Tuesday, August 25, 2009

ಕಳಂಕಿತೆಯ ಮುಂದುವರೆದ ಭಾಗ ತಮ್ಮ ವಿನಯನಿಂದ

[ನಾನು ಕಥೆ ಮುಂದುವರೆಸಲಾಗದೇ ಒದ್ದಾಡುತ್ತಿದ್ದಾಗಲೇ ತಮ್ಮ ವಿನಯ ಈ ಕತೆಯನ್ನು ಹೀಗೆ ಮುಗಿಸಿದ್ದಾನೆ over to vinay]
ಕೆಲಸ ವಿಲ್ಲದ ಆಚಾರಿ ಏನೋ ಮಾಡಿದನಂತೆ ಹಾಗೆ ಸ್ವಲ್ಪ ಫ್ರೀ ಇದ್ದೆ ಅದಕ್ಕೆ ಏನೇನೋ ಗಿಚಿದ್ದೇನೆ , ಫ್ರೀ ಇದ್ದಾಗ ಓದಿ . ನಿಮ್ಮ ಕಥೆಗೆ ನಾ ಬರೆದ ಕ್ಲೈಮ್ಯಾಕ್ಸ್. ವ್ಯಾಕರಣ ತಪ್ಪಿದೆ , ಬರೆಯೋವಷ್ಟು ವ್ಯವಧಾನ ವಿರಲಿಲ್ಲ , ಹಾಗೆ ಸುಮ್ಮನೆ ಬಿಡಲು ಕೂಡ ]

ಎಷ್ಟು ಸುತ್ತಿದರೂ ಗಾಣದ ಎತ್ತಿಗೆ ಚಾಟಿಯ ಏಟು ತಪ್ಪಿದ್ದಲ್ಲ ಅನ್ನೋ ಹಾಗೆ ಒಂದು ಮುಗೀತು ಅನ್ನೋವಷ್ಟರಲ್ಲಿ ಇನ್ನೊಂದು ಬಂದು ಅಪ್ಪಳಿಸಿ ಸುಧಾಕರನನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಜರ್ಜರಿತ ಗೊಲಿಸತೊಡಗಿತು. ಮೊದಲು ಹೆಂಡತಿಯ ಮೇಲೆ ಆತ್ಯಾಚಾರ , ಅನಂತರ ಅಮ್ಮನ ಮೇಲು ಇಂತದ್ದೆ ಒಂದು ಕಳಂಕ ಬಂದಿತ್ತೆಂಬ ಸತ್ಯದ ಅರಿವು, ಈಗ ನಾನು ಯಾರನ್ನು ೩೦ ವರ್ಷದಿಂದ ಅಮ್ಮ ಎಂದು ಪ್ರಿತಿಸುತಿದ್ದೇನೋ ಆ ಅಮ್ಮ ನನ್ನಮ್ಮ ಅಲ್ಲ ಎಂಬ ಕಟ್ಹೊರ ಸತ್ಯ , ಒಂದು ರೀತಿಯಲ್ಲಿ ಗುಡುಗು ಸಿಡಿಲು ಗಳೊಂದಿಗೆ ಬಂದೆರಗಿದ ಕುಂಭದ್ರೋಣ ಮಳೆಯನಾಗಿತ್ತು ಇವೆಲ್ಲವೂ ಅವನಿಗೆ. ಮನಸಿನಲ್ಲಿ ಎಲ್ಲವೂ ತಿಳಿಯಿತಲ್ಲ ಅನ್ನೋ ಯೋಚನೆ ಬಂದರೂ ಮುಂದೆ ಇನ್ನು ಏನು ಕಾದಿದೆಯೋ ಅಂತ ಅಮ್ಮನ ಮುಖವನ್ನೇ ನೋಡುತ್ತಾ ಕುಳಿತ.ಅವನ ನಿರೀಕ್ಷೆ ಹುಸಿ ಮಾಡದಂತೆ ರಮಾ ಮುಂದುವರೆಸಿದರು. ನಿನ್ನ ತಾಯಿನೇ ಅದು ಅಂತ ಹೇಳಿದೆ ಹೊರತು ಅದು ನಾನಲ್ಲ ಅಂತ ಶುರು ಮಾಡಿಕೊಂಡರು ರಮಾ. ಅವರ ಬದುಕು ಎಂಬ ಇತಿಹಾಸದ ಒಂದೊಂದೇ ಪುಟಗಳನ್ನ ತಿರುವಿ ಹಾಕ ತೊಡಗಿದರು ರಮಾ. ಇವನ ಅಮ್ಮನ ಮೇಲೆ ಅತ್ಯಾಚಾರ ವೆಸಗಿದ ವ್ಯಕ್ತಿ ಬೇರಾರು ಅಲ್ಲ ತನ್ನ ಗಂಡ ಶಿವಾನಂದನೆ ಅನ್ನೋ ಮಾತು ಹೇಳೋವಾಗಲಂತೂ ತಾನು ಇನ್ನು ಬದುಕಿರಬೇಕಿತ್ತ ಅನ್ನೋ ಹಾಗೆ ಆಗಿ ಹೋಗಿತ್ತು ರಮಾ ಅವರಿಗೆ. ಕಲಾ ( ಸುಧಾಕರನ ಹೆತ್ತ ತಾಯಿ) ಚಂದ್ರುವಿನೊಡನೆ ಸುಖವಾಗಿ ಇದ್ದಂತೆ ಕಾಣುತ್ತಿದ್ದಲಾದಳು ಅದು ತೋರಿಕೆ ಅಷ್ಟೇ ಆಗಿತ್ತು.ಚಂದು ಮೊದ ಮೊದಲು ಚೆನ್ನಾಗೆ ಇದ್ದರೂ ಬರುಬರುತ್ತಾ ಇವಳ ಹೊಟ್ಟೆಯಲ್ಲಿ ಬೆಳೆಯುತಿದ್ದ ಮಗುವನ್ನು ನೋಡಿ ಹುಚ್ಹನಂತೆ ವರ್ತಿಸ ತೊಡಗಿದ್ದ, ಜೊತೆಗೆ ಕುಡಿತ ಬೇರೆ ಸೇರಿಹೋಯಿತು.ಇನ್ನೇನು ಹೆರಿಗೆಯ ದಿನಗಳು ಹತ್ತಿರ ಬರುತ್ತಿವೆ ಅನ್ನೋವಷ್ಟರಲ್ಲಿ ಅವನ ಈ ಪೈಶಾಚಿಕ ವರ್ತನೆ ಮಿತಿ ಮಿರಿ ಹೋಯಿತು. ನಡು ರಾತ್ರಿ ಹೊರಗಡೆ ಬಾರಿ ಮಳೆ ಆ ವೇಳೆಯಲ್ಲೇ ಮನೆಗೆ ಬೇರೊಬ್ಬ ಹೆಂಗಸಿನೊಂದಿಗೆ ಬಂದ ಚಂದ್ರು ಯಾವ ಸೂಚನೆಯನ್ನು ಕೊಡದೆ ಆ ಗರ್ಭಿಣಿಯನ್ನು ಹೊರ ಎಸೆದಿದ್ದ. ಮೊದಲೇ ತುಂಬು ಗರ್ಭಿಣಿ ಹೇಗೋ ಸುಧಾರಿಸಿಕೊಂಡು ಅಲ್ಲೇ ಸ್ವಲ್ಪ ದೂರ ಇರುವ ಸರ್ಕಾರಿ ದವಾಕಾನೆಗೆ ಬಂದಿದ್ದಳು, ಅವಳ ಅದೃಷ್ಟವೋ ಏನೋ ಸ್ವಲ್ಪ ಎದೆ ನೋವು ಎಂದು ಅದೇ ಅಪರಿಚಿತ (ಶಿವಾನಂದ) ಅಲ್ಲಿ ಸೇರಿಕೊಂಡಿದ್ದ.ಅವನನ್ನು ನೋಡಿಕೊಳ್ಳಲು ಬಂದ ರಮಾ ಕೂಡ ಅಲ್ಲೇ ಇದ್ದಳು. ಸವತಿಯಾಗಿ ಸ್ವಿಕರಿಸಲು ಇಷ್ಟವಿಲ್ಲದಿದ್ದರೂ ಕಲಾ ಮೇಲೆ ಅವಳಿಗೆ ಯಾವುದೇ ವೈಯಕ್ತಿಕ ದ್ವೇಷ ಇರಲಿಲ್ಲ , ತನ್ನ ಗಂಡನಿಂದಾಗಿ ಹೀಗಾಯಿತಲ್ಲ ಅನ್ನೋ ನೋವು ಮಾತ್ರ ಇತ್ತು. ಸಾವು ಮತ್ತು ಬದುಕಿನ ನಡುವೆ ಹೋರಾಟ ಮಾಡುತ್ತಾ ಅಲ್ಲಿಗೆ ಬಂದ ಕಲಾಳನ್ನು ತಾನೇ ಅಲ್ಲಿ ಸೇರಿಸಿ ಹೇಗಾದರು ಮಾಡಿ ಅವಳನ್ನು ಉಳಿಸಿಕೊಳ್ಳಬೇಕು ಅನ್ನೋ ಪಣ ತೊಟ್ಟಿದ್ದಳು ರಮಾ. ಅವಳು ಎಣಿಸಿದ್ದೆ ಒಂದು ವಿಧಿ ಬರೆದಿದ್ದೆ ಒಂದು ಆಗಿತ್ತು , ತೀವ್ರ ಎದೆ ನೋವಿನಿಂದ ಒಂದು ಕಡೆ ಶಿವಾನಂದ ಕೊನೆ ಉಸಿರೆಳೆದರೆ , ಬದುಕೇ ಬೇಡ ಎಂದುಕೊಂಡಿದ್ದ ಕಲಾ ಮತ್ತೊಂದು ಕಡೆ ಇಹ ವನ್ನು ತ್ಯಜಿಸಿಆಗಿತ್ತು. ಇವರಿಬ್ಬರ ಕುರುಹು ಅಂತ ಉಳಿದಿದ್ದು ಒಂದೇ ಅದೇ ಈಗ ಸುಧಾಕರ ಅನ್ನಿಸಿಕೊಂಡಿರೋ ಆ ಹಸುಳೆ ಅನ್ನೋ ಮಾತು ಹೇಳಿ ಮುಗಿಸುವಷ್ಟರಲ್ಲಿ ರಮಾಗೆ ಸಾಕು ಸಾಕಾಗಿ ಹೋಗಿತ್ತು. ಬಲೆಯಲ್ಲಿ ಸಿಕ್ಕ ಮೀನಿನಂತೆ ಎಷ್ಟು ಹಾರಿದರು ಮತ್ತೆ ಅದೇ ಬಲೆಯೊಳಗೆ ಬಿಳುವಾನ್ತಾಗಿತ್ತು ಸುಧಾಕರನ ಪರಿಸ್ಥಿತಿ ,ಇನ್ನು ಅಲ್ಲಿ ಮಾತಿಗೆ ಬೆಲೆ ಇಲ್ಲ ಎಂದು ಅರಿತ ರಮಾ ಹೊರ ಹೋಗಿ ಆಗಿತ್ತು. ಪಿಸು ಪಿಸು ದ್ವನಿ ಕೇಳಿ ಹೊರ ಬಂದಿದ್ದ ಪ್ರೀತಿಗೆ ಎಲ್ಲ ಅರಿವಾಗಿತ್ತು. ಮರುದಿನ ಬೆಳಿಗ್ಗೆ ೫ ಕ್ಕೆ ಎದ್ದು ಜಾಗಿಂಗ್ ಗೆ ಅಂತ horaಟ ಸುಧಾಕರ ತನ್ನ ಓಟ ವನ್ನ ನಿಲ್ಲಿಸುವುದಿಲ್ಲ ಅನ್ನೋ ಅರಿವು ಮುಗ್ಧ ಅತ್ತೆ ಸೊಸೆಗೆ ತಿಳಿದಿರಲಿಲ್ಲ.ಅವನ್ ಹಿಂದೆಯೇ ಪ್ರೀತಿ ಎಂಬ ಹುಡುಗಿಯ ಭವಿಷ್ಯದಲ್ಲಿ ಮತ್ತೆ ಏಳಬಹುದಾದ ಇತಿಹಾಸ ಗಳೆಂಬ ಈ ಕತೆಗಳು ಮಾರೆಯಾಗುತಿದ್ದುದ್ದು ಸ್ಪಷ್ಟವಾಗಿ ಗೋಚರವಾಗುತಿತ್ತು.
ಇಂತಿ ವಿನಯ

No comments:

Post a Comment

ರವರು ನುಡಿಯುತ್ತಾರೆ