ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ಇಲ್ಲಿ ಪ್ರತ್ಯಕ್ಷವಾಗುತ್ತವೆ
Saturday, September 8, 2012
ಜೋಡಿ ಮಂಚ
ಜೋಡಿ ಮಂಚ
ರಾತ್ರಿ ಹತ್ತು ಘಂಟೆಯಾಗಿತ್ತು. ಜೋಡಿ ಮಂಚದ ಮೇಲಿನ ಒಂಟಿತನಕ್ಕಿಂತ ತಿರಸ್ಕೃತನಾದೆ ಎಂಬ ನೋವು ನನ್ನ ಒಂಟಿಯಾಗಿ ಇರಲು ಬಿಟ್ಟಿಲ್ಲ .ಈಗಲೂ ಅವಳದೇ ನೆನಪು. ನೆನ್ನೆ ಮೊನ್ನೆ ಮದುವೆಯಾದಂತಿದೆ ಆಗಲೇ ಅವಳು ಡೈವೋರ್ಸ್ಗೆ ಅರ್ಜಿ ಸಲ್ಲಿಸುತ್ತೇನೆ ಅಂತ ಅಂದು ಮನೆ ಬಿಟ್ಟಳು. . ಈ ಸಂಪತ್ತಿಗೆ ಪ್ರೀತಿಸಿ ಮದುವೆಯಾಗಬೇಕಿತ್ತಾ?ಅಪ್ಪ ಅಮ್ಮನ್ನ ಬಿಟ್ಟು ನನ್ನ ಸ್ಕೂಟರ್ ನಲ್ಲಿ ಕೂತು ಬಂದವಳಿಗೆ ವರ್ಷ ಕಳೆಯುತ್ತಿದ್ದಂತೆಯೇ ಸ್ಕೂಟರ್ ಬೇಡವಾಯ್ತೇ ಥೇಟ್ ನನ್ನ ಬಯಸಿಬಂದವಳಿಗೆ ನನ್ನ ಸಾದಾತನ ಇಷ್ಟವಾಗದ ರೀತಿಯೇ ಅಚ್ಚರಿ. ಪ್ರೀತಿಯನ್ನ ಅರೆದು ತಿಂದು,ಬದುಕುತ್ತೇವೆ ಅಂದಿದ್ದವಳಿಗೆ ಮನೆಯಲ್ಲಿನ ಊಟ ಹಿಡಿಸದೇ ಹೋಯ್ತೇ. ಕೊನೆಗೆ ನನ್ನ ಬಡತನವೇ ನನಗೆ ನನ್ನ ಪ್ರೀತಿಗೆ ಮುಳಿವಾಯ್ತಾ? ಅಪ್ಪ ಹೇಳಿದ ಮಾತು ಕೇಳದೆ ಈ ಸಿನಿಮಾ ಫೀಲ್ಡ್ಗೆ ಬಂದು ಜುನಿಯರ್ ಅರ್ಟಿಸ್ಟ್ ಆಗಿ. ಈಗೀಗ ಹೀರೋ ಫ್ರೆಂಡ್ ಗ್ರೂಪ್ ನಲ್ಲಿ ಒಬ್ಬನಾಗಿ ಬರೋ ಸಾವಿರ ಎರೆಡುಸಾವಿರಕ್ಕೆ ನೂರೆಂಟು ಮಾತು ಕೇಳಿ........... ಅಬ್ಬಾ........... ಛೇ ಮತ್ತೇನಿದು ಮತ್ತೆ ಅದೇ ಹಳೇ ಕತೆ. ಆದರೂ ಅವಳು ಒಮ್ಮೆಯಾದರೂ ನೆನೆಸಿಕೊಳ್ಳಬಾರದೇ? ಒಂದು ಸಲ ಅಜೇಯ್ ಸಾರಿ ಕಣೋ ಅಂದರೆ ಸಾಕು ............ ಮತ್ತೆ ನನ್ನ ಬೆಚ್ಚನೆಯ ಪುಟ್ಟ ಗೂಡಲ್ಲಿ ಕರೆದುಕೊಳ್ಳಬಲ್ಲೆ ಆದರೆ ಅವಳಿಗೆ ಬೇಕಿರೋದು ಬಂಗಲೆ........ ಪ್ರೀತಿ ಗೂಡಲ್ಲ. ಬರೀ ಪ್ರೀತಿಲಿ ಸಂಸಾರ ಮಾಡಕಾಗಲ್ಲ , ಪ್ರೀತಿ ದುಡ್ದು ಕೊಡಲ್ಲ, ನಂಗೆ ಊಟ ಕೊಡಲ್ಲ ಅಂದು ಹೋದಳು..........ಯಾಕೋ ನಡುಗೋಡೆ ಮೇಲೆ ನಡೀತಿದ್ದೀನಿ. ಅವಳದೇ ತಪ್ಪು ಅಂತ ಹೇಳೋಕಾಗಲ್ಲ ಅನ್ಸುತ್ತೆ. ಅವಳ ಪ್ರತಿಭೆಗೆ ಮನ್ನಣೆ ಕೊಡಲಿಲ್ಲ . ಕೇವಲ ನನ್ ಹೆಂಡತಿ ಮಾತ್ರ ಅಂದುಕೊಂಡೆ. ಆದರೂ ಅವಳಲ್ಲಿ ಹೆಣ್ಣೊಬ್ಬಳು ಇದಾಳೆ ಅವಳಿಗೂ ಅವಳದೇ ಆಸೆ, ಆಕಾಂಕ್ಷೆ ಇರುತ್ತೆ ಅನ್ನೋದನ್ನ ಏಕೆ ಮರೆತೆ. ಅವಳಲ್ಲ್ಲಿ ಓದು ಇದೆ ಕೆಲಸಕ್ಕೆ ಹೋಗ್ತೇನೆ ಎಂದಳು ಅದಕ್ಕೆ ಒಪ್ಪಲಿಲ್ಲ. ಬಹುಷ; ಅವಳು ನನಗಿಂತ ಹೆಚ್ಚು ಓದಿದಾಳೆ ಅನ್ನೋದು ನನ್ನ ಗಂಡೆಂಬ ಅಹಂ ಒಪ್ಪಲಿಲ್ಲವೋ ಏನೋ. ಕೆಲಸಕ್ಕೆ ಹೋಗಬೇಡ ಎಂದ್ದಿದ್ದು ತಪ್ಪಾಯಿತು ಅಥವ ಹಾಗೆಂದೂ ಅವಳ ಪುಟ್ಟ ಪುಟ್ಟ ಶಾಪಿಂಗ್ ಆಸೆ ಈಡೇರಿಸಲಾಗದ್ದು ನನ್ನ ಅಸಹಾಯಕತೆಯೋ . ಒಟ್ಟಿನಲ್ಲಿ ಈಗ ನನ್ನ ಜೊತೆ ಬಿಟ್ಟಾಯ್ತು. ಆದರೂ ಒಂದು ಸಲ ಕಾಲ್ ಮಾಡಲಾ ? ನಾನೆ ಕಾಂಪ್ರಮೈಸ್ ಆಗಿಬಿಡಲಾ ಮೆಸೇಜ್ ಮಾಡಿಬಿಡಲಾ? ನೋಡಿದರೆ ಮತ್ತೆ ಬರ್ತಾಳಾ? ನಡುಗುವ ಕೈಗಳಿಂದ ಮೊಬೈಲ್ ಕೈಗೆತ್ತಿಕೊಂಡೆ. ಟಣ್ ಟಣ್ ..... ಮೊಬೈಲ್ ಮೆಸೇಜ್ ಬಂದಿತ್ತು. ಅದು ಚಿನ್ನುದೇ " ಸಾರಿ ಅಜ್ಜು, ನಾ ಮನೆ ಮುಂದೆ ಬಂದಿದೀನಿ . ಬಾಗಿಲು ತೆಗೆಯೋ . ನಂಗೆ ನಿನ್ನ ಬಿಟ್ಟಿರಕೆ ಆಗಲ್ಲ . ಇನ್ಯಾವತ್ತು ಹೊರಗಡೆ ಹೋಗಲ್ಲ . ಪ್ಲೀಸ್"
ಅಚ್ಚರಿಯಲಿ ಸಂಭ್ರಮ ಎನ್ನುತ್ತಾರಲ್ಲ ದು ಇದೇ ಇರಬಹುದೆನಿಸಿತು ಬಾಗಿಲ ಬಳಿ ಓಡಿ ತೆಗೆದೆ. ಚಿನ್ನು ನಿಂತಿದ್ದಳು....... "ಚಿನ್ನು ಸಾರಿ ಕಣೇ ನಾನೂನು..... ತಪ್ಪು ಮಾಡಿಬಿಟ್ಟೆ" ತಬ್ಬಿಕೊಂಡ ದೇಹಗಳಲ್ಲಿ ಗಾಢ ಗಂಭೀರತೆ ಮಾತ್ರ ಕಾಣುತ್ತಿತ್ತು.
ದುಡುಮ್ .......ಮಂಚದಿಂದ ಕೆಳಗೆ ಬಿದ್ದಿದ್ದೆ. ಚಿನ್ನು ಬಂದಿದ್ದು ಕನಸಿನಲ್ಲಿ ನಿಜವಾಗಿ ಅಲ್ಲ................ ಎದ್ದು ಮತ್ತೆ ಮಲಗಿದೆ ಅದೆ ಜೋಡಿ ಮಂಚದಲ್ಲಿ ಒಂಟಿಯಾಗಿ....................
Labels:
ಸಣ್ಣ ಕಥೆಗಳು
Subscribe to:
Post Comments (Atom)
haha... chennagide kathe, sadhya peTTagilla taane kanasinalli bididdakke :))
ReplyDeleteಒಳ್ಳೆ ತಮಾಷೆ ರೀ ನಿಮ್ಮದು.
ReplyDeleteಹಹಹ್ಹ ಕ್ಲೈಮ್ಯಾಕ್ಸಿನಲ್ಲಿ ನಮ್ಮನ್ನೂ ಮಂಚದಿಂದ ಬೀಳಿಸಿ ಬಿಟ್ರಿ!