ ಪಾರವೇ ಇರಲಿಲ್ಲ. ಮುಂದಿನ ಹೂದೋಟದಲ್ಲಿ ಬಣ್ಣದ ಬಣ್ಣಾದ ಹೂಗಳು. ಅಗಾಧ ಬೆಳಕಿನ ರಾಶಿ. ಹುಲ್ಲಿ ಹಾಸು. ತೋಟದಲ್ಲಿ ಒಮ್ಮೆ ಸುತ್ತಾಡಿ ಬಂದಳು. ಅವಳೇ ಇಂದು ರಾಣಿಯಾಗಿದ್ದಳು. ಪುಟ್ಟ ಹುಡುಗಿಯಂತೆ ಕುಣಿದಳು. ಕುಣಿಯುತ್ತಿದ್ದಾಗಲೆ ಅವಳ ಮನದಲ್ಲಿ ಒಂದು ಕವನ ಮೂಡಿತು


ಸೀದ ಹೋಗಿ ಪುಸ್ತಕ ಹಾಗು ಪೆನ್ ತಂದು ತನ್ನ ಮನದ ಭಾವನೆಗಳನ್ನು ಕಾಗದದಲ್ಲಿ ಮೂಡಿಸತೊಡಗಿದಳು.


ಪಂಜರದ ಗಿಣಿ ಹಾರಬಯಸಿ


ಹಾಕಿದೆ ಏಣಿ ಸ್ವತಂತ್ರವರಸಿ


ಪ್ರೀತಿ ಮನದ ನೆಲೆಯ ಹುಡುಕಿ


ಮೂಲ ಮರೆತು ವಲಸೆ ಹೊರಟು


ಪಂಜರದಿ ಬಂಧಿಯಾಯಿತು

ಕತೆಯಾಗಿ

ಭಾವನೆಗಳ ಭರಪೂರದಲ್ಲಿ ಕಳೆದು ಹೋಗಿದ್ದವಳಿಗೆ ಗೇಟ್ ತೆಗೆದು ಯಾರೋ ತನ್ನೆದುರಲ್ಲಿ ನಿಂತಿದ್ದು ತಿಳಿಯಲ್ಲಿಲ್ಲ

ತನ್ನ ಮೇಲೆ ಬಿದ್ದ ನೆರಳನ್ನು ನೋಡಿ ತಲೆ ಎತ್ತಿದಳು ಆಗಲೆ ಕೆಳಗಡೆ ತನ್ನತ್ತಲೇ ನೋಡುತ್ತಿದ್ದವನು ಎಂದು ತಿಳಿಯಿತು. ಗಾಬರಿಯಿಂದ ಪುಸ್ತಕ ಹಾಗು ಪೆನ್ ಕೆಳಗಡೆ ಬೀಳಿಸಿ ಒಳಗಡೆ ಓಡುತ್ತಿದ್ದ್ದಂತೆ

" ನಿಮ್ಮ ಪುಸ್ತಕ ಕೆಳಗೆ ಬಿದ್ದಿದೆ "

ದ್ವನಿ ಬಂದತ್ತ ತಿರುಗಿದಳು. ಕನ್ನಡ ತನ್ನ ಕನ್ನಡವನ್ನು ಉಲಿಯಬಲ್ಲ ಮತ್ತೊಂದು ದನಿ ಇಂದು ಅವಳಿಗೆ ಸಿಕ್ಕಿತು.

ಅವಳಿಗರಿವಿಲ್ಲದೆ ಕಾಲುಗಳು ಆ ದನಿಯತ್ತ ಓಡಿದವು.

" ನೀವು .............ಕರ್ನಾಟಕದವರಾ?" ಸಂತಸಭರಿತ ದನಿಯಲ್ಲಿ ಕೇಳಿದಳು

" ಹೌದು ನಾನು ಅನಂತ್ ಅಂತ ಅರುಣದಯ ಪತ್ರಿಕೆಯ ವರದಿಗಾರ. ಯಾಕೆ ಇಷ್ಟೊಂದು ಆಶ್ಚರ್ಯವಾಗಿ ಕೇಳ್ತಿದೀರಾ?"

" ಇಲ್ಲಿ ಕನ್ನಡದವರು ಸಿಗೋದೇ ಇಲ್ಲ ಅದಕ್ಕೆ"

" ಅರೆ ನೀವಿರೋದೇ ಕನ್ನಡಿಗರ ಕಾಲೋನಿಯಲ್ಲಿ . ನಿಮಗೆ ಹೇಗೆ ಗೊತ್ತಿಲ್ಲ, ಹೋಗ್ಲಿ ಬಿಡಿ ಈ ಕವಿತೆ ಬರೆದಿರೋದು ನೀವೇನಾ. ತುಂಬಾ ಚೆನ್ನಾಗಿದೆ" ಮೆಚ್ಚುಗೆಯಿಂದ ನುಡಿದ

ಗೌರಿಯ ಕಣ್ಣಾಲಿ ತುಂಬಿ ಬಂದವು ಇಂತಹ ಮೆಚ್ಚುಗೆಯ ನುಡಿ ಕೇಳಿ ಬಹಳ ವರ್ಷಗಳಾಗಿದ್ದವು.

" ಹೌದು ಇದನ್ನು ನಾನೆ ಬರೆದಿರೋದು. ನಾನು ತುಂಬಾ ಕವನ ಕತೆ ಬರೀತೀನಿ ಆದರೆ ಯಾವದೂ ಸರಿ ಇಲ್ಲ ಅಂತ ನಮ್ಮ ಯಜಮಾನರು ಹೇಳಿ ಎಲ್ಲಾ ಮೇಲಕ್ಕೆ ಹಾಕ್ಬಿಡ್ತಾರೆ."

"ನಿಮ್ಮೆಜಮಾನರಾ? ಯಾರು?" ಅಚ್ಚರಿಯಿಂದ ಪ್ರಶ್ನಿಸಿದ

" ಪ್ರಜೇಶ ರವರು "

"ಪ್ರಜೇಶಾ?"

" ಹೌದು ಯಾಕೆ"

" ಸರಿ ಏನಿಲ್ಲ ಬಿಡಿ. ಏನೇನ್ ಕತೆ ಬರ್ದಿದೀರ ತೋರಿಸಿ"

ಗೌರಿ ಚಿಕ್ಕ ಹುಡುಗಿಯಂತೆ ತನ್ನ ಕತೆಗಳ ಕಡತವನ್ನೆಲ್ಲಾ ತಂದು ತೋರಿಸಿದಳು

ಅವಳ ಉತ್ಸಾಹವನ್ನು ಕಂಡು ಮೂಕನಾದ.

ಇಂತಹ ಹೆಣ್ಣಿಗೆ ಹುಚ್ಚಿ ಹಾಗೂ ಅನಾಥ ಪಟ್ಟ ಕಟ್ಟಿದ ಪ್ರಜೇಶ್ ಮೇಲೆ ಕೋಪವೂ ಬಂದಿತು

ಅಯ್ದ ಕೆಲವನ್ನು ಓದುತ್ತಿದ್ದಂತೆ ಅನಂತಗೆ ಇದೆಲ್ಲವನ್ನೂ ಎಲ್ಲೋ ಓದಿದಂತೆ ಭಾಸವಾಗತೊಡಗಿತು.

ಆದರೂ ಕತೆ ನಿರೂಪಣೆ ಬಹಳ ಸುಂದರವಾಗಿದ್ದವು

"ಇದು ನೋಡಿ ನಾನು ಇತ್ತೀಚಿಗೆ ಬರೆದಿದ್ದು . ಅದಕ್ಕೆ ತುತ್ತ ತುದಿಯಲ್ಲಿ ಅಂತ ಹೆಸರನ್ನು ಕೊಟ್ಟೆ ಆದರೆ ಇವರು ಒಂಚೂರು ಚೆನ್ನಾಗಿಲ್ಲ ಅಂತ ಬೈದುಬಿಟ್ಟರು." ದೂರು ನೀಡುವ ರೀತಿಯಲ್ಲಿ ನುಡಿದಳು

ತುತ್ತ ತುದಿಯಲ್ಲಿ ಈ ಹೆಸರು "on the edge" ನ ರೀತಿಯೇ ಇದೆಯಲ್ಲ ಆ ಕತೆಗೆ ತಾನೆ ಶ್ರೇಷ್ಟ ಲೇಖಕ ಬಿರುದು ಬಂದಿದ್ದು ಪ್ರಜೇಷಗೆ. ಅನಂತನ ಮನಸ್ಸಿನಲ್ಲಿ ಏನೂ ಲೆಕ್ಕಾಚಾರ ನಡೆಯುತ್ತಿತು.

ಕತೆ ಓದುತಿದ್ದಂತೆ ಅದರ ಪ್ರತಿ ಪಾತ್ರ, ನುಡಿ , ಪ್ರಸಂಗ ಎಲ್ಲವೂ ಅದೇ ಕತೆಯದಂತೆ ಇತ್ತು ಎನಿಸಲಾರಂಭಿಸಿತು.

ಪ್ರಜೇಶ್ ಹೇಳಿದಂತೆ ಈಕೆ ಹುಚ್ಚಿ ಇರಬೇಕನಿಸಿತು.

"ಅಲ್ಲ ಮೇಡಮ ನಿಮ್ಮೆಜಮಾನರ ಇಂಗ್ಲೀಷ ಕತೇನ ಕನ್ನಡ್ದಲ್ಲಿ ಬರೆದರೆ ಅದು ನಿಮ್ಮದಾಗುತ್ತಾ?"

"ಆ ಏನಂದ್ರಿ. ಇದು ನಾನೆ ಬರೆದ್ದಿದ್ದು. ಹಾಗೆ ಓದಿ ಬರೆಯೋಕೆ ನಂಗೆ ಇಂಗ್ಲೀಶ್ ಬರೋದೇ ಇಲ್ಲ"

ಕ್ಶಣಮಾತ್ರದಲ್ಲಿ ಅನಂತನಿಗೆ ಎಲ್ಲಾ ಹೊಳೆಯಿತು. ಅರಿಯದ ಹೆಣ್ಣಿನ ಮುಗ್ದತೆಯನ್ನು ಬಹು ಕೆಳಮಟ್ಟದಲ್ಲಿ ಉಪಯೋಗಿಸಿಕೊಂಡಿದ್ದ ಪ್ರಜೇಶ್.

ಒಬ್ಬ ಲೇಖಕನಿಗಿರಬೇಕಾದ ಮೌಲ್ಯಗಳನ್ನೆಲ್ಲಾ ಗಾಳಿಗೆ ತೂರಿ ಮತ್ತೊಬ್ಬರ ಬರಹವನ್ನು ಪ್ರಸಿದ್ದಿಯ ಹುಚ್ಚಿಗೆ ತನ್ನದೆಂದು ಪ್ರಕಟಿಸಿದ್ದ.

ಇದನ್ನೆಲ್ಲಾ ಗೌರಿಯ ಮುಂದೆ ವಿವರಿಸಿದ . ತನ್ನ ಕತೆಗಳು ತನ್ನ ಮುಂದೆಯೇ ಲೂಟಿ ಹೋಗುತಿದ್ದರೂ ಕುರುಡಿಯಾಗಿ ಕುಳಿತಿದ್ದಳು.

" ಈಗ ಏನು ಮಾಡ್ತೀರಾ?"

" ಏನಿಲ್ಲಾ ಇಷ್ಟು ದಿನ ಗೊತ್ತಿಲ್ಲದೆ ಬರೆದು ಕೊಡಿತಿದ್ದೆ . ಇನ್ನುಮೇಲೆ ಗೊತ್ತಾಗಿ ಬರೆದು ಕೊಡ್ತೀನಿ. ಇನ್ನೂ ಚೆನ್ನ್ನಾಗಿ .........." ಅವಳ ಕಣ್ಣಿನಿಂದ ನೀರು ಧಾರಾಕಾರವಾಗಿ ಸುರಿಯುತಿತ್ತು. ಖ್ಯಾತ ಕತೆಗಾರ್ತಿಯಾಗಬೇಕೆಂಬ ಅವಳ ಕನಸು ಕನಸಾಗೇ ಉಳಿಯುವ ಅಪಾಯವಿತ್ತು ಅವಳ ನಿರ್ಧಾರದಿಂದ.

" ಹಾಗಿದ್ದರೆ ನಿಮ್ಮ ವ್ಯಕ್ತಿತ್ವವನ್ನು ಬಲಿ ಕೊಡ್ತೀರಾ?"

"ಹೌದು. ಯಾಕೆಂದರೆ ನಾನು ಭಾರತೀಯ ಹೆಣ್ಣು. ಒಬ್ಬ ಭಾರತೀಯ ಹೆಣ್ಣಿಗೆ ವ್ಯಕ್ತಿತ್ವಕ್ಕಿಂತ ಸಂಸಾರವೆ ಹೆಚ್ಚು.

"ಆದರೆ ನೀವು ಅವರ ಸಂಸಾರವಲ್ಲವಲ್ಲ"

"ಅಂದ್ರೆ?"

ಆನಂತ ಕನ್ನಡದ ಪತ್ರಿಕೆಯ ಹೇಳಿಕೆಯೊಂದನ್ನು ಅವಳ ಮುಂದೆ ಹಿಡಿದ

ಅದು ಪ್ರಜೇಶ್ ಹಾಗು ಖ್ಯಾತ ಸಿನಿ ನಟಿ ಅಹಲ್ಯಾರವರ ಮದುವೆಯ ವರದಿ.

"ನೀವು ಲೋಕ್ದ ಜನರ ಪ್ರಕಾರ ಒಬ್ಬ ಹುಚ್ಚಿ ಹಾಗು ಅನಾಥೆ . ನಿಮ್ಮನ್ನು ಪ್ರಜೇಶ್ ಸಾಕುತ್ತಿದ್ದಾರೆ. "

ದಿಗ್ಬ್ರಾಂತಳಾದಳು.

" ಈಗೇನು ಮಾಡಲಿ"

" ಮೇಡಮ್ ನೀವು ಹೀಗೆ ಕೂರಬೇಕಿಲ್ಲ ನಿಮ್ಮಲ್ಲಿ ಪ್ರತಿಭೆ ಇದೆ. ನಿಮ್ಮ ಕತೆಗಳು ನಮ್ಮ ಕನ್ನಡಕ್ಕೆ ಬಂದ್ರೆ ಕನ್ನಡಕ್ಕೆ ಹೆಸರು. ನೀವು ನಮ್ಮ ಬೆಂಗಳೂರಿಗೆ ಬನ್ನಿ . ಕೃತಿಚೌರ್ಯದ ಆರೋಪಾನ ಪ್ರಜೇಶ್ ಮೇಲೆ ಕೇಸ ಹಾಕೋಣ ನ್ಯಾಯ ನಮಗೆ. ಯಾಕೆಂದರೆ ಅವುಗಳ ತಾಯಿ ನೀವೆ ನನ್ನ ಮೇಲೆ ಭರವಸೆ ಇಟ್ಟು ಬನ್ನಿ ಅಂತ ಹೇಳ್ತಿಲ್ಲ . ನಿಮ್ಮ ಪ್ರತಿಭೆಯ ಮೇಲೆ ನಂಬಿಕೆ ಇಟ್ಟು ಬನ್ನಿ. ಲೋಕದಲ್ಲಿ ಕನ್ನಡದ ಮೇಲೆ ಆಗುತ್ತಿರುವ ದೌರ್ಜನ್ಯಕ್ಕೆ ಇದೊಂದು ಉದಾಹರಣೆ"

ಗೌರಿಯ ಹೆಜ್ಜೆಗಳು ಅನಂತನನ್ನು ಹಿಂಬಾಲಿಸತೊಡಗಿದವು

---------------------------------*******************------------------------------























Wednesday, April 2, 2008

ಕೊಂದವರು ಯಾರು

ವರುಣ್
ಥೂ ಇಂಥ ಹಲ್ಕಾ ಅಂತ ಗೊತ್ತಿದ್ದರೆ ಇವನ ಹತ್ತಿರ ಕೆಲ್ಸಕ್ಕೆ ಸೇರ್ತಿರಲಿಲ್ಲ. ಎಷ್ಟು ಕಷ್ಟ ಪಟ್ಟಿದ್ದೆ ಇವನಿಗೋಸ್ಕರ. ಮದುವೆಗೂ ಕೇವಲ್ ಮೂರೆ ದಿನ ರಜಾ ಕೊಟ್ಟಿದ್ದ . ಆದರೂ ಅದೇನು ಒಳ್ಳೆಯ ಬುದ್ದಿ ಬಂತ್ಟೊ ಮದುವೆಗೆ ಬಂದ ಹೋದ ಮೇಲೆ ಪ್ರಮೋಷನ್ ಕೊಟ್ಟ . ಮನೆ ಕಟ್ಟಿಸುವಂತೆ ಹೇಳಿದ ಸಾಲಕ್ಕೆ ಶಿಫಾರಸ್ಸು ಮಾಡಿದ. ಹೆಂಡತಿ ದಿವ್ಯಳ ಮೈ ಮೇಲೆ ಒಡವೆಗಳನ್ನು ಮಾಡಿಸಿಕೊಡುವಂತೆ ಹೇಳಿದ . ಕಾರು ಎಲ್ಲ ಕೊಡಿಸಿದ . ಎಲ್ಲಾ ದಿವ್ಯಾಳ ಕಾಲ್ಗುಣ ಎಂದುಕೊಂಡರೆ ಅದು ಅವಳ ಅಂದದಿಂದ ಎಂದು ತಿಳಿದಿದ್ದು ಬಹಳ ತಡವಾಗಿ.
ಅವನು ಹೇಳಿದ್ದು ಎಷ್ಟು ಅಸಹ್ಯವಾಗಿತ್ತು "ವರುಣ್ ನೋಡು ಒಬ್ಬೊಬ್ಬರಿಗೂ ಒಂದೊಂದು ವೀಕ್ನೆಸ್ ಇರುತ್ತೆ ನಿಂಗೆ ಹಣದ ಅವಶ್ಯಕತೆ ಇತ್ತು ಹಾಗಾಗಿ ಸಾಲ ಮಾಡಿದೆ . ಈಗ ಮೈ ತುಂಬ ಸಾಲ . ಅದು ನಿನ್ನ ವೀಕ್ನೆಸ್. ನಂಗೆ ಹಣ ಇದೆ ಆದರೆ ಅದೇನೋ ಚೆನ್ನಾಗಿರೋ ಹುಡುಗೀರನ್ನ ನೋಡಿದರೆ ಮೈ ಅವರನ್ನು ಪಡೀಬೇಕು ಅನ್ನಿಸುತ್ತೆ . ನನ್ನ್ ವೀಕ್ ನೆಸ್ ಅದು . ಈಗ ನಿನ್ನ ಹೆಂಡತೀನ ಮದುವೇಲಿ ನೋಡಿದೆ . ಅಷ್ಟೆ ಆಗಿನಿಂದ ಅವಳನ್ನ ಹೇಗೆ ಜೊತೆ ಮಾಡ್ಕೊಬೇಕು ಅಂತ ಯೋಚಿಸಿದೆ. ಕೊನೆಗೆ ನಿನ್ನ ಸಾಲದ ಬಲೇಲಿ ಸಿಗಿಸಿದರೆ ಇದೆಲ್ಲಾ ಅಗುತ್ತೆ ಅಂತ ಪ್ಲಾನ್ ಮಾಡಿದೆ . ಈಗ ನೀನು ಒಪ್ಪಲೇಬೇಕು . ನಾಳೆ ಟುಲಿಪ್ ರೆಸಾರ್ಟನಲ್ಲಿ ರೂಮ್ ಬುಕ್ ಮಾಡು ಅವಳನ್ನ ಕರ್ಕೊಂಡು ಬಾ ಹಾಗೆ ಡ್ರಿಂಕ್ಸ್ ಅರೇಂಜ್ ಮಾಡು ಇಲ್ಲ ಅಂದರೆ ಕೆಲಸ ಇಲ್ಲ ಸಾಲದ ಬ್ಯಾಂಕ್ ನವರಿಗೂ ಇನ್ಫಾರ್ಮ್ ಮಾಡ್ತೀನಿ . ಅಷ್ಟೆ ನಿನ್ನ ಗತಿ ಏನಾಗುತ್ತೆ ನೋಡ್ತಿರು "
ನಾನು ಏನು ಮಾಡಲಿ ಈಗ ಹ್ಯಾಗೆ ಇದರಿಂದ ಪಾರಾಗಿ ಹೋಗಲಿ . ಇದಕ್ಕೋಸ್ಕರ ದಿವ್ಯಾನ ಬಲಿ ಕೊಡುವುದೇ ಅಥವಾ?
ಮತ್ತೊಮೆ ಆ ಚಂದ್ರಕಾಂತ್ ಹೇಳಿದೆ ಮಾತು ನೆನಪಾಯಿತು "ಡ್ರಿಂಕ್ಸ್ ರೆಡಿಮಾಡಿಕೊಂಡು ಬಾ" ಏನೋ ಹೊಳೆಯಿತು ಮನಸಿಗೆ ದೃಢ ನಿರ್ಧಾರ ಮಾಡಿಕೊಂಡು ಅವನಿಗೆ ಫೋನ್ ಮಾಡಿದೆ " ಸಾರ್ ನಾಳೆ ನಾನು ಬರ್ತಾ ಇದೀನಿ"
" ನೀನು ಬಂದು ಏನು ಪ್ರಯೋಜನ ?ಅವಳು ?" "ಅವಳು ಬರ್ತಾಳೆ ಸಾರ್" "ಸರಿ
ವೆರಿ ಗುಡ್" ಫೋನ್ ಕಟ್ ಮಾಡಿದ ಮೇಲೆ ಮುಂದಿನ ಕೆಲಸಕ್ಕೆ ಸಿದ್ದತೆ ಮಾಡಲಾರಂಭಿಸಿದೆ.
ಪ್ರೀತಿ
ಇವನು ನನ್ನ ಜೀವನಾನೆ ಹಾಳು ಮಾಡಿಬಿಟ್ಟ . ಮನೆಯವರೂ ಅಷ್ಟೆ ಇವನ ಆಸ್ತಿ ನೋಡಿ ೨೦ರ ನನ್ನನ್ನ ೪೫ರ ಅವನಿಗೆ ಕಟ್ಟಿಬಿಟ್ಟರು . ಆದರೆ ನಾನು ದಿನ ದಿನಕ್ಕೆ ನರಕ ಯಾತನೆ ಅನುಭವಿಸ್ತಾ ಇದೀನಿ.
ವಯಸ್ಸಾಗಿದ್ದರೆ ಏನು ಗಂಡ ಅಲ್ಲವಾ ಜೀವನ ಸಾಗಿಸೋಣ ಎಂದರೆ ಇವನೋ ಹಿಂಸಾ ಪಶು ಮತ್ತೊಬ್ಬರ ಅಳು ನೋಡಿ ನಗುವವನು . ನನ್ನನ್ನ ಎಷ್ಟು ಹಿಂಸೆ ಮಾಡುತ್ತಿದ್ದಾನೆ . ಸೆಕ್ಸ್ ಎಂದರೆ ಇವನಿಗೆ ಹೆಣ್ಣನ್ನು ಗೋಳು ಹಾಕಿಕೊಳ್ಳ್ಳುವುದು ಎಂದಾಗಿದೆ.
ಹಗಲೆಲ್ಲಾ ಅನುಮಾನಿಸಿ ಹಿಂಸೆ ಕೊಡುತ್ತಿದ್ದರೆ ರಾತ್ರಿಯೆಲ್ಲ ನರಕ ದರ್ಶನ ಮಾಡಿಸುತ್ತಿದ್ದ .
ಕಷ್ಟ ತಾಳಾಲಾರದೆ ಓಡಿ ಹೋಗ ಬೇಕೆಂದರೆ ಇವನು ಹೊರಗೆ ಹೋಗುವಾಗ ಬಾಗಿಲಿಗೆ ಬೀಗ ಹಾಕಿಕೊಂಡು ಹೋಗುತ್ತಾನೆ. ಒಬ್ಬರ ಜೊತೆ ಮಾತಾಡುವ ಹಾಗಿಲ್ಲ . ಮಾನಸಿಕ ದೈಹಿಕ ವಾಗಿ ನಾನು ಕುಸಿದುಹೋಗಿದ್ದೇನೆ.
ಇದೇನು ಈಗ ಬಂದವನು "ಏಯ್ ಪ್ರೀತಿ ನಾಳೆ ಸಂಜೆ ನಂಗೆ ಹನಿಮೂನ್ . ಒಂದು ಮುದ್ದಾಗಿರೋ ಮೂಗ್ಗಿನ ಜೊತೆ. ಇವತ್ತು ರಾತ್ರಿ ನಿಂಗೇನು ಕೆಲಸ್ ಇಲ್ಲ ಹೋಗು ಬಿದ್ದುಕೋ"
ಇವನ ಕಾಮಕ್ಕೆ ಅದೆಷ್ಟು ಮಂದಿ ಬಲಿಯಾಗಿದ್ದಾರೋ . ಮಾಲಿಯ ೧೩ ವರ್ಷದ ಮಗಳನ್ನೂ ಬಿಡದೆ ಆಕೆಯನ್ನು ಜೀವಂತ ಶವವನ್ನಾಗಿ ಮಾಡಿದ್ದಾನೆ.
ಆದರೆ ಮಾಲಿ ಇವನ ವಿರುದ್ದ ಹೋಗಲಾರದೆ ಇಲ್ಲೇ ಇದ್ದಾನೆ. ಹೇಗೆ ಇವನಿಂದ ಮುಕ್ತಿ ಸಿಗುತ್ತೋ ದೇವರೇ ಏನಾದರೂ ದಾರಿ ತೋರಿಸು.
ಹೌದು ಇವನಿಂದ ಮುಕ್ತಿ ಪಡೆಯಲು ಒಂದೇ ದಾರಿ . ನಾನು ಜೈಲಿಗೆ ಹೋದರೂ ಪರವಾಗಿಲ್ಲ . ಸತ್ತರೂ ಎಷ್ಟೊ ಜನರಿಗೆ ಒಳ್ಳೇದು ಮಾಡಿದ ಹಾಗೆ ಆಗುತ್ತೆ .
ಹೇಗೆ
ಒಳಗೆ ಅವನು ಕೆಮ್ಮಿದ ದನಿ ಕೇಳಿಸಿತು "ಲೇಯ್ ಕಾಫ್ ಸಿರಪ್ ತೊಗಂಬಾ. ಇದೊಂದು ಕೆಮ್ಮು ಇಲ್ಲ ಅಂದಿದ್ದರೆ ನಾನು ಒಳ್ಳೆ ೨೦ ವರ್ಷದವನ್ ಥರ ಇರಬಹುದಿತ್ತು. ನಾಳೆ ನಾನು ಹೋಗುವಾಗ ಅದನ್ನು ಬ್ಯಾಗ್ನಲ್ಲಿ ಹಾಕಿ ಕಳಿಸು " ಕೆಮ್ಮಿನಲ್ಲೇ ಹೇಳಿದ . ಇವನಿಗೆ ಇದೊಂದೇ ರೋಗ ಅ ದೂ ಆ ಸಿರಪ್ ತೊಗಂಡ್ರೆ............. ಕೂಡಲೆ
ಮಿಂಚು ಹೊಡೆದಂತೆ ಮನಸಿಗೆ ಏನೊ ಹೊಳೆಯಿತು. ದೇವರು ದಾರಿ ತೋರಿಸಿದ್ದ
ಸಿದ್ದ -ಮಾಲಿ
ಈವಯ್ಯ ಮಾಡಿದ ಮೋಸಕ್ಕೆ ತಕ್ಕದಾಗಿ ದೇವರು ಶಿಕ್ಷೆ ಕೊಡಲಿಲ್ಲ ಅಂದ್ರೂ ನಾನು ಬಿಡಲ್ಲ . ನಾನು ಇವನ್ ಜೊತೇನೆ ಇದ್ದುಕೊಂಡು ಇವನಿಗೆ ಎಂಗಾರ ಮಾಡಿ ಪ್ರಾಣ ತಗಂತೀನಿ
ಅಂಗ್ ಮಾಡಿದ್ರೆ ನನ್ಮ ಮಗೂಗೆ ಆದ ಬ್ಯಾನೆ ಬ್ಯಾರೆ ಯಾರಿಗೂ ಅಗಲ್ಲ . ಆ ಪ್ರೀತಿಯಮ್ಮ್ನ್ನ ಎಷ್ಟು ಗೋಳು ಹಾಕಂತಾನೆ ಈವಯ್ಯ .
ಕೆಂಪೀ ಆಡೊ ಅಸುಗೂಸನ್ನ ಮನೆಗೆ ಅವ್ವೋರ ಜೊತೆ ಇರಲಿ ಅಂತ ಕಳಿಸಿದಾರೆ ಅವಳ ಜೀವನಾನೆ ಆಳು ಮಾಡಿಬಿಟ್ಟವನೆ . ಪಾಪ ಅದು ಉಚ್ಚಿ ತರ ಆಡ್ತೈತೆ ಈವಯ್ಯನ್ನ ಹೆಂಗೆ ಕೊನೆ ಗಾಣ್ಸೋದು .
"ಲೋ ಸಿದ್ದ ಬಾರೊ ಇಲ್ಲಿ ನಾಳೆ ರಾತ್ರಿ ಒಂದು ಉತ್ಸವ ಇದೆ . ಹೂವಾ ಎಲ್ಲ ಚೆನ್ನಾಗಿ ಪ್ಯಾಕ್ ಮಾಡಿ ಕೊಡು . ಎಲೇನೂ ಇರಲಿ . ಅಲ್ಲಿ ಹೋಗಿ ಮಂಚಕ್ಕೆ ಹಾಕ್ತ್ರೀನಿ "
ಆವಯ್ಯ ಬಂದು ಹೇಳಿದ .
ಈವಯ್ಯನ್ನ ಹೆಂಗೆ ಕೊನೆ ಗಾಣ್ಸೋದು . ಅಂತ ಯೋಚಿಸ್ತಾ ಇದ್ದಾಗ ಅಲ್ಲಿ ನಾಗ್ರಾವು ಕಾಣಿಸ್ತು. ಇನ್ನೂ ಎಳೇದಂತನಿಸುತ್ತೆ . ನಂಗೇನೊ ಅನ್ನಿಸ್ತು . ತಕ್ಷಣ ಅದನ್ನ ಎತ್ತಿ ಹಿಡಿದು ಒಂದು ಬುಟ್ಟೀಲಿ ಆಕ್ಕೊಂಡೆ.
ಸೂರ್ಯಕಾಂತ :
ಅಣ್ಣ ಅಂತ ಕರ್ಯೋಕೆ ಬೇಸರ ಆಗುತ್ತೆ ಆದರೆ ಏನು ಮಾಡಲಿ . ಅಪ್ಪ ಅಮ್ಮ ಇಬ್ಬರೂ ಸತ್ತು ಹೋದಾಗ ನನ್ನ ಬೆಳೆಸಿದ್ದು ಇವನೇ . ಆದರೆ ಓದಿಸಲಿಲ್ಲ .
ಯಾಕೆ ಬೆಳೆಸಿದ ಅಂದ್ರೆ ಅಪ್ಪ ಸಾಯುವಾಗ ಇನ್ನೂ ಚಿಕ್ಕವನಾಗಿದ್ದ ತನ್ನ ಹೆಸರಿಗೆ ಆಸ್ತಿಯನ್ನೆಲ್ಲಾ ಬರೆದು ಸತ್ತಿದ್ದರು .
ಅವರಿಗೂ ಸಾಯುವಾಗ ಗೊತ್ತಿತ್ತೇನೋ ಇವನ್ ಬುದ್ದಿ.
ತನಗೇನು ಗೊತ್ತಿತ್ತು ಇವನ್ ಬುದ್ದಿ ೧೮ ವರ್ಷವಾದಾಗ ಆಸ್ತಿಯನ್ನೆಲ್ಲ ಇವನ್ ಹೆಸರಿಗೆ ಬರೆಸಿಕೊಂಡ ಮೇಲೆ .
ನನ್ನನ್ನು ಸಾಯಿಸಲು ಬಹಳ ಸಲ ನೋಡಿದ ಆದರೆ ದೇವರ್ ದಯೆ ಇಂದ ನಾನು ಬದುಕ್ಕೊಂಡೆ. ನನಗೆ ಗಾಡಿ ಓಡಿಸೋದು ಬಿಟ್ಟರೆ ಏನು ಬರುತ್ತೆ ಬದುಕು ಅಂತ ನೋಡ್ಕೊಳ್ಳೊಕೆ .
ನನಗೂ ಒಂದು ಆಸೆ ಗುರಿ ಎಲ್ಲಾ ಇದ್ದರು ಅಣ್ಣ ಅನಿಸಿಕೊಂಡ ಇವನನ್ನ ಏನು ಮಾಡಲೂ ಆಗದೇ ಒದ್ದಾಡ್ಥಾ ಇದೀನಿ.
"ಲೋ ಸೂರ್ಯ ಗಾಡಿ ಎಲ್ಲ ಕ್ಲೀನ್ ಮಾಡಿಡು . ನಾಳೆ ನಿನ್ನ ಇನ್ನೊಂದು ಒಂದು ದಿನದ ಅತ್ತಿಗೆ ಜೊತೆ ಫಸ್ಟ್ ನೈಟ್ ಇದೆ " ಮೈ ಎಲ್ಲ ಉರಿಯುತ್ತೆ .
ಇಷ್ಟು ವಯಸ್ಸಾದರೂ ಅಷ್ಟು ಚೆಂದದ ಹೆಂಡತಿ ಇದ್ದರೂ ದಿನಕ್ಕೆ ಒಬ್ಬ ಹೊಸ ಹೆಣ್ಣು ಬೇಕು
ಅದೇ ೨೫ ವರ್ಷದ ತಾನು ನೀತುವನ್ನು ಪ್ರೀತಿಸಿದ್ದಕ್ಕೆ ಅವಳನ್ನೆ ಕೇಳುತ್ತಿದ್ದಾನೆ . "ಇವನ್ನ ಹ್ಯಾಗೆ ಮುಗಿಸೋದು. ಯಾರಿಗೂ ಅನುಮಾನ ಬರದ ರೀತಿ ಇವನ್ನ ಸಾಯ್ಸಿ ನೀತು ಜೊತೆ ಹಾಯಾಗಿ ಇರ್ಬೋದು . ಅತ್ತಿಗೆಗೂ ಇನ್ನೊಂದು ಮದುವೆ ಮಾಡ್ಕೊಳ್ಳೋದಿಕ್ಕೆ ಹೇಳ್ತೀನಿ ಪಾಪ ಚಿಕ್ಕ ವಯಸ್ಸಿನ ಅತ್ತಿಗೆ .
ಆದರೆ ಹ್ಯಾಗೆ?
ಗಾಡಿ ಸರಿ ಮಾಡುತ್ತಿದ್ದಂತೆ ಬ್ರೇಕ್ ಮೇಲಿಟ್ಟ ಕೈ ಏನೋ ಹೇಳಿತು. ಮನಸ್ಸು ಅದಕ್ಕೆ ಆಯಿತು ಎಂದಿತು
ಮಾರನೆ ದಿನ
ಚಂದ್ರಕಾಂತ
ಅಬ್ಬಾ ನನ್ನ ಸಾಯ್ಸೋಕೆ ಏನೆಲ್ಲಾ ಪ್ಲಾನ್ ಮಾಡಿದ್ರು ಹೆಂಡತಿ ತಮ್ಮ ಮಾಲಿ , ವರುಣ್ . ಹ್: ಅಷ್ಟೊಂದು ಸುಲಭಾನ ನನ್ನ ಸಾಯ್ಸೋದು
ಯಾವಗ್ಲೂ ನನ್ನ ನೋಡಿದ್ರೆ ಒಳಗೆ ಇರ್ತಿದ್ದ ಪ್ರೀತಿ ಇವತ್ತು ಬಂದು ರೀ ಕಾಫ್ ಸಿರಪ್ ತಗೊಳ್ಳಿ ಅಂದಾಗಲೇ ಅನುಮಾನ ಬಂತು.
ಆ ಸಿದ್ದ ಅಷ್ಟೊಂದು ಹೂವ ಎಲೆ ಎಲ್ಲ ಚೆನ್ನಾಗಿ ಅಲಂಕಾರ ಮಾಡಿ ಕಟ್ತ್ ಕೊಟ್ಟಾಗ ಏನೋ ಇದೆ ಅಂತ ಅನ್ನಿಸಿತು.
ನನ್ನ ತಮ್ಮ "ಅಣ್ಣ ಇವತ್ತು ನಾನು ಬರೋದಿಕ್ಕೆ ಆಗಲ್ಲ ಹುಷಾರಿಲ್ಲ ಅಂದಾಗ ಬೇಕಂತಲೇ ಅವನು ತೋರಿಸಿದ ಕಾರಲ್ಲಿ ಆ ಮ್ಯಾನೇಜರ್‌ನ ಕಳಿಸಿ ನಾನು ಇನ್ನೊಂದು ಕಾರು ಹತ್ಕೊಂಡು ಬಂದೆ ದಾರೀಲಿ ಆ ಮ್ಯಾನೇಜರ್ ಕಾರ್ ಬ್ರೇಕ ತಪ್ಪಿ ಗುಂಡಿಗೆ ಬಿತ್ತು . ಅವನು ಸತ್ತ .
ನಾನು ಬದುಕಿದೆ ಈ ರೆಸಾರ್ಟ್‌ಗೆ ಬಂದ ತಕ್ಷಣ ಆ ಕಾಫ್ ಸಿರಪನ್ ಅಲ್ಲೇ ಇದ್ದ ನಾಯಿಗೆ ಹಾಕಿದೆ ಅದು ವಿಲ ವಿಲ ಅಂತ ಒದ್ದಾಡಿ ಸತ್ತು ಹೋಯಿತು . ಅದು ವಿಷ ಅಂತ ಗೊತ್ತಾಯಿತು.
ಆ ರೂಮ್ ಬಾಯ್ ಗೆ ಹೂವನ್ನು ಬಿಚ್ಚಲು ಹೇಳಿದೆ ಅದರಲ್ಲಿ ಹಾವು . ಅವನನ್ನ ಅದೇನೋ ಕಚ್ಹಲಿಲ್ಲ . ಅವನ ಆಯಸ್ಸು ಗಟ್ಟಿ ಇತ್ತು
ಆದರೆ ಆ ವರುಣ್ ಕಳಿಸಿದ್ದ ವಿಸ್ಕಿಯನ್ನು ಟೇಸ್ಟ್ ಮಾಡಲು ಹೇಳಿದಾಗ ಕುಡಿದವ ರಕ್ತ ಕಾರಿಕೊಂಡ.
ಅದನ್ನೆಲ್ಲಾ ಕ್ಲೀನ್ ಮಾಡಲು ಹೇಳಿ ಹೊರಗಡೆ ಬಂದೆ
ನನ್ನ ಸಾಯ್ಸೋಕೆ ಆ ಬ್ರಹ್ಮನೇ ಬಂದರೂ ಆಗಲ್ಲ .
ಒಳ್ಳೇ ಬೆಳಕಿನ ಸ್ಠಳ.
ಮೊಬೈಲ್ ತೆಗೆದು ವರುಣ್ಗೆ ಫೋನ್ ಮಾಡಿದೆ "ನಿನ್ನಾಟ ನಡೆಯಲ್ಲ ನಾನು ಚಿರಾಯು . ಮೊದಲು ನಿನ್ನ ಹೆಂಡತೀನ ಕರ್ಕೊಂಡು ಬಾ ಇಲ್ಲ ಅಂದರೆ ನಾನೇ ಬರ್ತೀನಿ" ಆಫ್ ಮಾಡಿದೆ
ಇನ್ಸ್ಪೆಕ್ಟರ್ ಶಿವು
ಫೋನ್ ರಿಂಗಿಸಿದಾಗ ರಾತ್ರಿ ಡ್ಯುಟಿ . ಅತ್ತಕಡೆಯಿಂದ ಸುದ್ದಿ ಬಂತು " ಚಂದ್ರಕಾಂತ್ ಕೊಲೆ ಯಾಗಿದ್ದಾರೆ " ಕೂಡಲೆ ಟುಲಿಪ್ ರೆಸಾರ್ಟ್ಗೆ ಬನ್ನಿ" ನಂಗೆ ಶಾಕ್ . ಆದರೂ ಕೊಲೆ ಮಾಡಿದ ಆ ಮಹಾನುಭಾವನಿಗೆ ಮನದಲ್ಲೇ ವಂದನೆ ಹೇಳಿದೆ . ಆ ಚಂದ್ರಕಾಂತ ಮೇಲೆ ಎಷ್ಟೊ ದೂರುಗಳು ಬಂದ್ರೂ ಸೂಕ್ತ ಸಾಕ್ಷಿಗಳಿಲ್ಲದೇ ಅವನನ್ನು ಹಿಡಿಯಲು ಆಗಿರಲಿಲ್ಲ.
ಟುಲಿಪ್ ರೆಸಾರ್ಟ್ ನಲ್ಲಿ ಹೋದ ಮೇಲೆ ಗೊತ್ತಾದ ವಿಷಯವೆಂದರೆ ಇವನ್ನನ್ನು ಕೊಲ್ಲಲ್ಲು ಇನ್ನೂ ನಾಲ್ಕು ಮಂದಿ ಪ್ಲಾನ್ ಮಾಡಿದ್ದರು . ಅವರೆಂದರೆ ಚಂದ್ರಕಾಂತನ ಮಡದಿ ಪ್ರೀತಿ ,ತಮ್ಮ ಸೂರ್ಯಕಾಂತ , ಮಾಲಿ ಸಿದ್ದ , ಪಿ.ಎ ವರುಣ್
ಆದರೆ ಪಾಪಿ ಚಿರಾಯು ಅನ್ನುವಂತೆ ಅವನು ಉಳಿದಿದ್ದ ಆದರೆ ಯಾರೋ ಅವನ ತಲೆಗೆ ಬಲವಾದ ಪೆಟ್ಟು ಕೊಟ್ಟು ಒಂದೆ ಏಟಿಗೆ ಕೊಂದಿದ್ದರು . ಅವರು ಉಪಯೋಗಿಸಿದ್ದ ಆ ಮರದ ಹಲಗೆ ಕೂಡ ಹಾಗೆ ಅಲ್ಲಿಯೇ ಇತ್ತು. ಆದರೆ ಬೆರಳಿನ ಗುರುತು ಯಾವದೂ ಇರಲಿಲ್ಲ
ರೆಸಾರ್ಟ್ನವರ ಪ್ರಕಾರ ಅಲ್ಲಿಗೆ ಅಲ್ಲಿನ ಕೆಲಸದವರನ್ನು ಬಿಟ್ಟರೆ ಬೇರೆ ಯಾರೂ ಬಂದಿರಲಿಲ್ಲ . ಅಲ್ಲಿರುವ ಯಾರಿಗೂ ಅವನ ಮೇಲೆ ದ್ವೇಷವಿರಲಿಲ್ಲ
ಹಾಗಾದರೆ ----------
ಮುಂದುವರಿಯುವುದು
ಚಂದ್ರಕಾಂತನ ಕೊಲೆ ಮಾಡಿದವರು ಯಾರು ಎಂಬುದನ್ನು ಊಹಿಸಬಲ್ಲೀರಾ?