Sunday, March 29, 2009

ಗುಣಕ್ಕೆ ಧರ್ಮವಾವುದಯ್ಯ?

"ಹೇಮಂತ್. ಇವತ್ತು ಬರ್ತಾ ಅನೂಪ್‌ನೂ ಕರೆದುಕೊಂಡು ಬಾ" ಓವನಿಂದ

ಪಾತ್ರೆ ತೆಗೆಯುತ್ತಾ ಹೇಳಿದರು ಸುಮಾ

"ಯಾಕಮ್ಮ?" ಹೇಮಂತ್‌ನ ಪ್ರಶ್ನೆ

ಹೇರ್ ಡ್ರೈಯರ್ ನಿಂದ ಒಣಗಿಸಿಕೊಳ್ಲುತ್ತಿದ್ದಂತೆ ನಿಲ್ಲಿಸಿದಳು ಶೈಲಾ.ಮುಖದ ಬಣ್ಣಬದಲಾಯಿತು

"ಎಲ್ಲಾ ಹೇಳಿಬಿಡೋಣ . ಅವನಿಂದ ಯಾವುದನ್ನೂ ಮುಚ್ಚಿಡೋದು ಬೇಡ" ಗಂಭೀರವಾಗಿ ಹೇಳಿದರು

"ಅಮ್ಮಾ ಹೇಳೋದೇನೂ ಬೇಡಮ್ಮಾ . ಆಮೇಲೆ ಅನೂಪ್ ಒಪ್ಪಲಿಲ್ಲಾ ಅಂದರೆ? " ಸಿರೀಶ್ ಆತಂಕ ಪಟ್ಟ್

"ಇಲ್ಲಾ ಹೇಮಂತ್. ಈ ವಿಚಾರಗಳಲ್ಲಿ ಸುಳ್ಳು ಹೇಳೋದು ಬೇಡ. ಮದುವೆಯ ನಂತರ ಗೊತ್ತಾದ್ರೆ ಕಷ್ಟ"

"ಅಮ್ಮಾ ಹೀಗೆ ಆಗ್ತಾ ಹೋದ್ರೆ ಶೈಲಾ ಮದುವೇನೆ ಆಗಲ್ಲ ಅನ್ನಿಸುತ್ತೆ . ನಾವು ಹೇಗಿದ್ರೂ ಆ ಊರಿನಿಂದ ಬಂದಿದೀವಿ. ಯಾರಿಗೆ ಹೇಗೆ ಗೊತ್ತಾಗುತ್ತೆ"

ಶೈಲಾ ಅಳಲಾರಂಭಿಸಿದಳು

ತನ್ನ ಗತಕಾಲ ನೆನಪಿಗೆ ಬಂತೇನೋ .

ಹೇಮಂತ್ ತಂಗಿಯನ್ನು ಎದೆಗೊರಗಿಸಿಕೊಂಡ.ಸೀರೀಶ್ ಅವಳ ತಲೆ ನೇವರಿಸಿದ

"ಶೈಲಾ . ಅಳಬೇಡ ಈ ಸಲ ನೋಡೋಣ ನಿನ್ನ ಮೆಚ್ಚಿರೋ ಹುಡುಗ ಅಲ್ವ್ ಆ ಅವನು ಒಪ್ಪಿಕೋತಾನೆ ಅಂತನ್ನಿಸ್ತಿದೆ" ಸಮಾಧಾನಿಸಿದ

"ಇಲ್ಲ ಅಣ್ಣ ನಂಗೆ ಮದುವೇನೆ ಬೇಡ. ಎಲ್ರೆದುರಿಗೂ ಸತ್ಯ ಹೇಳೋದು ಅವರು ಬೇಡ ಅನ್ನೋದು . ನಂಗೆ ಬೇಜಾರಾಗಿ ಹೋಗಿದೆ" ಮತ್ತಷ್ಟು ಜೋರಾಗಿ ಅಳುತ್ತ್ತಾ ಹೇಳಿದಳು

ಆದರೆ ಸುಮಾರ ನಿರ್ಧಾರ ಬಲವಾಗಿತ್ತು

"ಶೈಲಾ ಈ ವಿಷಯ ಬಹಳ ಸೂಕ್ಷ್ಮ .ಸತ್ಯ ಹೇಳೋದ್ರಲ್ಲಿ ತಪ್ಪೇನೂ ಇಲ್ಲ. "

"ಹೇಮಂತ್ ನೀನು ಸಂಜೆ ಕರ್ಕೊಂಡು ಬಾ"

"ಆಯ್ತಮ್ಮ"

ಶೈಲಾ ಕೆಲಸಕ್ಕೆ ಹೋಗಲಿಲ್ಲ.

ಮನದ ತುಂಬಾ ಹಿಂದಿನ ಅಸ್ಪಷ್ಟ ನೆನಪುಗಳು.

ಯಾವುದೂ ಸರಿಯಾಗಿ ಅರಿವಾಗುತ್ತಿರಲಿಲ್ಲ

ಆದರೆ ಅಮ್ಮ ಅವಳು ವಯಸಿಗೆ ಬಂದಾಗಲೇ ಎಲ್ಲವನ್ನೂ ವಿವರಿಸಿದ್ದರು
ಹಾಗಾಗಿಯೇ ಅವಳಿಗೆ ತಿಳಿಯಲು ಸಾಧ್ಯವಾಗಿದ್ದು

ಇತ್ತ ಸುಮಾ ಬಾಲ್ಕನಿಯಲ್ಲಿ ಕುಳಿತರು



ಹದಿನೇಳು ವರ್ಷದ ಹಿಂದಿನ ಆ ನೆನಪುಗಳು ಕಾಡತೊಡಗಿದವು



೧೯೯೨ ಜನವರಿ



ತಬಸ್ಸಮ್ ಮೂಲೆಯಲ್ಲಿ ಕುಳಿತು ಅಳುತ್ತಿದ್ದಳು. ಚಿಕ್ಕ ಮಗು ಇನ್ನೂ ಐದು ವರ್ಷವೂ ಪೂರ್ತಿಯಾಗಿಲ್ಲ. ಈಗಷ್ಟೆ ಹಾಕಿದ್ದ ಮಾಲೆಯಲ್ಲಿ ರವಿ ಫೋಟೋದಲ್ಲಿ ನಗುತ್ತಿದ್ದರು.ಇನ್ನೂ ದೀಪವೂ ಆರಿಲ್ಲ.

ಈ ಡಿಸೆಂಬರ್ ಆರು ಬಾಬ್ರಿ ಮಸೀದಿ ಉರುಳಿದ ದಿನ ಆದರೆ ಅದು ಕೇವಲ ಬಾಬ್ರಿ ಮಸೀದಿಯ ದ್ವಂಸವಾಗಿರಲಿಲ್ಲ . ಸುಮಾ ಹಾಗು ಅವಳಂತಹ ಎಷ್ಟೋ ಜನರ ಮಾಂಗಲ್ಯ, ತಬಸಮ್ ಹಾಗು ಅವಳಂತಹ ಎಷ್ಟೋ ಜನರ ತಂದೆ ತಾಯಿ, ಅಣ್ಣ ತಂಗಿ ತಮ್ಮ ,ಸುಖ ಶಾಂತಿ, ನೆಮ್ಮಧಿಗಳ ಸಮಾಧಿಯಾಗಿತ್ತು.

ಎಲ್ಲೋ ನಡೆದ ಪರಸ್ಪರ ಕಚ್ಚಾಟ ನೆಮ್ಮದಿಯಿಂದ ಬಾಳುತ್ತಿದ್ದ ಸುಮಾ ಹಾಗು ಅವಳ ಪಕ್ಕದ ಮನೆಯಲ್ಲಿಯೇ ಇದ್ದ ಪ್ರೀತಿ ಹಾಗುಇಸ್ಮಾಯಿಲ್ ರವರ ಬದುಕಿಗೆ ರಾಡಿ ಎಬ್ಬಿಸಿತು

ಸುಮಾ ಮನೆಯ ಪಕ್ಕದಲ್ಲಿಯೇ ಆ ಸಂಸಾರ ಬಂದಿತ್ತು ಒಂದು ಆರು ವರ್ಷಗಳಾಗಿದ್ದವೇನೋ .

ಅವರಿಬ್ಬರದು ಪ್ರೇಮ ವಿವಾಹ.

ಹಾಗಾಗಿ ಅವರ ಮನೆಗೆ ಎರೆಡೂ ಕಡೆಯಿಂದಲೂ ನೆಂಟರು ಬರುತ್ತಿರಲಿಲ್ಲ.

ಆದರು ಅವರಿಬ್ಬರದು ಆದರ್ಶ ದಾಂಪತ್ಯವೆನಿಸಿತ್ತು

ಸುಮಾಗೆ ಪ್ರೀತಿ ಬಹಳ ಮೆಚ್ಚಿನವಳಾಗಿದ್ದಳು.

ಪ್ರೀತಿಯ ಬಾಣಂತನವನ್ನು ಮಾಡಿದ್ದು ಸುಮಾಳೇ
ಸುಮಾಗೆ ಈಗಾಗಲೆ ಇಬ್ಬರು ಮಕ್ಕಳಿದ್ದರು. ರವಿಯ ಜೊತೆಯಲ್ಲಿ ನೆಮ್ಮದಿಯಿಂದ ಬದುಕುತ್ತಿದ್ದರು
ಬದುಕಿಗೆ ಬೆಂಕಿ ಬಿದ್ದುದ್ದು ಆ ಡಿಸೆಂಬರ್ ನಲ್ಲಿಯೇ.
ಅಂದು ಬಾಬ್ರಿ ಮಸೀದಿ ಉರುಳಿಸಿದರೆಂಬ ಸುದ್ದಿ ಹಬ್ಬಿದ ಹಿಂದೆಯೇ
ಹಲವಾರು ಕೊಲೆಗಳು ನಡೆದವು
ಅದರಲ್ಲಿಯೇ ರವಿಯ ಮರಣವೂ ಆಗಿತ್ತು
ತಬಸ್ಸಮ್ ಅನ್ನು ಮನೆಯಲ್ಲಿ ಸುಮಾಳ ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗಿದ್ದ ಪ್ರೀತಿ ಹಾಗು ಇಸ್ಮಾಯಿಲ್ ಸಹಾ ದುರುಳರ ದಾಳಿಗೆ ಬಲಿಯಾದರು.
ಹೇಮಂತ್ ಹಾಗು ಸಿರೀಶ್‌ಗೆ ಸುಮಾ ಇದ್ದಳು. ಅವರ ಅಜ್ಜಿ ಇದ್ದರು ಆದರೆ ತಬಸ್ಸಮ್ ? ತಬಸ್ಸಮ್ ಅನಾಥಳಾಗಿದ್ದಳು/
ಎಲ್ಲಿ ಬಿಡುವುದು .
ಆ ಹದಿನೈದು ದಿನ ತಬಸ್ಸಮ್ ಸುಮಾ ಮನೆಯಲ್ಲಿಯೇ ಇದ್ದಳು. ತನ್ನ ಮಗನ ಮರಣ ಮುಸಲ್ಮಾನರಿಂದಲೇ ಆಯಿತೆಂಬ ದಳ್ಳುರಿಗೆ ಸುಮಾಳ ಅತ್ತೆ ಆ ಮಗುವನ್ನು ಪ್ರತಿ ದಿನ ಬೈಯ್ಯುತ್ತಿದ್ದರು. ಪುಟ್ಟ ಮಗು ಕಂಗಾಲಾಗಿ ಹೋಗಿತ್ತು
ಅಂದು ಮನೆಯಲ್ಲಿ ರಣರಂಗವೇ ಆಗಿತ್ತು
"ಸುಮಾ ಈ ಅನಿಷ್ಟಾನ ಎಲ್ಲಾದರೂ ಅನಾಥಾಶ್ರಮದಲ್ಲಿ ಬಿಟ್ಟು ಬಿಡು. ಸಾಕು ನೋಡಿಕೊಂಡಿದ್ದು"
ಸುಮಾಳ ಮನಸ್ಸು ವಿಹಲ್ವವಾಗಿತ್ತು
ಆ ಮಗುವನ್ನು ಹಾಗೆ ಬಿಟ್ಟು ಬಿಡಲು ಮನಸ್ಸು ಬರಲಿಲ್ಲ.ಸುಮಾ ಹೃದಯ ಗಟ್ಟಿ ಮಾಡಿಕೊಂಡು ನುಡಿದಳು
"ಅತ್ತೆ ತಬಸ್ಸಮ್ ‌ನ ನಾನು ದತ್ತು ತಗೋಳ್ನ ಅಂತಿದೀನಿ"

"ಅಯ್ಯೋ ! ನಿಂಗ್ಯಾಕೆ ಈ ಕೆಟ್ಟ ಬುದ್ದಿ ಬಂತು . ಮನೆ ಹಾಳು ಮಾಡಿದವರ ಮನೆ ಬೆಳಗೋಕೆ ಹೋಗ್ತೀದ್ದೀಯಲ್ಲಾ"
ಅತ್ತೆ ಕಿರುಚಿದರು
"ನಾನಿನ್ನು ಈ ಮನೆಲಿ ಒಂದರೆ ಘಳಿಗೇನೂ ಇರೋದಿಲ್ಲ . ನನ್ನ ಮಗನ ಜೊತೇನೆ ನಾನು ಹೋಗಿದ್ರೆ ಚೆನ್ನಾಗಿರ್ತಿತ್ತೇನೋ. "
ಅವರ ಗೊಣಗಾಟದ ನಡುವಲ್ಲಿಯೂ ಸುಮಾಳ ನಿರ್ಧಾರ ಅಚಲವಾಗಿತ್ತು.
"ಅತ್ತೆ ಹೋದವರು ಹೋದರು . ನನ್ನ ಮಕ್ಕಳಿಗೆ ತಾಯಿ ನಾನಿದ್ದೇನೆ. ಆದರೆ ಪಾಪ ಆ ತಬಸಮ್ಅಮ್ಮ ಅಪ್ಪ ಇಬ್ಬರನ್ನೂ ಕಳೆದುಕೊಂಡು ಅನಾಥವಾಗಿದೆಯಲ್ಲ ಅತ್ತೆ "
"ಹಾಗಂತ ಯಾವುದೋ ಧರ್ಮದೋಳನ್ನ ನಮ್ಮ ಮಗಳು ಅಂತ ಹೇಗೆ ಮಾಡಿಕೊಳ್ಳೋದಿಕ್ಕೆ ಆಗುತ್ತೆ? ಅದೂ ಮುಸ್ಲಿಂ.ನ?ಅವಳ ನೆಂಟರು ಬೇರೆ ಯಾರಾದರೂ ನೋಡಿಕೊಳ್ಳಲಿ ಬಿಡು. ನೀನೆ ನಿರ್ಧಾರ ಮಾಡು ನಾನಿರ್ಬೇಕು ಇಲ್ಲ ಅವಳಿರಬೇಕು."
ಅತ್ತೆ ಕಡೆ ನಿರ್ಧಾರ ಎನ್ನುವಂತೆ ಕಠಿಣವಾಗಿ ನುಡಿದು ಹೋಗಿದ್ದರು ಹೋಗಿದ್ದು ಮೈದುನನ ಮನೆಗೆ
ಅಂದೇ ಕಡೆ ಅವರು ಇತ್ತ ತಲೆ ಹಾಕಲಿಲ್ಲ
ಸುಮಾಳೂ ಅವರನ್ನು ಕರೆಯುವ ಗೋಜಿಗೆ ಹೋಗಲಿಲ್ಲ
ತಬಸ್ಸಮ್ ಶೈಲಾ ಆದಳು.
ಕಾನೂನಿನ ಪ್ರಕಾರ ಅವಳನ್ನು ದತ್ತು ಪಡೆದಳು
ಸುಮಾಳ ಮನೆಯವರಿಗೂ ಹಾಗು ಅತ್ತೆ ಮನೆಯವರಿಗೂ ಇರಿಸು ಮುರಿಸಾಯಿತು
ಎಲ್ಲರಿಂದಳೂ ಅಕ್ಶರಶ: ಬಹಿಷ್ಕ್ರುತಳಾದಳು. ಆದರೂ ಎದೆಗುಂದಲಿಲ್ಲ.
ಆದರೆ ಹೇಮಂತ್ ಹಾಗು ಸಿರೀಶ್ ಶೈಲಾಳನ್ನು ತಂಗಿಯಾಗಿ ಸ್ವೀಕರಿಸಿದ್ದು ಮಾತ್ರವಲ್ಲ ಅವಳ ಬಗ್ಗೆ ಅಪಾರ ಅಕ್ಕರೆಯನ್ನೂ ಹೊಂದಿದರು. ತಾವು ಹಿಂದೆ ಇದ್ದ ಊರಿನಿಂದ ಬೆಂಗಳೂರಿಗೆ ಬಂದು ನೆಲೆಸಿದ್ದರು. ಸುಮಾಳ ಡಿಗ್ರಿ ಅವಳಿಗೆ ಕೆಲಸವನ್ನೂ ಕೊಡಿಸಿತ್ತು. ಬದುಕು ಸರಾಗವಾಗಿಯೇ ಸಾಗುತ್ತಿತ್ತು
ಆದರೆ ನಿಜವಾದ ತೊಂದರೆ ಈಗ ಆಗುತ್ತಿತ್ತು
ಶೈಲಾಳ ಮದುವೆಗೆ ಇದ್ದ ತೊಡಕೆಂದರೆ ಅವಳು ಹುಟ್ಟಿನಿಂದ ಮುಸ್ಲಿಂ ಎಂಬುದು. ಆಚಾರ ವಿಚಾರಗಳೆಲ್ಲವೂ ಹಿಂದೂ ಬ್ರಾಹ್ಮಣ ಮನೆತನದ್ದೇ ಕಲಿತದ್ದರಿಂದ ಅವಳ ಮದುವೆ ಎಂಬುದು ಗೊಂದಲಮಯವಾಗಿತ್ತು
ಒಂದೆರೆಡು ಸಂಬಂಧ ಕುದುರಿತಾದರೂ ಸುಮಾಳ ಹಿತ ಶತೃಗಳಿಂದ ಅವು ನಿಂತು ಹೋಯಿತು
ಕೆಲವರು ಒಪ್ಪಲಿಲ್ಲ.
ಆದ್ದರಿಂದ ಬೇರಾರದೋ ಕಡೆಯಿಂದ ಈ ವಿಷಯ ತಿಳಿಯುವ ಬದಲು ತಾನೇ ಈ ವಿಷಯ ಮೊದಲೇ ಹೇಳಿಬಿಡುವುದು ಒಳ್ಳೆಯದೆಂದು ಸುಮ ನಿರ್ಧರಿಸಿದ್ದರಿಂದ ಹೆಣ್ಣು ನೋಡಲು ಬರುವ ಮುನ್ನವೇ ವಿಷಯ ತಿಳಿದವರು ಹಿಂದೇಟು ಹಾಕುತ್ತಿದ್ದರು
ಹಾಗಾಗಿ ಕಂಕಣ ಬಲ ಎಂಬುದು ಅವಳಿಗೆ ಇನ್ನೂ ಕನಸಾಗಿತ್ತು
ಆದರೆ ಅನೂಪ್ ಹೇಮಂತನ ಸ್ನೇಹಿತ. ಶೈಲಾಳನ್ನ ಮೆಚ್ಚಿದ್ದ
ಇಂದು ಅವನು ಬರುವವನಿದ್ದ
ಸಾಯಂಕಾಲವಾಯ್ತು
ಹೇಮಂತನ ಜೊತೆ ಅನೂಪ್ ಬಂದ.
ಔಪಚಾರಿಕ ಮಾತುಕತೆಯಾದ ಮೇಲೆ ಸುಮ ಇದ್ದ ವಿಷಯವನ್ನು ತಿಳಿಸಿದರು
ಅನೂಪ್ ದಿಗ್ಭ್ರಾಂತನಾದರೂ ಸಾವರಿಸಿಕೊಂಡ
"ಆಂಟಿ ನಾನು ಮದುವೆಯಾಗಬೇಕಿರೋದು ಶೈಲಾನ. ಅವಳ ಜಾತಿ ಮತ ನಂಗೇನು ಮುಖ್ಯ ಅಲ್ಲ . ಆದರೂ ನನ್ನ ತಂದೆ ತಾಯಿಗೆ ವಿಷಯ ತಿಳಿಸಿ ಮುಂದುವರೀತೇನೆ. ಅವರೂ ನನ್ನ ಆಸೆಗೆ ಯಾವತ್ತು ಬೇಡ ಅಂದಿಲ್ಲ. "ಎಂದು ಹೇಳಿ ಹೊರಟ
ಅನೂಪನ ತಂದೆ ತಾಯಿ ಮದುವೆಗೆ ವಿಶಾಲ ಹೃದಯದವರು. ಮದುವೆಗೆ ಒಪ್ಪಿದರು. ಆದರೆ ಈ ವಿಷಯ ಬೇರಾರಿಗೂ ತಿಳಿಸಬಾರದಾಗಿ ಹೇಳಿದರು.
ಮದುವೆಯನ್ನ ವಿಧಿವತ್ತಾಗಿ ಹಿಂದೂ ಸಂಪ್ರದಾಯದಂತೆಯೇ ಮಾಡಿಕೊಡಬೇಕೆಂಬುದು ಅವರ ಶರತ್ತಾಗಿತ್ತು.
ಸುಮಾ ಕಂಗಾಲಾದರು
ಮದುವೆಗೆ ಕನ್ಯಾದಾನಕ್ಕೆ ಹಸೆಮಣೆಯ ಮೇಲೆ ಕೂರುವವರ್ಯಾರು?.ಅದೂ ಸಂಬಂಧದಲ್ಲೇ ಆಗಬೇಕು.
ಎರೆಡೂ ಕಡೆಯ ವಿರೋಧ ಕಟ್ಟಿಕೊಂಡದ್ದರಿಂದ ಯಾರೂ ಕೂರುವ ಹಾಗಿರಲಿಲ್ಲ.
ಆದರೂ ಸುಮಾ ಸ್ವಾಭಿಮಾನ ಬಿಟ್ಟು ಎಲ್ಲರನ್ನೂ ಕೇಳಿಕೊಂಡರು.
ಒಬ್ಬ ಮುಸ್ಲಿಂ ಹುಡುಗಿಯ ಕನ್ಯಾದಾನಕ್ಕೆ ಯಾರೂ ಒಪ್ಪಲಿಲ್ಲ.
ಕೊನೆಗೆ ಇದ್ದ ದಾರಿಯೊಂದೇ ಹೇಮಂತನ ಮದುವೆ ಮಾಡಿದ ನಂತರ
ಹೇಮಂತ್ ಹಾಗು ಹೇಮಂತನ ಹೆಂಡತಿಯನ್ನೇ ಕನ್ಯಾದಾನಕ್ಕೆ ಕೂರಿಸುವುದು.
ಹೇಮಂತನ ಮದುವೆ ತರಾತುರಿಯಲ್ಲಿ ನಡೆಯಿತು.
ಅವನ ಮದುವೆಗೆ ಹಸೆಮಣೆಯಲ್ಲಿ ಕೂತವರು ಅವನ ಚಿಕ್ಕಪ್ಪ
ಹೇಮಂತನ ಕಾಲೇಜ್ ಸಹಪಾಠಿ ರಮ್ಯಾ ಅವನ ಮಡದಿಯಾದಳು.
ಕೊನೆಗೂ ಶೈಲಾಳ ಮದುವೆ ಅನೂಪನ ಜೊತೆಯಲ್ಲಿ ಹಿಂದೂ ಧರ್ಮದ ವಿಧಿ ವಿಧಾನದೊಂದಿಗೆ ನಡೆಯಿತು. ಅಣ್ಣ ಅತ್ತಿಗೆ ಅವಳ ಪಾಲಿಗೆ ತಾಯಿ ತಂದೆಯಾದರು.
ಸುಮಾರ ಮನಸ್ಸು ಆನಂದದಲ್ಲಿ ತೇಲಾಡಿತು. ಗೆದ್ದೆನೆಂಬ ನಲಿವು ಅವರ ಕಣ್ಣಲ್ಲಿ ಕಾಣುತ್ತಿತ್ತು.