"ನಂಗೆ ನನ್ನ ಮಗ ಬೇಕು" ಅಮ್ಮ ಜೋರಾಗಿ ಅಳುತ್ತಿದ್ದುದು ಕೇಳಿಸುತ್ತಿತ್ತು .ಮೂರು ದಿನವಾಗಿತ್ತು ಮರಿಯಮ್ಮನ ಭೇಟಿಯಾಗಿ. ಆಗಲೇ ಎಷ್ಟೊಂದು ಮಾತುಕಥೆಗಳು. ಊರಿನ ಜನಕ್ಕೆಲ್ಲಾ, ನೆಂಟರಿಗೆಲ್ಲಾ ವಿಷಯ ಗೊತ್ತಾಗಿತ್ತು. ಮೂರು ದಿನದಿಂದ ನಿದ್ದೆ ಇಲ್ಲದೆ ಒದ್ದಾಡುತ್ತಿದ್ದಳು . ಜೊತೆಗೆ ತಾನ್ಯಾರು ಎಂಬುದೂ ತಿಳಿಯದ ನತದೃಷ್ಟೆ ತಾನೆಂದು ಅಳುವುದಾಗಿತ್ತು. ಯಾವುದೋ ಯೋಚನೆಯಲ್ಲಿದ್ದ ಸ್ವಾತಿ ದಡಾರನೆ ಎದ್ದಳುತಾಯಿಯ ಮಾತು ಕೇಳಿ
ತಾನೆಲ್ಲಿದ್ದೇನೆ ಸುತ್ತಾ ನೋಡಿದಳು. ಅದು ಅವಳ ರೂಮ್. ಹಾ ತನ್ನ ರೂಮ್? ತನ್ನ ಮನೆ? ತನ್ನ ಅಮ್ಮ? ಯಾರು ಗೋಜಲಾಗತೊಡಗಿತು ಎದ್ದವಳಿಗೆ ಅಪ್ಪನ ದನಿ ಕೇಳಿಸಿ ನಿಧಾನವಾಗಿ ರೂಮಿನ ಬಾಗಿಲ ಬಳಿ ನಿಂತಳು.
"ಏಯ್ ನಿಂಗೇನಾಗಿದೆಯೇ ಬೋ**.ಇಷ್ಟು ದಿನಾ ಸ್ವಾತೀನಾ ನನ್ ಮಗಳೂ ಮಗಳೂ ಅಂತಾ ಮುದ್ದು ಮಾಡ್ತಿದ್ದೆ. ಈವಾಗ ನಿಂಗೆ ನಿನ್ನ ಮಗ ಬೇಕು ಅಂದ್ರೆ ಸಿಗ್ತಾನಾ?ಇಷ್ಟು ದಿನಾ ಸ್ವಾತಿನೆ ಮಗಳು ಅನ್ಕೊಂಡ ಹಾಗೆ ಇದ್ದು ಬಿಡೋಣ" ಅಪ್ಪನ ದನಿ
"ನಿಮ್ಗೊತ್ತಿಲ್ಲ ನಿಮ್ಮ ತಾಯಿ ನಾನು ಮತ್ತೆ ಇನ್ನೊಂದು ಮಗೂಗೆ ತಾಯಿ ಆಗಲ್ಲ ಅಂತ ಗೊತ್ತಾದಾಗ ಗಂಡು ಮಗ ಬೇಕು ಅಂತ ನನ್ನನ್ನ ಎಷ್ಟೊಂದು ಬೈತಾ ಇದ್ರು ಗೊತ್ತಾ. ನನ್ನ ಕಷ್ಟ ನಿಮಗೆ ಹೇಗೆ ಗೊತ್ತಾಗುತ್ತೆ. ನಮಗೆ ಒಬ್ಬ ಗಂಡು ಮಗ ಇದ್ದಾನೆ ಅಂದ್ರೆ ಹೇಗ್ರಿ ಬಿಟ್ಟಿರೋದು" ಪಾರ್ವತಮ್ಮನೂ ದನಿ ಏರಿಸಿದರು
"ಅದೆಂಗೆ ಇನ್ನೊಂದು ಮಗಾನ ನಿನ್ನ ಮಗು ಅನ್ಕೊಂಡು ಬೆಳೆಸ್ದೆ ನೀನು. ನಾವೂ ನಮ್ಮನೆ ಮಗೂನೆ ಅನ್ಕೊಂಡು ನಮ್ಮ ಶಿವೂಗೆ ಮದುವೆ ಮಾಡಿಕೊಡೋಣ ಅನ್ಕೊಂಡಿದ್ವಿ ಸಧ್ಯ ಮುಂಚೇನೆ ಗೊತ್ತಾಯ್ತಲ್ಲ" ಅದು ಶೀಲಾ ಅತ್ತೆ ದನಿ
ಸ್ವಾತಿಯ ಹೃದಯ ಹೊಡೆದುಕೊಳ್ಳಲಾರಂಭಿಸಿತು
"ಅಂದ್ರೆ ನೀನು ಏನುಹೇಳ್ತಾ ಇದ್ದೀಯಾ ಸ್ವಾತಿಗೆ ಶಿವು ಜೊತೆ ಮದುವೆ ಮಾಡಲ್ವಾ?" ಅಪ್ಪನ ಆತಂಕದ ದನಿ
"ಅದೆಂಗಾಯ್ತದೆ . ಹೆಂಗಿದ್ದರೂ ಅವಳು ನಿಮ್ಮಗಳಲ್ಲ.ನಿಮ್ಮಗ ಬಂದ್ಮೇಲೆ ಅವಳಿಗೆ ಯಾವ ಆಸ್ತಿ ಸಿಕ್ತೈತೆ.ಯಾವುದೋ ಅನಾಥ ಹೆಣ್ಣಿಗೆ ಮದುವೆ ಮಾಡಕಾಯ್ತದಾ?"
ಶ್ರೀಧರ್ ಮಾವನ ದನಿ
ಸ್ವಾತಿಯ ಕಣ್ಣಿಂದ ನೀರು ನುಗ್ಗಲಾರಂಭಿಸಿತು
"ಅಪ್ಪಾ ನೀನು ಹೀಗೆಲ್ಲಾ ಮಾತಾಡಬೇಡ . ನಾನು ಸ್ವಾತೀನ ಕ್ರಿಷ್ಣಾರೆಡ್ಡಿ ಮಗಳು ಅಂತ ಮದುವೆ ಆಗ್ತಾ ಇಲ್ಲ . ಅವಳು ನಂಗೆ ಹಿಡಿಸಿದಾಳೆ ಅವಳನ್ನೇ ಮದುವೆ ಆಗೋದು" ಶಿವೂನ ದನಿ ಎತ್ತರಿಸಿ ನುಡಿದ
ಸ್ವಲ್ಪ ಸಮಾಧಾನವಾಯ್ತು ಸ್ವಾತಿಗೆ
"ನಿಂಗೆ ಗೊತ್ತಾಗಲ್ಲ ಸುಮ್ನಿರೋ " ಶೀಲತ್ತೆ ಬೈದರು
ಶಿವು ತೆಪ್ಪಗಾದದ್ದು ತಿಳಿಯಿತು
"ಶೀಲು ನನ್ನ ಮಗ ಸಿಕ್ತಾನೆ ಅಂತಾ ಯಾವ ಗ್ಯಾರೆಂಟಿ . ಯಾವುದೋ ಗಡ್ಡದ ಸ್ವಾಮಿ ದುಡ್ಡು ಕೊಟ್ಟು ಮಗೂನಾ ಎತ್ಕೊಂಡ್ ಹೋದ ಅಂತಾ ಹೇಳಿದಳಲ್ಲಾ ಆ ***. ಅವನೇನು ಮಗೂನ ಬಾಳಿಸಿರ್ತಾನಾ? ಹಾಗೆ ಒಂದ್ ವೇಳೆ ನಮ್ಮಗ ಸಿಕ್ರೂ ಸ್ವಾತಿ ಹೆಸರಲ್ಲಿ ಆಸ್ತಿ ಇದ್ದೇ ಇರುತ್ತೆ. ಇಷ್ಟು ದಿನಾ ಸ್ವಾತಿನಾ ಅಷ್ಟೊಂದು ಮೆರೆಸಿ ಈಗ ಇದ್ದಕ್ಕಿದ್ದಂತೆ ಬೇಡ ಅಂದ್ರೆ ಹೇಗೆ ಒಂದು ಹೆಣ್ಣ್ ಕಣ್ಣಲ್ಲಿ ನೀರು ಹಾಕಿಸ್ಬೇಡ" ಅಪ್ಪನ ದನಿಯಲ್ಲಿ ಬೇಡಿಕೆ ಇತ್ತು
"ಸರಿ ಹಾಗಿದ್ರೆ ನಿನ್ನ ಮಗನ್ನ ಹುಡುಕಿಸಬಾರದು ಇಡೀ ಆಸ್ತಿ ಸ್ವಾತಿ ಹೆಸರಿಗೆ ಬರೀಬೇಕು . ಸ್ವಾತಿನ ದತ್ತು ತಗೋಬೇಕು " ಶ್ರೀಧರ ಮಾವನ ಅಣ್ಣ ಲಾಯರ್ raghu reddi ಹೇಳಿದ
"ಹೌದಣ್ಣಾ ಹಾಗಿದ್ರೆ ಮಾತ್ರ ನಮ್ಮ್ ಶಿವೂಗೆ ಮದುವೆ ಮಾಡಿಕೊಳ್ತೀವಿ. ಇಲ್ಲಾಂದ್ರೆ ಬೇರೆ ಯಾವ ಗಂಡಾದ್ರೂ ನೋಡು. ಗೊತ್ತಿದ್ದು ಗೊತ್ತಿದ್ದು ಹಾಳು ಬಾವಿಗೆ ಬೀಳೋಕೆ ಶಿವು ಏನು ಕುಂಟಾನ ಕುರುಡಾನಾ" ಶೀಲತ್ತೆ ಇಷ್ಟೊಂದು ಮಾತನಾಡಬಲ್ಲರೆಂದು ತಿಳಿದಿರಲಿಲ್ಲ
" ಶೀಲಾ ನಿಂಗ್ಯಾಕೆ ಇಂತಾ ಕೆಟ್ಟ ಬುದ್ದಿ ಬಂತು. ತಂದೆ ತಾಯಿಗೆ ಅವರ ಮಗನ್ನ ಹುಡುಕ ಬೇ ಡಾ ಅಂತ ದೂರ ಮಾಡ್ತೀಯಲ್ಲ ನೀನೂ ತಾಯಲ್ಲ್ವಾ. ಮಗಂಗೋಸ್ಕರ ನನ್ನಕರುಳು ಎಷ್ಟು ನರಳ್ತಿದೆ ಗೊತ್ತಾ. " ಪಾರ್ವತಿ ಅಳುತ್ತಾ ಹೇಳಿದರು
"ಆಯ್ತು ಶೀಲು. ನಮಗೊಬ್ಬಳು ಹೆಂಗಸು ಸಿಕ್ಕಳು ಅನ್ನೋದನ್ನೇ ಮರೆತುಬಿಡ್ತೀವಿ. ಇಲ್ಲಿವರೆಗೆ ಹೆಂಗಿದ್ವೋ ಹಾಗೆ ಇರೋಣ ಸ್ವಾತಿ ನನ್ನ ಮಗಳು ಅವಳ ಜೀವನ ಚೆನ್ನಾಗಿರಬೇಕು ಎಲ್ಲಾ ಆಸ್ತೀನೂ ಅವಳದ್ದೇ" ಕ್ರಿಶ್ಣಾರೆಡ್ಡಿ ದೃಡ ನಿರ್ಧಾರದಲ್ಲಿ ಹೇಳಿದರು
"ರೀ ನಂಗೆ ನನ್ನ ಮಗ ಬೇಕು. ಯಾರದ್ದೋ ಹೆಸರಿಗೆ ಆಸ್ತಿ ಯಾಕೆ ಬರೀಬೇಕು.ನನ್ನ ಮಗ ಬರಬೇಕು. ಸುಮ್ನೆ ಇರಿ " ತಾಯಿ ಪಾರ್ವತಿಯ ದನಿಯಲ್ಲೂ ಹಟದ ಛಾಯೆ
ಅವಕ್ಕಾದಳು ಸ್ವಾತಿ.ನೆನ್ನೆವರೆಗೆ ತಾನು ಈ ಮನೆ ಮಗಳು ಇಂದು ? ಯಾರೋ ಆಗಿಬಿಟ್ಟೆನಲ್ಲಾ.
"ಏಯ ಪಾರ್ವತಿ.ಅವಳು ಯಾರೋ ಹೇಗೆ ಆಗ್ತಾಳೆ ನಮ್ಮನೆ ಮಗಳು ಕಣೇ . ಇದನೆಲ್ಲಾ ಸ್ವಾತಿ ಕೇಳಿಸಿಕೊಂಡರೇ ***********" ಇನ್ನು ಏನು ಹೇಳುತ್ತಿದ್ದರೋ ಸ್ವಾತಿಯನ್ನು ನೋಡಿ ಮಾತು ನಿಂತಿತು
"ಸ್ವಾತಿ" ಅಪ್ಪ ದಂಗಾಗಿ ಕರೆದರು
"ನಿಮ್ಮನ್ನ ಅಪ್ಪ ಅಂತಾ ಕರೀಲಾ " ಸ್ವಾತಿಯ ಮಾತು ನಿಧಾನಕ್ಕೆ ಬಂದಿತು
"ಹೇಯ್ ಸ್ವಾತಿ ಇದೇನು ಹೊಸದು ನೀನ್ಯಾವತ್ತಿದ್ದರೂ ನಮ್ಮ ಮಗಳೇ. ಆ ಮುಂ*** ಹೇಳಿದ್ದೆಲ್ಲಾ ತಲೆಗೆ ಹಚ್ಕೋಬೇಡಾ ಬಾ ಇಲ್ಲಿ" ಕೃಷ್ಣಾರೆಡ್ಡಿಯವರ ಸ್ವರ ಅವರಿಗೆ ತಿಳಿಯದಂತೆ ಗದ್ಗದಿತವಾಗಿತ್ತು.
ಅಪ್ಪನ ಬಳಿ ಬಂದು ನಿಂತು ಅವರ ಎದೆಗೊರಗಿದಳು
ಅವಳ ಕಣ್ಣೀರು ಅವರ ಎದೆಯನ್ನು ತೋಯಿಸಲಾರಂಭಿಸಿತು.
"ಅಳ್ಬೇಡ ಸ್ವಾತಿ . ಛೀ ನೀನತ್ರೆ ನಮ್ಮನೆ ಲಕ್ಷ್ಮಿ ಅತ್ತ ಹಾಗೆ" ಅವಳ ತಲೆ ನೇವರಿಸಿದರು
ಸಮಾಧಾನಗೊಂಡಂತಾಗಿ ಅಲ್ಲಿಂದ ಮುಖವೆತ್ತಿ ತಾಯಿಯನ್ನು ನೋಡಿದಳು.
ಅವರ ಮುಖದಲ್ಲಿ ಅಸಮಾಧಾನದ ಛಾಯೆ ಕಾಣಿಸುತ್ತಿತ್ತು. ಅದರಲ್ಲಿ ಮೊದಲಿನ ಮಮತೆ ಕಾಣಲಿಲ್ಲ
ಅತ್ತೆ ಮಾವ ಭಾವರಹಿತವಾಗಿ ನೋಡುತ್ತಿದ್ದರು
ಶಿವು ಆತಂಕಗೊಂಡು ಸ್ವಾತಿಯತ್ತ ನೋಡುತ್ತಿದ್ದ.
ಸ್ವಾತಿ ಆಗಲೇ ನಿರ್ದಾರಮಾಡಿದ್ದಳು ತಾನು ಯಾರು ಎಂದು ತಿಳಿದುಕೊಳ್ಳಬೇಕು.ಮೂರುದಿನದಿಂದ ಮನೆಯಲ್ಲಿ ಇದೇ ಮಾತು ಕಥೆ. ಸ್ವಾತಿಯಂತೂ ಹೊರಗೇ ಬಂದಿರಲಿಲ್ಲ. ಅಲ್ಲಿನಮಾತು ಕಥೆಗಳನ್ನೆಲ್ಲಾ ಕೇಳಿ ಕೇಳಿ ಅವಳಿಗೆ ತನ್ನ ಬಗ್ಗೆ ತನ್ನ ಆ ಕಾಣದ ತಾಯಿ ತಂದೆಯ ಬಗ್ಗೆ ಜಿಗುಪ್ಸೆ ಹುಟ್ಟಿತ್ತು. ಹೇಗಾದರೂ ಮಾಡಿ ತನ್ನ ಗಮ್ಯ ತಿಳಿಯಬೇಕೆಂಬ ಛಲ ಹುಟ್ಟಿತ್ತು
"ಅಪ್ಪಾ ನಾನು ನನ್ನ ನಿಜವಾದ ಅಪ್ಪ ಅಮ್ಮ ಯಾರು ಅಂತ ತಿಳ್ಕೋಬೇಕು" ಸ್ವಾತಿಯ ದೃಡ ನಿರ್ಧಾರದ ದನಿ ಕೇಳಿ ಎಲ್ಲರೂ ಒಂದು ಕ್ಷಣ ಅಚ್ಚರಿಗೊಂಡರು
"ಸ್ವಾತಿ ಯಾಕಮ್ಮ ನಾವು ನಿಂಗೇನು ಕಡಿಮೆ ಮಾಡಿದ್ದೀವಿ. ನೀನು ಯಾರೇ ಆಗಿರು ಅದು ನಂಗೆ ಬೇಕಿಲ್ಲ. ನೀನು ನಮ್ಮನೆ ಮಗಳು . ಈ ಇಲ್ಲ ಸಲ್ಲದ ಹುಚ್ಚಾಟ ಬೇಡ" ಅಪ್ಪ ಮಾತ್ರ ಉತ್ತರಿಸಿದರು
"ಇಲ್ಲಾ ಅಪ್ಪಾ ನಾನು ಯಾರು ಅಂತ ನಂಗೆ ಗೊತ್ತಾಗಬೇಕಿದೆ. ನನ್ನನ್ನ ಯಾಕೆ ಬಿಟ್ಟು ಹೋದರು ನಾನೇನು ಅಪರಾಧ ಮಾಡಿದ್ದೆ.ನಿಮ್ಮ ಮಗನ್ನ ಯಾಕೆ ಕರೆದುಕೊಂಡು ಹೋದರು . ಹಾಗೆ ನಿಮ್ಮ ಮಗ ಎಲ್ಲಿದ್ದಾನೆ ಅಂತಾನೂ ತಿಳ್ಕೋಬೇಕಿದೆ" ಸ್ವಾತಿ ತನ್ನ ಅಂಗೈ ರೇಖೆ ನೋಡಿಕೊಂಡೇ ಉತ್ತರಿಸಿದಳು
"ಸ್ವಾತಿ ಅದೆಲ್ಲಾ ಬೇಡ . ನಮಗೆ ಅವನ್ನ ಹುಡೋಕೋ ದಾರಿ ಗೊತ್ತಿಲ್ಲ ಇನ್ನು ನೀನೇನು ಮಾಡ್ತೀಯಾ. ಎಲ್ಲಾ ಮರೆತು ನಮ್ಮನೇಲೇ ಇದ್ದುಬಿಡು.ಹೆಣ್ಣು ಹೆಂಗಸು ಎಲ್ಲಿ ಹೋಗ್ತೀಯಾ?"ಅಮ್ಮನ ಮಾತು.ಆದರೆ ಅದು ಮೂರನೇ ವ್ಯಕ್ತಿಗೆ ಹೇಳುತ್ತಿದ್ದ ಹಾಗಿತ್ತು.
"ಏನೆ ಆದರೂ ಇದು ನಿಮ್ಮ ಮನೆ ಅಮ್ಮ ನನ್ನ ಮನೆ ಆಗಲ್ಲ. ನಂಗೆ ನನ್ನದೇ ಆದ ನೆಲೆ ಬೇಕು. ನನ್ನ ಹೆತ್ತ ತಾಯಿ ತಂದೆ ಬೇಕು. ಇಲ್ಲೀವರೆಗೆ ನಾನು ನಿಮ್ಮ ಮಗಳೇ ಅಂತ ತಿಳಿದು ಪ್ರೀತಿಸುತ್ತಿದ್ದಿರಲ್ಲ ಅಂತ ಪ್ರೀತಿ ಬೇಕು . ಅದೇನೆ ಆಗಲಿ ಅದು ನಂಗೆ ಇಲ್ಲಿ ಇನ್ನು ಮುಂದೆ ಸಿಗಲ್ಲ" ಸ್ವಾತಿ ತಾಯಿಯ ಕಣ್ಣನ್ನು ದಿಟ್ಟಿಸುತ್ತಾ ಹೇಳಿದಳು.
ಪಾರ್ವತಮ್ಮ ಬದಲಿ ಹೇಳಲಿಲ್ಲ.
"ಸ್ವಾತಿ ನಿಂಗೆ ನನ್ನ ಮನೆ ಇದೆ ನಿನ್ನ ಗಂಡನಾಗುವವನ ಮನೆ ನಂಗೆ ಈ ಆಸ್ತಿ ಅಂತಸ್ತು ಇದೆಲ್ಲಾ ಬೇಡ. ಬಾ ನಾವೇ ಪ್ರತ್ಯೇಕವಾಗಿ ಮನೆ ಮಾಡಿಕೊಂಡು ಇರೋಣ ನಿನ್ನ ಸಾಕೋ ಅಷ್ಟು ಸಂಪಾದನೆ ನಂಗೆ ಇದೆ. "ಶಿವೂನ ದನಿ ಅವನತ್ತ ನೋಡಿ ನಕ್ಕಳು. ಎಷ್ಟು ಪ್ರೀತಿ ಅವನಿಗೆ ತನ್ನ ಮೇಲೆ
"ಏ ಶಿವು ಸುಮ್ನಿರೋ . ನೀನ್ಯಾಕೆ ಅವರ ವಿಷಯದಲ್ಲಿ ತಲೆ ಹಾಕ್ತೀಯಾ." ಶೀಲತ್ತೆ ಗದರಿದರು.
"ಅಮ್ಮಾ ನೀನು ಸುಮ್ನಿರು ಇದು ನನ್ನಜೀವನದಪ್ರಶ್ನೆ" ಶಿವೂ ಸಿಡುಕಿ ನುಡಿದ
"ಇಲ್ಲಾ ಶಿವು ನಿನ್ನ ನಂಟೂ ನನಗೆ ಸಿಕ್ಕಿದ್ದು ಕೃಷ್ಣಾರೆಡ್ಡಿಯವರ ಮಗಳು ಅನ್ನೋ ಕಾರಣಕ್ಕಾಗಿ. ಈಗ ಆ ಐಡೆಂಟಿಟೀನೆ ನಂಗೆ ಇಲ್ಲವಾದಾಗ ನಿನ್ನ ನಂಟಿಗೂ ಮೊದಲಿನ ಅಂಟು ಇರುತ್ತಾ? ಅಲ್ಲದೆ ನಂಗೆ ಮದುವೆಯಾಗೋ ಇರಾದೆ ಹೊರಟುಹೋಗಿದೆ ಮೊದಲು ನನ್ನನ್ನ ಹೀಗೆ ಬೇರೆ ಮನೆಯಲ್ಲಿ ಬಿಟ್ಟ ನನ್ನ ತಂದೆ ತಾಯಿಯನ್ನ ಹುಡುಕಬೇಕು . ದಯವಿಟ್ಟು ನನ್ನನ್ನ ಯಾರೂ ತಡೀಬೇಡಿ "
ಶಿವು ಏನೋ ಹೇಳಲು ಹೋದವನು ರೆಡ್ಡಿಯವರು ಮಾತನಾಡಿದ್ದಕ್ಕೆ ಸುಮ್ಮನಾದ
"ಸ್ವಾತಿ ಹಾಗಿದ್ರೆ ನಿನ್ನ ಮುಂದಿನ ನಡೆ ಏನು ಹೇಳು.ಎಲ್ಲರೂ ಸೇರಿ ನಿನ್ನಪ್ಪ ಅಪ್ಪನ್ನ ಅಮ್ಮನ್ನ ಹುಡುಕೋಣ. ಆದರೆ ಅವರು ಬದುಕಿದ್ದಾರೆ ಅನ್ನೋದಕ್ಕೆ ಏನು ಗ್ಯಾರೆಂಟಿ ಹೇಳು" ರೆಡ್ಡಿಯವರು ಕಣ್ಣೊರೆಸಿಕೊಳ್ಳುತ್ತಲೇ ನುಡಿದರು
"ಇಲ್ಲಾ ಅಪ್ಪ. ಅವರು ಬದುಕಿದಾರೆ ಅನ್ನೋ ಬೇಸ್ ಮೇಲೆ ಹುಡುಕ್ತೀನಿ . ಆದರೆ ಅವರನ್ನು ಹುಡುಕೋ ಕೆಲಸ ನಂಗೆ ಬಿಟ್ಟುಬಿಡಿ ನಂಗೆ ನಿಮ್ಮೆಲ್ಲರ ಹಾರೈಕೆಗಳಿದ್ದರೆ ಸಾಕು"
ಕೈ ಮುಗಿದು ಕುಸಿದು ಕುಳಿತಳು. ಕಣ್ಣಲ್ಲಿದ್ದ ನೀರು ಕಾಣದಿದ್ದರೆ ಸಾಕು ಎಂದು ತಲೆ ತಗ್ಗಿಸಿದ್ದಳು.
ಶಿವೂನ ತಂದೆ ತಾಯಿ ದೊಡ್ಡಪ್ಪ ಹೊರಡುತ್ತಿದ್ದರು. ಅವರನ್ನು ಬಿಟ್ಟು ಓಡಿ ಬಂದ ಶಿವು
"ಆಯ್ತು ಸ್ವಾತಿ ನಿನ್ನ ತಂದೆ ತಾಯಿ ಸಿಕ್ಕ ಮೇಲಾದರೂ ನನ್ನನ್ನ ಮದುವೆಯಾಗ್ತೀಯಲ್ಲಾ? " ಶಿವು ತನ್ನ ತಂದೆ ತಾಯಿಯರನ್ನು ಲೆಕ್ಕಿಸದೇ ಕೇಳಿದ.
ಅವನತ್ತ ನೋಡಿ ನಕ್ಕಳಷ್ಟೇ.
"ಸ್ವಾತಿ ನಿಂಗ್ಯಾವ ಸಹಾಯ ಬೇಕಾದರೂ ಈ ಶಿವು ಸದಾ ಸಿದ್ದ ಇರ್ತಾನೆ. ಅಂದ ಹಾಗೆ ನನ್ನ ನಿನ್ನ ಬಂಧ ಕೇವಲ ನನ್ನ ಮಾವ ನಿನ್ನಪ್ಪ್ಪ ಎಂಬುದರ ಮೇಲೆ ನಿಂತಿಲ್ಲ ಸ್ವಾತಿ. ನನ್ನದು ನಿನ್ನದು ಯಾವುದೋ ಜನ್ಮದ ಅಂಟು ಅದಕ್ಕೆ ನಂಟಿನ ಅವಶ್ಯಕತೆಯಿಲ್ಲ. ಇಂದಿನಿಂದ ನಿನ್ನ ಶೋಧದಲ್ಲಿ ಈ ಶಿವೂನೂ ಜೊತೆಗಾರನಾಗಿರ್ತಾನೆ"ಅವಳ ಕೈಗೆ ತನ್ನ ಕೈ ಕೂಡಿಸಿ ಬಿಗಿ ಮಾಡಿದ.
ಅದನ್ನು ತುಟಿಗೊತ್ತಿಕೊಂಡಳು ಸ್ವಾತಿ . ಶಿವು ನಿಧಾನವಾಗಿ ಕೈ ಬಿಡಿಸಿಕೊಂಡು ಹೊರಟ
ಎಲ್ಲರೂ ಒಬ್ಬೊಬ್ಬರಾಗಿ ಅಲ್ಲಿಂದ ಹೊರಟ ಮೇಲೆ ತಲೆ ಎತ್ತಿದಳು
ಅಪ್ಪ ಇನ್ನೂ ಅಲ್ಲೇ ನಿಂತಿದ್ದಾರೆ
"ಸ್ವಾತಿ ನಿಮ್ಮ ತಂದೆ ಸಿಗೋವರೆಗೆ ನೀನು ನನ್ನ ಮಗಳಾಗಿರ್ತೀಯಾ ತಾಯಿ. "
ಸ್ವಾತಿ ಇಲ್ಲೀವರೆಗೆ ತಂದೆಯ ಈ ಸ್ಥಿತಿ ನೋಡಿರಲಿಲ್ಲ
"ಅಪ್ಪಾ " ಎಂದಷ್ಟೆ ಅಂದಳು
ಅವರ ಹೃದಯ ಮಿಡಿಯುತ್ತಿರುವುದು ತಿಳಿಯುತ್ತಿತ್ತು. ಆದರೆ ಅವರು ಅಸಹಾಯಕರು. ಕೈ ಚೆಲ್ಲಿ ಹೊರಟುಹೋದರು
ಸ್ವಾತಿಯ ಯೋಚನೆ ಶುರುವಾಯ್ತು
ತಾನೇನೋ ಆವೇಶದಲ್ಲಿ ಅಪ್ಪ ಅಮ್ಮನ್ನ ಹುಡುಕುವುದಾಗಿ ಹೇಳಿದೆ ಆದರೆ ಎಲ್ಲಿ ಅಂತ ಹುಡುಕುವುದು? ಕಾಲೇಜು ಬಿಟ್ಟರೆ ಮನೆ ಗೆಳತಿಯರು ಶಿವು ಇದಿಷ್ಟುಬಿಟ್ಟರೆ ತನ್ನ ಪ್ರಪಂಚ ಬೇರೇನಾಗಿತ್ತು ಇಷ್ಟು ದಿನ
ಮರಳುಗಾಡಿನಲ್ಲಿ ಕುರುಡನನ್ನ ಬಿಟ್ಟ ಹಾಗೆ ಆಗಿ ಹೋಗಿತ್ತು ಅವಳ ಸ್ಥಿತಿ. ಆದರೆ ಧೃತಿಗೆಡಬಾರದು . ತನ್ನನ್ನ ಇಂಥ ಸ್ಥಿತಿಗೆ ನೂಕಿದ ಆ ತಂದೆ ತಾಯಿಯನ್ನು ಹುಡುಕಲೇ ಬೇಕು. ರೂಮಿಗೆ ಬಂದಳು.
ಸಿಕ್ಕಪುಸ್ತಕ ಕೈಗೆ ತೆಗೆದುಕೊಂಡು ಏನೇನು ಮಾಡಬೇಕೆಂಬ ಟಿಪ್ಪಣಿ ಬರೆಯತೊಡಗಿದಳು
ಅದರಲ್ಲಿ ಮೊದಲನೆಯ ಹಂತವೇ ಮರಿಯಮ್ಮಳನ್ನು ಭೇಟಿಯಾಗುವುದು.
ಅದನ್ನು ವೃತ್ತಾಕಾರಿಸಿಕೊಂಡಳು
*********************************************************
ಮರಿಯಮ್ಮ್ಮ ಆಗಲೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಳು
ಸ್ಟೇಷನ್ನಿಂದ ಅವಳ ವಿಳಾಸವನ್ನು ಶಿವು ತರಿಸಿಕೊಟ್ಟ . ಶಿವಾಜಿನಗರದ ಆಸ್ಟಿನ್ ಟೌನ್ನಲ್ಲಿ ಅವಳ ಮನೆ
ಹುಡುಕುತ್ತಾ ಶಿವು ಜೊತೆಗೆ ಮರಿಯಮ್ಮನ ಮನೆಗೆ ಬಂದಳು
ಅವಳ ಮನೆಯೂ ದೊಡ್ಡದೇ. ಚೆನ್ನಾಗಿ ಹಣಮಾಡಿದ್ದಳೆಂಬುದು ಅದರಿಂದಲೇ ತಿಳಿಯುತ್ತಿತ್ತು
ಬೆಲ್ ಮಾಡಿದಾಗ ಬಾಗಿಲು ತೆರೆದವಳು ಮರಿಯಮ್ಮ. ಸ್ಟೇಷನ್ನಿನಲ್ಲಿ ನೋಡಿದ್ದಕ್ಕೂ ಈಗಲೂ ಭಾರಿ ವ್ಯತ್ಯಾಸ ಕಾಣುತ್ತಿತ್ತು.
ತುರುಬು ಎತ್ತಿ ಕಟ್ಟಿದ್ದಳು. ಜರಿ ಸೀರೆ ಉಟ್ತಿದ್ದಳು. ಸ್ಥಿತಿವಂತಳೆಂಬುದು ಗೊತ್ತಾಗುತ್ತಿತ್ತು.
ಇವರನ್ನು ನೋಡಿ ಅಚ್ಚರಿ ಆದಂತೆ ತೋರಲಿಲ್ಲ ಅವಳಿಗೆ
"ನೀನು ಆವತ್ತು ಸ್ಟೇಶನ್ಗೆ ಬಂದ್ ಹುಡ್ಗಿ ತಾನೇ " ಹೌದೆಂಬಂತೆ ತಲೆ ಆಡಿಸಿದಳು
"ಇವನು?" ಶಿವು ಕಡೆ ನೋಡುತ್ತಾ ಕೇಳಿದಳು ಒಂದು ಚೂರು ಗೌರವದ ಮಾತು ಇಲ್ಲ ಅವಳಲ್ಲಿ
"ಅವರು ನಮ್ಮ ಸೋದರಮಾವನ ಮಗ" ಸ್ವಾತಿಯೇ ಉತ್ತರಿಸಿದಳು
"ಸರಿ ಬನ್ನಿ ಇಬ್ಬರೂ ಒಳಗೆ"
ಒಳಗೆ ಬಂದವರಿಗೆ ಕೂರಲು ಹೇಳಿದಳು
ಸ್ವಾತಿ ಸುತ್ತಾಮುತ್ತ ನೋಡುತ್ತಿದ್ದಳು ಮನೆ ಒಪ್ಪ ಓರಣವಾಗಿತ್ತು
"ನನ್ನ ಮನೆ ನೋಡೋಕೆ ಬಂದ್ಯಾ ಇಲ್ಲಾ ನಿನ್ನ ಮನೆ ಯಾವುದು ಅಂತ ತಿಳ್ಕೊಳೋದಿಕ್ಕೆ ಬಂದ್ಯಾ"
ಮರಿಯಮ್ಮನ ಗಡಸು ನುಡಿ
ಸ್ವಾತಿ ಪೆಚ್ಚಾದಳು . ಸಹಾಯಕ್ಕಾಗಿ ಶಿವುನನ್ನು ನೋಡಿದಳು
"ಸಾರಿ ಮರಿಯಮ್ಮ . ನಮಗೆ ಸ್ವಾತಿ ಬಗ್ಗೆ ತುಂಬಾ ವಿಷ್ಯ ಬೇಕಾಗಿದೆ" ಶಿವೂನೆ ನುಡಿದ
"ನಂಗೇನು ಸಿಗುತ್ತೆ?" ಮರಿಯಮ್ಮನ ದನಿ ಅಬ್ಬಾ ಅವಳ ದಾಷ್ಟ್ತ್ಗಕ್ಕೆ ಬೆರಗಾದಳು. ಅಥವ ಕಾಲ ಅವಳನ್ನು ಹೀಗೆ ಮಾಡಿದೆಯೇ?
"ನಿಂಗೆ ಎಷ್ಟು ದುಡ್ದು ಬೇಕೋ ಅಷ್ಟು " ಶಿವುನೂ ಗತ್ತಾಗಿ ನುಡಿದ .
"ಸರಿ ನಿಮಗೇನು ವಿಷ್ಯ ಬೇಕಾಗಿದೆ ಕೇಳಿ"
ಸ್ವಾತಿ ನುಡಿದಳು ನಿಧಾನಕ್ಕೆ
"ಮರಿಯಮ್ಮ ನಾನು ಪಾರ್ವತಮ್ಮನ ಮಗಳಲ್ಲ ಅಂದರೆ ನಾನೆಲ್ಲಿಂದ ಬಂದೆ ನನ್ನನ್ನು ನಿಮಗೆ ಯಾರು ಕೊಟ್ಟರು?ನೀವ್ಯಾಕೆ ನನ್ನನ್ನ ಬದಲಾಯಿಸಿದಿರಿ"
ಮರಿಯಮ್ಮನ ಮೊಗದಲ್ಲಿ ನಗೆ
"ನಾನೇನೇ ಮಾಡಿದರೂ ಅದು ದುಡ್ಡಿಗೋಸ್ಕರ. ಇನ್ಮೇಲ್ ನಾನ್ಯಾಕೆ ಹಾಗ್ಮಾಡಿದೆ ಅಂತ ಕೇಳ್ಬೇಡ"
"ಆಯ್ತು ಮರಿಯಮ್ಮ ಅವಳು ಎಲ್ಲಿಂದ ಬಂದಳು ಯಾರು ಕೊಟ್ಟರು ಅದನ್ನು ಮಾತ್ರ ಹೇಳು ಸರೀನಾ" ಶಿವು ಹೇಳಿದ
ಮರಿಯಮ್ಮ ಕಣ್ಣು ಮುಚ್ಚಿದಳು. ಕಣ್ಣ ಮುಂದೆ ಗತ ಜೀವನ ಹಾದು ಹೋಯಿತು
*****************************
ಮರಿಯಮ್ಮ ಮಾಡಿಕೊಂಡಿದ್ದು ನರ್ಸಿಂಗ್ ತರಬೇತಿಯಾದರೂ ಆಸ್ಪತ್ರೆಯಲ್ಲಿ ಕೆಲ್ಸ ಮಾಡುವುದು ಅವಳಿಗೆ ಹಿಡಿಸಿರಲಿಲ್ಲ. ಮೊದಲಿಗೆ ಲಕ್ಶ್ಮಿಆಗಿದ್ದ ಅವಳು ಟೋನಿ ಎಂಬಾತನನ್ನು ಪ್ರೀತಿಸಿ ಮದುವೆಯಾಗಿ ಅವನಿಂದ ಒಂದೇ ವರ್ಷದಲ್ಲಿ ದೂರವಾಗಿದ್ದಳು.ಅವಳ ಐಶಾರಾಮದ ಬಯಕೆಗಳು ಅವಳನ್ನು ಎಂತೆಂತಹದೋ ಕೆಲಸ ಮಾಡಿಸುತಿತ್ತು. ಹಾಗೆ ಅವಳು ಬಂದು ನೆಲೆಸಿದ್ದು ಪಾರ್ವತಿಯ ಊರಲ್ಲಿ. ಆಗ ಆ ಊರು ಕಾಡಿನಂತಿತ್ತು. ಸರಿಯಾದ ಬಸ್ ಸೌಕರ್ಯವಾವುದೂ ಇರಲಿಲ್ಲ. ಅಲ್ಲಿ ಇಲ್ಲಿ ಸಣ್ಣ ಪುಟ್ಟ ಕಳ್ಳತನ ಆಗಾಗ ಸಿಕ್ಕರೆ ಯಾರದಾರೂ ಗಿರಾಕಿಗಳು ಇವುಗಳಿಂದ ಅವಳ ಜೀವನ ನಡೆಯುತ್ತಿತ್ತು. ಆಗಾಗ ಸೂಲಗಿತ್ತಿಯಾಗಿಯೂ ಮಾಡುತ್ತಿದ್ದುದರಿಂದ ಹಣವೂ ಸಿಗುತ್ತಿತ್ತು .ತನ್ನ ಕೆಲಸಗಳ ಬಗ್ಗೆ ಅವಳಿಗೆ ಕೊಂಚವೂ ಬೇಸರವಿರಲಿಲ್ಲ. ಹಾಗೆಯೇ ಅದೇ ಊರಿನಲ್ಲಿದ್ದ ಪಾರ್ವತಿಯ ಅತ್ತೆ ಪರಿಚಯವಾಗಿತ್ತು.
ಅಂದು ಪಾರ್ವತಿ ಹೆರಿಗೆ ನೋವು ಎಂದು ಬಂದಾಗ ರಾತ್ರಿಯಲ್ಲಿ ಬಂದಳಲ್ಲ ಎಂದು ಬೇಸರಿಸಿಕೊಂಡೇ ಬಾಗಿಲು ತೆರೆದಳು. ಪಾರ್ವತಿಯ ಸ್ಥಿತಿ ನೋಡಿ ಹೆರಿಗೆ ಮಾಡಲು ಒಪ್ಪಿಕೊಂಡಳು.
ಹೆರಿಗೆ ಆದ ಕೂಡಲೇ ಪಾರ್ವತಿ ಅರೆ ಪ್ರಜ್ನಾವಸ್ತೆಗೆ ಜಾರಿದಳು.ಇತ್ತ ಪಾರ್ವತಿಯ ಅತ್ತೆ ಹಾಗೆ ನೆಲದ ಮೇಲೆ ಮಲಗಿದ್ದರು
ಮಗುವನ್ನು ತೊಳೆಯಲೆಂದು ಹಿತ್ತಲಿಗೆ ಬಂದ ಮರಿಯಮ್ಮ ಅಲ್ಲಿ ನಿಂತಿದ್ದ ಆಜಾನು ಬಾಹು ಆಕೃತಿಯನ್ನು ನೋಡಿ ಬೆಚ್ಚಿದಳು.
"ಯಾರು? ಯಾರದು?"
"ನಿನ್ನ ಕೈನಲ್ಲಿ ಇರೋ ಮಗು ಗಂಡಾ ಹೆಣ್ಣಾ?" ಕಂಚಿನ ದನಿಯಲ್ಲಿ ಕೇಳಿ ಬಂತು
"ಗಂಡು ಮಗು . ಯಾಕೆ ನೀವ್ಯಾರು"
" ಯಾಕೆ ಏನು ಎತ್ತ . ನಾನ್ಯಾರು ಅನ್ನೋದೆಲ್ಲಾ ಬೇಡ. ಆ ಮಗೂನ ಕೊಡು" ಆಕಡೆಯಿಂದ ಗಂಭೀರದನಿಯಲ್ಲಿ ಕೇಳಿಬಂತು ಮಾತು
ಮರಿಯಮ್ಮ ಬೆದರಿ ಒಳಗೆ ಓಡಲು ಯತ್ನಿಸಿದಳು
ಅವಳ ಕೈಯನ್ನು ಗಟ್ಟಿಯಾಗಿ ಹಿಡಿದ ಆ ವ್ಯಕ್ತಿ
ಮಂದ ಬೆಳಕಲ್ಲಿ ಆತನ ಮುಖ ನಿಧಾನವಾಗಿ ಕಾಣತೊಡಗಿತು
ಉದ್ದದ ಗಡ್ಡ . ನೋಡಿದರೆ ಯಾವುದೋ ಸ್ವಾಮೀಜಿಯಂತೆ ಕಾಣುತ್ತಿದ್ದ. ಸೊಂಟಕ್ಕೆ ಬಟ್ಟೆಯೊಂದನ್ನು ಸುತ್ತಿದ್ದ . ಒಂದು ಕೈನಲ್ಲಿ ಏನೋ ಹಿಡಿದಿದ್ದ. ಅರೆ ಅದೊಂದು ಮಗು.
ಮರಿಯಮ್ಮ ಕಿಟಾರ್ ಎಂದು ಕಿರುಚುವುದರಲ್ಲಿದ್ದಳು
ಅಷ್ಟರಲ್ಲಿ ಅವಳ ಕಣ್ಣ ಮುಂದೆ ನೋಟಿನ ಕಂತೆ ಕಾಣಿಸಿತು, ಆ ಸ್ವಾಮೀಜಿ ಅದನ್ನು ಅವಳ ಕಣ್ಣ್ ಮುಂದೆ ಆಡಿಸಲಾರಂಭಿಸಿದ
ಮರಿಯಮ್ಮ ನಿಧಾನವಾಗಿ ಸುಮ್ಮನಾದಳು. ಕಣ್ಣ ಮುಂದೆ ನೋಟಿನ ಕಂತು ಕುಣಿಯುತ್ತಿತ್ತು
"ಈ ಮಗು ತಗೊಂಡು ಆ ಮಗು ಕೊಡು" ಆತ ನಿರ್ದೇಶಿಸಿದ
"ಯಾಕೆ " ಮರಿಯಮ್ಮ ಪ್ರಶ್ನಿಸಿದಳು
ಆತ ಮತ್ತೊಂದು ನೋಟಿನ ಕಂತೆ ತೆಗೆದ
ನೂರರ ನೋಟುಗಳು
ಮರಿಯಮ್ಮನ ಕಣ್ಣುಗಳು ಅರಳಿದವು
ಮಗುಅನ್ನು ಮುಂಚಾಚಿದಳು.
ಆತ ತನ್ನ ಬಲಗೈನಲ್ಲಿದ್ದ ಮಗುವನ್ನು ಕೊಟ್ಟ
ಮಕ್ಕಳುಗಳು ಅದಲು ಬದಲಾದವು . ಹಾಗೆ ಅವಳ ಕೈ ತುಂಬಾ ನೋಟುಗಳು .ನೋಡು ನೋಡುತ್ತಿದ್ದಂತೆ ಆತ ಕತ್ತಲಲ್ಲಿ ಕರಗಿದ
ತನ್ನ ಕೈನಲ್ಲಿದ್ದ ಮಗುವನ್ನು ನೋಡಿದಳು.ಬಲು ಮುದ್ದಾಗಿತ್ತು.
ಅದು ಹುಟ್ಟಿ ಒಂದೆರೆಡು ದಿನಗಳಾಗಿದ್ದಿರಬಹುದು. ಅದರಮೈ ಮೇಲಿದ್ದ ಬಟ್ಟೆ ಹಾಗು ಹೊದಿಕೆಗಳನ್ನು ಬಿಚ್ಚಿ ಒಂದು ಬ್ಯಾಗಿಗೆ ಹಾಕಿದಳು
ತೆಗೆದುಕೊಂಡು ಹೋಗಿ ಪಾರ್ವತಿಯ ಪಕ್ಕದಲ್ಲಿ ಮಲಗಿಸಿದಳು ತಾನಿಲ್ಲೇ ಇದ್ದರೆ ಈ ವಿಷ್ಯ ಯಾರಿಗಾದರೆ ಗೊತ್ತಾದರೆ ಅಪಾಯ ಎಂದು ಬಗೆದು ತನ್ನ ಬಟ್ಟೆ ಬರೆಗಳನ್ನು ಬ್ಯಾಗಿಗೆ ತುಂಬಿಕೊಂಡು ಹಣದ ಸಮೇತ ಹಿತ್ತಲ ಬಾಗಿಲಿನಿಂದ ಹೊರ ಬಂದಳ ಬಸ್ ನಿಲ್ದಾಣದ ಕಡೆಗೆ ಕಾಲು ದಾರಿಯಲ್ಲಿ ಹೊರಟಳು.
************************************************
ಮರಿಯಮ್ಮ ಕಣ್ಣು ತೆರೆದಳು
ಸ್ವಾತಿಗೆ ಬೆಂಕಿಯಿಂದ ಬಾಣಲೆಗೆ ಬಿದ್ದ ಅನುಭವವಯ್ತು. ರಹಸ್ಯ ಇನ್ನೂ ಕಗ್ಗಂಟಾಯ್ತು.
"ಆ ಸ್ವಾಮಿ ಯಾರು ಅಂತ ಗೊತ್ತಾ ನಿಮಗೆ?" ಕೇಳಿದಳು
"ಇಲ್ಲಾ "ಎನ್ನುವಂತೆ ತಲೆ ಆಡಿಸಿದಳು ಮರಿಯಮ್ಮ.
ತನ್ನ ಗಮ್ಯ ತಾನಂದುಕೊಂಡಷ್ಟು ಸುಲಭಾವಾಗಿ ಸಿಗುವುದಿಲ್ಲ ಎಂದನಿಸಿತು ಸ್ವಾತಿಗೆ
"ಅವನನ್ನ ಎಲ್ಲಾದರೂ ಮತ್ತೆ ನೋಡಿದ್ರಾ?" ಶಿವೂ ಮರಿಯಮ್ಮನನ್ನ ಕೇಳಿದ
"ಇಲ್ಲಾ ನಾನ್ ಮತ್ತೆ ಅವನನ್ನ ಮೀಟ್ ಮಾಡಲಿಲ್ಲ .ಅವನ್ನ ಹಿಂದೆ ಎಲ್ಲೂ ಈ ಪ್ರದೇಶದಲ್ಲಿ ನೋಡಿಲ್ಲಾ . ಅದೆಲ್ಲಿಂದಾ ಬಂದನೋ ಈ ಮಗೂನಾ ಅದೆಲ್ಲಿಂದಾ ತಂದನೋ .ಗೊತ್ತಿಲ್ಲ. ಒಂದಂತೂ ನಿಜ .ಈ ಪಾರ್ವತಮ್ಮ ನೋವು ಅಂತ ನಮ್ಮನೆಗೆ ಬಂದದ್ದನ್ನು ನೋಡಿದಾನೆ. ಅದಕ್ಕೆ ಹಿತ್ತಲ ಬಾಗಿಲಿನಿಂದ ಒಳಗೆ ಬಂದಿದಾನೆ"
ಸ್ವಾತಿಯ ಮನದಲ್ಲಿ ಮತ್ತೆ ಅಂಧಾಕಾರ ಮೂಡಿತು.
ಶಿವು ತನ್ನ ಪ್ಯಾಕೆಟ್ ನಿಂದ ಸಾವಿರದ ಮೂರು ನೋಟುಗಳನ್ನು ಕೊಟ್ಟ
ಮರಿಯಮ್ಮ್ಮ ಕಾಯುತ್ತಿದ್ದವಳಂತೆ ಕಿತ್ತುಕೊಂಡಳು.
"ಆಯ್ತು ಮರಿಯಮ್ಮ. ಮುಂದೇನಾದರೂ ಸಹಾಯ ಬೇಕಿದ್ದಲ್ಲಿ ಮತ್ತೆ ಬರ್ತೀವಿ"
ಅವಳಿಗೆ ಕೈ ಮುಗಿದೆ ಹೊರಬಂದರು
ಮುಂದೇನು ಮಾಡುವುದು?
ಪ್ರಶ್ನೆ ಬೃಹದಾಕಾರವಾಯ್ತು.
Tuesday, November 10, 2009
Monday, November 9, 2009
ಗಮ್ಯ ಹುಡುಕುತ್ತಾ ಭಾಗ ೧
"ಸ್ವಾತಿ ತುಂಬಾ ಮುದ್ದಾಗಿದ್ದೀಯಾ ಅದು ಹೇಗೆ ಇಂತಾ ಅಪ್ಪ ಅಮ್ಮನಿಗೆ ನೀನು ಹುಟ್ಟಿಬಿಟ್ಟೆ ?" ಈ ಪ್ರಶ್ನೆ ತುಂಬಾ ಕಾಮನ್ ಆಗಿದ್ದರಿಂದ ಅದು ಸ್ವಾತಿಗೆ ಹೊಸದೆನಿಸಲಿಲ್ಲ . ಸುಮ್ಮನೆ ನಕ್ಕಳು. ಅವರ ಸ್ಟಾಪ್ ಬಂತು ಇಳಿದು ಹೋದರು. ಯಾರು ಎಂದು ಅವಳಿಗೇನು ಗೊತ್ತು. ಅಪ್ಪನಿಗೆ ತಿಳಿದವರಿರಬೇಕು ಅಥವಾ ಅಮ್ಮನಿಗೂ . ಇದ್ದರೂ ಇರಬಹುದು ಊರಿಗೆ ಗೊತ್ತಿರುವವರು ಅಪ್ಪ ಅಮ್ಮ .ಎಂದುಕೊಂಡು ಸುಮ್ಮನಾದಳು
ಹೌದು ಸ್ವಾತಿಯ ಅಪ್ಪ ಕಪ್ಪು ಬಣ್ಣಕ್ಕೆ ಸಡ್ಡು ಹೊಡೆಯುವ ಬಣ್ಣ . ಅಮಾವಾಸ್ಯೆ ದಿನ ಅಪ್ಪ ಎಲ್ಲಿ ಕತ್ತಲೆಲ್ಲಿ ಎಂದು ಹುಡುಕಬೇಕಾದ ಪರಿಸ್ಥಿತಿ ಉಂಟಾಗುತ್ತದೆ
ಅವಳ ಅಮ್ಮನೇ ವಾಸಿ ಕೊಂಚ ಬೆಳ್ಳಗೆ ಇದ್ದಾರೆ. ಆದರೋ ಮೂಗೋ ಬಿ ಎಮ್ ಟಿ ಸಿ ಬಸ್ ಸೀದಾ ಬಂದು ಅಮ್ಮನ ಮೂಗಿನ ಮೇಲೆ ಹತ್ತಿ ಪಯಣಿಸಿತ್ತೇನೋ ಎಂಬಷ್ಟು ಸಪಾಟವಾಗಿದೆ. ತಕ್ಕಂತೆ ಪುಟ್ಟ ಪುಟ್ಟ ಕಣ್ಣುಗಳು. ನಾನೇ ಮುಂದೆ ಎಂದು ಬಾಗಿರುವ ಹಲ್ಲುಗಳು.
ಸ್ವಾತಿ ಸೌಂದರ್ಯಕ್ಕೆ ಮತ್ತೊಂದು ಪರ್ಯಾಯ ಹೆಸರು. ಹಾಗಾಗೇ ಮನೆಯಲ್ಲಿ ಅವಳು ತುಂಬಾ ಮುದ್ದು ಒಬ್ಬಳೇ ಮಗಳೆಂದು ಬಲು ಮುದ್ದಾಗಿ ಸಾಕಿದ್ದರು. ಶ್ರೀಮಂತ ಕುಟುಂಬಕ್ಕೆ ಸೇರಿದ ರೆಡ್ಡಿಗಳ ಮಗಳು . ಅಪ್ಪನ ದರ್ಪ ಅಮ್ಮನ ಜಂಭ ಧಾರಾಳವಾಗಿತ್ತು ಜೊತೆಗೆ ತುಂಟತನ ಸಾಕು ಸಾಕೆನ್ನುವಷ್ಟು.ಕಾಲೇಜಿನಲ್ಲಿ ತುಂಟಿ ಎಂಬ ಹೆಸರಿನ ಜೊತೆಯೇ ಜಾಣೆ ಎಂಬ ಬಿರುದು ಇತ್ತು ಇನ್ನೂ puc ರಿಸಲ್ಟ್ ಬಂದಿರಲಿಲ್ಲ.
ಆದರೂ ಸ್ವಾತಿಗೆ ಯಾವ ಆತಂಕವೂ ಇರಲಿಲ್ಲ ಅವಳು ಪರೀಕ್ಶೆಯಲ್ಲಿ ಮೊದಲ ಸ್ಥಾನ ಬಿಟ್ಟು ಕೆಳಗಿಳಿದ್ದಿಲ್ಲ ಅಥವ ಹಾಗೇನಾದರೂ ಆದರೂ ಅವಳಿಗೇನೂ ನಷ್ಟವಿಲ್ಲ. ಅವಳು ಓದಿ ಸಂಪಾದಿಸಬೇಕಾದ್ದು ಏನು ಇರಲಿಲ್ಲ
ಬಸ್ ಸ್ಟಾಪ್ ಬಂತು.ಬಸ್ ಇಂದ ಇಳಿಯುತ್ತಿದ್ದಂತೆ ಸುತ್ತಾ ಮುತ್ತಾ ಇದ್ದ ಕಣ್ಣುಗಳೆಲ್ಲಾ ಅವಳ ಮೇಲೆ ಹಾದವು . ಅವಳಿಗೂ ಗೊತ್ತು ಎಲ್ಲರೂ ಕಂಡಕ್ಟರ್ ಹಾಗು ಡ್ರೈವರ್ ಸೇರಿದಂತೆ ತನ್ನನ್ನೇ ನೋಡ್ತಾ ಇದ್ದಾರೆ ಅಂತ . ಅದೂ ಒಂಥರಾ ಪುಳಕವೇ
ಅವಳಿಗೆ ಅಮ್ಮ ಎಷ್ಟೋ ಸಲ ಹೇಳಿದ್ದಾರೆ "ಸ್ವಾತಿ ಸ್ಕೂಟಿ ಕಲಿತ್ಕೋ ಸುಮ್ನೆ ಬಸಲ್ಲಿ ಎಲ್ಲಾ ಜನರ ಕಣ್ಣು ಬೀಳುತ್ತೆ. " ಅಂತಾ ಅಪ್ಪಾ ಅಂತೂ ಒಂದು ಹೆಜ್ಜೆ ಮುಂದೆ "ಸ್ವಾತಿ ನೀನು ಕಾರಲ್ಲೇ ಹೋಗಿ ಬಾ "ಅಂತಾರೆ
ಆದರೂ ಅವಳಿಗೆ ಬಸ್ಸಲ್ಲೇ ಓಡಾಡೋ ಆಸೆ. ಸುತ್ತಾ ಇರೋ ಜನರನ್ನ ನೋಡೋ ಆಸೆ. ಅವರ ಕಣ್ಣಲ್ಲಿ ಏನಿದೆ ಅಂತ ತಿಳಿಯೋ ಆಸೆ. ಹಿಂದೆ ಬೀಳೋ ಪುಂಡರನ್ನ ಸಾಕು ಎನಿಸುವಷ್ಟು ಗೋಳು ಹಾಕಿಕೊಳ್ಳೋ ಆಸೆ. ಹಾಗೆ ಹಿಂದೆ ಬಿದ್ದ ಹುಡುಗರು ಅಪ್ಪನ ಕೋಪಕ್ಕೆ ಸಿಕ್ಕಿ ಕೈ ಕಾಲು ಮುರಿಸಿಕೊಂಡು ಇವಳನ್ನು ನೋಡಿದರೆ ಸಾಕು ದೂರದಿಂದಲೇ ಕೈ ಮುಗಿದು ಓಡಿ ಹೋಗುವುದನ್ನು ನೋಡಿ ನಗುವ ಆಸೆ
ಬಸ್ ಸ್ಟಾಪ್ ಪೂರ್ತಿ ಜನಗಳು ಇನ್ನೇನು ಯಾವ ಬಸ್ಸೂ ಬರೋದಿಲ್ವೇನೋ ಅನ್ನೊ ಹಾಗೆ ಜನ ಕುರಿ ಮಂದೆ ಥರಾ ನುಗ್ತಾ ಇದ್ದಾರೆ. ಆ ಬಸ್ ಡ್ರೈವರ್ರೋ ಇಡಿ ಜನರನ್ನೇ ತಾನೆ ಹೊತ್ತುಕೊಂಡು ಹೋಗ್ತೀನೇನೋ ಅನ್ನೋಹಾಗೆ ಬೈತಾ ಇದ್ದಾನೆ.
ಎಷ್ಟೆ ಮುಂದುವರೆದ್ರೂ ಈ ಕಂಡಕ್ಟರ್ಸ್ಗೆ ಮತ್ತೆ ಡ್ರೈವರ್ಸ್ಗೆ ಸಾಫ್ಟ್ ಸ್ಕಿಲ್ಸ್ ಹೇಳಿಕೊಡದಿದ್ದರೆ ಬಿ ಎಮ್ ಟಿಸಿ ಬಸ್ಸಾ ಅನ್ನೋ ರಾಗ ತಪ್ಪಲ್ಲ.
ನಗುತ್ತಾ ಮನೆಯತ್ತ ನಡೆದಳು ಭವ್ಯ ಬಂಗಲೆ ಅದು . ಗೇಟ್ ತೆರೆದು ಒಳಗೆ ಹೋಗುತ್ತಿದ್ದಂತೆ
"ಸ್ವಾತಿ ಇಲ್ಲಿ ಬಾ " ಅಪ್ಪ್ಪ ಸ್ವಿಮ್ಮಿಂಗ್ ಪೂಲ್ ಬಳಿಯಲ್ಲೇ ಕೂತಿದ್ದರು . ಹೋಗಿ ಕೂತಳು . ಇಲ್ಲಿ ಕೂತು ಮಾಡುವುದೇನು ? ಅತ್ತಿತ್ತ ನೋಡತೊಡಗಿದಳು. ಅಪ್ಪ ಅವಳನ್ನ ಕರೆದದ್ದನ್ನೇ ಮರೆತವರಂತೆ ಕಿವಿಗೆ ಮೊಬೈಲ್ ಅಂಟಿಸಿಕೊಂಡಿದ್ದರು.
ಜೋರು ದ್ವನಿಯಲ್ಲಿ ಮಾತು ನಡೆಯುತ್ತಿತ್ತು
"ಲೋ ಲೋಫರ್ ಏನೋ ಮಾಡ್ತಾ ಇದ್ಯಾ ಮೊದಲು ಅವನ್ ಮನೆ ಹೊಡುಕೋ . ಎಲ್ಲಿ ಸತ್ ಬಿದ್ದಿದಾನೆ . ಹಂಗೆ ಅವನ್ ಮನೇಲಿ ಯಾರ್ಯಾರಿದ್ದಾರೆ ಅಂತ ಡೀಟೇಲ್ಸ್ ತಗೋ. ಕಕ್ಕ್ಸಿಬಿಡ್ತೀನಿ. ಈ ಕ್ರಿಷ್ಣಾರೆಡ್ಡಿ ಅಂದ್ರೆ ಉಚ್ಚೊಯ್ಕೋಬೇಕು ಹಂಗ್ ಮಾಡ್ತೀನಿ" ಇದು ಸಾಮಾನ್ಯ ಮಾತುಕತೆ
ಸ್ವಾತಿಯ ಅಪ್ಪ ಫೈನಾಂಶಿಯರ್. ಜೊತೆಗೆ ಪೇಪರ್ ಏಜೆಂಟ್, ಕೇಬಲ್ ಲಾಬಿ. ರಿಯಲ್ ಎಸ್ಟೇಟ್ ಏಜೆಂಟ್. ರಿಂಗ್ ರಸ್ತೆಯಲ್ಲಿರೋ ಚೌಲ್ಟ್ರಿಯಲ್ಲಿ ನಾಲ್ಕು ಇವರದೇ. ಇವರಿರೋ ಊರಲ್ಲಿ ಅರ್ಧ ಭಾಗ ಇವರದ್ದೇ , ಆಸಾಮಿ ಕೈಗೆ ಕಾಲಿಗೆ ಕುತ್ತಿಗೆಗೆ ಅಂತ ಸುಮಾರು ಎರೆಡು ಕೇಜಿ ಚಿನ್ನ ಹಾಕಿಕೊಳ್ಳುತ್ತಿದ್ದ.
ಫೋನ್ ಕಿವಿಯಿಂದ ಕೆಳಗೆ ಬಂತು
ಅವರ ಮಾತು ನಿಲ್ಲುವುದೇ ಕಾಯುತ್ತಿದ್ದಳು "ಏನಪ್ಪ ?"
"ಸ್ವಾತಿ ಯಾವಾಗ ರಿಸಲ್ಟ್?" ಮತ್ತದೇ ಪ್ರಶ್ನೆ ಇದೇ ಪ್ರಶ್ನೆ ಪರೀಕ್ಷೆ ಆದಾಗಿನಿಂದ ಕೇಳಿ ಕೇಳಿ ಸ್ವಾತಿಗೂ ಬೇಸರವಾಗಿತ್ತು
"ಒಂದು ಸಾವಿರ ಸಲ ಕೇಳ್ತಾ ಇದ್ದೀಯಾಪ್ಪ ಬೇರೆ ಏನಾದರೂ ಕೇಳಪ್ಪ"
ಬೇಸರ ಮಾಡಿಕೊಂಡೇ ಉತ್ತರಿಸಿದಳು
"ಸಾರಿ ಸ್ವಾತಿ ಮುಂದಿನ ತಿಂಗಳಲ್ವೇ. ಸರಿಯಾಗಿ ಇಪ್ಪತ್ತು ದಿನಗಳಾದ ಮೇಲಲ್ಲವೇ?"
"ಹೂ ಹೌದು . ಏನ್ಮಾಡಬೇಕಂತ ಇದ್ದೀಯಾ" ಪೇಪರ್ ಓದ್ತಾನೇ ಕೇಳಿದರು . ಅವರಿಗೆ ಮಗಳನ್ನು ಓದಿಸಿ ಡಾಕ್ಟರ್ ಮಾಡಬೇಕಂತಿತ್ತು. ಆದರೆ ಅವಳೋ ಆರ್ಟ್ಸ್ ಬ್ರಾಂಚ್ ತೆಗೆದುಕೊಂಡಿದ್ದಳು. ಸ್ವಾತಿ ಏನು ಹೇಳಿಯಾಳು.
ಅತ್ತಿತ್ತ ನೋಡಿ "ಒಳಗೆ ಹೋಗಿ ಕಾಫಿ ಕುಡೀಬೇಕಂತ ಅನ್ಕೊಂಡಿದ್ದೇನೆ " ಹೇಳಿ ಒಳಗೋಡಿದಳು ಕ್ರಿಷ್ಣಾ ರೆಡ್ಡಿ ಬೆಪ್ಪಾಗಿ ನಗುತ್ತಾ ಸುಮ್ಮನಾದರು
ಅವಳು ರೂಮೊಳೊಗೆ ಹೋದ ತಕ್ಷಣ ಅಮ್ಮ " ಎಲ್ಲಾದರೂ ಹೊರಗಡೆ ಹೋಗಿ ಬಂದ ಮೇಲೆ ಕಾಲು ತೊಳ್ಕೋ ಅಂದ್ರೂ ಕೇಳಲ್ಲ ಯಾವ್ಯಾವ ಜನರು ಏನೇನು ಮಾಡ್ರಿರ್ತಾರೋ ." ಗೊಣಗುತ್ತಿದ್ದರು
ಪಾರ್ವತಮ್ಮ ಜನ ತಮಗೆ ಮಾಟ ಮಂತ್ರ ಮಾಡಿಸಿರುತ್ತಾರೆ ಎಂಬ ಭಯ ಅವಳ ಅಪ್ಪನಿಗೆ ಎಲ್ಲಿ ಯಾರ್ ಯಾವತ್ತು ಮಚ್ಚು ಲಾಂಗ್ ಹಿಡ್ಕೊಂಡು ಬರ್ತಾರೋ ಅಂತ ಭಯ. ಇಲ್ಲದೇ ಏನು ಅಂಥಾ ಪಾಪಗಳನ್ನು ಮಾಡಿರೋರು ಅವರು ಮನುಷ್ಯರನ್ನು ಕೊಚ್ಚುವುದು ಅವರಿಗೊಂದು ಥರಾ ಆಟವಾಗಿತ್ತು. ಇಡೀ ಊರಿಗೆ ರೌಡಿಯ ರೀತಿ ಅವರು .
ರೂಮಿನ ಕಿಟಕಿ ಇಂದ ಅಪ್ಪಾ ಫೋನಲ್ಲಿ ಮಾತಾಡ್ತ್ತಿದ್ದುದು ಕೇಳಿಸ್ತಿತ್ತು "ಏಯ್ ಆ ** ಮಗನಿಗೆ ಏನ್ ರೋಗಾಂತೆ ಇವತ್ತು ಸಂಜೆ ಒಳಗೆ ಅಸಲು ಬಡ್ದಿ ಸಮೇತ ದುಡ್ಡುಕೊಡ್ಲಿಲ್ಲಾಂದ್ರೆ ಅವನ ಹೆಂಡ್ತೀನ ಬಾಂಬೆಗೆ ಮಾರ್ಬಿಡ್ತೀನಂತ ಹೇಳು . ಏನ್ಕಂದ್ಕೊಂಡಿದಾನೆ ************" ಅಪ್ಪನ ಬಾಯಿಂದ ಕೆಟ್ಟ ಮಾತುಗಳೇ . ಕೇಳೋಕಾಗಲ್ಲಾ ಒಂದೆರೆಡು ಸಲಾ ಅಪ್ಪನ್ನ ಬೈದಿದ್ದಳು
ಅದಕ್ಕೆ ಅವರು "ನೋಡು ಸ್ವಾತಿ ಹಿಂಗೆಲ್ಲಾ ಬೈದೆ ಹೋದ್ರೆ ನನ್ನ ದುಡ್ಡು ವಾಪಾಸ್ ಬರೋಲ್ಲಾ. ಹೀಗೆಲ್ಲಾ ಇಲ್ದೆ ಹೋದ್ರೆ ನಮ್ಮ ಹಣಾ ಸ್ಮಶಾನಕ್ಕೋದ ಹೆಣ ಅಂತನ್ಕೊಂಡು ಸುಮ್ನಾಗಬೇಕಷ್ಟೆ"
"ಸ್ವಾತಿ ಬೋಂಡ ತಿಂತೀಯಂತೆ ಬಾರೆ" ಅಮ್ಮಾ ಒಳಗಿಂದ ಕೂಗಿದರು ಮುಖ ತೊಳೆದುಕೊಂಡು ಅಡಿಗೆ ಮನೆಗೆ ಹೋದಳು. ಬೋಂಡಾ ಸಿದ್ದವಾಗಿತ್ತು. ಮೆಲ್ಲತೊಡಗಿದಳು "ಸ್ವಾತಿ ಮುಂದಿನ ತಿಂಗಳಿಗೆ ನಿಂಗೆ ಹದಿನೆಂಟು ತುಂಬುತ್ತೆ" ಅಮ್ಮಾ ಬೋಂಡಾ ಕರಿಯುತ್ತಾ ಹೇಳಿದರು
"ಮುಂದಿನವರ್ಷ ಅದೇ ತಿಂಗಳಿಗೆ ಹತ್ತೊಂಬತ್ತೂ ತುಂಬುತ್ತೆ . ಮತ್ತೆ ಅದರ ಮುಂದಿನ ವರ್ಷ್ಗ ಇಪ್ಪತ್ತೂ ತುಂಬುತ್ತೆ." ಮಾತು ಮುಂದುವರಿಸಿದಳು ಕೀಟಲೆಯಿಂದ
"ಲೇ ತರ್ಲೇ ನಾನ್ ಹೇಳ್ತಾ ಇರೋದು ಕೇಳಿಸಿಕೋ. ಶೀಲತ್ತೆ ಫೋನ್ ಮಾಡಿದ್ರು ಯಾವಾಗ ನಮ್ಹುಡುಗೀನ ಮನೆಗೆ ಕಳ್ಸ್ತೀರಾ ಅಂತಾ ."
"ಕಳಿಸಿಬಿಡು ಯಾಕೆ ಅವರ ಹುಡುಗೀನ ಇಟ್ಕೊಂಡಿದೀಯಾ" ಗೊತ್ತು ಅವಳೇನು ಹೇಳ್ತಾ ಇದಾಳಂತ ಆದರೂ ಬಾಯೊಳಗಿದ್ದ ಬೋಂಡಾ ಜೊತೆಗೆ ಮಾತಾಡಿದಳು
"ಸ್ವಾತಿ ತುಂಬಾ ತರಲೆ ಆಗ್ತಾ ಇದೀಯಾ. ಮದುವೆ ಯಾವಾಗ ಇಟ್ಕೊಳೋಣ ಅಂತಾ ಕೇಳ್ತಾ ಇದ್ದಾರೆ" "ಅಯ್ಯೋ ಶೀಲತ್ತೆಗೆ ಮತ್ತೆ ಮದುವೇನಾ ಮತ್ತೆ ಶ್ರೀದ್ಜರ ಮಾವನ ಗತಿ" ಸ್ವಾತಿ ಉದ್ಗರಿಸಿದಳು
"ಸ್ವಾತಿ ನಿನ್ನನ್ನ ಏನ್ಮಾಡ್ತೀನಿ ಅಂತ ನೋಡು" ಅಮ್ಮ ಅಟ್ಟಿಸಿಕೊಂಡು ಬಂದರು ರೂಮಿಗೆ ಓಡಿ ಬಂದು ಬಾಗಿಲು ಹಾಕಿಕೊಂಡಳು . ಕೆನ್ನೆ ಕೆಂಪಗಾಗಿತ್ತು ಮದುವೆಯ ಮಾತಲ್ಲವೇ
ಅವಳು ಇನ್ನೇನು ಕೊಂಚ ದಿನಗಳಲ್ಲೇ ಮದುವೆ ಅಂತ ಅವಳಿಗೂ ಗೊತ್ತು. ಶಿವು ಅವಳಿಗೂ ಇಷ್ಟಾನೆ ಆದರೆ ಇಷ್ಟು ಬೇಗ ಮದುವೆ ಆಗೋಕೆ ಅವಳಿಗೂ ಇಷ್ಟ ಇಲ್ಲ ಆದರೆ ರೆಡ್ದಿ ಹೆಣ್ಣು ಮಕ್ಕಳಿಗೆ ಹದಿನೆಂಟು ಹತ್ತೊಂಬತ್ತು ತುಂಬ್ತಾ ಇದ್ದ ಹಾಗೆ ಮದುವೆ ಮಾಡಿಬಿಡುವ ಕಾರ್ಯಗಳೇ ಜಾಸ್ತಿ ಜೊತೆಗೆ ಅವರ ಬಿಸಿನೆಸ್ ಸಹಾ ಒಂದು ಥರಾ ಅಪಾಯಕಾರಿಯಾದ್ದರಿಂದ ವಯಸಿಗೆ ಬಂದ ಮಗಳು ಸೆರಗಲಿಟ್ಟ ಕೆಂಡ ಎಂಬ ಆತಂಕ.
ಸ್ವಾತಿ ಮುದ್ದು ಮುದ್ದು ಹುಡುಗಿ ಶಿವು ಸಹಾ ಸಾಫ್ಟವೇರ್ ಇಂಜಿನಿಯರ್. ಒಳ್ಳೆ ಕಂಪೆನಿಯಲ್ಲಿ ಕೆಲ್ಸಕ್ಕೆ ಇದ್ದ. ಇವಳನ್ನು ಕಂಡರೆ ಪ್ರಾಣ ಇವಳಿಗೂ ಅಷ್ಟೇ. ಮೊದಲಿಂದಲೂ ಅವನೇ ತನ್ನ ಜೋಡಿ ಎಂಬ ಅಭಿಮಾನ.
ಸ್ವಾತಿ ಕಾಲಲ್ಲಿ ಅದೃಷ್ಟವನ್ನೇ ಹೊತ್ತು ತಂದವಳು ಅವಳು ಹುಟ್ಟಿದ ಮೇಲೆಯೇ ಅವಳ ಅಪ್ಪನ ಹೊಲ ಗದ್ದೆಗಳು ಬಂಗಾರಕ್ಕಿಂತಲೂ ಹೆಚ್ಚು ಬೆಲೆಬಾಳ ತೊಡಗಿ ಹಣದ ಹೊಳೆಯನ್ನೇ ಹರಿಸಿದವು. ಹಾಗಾಗಿ ಸ್ವಾತಿ ಅವರ ಪಾಲಿಗೆ ಕೇವಲ ಮಗಳಾಗಿರಲಿಲ್ಲ ಅದೃಷ್ಟ ದೇವತೆ ಆಗಿದ್ದಳು.
ಕಂಪ್ಯೂಟರ್ ಆನ್ ಮಾಡಿ ಶಿವು ಜೊತೆ ಚಾಟ್ ಮಾಡುತ್ತಿದ್ದ ಸ್ವಾತಿ ಅವನ ಸಾಲುಗಳನ್ನು ನೋಡಿ ಕೆಂಪುಕೆಂಪಾಗಿ ನಾಚುತ್ತಿದ್ದಳು.
ಹಾಗೆ ಕಿಟಕಿಯಿಂದ ನೋಡಿದವಳಿಗೆ ಶಾಕ್ ಪೋಲಿಸ್ ಕಾನ್ಸ್ಟೇಬಲ್ ಜೊತೆ ಅಪ್ಪ ಹೋಗುತ್ತಿದ್ದಾರೆ ಎಲ್ಲಿ ಏನಾಯ್ತೋ ಎಂಭ ಭಯದಿಂದ ಹೊರಗೆ ಓಡಿದಳು
ಅಪ್ಪ ಮಾತ್ರ ನಗುತ್ತಾ ಹೊರಟಿದ್ದರು ಜೊತೆಗೆ ಅಮ್ಮನೂ ಹೊರಟಿದ್ದಳು "ಅಪ್ಪಾ ? ?"ಕೂಗಿದಳು. ಕೂಗಿನಲ್ಲಿ ಪ್ರಶ್ನೆ ಇತ್ತು "ಏನಿಲ್ಲಾ ಸ್ವಾತಿ ಸ್ಟೇಷನ್ನಲ್ಲಿ ಅದ್ಯಾರೋ ನಿಮ್ಮ ತಾಯಿಯ ಹೆಸರು ಹೇಳಿದಾಳಂತೆ ಅದ್ಯಾರು ಅಂತ ನೋಡಿಕೊಂಡು ಬರೋಣ ಅಂತ"
"ಅಪ್ಪಾ ನಾನೂ ಬರ್ತೀನಿ ಪ್ಲೀಸ್" ಒಮ್ಮೆ ಹೊರಗೆ ಹೋದ
"ಸರಿ ಬರಲಿ ಬಿಡಿಸಾರ್ ಫ್ಯಾಮಿಲಿ ಟ್ರಿಪ್ ಆದಂಗೆ ಆಗುತ್ತೆ" ಪೇದೆ ಕಿಸಿದ "ಹೌದೌದು ನಿಮ್ಮ ಸ್ಟೇಷನ್ ದೊಡ್ಡ ತಾಜ್ ಮಹಲ್ ನಡ್ಯೋ ಮುಂದೆ ನೋಡ್ಕೊಂಡು"ಸ್ವಾತಿಯ ಅಪ್ಪ ಗದರಿದರು ಅವರ ದರ್ಪವೇ ಅಂತಹದ್ದು. ಎಲ್ಲರೂ ಕಾರನ್ನೇರಿದರು ಕಾರ್ ಪೋಲಿಸ್ ಸ್ಟೇಷನ್ನ ಮುಂದೆ ನಿಂತಿತು ಹೊರಗಡೆಯೇ ನಿಂತಿದ್ದ ಎಸ್ ಐ ಸ್ವಾಗತಿಸಿದ "ಬನ್ನಿ ಸಾರ್ . ಅದು ಈ ಹೆಂಗಸು ನಮಗೆ ಲೇಡಿ ಕರ್ಜನ್ ಹಾಸ್ಪಿಟಲ್ ಬಳಿ ಸಿಕ್ಕಳು. ಮಕ್ಕಳ ಕಳ್ಳಿ ಇವಳು" ಸ್ವಾತಿಯ ಅಪ್ಪ "ನಮ್ಮ ಮನೇಲಿ ಯಾವ ಮಕ್ಕಳೂ ಕಳೆದು ಹೋಗಿಲ್ಲ . ನಮ್ಮನ್ಯಾಕೆ ಕರೆಸಿದ್ರಿ?" ಅವರ ಧ್ವನಿಯಲ್ಲಿ ಬೇಸರ ಇತ್ತು "ಸಾರಿ ಸಾರ್ ನೀವೊಂದು ಸಲ ಆಕೆ ಹತ್ರ ಮಾತಾಡಿ ನಾನ್ಯಾಕೆ ಕರೆಸಿದೆ ಅಂತ ಗೊತ್ತಾಗುತ್ತೆ . ನಿಮ್ಮ ಮಗಳು ಇಲ್ಲೆ ಇರಲಿ" ಎಸ್ ಐ ಹೇಳಿದ ಸ್ವಾತಿ ಕೆರಳಿದಳು "ನಾನ್ಯಾಕೆ ಇಲ್ಲೆ ಇರಬೇಕು ನಾನೂ ಆ ಹೆಂಗಸನ್ನ ನೋಡಬೇಕು ನಾನ ನೂವ್ ಚೆಪ್ ನಾನಾ"ಒಮ್ಮೊಮೆ ತೆಲಗು ಬೇಡವೆಂದರೂ ನಾಲಿಗೆಗೂ ಬಂದುಬಿಡುತ್ತಿತ್ತು "ಬರಲಿ ಬಿಡ್ರಿ. ಅವಳೇನು ಬೇರೆಯವಳಾ?" ಸ್ವಾತಿಯ ಅಪ್ಪ "ಸಾರ್ ಆದರೆ ಇದು....." ಎಸ್ ಐ ತಡವರಿಸಿದ "ನೀನು ಬಾ ಸ್ವಾತಿ " ಅವನ ಮಾತನ್ನು ಗಮನಿಸದೆ ಅಪ್ಪ ಮುಂದುವರೆದರು ಸ್ವಾತಿ ಅವರನ್ನು ಹಿಂಬಾಲಿಸಿದಳು
ಶೆಲ್ನ ಒಳಗೆ ಆ ಹೆಣ್ಣು ಕೊತಿದ್ದಳು. ತಲೆ ತಗ್ಗಿಸಿದ್ದರಿಂದ ಮುಖ ಕಾಣಿಸಲಿಲ್ಲ. ಅವಳ ಕೈ ಮೇಲೆ ಬಾಸುಂಡಿಗಳು ಪೋಲಿಸರ ಆತಿಥ್ಯ ತಿಂದುದಕ್ಕೆ ಸಾಕ್ಷಿಯಾಗಿತ್ತು.
"ಏಯ್ ನೋಡು . ನೀನು ಹೇಳಿದ ಹಂಗೆ ಪಾರ್ವತಮ್ಮ ಬಂದಿದಾರೆ . ಬೊಗಳು. " ಪಕ್ಕದಲ್ಲೆ ನಿಂತಿದ್ದ ಲೇಡಿ ಕಾನ್ಸ್ಟೇಬಲ್ ಗದರಿದಳು.
ಆಕೆ ತಲೆ ಎತ್ತಿದಳು ಪಾರ್ವತಮ್ಮ ಅಂದರೆ ಸ್ವಾತಿಯ ಅಮ್ಮನಿಗೆ ಅವಳ ಗುರುತು ಹತ್ತಲಿಲ್ಲ.
ತುಂಬಾ ವಯಸಾಗಿತ್ತು. ಆ ಹೆಂಗಸಿಗೆ. ಕಣ್ಣುಗಳ ಸುತ್ತಾ ಕಪ್ಪು ವರ್ತುಲಗಳು.
"ಯಾರು? ನಾನು ನಿಂಗೆ ಗೊತ್ತಿದ್ದೀನಾ?" ಪಾರ್ವತಮ್ಮನ ದ್ವನಿಯಲ್ಲಿ ಅವರಿಗೆ ಗೊತ್ತಿಲ್ಲದ ಹಾಗೆ ನಡುಕ ಉಂಟಾಗಿತ್ತು ಆಕೆ ಎದ್ದು ನಿಂತಳು
" ನಾನ್ಯಾರು ಅಂತ ನಿಮಗೆ ನೆನಪಿರಬಹುದು. ನಾನು ನಿಮ್ಮ ಹೆರಿಗೆ ಮಾಡಿದವಳು" ಆಕೆ ಒಂದೊಂದಾಗಿ ಪದಗಳನ್ನು ಕಷ್ಟ ಪಟ್ಟು ಉರುಳಿಸಿದಳು. ಪಾರ್ವತಮ್ಮನಿಗೆ ಮಿಂಚು ಬಂದಂತಾಯ್ತು
ಆಗ ಹದಿನೆಂಟು ವರ್ಶ್ಹಗಳ ಮುಂಚೆ ಆಗಿನ್ನೂ ಅವರಿದ್ದ ಊರು ಕಾಡಿನಂತಿತ್ತು. ಸಿರಿವಂತಿಕೆಯೂ ಇರಲಿಲ್ಲ ತಾಯಿ ತಂದೆ ಇಬ್ಬರನ್ನೂ ಕಳೆದುಕೊಂಡಿದ್ದ ಪಾರ್ವತಿಗೆ ಗಂಡನ ಅಮ್ಮ ಅಂದರೆ ಅವಳ ಅಜ್ಜಿ ಮಾತ್ರ ಇದ್ದರು. ಅವರಿಗೂ ವಯಸಾಗಿತ್ತು. ಆಗ ಪಾರ್ವತಿಯ ಗಂಡ ಕ್ರಿಷ್ಣಾರೆಡ್ಡಿ ಮಹಾ ಕುಡುಕ. ಒಮ್ಮೆ ಹೊರಗೆ ಹೋದರೆ ಮತ್ತೆ ಬರುವುದು ಎಂದೋ. ಅಂತಹ ಒಂದು ದಿನದಲ್ಲೇ ತುಂಬು ಗರ್ಭಿಣಿಯಾಗಿದ್ದ ಪಾರ್ವತಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಅಲ್ಲಿಂದ ಸಿಟಿಗೆ ಬರಬೇಕಾಗಿತ್ತು. ಹೇಗೋ ಪಕ್ಕದ ಮನೆಯಲ್ಲಿದ್ದ ಆಟೋಗೆ ಹೇಳಿ ಅದರಲ್ಲಿ ಬರುತ್ತಿದ್ದಂತೆ ನೋವು ಹೆಚ್ಚಾಗತೊಡಗಿತು. ಅವಳ ಹೆರಿಗೆ ಈಗಲೆ ಆಗಬಹುದೆಂದು ಅನಿಸಿ ದಾರಿಯಲ್ಲಿ ಗೊತ್ತಿದ್ದ ಮನೆಯೊಂದರ ಬಾಗಿಲು ಬಡಿದರು.
ಆ ಮನೆಯ ಹೆಂಗಸು ಮರಿಯಮ್ಮ ಒಬ್ಬ ಸೂಲಗಿತ್ತಿಯಾದ ಕಾರಣ ಒಂದು ಘಂಟೆಯಲ್ಲಿ ಸುಸ್ಸೂತ್ರವಾಗಿ ಹೆರಿಗೆ ಮುಗಿಸಿದ್ದಳು. ಆದರೆ ಪಾರ್ವತಿಗೆ ಎಚ್ಚರವಾಗುವ ವೇಳೆಗೆ ಆ ಹೆಂಗಸು ಇರಲಿಲ್ಲ.ದೇವರೆ ಅವಳ ರೂಪದಲ್ಲಿ ಬಂದು ತನ್ನ ಹೆರಿಗೆ ಮಾಡಿಸಿದ್ದಾರೆಂದು ಧನ್ಯಳಾಗಿದ್ದಳು ಪಾರ್ವತಿ. ಆಗ ಹುಟ್ಟಿದವಳೇ ಸ್ವಾತಿ. ಆ ಹೆಂಗಸು ಇವಳೇ ಇರಬಹುದೆ ಎಂದನಿಸಿತು ಪಾರ್ವತಮ್ಮನಿಗೆ ನೆನಪು ಮಾಡಿಕೊಂಡು ಕೇಳಿದರು "ನೀನು ಮರಿಯಮ್ಮ ಅಲ್ವಾ?"
"ಹೌದೆನ್ನುವಂತೆ ತಲೆ ಆಡಿಸಿದಳು
"ಅಯ್ಯೋ ದೇವರಂಗ್ ಬಂದು ನನ್ನ ಪ್ರಾಣ ಉಳಿಸಿದೆ ತಾಯಿ ನೀನು . ಎಲ್ಲ್ ಹೊರಟೋದೆ ನೀನು ಆಮೇಲೆ?" ಪಾರ್ವತಮ್ಮ ನುಡಿಯುತ್ತಿದ್ದಂತೆ ಆ ಹೆಣ್ಣಿನ ಮುಖದಲ್ಲಿ ಒಂದು ನಗೆ ಹಾದು ಹೋಯ್ತು.
"ಮೇಡಮ್ ಇವಳು ಎಂಥಾ ಕೆಲ್ಸ ಮಾಡಿದಾಳೆ ಅಂತಾ ಗೊತ್ತಿಲ್ಲಾ ನಿಮಗೆ " ಎಸ್ ಐ ಹೇಳುತ್ತಿದ್ದಂತೆ
"ಶ್" ಎಂದು ತಡೆದರು ಕ್ರಿಷ್ನಾರೆಡ್ಡಿ "ಅವಳು ಹೇಳಲಿ ಬಿಡಿ"
ಸ್ವಾತಿಯ ಹೃದಯ ಹೊಡೆದುಕೊಳ್ಳಲಾರಂಭಿಸಿತು. ಆಕೆ ಯಾವುದೋ ಭೂಕಂಪವನ್ನು ಸೃಷ್ಟಿಸಬಹುದು ಎಂದೇ ಅನಿಸತೊಡಗಿತು.
ನಿಟ್ಟ ನೋಟದಿಂದ ಮರಿಯಮ್ಮನನ್ನೆ ನೋಡಲಾರಂಭಿಸಿದರು ಎಲ್ಲರೂ "ಆವತ್ತು ನಿಮಗೆ ಹುಟ್ಟಿದ್ದು ಗಂಡುಮಗು"
ಆಕೆ ಬಾಯಿ ಬಿಟ್ಟಳು ನೋಟ ಮತ್ತೆಲ್ಲೋ ಇತ್ತು
ದೊಡ್ಡದೊಂದು ಬಾಂಬ್ ಹಾಕಿದಂತೆ ಎಲ್ಲರೂ ಸ್ತಬ್ದರಾದರು. ಕ್ಷಣಕಾಲ ಮೌನವಾವರಿಸಿತು. ಮರಿಯಮ್ಮ ಆಗಬಹುದಾದ ಪರಿಣಾಮಗಳನ್ನು ಊಹಿಸುತ್ತಾ ಹಿಂದೆ ಸರಿಯುತ್ತಿದ್ದಂತೆ
ಕೂಡಲೇ ಚೇತರಿಸಿಕೊಂಡ ಕ್ರಿಷ್ಣಾರೆಡ್ಡಿ "ಏಯ್ ಏನೆ ಬೊಗಳ್ತಿದ್ದೀಯಾ . ಇವತ್ತು ನಿನ್ನ ಗತಿ ನೆಟ್ಟಗಿಲ್ಲ ಅನ್ಸುತ್ತೆ ಅದಕ್ಕೆ ನನ್ನಕೈನಲ್ಲಿ ಸಿಕ್ಕಿಹಾಕೊಂಡಿದ್ದೀಯಾ ಸುಳ್ಳು, ಸುಳ್ಳ್ಯ್ ಹೇಳ್ತೀಯಾ ಸೀರೆ ಬಿಚ್ಚಿ ಹೊಡೀತೀನಿ ನಿಂಗೆ ನೋಡು ನಾನು .ರಂಡೆ " ಮರಿಯಮ್ಮನ ಕೂದಲನ್ನು ಹಿಡಿದು ಜಗ್ಗಿದರು.
ಆಕೆ ನೋವಿನಿಂದ ಚೀರಿದಳು "ಸಾರ್ ಪ್ಲೀಸ್ ಸಾರ್ ಬಿಟ್ಟು ಬಿಡಿ ಇದು ಸ್ಟೇಶನ್" ಎಸ್ ಐ ಬೇಡಿಕೊಂಡ.
ಕ್ರಿಷ್ಣಾರೆಡ್ಡಿಯ ಕೈ ಸಡಿಲವಾಯ್ತು ಸ್ವಾತಿಯ ಎದೆಯ ಕಂಪನ ಜೋರಾಗಿತ್ತು.ಇದು ಯಾರ ವಿಷಯ ಹೇಳುತ್ತಾ ಇದ್ದಾಳೆ. ಅರ್ಥವಾಗಲಿಲ್ಲ
ಪಾರ್ವತಿ ತೀರ ತೆಳ್ಳಗಿದನ ಸ್ವರದಲ್ಲಿ " ನಂಗೆ ಹುಟ್ಟಿದ್ದು ಈ ಹೆಣ್ಣು ಮಗೂನೆ .ಸುಳ್ಳಾಡಬೇಡ. "ಸ್ವಾತಿಯನ್ನ ತೋರಿಸಿ ನುಡಿದರು ಪಾರ್ವತಮ್ಮ.
"ಮೇಡಮ್ ಅವಳು ಹೇಳ್ತಿರೋದು ನಿಜಾ ಮೇಡಮ್ ಈ ನಿಜಾನಾ ನಾವೆ ಹೊರಡಿಸಿದಿವಿ ಅವಳ ಬಾಯಿಂದಾ" ಎಸ್ ಐ ಹೇಳಿದಾಗ ಎಲ್ಲರೂ ಅವನತ್ತ ನೋಡಿದರು. "ಇವಳ ಕೆಲ್ಸಾನೆ ಆಗ ತಾನೆ ಹುಟ್ಟಿದ ಮಗೂನ ಕದ್ದುಕೊಂಡು ಹೋಗಿ ಮಾರೋದು . ಇಲ್ಲೀ ತನಕ ಸುಮಾರು ಗಂಡು ಮಕ್ಕಳನ್ನು ಮಾರಿದ್ದಾಳೆ . ಹಾಗೆ ಮಾರ್ತಿದ್ದ ಹಾಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಳು. ಸಕ್ಕತಾಗಿ ಚಚ್ಚಿದ ಮೇಲೆ ಒಬ್ಬೊಬ್ಬರ ಹೆಸರನ್ನೇ ಹೇಳ್ತಿದ್ದಳು ಹಂಗೆ ನಿಮ್ಮ ಹೆಸರೂ ಹೇಳಿದಳು. ಅದಕ್ಕೆ ನಿಮ್ಮನ್ನ ಕರೆಸಿದ್ದು. "
ಸ್ವಾತಿಯ ಉಸಿರು ನಿಂತಂತಾಯ್ತು ಮಾತಾಡಲು ಬಾಯಿ ಬರಲಿಲ್ಲ
ಮರಿಯಮ್ಮ ಮುಂದುವರೆಸಿದಳು "ನಾನ್ಹೇಳ್ತಾ ಇರೋದು ಏಸು ಆಣೆಗೂ ನಿಜಾ. ಈ ಮಗು ನಿಮ್ಮ ಮಗು ಅಲ್ಲಾ. ನಿಮ್ಮ ಮಗು ಒಂದು ಗಂಡು ಮಗು . ಆ ಮಗು ಮುಖ ನೋಡಿದ್ರೆ ಗೊತ್ತಾಗುವುದಿಲ್ಲವಾ ನಿಮ್ಮ ಮಗಳು ಆಗೋಕೆ ಸಾಧ್ಯಾನಾ?" ಎಲ್ಲರೂ ಸ್ವಾತಿಯತ್ತ ನೋಡಿದರು. ಸ್ವಾತಿಗೆ ಏನು ಮಾಡುವುದೆಂದು ತೋಚಲಿಲ್ಲ. ಪೆಚ್ಚು ಪೆಚ್ಚಾಗಿ ನೋಡಿದಳು.
"ನೀನೇಳ್ತಾ ಇರೋದ್ ನಿಜ ಅಂದ್ರೂ ಮತ್ತೆ ಆ ಗಂಡು ಮಗೂ ಎಲ್ಲಿ " ಕ್ರಿಷ್ಣಾರೆಡ್ಡಿ ಕರ್ಕಶವಾಗಿ ಕೇಳಿದರು
ಉತ್ತರಕ್ಕಾಗಿ ಎಲ್ಲರೂ ಮರಿಯಮ್ಮನನ್ನು ನೋಡಿದರು.
ಅವಳು ತಲೆ ತಗ್ಗಿಸಿದಳು
"ಬೊಗಳೇ ಬೇಗ ನನ್ನ ಮಗೂನ ಏನ್ ಮಾಡ್ದೆ" ಪಾರ್ವತಮ್ಮ ಕಿರುಚಿದರು
ಸ್ವಾತಿ ಪಕ್ಕನೆ ತಾಯಿಯನ್ನು ನೋಡಿದಳು. ಅಮ್ಮನ ಕಣ್ಣಲ್ಲಿ ಕಾತುರತೆ.
ಇಲ್ಲಿಯವರೆಗೆ ತನ್ನ ಮಗಳು ಅಂತಿದ್ದ ಅಮ್ಮನಿಗೆ ತನ್ನ ಮಗನ ಬಗ್ಗೆ ತಿಳಿಯಲು ಎಷ್ಟು ಕುತೂಹಲ ತವಕ. ಆಗಲೆ ಮಗನ ಬಗ್ಗೆ ವ್ಯಾಮೋಹ ಬಂದಿತೇ ? ಇನ್ನು ತನ್ನ ಮೇಲಿಟ್ಟ ಪ್ರೀತಿ ಕೇವಲ ಸಂಬಂಧ ಮಾತ್ರದಿಂದಲೇ ಬಂದಿತೇ
ಹಾಗಿದ್ದಲ್ಲಿ ತಾನು ಯಾರು? ತನ್ನ ಅಪ್ಪ ಅಮ್ಮ ಯಾರು? ಇಲ್ಲಿಯವರೆಗೆ ತನ್ನ ಮನೆಯಲ್ಲದ ಮನೆಯಲ್ಲಿ ಬದುಕಿದೆನೇ ನಾನು? ತನ್ನ ಗಮ್ಯ ಯಾವುದು . ಇಲ್ಲಿಯವರೆಗಿನ ಅಪ್ಪ ಅಮ್ಮ ತನ್ನವರಲ್ಲ
ಮುಂದೇನು ಮಾಡುವುದು? ಅವಳ ತಲೆಯಲ್ಲಿ ಪ್ರಶ್ನೆಗಳು ತಾಂಡವವಾಡತೊಡಗಿದವು
ಎಳೆಯ ಮನಸು ಕಮರತೊಡಗಿತು.
ಭಾವನೆಗಳ ತಾಕಲಾಟ ತಾಳದಂತೆ ಅವಳ ತಲೆ ಸಿಡಿದುಹೋಗುವಂತಾಯ್ತು ಅಮ್ಮಾ ಎಂದು ತಲೆ ಹಿಡಿದವಳೇ ಕೆಳಗೆ ಕುಸಿದಳು
ಸ್ವಾತಿ ಎನ್ನುತ್ತಾ ಎಲ್ಲರೂ ಅವಳತ್ತ ಓಡಿದರು.
(ಮುಂದುವರೆಯುವುದು)
ಹೌದು ಸ್ವಾತಿಯ ಅಪ್ಪ ಕಪ್ಪು ಬಣ್ಣಕ್ಕೆ ಸಡ್ಡು ಹೊಡೆಯುವ ಬಣ್ಣ . ಅಮಾವಾಸ್ಯೆ ದಿನ ಅಪ್ಪ ಎಲ್ಲಿ ಕತ್ತಲೆಲ್ಲಿ ಎಂದು ಹುಡುಕಬೇಕಾದ ಪರಿಸ್ಥಿತಿ ಉಂಟಾಗುತ್ತದೆ
ಅವಳ ಅಮ್ಮನೇ ವಾಸಿ ಕೊಂಚ ಬೆಳ್ಳಗೆ ಇದ್ದಾರೆ. ಆದರೋ ಮೂಗೋ ಬಿ ಎಮ್ ಟಿ ಸಿ ಬಸ್ ಸೀದಾ ಬಂದು ಅಮ್ಮನ ಮೂಗಿನ ಮೇಲೆ ಹತ್ತಿ ಪಯಣಿಸಿತ್ತೇನೋ ಎಂಬಷ್ಟು ಸಪಾಟವಾಗಿದೆ. ತಕ್ಕಂತೆ ಪುಟ್ಟ ಪುಟ್ಟ ಕಣ್ಣುಗಳು. ನಾನೇ ಮುಂದೆ ಎಂದು ಬಾಗಿರುವ ಹಲ್ಲುಗಳು.
ಸ್ವಾತಿ ಸೌಂದರ್ಯಕ್ಕೆ ಮತ್ತೊಂದು ಪರ್ಯಾಯ ಹೆಸರು. ಹಾಗಾಗೇ ಮನೆಯಲ್ಲಿ ಅವಳು ತುಂಬಾ ಮುದ್ದು ಒಬ್ಬಳೇ ಮಗಳೆಂದು ಬಲು ಮುದ್ದಾಗಿ ಸಾಕಿದ್ದರು. ಶ್ರೀಮಂತ ಕುಟುಂಬಕ್ಕೆ ಸೇರಿದ ರೆಡ್ಡಿಗಳ ಮಗಳು . ಅಪ್ಪನ ದರ್ಪ ಅಮ್ಮನ ಜಂಭ ಧಾರಾಳವಾಗಿತ್ತು ಜೊತೆಗೆ ತುಂಟತನ ಸಾಕು ಸಾಕೆನ್ನುವಷ್ಟು.ಕಾಲೇಜಿನಲ್ಲಿ ತುಂಟಿ ಎಂಬ ಹೆಸರಿನ ಜೊತೆಯೇ ಜಾಣೆ ಎಂಬ ಬಿರುದು ಇತ್ತು ಇನ್ನೂ puc ರಿಸಲ್ಟ್ ಬಂದಿರಲಿಲ್ಲ.
ಆದರೂ ಸ್ವಾತಿಗೆ ಯಾವ ಆತಂಕವೂ ಇರಲಿಲ್ಲ ಅವಳು ಪರೀಕ್ಶೆಯಲ್ಲಿ ಮೊದಲ ಸ್ಥಾನ ಬಿಟ್ಟು ಕೆಳಗಿಳಿದ್ದಿಲ್ಲ ಅಥವ ಹಾಗೇನಾದರೂ ಆದರೂ ಅವಳಿಗೇನೂ ನಷ್ಟವಿಲ್ಲ. ಅವಳು ಓದಿ ಸಂಪಾದಿಸಬೇಕಾದ್ದು ಏನು ಇರಲಿಲ್ಲ
ಬಸ್ ಸ್ಟಾಪ್ ಬಂತು.ಬಸ್ ಇಂದ ಇಳಿಯುತ್ತಿದ್ದಂತೆ ಸುತ್ತಾ ಮುತ್ತಾ ಇದ್ದ ಕಣ್ಣುಗಳೆಲ್ಲಾ ಅವಳ ಮೇಲೆ ಹಾದವು . ಅವಳಿಗೂ ಗೊತ್ತು ಎಲ್ಲರೂ ಕಂಡಕ್ಟರ್ ಹಾಗು ಡ್ರೈವರ್ ಸೇರಿದಂತೆ ತನ್ನನ್ನೇ ನೋಡ್ತಾ ಇದ್ದಾರೆ ಅಂತ . ಅದೂ ಒಂಥರಾ ಪುಳಕವೇ
ಅವಳಿಗೆ ಅಮ್ಮ ಎಷ್ಟೋ ಸಲ ಹೇಳಿದ್ದಾರೆ "ಸ್ವಾತಿ ಸ್ಕೂಟಿ ಕಲಿತ್ಕೋ ಸುಮ್ನೆ ಬಸಲ್ಲಿ ಎಲ್ಲಾ ಜನರ ಕಣ್ಣು ಬೀಳುತ್ತೆ. " ಅಂತಾ ಅಪ್ಪಾ ಅಂತೂ ಒಂದು ಹೆಜ್ಜೆ ಮುಂದೆ "ಸ್ವಾತಿ ನೀನು ಕಾರಲ್ಲೇ ಹೋಗಿ ಬಾ "ಅಂತಾರೆ
ಆದರೂ ಅವಳಿಗೆ ಬಸ್ಸಲ್ಲೇ ಓಡಾಡೋ ಆಸೆ. ಸುತ್ತಾ ಇರೋ ಜನರನ್ನ ನೋಡೋ ಆಸೆ. ಅವರ ಕಣ್ಣಲ್ಲಿ ಏನಿದೆ ಅಂತ ತಿಳಿಯೋ ಆಸೆ. ಹಿಂದೆ ಬೀಳೋ ಪುಂಡರನ್ನ ಸಾಕು ಎನಿಸುವಷ್ಟು ಗೋಳು ಹಾಕಿಕೊಳ್ಳೋ ಆಸೆ. ಹಾಗೆ ಹಿಂದೆ ಬಿದ್ದ ಹುಡುಗರು ಅಪ್ಪನ ಕೋಪಕ್ಕೆ ಸಿಕ್ಕಿ ಕೈ ಕಾಲು ಮುರಿಸಿಕೊಂಡು ಇವಳನ್ನು ನೋಡಿದರೆ ಸಾಕು ದೂರದಿಂದಲೇ ಕೈ ಮುಗಿದು ಓಡಿ ಹೋಗುವುದನ್ನು ನೋಡಿ ನಗುವ ಆಸೆ
ಬಸ್ ಸ್ಟಾಪ್ ಪೂರ್ತಿ ಜನಗಳು ಇನ್ನೇನು ಯಾವ ಬಸ್ಸೂ ಬರೋದಿಲ್ವೇನೋ ಅನ್ನೊ ಹಾಗೆ ಜನ ಕುರಿ ಮಂದೆ ಥರಾ ನುಗ್ತಾ ಇದ್ದಾರೆ. ಆ ಬಸ್ ಡ್ರೈವರ್ರೋ ಇಡಿ ಜನರನ್ನೇ ತಾನೆ ಹೊತ್ತುಕೊಂಡು ಹೋಗ್ತೀನೇನೋ ಅನ್ನೋಹಾಗೆ ಬೈತಾ ಇದ್ದಾನೆ.
ಎಷ್ಟೆ ಮುಂದುವರೆದ್ರೂ ಈ ಕಂಡಕ್ಟರ್ಸ್ಗೆ ಮತ್ತೆ ಡ್ರೈವರ್ಸ್ಗೆ ಸಾಫ್ಟ್ ಸ್ಕಿಲ್ಸ್ ಹೇಳಿಕೊಡದಿದ್ದರೆ ಬಿ ಎಮ್ ಟಿಸಿ ಬಸ್ಸಾ ಅನ್ನೋ ರಾಗ ತಪ್ಪಲ್ಲ.
ನಗುತ್ತಾ ಮನೆಯತ್ತ ನಡೆದಳು ಭವ್ಯ ಬಂಗಲೆ ಅದು . ಗೇಟ್ ತೆರೆದು ಒಳಗೆ ಹೋಗುತ್ತಿದ್ದಂತೆ
"ಸ್ವಾತಿ ಇಲ್ಲಿ ಬಾ " ಅಪ್ಪ್ಪ ಸ್ವಿಮ್ಮಿಂಗ್ ಪೂಲ್ ಬಳಿಯಲ್ಲೇ ಕೂತಿದ್ದರು . ಹೋಗಿ ಕೂತಳು . ಇಲ್ಲಿ ಕೂತು ಮಾಡುವುದೇನು ? ಅತ್ತಿತ್ತ ನೋಡತೊಡಗಿದಳು. ಅಪ್ಪ ಅವಳನ್ನ ಕರೆದದ್ದನ್ನೇ ಮರೆತವರಂತೆ ಕಿವಿಗೆ ಮೊಬೈಲ್ ಅಂಟಿಸಿಕೊಂಡಿದ್ದರು.
ಜೋರು ದ್ವನಿಯಲ್ಲಿ ಮಾತು ನಡೆಯುತ್ತಿತ್ತು
"ಲೋ ಲೋಫರ್ ಏನೋ ಮಾಡ್ತಾ ಇದ್ಯಾ ಮೊದಲು ಅವನ್ ಮನೆ ಹೊಡುಕೋ . ಎಲ್ಲಿ ಸತ್ ಬಿದ್ದಿದಾನೆ . ಹಂಗೆ ಅವನ್ ಮನೇಲಿ ಯಾರ್ಯಾರಿದ್ದಾರೆ ಅಂತ ಡೀಟೇಲ್ಸ್ ತಗೋ. ಕಕ್ಕ್ಸಿಬಿಡ್ತೀನಿ. ಈ ಕ್ರಿಷ್ಣಾರೆಡ್ಡಿ ಅಂದ್ರೆ ಉಚ್ಚೊಯ್ಕೋಬೇಕು ಹಂಗ್ ಮಾಡ್ತೀನಿ" ಇದು ಸಾಮಾನ್ಯ ಮಾತುಕತೆ
ಸ್ವಾತಿಯ ಅಪ್ಪ ಫೈನಾಂಶಿಯರ್. ಜೊತೆಗೆ ಪೇಪರ್ ಏಜೆಂಟ್, ಕೇಬಲ್ ಲಾಬಿ. ರಿಯಲ್ ಎಸ್ಟೇಟ್ ಏಜೆಂಟ್. ರಿಂಗ್ ರಸ್ತೆಯಲ್ಲಿರೋ ಚೌಲ್ಟ್ರಿಯಲ್ಲಿ ನಾಲ್ಕು ಇವರದೇ. ಇವರಿರೋ ಊರಲ್ಲಿ ಅರ್ಧ ಭಾಗ ಇವರದ್ದೇ , ಆಸಾಮಿ ಕೈಗೆ ಕಾಲಿಗೆ ಕುತ್ತಿಗೆಗೆ ಅಂತ ಸುಮಾರು ಎರೆಡು ಕೇಜಿ ಚಿನ್ನ ಹಾಕಿಕೊಳ್ಳುತ್ತಿದ್ದ.
ಫೋನ್ ಕಿವಿಯಿಂದ ಕೆಳಗೆ ಬಂತು
ಅವರ ಮಾತು ನಿಲ್ಲುವುದೇ ಕಾಯುತ್ತಿದ್ದಳು "ಏನಪ್ಪ ?"
"ಸ್ವಾತಿ ಯಾವಾಗ ರಿಸಲ್ಟ್?" ಮತ್ತದೇ ಪ್ರಶ್ನೆ ಇದೇ ಪ್ರಶ್ನೆ ಪರೀಕ್ಷೆ ಆದಾಗಿನಿಂದ ಕೇಳಿ ಕೇಳಿ ಸ್ವಾತಿಗೂ ಬೇಸರವಾಗಿತ್ತು
"ಒಂದು ಸಾವಿರ ಸಲ ಕೇಳ್ತಾ ಇದ್ದೀಯಾಪ್ಪ ಬೇರೆ ಏನಾದರೂ ಕೇಳಪ್ಪ"
ಬೇಸರ ಮಾಡಿಕೊಂಡೇ ಉತ್ತರಿಸಿದಳು
"ಸಾರಿ ಸ್ವಾತಿ ಮುಂದಿನ ತಿಂಗಳಲ್ವೇ. ಸರಿಯಾಗಿ ಇಪ್ಪತ್ತು ದಿನಗಳಾದ ಮೇಲಲ್ಲವೇ?"
"ಹೂ ಹೌದು . ಏನ್ಮಾಡಬೇಕಂತ ಇದ್ದೀಯಾ" ಪೇಪರ್ ಓದ್ತಾನೇ ಕೇಳಿದರು . ಅವರಿಗೆ ಮಗಳನ್ನು ಓದಿಸಿ ಡಾಕ್ಟರ್ ಮಾಡಬೇಕಂತಿತ್ತು. ಆದರೆ ಅವಳೋ ಆರ್ಟ್ಸ್ ಬ್ರಾಂಚ್ ತೆಗೆದುಕೊಂಡಿದ್ದಳು. ಸ್ವಾತಿ ಏನು ಹೇಳಿಯಾಳು.
ಅತ್ತಿತ್ತ ನೋಡಿ "ಒಳಗೆ ಹೋಗಿ ಕಾಫಿ ಕುಡೀಬೇಕಂತ ಅನ್ಕೊಂಡಿದ್ದೇನೆ " ಹೇಳಿ ಒಳಗೋಡಿದಳು ಕ್ರಿಷ್ಣಾ ರೆಡ್ಡಿ ಬೆಪ್ಪಾಗಿ ನಗುತ್ತಾ ಸುಮ್ಮನಾದರು
ಅವಳು ರೂಮೊಳೊಗೆ ಹೋದ ತಕ್ಷಣ ಅಮ್ಮ " ಎಲ್ಲಾದರೂ ಹೊರಗಡೆ ಹೋಗಿ ಬಂದ ಮೇಲೆ ಕಾಲು ತೊಳ್ಕೋ ಅಂದ್ರೂ ಕೇಳಲ್ಲ ಯಾವ್ಯಾವ ಜನರು ಏನೇನು ಮಾಡ್ರಿರ್ತಾರೋ ." ಗೊಣಗುತ್ತಿದ್ದರು
ಪಾರ್ವತಮ್ಮ ಜನ ತಮಗೆ ಮಾಟ ಮಂತ್ರ ಮಾಡಿಸಿರುತ್ತಾರೆ ಎಂಬ ಭಯ ಅವಳ ಅಪ್ಪನಿಗೆ ಎಲ್ಲಿ ಯಾರ್ ಯಾವತ್ತು ಮಚ್ಚು ಲಾಂಗ್ ಹಿಡ್ಕೊಂಡು ಬರ್ತಾರೋ ಅಂತ ಭಯ. ಇಲ್ಲದೇ ಏನು ಅಂಥಾ ಪಾಪಗಳನ್ನು ಮಾಡಿರೋರು ಅವರು ಮನುಷ್ಯರನ್ನು ಕೊಚ್ಚುವುದು ಅವರಿಗೊಂದು ಥರಾ ಆಟವಾಗಿತ್ತು. ಇಡೀ ಊರಿಗೆ ರೌಡಿಯ ರೀತಿ ಅವರು .
ರೂಮಿನ ಕಿಟಕಿ ಇಂದ ಅಪ್ಪಾ ಫೋನಲ್ಲಿ ಮಾತಾಡ್ತ್ತಿದ್ದುದು ಕೇಳಿಸ್ತಿತ್ತು "ಏಯ್ ಆ ** ಮಗನಿಗೆ ಏನ್ ರೋಗಾಂತೆ ಇವತ್ತು ಸಂಜೆ ಒಳಗೆ ಅಸಲು ಬಡ್ದಿ ಸಮೇತ ದುಡ್ಡುಕೊಡ್ಲಿಲ್ಲಾಂದ್ರೆ ಅವನ ಹೆಂಡ್ತೀನ ಬಾಂಬೆಗೆ ಮಾರ್ಬಿಡ್ತೀನಂತ ಹೇಳು . ಏನ್ಕಂದ್ಕೊಂಡಿದಾನೆ ************" ಅಪ್ಪನ ಬಾಯಿಂದ ಕೆಟ್ಟ ಮಾತುಗಳೇ . ಕೇಳೋಕಾಗಲ್ಲಾ ಒಂದೆರೆಡು ಸಲಾ ಅಪ್ಪನ್ನ ಬೈದಿದ್ದಳು
ಅದಕ್ಕೆ ಅವರು "ನೋಡು ಸ್ವಾತಿ ಹಿಂಗೆಲ್ಲಾ ಬೈದೆ ಹೋದ್ರೆ ನನ್ನ ದುಡ್ಡು ವಾಪಾಸ್ ಬರೋಲ್ಲಾ. ಹೀಗೆಲ್ಲಾ ಇಲ್ದೆ ಹೋದ್ರೆ ನಮ್ಮ ಹಣಾ ಸ್ಮಶಾನಕ್ಕೋದ ಹೆಣ ಅಂತನ್ಕೊಂಡು ಸುಮ್ನಾಗಬೇಕಷ್ಟೆ"
"ಸ್ವಾತಿ ಬೋಂಡ ತಿಂತೀಯಂತೆ ಬಾರೆ" ಅಮ್ಮಾ ಒಳಗಿಂದ ಕೂಗಿದರು ಮುಖ ತೊಳೆದುಕೊಂಡು ಅಡಿಗೆ ಮನೆಗೆ ಹೋದಳು. ಬೋಂಡಾ ಸಿದ್ದವಾಗಿತ್ತು. ಮೆಲ್ಲತೊಡಗಿದಳು "ಸ್ವಾತಿ ಮುಂದಿನ ತಿಂಗಳಿಗೆ ನಿಂಗೆ ಹದಿನೆಂಟು ತುಂಬುತ್ತೆ" ಅಮ್ಮಾ ಬೋಂಡಾ ಕರಿಯುತ್ತಾ ಹೇಳಿದರು
"ಮುಂದಿನವರ್ಷ ಅದೇ ತಿಂಗಳಿಗೆ ಹತ್ತೊಂಬತ್ತೂ ತುಂಬುತ್ತೆ . ಮತ್ತೆ ಅದರ ಮುಂದಿನ ವರ್ಷ್ಗ ಇಪ್ಪತ್ತೂ ತುಂಬುತ್ತೆ." ಮಾತು ಮುಂದುವರಿಸಿದಳು ಕೀಟಲೆಯಿಂದ
"ಲೇ ತರ್ಲೇ ನಾನ್ ಹೇಳ್ತಾ ಇರೋದು ಕೇಳಿಸಿಕೋ. ಶೀಲತ್ತೆ ಫೋನ್ ಮಾಡಿದ್ರು ಯಾವಾಗ ನಮ್ಹುಡುಗೀನ ಮನೆಗೆ ಕಳ್ಸ್ತೀರಾ ಅಂತಾ ."
"ಕಳಿಸಿಬಿಡು ಯಾಕೆ ಅವರ ಹುಡುಗೀನ ಇಟ್ಕೊಂಡಿದೀಯಾ" ಗೊತ್ತು ಅವಳೇನು ಹೇಳ್ತಾ ಇದಾಳಂತ ಆದರೂ ಬಾಯೊಳಗಿದ್ದ ಬೋಂಡಾ ಜೊತೆಗೆ ಮಾತಾಡಿದಳು
"ಸ್ವಾತಿ ತುಂಬಾ ತರಲೆ ಆಗ್ತಾ ಇದೀಯಾ. ಮದುವೆ ಯಾವಾಗ ಇಟ್ಕೊಳೋಣ ಅಂತಾ ಕೇಳ್ತಾ ಇದ್ದಾರೆ" "ಅಯ್ಯೋ ಶೀಲತ್ತೆಗೆ ಮತ್ತೆ ಮದುವೇನಾ ಮತ್ತೆ ಶ್ರೀದ್ಜರ ಮಾವನ ಗತಿ" ಸ್ವಾತಿ ಉದ್ಗರಿಸಿದಳು
"ಸ್ವಾತಿ ನಿನ್ನನ್ನ ಏನ್ಮಾಡ್ತೀನಿ ಅಂತ ನೋಡು" ಅಮ್ಮ ಅಟ್ಟಿಸಿಕೊಂಡು ಬಂದರು ರೂಮಿಗೆ ಓಡಿ ಬಂದು ಬಾಗಿಲು ಹಾಕಿಕೊಂಡಳು . ಕೆನ್ನೆ ಕೆಂಪಗಾಗಿತ್ತು ಮದುವೆಯ ಮಾತಲ್ಲವೇ
ಅವಳು ಇನ್ನೇನು ಕೊಂಚ ದಿನಗಳಲ್ಲೇ ಮದುವೆ ಅಂತ ಅವಳಿಗೂ ಗೊತ್ತು. ಶಿವು ಅವಳಿಗೂ ಇಷ್ಟಾನೆ ಆದರೆ ಇಷ್ಟು ಬೇಗ ಮದುವೆ ಆಗೋಕೆ ಅವಳಿಗೂ ಇಷ್ಟ ಇಲ್ಲ ಆದರೆ ರೆಡ್ದಿ ಹೆಣ್ಣು ಮಕ್ಕಳಿಗೆ ಹದಿನೆಂಟು ಹತ್ತೊಂಬತ್ತು ತುಂಬ್ತಾ ಇದ್ದ ಹಾಗೆ ಮದುವೆ ಮಾಡಿಬಿಡುವ ಕಾರ್ಯಗಳೇ ಜಾಸ್ತಿ ಜೊತೆಗೆ ಅವರ ಬಿಸಿನೆಸ್ ಸಹಾ ಒಂದು ಥರಾ ಅಪಾಯಕಾರಿಯಾದ್ದರಿಂದ ವಯಸಿಗೆ ಬಂದ ಮಗಳು ಸೆರಗಲಿಟ್ಟ ಕೆಂಡ ಎಂಬ ಆತಂಕ.
ಸ್ವಾತಿ ಮುದ್ದು ಮುದ್ದು ಹುಡುಗಿ ಶಿವು ಸಹಾ ಸಾಫ್ಟವೇರ್ ಇಂಜಿನಿಯರ್. ಒಳ್ಳೆ ಕಂಪೆನಿಯಲ್ಲಿ ಕೆಲ್ಸಕ್ಕೆ ಇದ್ದ. ಇವಳನ್ನು ಕಂಡರೆ ಪ್ರಾಣ ಇವಳಿಗೂ ಅಷ್ಟೇ. ಮೊದಲಿಂದಲೂ ಅವನೇ ತನ್ನ ಜೋಡಿ ಎಂಬ ಅಭಿಮಾನ.
ಸ್ವಾತಿ ಕಾಲಲ್ಲಿ ಅದೃಷ್ಟವನ್ನೇ ಹೊತ್ತು ತಂದವಳು ಅವಳು ಹುಟ್ಟಿದ ಮೇಲೆಯೇ ಅವಳ ಅಪ್ಪನ ಹೊಲ ಗದ್ದೆಗಳು ಬಂಗಾರಕ್ಕಿಂತಲೂ ಹೆಚ್ಚು ಬೆಲೆಬಾಳ ತೊಡಗಿ ಹಣದ ಹೊಳೆಯನ್ನೇ ಹರಿಸಿದವು. ಹಾಗಾಗಿ ಸ್ವಾತಿ ಅವರ ಪಾಲಿಗೆ ಕೇವಲ ಮಗಳಾಗಿರಲಿಲ್ಲ ಅದೃಷ್ಟ ದೇವತೆ ಆಗಿದ್ದಳು.
ಕಂಪ್ಯೂಟರ್ ಆನ್ ಮಾಡಿ ಶಿವು ಜೊತೆ ಚಾಟ್ ಮಾಡುತ್ತಿದ್ದ ಸ್ವಾತಿ ಅವನ ಸಾಲುಗಳನ್ನು ನೋಡಿ ಕೆಂಪುಕೆಂಪಾಗಿ ನಾಚುತ್ತಿದ್ದಳು.
ಹಾಗೆ ಕಿಟಕಿಯಿಂದ ನೋಡಿದವಳಿಗೆ ಶಾಕ್ ಪೋಲಿಸ್ ಕಾನ್ಸ್ಟೇಬಲ್ ಜೊತೆ ಅಪ್ಪ ಹೋಗುತ್ತಿದ್ದಾರೆ ಎಲ್ಲಿ ಏನಾಯ್ತೋ ಎಂಭ ಭಯದಿಂದ ಹೊರಗೆ ಓಡಿದಳು
ಅಪ್ಪ ಮಾತ್ರ ನಗುತ್ತಾ ಹೊರಟಿದ್ದರು ಜೊತೆಗೆ ಅಮ್ಮನೂ ಹೊರಟಿದ್ದಳು "ಅಪ್ಪಾ ? ?"ಕೂಗಿದಳು. ಕೂಗಿನಲ್ಲಿ ಪ್ರಶ್ನೆ ಇತ್ತು "ಏನಿಲ್ಲಾ ಸ್ವಾತಿ ಸ್ಟೇಷನ್ನಲ್ಲಿ ಅದ್ಯಾರೋ ನಿಮ್ಮ ತಾಯಿಯ ಹೆಸರು ಹೇಳಿದಾಳಂತೆ ಅದ್ಯಾರು ಅಂತ ನೋಡಿಕೊಂಡು ಬರೋಣ ಅಂತ"
"ಅಪ್ಪಾ ನಾನೂ ಬರ್ತೀನಿ ಪ್ಲೀಸ್" ಒಮ್ಮೆ ಹೊರಗೆ ಹೋದ
"ಸರಿ ಬರಲಿ ಬಿಡಿಸಾರ್ ಫ್ಯಾಮಿಲಿ ಟ್ರಿಪ್ ಆದಂಗೆ ಆಗುತ್ತೆ" ಪೇದೆ ಕಿಸಿದ "ಹೌದೌದು ನಿಮ್ಮ ಸ್ಟೇಷನ್ ದೊಡ್ಡ ತಾಜ್ ಮಹಲ್ ನಡ್ಯೋ ಮುಂದೆ ನೋಡ್ಕೊಂಡು"ಸ್ವಾತಿಯ ಅಪ್ಪ ಗದರಿದರು ಅವರ ದರ್ಪವೇ ಅಂತಹದ್ದು. ಎಲ್ಲರೂ ಕಾರನ್ನೇರಿದರು ಕಾರ್ ಪೋಲಿಸ್ ಸ್ಟೇಷನ್ನ ಮುಂದೆ ನಿಂತಿತು ಹೊರಗಡೆಯೇ ನಿಂತಿದ್ದ ಎಸ್ ಐ ಸ್ವಾಗತಿಸಿದ "ಬನ್ನಿ ಸಾರ್ . ಅದು ಈ ಹೆಂಗಸು ನಮಗೆ ಲೇಡಿ ಕರ್ಜನ್ ಹಾಸ್ಪಿಟಲ್ ಬಳಿ ಸಿಕ್ಕಳು. ಮಕ್ಕಳ ಕಳ್ಳಿ ಇವಳು" ಸ್ವಾತಿಯ ಅಪ್ಪ "ನಮ್ಮ ಮನೇಲಿ ಯಾವ ಮಕ್ಕಳೂ ಕಳೆದು ಹೋಗಿಲ್ಲ . ನಮ್ಮನ್ಯಾಕೆ ಕರೆಸಿದ್ರಿ?" ಅವರ ಧ್ವನಿಯಲ್ಲಿ ಬೇಸರ ಇತ್ತು "ಸಾರಿ ಸಾರ್ ನೀವೊಂದು ಸಲ ಆಕೆ ಹತ್ರ ಮಾತಾಡಿ ನಾನ್ಯಾಕೆ ಕರೆಸಿದೆ ಅಂತ ಗೊತ್ತಾಗುತ್ತೆ . ನಿಮ್ಮ ಮಗಳು ಇಲ್ಲೆ ಇರಲಿ" ಎಸ್ ಐ ಹೇಳಿದ ಸ್ವಾತಿ ಕೆರಳಿದಳು "ನಾನ್ಯಾಕೆ ಇಲ್ಲೆ ಇರಬೇಕು ನಾನೂ ಆ ಹೆಂಗಸನ್ನ ನೋಡಬೇಕು ನಾನ ನೂವ್ ಚೆಪ್ ನಾನಾ"ಒಮ್ಮೊಮೆ ತೆಲಗು ಬೇಡವೆಂದರೂ ನಾಲಿಗೆಗೂ ಬಂದುಬಿಡುತ್ತಿತ್ತು "ಬರಲಿ ಬಿಡ್ರಿ. ಅವಳೇನು ಬೇರೆಯವಳಾ?" ಸ್ವಾತಿಯ ಅಪ್ಪ "ಸಾರ್ ಆದರೆ ಇದು....." ಎಸ್ ಐ ತಡವರಿಸಿದ "ನೀನು ಬಾ ಸ್ವಾತಿ " ಅವನ ಮಾತನ್ನು ಗಮನಿಸದೆ ಅಪ್ಪ ಮುಂದುವರೆದರು ಸ್ವಾತಿ ಅವರನ್ನು ಹಿಂಬಾಲಿಸಿದಳು
ಶೆಲ್ನ ಒಳಗೆ ಆ ಹೆಣ್ಣು ಕೊತಿದ್ದಳು. ತಲೆ ತಗ್ಗಿಸಿದ್ದರಿಂದ ಮುಖ ಕಾಣಿಸಲಿಲ್ಲ. ಅವಳ ಕೈ ಮೇಲೆ ಬಾಸುಂಡಿಗಳು ಪೋಲಿಸರ ಆತಿಥ್ಯ ತಿಂದುದಕ್ಕೆ ಸಾಕ್ಷಿಯಾಗಿತ್ತು.
"ಏಯ್ ನೋಡು . ನೀನು ಹೇಳಿದ ಹಂಗೆ ಪಾರ್ವತಮ್ಮ ಬಂದಿದಾರೆ . ಬೊಗಳು. " ಪಕ್ಕದಲ್ಲೆ ನಿಂತಿದ್ದ ಲೇಡಿ ಕಾನ್ಸ್ಟೇಬಲ್ ಗದರಿದಳು.
ಆಕೆ ತಲೆ ಎತ್ತಿದಳು ಪಾರ್ವತಮ್ಮ ಅಂದರೆ ಸ್ವಾತಿಯ ಅಮ್ಮನಿಗೆ ಅವಳ ಗುರುತು ಹತ್ತಲಿಲ್ಲ.
ತುಂಬಾ ವಯಸಾಗಿತ್ತು. ಆ ಹೆಂಗಸಿಗೆ. ಕಣ್ಣುಗಳ ಸುತ್ತಾ ಕಪ್ಪು ವರ್ತುಲಗಳು.
"ಯಾರು? ನಾನು ನಿಂಗೆ ಗೊತ್ತಿದ್ದೀನಾ?" ಪಾರ್ವತಮ್ಮನ ದ್ವನಿಯಲ್ಲಿ ಅವರಿಗೆ ಗೊತ್ತಿಲ್ಲದ ಹಾಗೆ ನಡುಕ ಉಂಟಾಗಿತ್ತು ಆಕೆ ಎದ್ದು ನಿಂತಳು
" ನಾನ್ಯಾರು ಅಂತ ನಿಮಗೆ ನೆನಪಿರಬಹುದು. ನಾನು ನಿಮ್ಮ ಹೆರಿಗೆ ಮಾಡಿದವಳು" ಆಕೆ ಒಂದೊಂದಾಗಿ ಪದಗಳನ್ನು ಕಷ್ಟ ಪಟ್ಟು ಉರುಳಿಸಿದಳು. ಪಾರ್ವತಮ್ಮನಿಗೆ ಮಿಂಚು ಬಂದಂತಾಯ್ತು
ಆಗ ಹದಿನೆಂಟು ವರ್ಶ್ಹಗಳ ಮುಂಚೆ ಆಗಿನ್ನೂ ಅವರಿದ್ದ ಊರು ಕಾಡಿನಂತಿತ್ತು. ಸಿರಿವಂತಿಕೆಯೂ ಇರಲಿಲ್ಲ ತಾಯಿ ತಂದೆ ಇಬ್ಬರನ್ನೂ ಕಳೆದುಕೊಂಡಿದ್ದ ಪಾರ್ವತಿಗೆ ಗಂಡನ ಅಮ್ಮ ಅಂದರೆ ಅವಳ ಅಜ್ಜಿ ಮಾತ್ರ ಇದ್ದರು. ಅವರಿಗೂ ವಯಸಾಗಿತ್ತು. ಆಗ ಪಾರ್ವತಿಯ ಗಂಡ ಕ್ರಿಷ್ಣಾರೆಡ್ಡಿ ಮಹಾ ಕುಡುಕ. ಒಮ್ಮೆ ಹೊರಗೆ ಹೋದರೆ ಮತ್ತೆ ಬರುವುದು ಎಂದೋ. ಅಂತಹ ಒಂದು ದಿನದಲ್ಲೇ ತುಂಬು ಗರ್ಭಿಣಿಯಾಗಿದ್ದ ಪಾರ್ವತಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಅಲ್ಲಿಂದ ಸಿಟಿಗೆ ಬರಬೇಕಾಗಿತ್ತು. ಹೇಗೋ ಪಕ್ಕದ ಮನೆಯಲ್ಲಿದ್ದ ಆಟೋಗೆ ಹೇಳಿ ಅದರಲ್ಲಿ ಬರುತ್ತಿದ್ದಂತೆ ನೋವು ಹೆಚ್ಚಾಗತೊಡಗಿತು. ಅವಳ ಹೆರಿಗೆ ಈಗಲೆ ಆಗಬಹುದೆಂದು ಅನಿಸಿ ದಾರಿಯಲ್ಲಿ ಗೊತ್ತಿದ್ದ ಮನೆಯೊಂದರ ಬಾಗಿಲು ಬಡಿದರು.
ಆ ಮನೆಯ ಹೆಂಗಸು ಮರಿಯಮ್ಮ ಒಬ್ಬ ಸೂಲಗಿತ್ತಿಯಾದ ಕಾರಣ ಒಂದು ಘಂಟೆಯಲ್ಲಿ ಸುಸ್ಸೂತ್ರವಾಗಿ ಹೆರಿಗೆ ಮುಗಿಸಿದ್ದಳು. ಆದರೆ ಪಾರ್ವತಿಗೆ ಎಚ್ಚರವಾಗುವ ವೇಳೆಗೆ ಆ ಹೆಂಗಸು ಇರಲಿಲ್ಲ.ದೇವರೆ ಅವಳ ರೂಪದಲ್ಲಿ ಬಂದು ತನ್ನ ಹೆರಿಗೆ ಮಾಡಿಸಿದ್ದಾರೆಂದು ಧನ್ಯಳಾಗಿದ್ದಳು ಪಾರ್ವತಿ. ಆಗ ಹುಟ್ಟಿದವಳೇ ಸ್ವಾತಿ. ಆ ಹೆಂಗಸು ಇವಳೇ ಇರಬಹುದೆ ಎಂದನಿಸಿತು ಪಾರ್ವತಮ್ಮನಿಗೆ ನೆನಪು ಮಾಡಿಕೊಂಡು ಕೇಳಿದರು "ನೀನು ಮರಿಯಮ್ಮ ಅಲ್ವಾ?"
"ಹೌದೆನ್ನುವಂತೆ ತಲೆ ಆಡಿಸಿದಳು
"ಅಯ್ಯೋ ದೇವರಂಗ್ ಬಂದು ನನ್ನ ಪ್ರಾಣ ಉಳಿಸಿದೆ ತಾಯಿ ನೀನು . ಎಲ್ಲ್ ಹೊರಟೋದೆ ನೀನು ಆಮೇಲೆ?" ಪಾರ್ವತಮ್ಮ ನುಡಿಯುತ್ತಿದ್ದಂತೆ ಆ ಹೆಣ್ಣಿನ ಮುಖದಲ್ಲಿ ಒಂದು ನಗೆ ಹಾದು ಹೋಯ್ತು.
"ಮೇಡಮ್ ಇವಳು ಎಂಥಾ ಕೆಲ್ಸ ಮಾಡಿದಾಳೆ ಅಂತಾ ಗೊತ್ತಿಲ್ಲಾ ನಿಮಗೆ " ಎಸ್ ಐ ಹೇಳುತ್ತಿದ್ದಂತೆ
"ಶ್" ಎಂದು ತಡೆದರು ಕ್ರಿಷ್ನಾರೆಡ್ಡಿ "ಅವಳು ಹೇಳಲಿ ಬಿಡಿ"
ಸ್ವಾತಿಯ ಹೃದಯ ಹೊಡೆದುಕೊಳ್ಳಲಾರಂಭಿಸಿತು. ಆಕೆ ಯಾವುದೋ ಭೂಕಂಪವನ್ನು ಸೃಷ್ಟಿಸಬಹುದು ಎಂದೇ ಅನಿಸತೊಡಗಿತು.
ನಿಟ್ಟ ನೋಟದಿಂದ ಮರಿಯಮ್ಮನನ್ನೆ ನೋಡಲಾರಂಭಿಸಿದರು ಎಲ್ಲರೂ "ಆವತ್ತು ನಿಮಗೆ ಹುಟ್ಟಿದ್ದು ಗಂಡುಮಗು"
ಆಕೆ ಬಾಯಿ ಬಿಟ್ಟಳು ನೋಟ ಮತ್ತೆಲ್ಲೋ ಇತ್ತು
ದೊಡ್ಡದೊಂದು ಬಾಂಬ್ ಹಾಕಿದಂತೆ ಎಲ್ಲರೂ ಸ್ತಬ್ದರಾದರು. ಕ್ಷಣಕಾಲ ಮೌನವಾವರಿಸಿತು. ಮರಿಯಮ್ಮ ಆಗಬಹುದಾದ ಪರಿಣಾಮಗಳನ್ನು ಊಹಿಸುತ್ತಾ ಹಿಂದೆ ಸರಿಯುತ್ತಿದ್ದಂತೆ
ಕೂಡಲೇ ಚೇತರಿಸಿಕೊಂಡ ಕ್ರಿಷ್ಣಾರೆಡ್ಡಿ "ಏಯ್ ಏನೆ ಬೊಗಳ್ತಿದ್ದೀಯಾ . ಇವತ್ತು ನಿನ್ನ ಗತಿ ನೆಟ್ಟಗಿಲ್ಲ ಅನ್ಸುತ್ತೆ ಅದಕ್ಕೆ ನನ್ನಕೈನಲ್ಲಿ ಸಿಕ್ಕಿಹಾಕೊಂಡಿದ್ದೀಯಾ ಸುಳ್ಳು, ಸುಳ್ಳ್ಯ್ ಹೇಳ್ತೀಯಾ ಸೀರೆ ಬಿಚ್ಚಿ ಹೊಡೀತೀನಿ ನಿಂಗೆ ನೋಡು ನಾನು .ರಂಡೆ " ಮರಿಯಮ್ಮನ ಕೂದಲನ್ನು ಹಿಡಿದು ಜಗ್ಗಿದರು.
ಆಕೆ ನೋವಿನಿಂದ ಚೀರಿದಳು "ಸಾರ್ ಪ್ಲೀಸ್ ಸಾರ್ ಬಿಟ್ಟು ಬಿಡಿ ಇದು ಸ್ಟೇಶನ್" ಎಸ್ ಐ ಬೇಡಿಕೊಂಡ.
ಕ್ರಿಷ್ಣಾರೆಡ್ಡಿಯ ಕೈ ಸಡಿಲವಾಯ್ತು ಸ್ವಾತಿಯ ಎದೆಯ ಕಂಪನ ಜೋರಾಗಿತ್ತು.ಇದು ಯಾರ ವಿಷಯ ಹೇಳುತ್ತಾ ಇದ್ದಾಳೆ. ಅರ್ಥವಾಗಲಿಲ್ಲ
ಪಾರ್ವತಿ ತೀರ ತೆಳ್ಳಗಿದನ ಸ್ವರದಲ್ಲಿ " ನಂಗೆ ಹುಟ್ಟಿದ್ದು ಈ ಹೆಣ್ಣು ಮಗೂನೆ .ಸುಳ್ಳಾಡಬೇಡ. "ಸ್ವಾತಿಯನ್ನ ತೋರಿಸಿ ನುಡಿದರು ಪಾರ್ವತಮ್ಮ.
"ಮೇಡಮ್ ಅವಳು ಹೇಳ್ತಿರೋದು ನಿಜಾ ಮೇಡಮ್ ಈ ನಿಜಾನಾ ನಾವೆ ಹೊರಡಿಸಿದಿವಿ ಅವಳ ಬಾಯಿಂದಾ" ಎಸ್ ಐ ಹೇಳಿದಾಗ ಎಲ್ಲರೂ ಅವನತ್ತ ನೋಡಿದರು. "ಇವಳ ಕೆಲ್ಸಾನೆ ಆಗ ತಾನೆ ಹುಟ್ಟಿದ ಮಗೂನ ಕದ್ದುಕೊಂಡು ಹೋಗಿ ಮಾರೋದು . ಇಲ್ಲೀ ತನಕ ಸುಮಾರು ಗಂಡು ಮಕ್ಕಳನ್ನು ಮಾರಿದ್ದಾಳೆ . ಹಾಗೆ ಮಾರ್ತಿದ್ದ ಹಾಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಳು. ಸಕ್ಕತಾಗಿ ಚಚ್ಚಿದ ಮೇಲೆ ಒಬ್ಬೊಬ್ಬರ ಹೆಸರನ್ನೇ ಹೇಳ್ತಿದ್ದಳು ಹಂಗೆ ನಿಮ್ಮ ಹೆಸರೂ ಹೇಳಿದಳು. ಅದಕ್ಕೆ ನಿಮ್ಮನ್ನ ಕರೆಸಿದ್ದು. "
ಸ್ವಾತಿಯ ಉಸಿರು ನಿಂತಂತಾಯ್ತು ಮಾತಾಡಲು ಬಾಯಿ ಬರಲಿಲ್ಲ
ಮರಿಯಮ್ಮ ಮುಂದುವರೆಸಿದಳು "ನಾನ್ಹೇಳ್ತಾ ಇರೋದು ಏಸು ಆಣೆಗೂ ನಿಜಾ. ಈ ಮಗು ನಿಮ್ಮ ಮಗು ಅಲ್ಲಾ. ನಿಮ್ಮ ಮಗು ಒಂದು ಗಂಡು ಮಗು . ಆ ಮಗು ಮುಖ ನೋಡಿದ್ರೆ ಗೊತ್ತಾಗುವುದಿಲ್ಲವಾ ನಿಮ್ಮ ಮಗಳು ಆಗೋಕೆ ಸಾಧ್ಯಾನಾ?" ಎಲ್ಲರೂ ಸ್ವಾತಿಯತ್ತ ನೋಡಿದರು. ಸ್ವಾತಿಗೆ ಏನು ಮಾಡುವುದೆಂದು ತೋಚಲಿಲ್ಲ. ಪೆಚ್ಚು ಪೆಚ್ಚಾಗಿ ನೋಡಿದಳು.
"ನೀನೇಳ್ತಾ ಇರೋದ್ ನಿಜ ಅಂದ್ರೂ ಮತ್ತೆ ಆ ಗಂಡು ಮಗೂ ಎಲ್ಲಿ " ಕ್ರಿಷ್ಣಾರೆಡ್ಡಿ ಕರ್ಕಶವಾಗಿ ಕೇಳಿದರು
ಉತ್ತರಕ್ಕಾಗಿ ಎಲ್ಲರೂ ಮರಿಯಮ್ಮನನ್ನು ನೋಡಿದರು.
ಅವಳು ತಲೆ ತಗ್ಗಿಸಿದಳು
"ಬೊಗಳೇ ಬೇಗ ನನ್ನ ಮಗೂನ ಏನ್ ಮಾಡ್ದೆ" ಪಾರ್ವತಮ್ಮ ಕಿರುಚಿದರು
ಸ್ವಾತಿ ಪಕ್ಕನೆ ತಾಯಿಯನ್ನು ನೋಡಿದಳು. ಅಮ್ಮನ ಕಣ್ಣಲ್ಲಿ ಕಾತುರತೆ.
ಇಲ್ಲಿಯವರೆಗೆ ತನ್ನ ಮಗಳು ಅಂತಿದ್ದ ಅಮ್ಮನಿಗೆ ತನ್ನ ಮಗನ ಬಗ್ಗೆ ತಿಳಿಯಲು ಎಷ್ಟು ಕುತೂಹಲ ತವಕ. ಆಗಲೆ ಮಗನ ಬಗ್ಗೆ ವ್ಯಾಮೋಹ ಬಂದಿತೇ ? ಇನ್ನು ತನ್ನ ಮೇಲಿಟ್ಟ ಪ್ರೀತಿ ಕೇವಲ ಸಂಬಂಧ ಮಾತ್ರದಿಂದಲೇ ಬಂದಿತೇ
ಹಾಗಿದ್ದಲ್ಲಿ ತಾನು ಯಾರು? ತನ್ನ ಅಪ್ಪ ಅಮ್ಮ ಯಾರು? ಇಲ್ಲಿಯವರೆಗೆ ತನ್ನ ಮನೆಯಲ್ಲದ ಮನೆಯಲ್ಲಿ ಬದುಕಿದೆನೇ ನಾನು? ತನ್ನ ಗಮ್ಯ ಯಾವುದು . ಇಲ್ಲಿಯವರೆಗಿನ ಅಪ್ಪ ಅಮ್ಮ ತನ್ನವರಲ್ಲ
ಮುಂದೇನು ಮಾಡುವುದು? ಅವಳ ತಲೆಯಲ್ಲಿ ಪ್ರಶ್ನೆಗಳು ತಾಂಡವವಾಡತೊಡಗಿದವು
ಎಳೆಯ ಮನಸು ಕಮರತೊಡಗಿತು.
ಭಾವನೆಗಳ ತಾಕಲಾಟ ತಾಳದಂತೆ ಅವಳ ತಲೆ ಸಿಡಿದುಹೋಗುವಂತಾಯ್ತು ಅಮ್ಮಾ ಎಂದು ತಲೆ ಹಿಡಿದವಳೇ ಕೆಳಗೆ ಕುಸಿದಳು
ಸ್ವಾತಿ ಎನ್ನುತ್ತಾ ಎಲ್ಲರೂ ಅವಳತ್ತ ಓಡಿದರು.
(ಮುಂದುವರೆಯುವುದು)
Sunday, October 11, 2009
ವಯಸ್ಸಾದರೆ ನಾನೂ ಹೀಗೇನಾ
ಯಾಕೇಂತ ಗೊತ್ತಿಲ್ಲಾ ಮನಸು ತುಂಬಾ ನೊಂದುಕೊಳ್ಳುತ್ತೆ. ಅಮ್ಮಾ ನನ್ನ ಕೈ ಹಿಡಿದು ಬೆಳೆಸಿದ ಅಮ್ಮ ನಾನು ಬಿದ್ದರೆ ಅವಳ ಕಣ್ಣಲ್ಲಿ ನೀರು ನಾನು ನಕ್ಕರೆ ಅವಳ ಕಣ್ಣಲ್ಲಿ ಹೊಳಪು ಅಂತಹ ಅಮ್ಮಾ ನನ್ನಿಂದ ದೂರಾ ಆಗ್ತಿದಾಳಾ? ಅಥವಾ ನಾನೇ ದೂರಾ ನೂಕುತ್ತಿದ್ದೀನಾ? ನಾನ್ಯಾವ ರೀತೀಲಿ ಅವಳನ್ನ ನೋಯಿಸುತ್ತಿದ್ದೇನೆ? ಅವಳು ಹೇಳಿದ ಹಾಗೆ ಕೇಳ್ತಾ ಇಲ್ಲವಾ? ಅಥವ ನಾನು ಕೇಳಿದರೂ ಅವಳಿಗೆ ಹಿಡಿಸುತ್ತಿಲ್ಲವಾ? ಸಂಸಾರದ ದೊಂಬಿಯಲ್ಲಿ ನಾನೇ ಮರೆಯುತ್ತಿದ್ದೀನಾ ಅಥವಾ ನಾನು ಮರೆತಿದ್ದೇನೆ ಅಂತ ಅವಳೇ ಅಂದುಕೊಳ್ಳುತ್ತಿದ್ದಾಳಾ?ನಾನು ನಕ್ಕಾಗಲೆಲ್ಲಾ ಅವಳ ಕಣ್ಣಲ್ಲಿ ಕಾಣುತ್ತಿದ್ದ ಹರುಷ ಈಗೆಲ್ಲಿ. ಬಹುಷ ನನ್ನ ನಗೆಯಲ್ಲಿ ಪಾಲುದಾರರು ಹೆಚ್ದ್ಚಾದರೆಂದನಿಸಿತೇ?
ನಾನು ಅತ್ತಾಗಲೆಲ್ಲಾ ಅವಳ ಮೊಗದಲ್ಲಿ ಕಾಣುತ್ತಿದ್ದ ಆತಂಕವೆಲ್ಲಿ?. ಪ್ರಾಯಶ? ಕಣ್ಣೊರೆಸುವ ಕೈ ಹೆಚ್ಚದವೆಂದೆನಿಸಿತೇ?
ನನ್ನ ನೋಡಿದಾಗಲೆಲ್ಲಾ ಅರಳುತ್ತಿದ್ದ ಮೊಗವೆಲ್ಲಿ ? ನನ್ನ ಬರುವನ್ನು ಕಾಯುವ ಜೀವಗಳು ಬೇರಿದ್ದರೆನಿಸಿತೆ?
ಯಾಕೀ ಮ್ಲಾನವದನ ಅವಳಿಗೆ ನಾನ್ಯಾವತ್ತೂ ಅವಳು ಬೇರೊಬ್ಬಳೆಂದಂದುಕೊಳ್ಳಲ್ಲಿಲ್ಲ. ಸಿಡುಕು, ಕೋಪ ತಾಪ , ಹರುಷ ಮದುವೆಗೆ ಮುನ್ನವೂ ಇದ್ದವು ಈಗಲೂ ಇವೆ ಅದೇಕೆ ಅವಳಿಗೆ ಈಗಿನದು ಮಾತ್ರ ಎದ್ದು ಕಾಣುತ್ತಿದೆ. ಜೀವನದಲ್ಲಿ ನಾನು ನನ್ನಕ್ಕ ಪಯಣಿಗರಾಗಿದ್ದಾಗ ಅವಳೇ ನಾವಿಕಳಾಗಿದ್ದಳು ಸಂಸಾರದ ಹರಿಗೋಲನ್ನು ನೂಕಿ ನೂಕಿ ಅವಳಿಗೂ ಆಯಾಸವಾಗಿದೀಯೆಂದೆಣಿಸಿ ನಾನು ಹಿಡಿದದ್ದೇ ಅವಳಿಗೆ ಬೇಸರವಾಗಿದೆಯೇ? ಅಥವ ಅವಳೇ ಬೇರಾದಳೆಂದೆಣಿಸಿ ಮತ್ತೊಂದು ನೌಕೆಯಲ್ಲಿ ಬರುವ ಯೋಜನೆಯೇ?
ಇದೇಕೆ ಹೀಗೆ ಸಿಟ್ಟು ಸೆಡವು, ಸಿಡುಕು, ಅಸಹನೆ ಅಮ್ಮನಿಗೆ. ಮತ್ತೆ ಕೆಲವೊಮ್ಮೆ ಇದ್ದಕಿದ್ದಂತೆ ಅಳು . ಯಾಕೆ ಹೀಗೆ
ಬದುಕೆಲ್ಲಾ ಬರೀ ನೋವಿಂದ ಕೂಡಿದ್ದಾಗಲೂ ನಗುತ್ತಾ ನಮ್ಮನ್ನೂ ನಗಿಸುತ್ತಿದ್ದ ಅಮ್ಮ ಜೀವನದ ಮುಸ್ಸಂಜೆಯಲ್ಲಿ ಸಂತಸದ ಸುಖದ ಸರೋವರದಲ್ಲಿದ್ದಾಗಲೂ ನೋವಿಂದ ನರುಳುವುದೇಕೆ? ಅಥವಾ ಎಲ್ಲರಿಗೂ ಹೀಗೆಯೇ ಆಗುತ್ತದೆಯೇ?
ಜೀವನದ ಮುಸ್ಸಂಜೆಯಲ್ಲಿ ನಾನೂಹೀಗೆಯೇ ಆಡುತ್ತೇನಾ?
ನಾನು ಅತ್ತಾಗಲೆಲ್ಲಾ ಅವಳ ಮೊಗದಲ್ಲಿ ಕಾಣುತ್ತಿದ್ದ ಆತಂಕವೆಲ್ಲಿ?. ಪ್ರಾಯಶ? ಕಣ್ಣೊರೆಸುವ ಕೈ ಹೆಚ್ಚದವೆಂದೆನಿಸಿತೇ?
ನನ್ನ ನೋಡಿದಾಗಲೆಲ್ಲಾ ಅರಳುತ್ತಿದ್ದ ಮೊಗವೆಲ್ಲಿ ? ನನ್ನ ಬರುವನ್ನು ಕಾಯುವ ಜೀವಗಳು ಬೇರಿದ್ದರೆನಿಸಿತೆ?
ಯಾಕೀ ಮ್ಲಾನವದನ ಅವಳಿಗೆ ನಾನ್ಯಾವತ್ತೂ ಅವಳು ಬೇರೊಬ್ಬಳೆಂದಂದುಕೊಳ್ಳಲ್ಲಿಲ್ಲ. ಸಿಡುಕು, ಕೋಪ ತಾಪ , ಹರುಷ ಮದುವೆಗೆ ಮುನ್ನವೂ ಇದ್ದವು ಈಗಲೂ ಇವೆ ಅದೇಕೆ ಅವಳಿಗೆ ಈಗಿನದು ಮಾತ್ರ ಎದ್ದು ಕಾಣುತ್ತಿದೆ. ಜೀವನದಲ್ಲಿ ನಾನು ನನ್ನಕ್ಕ ಪಯಣಿಗರಾಗಿದ್ದಾಗ ಅವಳೇ ನಾವಿಕಳಾಗಿದ್ದಳು ಸಂಸಾರದ ಹರಿಗೋಲನ್ನು ನೂಕಿ ನೂಕಿ ಅವಳಿಗೂ ಆಯಾಸವಾಗಿದೀಯೆಂದೆಣಿಸಿ ನಾನು ಹಿಡಿದದ್ದೇ ಅವಳಿಗೆ ಬೇಸರವಾಗಿದೆಯೇ? ಅಥವ ಅವಳೇ ಬೇರಾದಳೆಂದೆಣಿಸಿ ಮತ್ತೊಂದು ನೌಕೆಯಲ್ಲಿ ಬರುವ ಯೋಜನೆಯೇ?
ಇದೇಕೆ ಹೀಗೆ ಸಿಟ್ಟು ಸೆಡವು, ಸಿಡುಕು, ಅಸಹನೆ ಅಮ್ಮನಿಗೆ. ಮತ್ತೆ ಕೆಲವೊಮ್ಮೆ ಇದ್ದಕಿದ್ದಂತೆ ಅಳು . ಯಾಕೆ ಹೀಗೆ
ಬದುಕೆಲ್ಲಾ ಬರೀ ನೋವಿಂದ ಕೂಡಿದ್ದಾಗಲೂ ನಗುತ್ತಾ ನಮ್ಮನ್ನೂ ನಗಿಸುತ್ತಿದ್ದ ಅಮ್ಮ ಜೀವನದ ಮುಸ್ಸಂಜೆಯಲ್ಲಿ ಸಂತಸದ ಸುಖದ ಸರೋವರದಲ್ಲಿದ್ದಾಗಲೂ ನೋವಿಂದ ನರುಳುವುದೇಕೆ? ಅಥವಾ ಎಲ್ಲರಿಗೂ ಹೀಗೆಯೇ ಆಗುತ್ತದೆಯೇ?
ಜೀವನದ ಮುಸ್ಸಂಜೆಯಲ್ಲಿ ನಾನೂಹೀಗೆಯೇ ಆಡುತ್ತೇನಾ?
Wednesday, October 7, 2009
ಎರೆಡು ದಡಗಳ ನಡುವೆ- ಕೊನೆಯ ಭಾಗ
ಬೆಳಗ್ಗೆಯೇ ಹೊರಡಬೇಕಿತ್ತು ಮನುವಿನ ಮನೆಗೆ . ಬೆಳಗ್ಗೆಯೇ ವಿಕಾಸ್ ಮನುವಿಗೆ ಫೋನ್ ಮಾಡಿದ್ದ . ಅಲ್ಲಿಂದ ಬಂದ ಪ್ರತಿಕ್ರಿಯೆ ಮುಖಕ್ಕೆ ಹೊಡೆಯುವಂತಿತ್ತು.ಬಂದು ಸಿರಿಯನ್ನು ಕರೆದುಕೊಂಡು ಹೋಗುವಂತೆ ಹೇಳಿದ್ದ ಮನು. ಆದರೂ ಇದನ್ನು ಶೈಲಾಗೆ ಹೇಳಿರಲಿಲ್ಲ.
ಅಸಲಿಗೆ ಶೈಲಾಗೆ ಸಿರಿಯನ್ನು ನೋಡುವ ಆಸೆ ಇತ್ತೇ ವಿನಹಾ ಅವಳನ್ನು ಮನೆಗೆ ಕರೆತರುವ ಯೋಚನೇ ಏನೂ ಇರಲಿಲ್ಲ. ಯಾವ ಮುಖ ಹೊತ್ತು ಹೋಗುವುದೆಂದು ಗಲಿಬಿಲಿಗೊಂಡಿದ್ದಳು. ಆದರೂ ಸಿರಿಯನ್ನು ನೋಡಲೇಬೇಕೆಂಬ ತುಡಿತದೊಂದಿಗೆ ಮನಸಲ್ಲಿ ಭಂಡ ಧೈರ್ಯ ಮಾಡಿಕೊಂಡಿದ್ದಳು. ವಿಕಾಸ್ನಿಗೆ ಮನುವಿನ ಬುದ್ದಿ ಗೊತ್ತಾಗಿದ್ದರಿಂದ ಅವನ ಆ ಮುಖ ಶೈಲಾಗೂ ತಿಳಿಯಲಿ ಎಂದೇ ಅವಳನ್ನು ಆ ಮನೆಗೆ ಕರೆದೊಯ್ಯುವ ಯೋಚನೆ ಮಾಡಿದ್ದ..
ಮನೆಗೆ ಬೀಗ ಜಡಿದು ಬೈಕ್ ಹತ್ತಿ ಸ್ಟಾರ್ಟ್ ಮಾಡಿದ, ಶೈಲಾ ಹಿಂದೆ ಅವಳ ಮನಸೆಲ್ಲಾ ಸಂಗೀತಾಳ ಪತ್ರವೇ ತುಂಬಿತ್ತು. ಅಲ್ಲಿಂದ ಮನುವಿನ ಮನೆ ದೂರವೇ . ಸುಮಾರು ಅರ್ದ್ಗಘಂಟೆಯ ಪ್ರಯಾಣ. ಇಬ್ಬರ ನಡುವೇಯೂ ಮಾತಿಗೆ ಸಾಮಾಗ್ರಿಗಳೇ ಇರಲಿಲ್ಲ. ಯೋಚನೆಗಳಲ್ಲಿ ಕಳೆದು ಹೋಗಿದ್ದೆ ಬಂತು.
ಮನೆ ಹತ್ತಿರ ಬರುತ್ತಿದ್ದಂತೆ ಶೈಲಾಗೆ ಹೃದಯ ಹೊಡೆದುಕೊಳ್ಳಲಾರಂಭಿಸಿತು. ಯಾವ ಮನೆ ತನ್ನದಾಗಿತ್ತೋ ಎಲ್ಲಿ ಆಟವಾಡಿ ಬೆಳೆದಳೋ ಅದೇ ಮನೆಗೆ ಈಗ ಅಪರಿಚಿತಳಾಗಿ ಹೋಗಿದ್ದಳು.
ಗೇಟ್ ಹೊರಗಡೇಯೇ ಬೈಕ್ ನಿಲ್ಲಿಸಿದ. ಶೈಲಾಳ ಕಾಲುಗಳು ಸೋತೇ ಹೋಗಿದ್ದವೇನೋ ಎಂಬಷ್ಟು ಸೋಮಾರಿಗಳಾಗಿದ್ದವು
ಭವ್ಯ ಬಂಗಲೆಯಂತಿದ್ದ ಮನೆ ಅದು.
ಗೇಟ್ ಕೀಪರ್ ಬದಲಾಗಿದ್ದ. ಯಾರೋ ಹೊಸಬ ಇವರನ್ನು ಗೇಟ್ ಒಳಗೆ ಬಿಡಲಿಲ್ಲ. ಕೇಳಿಕೊಂಡು ಬರುವುದಾಗಿ ಮೇಲೆ ಹೋದ
ಮನುವಿನ ನೆಚ್ಚಿನ ಕಾರ್ ಇನ್ನೂ ಅಲ್ಲೇ ಇತ್ತು ಮನು ಎಲ್ಲಿಗೂ ಹೋಗಿಲ್ಲ ಎಂಬುದನ್ನು ಸೂಚಿಸುತ್ತಾ. ಸುಮಾರು ಹತ್ತು ನಿಮಿಷ ಕಾದರೂ ಗೇಟ್ ಕೀಪರ್ ಬರಲೇ ಇಲ್ಲ . ಮುಚ್ಚಿದ ಗೇಟ್ ಹಾಗೆ ಇತ್ತು
ವಿಕಾಸ್ಗೆ ಗೊತ್ತಾಯ್ತು ತಮ್ಮನ್ನು ಅವಮಾನ ಗೊಳಿಸಲೆಂದೇ ಮನು ಹೀಗೆ ಮಾಡುತ್ತಿದ್ದಾನೆ.
"ರಾಸ್ಕೆಲ್" ಮನಸಲ್ಲಿ ಹೇಳಿಕೊಳ್ಳಬೇಕಾದ ಪದ ಬಾಯಿಗೆ ಬಂದು ಶೈಲಾ ಕಿವಿಯನ್ನು ಹೊಕ್ಕಿತು
"ಯಾರು?" ತೀಕ್ಷ್ಣವಾಗಿ ಪ್ರಶ್ನಿಸಿದಳು
"ಇನ್ಯಾರು . ಮನ್ವಂತರ್" ವಿಕಾಸ್ ಹಲ್ಲು ಕಚ್ಚಿ ನುಡಿದ
"ವಿಕಾಸ್ . ನಿನ್ನಾಲಿಗೆ ನಾಲಿಗೆ ಹಿಡಿತದಲ್ಲಿರಲಿ. ಅಂತೋರ ಬಗ್ಗೆ ಹೀಗೆಲ್ಲಾ ಮಾತಾಡಬೇಡ." ಎಚ್ಚರಿಕೆ ನೀಡಿದಳು
"ಅವನೆಂತೋನು ಅಂತ ನಿಂಗೆ ಗೊತ್ತಿಲ್ಲ ಶೈಲಾ . ಅವನು ಗೋಮುಖ ವ್ಯಾಘ್ರ. ಸಂಗೀತ ಹೇಳಿದ್ದೆಲ್ಲಾ ನಿಜ"
"ನಿಂಗೆ ಹೇಗೆ ಗೊತ್ತಾಯ್ತು?"
ವಿಕಾಸ್ ನೆನ್ನೆ ತಾನು ಮನುವನ್ನು ಭೇಟಿ ಮಾಡಿದ್ದ ಸಂಗತಿಯನ್ನು ಹೇಳಿದ .
"ಆದರೂ ನಾನಿದನ್ನ ನಂಬಲ್ಲಾ "ಶೈಲಾ ಆಕಾಶ ನೋಡುತ್ತಾ ನುಡಿದಳು
"ಅಂದ್ರೆ ನಾನು ಸುಳ್ಳು ಹೇಳ್ತೀನಿ ಅಂತಾನಾ?" ವಿಕಾಸ್ ಆಕ್ರೋಶಿತನಾದ
"ಅದು ನಂಗೆ ಗೊತ್ತಿಲ್ಲ.ಆದರೆ ಮನು ಮಾತ್ರ ಅಂತಹವರಲ್ಲ" ದೃಷ್ಟಿ ಆಕಾಶದತ್ತಲೇ ನೆಟ್ಟಿತ್ತು
ಅಷ್ಬ್ಟರಲ್ಲಿ ಅತ್ತೆಯೇ ಗೇಟಿನ ಬಳಿ ಬಂದರು
"ಅತ್ತೆ ". ಸಂಭ್ರಮದಿಂದ ನುಡಿದಳು
ಆದರೆ ಆ ಸಂಭ್ರಮ ಅವರ ಮೊಗದಲ್ಲಿ ಇರಲಿಲ್ಲ
"ಯಾವ ಬಾಯಿಂದ ಅತ್ತೆ ಅಂತ ಕರೀತೀಯಾ ನೀನು ನನ್ನನ್ನ . ಅಷ್ಟು ಚೆನ್ನಾಗಿ ನೋಡಿಕೊಂಡ ನಮ್ಮನ್ನ ಗಂಡನ್ನ ಮಗಳನ್ನು ಬಿಟ್ಟು ಈ ಮೂರು ಕಾಸಿನವನ ಜೊತೆ ಓಡಿ ಹೋದ್ಯಲ್ಲಾ ನಾಚಿಕೆ ಆಗಲ್ಲ್ವಾ ನಿಂಗೆ. ಮತ್ಯಾಕೆ ಇಲ್ಲಿಗೆ ಬಂದಿದ್ದಿಯಾ? "
ಅತ್ತೆಯ ಅಂತಹ ರೂಪವನ್ನು ಇಲ್ಲಿಯವರೆಗೆ ಕಂಡಿದ್ದಿಲ್ಲಾ ಶೈಲಾ. ಅದೂ ವಿಕಾಸನ ಬಗ್ಗೆ ಅವರ ಕಾಮೆಂಟ್ ಹಿಡಿಸಲಿಲ್ಲ.
ವಿಕಾಸ್ ತಗ್ಗಿಸಿದ ತಲೆ ಮೇಲೆತ್ತಲಿಲ್ಲ.
"ಅತ್ತೆ ........ಅದು.... ಸಿರಿ...ಯನ್ನು ನೋಡಬೇಕಿತ್ತು"
"ಮೊದಲು ಕರ್ಕೊಂಡು ಹೋಗು ಆ ಅನಿಷ್ಟಾನಾ. ನಂಗೂ ಸಾಕಾಗಿ ಹೋಗಿದೆ . ಇಲ್ಲಾಂದರೆ ಅನಾಥಾಶ್ರಮದಲ್ಲಿ ಬಿಟ್ಟು ಬರೋಣ ಅಂತ ಅಂದ್ಕೊಂಡಿದ್ವಿ"
ಶೈಲಾ ನಂಬಲಾರದವಳಂತೆ ಅತ್ತೆಯ ಮುಖವನ್ನು ನೋಡಿದಳು ಅವರ ಕಣ್ಣಲ್ಲಿ ದ್ವೇಷದ ಕಿಡಿ ಕಾಣುತ್ತಿತ್ತು.
ಅವಳು ಬೆಳೆದದ್ದು ಅವರ ಮಡಿಲಲ್ಲಿಯೇ ತಾಯಿಯನ್ನೇ ಅವರಲ್ಲಿ ಕಂಡವಳು . ಅಂಥವರು ಹೀಗೆ ಮಾಡುತ್ತಿದ್ದಾರಲ್ಲ.
ಅಷ್ಟರಲ್ಲಿ ಮನು ಮಗುವನ್ನು ಕರೆದುಕೊಂಡು ಬಂದ
"ತಗೊಳ್ಳಿ ನಿಮ್ಮಾಸ್ತೀನಾ . ಇನ್ಮೇಲೆ ನಮ್ಮ ಮನೆ ಹತ್ರಾ ಕಾಲಿಡಬೇಡಿ. ಶೈಲಾ ನಂಗೆ ಡೈವೋರ್ಸ್ ಬೇಕು ಮೊದಲು. ನಾನು ರಮ್ಯಾ ಅನ್ನೋ ಹುಡುಗೀನ ಮದುವೆ ಆಗ್ತಾ ಇದ್ದೇನೆ. "
ಶೈಲಾಳ ತಲೆಯಲ್ಲಿ ಸಾವಿರಾರು ಪರ್ವತಗಳು ಕುಸಿದು ಬಿದ್ದ ಅನುಭವವಾಯ್ತು.
ಅವಳ ಆದರ್ಶ ಮನು ಅವಳ ಮುಂದೆಯೇ ಕುಸಿದು ಬಿತ್ತು
"ಅಂದಹಾಗೆ ನಿನ್ನ ಆಸ್ತಿ ಅಂತ ಏನೂ ಇಲ್ಲ ಶೈಲಾ ನಿನ್ನ ಸಾಕಿದ್ದು ನಿನ್ನ ಬೇಕು ಬೇಡಗಳನ್ನೆಲ್ಲಾ ಗಮನಿಸಿದ್ದು. ಓದಿಸಿದ್ದು ಎಲ್ಲಾಕ್ಕೂ ಖರ್ಚಾಗಿದೆ. ಆಸ್ತಿ ,ಜೀವನಾಂಶ ಅಂತ ಏನು ಸಿಗಲ್ಲಾ"
"ಮನು ನಂಗೆ ಆಸ್ತಿ ಹೋಯ್ತಲ್ಲಾ ಅಂತ ಬೇಜಾರಿಲ್ಲ ಆದರೆ . ನಿಮ್ಮಲ್ಲಿದ್ದ ಒಳ್ಲೇ ಗುಣ ಮಾಯವಾಯ್ತಲ್ಲಾ ಅನ್ನೋ ಆಘಾತಾ ಮನಸನ್ನ ಘಾಸಿ ಮಾಡ್ತಿದೆ"
"ಒಳ್ಳೇಯವನಾ . ಯಾರು? ನಾನು . ಅದೆಲ್ಲಾ ನಾನು ಆಡಿದ ನಾಟಕ . ನೀನು ವಿಕಾಸನ್ನ ಹಿಂದೆ ಓಡಿ ಹೋಗಿರಲಿಲ್ಲಾ ಅಂದಿದ್ದ್ರೆ ನಾನೇ ನಿನ್ನನ್ನ ದೂರ ಮಾಡ್ತಿದ್ದೆ . ಅಲ್ಲಾ ಹೆಣ್ಣಾದ ನಿಂಗೆ ಹಳೇ ಗಂಡ ಬೋರಾಗಿದ್ದ್ರೆ ನಾನು ಗಂಡ್ಸು ನಂಗೆ ಇನ್ನೆಷ್ಟು ಬೋರಾಗಿರ್ಬೇಕು ಹೇಳು? ಅದಕ್ಕೆ ನಯವಾಗಿ ಉಪಾಯವಾಗಿ ನಿನ್ನನ್ನ ವಿಕಾಸ್ನ ಬಳಿ ಕಳಿಸಿದೆ. ಎಲ್ಲಾ ನನ್ನದೇ ನಾಟಕ " ಮೀಸೆ ತಿರುವಿದ
ಶೈಲಾಳ ಹೃದಯದಲ್ಲಿ ನೂರಾರು ಅಲೆಗಳು ಎದ್ದವು. ಜಿಗುಪ್ಸೆ ತಾನಾಗೆ ಹರಿದು ಬಂತು. ವಿಕಾಸ್ ಮನುವಿನ ಕೈನಲ್ಲಿದ್ದ ಸಿರಿಯನ್ನು ಕರೆದುಕೊಂಡು ಹೆಗಲಿಗೇರಿಸಿಕೊಂಡ.
"ಅಬ್ಬಾ ಕೊನೆಗೂ ಪೀಡೆ ಕಳೀತು" ಅತ್ತೆ ಸಂತೋಷದಿಂದ ಉದ್ಗರಿಸಿದರು.
ಶೈಲಾಳ ಮನ ನೊಂದಿತು. ತನ್ನ ಕುಡಿಯನ್ನು ಪೀಡೆ ಅನಿಷ್ಟ ಎನ್ನುತ್ತಿದ್ದಾರಲ್ಲ . ಆದರೂ ಏನೂ ಹೇಳಲೂ ಬಾಯಿ ಬರಲಿಲ್ಲ. ತಪ್ಪು ತನ್ನದೂ ಅಲ್ಲವೇ. ತನ್ನ ಮಗಳನ್ನು ತಾನು ನೋಡ್ಕೋಬೇಕು
"ಸರಿ ಶೈಲಾ ಡೈವೋರ್ಸ್ ಪೇಪರ್ ಇದೆ ಸೈನ್ ಮಾಡು ನಿಂಗೂ ಬಿಡುಗಡೆ ನಂಗೂ ಬಿಡುಗಡೆ. ಇದೊಂದೇ ಅಡೆತಡೆ ನನ್ನ ರಮ್ಯ ಮದುವೆಗೆ ಇರೋದು. ನಿಂಗೆ ಗೊತ್ತಾ ನಾನು ಇನ್ನಷ್ಟು ಕೋಟ್ಯಾಧೀಶ ಆಗಬಲ್ಲೆ" ಗೆಲುವಿನ ನಗೆ ಬೀರುತ್ತಾ ಅವಳತ್ತ ಡೈವೋರ್ಸ್ ಪೇಪರ್ ಚಾಚಿದ.
ಅವನಂದಂತೆ ಸೈನ್ ಮಾಡಿ ಕೊಟ್ಟಳು.
"ಮನು ಇಷ್ಟು ದಿನಾ ನಿಮಗೇನೋ ಅಪರಾಧ ಮಾಡಿದ್ದೀನಿ ಅಂತಾ ಒದ್ದಾಡ್ತಿದ್ದೆ. ವಿಕಾಸ್ಗೂ ನೋವನ್ನು ಕೊಟ್ಟೆ ಆದರೆ ಇವತ್ತಿಂದ ನನ್ನ ಮನಸು ತಿಳಿಯಾಗಿದೆ. ನಾನು ತಪ್ಪೇನು ಮಾಡಿಲ್ಲ. ನಿಮಗೆ ಮೋಸ ಮಾಡಿಲ್ಲ. ಮೋಸ ಹೋಗಿದ್ದು ನಾನು . ನಿಮ್ಮನ್ನ ದೇವರಂತೆ ಭಾವಿಸಿದ್ದೆ. ಆದರೆ ನನ್ನ ನಂಬಿಕೇನೆಲ್ಲಾ ಬುಡಮೇಲು ಗೊಳಿಸಿದ್ರಿ ನೀವು.ನಿಮಗೂ ನಿಮ್ಮ ತಾಯಿಗೂ ಈ ಮನೆಗೂ ದೊಡ್ಡ ನಮಸ್ಕಾರ. ಇನ್ಮೇಲೆ ನೀವು ಕನಸಲ್ಲೂ ಕೂಡ ಬರೋದಿಲ್ಲ . "
ಆವೇಶ ಭರಿತಳಾಗಿ ಮಾತಾಡಿ ಬೈಕನ್ನೇರಿದಳು ಅದನ್ನೇ ಕಾಯುತ್ತಿದ್ದಂತೆ ವಿಕಾಸ್ ಗಾಡಿ ಶುರು ಮಾಡಿದ .ಮುಂದೆ ಕುಳಿತಿದ್ದ ಸಿರಿ ಕೈ ಬೀಸಿದಳು ಮನುವಿಗೆ ಹಾಗು ಅಜ್ಜಿಗೆ. ಬೈಕ್ ರೋಯ್ ಅಂದು ಮುಂದೆ ಹೋಯ್ತು. ವಿಕಾಸನನ್ನು ಹಿತವಾಗಿ ಅಪ್ಪಿದ ಶೈಲಾ. ತನ್ನ ಮುಂದಿನ ಭವಿಷ್ಯಕ್ಕಾಗಿ ಕನಸು ಕಾಣಲೆಂದು ವಿಕಾಸನ್ ಬೆನ್ನಿಗೊರಗಿದಳು. ಡೈವೋರ್ಸ್ ಸಿಕ್ಕ ಮೇಲೆ ವಿಕಾಸನನ್ನು ಮದುವೆಯಾಗುವ ಸುಂದರ ಕನಸು .
ಬೈಕ್ ಮರೆಯಾಗುತ್ತಿದ್ದಂತೆ ಮನುವಿನ ತಾಯಿಯ ದುಖ: ಕಟ್ಟೆಯೊಡೆದಿತ್ತು. ಹಾಗೆ ಕೆಳಗೆ ಕುಸಿದರು.
"ಮನು ಅವಳು ಹೊರಟು ಹೋದಳಲ್ಲಾ . ಮನೆಗೆ ಬಂದವಳನ್ನ ಬಾಯಿಗೆ ಬಂದ ಹಾಗೆ ಅಂದು ಬಿಟ್ಟೆ. ನಾನು ಆ ಮಗೂಗೆ ಅನಿಷ್ಟ ಪೀಡೆ ಅಂತೆಲ್ಲಾ ಅಂದನಲ್ಲ " ರೋಧಿಸಿದರು.
ಮನು ತಾಯಿಯನ್ನು ಸಮಾಧಾನಿಸಿದ
"ಅಮ್ಮಾ ನಾವು ಹೀಗೆ ಮಾಡಿರಲಿಲ್ಲಾ ಅಂದಿದ್ರೆ ನಮ್ಮ ಶೈಲಾ ಯಾವತ್ತಿಗೂ ಸುಖವಾಗಿರ್ತಿರಲಿಲ್ಲ. ನಾನು ಅವಳ ಪಾಲಿಗೆ ದೇವರಾಗಿದ್ದೆ ದೇವರಿಗೆ ಮೋಸ ಮಾಡಿದೆ ಎಂಬ ಚಿಂತೆ ಅವಳನ್ನ ಎಡ ಬಿಡದೆ ಕಾಡ್ತಿತ್ತು. ಅದೇ ಥರಾ ವಿಕಾಸ್ ಕೂಡ ನನ್ನಂಥವನಿಗೆ ಮೋಸ ಮಾಡಿದೆ ಅನ್ನೋದು ಅವನಿಗೆ ಚುಚ್ಚುತ್ತಿತ್ತು. ಇಬ್ಬರೂ ಮಾನಸಿಕವಾಗಿ ತುಂಬಾ ಕೊರಗ್ತಿದ್ದರು. ವಿಕಾಸ್ ಇದೇ ಚಿಂತೇಲಿ ಆಫೀಸಲ್ಲಿ ಕೆಲಸ ಸರಿಯಾಗಿ ಮಾಡ್ತಾ ಇರಲಿಲ್ಲ ಅಂತ ಅವರ ಮ್ಯಾನೇಜರ್ ಹೇಳಿದ್ರು. ಹಾಗೆ ಶೈಲಾ ಸಹಾ ಪ್ರತಿ ತಿಂಗಳಿಗೂ ಹುಷಾರು ತಪ್ಪಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಳು. ಇದಕ್ಕೆಲ್ಲಾ ನಾನೆ ಒಂದು ಅಂತ್ಯ ಹಾಡಬೇಕಿತ್ತು. ಅವರಿಬ್ಬರ ದೃಷ್ಟಿಯಲ್ಲಿ ನಾನು ಕೆಟ್ಟವನಾಗಬೇಕಿತ್ತು. ಅದಕ್ಕೆ ಎಲ್ಲಾ ತಯಾರಿ ಮಾಡಿಕೊಂಡೆ ಈ ನಾಟಕ ಆಡಿದ್ದು ಅಮ್ಮ. ಮೊದಲು ಸಂಗೀತಾಗೆ ಈ ವಿಷ್ಯ ಹೇಳಿ ಅವಳಿಂದ ಶೈಲಾಗೆ ಒಂದು ಮೇಲ್ ಕಳಿಸೋಕೆ ಹೇಳಿದೆ. ಹಾಗೆ ವಿಕಾಸನನ್ನ ಭೇಟಿ ಮಾಡಿ ಅವನ ಬಳಿ ಕೆಟ್ಟದಾಗಿ ನಡೆದುಕೊಂಡೆ. ಈಗ ನೋಡು ಇಬ್ಬರೂ ನೆಮ್ಮದಿಯಿಂದಿರ್ತಾರೆ. ನಂಗೆ ಅಷ್ಟು ಸಾಕು"
"ಅವರು ನೆಮ್ಮದಿ ಇಂದ ಇರ್ತಾರೆ ಆದರೆ ನೀನು? ಸಿರೀನೂ ಕಳಿಸಿ ನೀನು ಹೇಗಿರ್ತೀಯಾ. ಬೇರೆ ಮದುವೆ ಮಾಡಿಕೊ ಮನು "ತಾಯಿಯ ಕರುಳು ನೊಂದು ಕೇಳಿತು
"ಅಮ್ಮಾ ನಾನಾಗ್ಲೇ ಹೇಳಿದ್ದೀನಿ . ನಾನು ಶೈಲಾನ ಬಿಟ್ಟು ಬೇರೆ ಯಾವ ಹೆಣ್ಣನ್ನೂ ಹೆಂಡತಿಯಾಗಿ ಕಾಣೋಕೆ ಸಾಧ್ಯ ಇಲ್ಲಾಂತ. ಅವಳ ನೆನಪುಗಳೇ ಸಾಕು ಬದುಕೋಕೆ" ನಿಟ್ಟುಸಿರಿಟ್ಟು ಒಳಗೆ ಹೋದ ಆ ಉದಾತ್ತ ವ್ಯಕ್ತಿ ತನ್ನ ಮಗ ಎಂಬುದನ್ನು ನೆನೆಸಿಕೊಂಡು ಹೆಮ್ಮೆ ಪಟ್ಟುಕೊಳ್ಳುವ ಸಂತಸವಷ್ಟೇ ಉಳಿಯಿತು ಮನುವಿನ ತಾಯಿಯ ಪಾಲಿಗೆ
ಅಸಲಿಗೆ ಶೈಲಾಗೆ ಸಿರಿಯನ್ನು ನೋಡುವ ಆಸೆ ಇತ್ತೇ ವಿನಹಾ ಅವಳನ್ನು ಮನೆಗೆ ಕರೆತರುವ ಯೋಚನೇ ಏನೂ ಇರಲಿಲ್ಲ. ಯಾವ ಮುಖ ಹೊತ್ತು ಹೋಗುವುದೆಂದು ಗಲಿಬಿಲಿಗೊಂಡಿದ್ದಳು. ಆದರೂ ಸಿರಿಯನ್ನು ನೋಡಲೇಬೇಕೆಂಬ ತುಡಿತದೊಂದಿಗೆ ಮನಸಲ್ಲಿ ಭಂಡ ಧೈರ್ಯ ಮಾಡಿಕೊಂಡಿದ್ದಳು. ವಿಕಾಸ್ನಿಗೆ ಮನುವಿನ ಬುದ್ದಿ ಗೊತ್ತಾಗಿದ್ದರಿಂದ ಅವನ ಆ ಮುಖ ಶೈಲಾಗೂ ತಿಳಿಯಲಿ ಎಂದೇ ಅವಳನ್ನು ಆ ಮನೆಗೆ ಕರೆದೊಯ್ಯುವ ಯೋಚನೆ ಮಾಡಿದ್ದ..
ಮನೆಗೆ ಬೀಗ ಜಡಿದು ಬೈಕ್ ಹತ್ತಿ ಸ್ಟಾರ್ಟ್ ಮಾಡಿದ, ಶೈಲಾ ಹಿಂದೆ ಅವಳ ಮನಸೆಲ್ಲಾ ಸಂಗೀತಾಳ ಪತ್ರವೇ ತುಂಬಿತ್ತು. ಅಲ್ಲಿಂದ ಮನುವಿನ ಮನೆ ದೂರವೇ . ಸುಮಾರು ಅರ್ದ್ಗಘಂಟೆಯ ಪ್ರಯಾಣ. ಇಬ್ಬರ ನಡುವೇಯೂ ಮಾತಿಗೆ ಸಾಮಾಗ್ರಿಗಳೇ ಇರಲಿಲ್ಲ. ಯೋಚನೆಗಳಲ್ಲಿ ಕಳೆದು ಹೋಗಿದ್ದೆ ಬಂತು.
ಮನೆ ಹತ್ತಿರ ಬರುತ್ತಿದ್ದಂತೆ ಶೈಲಾಗೆ ಹೃದಯ ಹೊಡೆದುಕೊಳ್ಳಲಾರಂಭಿಸಿತು. ಯಾವ ಮನೆ ತನ್ನದಾಗಿತ್ತೋ ಎಲ್ಲಿ ಆಟವಾಡಿ ಬೆಳೆದಳೋ ಅದೇ ಮನೆಗೆ ಈಗ ಅಪರಿಚಿತಳಾಗಿ ಹೋಗಿದ್ದಳು.
ಗೇಟ್ ಹೊರಗಡೇಯೇ ಬೈಕ್ ನಿಲ್ಲಿಸಿದ. ಶೈಲಾಳ ಕಾಲುಗಳು ಸೋತೇ ಹೋಗಿದ್ದವೇನೋ ಎಂಬಷ್ಟು ಸೋಮಾರಿಗಳಾಗಿದ್ದವು
ಭವ್ಯ ಬಂಗಲೆಯಂತಿದ್ದ ಮನೆ ಅದು.
ಗೇಟ್ ಕೀಪರ್ ಬದಲಾಗಿದ್ದ. ಯಾರೋ ಹೊಸಬ ಇವರನ್ನು ಗೇಟ್ ಒಳಗೆ ಬಿಡಲಿಲ್ಲ. ಕೇಳಿಕೊಂಡು ಬರುವುದಾಗಿ ಮೇಲೆ ಹೋದ
ಮನುವಿನ ನೆಚ್ಚಿನ ಕಾರ್ ಇನ್ನೂ ಅಲ್ಲೇ ಇತ್ತು ಮನು ಎಲ್ಲಿಗೂ ಹೋಗಿಲ್ಲ ಎಂಬುದನ್ನು ಸೂಚಿಸುತ್ತಾ. ಸುಮಾರು ಹತ್ತು ನಿಮಿಷ ಕಾದರೂ ಗೇಟ್ ಕೀಪರ್ ಬರಲೇ ಇಲ್ಲ . ಮುಚ್ಚಿದ ಗೇಟ್ ಹಾಗೆ ಇತ್ತು
ವಿಕಾಸ್ಗೆ ಗೊತ್ತಾಯ್ತು ತಮ್ಮನ್ನು ಅವಮಾನ ಗೊಳಿಸಲೆಂದೇ ಮನು ಹೀಗೆ ಮಾಡುತ್ತಿದ್ದಾನೆ.
"ರಾಸ್ಕೆಲ್" ಮನಸಲ್ಲಿ ಹೇಳಿಕೊಳ್ಳಬೇಕಾದ ಪದ ಬಾಯಿಗೆ ಬಂದು ಶೈಲಾ ಕಿವಿಯನ್ನು ಹೊಕ್ಕಿತು
"ಯಾರು?" ತೀಕ್ಷ್ಣವಾಗಿ ಪ್ರಶ್ನಿಸಿದಳು
"ಇನ್ಯಾರು . ಮನ್ವಂತರ್" ವಿಕಾಸ್ ಹಲ್ಲು ಕಚ್ಚಿ ನುಡಿದ
"ವಿಕಾಸ್ . ನಿನ್ನಾಲಿಗೆ ನಾಲಿಗೆ ಹಿಡಿತದಲ್ಲಿರಲಿ. ಅಂತೋರ ಬಗ್ಗೆ ಹೀಗೆಲ್ಲಾ ಮಾತಾಡಬೇಡ." ಎಚ್ಚರಿಕೆ ನೀಡಿದಳು
"ಅವನೆಂತೋನು ಅಂತ ನಿಂಗೆ ಗೊತ್ತಿಲ್ಲ ಶೈಲಾ . ಅವನು ಗೋಮುಖ ವ್ಯಾಘ್ರ. ಸಂಗೀತ ಹೇಳಿದ್ದೆಲ್ಲಾ ನಿಜ"
"ನಿಂಗೆ ಹೇಗೆ ಗೊತ್ತಾಯ್ತು?"
ವಿಕಾಸ್ ನೆನ್ನೆ ತಾನು ಮನುವನ್ನು ಭೇಟಿ ಮಾಡಿದ್ದ ಸಂಗತಿಯನ್ನು ಹೇಳಿದ .
"ಆದರೂ ನಾನಿದನ್ನ ನಂಬಲ್ಲಾ "ಶೈಲಾ ಆಕಾಶ ನೋಡುತ್ತಾ ನುಡಿದಳು
"ಅಂದ್ರೆ ನಾನು ಸುಳ್ಳು ಹೇಳ್ತೀನಿ ಅಂತಾನಾ?" ವಿಕಾಸ್ ಆಕ್ರೋಶಿತನಾದ
"ಅದು ನಂಗೆ ಗೊತ್ತಿಲ್ಲ.ಆದರೆ ಮನು ಮಾತ್ರ ಅಂತಹವರಲ್ಲ" ದೃಷ್ಟಿ ಆಕಾಶದತ್ತಲೇ ನೆಟ್ಟಿತ್ತು
ಅಷ್ಬ್ಟರಲ್ಲಿ ಅತ್ತೆಯೇ ಗೇಟಿನ ಬಳಿ ಬಂದರು
"ಅತ್ತೆ ". ಸಂಭ್ರಮದಿಂದ ನುಡಿದಳು
ಆದರೆ ಆ ಸಂಭ್ರಮ ಅವರ ಮೊಗದಲ್ಲಿ ಇರಲಿಲ್ಲ
"ಯಾವ ಬಾಯಿಂದ ಅತ್ತೆ ಅಂತ ಕರೀತೀಯಾ ನೀನು ನನ್ನನ್ನ . ಅಷ್ಟು ಚೆನ್ನಾಗಿ ನೋಡಿಕೊಂಡ ನಮ್ಮನ್ನ ಗಂಡನ್ನ ಮಗಳನ್ನು ಬಿಟ್ಟು ಈ ಮೂರು ಕಾಸಿನವನ ಜೊತೆ ಓಡಿ ಹೋದ್ಯಲ್ಲಾ ನಾಚಿಕೆ ಆಗಲ್ಲ್ವಾ ನಿಂಗೆ. ಮತ್ಯಾಕೆ ಇಲ್ಲಿಗೆ ಬಂದಿದ್ದಿಯಾ? "
ಅತ್ತೆಯ ಅಂತಹ ರೂಪವನ್ನು ಇಲ್ಲಿಯವರೆಗೆ ಕಂಡಿದ್ದಿಲ್ಲಾ ಶೈಲಾ. ಅದೂ ವಿಕಾಸನ ಬಗ್ಗೆ ಅವರ ಕಾಮೆಂಟ್ ಹಿಡಿಸಲಿಲ್ಲ.
ವಿಕಾಸ್ ತಗ್ಗಿಸಿದ ತಲೆ ಮೇಲೆತ್ತಲಿಲ್ಲ.
"ಅತ್ತೆ ........ಅದು.... ಸಿರಿ...ಯನ್ನು ನೋಡಬೇಕಿತ್ತು"
"ಮೊದಲು ಕರ್ಕೊಂಡು ಹೋಗು ಆ ಅನಿಷ್ಟಾನಾ. ನಂಗೂ ಸಾಕಾಗಿ ಹೋಗಿದೆ . ಇಲ್ಲಾಂದರೆ ಅನಾಥಾಶ್ರಮದಲ್ಲಿ ಬಿಟ್ಟು ಬರೋಣ ಅಂತ ಅಂದ್ಕೊಂಡಿದ್ವಿ"
ಶೈಲಾ ನಂಬಲಾರದವಳಂತೆ ಅತ್ತೆಯ ಮುಖವನ್ನು ನೋಡಿದಳು ಅವರ ಕಣ್ಣಲ್ಲಿ ದ್ವೇಷದ ಕಿಡಿ ಕಾಣುತ್ತಿತ್ತು.
ಅವಳು ಬೆಳೆದದ್ದು ಅವರ ಮಡಿಲಲ್ಲಿಯೇ ತಾಯಿಯನ್ನೇ ಅವರಲ್ಲಿ ಕಂಡವಳು . ಅಂಥವರು ಹೀಗೆ ಮಾಡುತ್ತಿದ್ದಾರಲ್ಲ.
ಅಷ್ಟರಲ್ಲಿ ಮನು ಮಗುವನ್ನು ಕರೆದುಕೊಂಡು ಬಂದ
"ತಗೊಳ್ಳಿ ನಿಮ್ಮಾಸ್ತೀನಾ . ಇನ್ಮೇಲೆ ನಮ್ಮ ಮನೆ ಹತ್ರಾ ಕಾಲಿಡಬೇಡಿ. ಶೈಲಾ ನಂಗೆ ಡೈವೋರ್ಸ್ ಬೇಕು ಮೊದಲು. ನಾನು ರಮ್ಯಾ ಅನ್ನೋ ಹುಡುಗೀನ ಮದುವೆ ಆಗ್ತಾ ಇದ್ದೇನೆ. "
ಶೈಲಾಳ ತಲೆಯಲ್ಲಿ ಸಾವಿರಾರು ಪರ್ವತಗಳು ಕುಸಿದು ಬಿದ್ದ ಅನುಭವವಾಯ್ತು.
ಅವಳ ಆದರ್ಶ ಮನು ಅವಳ ಮುಂದೆಯೇ ಕುಸಿದು ಬಿತ್ತು
"ಅಂದಹಾಗೆ ನಿನ್ನ ಆಸ್ತಿ ಅಂತ ಏನೂ ಇಲ್ಲ ಶೈಲಾ ನಿನ್ನ ಸಾಕಿದ್ದು ನಿನ್ನ ಬೇಕು ಬೇಡಗಳನ್ನೆಲ್ಲಾ ಗಮನಿಸಿದ್ದು. ಓದಿಸಿದ್ದು ಎಲ್ಲಾಕ್ಕೂ ಖರ್ಚಾಗಿದೆ. ಆಸ್ತಿ ,ಜೀವನಾಂಶ ಅಂತ ಏನು ಸಿಗಲ್ಲಾ"
"ಮನು ನಂಗೆ ಆಸ್ತಿ ಹೋಯ್ತಲ್ಲಾ ಅಂತ ಬೇಜಾರಿಲ್ಲ ಆದರೆ . ನಿಮ್ಮಲ್ಲಿದ್ದ ಒಳ್ಲೇ ಗುಣ ಮಾಯವಾಯ್ತಲ್ಲಾ ಅನ್ನೋ ಆಘಾತಾ ಮನಸನ್ನ ಘಾಸಿ ಮಾಡ್ತಿದೆ"
"ಒಳ್ಳೇಯವನಾ . ಯಾರು? ನಾನು . ಅದೆಲ್ಲಾ ನಾನು ಆಡಿದ ನಾಟಕ . ನೀನು ವಿಕಾಸನ್ನ ಹಿಂದೆ ಓಡಿ ಹೋಗಿರಲಿಲ್ಲಾ ಅಂದಿದ್ದ್ರೆ ನಾನೇ ನಿನ್ನನ್ನ ದೂರ ಮಾಡ್ತಿದ್ದೆ . ಅಲ್ಲಾ ಹೆಣ್ಣಾದ ನಿಂಗೆ ಹಳೇ ಗಂಡ ಬೋರಾಗಿದ್ದ್ರೆ ನಾನು ಗಂಡ್ಸು ನಂಗೆ ಇನ್ನೆಷ್ಟು ಬೋರಾಗಿರ್ಬೇಕು ಹೇಳು? ಅದಕ್ಕೆ ನಯವಾಗಿ ಉಪಾಯವಾಗಿ ನಿನ್ನನ್ನ ವಿಕಾಸ್ನ ಬಳಿ ಕಳಿಸಿದೆ. ಎಲ್ಲಾ ನನ್ನದೇ ನಾಟಕ " ಮೀಸೆ ತಿರುವಿದ
ಶೈಲಾಳ ಹೃದಯದಲ್ಲಿ ನೂರಾರು ಅಲೆಗಳು ಎದ್ದವು. ಜಿಗುಪ್ಸೆ ತಾನಾಗೆ ಹರಿದು ಬಂತು. ವಿಕಾಸ್ ಮನುವಿನ ಕೈನಲ್ಲಿದ್ದ ಸಿರಿಯನ್ನು ಕರೆದುಕೊಂಡು ಹೆಗಲಿಗೇರಿಸಿಕೊಂಡ.
"ಅಬ್ಬಾ ಕೊನೆಗೂ ಪೀಡೆ ಕಳೀತು" ಅತ್ತೆ ಸಂತೋಷದಿಂದ ಉದ್ಗರಿಸಿದರು.
ಶೈಲಾಳ ಮನ ನೊಂದಿತು. ತನ್ನ ಕುಡಿಯನ್ನು ಪೀಡೆ ಅನಿಷ್ಟ ಎನ್ನುತ್ತಿದ್ದಾರಲ್ಲ . ಆದರೂ ಏನೂ ಹೇಳಲೂ ಬಾಯಿ ಬರಲಿಲ್ಲ. ತಪ್ಪು ತನ್ನದೂ ಅಲ್ಲವೇ. ತನ್ನ ಮಗಳನ್ನು ತಾನು ನೋಡ್ಕೋಬೇಕು
"ಸರಿ ಶೈಲಾ ಡೈವೋರ್ಸ್ ಪೇಪರ್ ಇದೆ ಸೈನ್ ಮಾಡು ನಿಂಗೂ ಬಿಡುಗಡೆ ನಂಗೂ ಬಿಡುಗಡೆ. ಇದೊಂದೇ ಅಡೆತಡೆ ನನ್ನ ರಮ್ಯ ಮದುವೆಗೆ ಇರೋದು. ನಿಂಗೆ ಗೊತ್ತಾ ನಾನು ಇನ್ನಷ್ಟು ಕೋಟ್ಯಾಧೀಶ ಆಗಬಲ್ಲೆ" ಗೆಲುವಿನ ನಗೆ ಬೀರುತ್ತಾ ಅವಳತ್ತ ಡೈವೋರ್ಸ್ ಪೇಪರ್ ಚಾಚಿದ.
ಅವನಂದಂತೆ ಸೈನ್ ಮಾಡಿ ಕೊಟ್ಟಳು.
"ಮನು ಇಷ್ಟು ದಿನಾ ನಿಮಗೇನೋ ಅಪರಾಧ ಮಾಡಿದ್ದೀನಿ ಅಂತಾ ಒದ್ದಾಡ್ತಿದ್ದೆ. ವಿಕಾಸ್ಗೂ ನೋವನ್ನು ಕೊಟ್ಟೆ ಆದರೆ ಇವತ್ತಿಂದ ನನ್ನ ಮನಸು ತಿಳಿಯಾಗಿದೆ. ನಾನು ತಪ್ಪೇನು ಮಾಡಿಲ್ಲ. ನಿಮಗೆ ಮೋಸ ಮಾಡಿಲ್ಲ. ಮೋಸ ಹೋಗಿದ್ದು ನಾನು . ನಿಮ್ಮನ್ನ ದೇವರಂತೆ ಭಾವಿಸಿದ್ದೆ. ಆದರೆ ನನ್ನ ನಂಬಿಕೇನೆಲ್ಲಾ ಬುಡಮೇಲು ಗೊಳಿಸಿದ್ರಿ ನೀವು.ನಿಮಗೂ ನಿಮ್ಮ ತಾಯಿಗೂ ಈ ಮನೆಗೂ ದೊಡ್ಡ ನಮಸ್ಕಾರ. ಇನ್ಮೇಲೆ ನೀವು ಕನಸಲ್ಲೂ ಕೂಡ ಬರೋದಿಲ್ಲ . "
ಆವೇಶ ಭರಿತಳಾಗಿ ಮಾತಾಡಿ ಬೈಕನ್ನೇರಿದಳು ಅದನ್ನೇ ಕಾಯುತ್ತಿದ್ದಂತೆ ವಿಕಾಸ್ ಗಾಡಿ ಶುರು ಮಾಡಿದ .ಮುಂದೆ ಕುಳಿತಿದ್ದ ಸಿರಿ ಕೈ ಬೀಸಿದಳು ಮನುವಿಗೆ ಹಾಗು ಅಜ್ಜಿಗೆ. ಬೈಕ್ ರೋಯ್ ಅಂದು ಮುಂದೆ ಹೋಯ್ತು. ವಿಕಾಸನನ್ನು ಹಿತವಾಗಿ ಅಪ್ಪಿದ ಶೈಲಾ. ತನ್ನ ಮುಂದಿನ ಭವಿಷ್ಯಕ್ಕಾಗಿ ಕನಸು ಕಾಣಲೆಂದು ವಿಕಾಸನ್ ಬೆನ್ನಿಗೊರಗಿದಳು. ಡೈವೋರ್ಸ್ ಸಿಕ್ಕ ಮೇಲೆ ವಿಕಾಸನನ್ನು ಮದುವೆಯಾಗುವ ಸುಂದರ ಕನಸು .
ಬೈಕ್ ಮರೆಯಾಗುತ್ತಿದ್ದಂತೆ ಮನುವಿನ ತಾಯಿಯ ದುಖ: ಕಟ್ಟೆಯೊಡೆದಿತ್ತು. ಹಾಗೆ ಕೆಳಗೆ ಕುಸಿದರು.
"ಮನು ಅವಳು ಹೊರಟು ಹೋದಳಲ್ಲಾ . ಮನೆಗೆ ಬಂದವಳನ್ನ ಬಾಯಿಗೆ ಬಂದ ಹಾಗೆ ಅಂದು ಬಿಟ್ಟೆ. ನಾನು ಆ ಮಗೂಗೆ ಅನಿಷ್ಟ ಪೀಡೆ ಅಂತೆಲ್ಲಾ ಅಂದನಲ್ಲ " ರೋಧಿಸಿದರು.
ಮನು ತಾಯಿಯನ್ನು ಸಮಾಧಾನಿಸಿದ
"ಅಮ್ಮಾ ನಾವು ಹೀಗೆ ಮಾಡಿರಲಿಲ್ಲಾ ಅಂದಿದ್ರೆ ನಮ್ಮ ಶೈಲಾ ಯಾವತ್ತಿಗೂ ಸುಖವಾಗಿರ್ತಿರಲಿಲ್ಲ. ನಾನು ಅವಳ ಪಾಲಿಗೆ ದೇವರಾಗಿದ್ದೆ ದೇವರಿಗೆ ಮೋಸ ಮಾಡಿದೆ ಎಂಬ ಚಿಂತೆ ಅವಳನ್ನ ಎಡ ಬಿಡದೆ ಕಾಡ್ತಿತ್ತು. ಅದೇ ಥರಾ ವಿಕಾಸ್ ಕೂಡ ನನ್ನಂಥವನಿಗೆ ಮೋಸ ಮಾಡಿದೆ ಅನ್ನೋದು ಅವನಿಗೆ ಚುಚ್ಚುತ್ತಿತ್ತು. ಇಬ್ಬರೂ ಮಾನಸಿಕವಾಗಿ ತುಂಬಾ ಕೊರಗ್ತಿದ್ದರು. ವಿಕಾಸ್ ಇದೇ ಚಿಂತೇಲಿ ಆಫೀಸಲ್ಲಿ ಕೆಲಸ ಸರಿಯಾಗಿ ಮಾಡ್ತಾ ಇರಲಿಲ್ಲ ಅಂತ ಅವರ ಮ್ಯಾನೇಜರ್ ಹೇಳಿದ್ರು. ಹಾಗೆ ಶೈಲಾ ಸಹಾ ಪ್ರತಿ ತಿಂಗಳಿಗೂ ಹುಷಾರು ತಪ್ಪಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಳು. ಇದಕ್ಕೆಲ್ಲಾ ನಾನೆ ಒಂದು ಅಂತ್ಯ ಹಾಡಬೇಕಿತ್ತು. ಅವರಿಬ್ಬರ ದೃಷ್ಟಿಯಲ್ಲಿ ನಾನು ಕೆಟ್ಟವನಾಗಬೇಕಿತ್ತು. ಅದಕ್ಕೆ ಎಲ್ಲಾ ತಯಾರಿ ಮಾಡಿಕೊಂಡೆ ಈ ನಾಟಕ ಆಡಿದ್ದು ಅಮ್ಮ. ಮೊದಲು ಸಂಗೀತಾಗೆ ಈ ವಿಷ್ಯ ಹೇಳಿ ಅವಳಿಂದ ಶೈಲಾಗೆ ಒಂದು ಮೇಲ್ ಕಳಿಸೋಕೆ ಹೇಳಿದೆ. ಹಾಗೆ ವಿಕಾಸನನ್ನ ಭೇಟಿ ಮಾಡಿ ಅವನ ಬಳಿ ಕೆಟ್ಟದಾಗಿ ನಡೆದುಕೊಂಡೆ. ಈಗ ನೋಡು ಇಬ್ಬರೂ ನೆಮ್ಮದಿಯಿಂದಿರ್ತಾರೆ. ನಂಗೆ ಅಷ್ಟು ಸಾಕು"
"ಅವರು ನೆಮ್ಮದಿ ಇಂದ ಇರ್ತಾರೆ ಆದರೆ ನೀನು? ಸಿರೀನೂ ಕಳಿಸಿ ನೀನು ಹೇಗಿರ್ತೀಯಾ. ಬೇರೆ ಮದುವೆ ಮಾಡಿಕೊ ಮನು "ತಾಯಿಯ ಕರುಳು ನೊಂದು ಕೇಳಿತು
"ಅಮ್ಮಾ ನಾನಾಗ್ಲೇ ಹೇಳಿದ್ದೀನಿ . ನಾನು ಶೈಲಾನ ಬಿಟ್ಟು ಬೇರೆ ಯಾವ ಹೆಣ್ಣನ್ನೂ ಹೆಂಡತಿಯಾಗಿ ಕಾಣೋಕೆ ಸಾಧ್ಯ ಇಲ್ಲಾಂತ. ಅವಳ ನೆನಪುಗಳೇ ಸಾಕು ಬದುಕೋಕೆ" ನಿಟ್ಟುಸಿರಿಟ್ಟು ಒಳಗೆ ಹೋದ ಆ ಉದಾತ್ತ ವ್ಯಕ್ತಿ ತನ್ನ ಮಗ ಎಂಬುದನ್ನು ನೆನೆಸಿಕೊಂಡು ಹೆಮ್ಮೆ ಪಟ್ಟುಕೊಳ್ಳುವ ಸಂತಸವಷ್ಟೇ ಉಳಿಯಿತು ಮನುವಿನ ತಾಯಿಯ ಪಾಲಿಗೆ
Tuesday, September 22, 2009
ಎರೆಡು ದಡಗಳ ನಡುವೆ ಭಾಗ ಐದು
ವಿಕಾಸನಿಗೆ ಸಿಡಿಲು ಬಡಿದಂತಾಯ್ತು. . ಮನುವಿನಿಂದ ದೂರವಾಗಿ ಕೇವಲ ಎಂಟು ತಿಂಗಳಾಗಿರಬಹುದು. ಇದು ಐದನೇ ಸಾರಿ ಹೀಗೆ ಶೈಲಾ ಪ್ರಜ್ನೆ ತಪ್ಪುತ್ತಿರುವುದು. ನಂತರ ಜ್ವರ ಹತ್ತು ದಿನ ಹಾಸ್ಪಿಟಲ್ ವಾಸ
ಒಳಗಡೆ ಶೈಲಾ ಕನವರಿಸುತ್ತಿದ್ದಳು
"ಮನು ನನ್ನ ಕ್ಷಮಿಸಿಬಿಡಿ. ನಾನು ನಿಮಗೆ ಮೋಸ ಮಾಡಿಬಿಟ್ಟೆ. ಅತ್ತೆ ನಂಗೂತ್ತು ನಿಮಗೆ ನನ್ನ ಮೇಲೆ ಕೋಪ ಬಂದಿದೆ ಅಂತ" ಮತ್ತೆ ಮತ್ತೆ ಅದೇ ಮಾತುಗಳನ್ನು ಉಚ್ಚರಿಸುತ್ತಿದ್ದಳು
ವಿಕಾಸ ತಲೆ ಚಿಟ್ಟು ಹಿಡಿದಂತಾಯಿತು
ಅಪ್ಪಯ್ಯನ ಮಾತುಗಳು ಕಿವಿಯಲ್ಲಿ ಪ್ರತಿಧ್ಚನಿಸಿತು
"ವಿಕಾಸ್ ನೀನು ಹೋಗುತ್ತಿರುವುದು ಮಾಯ ಜಿಂಕೆಯ ಹಿಂದೆ . ಹೆಣ್ಣು ಮಾಯೆ ಅದರಲ್ಲೂ ಕಟ್ಟಿಕೊಂಡ ಗಂಡನ್ನ ಬಿಟ್ಟು ನಿನ್ನ ಹಿಂದೆ ಬರುತ್ತೇನೆ ಅಂತಿರೋ ಆ ಹೆಂಗಸಿನ ಮನೋಭಾವ ಸರಿ ಇಲ್ಲ ಮುಂದೆ ತುಂಬಾ ತೊಂದರೆ ಅನುಭವಿಸಬೇಕಾಗುತ್ತೆ ಕಣೊ ಅವಳ ಬಾಳು ಚೆನ್ನಾಗಿರಲ್ಲ ಹಾಗೇನೆ ನಿನ್ನ ಬಾಳೂ ಅಷ್ಟೆ ನರಕ ನರಕ ಆಗುತ್ತೆ .ಅವಳಿಗಿಂತ ನೂರು ಪಟ್ಟು ಚೆನ್ನಾಗಿರೋ ಹುಡುಗೀನ ನಾನು ಹುಡುಕಿ ಮದುವೆ ಮಾಡ್ತೀನೆ ಅವಳನ್ನ ಬಿಟ್ಟು ಬಿಡು " ಅಪ್ಪ ಕೈ ಮುಗಿದ್ದಿದ್ದರು
ಅಮ್ಮ ಮಾತೇ ಆಡಲಿಲ್ಲ.
ಅಡುಗೆ ಮನೆ ಸೇರಿ ಮುಸು ಮುಸು ಅಳುತ್ತಿದ್ದರು
"ಇಲ್ಲ ಅಪ್ಪಯ್ಯಬರೀ ಹಣ , ರೂಪದಿಂದ ಅರಳಿದ ಪ್ರೀತಿ ಅಲ್ಲ. ನಾನು ಯೋಚಿಸಿ ಯೋಚಿಸಿ ತೆಗೆದುಕೊಂಡ ನಿರ್ಧಾರ. ಅದರಿಂದ ಹಿಂದೆ ಬರೋ ಯೋಚನೇನೆ ಇಲ್ಲ. ಸಾರಿ ಅವಳನ್ನ ನಿಮ್ಮ ಸೊಸೆ ಎಂದು ಸ್ವೀಕರಿಸುವುದಾದರೆ ಸ್ವೀಕರಿಸಿ ಇಲ್ಲವಾದರೆ ನಿಮಗೊಬ್ಬ ಮಗನಿದ್ದ ಎಂಬುದನ್ನ ಮರೆತು ಬಿಡಿ"
ಕಡ್ಡಿ ಎರೆಡು ಮಾಡಿದಂತೆ ಉತ್ತರಿಸಿ ತನ್ನ ಸೂಟ್ಕೇಸ್ ಹಿಡಿದು ಹೊರಬಂದವ ತಾನು
ಆದರೆ ಅಪ್ಪ ಹೇಳಿದ್ದೇ ನಿಜವೆನಿಸುತ್ತಿದೆ ಅಲ್ಲವಾ? ಶೈಲಾ ತನಗಾಗಿ ಮನುವನ್ನು ಬಿಟ್ಟುಬಂದಳು . ಆದರೆ ನಿಜಕ್ಕೂ ನಮ್ಮಲ್ಲಿ ಯಾರು ಸುಖವಾಗಿದ್ದಾರೆ? ನಾನಾ,ಶೈಲಾನಾ? ಇಲ್ಲಾ ಮನುವಾ? ಯಾರೂ ಇಲ್ಲ ಯಾರಿಗಾಗಿ ಈ ಬಾಳು ಯಾವ ಸಂತೋಷಕ್ಕಾಗಿ? ಮತ್ತೊಬ್ಬರ ಸಂತಸದ ಸಮಾಧಿಯ ಮೇಲೆ ಬಾಳು ಕಟ್ಟಿಕೊಂಡಂತಾಗಿ ಭೂತಕಾಲವೇ ಭೂತದಂತೆ ಕಾಡುತ್ತಿದೆಯಲ್ಲ.
ಹೀಗೇ ಮುಂದುವರೆದರೆ ಬದುಕು ನಿಜಕ್ಕೂ ನರಕವಾಗುತ್ತದೆ.
ಮಾಡುವುದೇನು?
??
ಪ್ರಶ್ನಾರ್ಥಕ ಚಿಹ್ನೆಗಳೇ ಅವನ ತಲೆಯಲ್ಲಿ ತುಂಬಿತು. ತಲೆ ಹಿಡಿದು ನಿಂತ
********************************************************
ವಾರವೆರೆಡು ಕಳೆಯಿತು . ಶೈಲಾ ಗುಣ ಮುಖಳಾದಳು ಆದರೆ ಮಾನಸಿಕವಾಗಿ ಮತ್ತಷ್ಟು ಮುದುಡುತ್ತಿದ್ದಳು . ತಾನು ಅಪರಾಧಿ
ಮನುವಿಗೆ ಮೋಸ ಮಾಡಿದೆ.ಅವನ ಮನಸನ್ನು ನೋಯಿಸಿದೆ ಎಂಬ ಭಾವನೆ ಮೂಡಿದಾಗಲೆಲ್ಲಾ ಅವಳು ಹುಚ್ಚು ಹಿಡಿದಂತಾಡುತ್ತಿದ್ದಳು. ವಿಕಾಸನ ಮೇಲೆ ವಿನಾಕಾರಣ ಕೋಪಿಸಿಕೊಳ್ಳುತ್ತಿದ್ದಳು. ವಿಕಾಸನಂತೂ ಸೋತು ಹೋಗಿದ್ದ. ಇತ್ತ ಕೆಲಸದಲ್ಲಿ ಒತ್ತಡ ಮನೆಯಲ್ಲಿ ಜಗಳ ತಪ್ಪಿದರೆ ಶೈಲಾಳ ಅಳು ಅವಳಿಗೆ ಸಾಂತ್ವಾನ ಹೇಳಿ ಹೇಳಿ ಸುಸ್ತಾಗಿದ್ದ. ಶೈಲಾ ಕೆಲಸವನ್ನು ಬಿಟ್ಟು ಮನೆಯಲ್ಲಿ ಕೂತಿದ್ದಳು. ಈ ಎಂಟು ತಿಂಗಳಲ್ಲಿ ಇದು ಎಂಟನೇ ಕೆಲಸ ಬಿಡುತ್ತಿರುವುದು. ಮಹಾರಾಣಿಯಂತಿದ್ದವಳಿಗೆ ಮತ್ತೊಬ್ಬರ ಆಳಾಗಿ ದುಡಿಯಲು ಕಷ್ಟವಾಗುತಿತ್ತು. ವಿಕಾಸನೇ ಕೆಲ್ಸ ಬಿಡಲು ಹೇಳಿದ್ದ
ಅಂದು ವಿಕಾಸನ ಮೊಬೈಲ್ ರಿಂಗಣಿಸಿತು
"ಹಲ್ಲೋ"
"ವಿಕಾಸ್ ಮನ್ವಂತರ್ ಹಿಯರ್. ಗೊತ್ತಾಯ್ತಾ?" ಅತ್ತಲಿಂದ ಮನುವಿನ ದ್ವನಿ ಕೇಳಿಸಿತು
ವಿಕಾಸ್ ಬಾಯಿ ತೆರೆದ ಆದರೆ ಶಬ್ಧ ಹೊರಡಲಿಲ್ಲ. ಗಲಿಬಿಲಿಯಾಗಿತ್ತು. ಏನು ಮಾತಾಡಬೇಕೆಂದು ಹೊಳೆಯಲಿಲ್ಲ. ಸುಮ್ಮನೇ ಇದ್ದ
"ವಿಕಾಸ್ . ನಾನು ನಿಮ್ಮ ಜೊತೆ ಮಾತಾಡಬೇಕು. "
"ಎಲ್ಲಿ ......................ಬರಬೇಕು... ಅಂತ ಹೇಳಿದರೆ ............" ವಿಕಾಸ್ ಒಂದೊಂದೇ ಪದಗಳನ್ನು ಉರುಳಿಸಿದ
ಮನು ಅತ್ತಲಿಂದ ಹೇಳಿದ
ಯಾಕಿರಬಹುದು? ಫೋನಿಟ್ಟ ಮೇಲೆ ತನ್ನಂತಾನೆ ಪ್ರಶ್ನಿಸಿಕೊಂಡ.
ಪ್ರಶ್ನೆಗೆ ನೂರಾರು ಉತ್ತರಗಳು ಧುಮ್ಮಿಕಿದವು
ಊಹೆಗಳ ಸರಮಾಲೆ ಅನಂತ ದೂರದವರೆಗೆ ಎಳೆಯಲಾರಂಭ್ಸಿಸಿತು
ಇನ್ನೂ ಯೋಚಿಸುವುದರಲ್ಲಿ ಅರ್ಥವಿಲ್ಲ ಎಂದನಿಸಿ ಆ ಯೋಚನೆಗಳ ಪರಿಧಿಯಿಂದ ಹೊರಬಂದ . ಹೇಗಿದ್ದರೂ ಇಂದು ಸಂಜೆ ಗೊತ್ತಾಗುತ್ತದೆಯಲ್ಲ ಎಂದು ನಿರಾಳನಾದ
**************************************************
ಮನೆಯಲ್ಲಿ ಕೂತು ನೆಟ್ನಲ್ಲಿ ನೋಟ ಹರಿಸುತ್ತಿದ್ದಳು ಶೈಲಾ. ಮನಸೆಲ್ಲಾ ಬರೀ ಯೋಚನೆಗಳೇ
ಅಲ್ಲ ತನ್ನ ಮನದಾಸೆಯನ್ನ ಹೇಳದೆ ಅವನೇ ತಿಳಿದುಕೊಂಡನಲ್ಲ ಮನು. ಅವನು ಅಷ್ಟು ಒಳ್ಳೆಯವನಾಗಿರಬಾರದಿತ್ತು ಅವನ ಒಳ್ಳೇಯತನ ತನ್ನನ್ನು ಬೆಂಕಿಯಂತೆ ಸುಡುತ್ತಿದೆಯಲ್ಲಾ. ಅತ್ತೆಯೂ ಅಷ್ಟೆ ಒಂದೂ ಕೆಟ್ಟ ಮಾತು ಆಡಲಿಲ್ಲ
ಆ ದಿನ ಇನ್ನೂ ನೆನಪಿದೆ.
ಮನು ಅಂದು ಪಕ್ಕದಲ್ಲಿ ಬಂದು ಕೂತು ಕೈ ಹಿಡಿದ
ಹಾವು ಮುಟ್ಟಿದಂತೆ ದೂರ ಸರಿದಳು ಶೈಲಾ. ಏನೋ ಕೆಲಸವಿರುವಂತೆ ರೂಮಿನಿಂದ ಹೊರ ನಡೆಯುತ್ತಿದ್ದವಳನ್ನ ಮನುವಿನ ಮಾತು ತಡೆಯಿತು
"ಶೈಲೂ ನಂಗೆಲ್ಲಾ ಗೊತ್ತಾಯ್ತು"
ಶೈಲಾ ಹೆಜ್ಜೆ ಕದಲಿಸಲಿಲ್ಲ . ಹಿಂದೆ ತಿರುಗಲಿಲ್ಲ . ಮುಂದೇನು ಹೇಳುತ್ತಾನೋ ಎಂಬ ಭಯ ಹುಟ್ಟಲಾರಂಭಿಸಿತು.
" ಶೈಲಾ ನಿಂಗೇನು ಇಷ್ಗ್ಟಾನೋ ಅದನ್ನ್ಲೆಲ್ಲಾ ನಾನು ನಿಂಗೆ ಕೊಟ್ಟಿದ್ದೇನೆ. ನಿನ್ನಾವ ಆಸೇನೂ ಬೇಡ ಅಂತ ಹೇಳಿಲ್ಲ. ಆದರೆ ಈ ಒಂದು ಆಸೆ ಈಡೇರಿಸೋದು ಕಷ್ಟ . ಯಾಕೆಂದರೆ ಇದು ಕೇವಲ ನಿನ್ನೊಬ್ಬಳ ಬಾಳಿನ ಪ್ರಶ್ನೆ ಅಲ್ಲ. ನಮ್ಮೆಲಾರ ಸಂತೋಷಾನೂ ಇದರಲ್ಲಿ ಅಡಗಿದೆ. ವಿಕಾಸ್ ನಿನಗೆ ಏಕಿಷ್ಟ ಆದ ಹೇಗೆ ಇಶ್ಟ ಆದ ಅನ್ನೋದನ್ನ ನಾನು ಕೇಳೋದಿಲ್ಲ ನಾನು ಹೇಳಿದ್ದನೆಲ್ಲಾ ನೆನೆಸಿಕೊಂಡು ಒಂದ್ಸಲ ಯೋಚನೆ ಮಾಡು. ಆಮೇಲೂನಿನಗೆ ನೀನು ಮಾಡುತ್ತಿರೋದೇ ಸರಿ ಎಂದನಿಸಿದರೆ ನಿನ್ನಾಸೆ ಪ್ರಕಾರಾನೇ ಮಾಡು"
ಸಿಡಿ ಮಿಡಿಗೊಳ್ಳುವಂತಾಯಿತು. ಮಾತಾಡದೆ ಹೊರಗಡೆ ಬಂದಳು.
ಎಲ್ಲರ ಸಂತೋಷಕ್ಕಾಗಿ ತಾನೇಕೆ ತ್ಯಾಗ ಮಾಡಬೇಕು. ತಾನಿದ್ದರೇ ತಾನೆ ಎಲ್ಲರೂ?
ತನಗೆ ಇಷ್ಟವಿರುವವರನ್ನು ಆರಿಸಿಕೊಳ್ಳುವ ಹಕ್ಕು ತನಗೂ ಇದೆ.
ವಿಕಾಸ್ ಜೊತೆ ಬಾಳು ಉಲ್ಲಾಸದಾಯಕವಾಗಿರುತ್ತದೆ
ಹೀಗೆ ಅವಳ ಹೆಜ್ಜೆಯನ್ನು ಸಮರ್ಥಿಸಿಕೊಳ್ಳಲು ಸಾವಿರಾರು ಕಾರಣಗಳು ಅವಳ ಮುಂದೆ ಸುಳಿದವು
ಕೂಡಲೆ ವಿಕಾಸನಿಗೆ ಫೋನ್ ಮಾಡಿದಳು. ಮನುವಿಗೆ ಗೊತ್ತಾಗಿದೆ ಎಂದೂ ಅವನು ಹೇಳಿದ್ದನ್ನೂ ತಿಳಿಸಿದಳು
ಕೂಡಲೆ ಹೊರಟು ಬರುವಂತೆ ಹೇಳಿದ. ಉಟ್ಟಬಟ್ಟೆಯಲ್ಲಿ ಬರುವಂತೆ ಹೇಳಿದ
ಇನ್ನೇನು ಹೊರಡಬೇಕು ಅಷ್ಟ್ರಲ್ಲಿ ಸಿರಿ ಬಂದು ಕೈ ಎಳೆದಳು.
ಅವಳನ್ನು ಕರೆದುಕೊಂಡು ಹೋಗಬೇಕು ಅನ್ನಿಸಿತಾದರೂ ತನ್ನ ಬದುಕೇ ಇನ್ನೂ ಅಸ್ಥಿರವಾಗಿರುವಾಗ ಅವಳೂ ಒಂದು ಪ್ರಶ್ನಾರ್ಥಕ ಚಿನ್ಹೆಯಾಗಬಹುದೆನಿಸಿತು.
ರೂಮಿನಲ್ಲಿ ಸಿರಿಯನ್ನು ಮಲಗಿಸಿ ಕೊಂಚಹೊತ್ತಾದ ಮೇಲೆ ಮಹಡಿಯಿಂದ ಕೆಳಗಿಳಿದು ಬಾಗಿಲ ಬಳಿ ಹೋಗುತ್ತಿದ್ದಂತೆ ಎದುರು ಬಂದ ಮನುವನ್ನು ಕಂಡು ಬೆಚ್ಚಿದಳು. ಮನು ತುಟಿಯಲ್ಲಿ ವಿಷಾದದ ನಗು. ತಪ್ಪಿತಸ್ತಳಂತೆ ನೆಲ ನೋಡುತ್ತಾ ನಿಂತಳು
"ಶೈಲಾ ಕೊನೆಗೂ ನಮ್ಮನ್ನೆಲ್ಲಾ ಬಿಟ್ಟು ಹೋಗಬೇಕೆಂದು ನಿರ್ಧರಿಸಿದೆಯಾ?"
ಶೈಲಾ ಮಾತಾಡಲಿಲ್ಲ. ತಲೆಯನ್ನೂ ಮೇಲೆತ್ತಲಿಲ್ಲ . ಕೊಂಚ ಹೊತ್ತಿನ ನಂತರ ನಿಟ್ಟುಸಿರಿನ ಸದ್ದು ಕೇಳಿತು
"ಸರಿ ಶೈಲಾ ಯು ಮೇ ಗೋ." ತಾನೆ ಮುಂದಾಗಿ ಬಾಗಿಲು ತೆರೆದ
ಶೈಲಾ ಮೊಗದಲ್ಲಿ ಆಶ್ಚರ್ಯ ಗೊಂದಲಗಳು ಒಮ್ಮೆಗೇ ಮೇಳೈಸಿದವು.
ಕಾಲುಗಳು ಮುಂದೆ ಹೊರಡಲು ಮುಷ್ಕರ ಹೂಡಿದವು.
ಭಾರವಾದ ಹೆಜ್ಜೆಗಳನ್ನು ನೆಲದಿಂದ ಬೇರೆ ಮಾಡುತ್ತಿದ್ದಂತೆ ಅವಳ ಮನಸಿನಿಂದ ಮನುವಿನ ಚಿತ್ರ ದೂರವಾಗತೊಡಗಿತು.
ಗೇಟಿನ ಬಳಿಯಲ್ಲೇ ನಿಂತಿದ್ದ ವಿಕಾಸ್ ಮುಂದೆ ಮನು ಹಾಗು ಹಿಂದೆ ಶೈಲಾನ ನೋಡಿ ಅವಕ್ಕಾದ . ಇನ್ನೇನು ಕಾದಿದೆಯೋ ಎಂಬ ಯೋಚನೆಯೊಂದಿಗೆ ಮುಂದಾಗುವುದಕ್ಕೆ ಸಿದ್ದನಾದ.
ಕೊನೆಗೂ ಮನು ಹೊರಗೆ ಬಂದ ಶೈಲಾ ಜೊತೆಗೆ.
ವಿಕಾಸ್ನ ಉಸಿರು ನಿಂತೇ ಹೋಯಿತೇನೋ ಎನ್ನುವಷ್ಟು ನಿಧಾನವಾಯ್ತು.ವಿಕಾಸನನ್ನು ನೋಡಿ ಒಮ್ಮೆ ನಕ್ಕ ಮನು. ಆ ನಗುವಿನ ಭಾವವಾವುದೋ ತಿಳಿಯಲಿಲ್ಲ ವಿಕಾಸ್ಗೆ. ನಗುವ ಪ್ರಯತ್ನ ಮಾಡಿದ . ಆದರೆ ಮುಖ ನಗಲಾರೆ ಎಂದು ನಕಾರ ಮಾಡಿತು. ಇದೇನು ಈ ಮನುಷ್ಯ . ಹೆಂಡತಿಯನ್ನು ಮತ್ತೊಬ್ಬನಿಗೆ ಒಪ್ಪಿಸುವಾಗಲೂ ನಗುವೇ? ಶೈಲಾಗಾಗಲಿ ವಿಕಾಸನಿಗಾಗಲಿ ಅರ್ಥವೇ ಆಗಲಿಲ್ಲ
ಯಾವ ಮಾತನ್ನೂ ಆಡದೆ ವಿಕಾಸನ ಬಳಿ ಶೈಲಾಳನ್ನು ಬಿಟ್ಟು ಮತ್ತೆ ಗೇಟಿನ ಒಳಗೆ ನಿಂತ
ವಿಕಾಸ್ನ ಬೈಕ್ ಏರಿದಳು ಶೈಲಾ
ಬೈಕ್ ಸ್ಟಾರ್ಟ್ ಮಾಡುತ್ತಿದ್ದಂತೆ ಮನು ಕೈ ಬೀಸಿದ ಅವನ ಕಣ್ಣಲ್ಲಿದ್ದ ನೀರು ಬೇಡವೆಂದರು ಹೊರಗೆ ಬರುವುದನ್ನು ಅವನಿಂದ ಬಚ್ಚಿಡಲಾಗಲಿಲ್ಲ.
ಆ ದೃಶ್ಯ ನೂತನ ಜೋಡಿಗಳ ಮನಸಲ್ಲಿ ಅಚ್ಚಳಿಯದೇ ನಿಂತು ಬಿಟ್ಟಿತು.
****
ಮತ್ತದೇ ದೃಶ್ಯ ಮನಸಲ್ಲಿ ಪುನಾರವರ್ತನೆಯಂತಾಗಿ ಶೈಲಾ ಮಂಚಕ್ಕೆ ಒರಗಿದಳು
--------------------------------------------------------------------
ಅಂದು ಸಂಜೆ ಮನುವನ್ನು ಭೇಟಿಯಾಗಿ ಬರುತ್ತಿದ್ದಂತೆ ವಿಕಾಸ್ ಕುದಿಯುತ್ತಿದ್ದ. ಅಬ್ಬಾ ಈ ಮನುಷ್ಯ ಇಂತಹವನೇ? ಅವನ ಮಾತುಗಳು ಮತ್ತೆ ಮತ್ತೆ ಕಿವಿಯನ್ನು ತೂತು ಮಾಡುತ್ತಿತ್ತು
"ವಿಕಾಸ್ ಪರವಾಗಿಲ್ಲ ಹಳಸಲಾದರೂ ಪಕ್ವಾನ್ನದಂತೆ ನೋಡ್ಕೋತಿದ್ದೀಯಂತೆ. ನೋಡ್ಕೋ ನೋಡ್ಕೋ ನೀನುಂಟು ನಿನ್ನ ಹೊಸ ಹೆಂಡತಿ ಅಂದ್ರೆ ನನ್ನ ಹಳೇ ಹೆಂಡತೀ ಉಂಟು . ನಂಗೂ ಅವಳ ಜೊತೆ ಇದ್ದು ಅದೇ ಹಳೇದನ್ನ ತಿಂದೂ ತಿಂದೂ ಬೇಜಾರಾಗಿ ಹೋಗಿತ್ತು. ಅದಕ್ಕೆ ಅವಳು ಹೋಗ್ತೀನಿ ಅಂದ ಕೂಡಲೇ ಅವಳನ್ನ ಓಡಿಸಿ ಬಿಟ್ಟೆ" ಒಳ್ಳೇ ಖಳನಾಯಕನಂತೆ ನಕ್ಕ
ವಿಕಾಸನ ತಲೆ ಗಿರ್ರೆ ಂ ದಿತು
ಇದೇನು ಇಂತಹ ಮಾತು
" ಅಂದಹಾಗೆ ನಾನಿಲ್ಲಿ ನಿನ್ನ ಕರೆದದ್ದು ನಿನ್ನ ಲವರ್ಗೆ ಹೇಳಿ ನಂಗೆ ಡೈವೋರ್ಸ್ ಕೊಡೋದಿಕ್ಕೆ ಹೇಳು ಅಂತ ಹೇಳೋಕೆ ನಂದೂ ಉಪ್ಪು ಹುಳಿ ತಿಂದ ದೇಹ ನಾನೂ ಬೇರೆ ಮದುವೆ ಮಾಡ್ಕೋಬೇಕು. ಈಗಾಗಲೆ ಹೆಣ್ಣು ಗೊತ್ತಾಗಿದೆ . ಮದುವೆ ಮಾತ್ರ ಬಾಕಿ. ಆಮೇಲೆ ಆ ಸಿರೀನ ಕರೆದುಕೊಂಡು ಹೋಗೋಕೆ ಹೇಳು. ನಂಗೂ ಒಳ್ಳೆಯವನ ಥರಾ ನಟಿಸಿ ನಟಿಸೀ ಬೇಜಾರಾಗಿ ಹೋಗಿದೆ. " ತನ್ನ ಜೋಕಿಗೆ ತಾನೆ ನಕ್ಕು ಎದ್ದು ತನ್ನ ಕಾರಿನಲ್ಲಿ ಕೂತ ಮನು ವಿಕಾಸನ ಮರು ಮಾತಿಗೆ ಕಾಯಲೂ ಇಲ್ಲ
ವಿಕಾಸನಿಗೆ ದಿಗ್ಬ್ರಮೆಯಾಗಿತ್ತು ಇದನ್ನೆಲಾ ಹೇಳಿದರೆ ನಂಬುತ್ತಾಳೇಯೇ ಶೈಲಾ.
ತಲೆ ಚಿಟ್ಟು ಹಿಡಿದಂತಾಗಿ ಮನೆಗೆ ಬಂದು ಕೂತವನಿಗೆ ಮುಸಿ ಮುಸಿ ಅಳುತ್ತಿದ್ದ ಶೈಲಾ ಕಂಡಳು.
"ಯಾಕೆ ಶೈಲಾ ಏನಾಯ್ತು ? "ಗಾಭರಿಯಾಗಿ ಕೇಳಿದವನಿಗೆ
ತನ್ನ ಮುಂದೆ ಇದ್ದ ಕಂಪ್ಯೂಟರ್ ಪರದೆಯ ಕಡೆಗೆ ಕೈ ತೋರಿದಳು
ಅವಳು ತೋರಿದತ್ತ ನೋಡಿದ
ಅದು ಸಂಗೀತಾ ಮೇಲ್.
"ಶೈಲಾ ಒಮ್ಮೊಮ್ಮೆ ನಮಗೆ ಗೊತ್ತಿಲ್ಲದ ಹಾಗೆ ವಿಧಿ ನಮ್ಮನ್ನ ಸರಿಯಾದ ದಿಕ್ಕಿಗೆ ಕರೆದುಕೊಂಡು ಹೋಗಿರುತ್ತೆ. ನಿನ್ನ ವಿಷಯದಲ್ಲೂ ಹಾಗೇನೆ ಆಗಿದೆ. ಆವತ್ತು ನೀನು ಮನುವನ್ನು ಬಿಟ್ಟು ಬಿಡ್ತೀನಿ ಅಂತಂದಾಗ ನಾನು ಚೆನ್ನಾಗಿ ಬೈದಿದ್ದೆ. ಆದರೆ ನೀನು ಮಾಡಿದ್ದೇ ಸರಿ . ಮನು ನಿಜವಾದ ಬಣ್ಣ ನನಗೆ ನೆನ್ನೆ ಗೊತ್ತಾಯ್ತು . ಮನು ನಿನ್ನ ತಂದೆ ಫ್ಯಾಕ್ಟರಿನ ನಿನ್ನ ಹೆಸರಿಂದ ತನ್ನ ಹೆಸರಿಗೆ ಮಾಡಿಕೊಂಡಿದ್ದಾನಂತೆ. ಅದಕ್ಕಾಗೇ ಅವನಿಗೆ ನಿನ್ನ ಅವಶ್ಯಕತೆ ಇರಲಿಲ್ಲ ಹೇಗೋ ಮಾಡಿ ನಿನ್ನನ್ನ ಸಾಗ ಹಾಕಿದರೆ ಸಾಕು ಅನ್ನೋ ಯೋಚನೆ ಇತ್ತಂತೆ . ಅವನಿಗೆ ಈಗಾಗಲೇ ಶ್ಯಾಮಲಾ ಗ್ರೂಪ್ ಆಫ್ ಕಂಪನಿಯ ಚೇರ್ಮನ್ ಮಗಳು ರಮ್ಯಾ ಜೊತೆ ಮದುವೆ ಗೊತ್ತಾಗಿದೆ. ಇದು ಎಂಟು ತಿಂಗಳ ಹಿಂದಿನ ವಿಷ್ಯ . ನಮ್ಮಫ್ರೆಂಡ್ ಅಣ್ಣ ಲಾಯರ್ ಅವರ ಕಡೆಯಿಂದ ಈ ವಿಷಯ ಗೊತ್ತಾಯ್ತು. ಈಗೇನೋ ನೀನು ಡೈವೋರ್ಸ್ ಕೊಡಬೇಕಂತೆ . ಹಾಗೆ ಸಿರೀನ ಹಾಸ್ಟೆಲ್ಗೆ ಸೇರಿಸೋ ಪ್ಲಾನ್ ಇದೆ ಅಂತಾನೂ ಹೇಳ್ತಿದ್ದರು. ರಮ್ಯಾ ಫೋಟೋ ನಾನೂ ನೋಡಿದ್ದೀನಿ ಅವಳು ಸುರ ಸುಂದರಿ ಅವಳ ಬಲೆಗೆ ಮನು ಬಿದ್ದು ಬಿಟ್ಟಿದ್ದಾರೆ . ಸಿರೀನ ನಿನ್ನ ಬಳಿ ಕರೆಸಿಕೋ ಡೈವೋರ್ಸ್ ಕೊಟ್ಟುಬಿಡು ಕೊಚ್ಚೆಯ ಜೊತೆ ಸರಸ ಬೇಡ"
ಶೈಲಾಳ ಕಣ್ಣಿಂದ ನೀರು ಧಾರಾಕಾರವಾಗಿ ಸುರಿಯುತ್ತಿತ್ತು. ವಿಕಾಸ್ ಅವಳನ್ನು ಎದೆಗೊರಗಿಸಿಕೊಂಡ .
" ವಿಕಿ ನಾನಿದನ್ನ ನಂಬಲ್ಲ ಮನು ಅಂತಹವರಲ್ಲ. ಅವರು ಆವತ್ತು ನನ್ನ ಕೈನಿಂದ ಸೈನ್ ಮಾಡಿಸಿಕೊಂಡಿದ್ದೇನೋ ನಿಜ ಆದರೆ ನನ್ನಾಸ್ತಿಗೋಸ್ಕರ ನಂಗೆ ಮೋಸ ಮಾಡೋರಲ್ಲ ಅವರು . ಅಂತೋರಲ್ಲ. " ಬಡಬಡಿಸುತ್ತಿದ್ದಳು
ಸಂಗೀತ ಹೇಳಿದ್ದು ನಿಜ ಎಂದು ಹೇಳುವ ಧೈರ್ಯವಾಗಲಿಲ್ಲ ವಿಕಾಸ್ಗೆ .
ಅವಳ ತಲೆ ನೇವರಿಸುತ್ತಲೇ
"ಏನಾದರಾಗಲಿ ಒಂದ್ಸಲ ಸಿರೀನ ನೋಡಿ ಬರೋಣ ಶೈಲಾ?" ನಿಧಾನಕ್ಕೆ ನುಡಿದ
ಬಿಕ್ಕಳಿಸುತ್ತಲೇ ಆಯಿತೆನ್ನುವಂತೆ ತಲೆ ಆಡಿಸಿದಳು
*******************ಮುಂದಿನ ಕಂತಿಗೆ ಮುಕ್ತಾಯ**************************************
ಒಳಗಡೆ ಶೈಲಾ ಕನವರಿಸುತ್ತಿದ್ದಳು
"ಮನು ನನ್ನ ಕ್ಷಮಿಸಿಬಿಡಿ. ನಾನು ನಿಮಗೆ ಮೋಸ ಮಾಡಿಬಿಟ್ಟೆ. ಅತ್ತೆ ನಂಗೂತ್ತು ನಿಮಗೆ ನನ್ನ ಮೇಲೆ ಕೋಪ ಬಂದಿದೆ ಅಂತ" ಮತ್ತೆ ಮತ್ತೆ ಅದೇ ಮಾತುಗಳನ್ನು ಉಚ್ಚರಿಸುತ್ತಿದ್ದಳು
ವಿಕಾಸ ತಲೆ ಚಿಟ್ಟು ಹಿಡಿದಂತಾಯಿತು
ಅಪ್ಪಯ್ಯನ ಮಾತುಗಳು ಕಿವಿಯಲ್ಲಿ ಪ್ರತಿಧ್ಚನಿಸಿತು
"ವಿಕಾಸ್ ನೀನು ಹೋಗುತ್ತಿರುವುದು ಮಾಯ ಜಿಂಕೆಯ ಹಿಂದೆ . ಹೆಣ್ಣು ಮಾಯೆ ಅದರಲ್ಲೂ ಕಟ್ಟಿಕೊಂಡ ಗಂಡನ್ನ ಬಿಟ್ಟು ನಿನ್ನ ಹಿಂದೆ ಬರುತ್ತೇನೆ ಅಂತಿರೋ ಆ ಹೆಂಗಸಿನ ಮನೋಭಾವ ಸರಿ ಇಲ್ಲ ಮುಂದೆ ತುಂಬಾ ತೊಂದರೆ ಅನುಭವಿಸಬೇಕಾಗುತ್ತೆ ಕಣೊ ಅವಳ ಬಾಳು ಚೆನ್ನಾಗಿರಲ್ಲ ಹಾಗೇನೆ ನಿನ್ನ ಬಾಳೂ ಅಷ್ಟೆ ನರಕ ನರಕ ಆಗುತ್ತೆ .ಅವಳಿಗಿಂತ ನೂರು ಪಟ್ಟು ಚೆನ್ನಾಗಿರೋ ಹುಡುಗೀನ ನಾನು ಹುಡುಕಿ ಮದುವೆ ಮಾಡ್ತೀನೆ ಅವಳನ್ನ ಬಿಟ್ಟು ಬಿಡು " ಅಪ್ಪ ಕೈ ಮುಗಿದ್ದಿದ್ದರು
ಅಮ್ಮ ಮಾತೇ ಆಡಲಿಲ್ಲ.
ಅಡುಗೆ ಮನೆ ಸೇರಿ ಮುಸು ಮುಸು ಅಳುತ್ತಿದ್ದರು
"ಇಲ್ಲ ಅಪ್ಪಯ್ಯಬರೀ ಹಣ , ರೂಪದಿಂದ ಅರಳಿದ ಪ್ರೀತಿ ಅಲ್ಲ. ನಾನು ಯೋಚಿಸಿ ಯೋಚಿಸಿ ತೆಗೆದುಕೊಂಡ ನಿರ್ಧಾರ. ಅದರಿಂದ ಹಿಂದೆ ಬರೋ ಯೋಚನೇನೆ ಇಲ್ಲ. ಸಾರಿ ಅವಳನ್ನ ನಿಮ್ಮ ಸೊಸೆ ಎಂದು ಸ್ವೀಕರಿಸುವುದಾದರೆ ಸ್ವೀಕರಿಸಿ ಇಲ್ಲವಾದರೆ ನಿಮಗೊಬ್ಬ ಮಗನಿದ್ದ ಎಂಬುದನ್ನ ಮರೆತು ಬಿಡಿ"
ಕಡ್ಡಿ ಎರೆಡು ಮಾಡಿದಂತೆ ಉತ್ತರಿಸಿ ತನ್ನ ಸೂಟ್ಕೇಸ್ ಹಿಡಿದು ಹೊರಬಂದವ ತಾನು
ಆದರೆ ಅಪ್ಪ ಹೇಳಿದ್ದೇ ನಿಜವೆನಿಸುತ್ತಿದೆ ಅಲ್ಲವಾ? ಶೈಲಾ ತನಗಾಗಿ ಮನುವನ್ನು ಬಿಟ್ಟುಬಂದಳು . ಆದರೆ ನಿಜಕ್ಕೂ ನಮ್ಮಲ್ಲಿ ಯಾರು ಸುಖವಾಗಿದ್ದಾರೆ? ನಾನಾ,ಶೈಲಾನಾ? ಇಲ್ಲಾ ಮನುವಾ? ಯಾರೂ ಇಲ್ಲ ಯಾರಿಗಾಗಿ ಈ ಬಾಳು ಯಾವ ಸಂತೋಷಕ್ಕಾಗಿ? ಮತ್ತೊಬ್ಬರ ಸಂತಸದ ಸಮಾಧಿಯ ಮೇಲೆ ಬಾಳು ಕಟ್ಟಿಕೊಂಡಂತಾಗಿ ಭೂತಕಾಲವೇ ಭೂತದಂತೆ ಕಾಡುತ್ತಿದೆಯಲ್ಲ.
ಹೀಗೇ ಮುಂದುವರೆದರೆ ಬದುಕು ನಿಜಕ್ಕೂ ನರಕವಾಗುತ್ತದೆ.
ಮಾಡುವುದೇನು?
??
ಪ್ರಶ್ನಾರ್ಥಕ ಚಿಹ್ನೆಗಳೇ ಅವನ ತಲೆಯಲ್ಲಿ ತುಂಬಿತು. ತಲೆ ಹಿಡಿದು ನಿಂತ
********************************************************
ವಾರವೆರೆಡು ಕಳೆಯಿತು . ಶೈಲಾ ಗುಣ ಮುಖಳಾದಳು ಆದರೆ ಮಾನಸಿಕವಾಗಿ ಮತ್ತಷ್ಟು ಮುದುಡುತ್ತಿದ್ದಳು . ತಾನು ಅಪರಾಧಿ
ಮನುವಿಗೆ ಮೋಸ ಮಾಡಿದೆ.ಅವನ ಮನಸನ್ನು ನೋಯಿಸಿದೆ ಎಂಬ ಭಾವನೆ ಮೂಡಿದಾಗಲೆಲ್ಲಾ ಅವಳು ಹುಚ್ಚು ಹಿಡಿದಂತಾಡುತ್ತಿದ್ದಳು. ವಿಕಾಸನ ಮೇಲೆ ವಿನಾಕಾರಣ ಕೋಪಿಸಿಕೊಳ್ಳುತ್ತಿದ್ದಳು. ವಿಕಾಸನಂತೂ ಸೋತು ಹೋಗಿದ್ದ. ಇತ್ತ ಕೆಲಸದಲ್ಲಿ ಒತ್ತಡ ಮನೆಯಲ್ಲಿ ಜಗಳ ತಪ್ಪಿದರೆ ಶೈಲಾಳ ಅಳು ಅವಳಿಗೆ ಸಾಂತ್ವಾನ ಹೇಳಿ ಹೇಳಿ ಸುಸ್ತಾಗಿದ್ದ. ಶೈಲಾ ಕೆಲಸವನ್ನು ಬಿಟ್ಟು ಮನೆಯಲ್ಲಿ ಕೂತಿದ್ದಳು. ಈ ಎಂಟು ತಿಂಗಳಲ್ಲಿ ಇದು ಎಂಟನೇ ಕೆಲಸ ಬಿಡುತ್ತಿರುವುದು. ಮಹಾರಾಣಿಯಂತಿದ್ದವಳಿಗೆ ಮತ್ತೊಬ್ಬರ ಆಳಾಗಿ ದುಡಿಯಲು ಕಷ್ಟವಾಗುತಿತ್ತು. ವಿಕಾಸನೇ ಕೆಲ್ಸ ಬಿಡಲು ಹೇಳಿದ್ದ
ಅಂದು ವಿಕಾಸನ ಮೊಬೈಲ್ ರಿಂಗಣಿಸಿತು
"ಹಲ್ಲೋ"
"ವಿಕಾಸ್ ಮನ್ವಂತರ್ ಹಿಯರ್. ಗೊತ್ತಾಯ್ತಾ?" ಅತ್ತಲಿಂದ ಮನುವಿನ ದ್ವನಿ ಕೇಳಿಸಿತು
ವಿಕಾಸ್ ಬಾಯಿ ತೆರೆದ ಆದರೆ ಶಬ್ಧ ಹೊರಡಲಿಲ್ಲ. ಗಲಿಬಿಲಿಯಾಗಿತ್ತು. ಏನು ಮಾತಾಡಬೇಕೆಂದು ಹೊಳೆಯಲಿಲ್ಲ. ಸುಮ್ಮನೇ ಇದ್ದ
"ವಿಕಾಸ್ . ನಾನು ನಿಮ್ಮ ಜೊತೆ ಮಾತಾಡಬೇಕು. "
"ಎಲ್ಲಿ ......................ಬರಬೇಕು... ಅಂತ ಹೇಳಿದರೆ ............" ವಿಕಾಸ್ ಒಂದೊಂದೇ ಪದಗಳನ್ನು ಉರುಳಿಸಿದ
ಮನು ಅತ್ತಲಿಂದ ಹೇಳಿದ
ಯಾಕಿರಬಹುದು? ಫೋನಿಟ್ಟ ಮೇಲೆ ತನ್ನಂತಾನೆ ಪ್ರಶ್ನಿಸಿಕೊಂಡ.
ಪ್ರಶ್ನೆಗೆ ನೂರಾರು ಉತ್ತರಗಳು ಧುಮ್ಮಿಕಿದವು
ಊಹೆಗಳ ಸರಮಾಲೆ ಅನಂತ ದೂರದವರೆಗೆ ಎಳೆಯಲಾರಂಭ್ಸಿಸಿತು
ಇನ್ನೂ ಯೋಚಿಸುವುದರಲ್ಲಿ ಅರ್ಥವಿಲ್ಲ ಎಂದನಿಸಿ ಆ ಯೋಚನೆಗಳ ಪರಿಧಿಯಿಂದ ಹೊರಬಂದ . ಹೇಗಿದ್ದರೂ ಇಂದು ಸಂಜೆ ಗೊತ್ತಾಗುತ್ತದೆಯಲ್ಲ ಎಂದು ನಿರಾಳನಾದ
**************************************************
ಮನೆಯಲ್ಲಿ ಕೂತು ನೆಟ್ನಲ್ಲಿ ನೋಟ ಹರಿಸುತ್ತಿದ್ದಳು ಶೈಲಾ. ಮನಸೆಲ್ಲಾ ಬರೀ ಯೋಚನೆಗಳೇ
ಅಲ್ಲ ತನ್ನ ಮನದಾಸೆಯನ್ನ ಹೇಳದೆ ಅವನೇ ತಿಳಿದುಕೊಂಡನಲ್ಲ ಮನು. ಅವನು ಅಷ್ಟು ಒಳ್ಳೆಯವನಾಗಿರಬಾರದಿತ್ತು ಅವನ ಒಳ್ಳೇಯತನ ತನ್ನನ್ನು ಬೆಂಕಿಯಂತೆ ಸುಡುತ್ತಿದೆಯಲ್ಲಾ. ಅತ್ತೆಯೂ ಅಷ್ಟೆ ಒಂದೂ ಕೆಟ್ಟ ಮಾತು ಆಡಲಿಲ್ಲ
ಆ ದಿನ ಇನ್ನೂ ನೆನಪಿದೆ.
ಮನು ಅಂದು ಪಕ್ಕದಲ್ಲಿ ಬಂದು ಕೂತು ಕೈ ಹಿಡಿದ
ಹಾವು ಮುಟ್ಟಿದಂತೆ ದೂರ ಸರಿದಳು ಶೈಲಾ. ಏನೋ ಕೆಲಸವಿರುವಂತೆ ರೂಮಿನಿಂದ ಹೊರ ನಡೆಯುತ್ತಿದ್ದವಳನ್ನ ಮನುವಿನ ಮಾತು ತಡೆಯಿತು
"ಶೈಲೂ ನಂಗೆಲ್ಲಾ ಗೊತ್ತಾಯ್ತು"
ಶೈಲಾ ಹೆಜ್ಜೆ ಕದಲಿಸಲಿಲ್ಲ . ಹಿಂದೆ ತಿರುಗಲಿಲ್ಲ . ಮುಂದೇನು ಹೇಳುತ್ತಾನೋ ಎಂಬ ಭಯ ಹುಟ್ಟಲಾರಂಭಿಸಿತು.
" ಶೈಲಾ ನಿಂಗೇನು ಇಷ್ಗ್ಟಾನೋ ಅದನ್ನ್ಲೆಲ್ಲಾ ನಾನು ನಿಂಗೆ ಕೊಟ್ಟಿದ್ದೇನೆ. ನಿನ್ನಾವ ಆಸೇನೂ ಬೇಡ ಅಂತ ಹೇಳಿಲ್ಲ. ಆದರೆ ಈ ಒಂದು ಆಸೆ ಈಡೇರಿಸೋದು ಕಷ್ಟ . ಯಾಕೆಂದರೆ ಇದು ಕೇವಲ ನಿನ್ನೊಬ್ಬಳ ಬಾಳಿನ ಪ್ರಶ್ನೆ ಅಲ್ಲ. ನಮ್ಮೆಲಾರ ಸಂತೋಷಾನೂ ಇದರಲ್ಲಿ ಅಡಗಿದೆ. ವಿಕಾಸ್ ನಿನಗೆ ಏಕಿಷ್ಟ ಆದ ಹೇಗೆ ಇಶ್ಟ ಆದ ಅನ್ನೋದನ್ನ ನಾನು ಕೇಳೋದಿಲ್ಲ ನಾನು ಹೇಳಿದ್ದನೆಲ್ಲಾ ನೆನೆಸಿಕೊಂಡು ಒಂದ್ಸಲ ಯೋಚನೆ ಮಾಡು. ಆಮೇಲೂನಿನಗೆ ನೀನು ಮಾಡುತ್ತಿರೋದೇ ಸರಿ ಎಂದನಿಸಿದರೆ ನಿನ್ನಾಸೆ ಪ್ರಕಾರಾನೇ ಮಾಡು"
ಸಿಡಿ ಮಿಡಿಗೊಳ್ಳುವಂತಾಯಿತು. ಮಾತಾಡದೆ ಹೊರಗಡೆ ಬಂದಳು.
ಎಲ್ಲರ ಸಂತೋಷಕ್ಕಾಗಿ ತಾನೇಕೆ ತ್ಯಾಗ ಮಾಡಬೇಕು. ತಾನಿದ್ದರೇ ತಾನೆ ಎಲ್ಲರೂ?
ತನಗೆ ಇಷ್ಟವಿರುವವರನ್ನು ಆರಿಸಿಕೊಳ್ಳುವ ಹಕ್ಕು ತನಗೂ ಇದೆ.
ವಿಕಾಸ್ ಜೊತೆ ಬಾಳು ಉಲ್ಲಾಸದಾಯಕವಾಗಿರುತ್ತದೆ
ಹೀಗೆ ಅವಳ ಹೆಜ್ಜೆಯನ್ನು ಸಮರ್ಥಿಸಿಕೊಳ್ಳಲು ಸಾವಿರಾರು ಕಾರಣಗಳು ಅವಳ ಮುಂದೆ ಸುಳಿದವು
ಕೂಡಲೆ ವಿಕಾಸನಿಗೆ ಫೋನ್ ಮಾಡಿದಳು. ಮನುವಿಗೆ ಗೊತ್ತಾಗಿದೆ ಎಂದೂ ಅವನು ಹೇಳಿದ್ದನ್ನೂ ತಿಳಿಸಿದಳು
ಕೂಡಲೆ ಹೊರಟು ಬರುವಂತೆ ಹೇಳಿದ. ಉಟ್ಟಬಟ್ಟೆಯಲ್ಲಿ ಬರುವಂತೆ ಹೇಳಿದ
ಇನ್ನೇನು ಹೊರಡಬೇಕು ಅಷ್ಟ್ರಲ್ಲಿ ಸಿರಿ ಬಂದು ಕೈ ಎಳೆದಳು.
ಅವಳನ್ನು ಕರೆದುಕೊಂಡು ಹೋಗಬೇಕು ಅನ್ನಿಸಿತಾದರೂ ತನ್ನ ಬದುಕೇ ಇನ್ನೂ ಅಸ್ಥಿರವಾಗಿರುವಾಗ ಅವಳೂ ಒಂದು ಪ್ರಶ್ನಾರ್ಥಕ ಚಿನ್ಹೆಯಾಗಬಹುದೆನಿಸಿತು.
ರೂಮಿನಲ್ಲಿ ಸಿರಿಯನ್ನು ಮಲಗಿಸಿ ಕೊಂಚಹೊತ್ತಾದ ಮೇಲೆ ಮಹಡಿಯಿಂದ ಕೆಳಗಿಳಿದು ಬಾಗಿಲ ಬಳಿ ಹೋಗುತ್ತಿದ್ದಂತೆ ಎದುರು ಬಂದ ಮನುವನ್ನು ಕಂಡು ಬೆಚ್ಚಿದಳು. ಮನು ತುಟಿಯಲ್ಲಿ ವಿಷಾದದ ನಗು. ತಪ್ಪಿತಸ್ತಳಂತೆ ನೆಲ ನೋಡುತ್ತಾ ನಿಂತಳು
"ಶೈಲಾ ಕೊನೆಗೂ ನಮ್ಮನ್ನೆಲ್ಲಾ ಬಿಟ್ಟು ಹೋಗಬೇಕೆಂದು ನಿರ್ಧರಿಸಿದೆಯಾ?"
ಶೈಲಾ ಮಾತಾಡಲಿಲ್ಲ. ತಲೆಯನ್ನೂ ಮೇಲೆತ್ತಲಿಲ್ಲ . ಕೊಂಚ ಹೊತ್ತಿನ ನಂತರ ನಿಟ್ಟುಸಿರಿನ ಸದ್ದು ಕೇಳಿತು
"ಸರಿ ಶೈಲಾ ಯು ಮೇ ಗೋ." ತಾನೆ ಮುಂದಾಗಿ ಬಾಗಿಲು ತೆರೆದ
ಶೈಲಾ ಮೊಗದಲ್ಲಿ ಆಶ್ಚರ್ಯ ಗೊಂದಲಗಳು ಒಮ್ಮೆಗೇ ಮೇಳೈಸಿದವು.
ಕಾಲುಗಳು ಮುಂದೆ ಹೊರಡಲು ಮುಷ್ಕರ ಹೂಡಿದವು.
ಭಾರವಾದ ಹೆಜ್ಜೆಗಳನ್ನು ನೆಲದಿಂದ ಬೇರೆ ಮಾಡುತ್ತಿದ್ದಂತೆ ಅವಳ ಮನಸಿನಿಂದ ಮನುವಿನ ಚಿತ್ರ ದೂರವಾಗತೊಡಗಿತು.
ಗೇಟಿನ ಬಳಿಯಲ್ಲೇ ನಿಂತಿದ್ದ ವಿಕಾಸ್ ಮುಂದೆ ಮನು ಹಾಗು ಹಿಂದೆ ಶೈಲಾನ ನೋಡಿ ಅವಕ್ಕಾದ . ಇನ್ನೇನು ಕಾದಿದೆಯೋ ಎಂಬ ಯೋಚನೆಯೊಂದಿಗೆ ಮುಂದಾಗುವುದಕ್ಕೆ ಸಿದ್ದನಾದ.
ಕೊನೆಗೂ ಮನು ಹೊರಗೆ ಬಂದ ಶೈಲಾ ಜೊತೆಗೆ.
ವಿಕಾಸ್ನ ಉಸಿರು ನಿಂತೇ ಹೋಯಿತೇನೋ ಎನ್ನುವಷ್ಟು ನಿಧಾನವಾಯ್ತು.ವಿಕಾಸನನ್ನು ನೋಡಿ ಒಮ್ಮೆ ನಕ್ಕ ಮನು. ಆ ನಗುವಿನ ಭಾವವಾವುದೋ ತಿಳಿಯಲಿಲ್ಲ ವಿಕಾಸ್ಗೆ. ನಗುವ ಪ್ರಯತ್ನ ಮಾಡಿದ . ಆದರೆ ಮುಖ ನಗಲಾರೆ ಎಂದು ನಕಾರ ಮಾಡಿತು. ಇದೇನು ಈ ಮನುಷ್ಯ . ಹೆಂಡತಿಯನ್ನು ಮತ್ತೊಬ್ಬನಿಗೆ ಒಪ್ಪಿಸುವಾಗಲೂ ನಗುವೇ? ಶೈಲಾಗಾಗಲಿ ವಿಕಾಸನಿಗಾಗಲಿ ಅರ್ಥವೇ ಆಗಲಿಲ್ಲ
ಯಾವ ಮಾತನ್ನೂ ಆಡದೆ ವಿಕಾಸನ ಬಳಿ ಶೈಲಾಳನ್ನು ಬಿಟ್ಟು ಮತ್ತೆ ಗೇಟಿನ ಒಳಗೆ ನಿಂತ
ವಿಕಾಸ್ನ ಬೈಕ್ ಏರಿದಳು ಶೈಲಾ
ಬೈಕ್ ಸ್ಟಾರ್ಟ್ ಮಾಡುತ್ತಿದ್ದಂತೆ ಮನು ಕೈ ಬೀಸಿದ ಅವನ ಕಣ್ಣಲ್ಲಿದ್ದ ನೀರು ಬೇಡವೆಂದರು ಹೊರಗೆ ಬರುವುದನ್ನು ಅವನಿಂದ ಬಚ್ಚಿಡಲಾಗಲಿಲ್ಲ.
ಆ ದೃಶ್ಯ ನೂತನ ಜೋಡಿಗಳ ಮನಸಲ್ಲಿ ಅಚ್ಚಳಿಯದೇ ನಿಂತು ಬಿಟ್ಟಿತು.
****
ಮತ್ತದೇ ದೃಶ್ಯ ಮನಸಲ್ಲಿ ಪುನಾರವರ್ತನೆಯಂತಾಗಿ ಶೈಲಾ ಮಂಚಕ್ಕೆ ಒರಗಿದಳು
--------------------------------------------------------------------
ಅಂದು ಸಂಜೆ ಮನುವನ್ನು ಭೇಟಿಯಾಗಿ ಬರುತ್ತಿದ್ದಂತೆ ವಿಕಾಸ್ ಕುದಿಯುತ್ತಿದ್ದ. ಅಬ್ಬಾ ಈ ಮನುಷ್ಯ ಇಂತಹವನೇ? ಅವನ ಮಾತುಗಳು ಮತ್ತೆ ಮತ್ತೆ ಕಿವಿಯನ್ನು ತೂತು ಮಾಡುತ್ತಿತ್ತು
"ವಿಕಾಸ್ ಪರವಾಗಿಲ್ಲ ಹಳಸಲಾದರೂ ಪಕ್ವಾನ್ನದಂತೆ ನೋಡ್ಕೋತಿದ್ದೀಯಂತೆ. ನೋಡ್ಕೋ ನೋಡ್ಕೋ ನೀನುಂಟು ನಿನ್ನ ಹೊಸ ಹೆಂಡತಿ ಅಂದ್ರೆ ನನ್ನ ಹಳೇ ಹೆಂಡತೀ ಉಂಟು . ನಂಗೂ ಅವಳ ಜೊತೆ ಇದ್ದು ಅದೇ ಹಳೇದನ್ನ ತಿಂದೂ ತಿಂದೂ ಬೇಜಾರಾಗಿ ಹೋಗಿತ್ತು. ಅದಕ್ಕೆ ಅವಳು ಹೋಗ್ತೀನಿ ಅಂದ ಕೂಡಲೇ ಅವಳನ್ನ ಓಡಿಸಿ ಬಿಟ್ಟೆ" ಒಳ್ಳೇ ಖಳನಾಯಕನಂತೆ ನಕ್ಕ
ವಿಕಾಸನ ತಲೆ ಗಿರ್ರೆ ಂ ದಿತು
ಇದೇನು ಇಂತಹ ಮಾತು
" ಅಂದಹಾಗೆ ನಾನಿಲ್ಲಿ ನಿನ್ನ ಕರೆದದ್ದು ನಿನ್ನ ಲವರ್ಗೆ ಹೇಳಿ ನಂಗೆ ಡೈವೋರ್ಸ್ ಕೊಡೋದಿಕ್ಕೆ ಹೇಳು ಅಂತ ಹೇಳೋಕೆ ನಂದೂ ಉಪ್ಪು ಹುಳಿ ತಿಂದ ದೇಹ ನಾನೂ ಬೇರೆ ಮದುವೆ ಮಾಡ್ಕೋಬೇಕು. ಈಗಾಗಲೆ ಹೆಣ್ಣು ಗೊತ್ತಾಗಿದೆ . ಮದುವೆ ಮಾತ್ರ ಬಾಕಿ. ಆಮೇಲೆ ಆ ಸಿರೀನ ಕರೆದುಕೊಂಡು ಹೋಗೋಕೆ ಹೇಳು. ನಂಗೂ ಒಳ್ಳೆಯವನ ಥರಾ ನಟಿಸಿ ನಟಿಸೀ ಬೇಜಾರಾಗಿ ಹೋಗಿದೆ. " ತನ್ನ ಜೋಕಿಗೆ ತಾನೆ ನಕ್ಕು ಎದ್ದು ತನ್ನ ಕಾರಿನಲ್ಲಿ ಕೂತ ಮನು ವಿಕಾಸನ ಮರು ಮಾತಿಗೆ ಕಾಯಲೂ ಇಲ್ಲ
ವಿಕಾಸನಿಗೆ ದಿಗ್ಬ್ರಮೆಯಾಗಿತ್ತು ಇದನ್ನೆಲಾ ಹೇಳಿದರೆ ನಂಬುತ್ತಾಳೇಯೇ ಶೈಲಾ.
ತಲೆ ಚಿಟ್ಟು ಹಿಡಿದಂತಾಗಿ ಮನೆಗೆ ಬಂದು ಕೂತವನಿಗೆ ಮುಸಿ ಮುಸಿ ಅಳುತ್ತಿದ್ದ ಶೈಲಾ ಕಂಡಳು.
"ಯಾಕೆ ಶೈಲಾ ಏನಾಯ್ತು ? "ಗಾಭರಿಯಾಗಿ ಕೇಳಿದವನಿಗೆ
ತನ್ನ ಮುಂದೆ ಇದ್ದ ಕಂಪ್ಯೂಟರ್ ಪರದೆಯ ಕಡೆಗೆ ಕೈ ತೋರಿದಳು
ಅವಳು ತೋರಿದತ್ತ ನೋಡಿದ
ಅದು ಸಂಗೀತಾ ಮೇಲ್.
"ಶೈಲಾ ಒಮ್ಮೊಮ್ಮೆ ನಮಗೆ ಗೊತ್ತಿಲ್ಲದ ಹಾಗೆ ವಿಧಿ ನಮ್ಮನ್ನ ಸರಿಯಾದ ದಿಕ್ಕಿಗೆ ಕರೆದುಕೊಂಡು ಹೋಗಿರುತ್ತೆ. ನಿನ್ನ ವಿಷಯದಲ್ಲೂ ಹಾಗೇನೆ ಆಗಿದೆ. ಆವತ್ತು ನೀನು ಮನುವನ್ನು ಬಿಟ್ಟು ಬಿಡ್ತೀನಿ ಅಂತಂದಾಗ ನಾನು ಚೆನ್ನಾಗಿ ಬೈದಿದ್ದೆ. ಆದರೆ ನೀನು ಮಾಡಿದ್ದೇ ಸರಿ . ಮನು ನಿಜವಾದ ಬಣ್ಣ ನನಗೆ ನೆನ್ನೆ ಗೊತ್ತಾಯ್ತು . ಮನು ನಿನ್ನ ತಂದೆ ಫ್ಯಾಕ್ಟರಿನ ನಿನ್ನ ಹೆಸರಿಂದ ತನ್ನ ಹೆಸರಿಗೆ ಮಾಡಿಕೊಂಡಿದ್ದಾನಂತೆ. ಅದಕ್ಕಾಗೇ ಅವನಿಗೆ ನಿನ್ನ ಅವಶ್ಯಕತೆ ಇರಲಿಲ್ಲ ಹೇಗೋ ಮಾಡಿ ನಿನ್ನನ್ನ ಸಾಗ ಹಾಕಿದರೆ ಸಾಕು ಅನ್ನೋ ಯೋಚನೆ ಇತ್ತಂತೆ . ಅವನಿಗೆ ಈಗಾಗಲೇ ಶ್ಯಾಮಲಾ ಗ್ರೂಪ್ ಆಫ್ ಕಂಪನಿಯ ಚೇರ್ಮನ್ ಮಗಳು ರಮ್ಯಾ ಜೊತೆ ಮದುವೆ ಗೊತ್ತಾಗಿದೆ. ಇದು ಎಂಟು ತಿಂಗಳ ಹಿಂದಿನ ವಿಷ್ಯ . ನಮ್ಮಫ್ರೆಂಡ್ ಅಣ್ಣ ಲಾಯರ್ ಅವರ ಕಡೆಯಿಂದ ಈ ವಿಷಯ ಗೊತ್ತಾಯ್ತು. ಈಗೇನೋ ನೀನು ಡೈವೋರ್ಸ್ ಕೊಡಬೇಕಂತೆ . ಹಾಗೆ ಸಿರೀನ ಹಾಸ್ಟೆಲ್ಗೆ ಸೇರಿಸೋ ಪ್ಲಾನ್ ಇದೆ ಅಂತಾನೂ ಹೇಳ್ತಿದ್ದರು. ರಮ್ಯಾ ಫೋಟೋ ನಾನೂ ನೋಡಿದ್ದೀನಿ ಅವಳು ಸುರ ಸುಂದರಿ ಅವಳ ಬಲೆಗೆ ಮನು ಬಿದ್ದು ಬಿಟ್ಟಿದ್ದಾರೆ . ಸಿರೀನ ನಿನ್ನ ಬಳಿ ಕರೆಸಿಕೋ ಡೈವೋರ್ಸ್ ಕೊಟ್ಟುಬಿಡು ಕೊಚ್ಚೆಯ ಜೊತೆ ಸರಸ ಬೇಡ"
ಶೈಲಾಳ ಕಣ್ಣಿಂದ ನೀರು ಧಾರಾಕಾರವಾಗಿ ಸುರಿಯುತ್ತಿತ್ತು. ವಿಕಾಸ್ ಅವಳನ್ನು ಎದೆಗೊರಗಿಸಿಕೊಂಡ .
" ವಿಕಿ ನಾನಿದನ್ನ ನಂಬಲ್ಲ ಮನು ಅಂತಹವರಲ್ಲ. ಅವರು ಆವತ್ತು ನನ್ನ ಕೈನಿಂದ ಸೈನ್ ಮಾಡಿಸಿಕೊಂಡಿದ್ದೇನೋ ನಿಜ ಆದರೆ ನನ್ನಾಸ್ತಿಗೋಸ್ಕರ ನಂಗೆ ಮೋಸ ಮಾಡೋರಲ್ಲ ಅವರು . ಅಂತೋರಲ್ಲ. " ಬಡಬಡಿಸುತ್ತಿದ್ದಳು
ಸಂಗೀತ ಹೇಳಿದ್ದು ನಿಜ ಎಂದು ಹೇಳುವ ಧೈರ್ಯವಾಗಲಿಲ್ಲ ವಿಕಾಸ್ಗೆ .
ಅವಳ ತಲೆ ನೇವರಿಸುತ್ತಲೇ
"ಏನಾದರಾಗಲಿ ಒಂದ್ಸಲ ಸಿರೀನ ನೋಡಿ ಬರೋಣ ಶೈಲಾ?" ನಿಧಾನಕ್ಕೆ ನುಡಿದ
ಬಿಕ್ಕಳಿಸುತ್ತಲೇ ಆಯಿತೆನ್ನುವಂತೆ ತಲೆ ಆಡಿಸಿದಳು
*******************ಮುಂದಿನ ಕಂತಿಗೆ ಮುಕ್ತಾಯ**************************************
Subscribe to:
Posts (Atom)
