Tuesday, September 22, 2009

ಎರೆಡು ದಡಗಳ ನಡುವೆ ಭಾಗ ಐದು

ವಿಕಾಸನಿಗೆ ಸಿಡಿಲು ಬಡಿದಂತಾಯ್ತು. . ಮನುವಿನಿಂದ ದೂರವಾಗಿ ಕೇವಲ ಎಂಟು ತಿಂಗಳಾಗಿರಬಹುದು. ಇದು ಐದನೇ ಸಾರಿ ಹೀಗೆ ಶೈಲಾ ಪ್ರಜ್ನೆ ತಪ್ಪುತ್ತಿರುವುದು. ನಂತರ ಜ್ವರ ಹತ್ತು ದಿನ ಹಾಸ್ಪಿಟಲ್ ವಾಸ
ಒಳಗಡೆ ಶೈಲಾ ಕನವರಿಸುತ್ತಿದ್ದಳು
"ಮನು ನನ್ನ ಕ್ಷಮಿಸಿಬಿಡಿ. ನಾನು ನಿಮಗೆ ಮೋಸ ಮಾಡಿಬಿಟ್ಟೆ. ಅತ್ತೆ ನಂಗೂತ್ತು ನಿಮಗೆ ನನ್ನ ಮೇಲೆ ಕೋಪ ಬಂದಿದೆ ಅಂತ" ಮತ್ತೆ ಮತ್ತೆ ಅದೇ ಮಾತುಗಳನ್ನು ಉಚ್ಚರಿಸುತ್ತಿದ್ದಳು
ವಿಕಾಸ ತಲೆ ಚಿಟ್ಟು ಹಿಡಿದಂತಾಯಿತು
ಅಪ್ಪಯ್ಯನ ಮಾತುಗಳು ಕಿವಿಯಲ್ಲಿ ಪ್ರತಿಧ್ಚನಿಸಿತು
"ವಿಕಾಸ್ ನೀನು ಹೋಗುತ್ತಿರುವುದು ಮಾಯ ಜಿಂಕೆಯ ಹಿಂದೆ . ಹೆಣ್ಣು ಮಾಯೆ ಅದರಲ್ಲೂ ಕಟ್ಟಿಕೊಂಡ ಗಂಡನ್ನ ಬಿಟ್ಟು ನಿನ್ನ ಹಿಂದೆ ಬರುತ್ತೇನೆ ಅಂತಿರೋ ಆ ಹೆಂಗಸಿನ ಮನೋಭಾವ ಸರಿ ಇಲ್ಲ ಮುಂದೆ ತುಂಬಾ ತೊಂದರೆ ಅನುಭವಿಸಬೇಕಾಗುತ್ತೆ ಕಣೊ ಅವಳ ಬಾಳು ಚೆನ್ನಾಗಿರಲ್ಲ ಹಾಗೇನೆ ನಿನ್ನ ಬಾಳೂ ಅಷ್ಟೆ ನರಕ ನರಕ ಆಗುತ್ತೆ .ಅವಳಿಗಿಂತ ನೂರು ಪಟ್ಟು ಚೆನ್ನಾಗಿರೋ ಹುಡುಗೀನ ನಾನು ಹುಡುಕಿ ಮದುವೆ ಮಾಡ್ತೀನೆ ಅವಳನ್ನ ಬಿಟ್ಟು ಬಿಡು " ಅಪ್ಪ ಕೈ ಮುಗಿದ್ದಿದ್ದರು
ಅಮ್ಮ ಮಾತೇ ಆಡಲಿಲ್ಲ.
ಅಡುಗೆ ಮನೆ ಸೇರಿ ಮುಸು ಮುಸು ಅಳುತ್ತಿದ್ದರು
"ಇಲ್ಲ ಅಪ್ಪಯ್ಯಬರೀ ಹಣ , ರೂಪದಿಂದ ಅರಳಿದ ಪ್ರೀತಿ ಅಲ್ಲ. ನಾನು ಯೋಚಿಸಿ ಯೋಚಿಸಿ ತೆಗೆದುಕೊಂಡ ನಿರ್ಧಾರ. ಅದರಿಂದ ಹಿಂದೆ ಬರೋ ಯೋಚನೇನೆ ಇಲ್ಲ. ಸಾರಿ ಅವಳನ್ನ ನಿಮ್ಮ ಸೊಸೆ ಎಂದು ಸ್ವೀಕರಿಸುವುದಾದರೆ ಸ್ವೀಕರಿಸಿ ಇಲ್ಲವಾದರೆ ನಿಮಗೊಬ್ಬ ಮಗನಿದ್ದ ಎಂಬುದನ್ನ ಮರೆತು ಬಿಡಿ"
ಕಡ್ಡಿ ಎರೆಡು ಮಾಡಿದಂತೆ ಉತ್ತರಿಸಿ ತನ್ನ ಸೂಟ್‌ಕೇಸ್ ಹಿಡಿದು ಹೊರಬಂದವ ತಾನು
ಆದರೆ ಅಪ್ಪ ಹೇಳಿದ್ದೇ ನಿಜವೆನಿಸುತ್ತಿದೆ ಅಲ್ಲವಾ? ಶೈಲಾ ತನಗಾಗಿ ಮನುವನ್ನು ಬಿಟ್ಟುಬಂದಳು . ಆದರೆ ನಿಜಕ್ಕೂ ನಮ್ಮಲ್ಲಿ ಯಾರು ಸುಖವಾಗಿದ್ದಾರೆ? ನಾನಾ,ಶೈಲಾನಾ? ಇಲ್ಲಾ ಮನುವಾ? ಯಾರೂ ಇಲ್ಲ ಯಾರಿಗಾಗಿ ಈ ಬಾಳು ಯಾವ ಸಂತೋಷಕ್ಕಾಗಿ? ಮತ್ತೊಬ್ಬರ ಸಂತಸದ ಸಮಾಧಿಯ ಮೇಲೆ ಬಾಳು ಕಟ್ಟಿಕೊಂಡಂತಾಗಿ ಭೂತಕಾಲವೇ ಭೂತದಂತೆ ಕಾಡುತ್ತಿದೆಯಲ್ಲ.

ಹೀಗೇ ಮುಂದುವರೆದರೆ ಬದುಕು ನಿಜಕ್ಕೂ ನರಕವಾಗುತ್ತದೆ.
ಮಾಡುವುದೇನು?

??
ಪ್ರಶ್ನಾರ್ಥಕ ಚಿಹ್ನೆಗಳೇ ಅವನ ತಲೆಯಲ್ಲಿ ತುಂಬಿತು. ತಲೆ ಹಿಡಿದು ನಿಂತ





********************************************************

ವಾರವೆರೆಡು ಕಳೆಯಿತು . ಶೈಲಾ ಗುಣ ಮುಖಳಾದಳು ಆದರೆ ಮಾನಸಿಕವಾಗಿ ಮತ್ತಷ್ಟು ಮುದುಡುತ್ತಿದ್ದಳು . ತಾನು ಅಪರಾಧಿ
ಮನುವಿಗೆ ಮೋಸ ಮಾಡಿದೆ.ಅವನ ಮನಸನ್ನು ನೋಯಿಸಿದೆ ಎಂಬ ಭಾವನೆ ಮೂಡಿದಾಗಲೆಲ್ಲಾ ಅವಳು ಹುಚ್ಚು ಹಿಡಿದಂತಾಡುತ್ತಿದ್ದಳು. ವಿಕಾಸನ ಮೇಲೆ ವಿನಾಕಾರಣ ಕೋಪಿಸಿಕೊಳ್ಳುತ್ತಿದ್ದಳು. ವಿಕಾಸನಂತೂ ಸೋತು ಹೋಗಿದ್ದ. ಇತ್ತ ಕೆಲಸದಲ್ಲಿ ಒತ್ತಡ ಮನೆಯಲ್ಲಿ ಜಗಳ ತಪ್ಪಿದರೆ ಶೈಲಾಳ ಅಳು ಅವಳಿಗೆ ಸಾಂತ್ವಾನ ಹೇಳಿ ಹೇಳಿ ಸುಸ್ತಾಗಿದ್ದ. ಶೈಲಾ ಕೆಲಸವನ್ನು ಬಿಟ್ಟು ಮನೆಯಲ್ಲಿ ಕೂತಿದ್ದಳು. ಈ ಎಂಟು ತಿಂಗಳಲ್ಲಿ ಇದು ಎಂಟನೇ ಕೆಲಸ ಬಿಡುತ್ತಿರುವುದು. ಮಹಾರಾಣಿಯಂತಿದ್ದವಳಿಗೆ ಮತ್ತೊಬ್ಬರ ಆಳಾಗಿ ದುಡಿಯಲು ಕಷ್ಟವಾಗುತಿತ್ತು. ವಿಕಾಸನೇ ಕೆಲ್ಸ ಬಿಡಲು ಹೇಳಿದ್ದ


ಅಂದು ವಿಕಾಸನ ಮೊಬೈಲ್‌ ರಿಂಗಣಿಸಿತು
"ಹಲ್ಲೋ"
"ವಿಕಾಸ್ ಮನ್ವಂತರ್ ಹಿಯರ್. ಗೊತ್ತಾಯ್ತಾ?" ಅತ್ತಲಿಂದ ಮನುವಿನ ದ್ವನಿ ಕೇಳಿಸಿತು
ವಿಕಾಸ್ ಬಾಯಿ ತೆರೆದ ಆದರೆ ಶಬ್ಧ ಹೊರಡಲಿಲ್ಲ. ಗಲಿಬಿಲಿಯಾಗಿತ್ತು. ಏನು ಮಾತಾಡಬೇಕೆಂದು ಹೊಳೆಯಲಿಲ್ಲ. ಸುಮ್ಮನೇ ಇದ್ದ
"ವಿಕಾಸ್ . ನಾನು ನಿಮ್ಮ ಜೊತೆ ಮಾತಾಡಬೇಕು. "
"ಎಲ್ಲಿ ......................ಬರಬೇಕು... ಅಂತ ಹೇಳಿದರೆ ............" ವಿಕಾಸ್ ಒಂದೊಂದೇ ಪದಗಳನ್ನು ಉರುಳಿಸಿದ
ಮನು ಅತ್ತಲಿಂದ ಹೇಳಿದ
ಯಾಕಿರಬಹುದು? ಫೋನಿಟ್ಟ ಮೇಲೆ ತನ್ನಂತಾನೆ ಪ್ರಶ್ನಿಸಿಕೊಂಡ.
ಪ್ರಶ್ನೆಗೆ ನೂರಾರು ಉತ್ತರಗಳು ಧುಮ್ಮಿಕಿದವು
ಊಹೆಗಳ ಸರಮಾಲೆ ಅನಂತ ದೂರದವರೆಗೆ ಎಳೆಯಲಾರಂಭ್ಸಿಸಿತು
ಇನ್ನೂ ಯೋಚಿಸುವುದರಲ್ಲಿ ಅರ್ಥವಿಲ್ಲ ಎಂದನಿಸಿ ಆ ಯೋಚನೆಗಳ ಪರಿಧಿಯಿಂದ ಹೊರಬಂದ . ಹೇಗಿದ್ದರೂ ಇಂದು ಸಂಜೆ ಗೊತ್ತಾಗುತ್ತದೆಯಲ್ಲ ಎಂದು ನಿರಾಳನಾದ

**************************************************
ಮನೆಯಲ್ಲಿ ಕೂತು ನೆಟ್‌ನಲ್ಲಿ ನೋಟ ಹರಿಸುತ್ತಿದ್ದಳು ಶೈಲಾ. ಮನಸೆಲ್ಲಾ ಬರೀ ಯೋಚನೆಗಳೇ
ಅಲ್ಲ ತನ್ನ ಮನದಾಸೆಯನ್ನ ಹೇಳದೆ ಅವನೇ ತಿಳಿದುಕೊಂಡನಲ್ಲ ಮನು. ಅವನು ಅಷ್ಟು ಒಳ್ಳೆಯವನಾಗಿರಬಾರದಿತ್ತು ಅವನ ಒಳ್ಳೇಯತನ ತನ್ನನ್ನು ಬೆಂಕಿಯಂತೆ ಸುಡುತ್ತಿದೆಯಲ್ಲಾ. ಅತ್ತೆಯೂ ಅಷ್ಟೆ ಒಂದೂ ಕೆಟ್ಟ ಮಾತು ಆಡಲಿಲ್ಲ
ಆ ದಿನ ಇನ್ನೂ ನೆನಪಿದೆ.
ಮನು ಅಂದು ಪಕ್ಕದಲ್ಲಿ ಬಂದು ಕೂತು ಕೈ ಹಿಡಿದ
ಹಾವು ಮುಟ್ಟಿದಂತೆ ದೂರ ಸರಿದಳು ಶೈಲಾ. ಏನೋ ಕೆಲಸವಿರುವಂತೆ ರೂಮಿನಿಂದ ಹೊರ ನಡೆಯುತ್ತಿದ್ದವಳನ್ನ ಮನುವಿನ ಮಾತು ತಡೆಯಿತು

"ಶೈಲೂ ನಂಗೆಲ್ಲಾ ಗೊತ್ತಾಯ್ತು"
ಶೈಲಾ ಹೆಜ್ಜೆ ಕದಲಿಸಲಿಲ್ಲ . ಹಿಂದೆ ತಿರುಗಲಿಲ್ಲ . ಮುಂದೇನು ಹೇಳುತ್ತಾನೋ ಎಂಬ ಭಯ ಹುಟ್ಟಲಾರಂಭಿಸಿತು.
" ಶೈಲಾ ನಿಂಗೇನು ಇಷ್ಗ್ಟಾನೋ ಅದನ್ನ್ಲೆಲ್ಲಾ ನಾನು ನಿಂಗೆ ಕೊಟ್ಟಿದ್ದೇನೆ. ನಿನ್ನಾವ ಆಸೇನೂ ಬೇಡ ಅಂತ ಹೇಳಿಲ್ಲ. ಆದರೆ ಈ ಒಂದು ಆಸೆ ಈಡೇರಿಸೋದು ಕಷ್ಟ . ಯಾಕೆಂದರೆ ಇದು ಕೇವಲ ನಿನ್ನೊಬ್ಬಳ ಬಾಳಿನ ಪ್ರಶ್ನೆ ಅಲ್ಲ. ನಮ್ಮೆಲಾರ ಸಂತೋಷಾನೂ ಇದರಲ್ಲಿ ಅಡಗಿದೆ. ವಿಕಾಸ್‌ ನಿನಗೆ ಏಕಿಷ್ಟ ಆದ ಹೇಗೆ ಇಶ್ಟ ಆದ ಅನ್ನೋದನ್ನ ನಾನು ಕೇಳೋದಿಲ್ಲ ನಾನು ಹೇಳಿದ್ದನೆಲ್ಲಾ ನೆನೆಸಿಕೊಂಡು ಒಂದ್ಸಲ ಯೋಚನೆ ಮಾಡು. ಆಮೇಲೂನಿನಗೆ ನೀನು ಮಾಡುತ್ತಿರೋದೇ ಸರಿ ಎಂದನಿಸಿದರೆ ನಿನ್ನಾಸೆ ಪ್ರಕಾರಾನೇ ಮಾಡು"

ಸಿಡಿ ಮಿಡಿಗೊಳ್ಳುವಂತಾಯಿತು. ಮಾತಾಡದೆ ಹೊರಗಡೆ ಬಂದಳು.

ಎಲ್ಲರ ಸಂತೋಷಕ್ಕಾಗಿ ತಾನೇಕೆ ತ್ಯಾಗ ಮಾಡಬೇಕು. ತಾನಿದ್ದರೇ ತಾನೆ ಎಲ್ಲರೂ?
ತನಗೆ ಇಷ್ಟವಿರುವವರನ್ನು ಆರಿಸಿಕೊಳ್ಳುವ ಹಕ್ಕು ತನಗೂ ಇದೆ.
ವಿಕಾಸ್‌ ಜೊತೆ ಬಾಳು ಉಲ್ಲಾಸದಾಯಕವಾಗಿರುತ್ತದೆ
ಹೀಗೆ ಅವಳ ಹೆಜ್ಜೆಯನ್ನು ಸಮರ್ಥಿಸಿಕೊಳ್ಳಲು ಸಾವಿರಾರು ಕಾರಣಗಳು ಅವಳ ಮುಂದೆ ಸುಳಿದವು
ಕೂಡಲೆ ವಿಕಾಸನಿಗೆ ಫೋನ್ ಮಾಡಿದಳು. ಮನುವಿಗೆ ಗೊತ್ತಾಗಿದೆ ಎಂದೂ ಅವನು ಹೇಳಿದ್ದನ್ನೂ ತಿಳಿಸಿದಳು
ಕೂಡಲೆ ಹೊರಟು ಬರುವಂತೆ ಹೇಳಿದ. ಉಟ್ಟಬಟ್ಟೆಯಲ್ಲಿ ಬರುವಂತೆ ಹೇಳಿದ
ಇನ್ನೇನು ಹೊರಡಬೇಕು ಅಷ್ಟ್ರಲ್ಲಿ ಸಿರಿ ಬಂದು ಕೈ ಎಳೆದಳು.
ಅವಳನ್ನು ಕರೆದುಕೊಂಡು ಹೋಗಬೇಕು ಅನ್ನಿಸಿತಾದರೂ ತನ್ನ ಬದುಕೇ ಇನ್ನೂ ಅಸ್ಥಿರವಾಗಿರುವಾಗ ಅವಳೂ ಒಂದು ಪ್ರಶ್ನಾರ್ಥಕ ಚಿನ್ಹೆಯಾಗಬಹುದೆನಿಸಿತು.
ರೂಮಿನಲ್ಲಿ ಸಿರಿಯನ್ನು ಮಲಗಿಸಿ ಕೊಂಚಹೊತ್ತಾದ ಮೇಲೆ ಮಹಡಿಯಿಂದ ಕೆಳಗಿಳಿದು ಬಾಗಿಲ ಬಳಿ ಹೋಗುತ್ತಿದ್ದಂತೆ ಎದುರು ಬಂದ ಮನುವನ್ನು ಕಂಡು ಬೆಚ್ಚಿದಳು. ಮನು ತುಟಿಯಲ್ಲಿ ವಿಷಾದದ ನಗು. ತಪ್ಪಿತಸ್ತಳಂತೆ ನೆಲ ನೋಡುತ್ತಾ ನಿಂತಳು
"ಶೈಲಾ ಕೊನೆಗೂ ನಮ್ಮನ್ನೆಲ್ಲಾ ಬಿಟ್ಟು ಹೋಗಬೇಕೆಂದು ನಿರ್ಧರಿಸಿದೆಯಾ?"
ಶೈಲಾ ಮಾತಾಡಲಿಲ್ಲ. ತಲೆಯನ್ನೂ ಮೇಲೆತ್ತಲಿಲ್ಲ . ಕೊಂಚ ಹೊತ್ತಿನ ನಂತರ ನಿಟ್ಟುಸಿರಿನ ಸದ್ದು ಕೇಳಿತು
"ಸರಿ ಶೈಲಾ ಯು ಮೇ ಗೋ." ತಾನೆ ಮುಂದಾಗಿ ಬಾಗಿಲು ತೆರೆದ
ಶೈಲಾ ಮೊಗದಲ್ಲಿ ಆಶ್ಚರ್ಯ ಗೊಂದಲಗಳು ಒಮ್ಮೆಗೇ ಮೇಳೈಸಿದವು.
ಕಾಲುಗಳು ಮುಂದೆ ಹೊರಡಲು ಮುಷ್ಕರ ಹೂಡಿದವು.
ಭಾರವಾದ ಹೆಜ್ಜೆಗಳನ್ನು ನೆಲದಿಂದ ಬೇರೆ ಮಾಡುತ್ತಿದ್ದಂತೆ ಅವಳ ಮನಸಿನಿಂದ ಮನುವಿನ ಚಿತ್ರ ದೂರವಾಗತೊಡಗಿತು.
ಗೇಟಿನ ಬಳಿಯಲ್ಲೇ ನಿಂತಿದ್ದ ವಿಕಾಸ್ ಮುಂದೆ ಮನು ಹಾಗು ಹಿಂದೆ ಶೈಲಾನ ನೋಡಿ ಅವಕ್ಕಾದ . ಇನ್ನೇನು ಕಾದಿದೆಯೋ ಎಂಬ ಯೋಚನೆಯೊಂದಿಗೆ ಮುಂದಾಗುವುದಕ್ಕೆ ಸಿದ್ದನಾದ.
ಕೊನೆಗೂ ಮನು ಹೊರಗೆ ಬಂದ ಶೈಲಾ ಜೊತೆಗೆ.
ವಿಕಾಸ್‍ನ ಉಸಿರು ನಿಂತೇ ಹೋಯಿತೇನೋ ಎನ್ನುವಷ್ಟು ನಿಧಾನವಾಯ್ತು.ವಿಕಾಸನನ್ನು ನೋಡಿ ಒಮ್ಮೆ ನಕ್ಕ ಮನು. ಆ ನಗುವಿನ ಭಾವವಾವುದೋ ತಿಳಿಯಲಿಲ್ಲ ವಿಕಾಸ್‌ಗೆ. ನಗುವ ಪ್ರಯತ್ನ ಮಾಡಿದ . ಆದರೆ ಮುಖ ನಗಲಾರೆ ಎಂದು ನಕಾರ ಮಾಡಿತು. ಇದೇನು ಈ ಮನುಷ್ಯ . ಹೆಂಡತಿಯನ್ನು ಮತ್ತೊಬ್ಬನಿಗೆ ಒಪ್ಪಿಸುವಾಗಲೂ ನಗುವೇ? ಶೈಲಾಗಾಗಲಿ ವಿಕಾಸನಿಗಾಗಲಿ ಅರ್ಥವೇ ಆಗಲಿಲ್ಲ
ಯಾವ ಮಾತನ್ನೂ ಆಡದೆ ವಿಕಾಸನ ಬಳಿ ಶೈಲಾಳನ್ನು ಬಿಟ್ಟು ಮತ್ತೆ ಗೇಟಿನ ಒಳಗೆ ನಿಂತ
ವಿಕಾಸ್‌ನ ಬೈಕ್ ಏರಿದಳು ಶೈಲಾ
ಬೈಕ್ ಸ್ಟಾರ್ಟ್ ಮಾಡುತ್ತಿದ್ದಂತೆ ಮನು ಕೈ ಬೀಸಿದ ಅವನ ಕಣ್ಣಲ್ಲಿದ್ದ ನೀರು ಬೇಡವೆಂದರು ಹೊರಗೆ ಬರುವುದನ್ನು ಅವನಿಂದ ಬಚ್ಚಿಡಲಾಗಲಿಲ್ಲ.
ಆ ದೃಶ್ಯ ನೂತನ ಜೋಡಿಗಳ ಮನಸಲ್ಲಿ ಅಚ್ಚಳಿಯದೇ ನಿಂತು ಬಿಟ್ಟಿತು.
****
ಮತ್ತದೇ ದೃಶ್ಯ ಮನಸಲ್ಲಿ ಪುನಾರವರ್ತನೆಯಂತಾಗಿ ಶೈಲಾ ಮಂಚಕ್ಕೆ ಒರಗಿದಳು
--------------------------------------------------------------------
ಅಂದು ಸಂಜೆ ಮನುವನ್ನು ಭೇಟಿಯಾಗಿ ಬರುತ್ತಿದ್ದಂತೆ ವಿಕಾಸ್ ಕುದಿಯುತ್ತಿದ್ದ. ಅಬ್ಬಾ ಈ ಮನುಷ್ಯ ಇಂತಹವನೇ? ಅವನ ಮಾತುಗಳು ಮತ್ತೆ ಮತ್ತೆ ಕಿವಿಯನ್ನು ತೂತು ಮಾಡುತ್ತಿತ್ತು
"ವಿಕಾಸ್ ಪರವಾಗಿಲ್ಲ ಹಳಸಲಾದರೂ ಪಕ್ವಾನ್ನದಂತೆ ನೋಡ್ಕೋತಿದ್ದೀಯಂತೆ. ನೋಡ್ಕೋ ನೋಡ್ಕೋ ನೀನುಂಟು ನಿನ್ನ ಹೊಸ ಹೆಂಡತಿ ಅಂದ್ರೆ ನನ್ನ ಹಳೇ ಹೆಂಡತೀ ಉಂಟು . ನಂಗೂ ಅವಳ ಜೊತೆ ಇದ್ದು ಅದೇ ಹಳೇದನ್ನ ತಿಂದೂ ತಿಂದೂ ಬೇಜಾರಾಗಿ ಹೋಗಿತ್ತು. ಅದಕ್ಕೆ ಅವಳು ಹೋಗ್ತೀನಿ ಅಂದ ಕೂಡಲೇ ಅವಳನ್ನ ಓಡಿಸಿ ಬಿಟ್ಟೆ" ಒಳ್ಳೇ ಖಳನಾಯಕನಂತೆ ನಕ್ಕ
ವಿಕಾಸನ ತಲೆ ಗಿರ್ರೆ ಂ ದಿತು
ಇದೇನು ಇಂತಹ ಮಾತು
" ಅಂದಹಾಗೆ ನಾನಿಲ್ಲಿ ನಿನ್ನ ಕರೆದದ್ದು ನಿನ್ನ ಲವರ್‌ಗೆ ಹೇಳಿ ನಂಗೆ ಡೈವೋರ್ಸ್ ಕೊಡೋದಿಕ್ಕೆ ಹೇಳು ಅಂತ ಹೇಳೋಕೆ ನಂದೂ ಉಪ್ಪು ಹುಳಿ ತಿಂದ ದೇಹ ನಾನೂ ಬೇರೆ ಮದುವೆ ಮಾಡ್ಕೋಬೇಕು. ಈಗಾಗಲೆ ಹೆಣ್ಣು ಗೊತ್ತಾಗಿದೆ . ಮದುವೆ ಮಾತ್ರ ಬಾಕಿ. ಆಮೇಲೆ ಆ ಸಿರೀನ ಕರೆದುಕೊಂಡು ಹೋಗೋಕೆ ಹೇಳು. ನಂಗೂ ಒಳ್ಳೆಯವನ ಥರಾ ನಟಿಸಿ ನಟಿಸೀ ಬೇಜಾರಾಗಿ ಹೋಗಿದೆ. " ತನ್ನ ಜೋಕಿಗೆ ತಾನೆ ನಕ್ಕು ಎದ್ದು ತನ್ನ ಕಾರಿನಲ್ಲಿ ಕೂತ ಮನು ವಿಕಾಸನ ಮರು ಮಾತಿಗೆ ಕಾಯಲೂ ಇಲ್ಲ
ವಿಕಾಸನಿಗೆ ದಿಗ್ಬ್ರಮೆಯಾಗಿತ್ತು ಇದನ್ನೆಲಾ ಹೇಳಿದರೆ ನಂಬುತ್ತಾಳೇಯೇ ಶೈಲಾ.
ತಲೆ ಚಿಟ್ಟು ಹಿಡಿದಂತಾಗಿ ಮನೆಗೆ ಬಂದು ಕೂತವನಿಗೆ ಮುಸಿ ಮುಸಿ ಅಳುತ್ತಿದ್ದ ಶೈಲಾ ಕಂಡಳು.
"ಯಾಕೆ ಶೈಲಾ ಏನಾಯ್ತು ? "ಗಾಭರಿಯಾಗಿ ಕೇಳಿದವನಿಗೆ
ತನ್ನ ಮುಂದೆ ಇದ್ದ ಕಂಪ್ಯೂಟರ್ ಪರದೆಯ ಕಡೆಗೆ ಕೈ ತೋರಿದಳು
ಅವಳು ತೋರಿದತ್ತ ನೋಡಿದ
ಅದು ಸಂಗೀತಾ ಮೇಲ್.
"ಶೈಲಾ ಒಮ್ಮೊಮ್ಮೆ ನಮಗೆ ಗೊತ್ತಿಲ್ಲದ ಹಾಗೆ ವಿಧಿ ನಮ್ಮನ್ನ ಸರಿಯಾದ ದಿಕ್ಕಿಗೆ ಕರೆದುಕೊಂಡು ಹೋಗಿರುತ್ತೆ. ನಿನ್ನ ವಿಷಯದಲ್ಲೂ ಹಾಗೇನೆ ಆಗಿದೆ. ಆವತ್ತು ನೀನು ಮನುವನ್ನು ಬಿಟ್ಟು ಬಿಡ್ತೀನಿ ಅಂತಂದಾಗ ನಾನು ಚೆನ್ನಾಗಿ ಬೈದಿದ್ದೆ. ಆದರೆ ನೀನು ಮಾಡಿದ್ದೇ ಸರಿ . ಮನು ನಿಜವಾದ ಬಣ್ಣ ನನಗೆ ನೆನ್ನೆ ಗೊತ್ತಾಯ್ತು . ಮನು ನಿನ್ನ ತಂದೆ ಫ್ಯಾಕ್ಟರಿನ ನಿನ್ನ ಹೆಸರಿಂದ ತನ್ನ ಹೆಸರಿಗೆ ಮಾಡಿಕೊಂಡಿದ್ದಾನಂತೆ. ಅದಕ್ಕಾಗೇ ಅವನಿಗೆ ನಿನ್ನ ಅವಶ್ಯಕತೆ ಇರಲಿಲ್ಲ ಹೇಗೋ ಮಾಡಿ ನಿನ್ನನ್ನ ಸಾಗ ಹಾಕಿದರೆ ಸಾಕು ಅನ್ನೋ ಯೋಚನೆ ಇತ್ತಂತೆ . ಅವನಿಗೆ ಈಗಾಗಲೇ ಶ್ಯಾಮಲಾ ಗ್ರೂಪ್ ಆಫ್ ಕಂಪನಿಯ ಚೇರ್ಮನ್ ಮಗಳು ರಮ್ಯಾ ಜೊತೆ ಮದುವೆ ಗೊತ್ತಾಗಿದೆ. ಇದು ಎಂಟು ತಿಂಗಳ ಹಿಂದಿನ ವಿಷ್ಯ . ನಮ್ಮಫ್ರೆಂಡ್ ಅಣ್ಣ ಲಾಯರ್ ಅವರ ಕಡೆಯಿಂದ ಈ ವಿಷಯ ಗೊತ್ತಾಯ್ತು. ಈಗೇನೋ ನೀನು ಡೈವೋರ್ಸ್ ಕೊಡಬೇಕಂತೆ . ಹಾಗೆ ಸಿರೀನ ಹಾಸ್ಟೆಲ್‌ಗೆ ಸೇರಿಸೋ ಪ್ಲಾನ್ ಇದೆ ಅಂತಾನೂ ಹೇಳ್ತಿದ್ದರು. ರಮ್ಯಾ ಫೋಟೋ ನಾನೂ ನೋಡಿದ್ದೀನಿ ಅವಳು ಸುರ ಸುಂದರಿ ಅವಳ ಬಲೆಗೆ ಮನು ಬಿದ್ದು ಬಿಟ್ಟಿದ್ದಾರೆ . ಸಿರೀನ ನಿನ್ನ ಬಳಿ ಕರೆಸಿಕೋ ಡೈವೋರ್ಸ್ ಕೊಟ್ಟುಬಿಡು ಕೊಚ್ಚೆಯ ಜೊತೆ ಸರಸ ಬೇಡ"
ಶೈಲಾಳ ಕಣ್ಣಿಂದ ನೀರು ಧಾರಾಕಾರವಾಗಿ ಸುರಿಯುತ್ತಿತ್ತು. ವಿಕಾಸ್ ಅವಳನ್ನು ಎದೆಗೊರಗಿಸಿಕೊಂಡ .
" ವಿಕಿ ನಾನಿದನ್ನ ನಂಬಲ್ಲ ಮನು ಅಂತಹವರಲ್ಲ. ಅವರು ಆವತ್ತು ನನ್ನ ಕೈನಿಂದ ಸೈನ್ ಮಾಡಿಸಿಕೊಂಡಿದ್ದೇನೋ ನಿಜ ಆದರೆ ನನ್ನಾಸ್ತಿಗೋಸ್ಕರ ನಂಗೆ ಮೋಸ ಮಾಡೋರಲ್ಲ ಅವರು . ಅಂತೋರಲ್ಲ. " ಬಡಬಡಿಸುತ್ತಿದ್ದಳು
ಸಂಗೀತ ಹೇಳಿದ್ದು ನಿಜ ಎಂದು ಹೇಳುವ ಧೈರ್ಯವಾಗಲಿಲ್ಲ ವಿಕಾಸ್‌ಗೆ .
ಅವಳ ತಲೆ ನೇವರಿಸುತ್ತಲೇ
"ಏನಾದರಾಗಲಿ ಒಂದ್ಸಲ ಸಿರೀನ ನೋಡಿ ಬರೋಣ ಶೈಲಾ?" ನಿಧಾನಕ್ಕೆ ನುಡಿದ
ಬಿಕ್ಕಳಿಸುತ್ತಲೇ ಆಯಿತೆನ್ನುವಂತೆ ತಲೆ ಆಡಿಸಿದಳು
*******************ಮುಂದಿನ ಕಂತಿಗೆ ಮುಕ್ತಾಯ**************************************

Friday, September 11, 2009

ಅನ್ವೇಷಣೆ - ೧

"ಸ್ವಾತಿ ತುಂಬಾ ಮುದ್ದಾಗಿದ್ದೀಯಾ ಅದು ಹೇಗೆ ಇಂತಾ ಅಪ್ಪ ಅಮ್ಮನಿಗೆ ನೀನು ಹುಟ್ಟಿಬಿಟ್ಟೆ ?" ಈ ಪ್ರಶ್ನೆ ತುಂಬಾ ಕಾಮನ್ ಆಗಿದ್ದರಿಂದ ಅದು ಸ್ವಾತಿಗೆ ಹೊಸದೆನಿಸಲಿಲ್ಲ . ಸುಮ್ಮನೆ ನಕ್ಕಳು. ಅವರ ಸ್ಟಾಪ್ ಬಂತು ಇಳಿದು ಹೋದರು. ಯಾರು ಎಂದು ಅವಳಿಗೇನು ಗೊತ್ತು. ಅಪ್ಪನಿಗೆ ತಿಳಿದವರಿರಬೇಕು ಅಥವಾ ಅಮ್ಮನಿಗೂ . ಇದ್ದರೂ ಇರಬಹುದು ಊರಿಗೆ ಗೊತ್ತಿರುವವರು ಅಪ್ಪ ಅಮ್ಮ .ಎಂದುಕೊಂಡು ಸುಮ್ಮನಾದಳು
ಹೌದು ಸ್ವಾತಿಯ ಅಪ್ಪ ಕಪ್ಪು ಬಣ್ಣಕ್ಕೆ ಸಡ್ಡು ಹೊಡೆಯುವ ಬಣ್ಣ . ಅಮಾವಾಸ್ಯೆ ದಿನ ಅಪ್ಪ ಎಲ್ಲಿ ಕತ್ತಲೆಲ್ಲಿ ಎಂದು ಹುಡುಕಬೇಕಾದ ಪರಿಸ್ಥಿತಿ ಉಂಟಾಗುತ್ತದೆ
ಅವಳ ಅಮ್ಮನೇ ವಾಸಿ ಕೊಂಚ ಬೆಳ್ಳಗೆ ಇದ್ದಾರೆ. ಆದರೋ ಮೂಗೋ ಬಿ ಎಮ್ ಟಿ ಸಿ ಬಸ್ ಸೀದಾ ಬಂದು ಅಮ್ಮನ ಮೂಗಿನ ಮೇಲೆ ಹತ್ತಿ ಪಯಣಿಸಿತ್ತೇನೋ ಎಂಬಷ್ಟು ಸಪಾಟವಾಗಿದೆ. ತಕ್ಕಂತೆ ಪುಟ್ಟ ಪುಟ್ಟ ಕಣ್ಣುಗಳು. ನಾನೇ ಮುಂದೆ ಎಂದು ಬಾಗಿರುವ ಹಲ್ಲುಗಳು.
ಸ್ವಾತಿ ಸೌಂದರ್ಯಕ್ಕೆ ಮತ್ತೊಂದು ಪರ್ಯಾಯ ಹೆಸರು. ಹಾಗಾಗೇ ಮನೆಯಲ್ಲಿ ಅವಳನ್ನ ತುಂಬಾ ಮುದ್ದು ಮಾಡ್ತಾ ಇರ್ತಾರೆ . ಒಬ್ಬಳೇ ಮಗಳೆಂದು ಬಲು ಮುದ್ದಾಗಿ ಸಾಕಿದ್ದರು. ಶ್ರೀಮಂತ ಕುಟುಂಬಕ್ಕೆ ಸೇರಿದ ರೆಡ್ಡಿಗಳ ಮಗಳು . ಅಪ್ಪನ ದರ್ಪ ಅಮ್ಮನ ಜಂಭ ಧಾರಾಳವಾಗಿತ್ತು ಜೊತೆಗೆ ತುಂಟತನ ಸಾಕು ಸಾಕೆನ್ನುವಷ್ಟು.ಕಾಲೇಜಿನಲ್ಲಿ ತುಂಟಿ ಎಂಬ ಹೆಸರಿನ ಜೊತೆಯೇ ಜಾಣೆ ಎಂಬ ಬಿರುದು ಇತ್ತು
ಇನ್ನೂ puc ರಿಸಲ್ಟ್ ಬಂದಿರಲಿಲ್ಲ. ಆದರೂ ಸ್ವಾತಿಗೆ ಯಾವ ಆತಂಕವೂ ಇರಲಿಲ್ಲ ಅವಳು ಪರೀಕ್ಶೆಯಲ್ಲಿ ಮೊದಲ ಸ್ಥಾನ ಬಿಟ್ಟು ಕೆಳಗಿಳಿದ್ದಿಲ್ಲ
ಅಥವ ಹಾಗೇನಾದರೂ ಆದರೂ ಅವಳಿಗೇನೂ ನಷ್ಟವಿಲ್ಲ. ಅವಳು ಓದಿ ಸಂಪಾದಿಸಬೇಕಾದ್ದು ಏನು ಇರಲಿಲ್ಲ
ಬಸ್ ಸ್ಟಾಪ್ ಬಂತು.ಬಸ್ ಇಂದ ಇಳಿಯುತ್ತಿದ್ದಂತೆ ಸುತ್ತಾ ಮುತ್ತಾ ಇದ್ದ ಕಣ್ಣುಗಳೆಲ್ಲಾ ಅವಳ ಮೇಲೆ ಹಾದವು . ಅವಳಿಗೂ ಗೊತ್ತು ಎಲ್ಲರೂ ಕಂಡಕ್ಟರ್ ಹಾಗು ಡ್ರೈವರ್ ಸೇರಿದಂತೆ ತನ್ನನ್ನೇ ನೋಡ್ತಾ ಇದ್ದಾರೆ ಅಂತ . ಅದೂ ಒಂಥರಾ ಪುಳಕವೇ ಅವಳಿಗೆ
ಅಮ್ಮ ಎಷ್ಟೋ ಸಲ ಹೇಳಿದ್ದಾರೆ "ಸ್ವಾತಿ ಸ್ಕೂಟಿ ಕಲಿತ್ಕೋ ಸುಮ್ನೆ ಬಸಲ್ಲಿ ಎಲ್ಲಾ ಜನರ ಕಣ್ಣು ಬೀಳುತ್ತೆ. " ಅಂತಾ
ಅಪ್ಪಾ ಅಂತೂ ಒಂದು ಹೆಜ್ಜೆ ಮುಂದೆ "ಸ್ವಾತಿ ನೀನು ಕಾರಲ್ಲೇ ಹೋಗಿ ಬಾ "ಅಂತಾರೆ
ಆದರೂ ಅವಳಿಗೆ ಬಸ್ಸಲ್ಲೇ ಓಡಾಡೋ ಆಸೆ.
ಸುತ್ತಾ ಇರೋ ಜನರನ್ನ ನೋಡೋ ಆಸೆ. ಅವರ ಕಣ್ಣಲ್ಲಿ ಏನಿದೆ ಅಂತ ತಿಳಿಯೋ ಆಸೆ. ಹಿಂದೆ ಬೀಳೋ ಪುಂಡರನ್ನ ಸಾಕು ಎನಿಸುವಷ್ಟು ಗೋಳು ಹಾಕಿಕೊಳ್ಳೋ ಆಸೆ. ಹಾಗೆ ಹಿಂದೆ ಬಿದ್ದ ಹುಡುಗರು ಅಪ್ಪನ ಕೋಪಕ್ಕೆ ಸಿಕ್ಕಿ ಕೈ ಕಾಲು ಮುರಿಸಿಕೊಂಡು ಇವಳನ್ನು ನೋಡಿದರೆ ಸಾಕು ದೂರದಿಂದಲೇ ಕೈ ಮುಗಿದು ಓಡಿ ಹೋಗುವುದನ್ನು ನೋಡಿ ನಗುವ ಆಸೆ
ಬಸ್ ಸ್ಟಾಪ್ ಪೂರ್ತಿ ಜನಗಳು ಇನ್ನೇನು ಯಾವ ಬಸ್ಸೂ ಬರೋದಿಲ್ವೇನೋ ಅನ್ನೊ ಹಾಗೆ ಜನ ಕುರಿ ಮಂದೆ ಥರಾ ನುಗ್ತಾ ಇದ್ದಾರೆ. ಆ ಬಸ್ ಡ್ರೈವರ್ರೋ ಇಡಿ ಜನರನ್ನೇ ತಾನೆ ಹೊತ್ತುಕೊಂಡು ಹೋಗ್ತೀನೇನೋ ಅನ್ನೋಹಾಗೆ ಬೈತಾ ಇದ್ದಾನೆ.
ಎಷ್ಟೆ ಮುಂದುವರೆದ್ರೂ ಈ ಕಂಡಕ್ಟರ್ಸ್‌ಗೆ ಮತ್ತೆ ಡ್ರೈವರ್ಸ್‌ಗೆ ಸಾಫ್ಟ್ ಸ್ಕಿಲ್ಸ್ ಹೇಳಿಕೊಡದಿದ್ದರೆ ಬಿ ಎಮ್ ಟಿಸಿ ಬಸ್ಸಾ ಅನ್ನೋ ರಾಗ ತಪ್ಪಲ್ಲ.
ನಗುತ್ತಾ ಮನೆಯತ್ತ ನಡೆದಳು
ಭವ್ಯ ಬಂಗಲೆ ಅದು .
"ಸ್ವಾತಿ ಇಲ್ಲಿ ಬಾ " ಅಪ್ಪ್ಪ ಸ್ವಿಮ್ಮಿಂಗ್ ಪೂಲ್ ಬಳಿಯಲ್ಲೇ ಕೂತಿದ್ದರು . ಹೋಗಿ ಕೂತಳು . ಇಲ್ಲಿ ಕೂತು ಮಾಡುವುದೇನು ? ಮಾತಾಡೋಕೆ ಯಾಕೋ ಮನಸ್ಸೇ ಬರ್ತಾ ಇಲ್ಲ. ಅತ್ತಿತ್ತ ನೋಡತೊಡಗಿದಳು. ಅಪ್ಪ ಅವಳನ್ನ ಕರೆದದ್ದನ್ನೇ ಮರೆತವರಂತೆ ಕಿವಿಗೆ ಮೊಬೈಲ್ ಅಂಟಿಸಿಕೊಂಡಿದ್ದರು. ಜೋರು ದ್ವನಿಯಲ್ಲಿ ಮಾತು ನಡೆಯುತ್ತಿತ್ತು
"ಲೋ ಲೋಫರ್ ಏನೋ ಮಾಡ್ತಾ ಇದ್ಯಾ ಮೊದಲು ಅವನ್ ಮನೆ ಹೊಡುಕೋ . ಎಲ್ಲಿ ಸತ್ ಬಿದ್ದಿದಾನೆ . ಹಂಗೆ ಅವನ್ ಮನೇಲಿ ಯಾರ್ಯಾರಿದ್ದಾರೆ ಅಂತ ಡೀಟೇಲ್ಸ್ ತಗೋ. ಕಕ್ಕ್ಸಿಬಿಡ್ತೀನಿ. ಈ ಕ್ರಿಷ್ಣಾರೆಡ್ಡಿ ಅಂದ್ರೆ ಉಚ್ಚೊಯ್ಕೋಬೇಕು ಹಂಗ್ ಮಾಡ್ತೀನಿ"
ಇದು ಸಾಮಾನ್ಯ ಮಾತುಕತೆ
ಸ್ವಾತಿಯ ಅಪ್ಪ ಫೈನಾಂಶಿಯರ್. ಜೊತೆಗೆ ಪೇಪರ್ ಏಜೆಂಟ್, ಕೇಬಲ್ ಲಾಬಿ. ರಿಯಲ್ ಎಸ್ಟೇಟ್ ಏಜೆಂಟ್. ರಿಂಗ್ ರಸ್ತೆಯಲ್ಲಿರೋ ಚೌಲ್ಟ್ರಿಯಲ್ಲಿ ನಾಲ್ಕು ಇವರದೇ. ಇವರಿರೋ ಊರಲ್ಲಿ ಅರ್ಧ ಭಾಗ ಇವರದ್ದೇ , ಆಸಾಮಿ ಕೈಗೆ ಕಾಲಿಗೆ ಕುತ್ತಿಗೆಗೆ ಅಂತ ಸುಮಾರು ಎರೆಡು ಕೇಜಿ ಚಿನ್ನ ಹಾಕಿಕೊಳ್ಳುತ್ತಿದ್ದ.
ಅವರ ಮಾತು ನಿಲ್ಲುವುದೇ ಕಾಯುತ್ತಿದ್ದಳು
"ಏನಪ್ಪ ?"
"ಸ್ವಾತಿ ಯಾವಾಗ ರಿಸಲ್ಟ್?" ಮತ್ತದೇ ಪ್ರಶ್ನೆ ಇದೇ ಪ್ರಶ್ನೆ ಪರೀಕ್ಷೆ ಆದಾಗಿನಿಂದ ಕೇಳಿ ಕೇಳಿ ಸ್ವಾತಿಗೂ ಬೇಸರವಾಗಿತ್ತು
"ಒಂದು ಸಾವಿರ ಸಲ ಕೇಳ್ತಾ ಇದ್ದೀಯಾಪ್ಪ ಬೇರೆ ಏನಾದರೂ ಕೇಳಪ್ಪ" ಬೇಸರ ಮಾಡಿಕೊಂಡೇ ಉತ್ತರಿಸಿದಳು
"ಸಾರಿ ಸ್ವಾತಿ ಮುಂದಿನ ತಿಂಗಳಲ್ವೇ. ಸರಿಯಾಗಿ ಇಪ್ಪತ್ತು ದಿನಗಳಾದ ಮೇಲಲ್ಲವೇ?"

"ಹೂ ಹೌದು . ಏನ್ಮಾಡಬೇಕಂತ ಇದ್ದೀಯಾ" ಪೇಪರ್ ಓದ್ತಾನೇ ಕೇಳಿದರು . ಅವರಿಗೆ ಮಗಳನ್ನು ಓದಿಸಿ ಡಾಕ್ಟರ್ ಮಾಡಬೇಕಂತಿತ್ತು. ಆದರೆ ಅವಳೋ ಆರ್ಟ್ಸ್ ಬ್ರಾಂಚ್ ತೆಗೆದುಕೊಂಡಿದ್ದಳು.
ಸ್ವಾತಿ ಏನು ಹೇಳಿಯಾಳು. ಅತ್ತಿತ್ತ ನೋಡಿ

"ಒಳಗೆ ಹೋಗಿ ಕಾಫಿ ಕುಡೀಬೇಕಂತ ಅನ್ಕೊಂಡಿದ್ದೇನೆ " ಹೇಳಿ ಒಳಗೋಡಿದಳು ನಗು ತಡೆಯಲಾಗಲಿಲ್ಲ. ಗೊತ್ತು ಅಪ್ಪ ಬೆಪ್ಪಾಗಿರ್ತಾರೆ ಅಂತ. ಆದರೂ ಹಾಗೆಯೇ ಅವಳು

ರೂಮೊಳೊಗೆ ಹೋದ ತಕ್ಷಣ ಅಮ್ಮ " ಎಲ್ಲಾದರೂ ಹೊರಗಡೆ ಹೋಗಿ ಬಂದ ಮೇಲೆ ಕಾಲು ತೊಳ್ಕೋ ಅಂದ್ರೂ ಕೇಳಲ್ಲ ಯಾವ್ಯಾವ ಜನರು ಏನೇನು ಮಾಡ್ರಿರ್ತಾರೋ ." ಗೊಣಗುತ್ತಿದ್ದರು

ಅಮ್ಮನಿಗೆ ಒಂಥರಾ ಜನ ನಮಗೆ ಮಾಟ ಮಂತ್ರ ಮಾಡಿಸಿರ್ತಾರೆ ಅಂತ ಭಯಾನೋ ಗೊತ್ತಿಲ್ಲ. ಅಪ್ಪನಿಗೆ ಎಲ್ಲಿ ಯಾರ್ ಯಾವತ್ತು ಮಚ್ಚು ಲಾಂಗ್ ಹಿಡ್ಕೊಂಡು ಬರ್ತಾರೋ ಅಂತ ಭಯ. ಇಲ್ಲದೇ ಏನು ಅಂಥಾ ಪಾಪಗಳನ್ನು ಮಾಡಿರೋರು ಅವರು ನಗು ಬರುತ್ತಿತ್ತು
ರೂಮಿನ ಕಿಟಕಿ ಇಂದ ಅಪ್ಪಾ ಫೋನಲ್ಲಿ ಮಾತಾಡ್ತ್ತಿದ್ದುದು ಕೇಳಿಸ್ತಿತ್ತು

"ಏಯ್ ಆ ** ಮಗನಿಗೆ ಏನ್ ರೋಗಾಂತೆ ಇವತ್ತು ಸಂಜೆ ಒಳಗೆ ಅಸಲು ಬಡ್ದಿ ಸಮೇತ ದುಡ್ಡುಕೊಡ್ಲಿಲ್ಲಾಂದ್ರೆ ಅವನ ಹೆಂಡ್ತೀನ ಬಾಂಬೆಗೆ ಮಾರ್ಬಿಡ್ತೀನಂತ ಹೇಳು . ಏನ್ಕಂದ್ಕೊಂಡಿದಾನೆ ************" ಅಪ್ಪನ ಬಾಯಿಂದ ಕೆಟ್ಟ ಮಾತುಗಳೇ . ಕೇಳೋಕಾಗಲ್ಲಾ ಒಂದೆರೆಡು ಸಲಾ ಅಪ್ಪನ್ನ ಬೈದಿದ್ದಳು

ಅದಕ್ಕೆ ಅವರು

"ನೋಡು ಸ್ವಾತಿ ಹಿಂಗೆಲ್ಲಾ ಬೈದೆ ಹೋದ್ರೆ ನನ್ನ ದುಡ್ಡು ವಾಪಾಸ್ ಬರೋಲ್ಲಾ. ಹೀಗೆಲ್ಲಾ ಇಲ್ದೆ ಹೋದ್ರೆ ನಮ್ಮ ಹಣಾ ಸ್ಮಶಾನಕ್ಕೋದ ಹೆಣ ಅಂತನ್ಕೊಂಡು ಸುಮ್ನಾಗಬೇಕಷ್ಟೆ"

"ಸ್ವಾತಿ ಬೋಂಡ ತಿಂತೀಯಂತೆ ಬಾರೆ" ಅಮ್ಮಾ ಒಳಗಿಂದ ಕೂಗಿದರು

ಮುಖ ತೊಳೆದುಕೊಂಡು ಅಡಿಗೆ ಮನೆಗೆ ಹೋದಳು. ಬೋಂಡಾ ಸಿದ್ದವಾಗಿತ್ತು. ಮೆಲ್ಲತೊಡಗಿದಳು



"ಸ್ವಾತಿ ಮುಂದಿನ ತಿಂಗಳಿಗೆ ನಿಂಗೆ ಹದಿನೆಂಟು ತುಂಬುತ್ತೆ" ಅಮ್ಮಾ ಬೋಂಡಾ ಕರಿಯುತ್ತಾ ಹೇಳಿದರು

"ಮುಂದಿನವರ್ಷ ಅದೇ ತಿಂಗಳಿಗೆ ಹತ್ತೊಂಬತ್ತೂ ತುಂಬುತ್ತೆ . ಮತ್ತೆ ಅದರ ಮುಂದಿನ ವರ್ಷ್ಗ ಇಪ್ಪತ್ತೂ ತುಂಬುತ್ತೆ." ಮಾತು ಮುಂದುವರಿಸಿದಳು ಕೀಟಲೆಯಿಂದ

"ಲೇ ತರ್ಲೇ ನಾನ್ ಹೇಳ್ತಾ ಇರೋದು ಕೇಳಿಸಿಕೋ. ಶೀಲತ್ತೆ ಫೋನ್ ಮಾಡಿದ್ರು ಯಾವಾಗ ನಮ್ಹುಡುಗೀನ ಮನೆಗೆ ಕಳ್ಸ್ತೀರಾ ಅಂತಾ ."
"ಕಳಿಸಿಬಿಡು ಯಾಕೆ ಅವರ ಹುಡುಗೀನ ಇಟ್ಕೊಂಡಿದೀಯಾ" ಗೊತ್ತು ಅವಳೇನು ಹೇಳ್ತಾ ಇದಾಳಂತ ಆದರೂ ಬಾಯೊಳಗಿದ್ದ ಬೋಂಡಾ ಜೊತೆಗೆ ಮಾತಾಡಿದಳು

"ಸ್ವಾತಿ ತುಂಬಾ ತರಲೆ ಆಗ್ತಾ ಇದೀಯಾ. ಮದುವೆ ಯಾವಾಗ ಇಟ್ಕೊಳೋಣ ಅಂತಾ ಕೇಳ್ತಾ ಇದ್ದಾರೆ"
"ಅಯ್ಯೋ ಶೀಲತ್ತೆಗೆ ಮತ್ತೆ ಮದುವೇನಾ ಮತ್ತೆ ಶ್ರೀದ್ಜರ ಮಾವನ ಗತಿ" ಸ್ವಾತಿ ಉದ್ಗರಿಸಿದಳು
"ಸ್ವಾತಿ ನಿನ್ನನ್ನ ಏನ್ಮಾಡ್ತೀನಿ ಅಂತ ನೋಡು"

ಅಮ್ಮ ಅಟ್ಟಿಸಿಕೊಂಡು ಬಂದರು
ಅಮ್ಮನ ಮಾತು ಮುಂದುವರೆಯಲು ಬಿಡುವುದಿಲ್ಲ ಅವಳು
ಇನ್ನೇನು ಕೊಂಚ ದಿನಗಳಲ್ಲೇ ಮದುವೆ ಅಂತ ಅವಳಿಗೂ ಗೊತ್ತು. ಶಿವು ಅವಳಿಗೂ ಇಷ್ಟಾನೆ
ಆದರೆ ಇಷ್ಟು ಬೇಗ ಮದುವೆ ಆಗೋಕೆ ಅವಳಿಗೂ ಇಷ್ಟ ಇಲ್ಲ



ಆದರೆ ರೆಡ್ದಿ ಹೆಣ್ಣು ಮಕ್ಕಳಿಗೆ ಹದಿನೆಂಟು ಹತ್ತೊಂಬತ್ತು ತುಂಬ್ತಾ ಇದ್ದ ಹಾಗೆ ಮದುವೆ ಮಾಡಿಬಿಡುವ ಕಾರ್ಯಗಳೇ ಜಾಸ್ತಿ


ಜೊತೆಗೆ ಅವರ ಬಿಸಿನೆಸ್ ಸಹಾ ಒಂದು ಥರಾ ಅಪಾಯಕಾರಿಯಾದ್ದರಿಂದ ವಯಸಿಗೆ ಬಂದ ಮಗಳು ಸೆರಗಲಿಟ್ಟ ಕೆಂಡ ಎಂಬ ಆತಂಕ.


ಸ್ವಾತಿ ಮುದ್ದು ಮುದ್ದು ಹುಡುಗಿ ಶಿವು ಸಹಾ ಸಾಫ್ಟವೇರ್ ಇಂಜಿನಿಯರ್. ಒಳ್ಳೆ ಕಂಪೆನಿಯಲ್ಲಿ ಕೆಲ್ಸಕ್ಕೆ ಇದ್ದ. ಇವಳನ್ನು ಕಂಡರೆ ಪ್ರಾಣ ಇವಳಿಗೂ ಅಷ್ಟೇ. ಮೊದಲಿಂದಲೂ ಅವನೇ ತನ್ನ ಜೋಡಿ ಎಂಬ ಅಭಿಮಾನ.
ಸ್ವಾತಿ ಕಾಲಲ್ಲಿ ಅದೃಷ್ಟವನ್ನೇ ಹೊತ್ತು ತಂದವಳು ಅವಳು ಹುಟ್ಟಿದ ಮೇಲೆಯೇ ಅವಳ ಅಪ್ಪನ ಹೊಲ ಗದ್ದೆಗಳು ಬಂಗಾರಕ್ಕಿಂತಲೂ ಹೆಚ್ಚು ಬೆಲೆಬಾಳ ತೊಡಗಿ ಹಣದ ಹೊಳೆಯನ್ನೇ ಹರಿಸಿದವು. ಹಾಗಾಗಿ ಸ್ವಾತಿ ಅವರ ಪಾಲಿಗೆ ಕೇವಲ ಮಗಳಾಗಿರಲಿಲ್ಲ ಅದೃಷ್ಟ ದೇವತೆ ಆಗಿದ್ದಳು.
ಕಂಪ್ಯೂಟರ್ ಆನ್ ಮಾಡಿ ಶಿವು ಜೊತೆ ಚಾಟ್ ಮಾಡುತ್ತಿದ್ದ ಸ್ವಾತಿ ಅವನ ಸಾಲುಗಳನ್ನು ನೋಡಿ ಕೆಂಪುಕೆಂಪಾಗಿ ನಾಚುತ್ತಿದ್ದಳು.
ಹಾಗೆ ಕಿಟಕಿಯಿಂದ ನೋಡಿದವಳಿಗೆ ಶಾಕ್
ಪೋಲಿಸ್ ಕಾನ್‌ಸ್ಟೇಬಲ್ ಜೊತೆ ಅಪ್ಪ ಹೋಗುತ್ತಿದ್ದಾರೆ
ಎಲ್ಲಿ ಏನಾಯ್ತೋ ಎಂಭ ಭಯದಿಂದ ಹೊರಗೆ ಓಡಿದಳು
ಅಪ್ಪ ಮಾತ್ರ ನಗುತ್ತಾ ಹೊರಟಿದ್ದರು ಜೊತೆಗೆ ಅಮ್ಮನೂ ಹೊರಟಿದ್ದಳು
"ಅಪ್ಪಾ ? ?"ಕೂಗಿದಳು. ಕೂಗಿನಲ್ಲಿ ಪ್ರಶ್ನೆ ಇತ್ತು

"ಏನಿಲ್ಲಾ ಸ್ವಾತಿ ಸ್ಟೇಷನ್‌ನಲ್ಲಿ ಅದ್ಯಾರೋ ನಿಮ್ಮ ತಾಯಿಯ ಹೆಸರು ಹೇಳಿದಾಳಂತೆ ಅದ್ಯಾರು ಅಂತ ನೋಡಿಕೊಂಡು ಬರೋಣ ಅಂತ"

"ಅಪ್ಪಾ ನಾನೂ ಬರ್ತೀನಿ ಪ್ಲೀಸ್"

"ಸರಿ ಬರಲಿ ಬಿಡಿಸಾರ್ ಫ್ಯಾಮಿಲಿ ಟ್ರಿಪ್ ಆದಂಗೆ ಆಗುತ್ತೆ" ಪೇದೆ ಕಿಸಿದ
"ಹೌದೌದು ನಿಮ್ಮ ಸ್ಟೇಷನ್ ದೊಡ್ಡ ತಾಜ್ ಮಹಲ್ ನಡ್ಯೋ ಮುಂದೆ ನೋಡ್ಕೊಂಡು"ಸ್ವಾತಿಯ ಅಪ್ಪ ಗದರಿದರು
ಅವರ ದರ್ಪವೇ ಅಂತಹದ್ದು.

ಎಲ್ಲರೂ ಕಾರನ್ನೇರಿದರು


ಕಾರ್ ಪೋಲಿಸ್ ಸ್ಟೇಷನ್‌ನ ಮುಂದೆ ನಿಂತಿತು

ಹೊರಗಡೆಯೇ ನಿಂತಿದ್ದ ಎಸ್ ಐ ಸ್ವಾಗತಿಸಿದ
"ಬನ್ನಿ ಸಾರ್ . ಅದು ಈ ಹೆಂಗಸು ನಮಗೆ ಲೇಡಿ ಕರ್ಜನ್ ಹಾಸ್ಪಿಟಲ್ ಬಳಿ ಸಿಕ್ಕಳು. ಮಕ್ಕಳ ಕಳ್ಳಿ ಇವಳು"


ಸ್ವಾತಿಯ ಅಪ್ಪ


"ನಮ್ಮ ಮನೇಲಿ ಯಾವ ಮಕ್ಕಳೂ ಕಳೆದು ಹೋಗಿಲ್ಲ . ನಮ್ಮನ್ಯಾಕೆ ಕರೆಸಿದ್ರಿ?" ಅವರ ಧ್ವನಿಯಲ್ಲಿ ಬೇಸರ ಇತ್ತು


"ಸಾರಿ ಸಾರ್ ನೀವೊಂದು ಸಲ ಆಕೆ ಹತ್ರ ಮಾತಾಡಿ ನಾನ್ಯಾಕೆ ಕರೆಸಿದೆ ಅಂತ ಗೊತ್ತಾಗುತ್ತೆ . ನಿಮ್ಮ ಮಗಳು ಇಲ್ಲೆ ಇರಲಿ"


ಎಸ್ ಐ ಹೇಳಿದ


ಸ್ವಾತಿ ಕೆರಳಿದಳು


"ನಾನ್ಯಾಕೆ ಇಲ್ಲೆ ಇರಬೇಕು ನಾನೂ ಆ ಹೆಂಗಸನ್ನ ನೋಡಬೇಕು ನಾನ ನೂವ್ ಚೆಪ್ ನಾನಾ"ಒಮ್ಮೊಮೆ ತೆಲಗು ಬೇಡವೆಂದರೂ ನಾಲಿಗೆಗೂ ಬಂದುಬಿಡುತ್ತಿತ್ತು


"ಬರಲಿ ಬಿಡ್ರಿ. ಅವಳೇನು ಬೇರೆಯವಳಾ?" ಸ್ವಾತಿಯ ಅಪ್ಪ


"ಸಾರ್ ಆದರೆ ಇದು....." ಎಸ್ ಐ ತಡವರಿಸಿದ


"ನೀನು ಬಾ ಸ್ವಾತಿ " ಅವನ ಮಾತನ್ನು ಗಮನಿಸದೆ ಅಪ್ಪ ಮುಂದುವರೆದರು ಸ್ವಾತಿ ಅವರನ್ನು ಹಿಂಬಾಲಿಸಿದಳು


ಶೆಲ್‌ನ ಒಳಗೆ ಆ ಹೆಣ್ಣು ಕೊತಿದ್ದಳು. ತಲೆ ತಗ್ಗಿಸಿದ್ದರಿಂದ ಮುಖ ಕಾಣಿಸಲಿಲ್ಲ. ಅವಳ ಕೈ ಮೇಲೆ ಬಾಸುಂಡಿಗಳು ಪೋಲಿಸರ ಆತಿಥ್ಯ ತಿಂದುದಕ್ಕೆ ಸಾಕ್ಷಿಯಾಗಿತ್ತು.


"ಏಯ್ ನೋಡು . ನೀನು ಹೇಳಿದ ಹಂಗೆ ಪಾರ್ವತಮ್ಮ ಬಂದಿದಾರೆ . ಬೊಗಳು. " ಪಕ್ಕದಲ್ಲೆ ನಿಂತಿದ್ದ ಲೇಡಿ ಕಾನ್‌ಸ್ಟೇಬಲ್ ಗದರಿದಳು.

ಆಕೆ ತಲೆ ಎತ್ತಿದಳು

ಪಾರ್ವತಮ್ಮ ಅಂದರೆ ಸ್ವಾತಿಯ ಅಮ್ಮನಿಗೆ ಅವಳ ಗುರುತು ಹತ್ತಲಿಲ್ಲ. ತುಂಬಾ ವಯಸಾಗಿತ್ತು. ಆ ಹೆಂಗಸಿಗೆ. ಕಣ್ಣುಗಳ ಸುತ್ತಾ ಕಪ್ಪು ವರ್ತುಲಗಳು.

"ಯಾರು? ನಾನು ನಿಂಗೆ ಗೊತ್ತಿದ್ದೀನಾ?" ಪಾರ್ವತಮ್ಮನ ದ್ವನಿಯಲ್ಲಿ ಅವರಿಗೆ ಗೊತ್ತಿಲ್ಲದ ಹಾಗೆ ನಡುಕ ಉಂಟಾಗಿತ್ತು
ಆಕೆ ಎದ್ದು ನಿಂತಳು
" ನಾನ್ಯಾರು ಅಂತ ನಿಮಗೆ ನೆನಪಿರಬಹುದು. ನಾನು ನಿಮ್ಮ ಹೆರಿಗೆ ಮಾಡಿದವಳು" ಆಕೆ ಒಂದೊಂದಾಗಿ ಪದಗಳನ್ನು ಕಷ್ಟ ಪಟ್ಟು ಉರುಳಿಸಿದಳು.
ಪಾರ್ವತಮ್ಮನಿಗೆ ಮಿಂಚು ಬಂದಂತಾಯ್ತು

ಆಗ ಹದಿನೆಂಟು ವರ್ಶ್ಹಗಳ ಮುಂಚೆ ಆಗಿನ್ನೂ ಅವರಿದ್ದ ಊರು ಕಾಡಿನಂತಿತ್ತು. ಸಿರಿವಂತಿಕೆಯೂ ಇರಲಿಲ್ಲ
ತಾಯಿ ತಂದೆ ಇಬ್ಬರನ್ನೂ ಕಳೆದುಕೊಂಡಿದ್ದ ಪಾರ್ವತಿಗೆ ಗಂಡನ ಅಮ್ಮ ಅಂದರೆ ಅವಳ ಅಜ್ಜಿ ಮಾತ್ರ ಇದ್ದರು. ಅವರಿಗೂ ವಯಸಾಗಿತ್ತು. ಆಗ ಪಾರ್ವತಿಯ ಗಂಡ ಕ್ರಿಷ್ಣಾರೆಡ್ಡಿ ಮಹಾ ಕುಡುಕ. ಒಮ್ಮೆ ಹೊರಗೆ ಹೋದರೆ ಮತ್ತೆ ಬರುವುದು ಎಂದೋ. ಅಂತಾಹ ಒಂದು ದಿನದಲ್ಲೇ ತುಂಬು ಗರ್ಭಿಣಿಯಾಗಿದ್ದ ಪಾರ್ವತಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಅಲ್ಲಿಂದ ಸಿಟಿಗೆ ಬರಬೇಕಾಗಿತ್ತು. ಹೇಗೋ ಪಕ್ಕದ ಮನೆಯಲ್ಲಿದ್ದ ಆಟೋಗೆ ಹೇಳಿ ಅದರಲ್ಲಿ ಬರುತ್ತಿದ್ದಂತೆ ನೋವು ಹೆಚ್ಚಾಗತೊಡಗಿತು. ಅವಳ ಹೆರಿಗೆ ಈಗಲೆ ಆಗಬಹುದೆಂದು ಅನಿಸಿ ದಾರಿಯಲ್ಲಿ ಗೊತ್ತಿದ್ದ ಮನೆಯೊಂದರ ಬಾಗಿಲು ಬಡಿದರು.
ಆ ಮನೆಯ ಹೆಂಗಸು ಮರಿಯಮ್ಮ ಒಬ್ಬ ಸೂಲಗಿತ್ತಿಯಾದ ಕಾರಣ ಒಂದು ಘಂಟೆಯಲ್ಲಿ ಸುಸ್ಸೂತ್ರವಾಗಿ ಹೆರಿಗೆ ಮುಗಿಸಿದ್ದಳು. ಆದರೆ ಪಾರ್ವತಿಗೆ ಎಚ್ಚರವಾಗುವ ವೇಳೆಗೆ ಆ ಹೆಂಗಸು ಇರಲಿಲ್ಲ.ದೇವರೆ ಅವಳ ರೂಪದಲ್ಲಿ ಬಂದು ತನ್ನ ಹೆರಿಗೆ ಮಾಡಿಸಿದ್ದಾರೆಂದು ಧನ್ಯಳಾಗಿದ್ದಳು ಪಾರ್ವತಿ. ಆಗ ಹುಟ್ಟಿದವಳೇ ಸ್ವಾತಿ.

ಆ ಹೆಂಗಸು ಇವಳೇ ಇರಬಹುದೆ ಎಂದನಿಸಿತು ಪಾರ್ವತಮ್ಮನಿಗೆ
ನೆನಪು ಮಾಡಿಕೊಂಡು ಕೇಳಿದರು
"ನೀನು ಮರಿಯಮ್ಮ ಅಲ್ವಾ?"
"ಹೌದು ಅದು ನಾನೆ. ನಾನೆ ಅವಳು. "
"ಅಯ್ಯೋ ದೇವರಂಗ್ ಬಂದು ನನ್ನ ಪ್ರಾಣ ಉಳಿಸಿದೆ ತಾಯಿ ನೀನು . ಎಲ್ಲ್ ಹೊರಟೋದೆ ನೀನು ಆಮೇಲೆ?" ಪಾರ್ವತಮ್ಮ ನುಡಿಯುತ್ತಿದ್ದಂತೆ ಆ ಹೆಣ್ಣಿನ ಮುಖದಲ್ಲಿ ಒಂದು ನಗೆ ಹಾದು ಹೋಯ್ತು.
"ಮೇಡಮ್ ಇವಳು ಎಂಥಾ ಕೆಲ್ಸ ಮಾಡಿದಾಳೆ ಅಂತಾ ಗೊತ್ತಿಲ್ಲಾ ನಿಮಗೆ " ಎಸ್ ಐ ಹೇಳುತ್ತಿದ್ದಂತೆ
"ಶ್" ಎಂದು ತಡೆದರು ಕ್ರಿಷ್ನಾರೆಡ್ಡಿ
"ಅವಳು ಹೇಳಲಿ ಬಿಡಿ"
ಸ್ವಾತಿಯ ಹೃದಯ ಹೊಡೆದುಕೊಳ್ಳಲಾರಂಭಿಸಿತು. ಆಕೆ ಯಾವುದೋ ಭೂಕಂಪವನ್ನು ಸೃಷ್ಟಿಸಬಹುದು ಎಂದೇ ಅನಿಸತೊಡಗಿತು.
ನಿಟ್ಟ ನೋಟದಿಂದ ಮರಿಯಮ್ಮನನ್ನೆ ನೋಡಲಾರಂಭಿಸಿದರು ಎಲ್ಲರೂ
"ಆವತ್ತು ನಿಮಗೆ ಹುಟ್ಟಿದ್ದು ಗಂಡುಮಗು" ಆಕೆ ಬಾಯಿ ಬಿಟ್ಟಳು ನೋಟ ಮತ್ತೆಲ್ಲೋ ಇತ್ತು
ದೊಡ್ಡದೊಂದು ಬಾಂಬ್ ಹಾಕಿದಂತೆ ಎಲ್ಲರೂ ಸ್ತಬ್ದರಾದರು. ಕ್ಷಣಕಾಲ ಮೌನವಾವರಿಸಿತು. ಮರಿಯಮ್ಮ ಆಗಬಹುದಾದ ಪರಿಣಾಮಗಳನ್ನು ಊಹಿಸುತ್ತಾ ಹಿಂದೆ ಸರಿಯುತ್ತಿದ್ದಂತೆ

ಕೂಡಲೇ ಚೇತರಿಸಿಕೊಂಡ ಕ್ರಿಷ್ಣಾರೆಡ್ಡಿ

"ಏಯ್ ಏನೆ ಬೊಗಳ್ತಿದ್ದೀಯಾ . ಇವತ್ತು ನಿನ್ನ ಗತಿ ನೆಟ್ಟಗಿಲ್ಲ ಅನ್ಸುತ್ತೆ ಅದಕ್ಕೆ ನನ್ನಕೈನಲ್ಲಿ ಸಿಕ್ಕಿಹಾಕೊಂಡಿದ್ದೀಯಾ ಸುಳ್ಳು, ಸುಳ್ಳ್ಯ್ ಹೇಳ್ತೀಯಾ ಸೀರೆ ಬಿಚ್ಚಿ ಹೊಡೀತೀನಿ ನಿಂಗೆ ನೋಡು ನಾನು .ರಂಡೆ "
ಮರಿಯಮ್ಮನ ಕೂದಲನ್ನು ಹಿಡಿದು ಜಗ್ಗಿದರು.
ಆಕೆ ನೋವಿನಿಂದ ಚೀರಿದಳು
"ಸಾರ್ ಪ್ಲೀಸ್ ಸಾರ್ ಬಿಟ್ಟು ಬಿಡಿ ಇದು ಸ್ಟೇಶನ್" ಎಸ್ ಐ ಬೇಡಿಕೊಂಡ.
ಕ್ರಿಷ್ಣಾರೆಡ್ಡಿಯ ಕೈ ಸಡಿಲವಾಯ್ತು
ಸ್ವಾತಿಯ ಎದೆಯ ಕಂಪನ ಜೋರಾಗಿತ್ತು.ಇದು ಯಾರ ವಿಷಯ ಹೇಳುತ್ತಾ ಇದ್ದಾಳೆ. ಅರ್ಥವಾಗಲಿಲ್ಲ
ಪಾರ್ವತಿ ಕುಸಿದರು
" ನಂಗೆ ಹುಟ್ಟಿದ್ದು ಈ ಹೆಣ್ಣು ಮಗೂನೆ .ಸುಳ್ಳಾಡಬೇಡ. "ಸ್ವಾತಿಯನ್ನ ತೋರಿಸಿ ನುಡಿದರು ಪಾರ್ವತಮ್ಮ.
"ಮೇಡಮ್ ಅವಳು ಹೇಳ್ತಿರೋದು ನಿಜಾ ಮೇಡಮ್ ಈ ನಿಜಾನಾ ನಾವೆ ಹೊರಡಿಸಿದಿವಿ ಅವಳ ಬಾಯಿಂದಾ" ಎಸ್ ಐ ಹೇಳಿದಾಗ ಎಲ್ಲರೂ ಅವನತ್ತ ನೋಡಿದರು.
"ಇವಳ ಕೆಲ್ಸಾನೆ ಆಗ ತಾನೆ ಹುಟ್ಟಿದ ಮಗೂನ ಕದ್ದುಕೊಂಡು ಹೋಗಿ ಮಾರೋದು . ಇಲ್ಲೀ ತನಕ ಸುಮಾರು ಗಂಡು ಮಕ್ಕಳನ್ನು ಮಾರಿದ್ದಾಳೆ . ಹಾಗೆ ಮಾರ್ತಿದ್ದ ಹಾಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಳು. ಸಕ್ಕತಾಗಿ ಚಚ್ಚಿದ ಮೇಲೆ ಒಬ್ಬೊಬ್ಬರ ಹೆಸರನ್ನೇ ಹೇಳ್ತಿದ್ದಳು ಹಂಗೆ ನಿಮ್ಮ ಹೆಸರೂ ಹೇಳಿದಳು. ಅದಕ್ಕೆ ನಿಮ್ಮನ್ನ ಕರೆಸಿದ್ದು. "
ಸ್ವಾತಿಯ ಉಸಿರು ನಿಂತಂತಾಯ್ತು
ಮಾತಾಡಲು ಬಾಯಿ ಬರಲಿಲ್ಲ
ಮರಿಯಮ್ಮ ಮುಂದುವರೆಸಿದಳು
"ನಾನ್ಹೇಳ್ತಾ ಇರೋದು ಏಸು ಆಣೆಗೂ ನಿಜಾ. ಈ ಮಗು ನಿಮ್ಮ ಮಗು ಅಲ್ಲಾ. ನಿಮ್ಮ ಮಗು ಒಂದು ಗಂಡು ಮಗು . ಆ ಮಗು ಮುಖ ನೋಡಿದ್ರೆ ಗೊತ್ತಾಗುವುದಿಲ್ಲವಾ ನಿಮ್ಮ ಮಗಳು ಆಗೋಕೆ ಸಾಧ್ಯಾನಾ?"
ಎಲ್ಲರೂ ಸ್ವಾತಿಯತ್ತ ನೋಡಿದರು.

ಸ್ವಾತಿಗೆ ಏನು ಮಾಡುವುದೆಂದು ತೋಚಲಿಲ್ಲ. ಪೆಚ್ಚು ಪೆಚ್ಚಾಗಿ ನೋಡಿದಳು.
"ನೀನೇಳ್ತಾ ಇರೋದ್ ನಿಜ ಅಂದ್ರೂ ಮತ್ತೆ ಆ ಗಂಡು ಮಗೂ ಎಲ್ಲಿ " ಕ್ರಿಷ್ಣಾರೆಡ್ಡಿ ಕರ್ಕಶವಾಗಿ ಕೇಳಿದರು
ಉತ್ತರಕ್ಕಾಗಿ ಎಲ್ಲರೂ ಮರಿಯಮ್ಮನನ್ನು ನೋಡಿದರು.
ಅವಳು ತಲೆ ತಗ್ಗಿಸಿದಳು
"ಬೊಗಳೇ ಬೇಗ ನನ್ನ ಮಗೂನ ಏನ್ ಮಾಡ್ದೆ" ಪಾರ್ವತಮ್ಮ ಕಿರುಚಿದರು
ಸ್ವಾತಿ ಪಕ್ಕನೆ ತಾಯಿಯನ್ನು ನೋಡಿದಳು. ಇಲ್ಲಿಯವರೆಗೆ ತನ್ನ ಮಗಳು ಅಂತಿದ್ದ ಅಮ್ಮನಿಗೆ ತನ್ನ ಮಗನ ಬಗ್ಗೆ ತಿಳಿಯಲು ಎಷ್ಟು ಕುತೂಹಲ ತವಕ.
ಹಾಗಿದ್ದಲ್ಲಿ ತಾನು ಯಾರು? ತನ್ನ ಅಪ್ಪ ಅಮ್ಮ ಯಾರು? ಇಲ್ಲಿಯವರೆಗೆ ತನ್ನ ಮನೆಯಲ್ಲದ ಮನೆಯಲ್ಲಿ ಬದುಕಿದೆನೇ ನಾನು? ತನ್ನ ಗಮ್ಯ ಯಾವುದು . ಮುಂದೇನು ಮಾಡುವುದು?
ಅವಳ ತಲೆಯಲ್ಲಿ ಪ್ರಶ್ನೆಗಳು ತಾಂಡವವಾಡತೊಡಗಿದವು
ಎಳೆಯ ಮನಸು ಕಮರತೊಡಗಿತು.
ಭಾವನೆಗಳ ತಾಕಲಾಟ ತಾಳದಂತೆ ಅವಳ ತಲೆ ಸಿಡಿದುಹೋಗುವಂತಾಯ್ತು
ಅಮ್ಮಾ ಎಂದು ತಲೆ ಹಿಡಿದವಳೇ ಕೆಳಗೆ ಕುಸಿದಳು

Wednesday, September 2, 2009

ಎರೆಡು ದಡಗಳ ನಡುವೆ-ಭಾಗ ನಾಲಕ್ಕು

ಅಂದು ಎಂದಿನಂತೆ ಅದೇ ಉದಾಸೀನತೆಯಿಂದ ಆಫೀಸಿಗೆ ಬಂದವಳಿಗೆ ಮತ್ತೆ ರಾಬರ್ಟ್‌‍ನ ಮೇಲ್ ಕಾಣಿಸಿತು.



"ಪ್ಲೀಸ್ ಕಮ್ ಆನ್‍ಲೈನ್"



ನೆನ್ನೆ ಸಹಾ ಹೀಗೆ ಹೇಳಿದ್ದ . ಹೋದರೆ "ಹ್ಯಾಡ್ ಯುವರ್ ಬ್ರೇಕ್ ಫಾಸ್ಟ್ ?"ಅದೂ ಇದೂ ಎಂದು ತಲೆ ತಿನ್ನುತ್ತಾನೆ. ಯಾವ ಇಶ್ಯೂಸೂ ಇರುವುದಿಲ್ಲ.



ಶೈಲಾ ಚಾಟಿಂಗ್ ಸ್ವಿಚ್ ಮಾಡಲಿಲ್ಲ.



ಬೆಳಗ್ಗೆ ಉಡುಪಿ ಸಾಗರ್ ಎಂಬ ಹೆಸರಿದ್ದ ಹೋಟೆಲಿಗೆ ಹೋಗಿ ನಾಲಿಗೆ ಕೆಡಿಸಿಕೊಂಡಿದ್ದಳು. ತಿಂಡಿ ಒಂದು ಚೂರು ಚೆನ್ನಾಗಿರಲಿಲ್ಲ.



ಯಾವುದೋ ಫೈಲ್ ಕರಪ್ಟ್ ಆಗಿದೆ ಎಂದು ಕ್ಲೈಂಟ್‌ ಒಬ್ಬರ ಕಾಲ್ ಬಂತು . ಮನಸಿಲ್ಲದ ಮನಸಲ್ಲಿ ಕೆಲಸ ಶುರು ಮಾಡಿದಳು




************************************




ಸಿರಿಗೆ ಇಡ್ಲಿ ಬಡಿಸುತ್ತಿದ್ದಂತೆ ಮನುವಿನ ammana ಕೈ ಅರ್ಧಕ್ಕೆ ನಿಂತಿತು.




"ಯಾಕಮ್ಮ ಏನಯ್ತು" ಮನು ತಲೆ ಎತ್ತಿದ . ಸಿರಿ ತಲೆ ಎತ್ತಿ ಅಜ್ಜಿಯನ್ನು ನೋಡಿತು




ಅಮ್ಮನ ಕಣ್ಣಲ್ಲಿ ನೀರು .




"ಯಾಕಮ್ಮ ?"




"ಅವಳು ಹೀಗ್ಮಾಡ್ತಾಳಂತ ಅಂದ್ಕೊಂಡಿರಲಿಲ್ಲ ಕಣೋ ನಾನು. ಅವಳನ್ನ್ ಬಿಟ್ಟಿರೋದಿಕ್ಕೆ ತುಂಬಾ ಕಷ್ಟವಾಗ್ತಿದೆ. ಸೊಸೆ ಅಲ್ಲ ಮಗಳಂತೆ ಬೆಳೆಸಿದ್ದೆ. ಈ ಸಿರೀನಾ ಬೆಳೆಸ್ತಿರೋ ಕೈ ಅವಳ ಅಮ್ಮನನ್ನೂ ಬೆಳೆಸಿತು. ಎಲ್ಲಿ ಕೊರತೆಯಾಗಿತ್ತು ಕಣೋ ಅವಳಿಗೆ ನನ್ನ, ನಿನ್ನ ಪ್ರೀತಿಲಿ "ಜೋರಾಗಿ ಅಳಲಾರಂಭಿಸಿದರು. ಸಿರಿ ಬೆದರಿದಳೆನಿಸುತ್ತದೆ. ಅಳಲಾರಂಭಿಸಿದಳು




ಅವಳನ್ನು ಎತ್ತಿ ಸಮಾಧಾನ ಪಡಿಸಿದ ಮನು




ಅಮ್ಮನತ್ತ ತಿರುಗಿ




"ಅಮ್ಮಾ ಆಗಿದ್ದು ಆಗಿ ಹೋಯ್ತು. ಅವಳಿನ್ನು ನಮ್ಮ ಪಾಲಿಗಿಲ್ಲ. ಅವಳಿಲ್ಲ ಎಂಬ ನಮ್ಮ ಖೇದಕ್ಕಿಂತ ಅವಳು ಅಲ್ಲಿ ಸಂತೋಷವಾಗಿದ್ದಾಳೆ ಎಂಬುದು ಮುಖ್ಯ ಅಮ್ಮ. ಇನ್ನು ನಮ್ಮ ಪಾಲಿಗಿರೋದು ಈ ಮಗು . ಇದನ್ನ ಚೆನ್ನಾಗಿ ನೋಡಿಕೊಳ್ಳೋಣ ಇದನ್ನೇ ಶೈಲಾ ಅಂತಂದುಕೊಳ್ಳೋಣ "




ಸಿರಿಗೆ ಮುತ್ತು ನೀಡಿದ.




ಮಗುವನ್ನು ಅಮ್ಮನ ಕೈಗೆ ಕೊಟ್ಟು ಕಾರಿನೆಡೆಗೆ ನಡೆದ.




ಇದನ್ನೆಲಾ ನೋಡುತ್ತಾ ನಿಂತಿದ್ದ ರಾಮು ಕಣ್ಣೊರೆಸಿಕೊಳ್ಳುತ್ತಲೇ ಕಾರ್ ಬಾಗಿಲು ತೆರೆದ.ಅವನೂ ಶೈಲಾಳನ್ನು ಆಡಿಸಿ ಬೆಳೆಸಿದವನೇ.




ಅವನ ಬೆನ್ನು ತಟ್ಟಿ ಕಾರ್ ಹತ್ತಿದ ಮನು.




ಕಾರ್‌ಗೊರಗಿ ಕೂರುತ್ತಿದ್ದಂತೆ ಕಾರ್ ಮುಂದೆ ಓಡಿತು . ಮನುವಿನ ಮನ ಹಿಂದೆಯೇ ಉಳಿಯಿತು




**********************************************




ಮೂರು ದಿನದಲ್ಲಿ ಬರುತ್ತೇನೆಂದು ಹೇಳಿದ ವಿಕಾಸ್ ಒಂದು ತಿಂಗಳಾದರೂ ಬಾರದಿದ್ದಾಗ ಶೈಲಾ ಹುಚ್ಚಿಯಾದಂತಾದಳು. ಊಟ ನಿದ್ದೆ ಬಿಟ್ಟಳು. ಮನುವಿನ ಬಳಿಇರಲಿ ಮಗುವಿನ ಬಳಿಯಲ್ಲೂ ಆಟವಾಡಲಿಲ್ಲ. ಕಂಪ್ಯೂಟರ್ ಅನ್ನು ಒಡೆದು ಹಾಕಿದಳು . ತನ್ನ ಬಳಿ ಇದ್ದ ಪುಸ್ತಕಗಳನ್ನೆಲಾ ಹರಿದಳು. ಮೊದಲ ಬಾರಿ ಅವಳ ಬಯಕೆಯ ವಸ್ತು ಅವಳಿಗೆ ಸಿಕ್ಕಿರಲಿಲ್ಲ




ಮನು ಇದನ್ನೆಲ್ಲಾ ಗಮನಿಸುತ್ತಿದ್ದಂತೆ ಅವನ ಮನದಲ್ಲಿ ಕೋಲಾಹಲವಾಗಿತ್ತು.




ಅವಳಿಗೇನಾಯ್ತು ಎಂಬುದು ಯಾರಿಗೂ ತಿಳಿಯಲಿಲ್ಲ . ಮನು ಬಹಳವೇ ಹೆದರಿದ್ದ. ಅವಳ ಸಂಕಟ ನೋಡಲಾಗದೆ ಮನೆಯವರೆಲ್ಲಾ ಒದ್ದಾಡಿದರು




ಯಾವುದನ್ನೂ ಬಾಯಿ ಬಿಟ್ಟು ಹೇಳದ ಶೈಲಾ ಒಗಟಾಗಿದ್ದಳು. ಎಷ್ಟು ಸಮಾಧಾನ ಮಾಡಿ ಕೇಳಿದರೂ ತನಗೇನಾಗಿದೆ ಎಂಬುದನ್ನು ಅವಳು ಹೇಳಲಾರದವಳಾಗಿದ್ದಳು.




ಒಟ್ಟಿನಲ್ಲಿ ಕಂಪ್ಯೂಟರ್ ಕಲಿಯಲು ಆಗದಿದ್ದುದಕ್ಕೆ ಈ ರೀತಿ ಆಡುತ್ತಿದ್ದಾಳೆ ಎಂದು ಭಾವಿಸಿದರು




ಕೊನೆಗೊಮ್ಮೆ ವಿಕಾಸ್ ಮರಳಿದ .




*******************************************************



ಅಂದೇ ತನಗೇನಾದರೂ ತುಸು ಸುಳಿವಾದರೂ ಸಿಕ್ಕಿದ್ದರೆ ಪರಿಸ್ಥಿತಿಯನ್ನ ಇಲ್ಲಿಯವರೆಗೆ ಬರಲು ಬಿಡುತ್ತಿರಲಿಲ್ಲ ಎನಿಸಿತು ಮನೂಗೆ . ಹಾಗೆ ಗೊತ್ತಾಗಿದ್ದರೂ ಮಾಡಲಾದರೂ ಏನಿತ್ತು? ಮರುಕ್ಷಣದಲ್ಲೇ ಮನದ ಮೂಲೆಯಲ್ಲಿನ ಸತ್ಯ ವ್ಯಂಗ್ಯವಾಡಿತು. ಒಮ್ಮೆ ಅವಳ ಮನಸಲ್ಲಿ ತನ್ನ ಸ್ಥಾನ ಇನ್ನೊಬ್ಬರದಾಗಿ ಹೋದಾಗ ಮನಸನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದನಿಸಿತು.



ಅವಳ ಇಲ್ಲದಿರುವಿಕೆ ತನ್ನನ್ನೂ ಬಹಳ ಕಾಡುತ್ತಿದೆ ಎಂಬುದು ಮನೂಗೂ ಚೆನ್ನಾಗಿ ಗೊತ್ತು ಆದರೂ ಅದನ್ನು ತೋರಿಸಲು ಅವನಿಗೆ ಆಗಲಿಲ್ಲ. ಅವನು ಹಾಗೆಯೇ . ಯಾವದನ್ನೂ ಹೊರಗೆ ತೋರಿಸಿದವನಲ್ಲ . ತನ್ನಲ್ಲಿಲ್ಲದ ಯಾವ ಗುಣವನ್ನು ಅವಳು ವಿಕಾಸನಲ್ಲಿ ಕಂಡಳು ಎನ್ನುವ ಪ್ರಶ್ನೆಗೆ ಅದೇ ಉತ್ತರವಾಗಿತ್ತು ಎಂಬುದೂ ಅವನಿಗೆ ಗೊತ್ತಿರದ ವಿಷಯವೇನಾಗಿರಲಿಲ್ಲ.



ಹಿಂದೆ ಓಡುತ್ತಿದ್ದ ಮನಸನ್ನ ಮುಂದೆ ಚಲಿಸುವ ಪ್ರಯತ್ನ ಮಾಡಿದ .



***************************************************************



ವಿಕಾಸ್ ಆಫೀಸಿಗೆ ಬಂದು ಲಾಗಿನ್ ಆದ . ವಾಲ್ ಪೇಪರ್‌ನಲ್ಲಿ ನಗುತ್ತಿದ್ದಳು ಶೈಲಾ. ಈ ನಗು ಮುಗ್ಧತೆಯೇ ತನ್ನನ್ನು ಮತ್ತೆ ಊರಿನಿಂದ ಕರೆಸಿಕೊಂಡಿತಲ್ಲವೇ?



ಶೈಲಾಗೆ ತನ್ನ ಮೇಲೆ ಪ್ರೇಮವಾಗುತ್ತಿದೆ ಎಂಬುದು ತಿಳಿಯುತ್ತಲೇ ತಾನು ಅವಳಿಂದ ಮರೆಯಾಗಬಯಸಿ ಊರಿಗೆ ಬಂದದ್ದೇನೋ ನಿಜ . ತಾನೆಂದೂ ಅವರ ಬಾಳನ್ನು ಹಾಳುಮಾಡುವ ಯೋಚನೆಯನ್ನು ಮಾಡಿರಲಿಲ್ಲ.ಆದರೆ ಊರಿಗೆ ಹೋಗಿ ಕೇವಲ ಒಂದೇವಾರಕ್ಕೆ ಅವಳ ನಗು ಮಾತು ತನ್ನನ್ನು ಕಾಡಲಾರಂಭಿಸಿತು. ತಾನೇನು ಅವಳನ್ನು ಪ್ರೀತಿಸುತ್ತಿದ್ದೇನೆಯೇ ಎಂಬುದೂ ಅರ್ಥವೂ ಆಗಲಿಲ್ಲ. ಒಂದು ವೇಳೆ ಇದು ಪ್ರೀತಿಯಾಗಿದ್ದರೆ ತಪ್ಪಾಗುತ್ತದೆಯೇ ಅಥವ ಮದುವೆಯಾದವಳನ್ನು ಅದೂ ಇನ್ನೊಬ್ಬರ ಆಸ್ತಿಯನ್ನು ತನ್ನದಾಗಿಸಿಕೊಳ್ಳುವ ಯೋಚನೆಯೇ? ನಂಬಿ ತನ್ನನ್ನು ಅಲ್ಲಿ ಕೆಲಸಕ್ಕೆ ನೇಮಿಸಿಕೊಂಡಿರುವ ಆ ಸಜ್ಜನ ಮನುವಿಗೆ ದ್ರೋಹ ಬಗೆಯಬಾರದು . ಯೋಚನೆಗಳ ಸಾಲು ಸಾಲು ಮುಂದೆ ನಿಂತೆ ಅಣಕಿಸಲಾರಂಭಿಸಿದಾಗ ದಿಕ್ಕು ತೋಚದವನಾಗಿರಲಿಲ್ಲವೇ?
ಜೊತೆಗೆ ಶೈಲಾಳ ಮೇಲ್ ಸಹಾ ತನ್ನನ್ನು ಇನ್ನಷ್ಟು ಹಣ್ಣು ಮಾಡಿತು. ಅವಳು ತಾನು ಮತ್ತೆ ಬರದೇ ಇದ್ದರೆ ತನ್ನ ಪ್ರಾಣವನ್ನೇ ಕಳೆದುಕೊಳ್ಳುವುದಾಗಿ ಹೆದರಿಸಿದ್ದಳು.
ಏನೇ ಆಗಲಿ ಇದನ್ನು ಮನುವಿಗೆ ಸೂಕ್ಷ್ಮವಾಗಿ ಹೇಳಿ ನಯವಾಗಿ ತಪ್ಪಿಸಿಕೊಳ್ಳಬೇಕೆಂದು ಯೋಚಿಸಿ ತಾನೇ ತಾನು ವಾಪಾಸ್ ಬೆಂಗಳೂರಿಗೆ ಮತ್ತೆ ಬಂದದ್ದು?

ಆದರೆ ಮತ್ತೆ ಶೈಲಾಳನ್ನು ನೋಡುತ್ತಿದ್ದಂತೆ ಮನಸು ಸ್ಥಿಮಿತ ತಪ್ಪಿತು. ಕಡಿವಾಣವಿಲ್ಲದ ಕುದುರೆಯಂತೆ ಮನಸು ತಪ್ಪಾದರೂ ಸರಿ ಶೈಲಾಳನ್ನು ತನ್ನವಳನ್ನಾಗಿ ಮಾಡಿಕೊಳ್ಳಬೇಕೆಂಬ ಹುಚ್ಚು ನಿರ್ಣಯಕ್ಕೆ ಬಂದಿತು.



ಸ್ವಲ್ಪ ಹೊತ್ತು ಭೂತದಲ್ಲಿ ಅಡಗಿ ಹೋಗಿದ್ದ ಮನ ವರ್ತಮಾನಕ್ಕೆ ಬರಲೇ ಬೇಕಾಯ್ತು. ಕೆಲಸ ಮುಗಿಸದಿದ್ದರೆ ನೆನ್ನೆ ರಮೇಶ್ ಇಂದು ಪ್ರೀತಿ ನಾಳೆಯ ಹೆಸರು ತನ್ನದಾಗಿರಬಹುದು ಪಿಂಕ್ ಸ್ಲಿಪ್ ಪಡೆಯಲು ಎಂದೆನಿಸಿ ಕೋಡಿಂಗ್ ಸಾಮ್ರಾಜ್ಯದಲ್ಲಿ ತೊಡಗಿದ

********************************

"ಅಲ್ಲಾ ಕಣೇ ಶೈಲಾ ಮನು ಥರಾ ಒಳ್ಳೇ ಗಂಡನ್ನ ಬಿಟ್ಟು ವಿಕಾಸನ ಬಗ್ಗೆ ಆಕರ್ಶಣೆ ಹುಟ್ಟೋಕೆ ಕಾರಣವಾದರೂ ಏನು . ನಾನೊಂದು ಮಾತು ಹೇಳ್ತೀನಿ ಕೇಳು ನಿಂಗೆ ವಿಕಾಸ್ ಮೇಲಿರೋದು ಮೋಹ . ಅದು ಮೋಡದಲ್ಲಿರೋ ಮಳೆ ಥರ.ಬೀಳೋ ತನಕ ತವಕ . ಬಿದ್ದ ಮೇಲೆ ಸ್ವಲ್ಪಹೊತ್ತು ಪುಳಕ ಮತ್ತೆ ಜೀವನದ ಬಿಸಿಲು ಬಿದ್ದಾಗ ಅದರ ತಂಪು ಮಾಯ ಆಗಿರುತ್ತೆ . ಆದರೆ ಮನು ಒಂದು ಜೀವನದಿ ಇದ್ದ ಹಾಗೆ . ಸದಾ ಸಂತಸದ ಒರತೆ .ನಿನ್ನ ಯೋಚನೇನ ಬದಲಾಯಿಸಿಕೋ ದಯವಿಟ್ಟು. ನೀನು ಹೋಗುತ್ತಿರವ ದಾರಿ ಸರಿಯಲ"

ಗೆಳತಿ ಸಂಗೀತಾ ಮೇಲ್‌ನಲ್ಲಿ ಕಳಿಸಿದ್ದ ಮಾತುಗಳು ಮತ್ತೆ ಮತ್ತೆ ಕಣ್ಣ ಮುಂದೆ ಬಂದು ಚುಚ್ಚುತ್ತಿದ್ದವು,ಶೈಲಾಗೆ. ತಾನು ವಿಕಾಸನ ಮೋಹಕ್ಕೆ ಬಿದ್ದಾಗ ಅವಳಿಗೆ ನೆನಪಾಗಿದ್ದೇ ಸಂಗೀತ . ಅವಳ ಆತ್ಮೀಯ ಗೆಳತಿ, ಡೆಲ್ಲಿಯಲ್ಲಿದ್ದಳು. ಅವಳದೂ ಲವ್ ಮ್ಯಾರೇಜ್ . ಮನೆಯವರನ್ನೆಲ್ಲಾ ವಿರೋಧಿಸಿ ತಾ ಮೆಚ್ಚಿದ ಪ್ರತೀಕ್‌ನ್ನ ಮದುವೆಯಾಗಿದ್ದಳು. ಹಾಗಾಗಿ ಈ ವಿಷಯದಲ್ಲಿ ಅವಳ ಸಹಾಯ ಪಡೆಯುವ ಎಂದು ಅವಳಿಗೆ ಮೇಲ್ ಮಾಡಿದ್ದಳು ಶೈಲಾ . ಆದರೆ ಸಂಗೀತಾ ಮರು ಓಲೆ ಕಳಿಸಿ ಚೆನ್ನಾಗಿ ಬೈದಿದ್ದಳು. ಅದನ್ನೆಲ್ಲಾ ನೋಡಿ ಸರಿ ಹೋಗುತ್ತಿದ್ದಳೇನೋ ಶೈಲಾ ಆದರೆ ಮತ್ತೆ ಬಂದ ವಿಕಾಸ್. ಅವಳು ಎಂದೂ ಮರಳದ ದಾರಿಗೆ ಕರೆದಿದ್ದ. ಅವಳನ್ನು ಬಿಟ್ಟು ಇರಲು ಆಗದೆ ಒದ್ದಾಡಿ ವಾಪಾಸ್ ಬಂದಿದ್ದ ವಿಕಾಸ್‌ . ಅಷ್ಟೇ ಅವಳ ಕಣ್ಣು , ಮನಸು ಕುರುಡಾಯ್ತು. ವಿಕಾಸನ ಜೊತೆ ಹಾರಲು ಮನಸು ಸಿದ್ದವಾಗಿತ್ತು.

ಎವ್ರಿ ಥಿಂಗ್ ಈಸ್ ಫೇರ್ ಇನ್ ಲವ್ ಅಂಡ್ ವಾರ್ ಎನ್ನುವ ನೀತಿ ಅವಳ ನೆನಪಿಗೆ ಬರುತ್ತಿತ್ತು ಹಾಗಾಗಿ ತಾನು ಮಾಡುತ್ತಿರುವುದು ತಪ್ಪೇ ಸರಿಯೇ ಎಂಬುದನ್ನು ಯೋಚಿಸಲೂ ಸಿದ್ದಳಿರಲಿಲ್ಲ. ವಿಕಾಸ್ ಜೊತೆ ಶಾಪಿಂಗ್ ಅಲ್ಲಿ ಇಲ್ಲಿ ಸಿನಿಮಾಗೆ ಹೋಗುತ್ತಿದ್ದಳು. ಮನುವಿನಿಂದ ಉದ್ದೇಶ ಪೂರ್ವಕವಾಗಿ ದೂರವಾಗತೊಡಗಿದಳು. ಪ್ರೇಮ ಲೋಕದಲ್ಲಿ ಎರೆಡೂ ಹಕ್ಕಿಗಳೂ ಸಂತಸದಿಂದ ಕುಣಿದು ಕುಪ್ಪಳಿಸುತ್ತಿದ್ದವು.ವಿಕಾಸನ ಜೊತೆಯ ಒಡನಾಟ ಮೂರು ತಿಂಗಳವರೆಗೆ ಕದ್ದು ಮುಚ್ಚಿಯೇ ನಡೆಯುತ್ತಿತ್ತು. ಯಾರಿಗೂ ಅವಳ ಮೇಲೆ ಸಂಶಯ ಬರುತ್ತಿರಲಿಲ್ಲ.

ಆದರೆ ಹಾಗೆಯೇ ಮುಂದುವರೆಯಲು ವಿಕಾಸ್ ಇಚ್ಚಿಸಲಿಲ್ಲ. ಅವನು ಶೈಲಾಳನ್ನು ತನ್ನ ಜೊತೆಗೆ ಕರೆದೊಯ್ಯಲು ಸಿದ್ದನಾದ. ಅಂತಹ ದಿನಕ್ಕೆ ಸನ್ನದ್ದಳಾಗಬೇಕಾದ ಪರಿಸ್ಥಿತಿ ಶೈಲಾಳಿಗೆ ಎದುರಾಯ್ತು.

*************************************************----------------------*********

ಒಂದು ವೇಳೆ ವಿಕಾಸ್ ಮರಳಿ ಬಾರದಿದ್ದರೆ ತಾನು ಅವನನ್ನು ಮರೆಯುತ್ತಿದ್ದೆನೇ ಪ್ರಶ್ನಿಸಿಕೊಂಡಳು ಶೈಲಾ. ಅಲ್ಲಿಂದ ಬಂದ ಇದ್ದಿರಬಹುದೇನೋ ಎಂಬ ಉತ್ತರ ಅವಳನ್ನು ಧೃತಿ ಗೆಡಿಸಿತು. ಅಂದರೆ ಸಂಗೀತ ಹೇಳಿದಂತೆ ಇದು ಕ್ಷಣಿಕ ಮೋಹವೇ. ತಾನು ವಿಕಿಯನ್ನು ಪ್ರೀತಿಸಲಿಲ್ಲವೇ? ಮತ್ತೆ ತನಗೂ ಹೂವಿಂದ ಹೂವಿಗೆ ಹಾರುವ ದುಂಬಿಗೂ ಯಾವ ವ್ಯತ್ಯಾಸವಿಲ್ಲವೇ? ಮನುವನ್ನೂ ವಿಕಾಸನನ್ನು ಒಟ್ಟಿಗೆ ಬಯಸುತ್ತಿದ್ದೇನೆಯೇ ತಾನು ?. ಇದು ವಿಷಯ ಲಂಪಟತನವಲ್ಲವೇ?

ಶೈಲಾಳ ಮನಸು ಪ್ರಶ್ನೆಗಳ ಗೂಡಾಗುತ್ತಿದ್ದಂತೆ. ಅದನ್ನು ಹೊರಲಾರದಂತೆ ತಲೆ ಭಾರವಾಯ್ತು. ಕಣ್ಣೀರಿನಿಂದ ಕಣ್ಣು ಮಂಜಾಯ್ತು. ತಲೆ ನೋವಿನಿಂದ ಸಿಡಿಯಲಾರಂಭಿಸಿತು. ಮಾನಸಿಕ ಒತ್ತಡ ತಾಳಲಾರದೆ ದುಡುಮ್ ಎಂದು ಚೇರ್ ‌ನಿಂದ ಬಿದ್ದುದಷ್ಟೆ ಅವಳ ನೆನಪು.

ಆಫೀಸಿನಲ್ಲಿದ್ದ ಜನರೆಲ್ಲಾ ಅವಳತ್ತ ಓಡಿದರು

[ ಆತ್ಮೀಯ ಸ್ನೇಹಿತ/ತೆಯರೆ

ನಿಮ್ಮೆಲ್ಲರ ಪ್ರೋತ್ಸಾಹದ ನುಡಿಗೆ ಮೆಚ್ಚುಗೆಯ ನುಡಿಗೆ ನನ್ನ ಧನ್ಯವಾದಗಳು. ಈ ಕತೆ ಇನ್ನೂ ಒಂದೆರೆಡು ಕಂತು ಎಳೆಯುವ ಸಾಧ್ಯತೆ ಇದೆ. ಏಕೆಂದರೆ ಕತೆಯ ಹರಿವು ಬಹಳ ದೊಡ್ಡದಿದೆ (ಇದನ್ನು ಶುರು ಮಾಡಿದಾಗ ನನಗೇ ಗೊತ್ತಿರಲಿಲ್ಲ . ಆದಿ ಗೊತ್ತಿತ್ತು. ಅಂತ್ಯ ಗೊತ್ತಿತ್ತು ಆದರೆ ಅದರ ದಾರಿಯ ವಿಸ್ತಾರ ತೆರೆದುಕೊಂಡಂತೆಲ್ಲಾ ಹರಡುತ್ತಿದೆ . ಇದೇ ಪ್ರೋತ್ಸಾಹವನ್ನು ಮುಂದುವರೆಸಿ ಎಂದು ಕೇಳಿಕೊಳ್ಳುತ್ತೇನೆ ಕೆಲಸದ ಒತ್ತಡವೂ ಹಾಗೆಯೇ ಇದೆ . ಹಾಗಾಗಿ ಸಮಯಾವಕಾಶವಿದ್ದಾಗ ಬರೆಯುತ್ತಿರುತ್ತೇನೆ]

*************************ಇನ್ನೂ ಇದೆ*************************************








ಅದು ಶಾಶ್ವತ ಅಲ್ಲ ಆದರೆ ಪ