Thursday, January 8, 2009

ಆಸರೆ

"ಮದುವೆ? ಮತ್ತೆ ನಾನು? ಗಾಡ್ ಸೇವ್ ಮಿ "
"ಯಾಕಮ್ಮ ಹಾಗೆ ಮಾತಾಡ್ತೀಯಾ"
"ಆಂಟಿ ನಂಗೆ ಮದುವೆ ಈ ಬಸಿರು , ಬಾಣಂತನ , ಗಂಡನ ಚಾಕರಿ ಇವೆಲ್ಲಾ ಬೇಡ . ಮೊದಲಿಗೆ ನಿಮ್ಮ ಹೆಣ್ಣು ಮದುವೆಯಾಗಬೇಕು ಅನ್ನೋ ಸಂಪ್ರದಾಯಾನೆ ಹಿಡಿಸಿಲ್ಲ."
"ನೋಡು ದಿವ್ಯ ನಿನ್ನ ಕಾಲ ಮೇಲೆ ನಿಂತ್ಕೊಂಡ ಮೇಲಾದಾರೂ ಮದುವೆಯಾಗೊ ಮನಸು ಬರುತ್ತೆ ಅನ್ಕೊಂಡ್ರೆ ಏನಮ್ಮ ಹೀಗೆ ಮಾತಾಡ್ತೀತಿದೀಯಾ? ನಿನ್ನನ್ನ ನಿಮ್ಮ ಅಮ್ಮ ಸಾಯುವಾಗ ಜೋಪಾನ ಮಾಡು ಅಂತ ಹೇಳಿ ಹೋದಳು ನಾನು ಇನ್ನೆಷ್ಟು ದಿನಾ ಬದುಕಿರ್ತೀನೋ"
"ಆಂಟಿ ಅಮ್ಮ ಸತ್ತಿದ್ದು ಹೇಗೆ ಅಂತ ನಂಗೆ ಗೊತ್ತು. ಅಪ್ಪನ ಚಾಕರಿ ಮಾಡಿ, ಮಾಡಿ ಅವನ ಬೈಗುಳಕ್ಕೆ, ಏಟಿಗೆ ಗುರಿಯಾಗಿ ನರಳಿ ನರಳಿ ಸತ್ತಳಲ್ಲಾ ಅದು ನಿಮಗೂ ಗೊತ್ತು. ಅಮ್ಮ ಸತ್ತ ಮೇಲೆ ಹೆತ್ತಪ್ಪ್ಪ ನನ್ನನ್ನು ಮಗಳೇ ಅಂತ ಒಂದು ಬಾರಿ ಸಹಾ ಪ್ರೀತಿಸಲಿಲ್ಲ. ಅವನಿಗೆ ಅವನ ತೀಟೆ ಮುಖ್ಯವಾಯ್ತು. ಬೇರೊಬ್ಬಳನ್ನು ಮದುವೆಯಾದ. ಅಮ್ಮ ಮದುವೆಯಾಗಿ ಯಾವ ಸುಖ ಪಡೆದಳು?ಇನ್ನು ನಿಮ್ಮ ಜೀವನ ತರ್ತಿದ್ದ ಸಂಬಳಾನೆಲ್ಲಾ ಮೇಲೆ ಸುರಿಯುತ್ತಿದ್ದರೂ ಸಮಾಧಾನವಾಗದ ನಿಮ್ಮ ಗಂಡ ಕೊನೆಗೆ ಇನ್ನಷ್ಟಿ ದುಡ್ಡು ಬೇಕು ಅಂತ ನಿಮ್ಮನ್ನ ನೀವಿರೋ ಈ ನರಕ ಕೂಪಕ್ಕೆ ತಳ್ಳಿದನಲ್ಲಾ. ಸಾಲದು ಅಂತ ಅಮ್ಮ ಸತ್ತಾಗ ಇನ್ನೂ ಹದಿನಾಲ್ಕರ ಹರೆಯದ ಹುಡುಗಿ ನಾನು ನನ್ನನ್ನು ಮನೆಗೆ ಕರೆದುಕೊಂಡು ಬಂದಾಗ ನನ್ನ ಮೇಲೆ ಕಣ್ಣು ಹಾಕಿದನಲ್ಲ. ನೀವ್ಯಾವ ಸಂತೋಷ ಅನುಭವಿಸಿದೀರಾ ಹೇಳಿ ಆಂಟಿ?"
ಸರೋಜಾಗೆ ಹಿಂದಿನ ವಿಷಯಗಳನ್ನು ಕೇಳಿಸಿಕೊಂಡು ಅಳುವೇ ಬರತೊಡಗಿತು.
"ನಾನು ಇಲ್ಲಿಗೆ ಬಂದಿದ್ದು ಮದುವೆಯ ವಿಷಯಕ್ಕಾಗಲಿ ಅಥವ ಹಿಂದಿನದೆಲ್ಲಾ ಕೆದುಕಲಾಗಲಿ ಅಲ್ಲ . ನನ್ನ ಓದಿಗಾಗಿ ನೀವು ಮಾಡಿದ ತ್ಯಾಗ ಹೆತ್ತಮ್ಮನೂ ಮಾಡಲಾಗದಂತಹದು. ನನಗೆ ಈಗ ಒಳ್ಲೇ ಸಂಬಳ ಬರುವ ಕೆಲಸ ಸಿಕ್ಕಿದೆ. ಇನ್ನೂ ನೀವು ಈ ನರಕದಲ್ಲಿ ಇರಬೇಡಿ . ನನ್ನ ಜೊತೆ ಬೆಂಗಳೂರಿಗೆ ಬಂದು ಬಿಡಿ. ಹಿಂದಿನ ವಿಷಯಗಳೆಲ್ಲಾ ರಹಸ್ಯವಾಗೆ ಇರಲಿ. ಇನ್ನು ನಾನೆ ನಿಮ್ಮ ಮಗಳು, ನೀವೆ ನನ್ನ ತಾಯಿ"
" ನೋಡು ದಿವ್ಯ . ನಾನು ಈಗಲೋ ಆಗಲೋ ಉರುಳುವ ಮರ. ರೋಗಗಳು ನನ್ನನ್ನ ತಿಂದು ಹಾಕಿವೆ. ಇನ್ನು ಬದುಕಿದರೂ ಸತ್ತರೂ ಒಂದೇ . ನನಗೆ ಇಲ್ಲಿಂದ ಬಂದು ನಿನ್ನ ಜೀವನಾನ ಹಾಳು ಮಾಡಲು ಇಷ್ಟ ಇಲ್ಲ "ಸಾಯುವುದಕ್ಕೆ ಮುಂಚೆ ನಿನ್ನನ್ನ ಯಾರ ಕೈಗಾದರೂ ಇಟ್ಟು ಸಾಯುತ್ತೇನೆ . ನಾನು ಸತ್ತ ಮೇಲೆ ನಿನಗೆ ಯಾರು ಗತಿ ? ಸಮಾಜ ಒಳ್ಳೆಯದಲ್ಲ ಒಂಟಿ ಹೆಣ್ಣು ಬದುಕುವುದು ತುಂಬಾ ಕಷ್ಟ. ತಿಳಿಯಮ್ಮ"
"ಒಂಟಿ ಹೆಣ್ಣು, ಅಬಲೆ , ಇವೆಲ್ಲಾ ನಿಮ್ಮಂಥ ಹೆಂಗಸರಿಂದ ಹುಟ್ಟಿಕೊಂಡ ಪದಗಳು. ಈಗ ಬೆಂಗಳೂರಲ್ಲಿ ಕೈನಲ್ಲಿ ಕಾಸು , ಎದುರಲ್ಲಿ ಗುರಿ ಇದ್ದರೆ ಬದಕುವುದು ತುಂಬಾ ಸುಲಭ. "
ದಿವ್ಯ ಕೊಂಚ ಹಟಮಾರಿ, ಗಂಡಸರೆಂದರೆ ಕೊಂದು ಬಿಡುವಷ್ಟು ಕೋಪ .ಅದಕ್ಕೆ ಕಾರಣ ಅವಳ ಅಪ್ಪ, ಹಾಗು ತನ್ನ ಆಂಟಿಯನ್ನು ವೈಶ್ಯಾವಾಟಿಕೆಗೆ ದೂಡಿದ ಆಂಟಿಯ ಗಂಡ . ಇಬ್ಬರೂ ಈಗ ಬದುಕಿಲ್ಲವಾದರೂ ಅವಳಿಗೆ ಪ್ರತಿ ಗಂಡಸರಲ್ಲೂ ಅವರ ಬಿಂಬವೇ ಕಾಣಿಸಿದಂತಾಗಿ ಮೃಗದಂತಾಗಿದ್ದಳು. ಸಮಯ ಸಿಕ್ಕಿದರೆ ಪ್ರಪಂಚದ ಗಂಡಸರನ್ನೆಲ್ಲಾ ಸುಟ್ಟುಬಿಡಲೂ ಅವಳು ತಯಾರಿದ್ದಳು.
ಅವಳ ಓದಿಗಾಗಿ ಸರೋಜಾ ಪಟ್ಟ ಕಷ್ಟ ಅಷ್ಟಿಷ್ಟಿಲ್ಲ. ದಿವ್ಯಾಳ ಹಾಕಿದ ಗಂಡನನ್ನು ತೊರೆದು ಬೇರೆ ಊರಿಗೆ ಬಂದಿದ್ದಳು.ಮನೆ ಚಾಕರಿಗಾಗಿ ಹೋದಾಗ ಅವಳನ್ನು ಅವಳ ಊರಲ್ಲಿ ಭೇಟಿ ಮಾಡಿದ್ದ ಗಂಡಸರು ಮತ್ತೆ ಅವಳನ್ನು ಅದೇ ಕೂಪಕ್ಕೆ ದೂಡಿದರು. ಸರೋಜಾ ದಿವ್ಯಾಳನ್ನು ಹಾಸ್ಟೆಲ್‍ನಲ್ಲಿ ಇಟ್ಟೇ ಬೆಳೆಸತೊಡಗಿದಳು.
ಚುರುಕು ದಿವ್ಯಾ ಚೆನ್ನಾಗಿ ಓದಿದಳು ಕೆಲಸವೂ ಸಿಕ್ಕಿತು.
ದಿವ್ಯಾಳ ಯಾವುದೇ ಅನುನಯಕ್ಕೂ ಸರೋಜಾ ಒಪ್ಪಲಿಲ್ಲ. ಒಬ್ಬ ಬೆಲೆವೆಣ್ಣಾಗಿ ತಾನು ದಿವ್ಯಾಳ ಜೊತೆ ಇರುವುದರ ಪರಿಣಾಮ ಅವಳಿಗೆ ತಿಳಿದಿತ್ತು . ಹಾಗಾಗಿ ಅವಳು ಯಾವ ಕಾರಣಕ್ಕೂ ದಿವ್ಯಾಳ ಜೊತೆ ಬರಲು ಒಪ್ಪಲಿಲ್ಲ.
ದಿವ್ಯಾ ಮದುವೆಯಾಗಲು ಒಪ್ಪಲೇ ಇಲ್ಲ.
ಅದೆಲ್ಲಾ ಆಗಿ ಐದು ವರ್ಷಗಳೇ ಕಳೆದಿವೆ. ಸರೋಜಾ ಯಾವುದೋ ರೋಗಕ್ಕೆ ಬಲಿಯಾಗಿ ಕಾಲವಾದಳು
ದಿವ್ಯಾ ತನ್ನ nouqariyಲ್ಲಿ ಬಹಳವೇ ಮುಂದೆ ಬರತೊಡಗಿದಳು.
ಅವಳ ಸಿಡುಕು ಮಾತಿಗೆ, ಅವಳ ಚಾಟಿ ಏಟಿನ ವ್ಯಂಗ್ಯಕ್ಕೆ ಸಿಲುಕಲು ಯಾವ ಗಂಡಸರೂ ಇಷ್ಟ ಪಡಲಿಲ್ಲ. ಹಾಗಾಗಿ ಅವಳು ಸೇಫ್ ಆಗಿದ್ದಳು.
ಒಂಟಿ ಹೆಣ್ಣು ಬೆಂಗಳೂರಲ್ಲಿ ಬದುಕುವುದು ಕಷ್ಟ ಎಂಬ ಮಾತಿಗೆ ಅಪವಾದವಾಗಿದ್ದಳು.
ಆದರೂ ಆಗಾಗ ಒಂಟಿ ತನ ಎದ್ದು ಕಾಡುತ್ತಿತ್ತು
ರಾತ್ರಿ ನೀರವತೆಯಲ್ಲಿ ಬೆಚ್ಚಿದ್ದಾಗ ,ಏನೋ ನೆನಸಿಕೊಂಡು ಅತ್ತಾಗ, ಸಮಾಧಾನಿಸಲು ಯಾರಾದರೂ ಬೇಕೆನಿಸುತ್ತಿತ್ತು. ಚಿತ್ರಗಳಲ್ಲಿ ಹೀರೋನ ಜೊತೆ ಕುಣಿವ ಹೀರೋಯಿನ್‌ಗಳನ್ನು, ತಮ್ಮ ಗಂಡ ತಮಡನೆ ಹೀಗೆ ಮಾತಾಡಿದ ಎಂಬ ಸಹೋದ್ಯೋಗಿಗಳ ಮಾತನ್ನು ಕೇಳಿದಾಗ ತನಗೂ ಒಬ್ಬ ಗಂಡನಿರಬೇಕೆಂಬ ಭಾವನೆ ಬರುತ್ತಿತ್ತಾದರೂ ಆ ಗಂಡ ಗಂಡಸೆಂಬ ನೆನೆಪು ಬರುತ್ತಿದ್ದಂತೆ ಮುಷ್ಟಿ ಬಿಗಿಯಾಗುತಿದ್ದವು, ಹುಬ್ಬು ಗಂಟಾಗುತ್ತಿತ್ತು, ಹಲ್ಲುಗಳು ಕದನವಾಡಲು ಆರಂಭಿಸುತ್ತಿದ್ದವು.
ಅವಳ ಜೊತೆಗಾರ್ತಿಯರೆಲ್ಲಾ ಮದುವೆ ಎಂಬ ಬಂಧನಕ್ಕೆ ಬೀಳುತ್ತಿದ್ದಂತೆ ಅವಳ ಅಕ್ಕ ಪಕ್ಕದ ಸ್ಥಾನಗಳು ಖಾಲಿಯಾಗತೊಡಗಿದವು.
ಗೆಳತಿಯರ ಸಲಹೆಗಳ ಮಹಾಪೂರವೇ ಬಂದರೂ ತನ್ನ ನಿರ್ಧಾರದಿಂದ ಹಿಂದೆ ಸರಿಯದಾದಳು ದಿವ್ಯಾ.
ವರ್ಷಗಳುರುಳಿದವು. ಮುಂದಿನ ದಿನಗಳು ಬಲು ನೀರಸವಾಗಿದ್ದವು, ಯಾರಿಗಾಗಿ ಈ ದುಡಿತ ಆಸ್ತಿ . ಮನೆಗೆ ಬಂದರೆ ಗೋಡೆ, ಕಂಪ್ಯೂಟರ್, ಟಿವಿಗಳು ಅವಳ ಸ್ನೇಹಿತರಾಗುತ್ತಿದ್ದವು. ಅಕ್ಕಪಕ್ಕದ ಮಕ್ಕಳ ಜೊತೆ ಆಟವಾಡಿದರೂ ಅದೇನೋ ಒಂಟಿತನ ಕಾಡುತ್ತಲೇ ಇತ್ತು.
ಅಂದೊಮ್ಮೆ ಅವಳ್ ಆಶ್ರಮದ ಗೆಳತಿ ಪ್ರೀತಿ ಸಿಕ್ಕಳು. ಪ್ರೀತಿ ತುಂಬಾ ಪ್ರೀತಿಯ ಗೆಳತಿ . ಅವಳೂ ಒಂದು ಬಗೆಯಲ್ಲಿ ಅನಾಥಳೇ ತಂದೆ ಇದ್ದೂ ತಂದೆ ಬೇರೆ ಮದುವೆಯಾಗಿದ್ದರಿಂದ ಪ್ರೀತಿಯನ್ನು ಆಶ್ರಮಕ್ಕೆ ಸೇರಿಸಿದ್ದ. ಪಿಯುಸಿ ಓದುತ್ತಿದ್ದಾಗ ಅವಳ ತಂದೆ ಹೃದಯಾಘಾತದಿಂದ ಸತ್ತಾಗ ಪ್ರೀತಿಗೆ ಯಾವ ದಿಕ್ಕೂ ಇರಲ್ಲಿಲ್ಲ . ಹಣ ಕೊಡಲಿಲ್ಲವಾದ್ದ್ದರಿಂದ ಪ್ರೀತಿಯನ್ನು ಆಶ್ರಮದಿಂದ ಹೊರಹಾಕಬೇಕೆನ್ನುವಾಗ ಅವಳ ಅಂದಕ್ಕೆ ಮಾರು ಹೋಗಿದ್ದ ವಿಕಾಸ್ ಎಂಬ ಯುವಕನೊಬ್ಬ ಅವಳನ್ನು ಮದುವೆಯಾಗಿದ್ದ.
ಅದಾದ ಮೇಲೆ ಅವಳ ಯಾವ ವಿಚಾರವೂ ತಿಳಿದಿರಲಿಲ್ಲ.
ಪ್ರೀತಿಯ ಜೀವನ ಸುಖಕರವಾಗಿತ್ತು. ಅವಳು ಅನಾಥಾಶ್ರಮವೊಂದನ್ನು ನಡೆಸುತ್ತಿದ್ದಳು ವಿಕಾಸ್ ಒತ್ತಾಸೆಯಾಗಿಯೇ ನಿಂತಿದ್ದ
ಎಲ್ಲಾ ರೀತಿಯ ಮಾತುಕತೆಗಳಾದ ಬಳಿಕ "ದಿವ್ಯ ನೀನು ಅಂದುಕೊಂಡಿರುವ ಹಾಗೆ ಎಲ್ಲಾ ಗಂಡಸರೂ ಇಲ್ಲ. ಹೆಂಗಸರಲ್ಲಿ ಕೆಟ್ಟವರಿರುವ ಹಾಗೆ ಅವರಲ್ಲೂ ಒಳ್ಳೆಯ ಕೆಟ್ಟ ಎಂಬ ಮನಸ್ಸು ಇರುತ್ತದೆ. ನೀನು ಇಲ್ಲಿಯವರೆಗೆ ಎಷ್ಟು ಮಂದಿ ಗಂಡ್ಸರನ್ನು ನೋಡಿಲ್ಲ ಅವರೆಲ್ಲಾ ಕೆಟ್ಟವರೇ ? ಒಂಟಿ ಬದುಕು ಬಲು ಹೀನಾಯ, ಯಾರಿಗಾಗಿ ಇಷ್ಟು ಹಣ ಸಂಪಾದಿಸುತ್ತೀಯಾ? ನಿನಗೂ ನಿನ್ನದೇ ಆದ ಮನೆ, ಸಂಸಾರ ಗಂಡಾ ಮಗು ಬೇಡವೇ? ವಿಕಾಸ್ ನೋಡು ನನ್ನ ಮಾತಿಗೆ ಎದುರಾಡದೆ ನನ್ನ anaathaashram ಕಟ್ಟಬೇಕೆಂಬ ಕನಸಿಗೆ ನೀರೆರೆದು ಪೋಷಿಸುತ್ತಿದ್ದಾರೆ. ಅವತ್ತು ನನ್ನ ಹಾಸ್ಟೆಲ್‌ನಿಂದ ಹಣವಿಲ್ಲವೆಂದು ಹೊರಗೆ ಕಳಿಸಿದಾಗಲೆ ನಿರ್ಧರಿಸಿದ್ದೆ ನಾನು ಒಂದು ಅನಾಥಾಶ್ರಮ್ ಕಟ್ಟಿ ಬಡಮಕ್ಕಳಿಗೆ ಅನಾಥರಿಗೆ ಹಣ ತೆಗೆದುಕೊಳ್ಳದೆ ವಿದ್ಯೆ, ವಸತಿ, ಊಟ ಕೊಡಬೇಕೆಂದು . ಅದು ನನ್ನೂಬ್ಬಳಿಂದ ಆಗ್ತಿರಲಿಲ್ಲ. ಅದಕ್ಕೆ ಕಾರಣಾನೆ ವಿಕಾಸ್ .ನೀನು ನಿಮ್ಮ ಆಫೀಸಲ್ಲಿ ಇರೋರನ್ನು ಕಣ್ಣು ಬಿಟ್ಟು ನೋಡು ನಿನಗೆ ತಕ್ಕ ಗಂಡು ಸಿಕ್ಕೇ ಸಿಗುತ್ತಾನೆ"
ಪ್ರೀತಿ ಅಡ್ರೆಸ್ ಕೊಟ್ಟು ಹೊರಟು ಹೋದಳು.
ದಿವ್ಯಾ ಆ ಬಗ್ಗೆಯೇ ಯೋಚಿಸಿ ಕೊನೆಗೊಂದು ನಿರ್ಧಾರಕ್ಕೆ ಬಂದಳು . ತನ್ನ ಆಪೀಸಲ್ಲೇ ಇದ್ದ ಆಕಾಶ್ ಎಂಬ ಸಹೋದ್ಯೋಗಿ ಮೆಲು ಮಾತಿದ ಹುಡುಗ ದಿವ್ಯಾಳನ್ನು ಮದುವೆಯಾಗುವ ಕನಸು ಹೊತ್ತೆ ಜೀವಿಸುತ್ತಿದ್ದ . ಅವಳಿಂದ ಒಮ್ಮೆ ಕೆನ್ನೆಗೂ ಹೊಡೆಸಿಕೊಂಡಿದ್ದ . ನಂತರವೂ ಅವಳನ್ನೇ ಮದುವೆಯಾಗುವುದಾಗಿ ಕನಸು ಹೊತ್ತಿದ್ದ
ಆಕಾಶ ತನಗೆ ತಕ್ಕ ಜೋಡಿಯಾಗಬಲ್ಲ ಎಂದು ಅವಳಿಗೆ ಅನ್ನಿಸಿತು .
ತನ್ನ ಭಾವನೆಯನ್ನು ಅರುಹಿದಳು
ಆತನೋ ಖುಷಿಯಿಂದ ಕುಣಿದಾಡಿದ.
ಅವನ ಮನೆಯವರೂ ಒಪ್ಪಿದರು. ಮದುವೆಯ ಆಹ್ವಾನ ಪತ್ರಿಕೆ ಸಿದ್ದವಾಯಿತು. ತನಗೆ ಮದುವೆಯಾಗುವ ಪ್ರೇರಣೆ ನೀಡಿದ ಪ್ರೀತಿಗೆ ಮೊದಲ ಆಹ್ವಾನ ಪತ್ರಿಕೆ ಎಂದು ಮೊದಲೇ ನಿರ್ಧರಿಸಿದ್ದಳು .
ಅಂತೆಯೇ ಆಕಾಶ್‌ನ ಜೊತೆ ಅನಾಥಾಶ್ರಮಕ್ಕೆ ಬಂದಳು.
ಪ್ರೀತಿಯ ಆಶ್ರಮವನ್ನೆಲ್ಲ್ಲಾ ಸುತ್ತಾಡುತ್ತಾ ಕಾಫೀ ಕುಡಿಯುತ್ತಾ ಬಂದು ನಿಂತವಳಿಗೆ ಊರುಗೋಲಿನ ಸಹಾಯದಿಂದ ಕಷ್ಟ ಪಟ್ಟು ನಡೆಯುತ್ತಿದ್ದ ಆ ಮಗು ಕಾಣಿಸಿತು
ಸುಮಾರು ಐದಾರು ವರ್ಷಗಳಿರಬಹುದೇನೋ .
ಮುದ್ದು ಮುದ್ದಾದ ಹೆಣ್ಣುಮಗು ಆದರೆ ಅದರ ಒಂದು ಕಾಲು ತಿರುಗಿಕೊಂಡಿತ್ತು.
"ಯಾರೆ ಈ ಮಗು ?"
ಪಾಪ ಕಣೆ ಮಗು ಹುಟ್ಟಿದ ತಕ್ಷಣ ತಾಯಿಯನ್ನು ಕಳೆದುಕೊಂಡಿತಂತೆ. ಆ ಮಗುವಿನ ಕಾಲು ಸರಿ ಇಲ್ಲ
ಯಾರೋ ಅವಳ ತಾಯಿಯ ಸ್ನೇಹಿತೆ ಅಂತೆ ತಂದು ಇಲ್ಲಿ ಬಿಟ್ಟರು
ತುಂಬಾ ಚುರುಕು
ಹೆಸರ್ನ ಭೂಮಿಕಾ ಅಂತ ಇಟ್ಟಿದೀವಿ. "
" ಹಲ್ಲೋ ಭೂಮಿಕಾ. " ಮುಂಚೆಯೇ ತಂದಿದ್ದ ಚಾಕ್ಲೇಟ್ ಕೊಟ್ಟಳು
ಮಗು ಥ್ಯಾಂಕ್ಸ್ ಹೇಳಿ ತೆಗೆದುಕೊಂಡಿತು
"ಹೌದು ಈ ಮಗು ಅಪ್ಪ ಎಲ್ಲಿ. ನೋಡಿದ್ಯಾ ಪ್ರೀತಿ ಇವಳ ಅಪ್ಪಾ ಇವಳನ್ನು ಬಿಟ್ಟು ಹೋಗಿದ್ದನಲ್ಲ. ನಾನು ನೋಡಿದ ಮೂರನೆಯ ಕೆಟ್ಟ ಗಂಡು" ದಿವ್ಯಾ ಪ್ರಶ್ನೆ ಎಸೆದಳು" ಏ ಮಗೂಗೆ ಅಪ್ಪ ಯಾರೂ ಅಂತ ಹೇಗೆ ಹೇಳೊಕಾಗುತ್ತೆ. ಅವಳ ಅಮ್ಮ ಒಬ್ಬ ಪ್ರಾಸ್ಟ್ಯೂಟ್ ಅಂದರೆ ವೇಶ್ಯೆ"
ದಿವ್ಯಾ ಪ್ರೀತಿಯ ಮಾತಿನಿಂದ ದಂಗಾದಳು.
ಅವರ್ಯಾರಿಗೂ ತನ್ನನ್ನ ಬೆಳೆಸಿದವಳೂ ಒಬ್ಬ ವೇಶ್ಯೆ ಎಂಬ ಸತ್ಯ ಹೇಳಿರಲಿಲ್ಲ. ಅದು ಅಂತಹ ಮಹತ್ವ್ದದ್ದೂ ಎಂದೊ ಅನ್ನಿಸಲಿಲ್ಲ. ಹಾಗಾಗಿ ಹೇಳಿರಲಿಲ್ಲ.
ಯಾವುದೋ ಅಕ್ಕರೆಯಿಂದ ಮಗುವನ್ನು ಮುದ್ದಿಸಿದಳು.
"ಪ್ರೀತಿ ಇದರ ತಾಯಿ ಹೆಸರೇನಾದರೂ ಗೊತ್ತಿದೆಯಾ ನಿಂಗೆ?"
"ನೋಡಿ ಹೇಳ್ತೀನಿ ಇರು"
ಪ್ರೀತಿ ರೆಕಾರ್ಡ್ಸ್ ತೆಗೆದು ನೋಡಿ ಹೆಸರು ಹೇಳಿದಳು
ಕಿವಿಗೆ ಬಿಡಿಬಿಡಿಯಾಗಿ ಕೇಳಿಸಿತು
"ಸ ರೋ ಜಾ" ಅಂತ
"ಏನಂದೆ ಸರೋಜಾನ ?"
"ಯಾವ ಊರು ಅಂತ ಕೊಟ್ಟಿದ್ದಾರೆ?"
ಪ್ರೀತಿ ಹೆಸರು ಹೇಳಿದಳು.ಅದು ಅವಳ ಆಂಟಿ ಸರೋಜಾ ಇದ್ದ ಊರು.
ಇದು ಹೇಗೆ ಸಾಧ್ಯ?
ಸರೋಜಾ ಸತ್ತು ಈಗ ಸರಿಯಗಿ ಐದು ವರ್ಷಗಳಾಗಿದ್ದವು .
ಅಂದರೆ ಮಗು ಹುಟ್ಟಿದ ವರ್ಷವೂ ಅದೇ ಆಗಿತ್ತು
ತನಗೆ ತಿಳಿಯದೆ ಇದು ಹೇಗಾಯ್ತು?
ನಂತರ ನೆನೆಪಾಯ್ತು ಎರೆಡು ವರ್ಷ ಯು. ಎಸ್ ಪ್ರಾಜೆಕ್ಟ್ ಮೇಲೆ ಹೋಗಿದ್ದಳು.
ಅಲ್ಲಿಂದ ಹಣವನ್ನೇನೋ ಕಳಿಸುತ್ತಿದ್ದಳು
ಆದರೆ ಸರೋಜಾ ಬಗ್ಗೆ ವಿಷಯ ತಿಳಿದಿರಲಿಲ್ಲ.
ತಾನು ಊರಿನಿಂದ ಬರುವ ದಿನವೆ ಸರೋಜಾ ಹಾಸಿಗೆಯ ಮೇಲೆ ಕಾಯಿಲೆ ಇಂದ ಮಲಗಿದ್ದಳು.
ಅವಳು ಏನೋ ಉಸುರುವ ಮೊದಲೇ ಉಸಿರು ಹೋಗಿತ್ತು.
ಯಾಕೋ ಎಲ್ಲಾ ಗೊಂದಲವಾಗಿತ್ತು.
ಆಕಾಶ್ ಕೇಳುತ್ತಿದ್ದ ಯಾವ ಪ್ರಶ್ನೆಗೂ ಉತ್ತರ ಹೇಳುವ ಸಾವಾಧಾನ ಅವಳಲ್ಲಿರಲಿಲ್ಲ
ಕೂಡಲೆ ಸರೋಜಾಳ ಊರಿಗೆ ಪ್ರಯಾಣ ನಡೆಸಿದಳು
ಇದ್ದ ಏಕೈ ಕ ಕೊಂಡಿ ನಂಜಮ್ಮ ಅವಳೇ ಮಗುವನ್ನು ಇಲ್ಲಿ ತಂದು ಬಿಟ್ಟಿದ್ದು.
ಆದರೆ ನಂಜಮ್ಮ ಸತ್ತು ಮೂರು ವರ್ಷಗಳಾಗಿದ್ದವು.
ನಂಜಮ್ಮನ ಮಗನೊಬ್ಬ ಅವಳಿಗೆ ಕೊಟ್ಟಮಾಹಿತಿಯ ಪ್ರಕಾರ ಸರೋಜಾ ಆ ವರ್ಷಗಳಲ್ಲಿ ದುರುಳರಿಬ್ಬರ ಅತ್ಯಾಚಾರಕ್ಕೆ ಬಲಿಯಾಗಿ ಗರ್ಭಿಣಿಯಾಗಿದ್ದಳು ಏನಾದರೂ ಮಾಡಿಕೊಳ್ಳುವುದಕ್ಕೊ ಸಮಯ ಜಾಸ್ತಿಯಾಗಿತ್ತು.
ಯು.ಎಸ್‌ನಲ್ಲಿದ್ದ ದಿವ್ಯಾಗೆ ಈ ವಿಷಯ ತಿಳಿಸುವುದಕ್ಕೆ ಸರೋಜಾ ಮನಸ್ಸು ಒಪ್ಪಲಿಲ್ಲವೇನೋ ಕೊನೆಗೊಮ್ಮೆ ಮಗು ಹುಟ್ಟಿತು . ನಂಜಮ್ಮನೇ ಸೂಲಗಿತ್ತಿಯಾಗಿದ್ದಳು
ಆದರೆ ಮುದ್ದು ಮುದ್ದ್ದಗಿದ್ದ ಮಗುವನ್ನುನೋಡಿ ಹೆಣ್ಣುಮಕ್ಕಳಿಲ್ಲದ ನಂಜಮ್ಮ ಮಗು ಹುಟ್ಟುತ್ತಲೇ ಬೇರೆಡೆಗೆ ಎತ್ತಿಕೊಂಡು ಬಂದು ಮನೆಯಲ್ಲಿ ಮಗುವನ್ನು ಬಿಟ್ಟು ಬಂದು ಮಗು ಸತ್ತಿದೆ ಎಂದು ಸುಳ್ಳು ಹೇಳಿದಳು.
ಆದರೆ ಮನೆಗೆ ಬಂದ ನಂತರ ಆ ಮಗುವಿನ ಕಾಲು ತಿರುಗಿದ್ದು ಕಂಡು ಅನಾಥಾಶ್ರಮವೊಂದಕ್ಕೆ ಬಿಟ್ಟು ಬಂದಳು