Thursday, August 9, 2012

ದಡವಿರದ ಸಾಗರ ಭಾಗ ಐದು



"ಅಮಿತಾ " ಹೆಸರನ್ನು ನೋಡಿಯೇ ಒಮ್ಮೆ ಗಾಭರಿಯಾದ ಶ್ರೀಕಾಂತ್, ................. ಅಭಿಯ ಮೊಬೈಲ್ ಕೈಗೆ ಸಿಕ್ಕಿತ್ತು . ಕಾರಿನಲ್ಲಿ ಅಪ್ಪನ ಜೊತೆ ಬರುತ್ತಿದ್ದ ಅಭಿ ಫೋನ್ ಮರೆತು ಕೆಳಗೆ ಇಳಿದಿದ್ದ.
ನ್ಯೂ ಮೆಸೇಜ್  ಅಂತಿತ್ತು
ಅ....................ಮಿ..........................ತಾ" ಇಷ್ಟೆ ಇದ್ದ ಆ ಮೆಸೇಜ್. ಆ ಹೆಸರು ಅವನಿಗೆ ಹೊಸದೇನಲ್ಲ.  ಪ್ರಿಂಟರ್ಸ್ ನಿಂದ ಹಿಡಿದು  ರಿಯಲ್ ಎಸ್ಟೇಟ್‍ವರೆಗೂ ಶ್ರೀಕಾಂತನ  ಎಲ್ಲಾ ವ್ಯವಹಾರಗಳಿಗೂ ಏಕೈಕ ಪೈಪೋಟಿ ಅಮಿತಾ ವಯಸು ಇನ್ನೂ ೨೮ ಮೀರಿಲ್ಲ ಆಗಲೇ ಪರ್ವತದಷ್ಟು ಜವಾಬ್ದಾರಿಗಳನ್ನ ನಿರ್ವಹಿಸುತ್ತಿದ್ದಾಳೆ.  ಎಲ್ಲಾ ಟೆಂಡರ್‌ಗಳಲ್ಲೂ ಏಕೈಕ ಎದುರಾಳಿ ಅವಳೇ............ ಅವಳ ಅಪ್ಪ ಅಮ್ಮ ............................. ಯೋಚಿಸುತ್ತಿದ್ದಂತೆ ತಲೆ ಸಿಡಿಯಲಾರಂಭಿಸಿತು . ಮತ್ತೆ ಆ ಯೋಚನೆಯೂ ಬೇಡವೆಂದೆನಿಸಿ.... ತಲೆ ಕೊಡವಿದ. ಅಭಿಗೂ  ಅಮಿತಾಗೂ ಹೇಗೆ ಪರಿಚಯ?
ಯಾವಾಗಿನಿಂದ? ಅಭಿಯ ಸ್ವಭಾವ ಗೊತ್ತಿಲ್ಲದ್ದೇನಲ್ಲ.............  ಆದರೆ ಅವಳ ಬಲೆಗೆ ಇವನು ಬಿದ್ದಿದ್ದರೆ ? ಬಹಳ ಚಾಣಾಕ್ಷ ಹೆಣ್ಣು ಆಕೆ.............ಅಭಿಯನ್ನೇ ಕೇಳಿಬಿಡೋದು ಉತ್ತಮ ಎಂದೆನಿಸಿತಾದರೊ  ಅವನಿಗೆ ತಾನವನ ಪರ್ಸನಲ್ ಮೊಬೈಲ್ ನೋಡಿದ್ದೇನೆ ಎಂದು ಗೊತ್ತಾದರೆ ಇಷ್ಟವಾಗಲ್ಲ ಎಂಬುದು ಗೊತ್ತಿದ್ದರಿಂದ ಸುಮ್ಮನಾದ......... ಅಭಿಯ ಆತ್ಮೀಯ ಗೆಳೆಯ ರವಿಯ ಬಳಿ ಕೇಳುವುದು ಉತ್ತಮ ಎಂದನಿಸಿತು.ಮೊಬೈಲ್ ಮತ್ತೆ ಅದೇ ಸ್ಥಾನದಲ್ಲಿ ಇರಿಸಿದ.
ಅಭಿ ಕಾರ್ ಹತ್ತಿರ ದಾಫುಗಾಲು ಇಡುತ್ತಾ ಬಂದ. "ಶ್ರೀ ನನ್ ಮೊಬೈಲ್ ಕೊಡು" ಇವನು ತನ್ನನ್ನ ಡ್ಯಾಡ್ ಅನ್ನೋದೆ ಇಲ್ಲ . ನಾನು ನಿನ್ ಫ಼್ರೆಂಡ್ ಥರಾ ಅಂದಿದ್ದೇ ತಡ ಡ್ಯಾಡ್ ಹೋಗಿ ಶ್ರೀ ಎನ್ನಲಾರಂಭಿಸಿದ. ಕಿರು ನಗೆ ನಗುತ್ತಾ ಅಭಿಗೆ ಫೋನ್ ಕೊಟ್ಟ ಶ್ರೀ. ಕೇಳಬೇಕೆನಿಸಿದ್ದನೆಲ್ಲಾ ರವಿಯ ಬಳಿ ರಾಶಿ ಹಾಕಲು ಸಿದ್ದ ಮಾಡಿಕೊಳ್ಳುತ್ತಿದ್ದ
"ಥ್ಯಾಂಕ್ ಯು ಶ್ರೀ"
ಅಭಿ ಫೋನ್  ತೆಗೆದುಕೊಂಡು ಬಂದಷ್ಟೆ ವೇಗದಲ್ಲಿ ನಡೆದ  ಆಫೀಸಿನೆಡೆಗೆ.
ಶ್ರೀಗೆ ಮತ್ತೆ ಮತ್ತೆ ಅವಳ ನೆನಪಾಗುತ್ತಿತ್ತು. ಅಮಿತಾಆಆಆಆಅ"
...........................
ಅಭಿ ಮೊಬೈಲ್ ನೋಡಿದ . ಇವಳು  ಮತ್ತೆ ಮತ್ತೆ ಮೆಸೆಜ್ ಕಳಿಸ್ತಾನೆ ಇರ್ತಾಳೆ...... ಇನ್ನೂ ಮರೆತಿಲ್ಲ ಅನ್ಸುತ್ತೆ... ಸಾಕಪ್ಪ ಸಾಕು ಎಂದೆನಿಸಿದಳಲ್ಲ . ಆ ಆರು ತಿಂಗಳು. ಮೋಜಿಗೆಂದು ಶುರು ಮಾಡಿದ್ದು ದೊಡ್ಡ ದೊಡ್ಡ ಮಾತಿನಲ್ಲಿ ಕೊನೆಯಾಯ್ತು. ಕೊನೆಗೂ ಅವಳ ಚಾಪ್ಟರ್ ಮುಗಿಯಿತು ಎಂದುಕೊಂಡರೂ ಅವಳು ಮಾತ್ರ ಆಗಾಗ ತನ್ನ ಹೆಸರನ್ನೇ ಮೆಸೇಜ್ ಮಾಡ್ತಿರ್ತಾಳೆ. ಅವಳು.............. ಅಮಿತಾ.....  ಎಂದಿನಂತೆ ಡಿಲೀಟ್ ಮಾಡಿದ
................ ................ ............. ...............
ಕಿರಣ ಮೇಡ್ಂ ಬಳಿ ಮಾತಾಡಿ ಮೂರ್ತಿಯನ್ನ ಸುಪ್ರೀತಾಳ ಜೊತೆಯಲ್ಲಿಯೇ ಇರಿಸಿಕೊಳ್ಳಲು ಒಪ್ಪಿಸಿದ್ದ. ಮೂರ್ತಿ ಕೆಂಡದ ಕಂಗಳವ....... ಸ್ಮಾರ್ಟ್ ಆದರೂ ಸಿಡುಕು ಸ್ವಭಾವ ಒರಟು  ಮಾತಿನಲ್ಲಿ ಗಡಸು...  .... ಅಮಿತಾ ಮೊದಲ ಬಾರಿ ನೋಡಿದಾಗಲೇ ನಿರ್ಧರಿಸಿಬಿಟ್ಟಿದ್ದಳು.
ಇವನೇ ತನ್ನ ಬಾಣ. ............................... ಅವಳ ಗುರಿ ತೇಜಸ್ವಿನಿ................. ಹಾಗಾಗಿಯೇ ಮೂರ್ತಿ ತೇಜಸ್ವಿನಿಯನ್ನ ಭೇಟಿಯಾಗುವಂತೆ ಮಾಡಿದ್ದಳು. ಅಂದಿನ ಪಿವಿಆರ್ ನಲ್ಲಿ ನಡೆದ ಇಡೀ ನಾಟಕದ ಸೂತ್ರಧಾರಿ ಅಮಿತಾ.......
ಆದರೆ ಅದಕ್ಕಾಗಿ ಅವಳು ಕೊಟ್ಟ ಬೆಲೆ ಮಾತ್ರ ಮೂರ್ತಿಯನ್ನು ಜನ್ಮಜನ್ಮಾಂತರಕ್ಕೂ ಅವಳ ದಾಸನಾಗಿರಿಸುವಂತೆ ಮಾಡಿತು.
ಕಿರಣ ಮತ್ತು ಸುಪ್ರೀತ ಮಾತ್ರ ಮೇಡ್ಂಗೆ ಪಾಲಿಗೆ ಮೂರ್ತಿ ಅಮಿತಾಗೆ ತಮ್ಮಿಂದಲೇ ಪರಿಚಯವಾದವನು ........ಹೀಗಿರಬೇಡ ಹಾಗಿರಬೇಡ ಮೇಡ್ಂಗೆ ಕೋಪ ಬರುತ್ತೆ ಎಂದೆಲ್ಲಾ ಊದುತ್ತಿದ್ದ ಕಿರಣ್ .......... ಮೂರ್ತಿ ನಗುತ್ತಿದ್ದನಷ್ಟೇ
..................................................................
ಹಾಗೆ ನೋಡಿದರೆ ಅಮಿತಾ ಆಗಲಿ  ತೇಜಸ್ವಿನಿ ಯಾಗಲಿ ಎಂದೂ ಮುಖಾ ಮುಖಿಯಾದದ್ದಿಲ್ಲ.. ಅಮಿತಾ ತನ್ನ ಎದುರಾಳಿ ಎಂದು ಅಭಿಗೂ ಗೊತ್ತಿದ್ದಿಲ್ಲ.  ಈ ಆರು ತಿರುವಿನ ರಸ್ತೆಯಲ್ಲಿ ತಾನೊಂದು  ಏಳನೇ  ತಿರುವಾಗಬಹುದೆಂದೂ ಹಾಗೂ ಆ ಆರೂ ಜನರ ಬದುಕಿನ ಅಂತ್ಯದ ದಾರಿ ತನ್ನಿಂದಲೇ   ಎಂಬ  ಅರಿವು ಸುಪ್ರೀತಾಗೆ ಇದ್ದಿದ್ದಲ್ಲಿ ಅವಳು ಮೈಸೂರಿನಿಂದ  ಬೆಂಗಳೂರಿಗೆ ಬರುತ್ತಲೇ ಇರುತ್ತಿರಲಿಲ್ಲ