Wednesday, December 2, 2009

ಗಮ್ಯ ಹುಡುಕುತ್ತಾ ನಾಲ್ಕನೇ ಕಂತು

ಸ್ವಾತಿಗೆ ಅದು ತಮಿಳು ಎಂದು ಗೊತ್ತಿತ್ತಷ್ಟೆ ಹೊರತಾಗಿ ಓದಲು ಬರುತ್ತಿರಲಿಲ್ಲ. ಕೂಡಲೆ ಮೊಬೈಲ್ ಇಂದ ಅದರ ಭಾವಚಿತ್ರ ತೆಗೆದು ಗೆಳತಿ ವಲ್ಲಿಗೆ mms ಕಳಿಸಿದಳು. valli ಅವಳ ಕಾಲೇಜ್ ಮೇಟ್ ತಮಿಳಿನಲ್ಲೇ ಓದಿದ್ದು.
ಕೂಡಲೆ ವಲ್ಲಿ ಅದರ ಮೇಲಿದ್ದುದ್ದೇನು ಎಂದು ಸುದ್ದಿ ಕಳಿಸಿದಳು. ಅದು "ಕಣ್ಣಮ್ಮ " ಎಂದು
"ಸ್ವಾತಿ ನಿಮ್ಮ ತಾಯಿ ಹೆಸರು ಕಣ್ಣಮ್ಮ ಅಂತ ಅನ್ಸುತ್ತೆ ಕಣ್ಣು ಕಣ್ಣು ಕಣ್ಣಮ್ಮ "ಶಿವು ರೇಗಿಸಿದನಾದರೂ ಚಿಂತಾಮಗ್ನಳಾದ ಅವಳನ್ನುಕಂಡು ತಮಾಷೆಗೆ ಇದು ಸರಿಯಾದ ಸಮಯವಲ್ಲ ಅನ್ನಿಸಿ ಸುಮ್ಮನಾದ.
ಸ್ವಾತಿ ಯೋಚನೆಗೆ ಬಿದ್ದಿದ್ದಳು.
ಇದು ತನ್ನ ತಾಯಿಯ ಹೆಸರೇ? ಹಾಗೇನಾದರೂ ಆದರೆ ತಾನು ತಮಿಳಿಗಳಾಗುತ್ತೇನಾ?
ಇನ್ನು ಆ ತಾಯಿಯನ್ನು ಎಲ್ಲಿ ಎಂದು ಹುಡುಕುವುದು. ತಮಿಳು ನಾಡಿನಲ್ಲಾ.ಇಲ್ಲಾ ಕರ್ನಾಟಕದಲ್ಲಾ?
ಏಕೋ ತಾಯಿಯನ್ನು ಹುಡುಕುವ ಪಯಣಕ್ಕೆ ಕೊನೆಯೇ ಸಿಗುವುದಿಲ್ಲ ಎಂದನಿಸಿತು ಗುರಿ ಇರದೆ ಅಂಬು ಎತ್ತಲೋ ಹಾರಿಸುತ್ತಿರುವುದು . ಕಣ್ಣಾಲಿ ಭಾರವಾಗಿತ್ತು. ತನ್ನ ಗಮ್ಯ ಸಿಗುವುದೇ ಇಲ್ಲ ಎಂದನಿಸುತ್ತಿತ್ತು
"ಸ್ವಾತಿ ಡೋಂಟ್ ವರಿ ನಿಮ್ಮ ತಾಯಿ ಹೆಸರು ಗೊತ್ತಾಗಿರುವ ಹಾಗೆಯೇ ಅವರು ಸಿಕ್ಕೇ ಸಿಗುತ್ತಾರೆ ಇವತ್ತಲ್ಲಾ ನಾಳೆ ಖಂಡಿತಾ."
ಶಿವೂ ಹೇಳುತ್ತಿದ್ದರೂ ಕೇವಲ ತನ್ನ ಮನಸಿನ ಸಮಾಧಾನಕ್ಕಾಗಿ ಎಂಬುದು ಮಾತಿನ ಧಾಟಿ ಇಂದಲೇ ತಿಳಿಯುತ್ತಿತ್ತು.
ಕಾರ್ ಮನೆಯತ್ತ ಸಾಗುತ್ತಿದ್ದಂತೆ ಸ್ವಾತಿಯ ಮನಸಿನ ತುಂಬಾ ನೂರಾರು ಅಸ್ಪಷ್ಟ ಚಿತ್ರಗಳು .
ಮನೆಯಲ್ಲಿ ಅಪ್ಪನಿಗೆ ತೋರಿಸಿ ಅಳಲಾರಂಭಿಸಿದಳು ಸ್ವಾತಿ.
"ಅಪ್ಪಾ ಇದು ನಮ್ಮ ತಾಯಿಯದು ನನ್ನ ನಿಷ್ಕಾರುಣ್ಯವಾಗಿ ಯಾರಿಗೋ ಕೊಟ್ಟು ಕೈ ತೊಳೆದುಕೊಂಡವಳದು . ಒಂದು ನಾಯಿ ಕೂಡ ಮಗೂನ ಜೋಪಾನ ಮಾಡುತ್ತೆ ಆದರೆ ನನ್ನ ತಾಯಿ ತಂದೆ ಎನಿಸಿಕೊಂಡವರು ಅದಕ್ಕಿಂತ ಕಡೆಯಾಗಿ ಬಿಟ್ಟರಲ್ಲ"
ಸ್ವಾತಿಯ ಅಳು ನೋಡಿ ಪಾರ್ವತಮ್ಮನವರ ಕಣ್ಣು ಒದ್ದ್ಯೆಯಾಯ್ತು. ಮಗಳನ್ನು ತನ್ನ ಎದೆಗೊರಗಿಸಿಕೊಂಡರು. ಅದಲ್ಲದೇ ತಮ್ಮ ಯಾವುದೇ ಸಮಾಧಾನದ ಮಾತು ಅವಳನ್ನು ಸಂತೈಸುವುದಿಲ್ಲ ಎಂದು ತಿಳಿದಿತ್ತು.

"ಅಮ್ಮಾ ನಾನು ಸೋತು ಹೋದೆ, ನಾನು ಅನಾಥೆ "ಸ್ವಾತಿ ಬಡಬಡಿಸುತ್ತಿದ್ದಳು. ಹಾಗೆ ಅವರ ಮಡಿಲಿನಲ್ಲಿ ನಿದ್ರಿಸಿದಳು.

ಮಾರನೇ ದಿನ ಶಿವು ಬಂದ

"ಸ್ವಾತಿ ಈ ಶಾಲಿನ ಚಿತ್ರ ತಗೊಂಡು ಎಲ್ಲಾ ತಮಿಳು ಟಿವಿ ಚಾನೆಲ್‌ಗಳಲ್ಲಿ ಪೇಪರ್ಸ್‌ನಲ್ಲಿ ಜಾಹಿರಾತು ಕೊಡೋಣ. ಈ ಶಾಲಿನ ಗುರುತು ಹಿಡಿದು ಯಾರಾದರೂ ಬರಬಹುದು"

ಸ್ವಾತಿ ತಲೆ ಆಡಿಸಿದಳು. ಅದರಲ್ಲೂ ನಂಬಿಕೆ ಇರಲಿಲ್ಲ ಅವಳಿಗೆ. ರೆಡ್ಡಿಯವರು ಒಮ್ಮೆಯೂ ಕೈ ಬಿಚ್ಚಿ ಹಣ ಖರ್ಚು ಮಾಡಿದವರಲ್ಲ

ಅಂತಹುದರಲ್ಲಿ ಎಲ್ಲಾ ಟಿವಿ ಚಾನೆಲ್‌ಗಳಿಗೂ ಹಣವನ್ನು ನೀರಿನಂತೆ ಖರ್ಚು ಮಾಡಿದರು .ಒಟ್ಟಿನಲ್ಲಿ ಮಗಳ ಮುಖದಲ್ಲಿ ಸಂತಸ ಕಾಣಬೇಕು ಎಂಬುದೇ ಅವರ ಉದ್ದೇಶ. ತಿಂಗಳುಗಳು ಕಳೆದವು ಆದರೂ ಯಾವುದೇ ಫಲ ನೀಡಲಿಲ್ಲ. ಯಾರು ಅದನ್ನು ಗುರುತಿಸಲೂ ಇಲ್ಲ
ಇತ್ತ ಸ್ವಾತಿಯ ಮದುವೆಯ ಮಾತುಕಥೆ ಮುಂದುವರೆಯಲಿಲ್ಲ ಎಂಬುದಕ್ಕಿಂತ ತಾನ್ಯಾರು ಎಂಬುದು ತಿಳಿಯದೆ ಮದುವೆಯಾಗಲು ಸ್ವಾತಿ ಒಪ್ಪಲಿಲ್ಲ. ಅವಳ ಪಿಯುಸಿಯ ಫಲಿತಾಂಶ ಬಂದಿತ್ತು . ಮೊದಲ ದರ್ಜೆಯಲ್ಲಿಯೇ ತೇರ್ಗಡೆಯಾಗಿದ್ದಳು.

ಬಿಎ ಹಿಸ್ಟರಿ ಮುಂದುವರೆಸಲಾರಂಭಿಸಿದಳು.

ಜೀವನ ಮೊದಲಿನಂತೆ ನಡೆಯಲಾರಂಭಿಸಿತು. ಆದರೆ ಮೊದಲಿದ್ದ ಸ್ವಾತಿ ಬದಲಾಗಿದ್ದಳು. ನೆಂಟರಿಷ್ಟರ ಮುಂದೆ ಹೋಗಲು ಸ್ವಾತಿಯೇ ಇಷ್ಟ ಪಡುತ್ತಿರಲಿಲ್ಲ. ಏನಾದರೂ ಪ್ರಶ್ನಿಸಿಯಾರು ಎಂಬ ಹಿಂಜರಿಕೆ. ತಾನೆ ಒಂದು ಚಿಪ್ಪಲ್ಲಿ ಅಡಗಲಾರಂಭಿಸಿದಳು.
ಕಾಲೇಜಿನಲ್ಲಿಯೂ ಹೆಚ್ಚು ಜನರೊಂದಿಗೆ ಬೆರೆಯುತ್ತಿರಲಿಲ್ಲ. ಮನೆಗೆ ಬಂದರೆ ತಾಯಿಯೊಡನೆಯಾಗಲಿ ತಂದೆಯೊಡನೆಯಾಗಲಿ ಹೆಚ್ಚು ಮಾತಾಡುತ್ತಿರಲಿಲ್ಲ. ಪಾರ್ವತಮ್ಮನವರ ಮನಸೂ ಒಮ್ಮೊಮ್ಮೆ ಹಾಗೊಮ್ಮೆ ಹೀಗೊಮ್ಮೆ ತೊಯ್ದಾಡುತ್ತಿತ್ತು. ಹುಟ್ಟುತ್ತಲೇ ಕಳೆದುಹೋದ ಮಗನನ್ನ ನೆನೆಸಿಕೊಂಡು ಕೆಲವೊಮ್ಮೆ ಅಳುತ್ತಿದ್ದರೆ ಮಗದೊಮ್ಮೆ ಚೈತನ್ಯದ ಚಿಲುಮೆಯಾಗಿದ್ದ ಮಗಳು ಮೌನ ಗೌರಿಯಾದದ್ದು ನೋಡಿ ಕರುಳು ಕಿವುಚುತ್ತಿತ್ತು.

ರೆಡ್ಡಿಯವರೂ ಮಾತು ಕಡಿಮೆ ಮಾಡಿದ್ದರು. ಮಗಳನ್ನು ಮೊದಲಿನ ಸ್ಥಿತಿಗೆ ತರಲು ಮಾಡಿದ ಪ್ರಯತ್ನಗಳೆಲ್ಲವೂ ನಿಶ್ಫಲವಾಗಿದ್ದವು. ಅವರ ಗತ್ತು ಇಂಗಿಯೇ ಹೋಗಿತ್ತು ಎಂಬ ಮಟ್ಟಿಗೆ ಕಡಿಮೆ ಆಗಿತ್ತು.

ಇದ್ದುದರಲ್ಲಿ ಶಿವೂನೆ ಆಗಾಗ ಬಂದು ಸ್ವಾತಿಯನ್ನು ಮಾತಾಡಿಸಿ ನಗಿಸುತ್ತಿದ್ದ. ಅವನನ್ನು ಅವಳಿಂದ ದೂರವಿಡುವ ಅವನ ತಂದೆ ತಾಯಿಯ ಪ್ರಯತ್ನ ವಿಫಲವಾಗಿತ್ತು. ಏನಾದರಾಗಲಿ ಎಂದು ಅವರೂ ಕೈ ಚೆಲ್ಲಿದ್ದರು

ಎರೆಡು ವರ್ಷಗಳು ಕಳೆದವು .

ಅಂದು ಕಾಲೇಜಿನಿಂದ ಬಂದವಳೇ ರೂಮನ್ನು ಹೊಕ್ಕಳು ಸ್ವಾತಿ. "ಸ್ವಾತಿ" ಪಾರ್ವತಮ್ಮ ರೂಮಿಗೆ ಬಂದರು.
"ಹೇಳಮ್ಮ" ಕೈನಲ್ಲಿ ಯಾವುದೋ ಪುಸ್ತಕವಿತ್ತು ಅಷ್ಟೇ .ಕಣ್ಣು ಮಾತ್ರ ಎಲ್ಲೋ ನೋಡುತ್ತಿತ್ತು
"ಸ್ವಾತಿ ನಂಗ್ಯಾಕೋ ಮನಸಿಗೆ ಸರಿ ಇಲ್ಲ . ಒಂಥರಾ ಬೇಜಾರಾಗ್ತಿದೆ. ಪರಮ ಹಂಸ ಸದಾನಂದ ಸ್ವಾಮೀಜಿಯವರನ್ನ ನೋಡಿಕೊಂಡು ಬರೋಣವಾ? ಸ್ವಲ್ಪ ಮನಸಿಗೆ ನೆಮ್ಮದಿ ಸಿಗುತ್ತೆ"
"ಅಮ್ಮಾ ನೀನು ಹೋಗು ನಾನೆಲ್ಲೂ ಬರೊದಿಲ್ಲ" ಎಂದವಳು ಅಮ್ಮನ ಮುಖ ನೋಡಿದಳು. ಪಾರ್ವತಮ್ಮನ ಮುಖ ಬಾಡಿತು. ರೆಡ್ದಿಯ ಹೆಂಡತಿ ಕಳೆ ಎಂದೋ ಕಳೆದುಕೊಂಡುಬಿಟ್ಟಿದ್ದರು.ಮನೆಯಲ್ಲಿ ಸ್ಮಶಾನ ಮೌನ. ತನ್ನಿಂದ ಹೀಗಾದರೂ ಸಂತಸ ಸಿಗಬಹುದಾದರೆ ತಾನೇಕೆ ಅಡ್ಡಿ ಮಾಡಲಿ ಎಂದನಿಸಿತು.
"ಸರಿ ಅಮ್ಮ ಯಾವತ್ತು ಹೋಗೋಣ? ಹೇಳು"
ಪಾರ್ವತಮ್ಮನ ಮುಖ ಅರಳಿತು
"ಸಾಯಂಕಾಲ ಹೋಗೋಣ "
"ಆಯ್ತಮ್ಮ"
ಪರಮ ಹಂಸ ಸ್ವಾಮಿ ಸದಾನಂದರ ಹೆಸರನ್ನು ಕೇಳದವರಿರಲಿಲ್ಲ .ಅವರು ಉತ್ತರ ಭಾರತದಲ್ಲಿ ಬಹಳ ಪ್ರಸಿದ್ದರಾದವರು. ಫೋಟೋ ನೋಡಿಯೇ ಜನ ಮೋಡಿಗೆ ಒಳಗಾಗುತ್ತಿದ್ದರು. ಅಂತಹ ಕಾಂತಿ, ತೇಜಸ್ಸು ಅವರಲ್ಲಿತ್ತು. ಸ್ವಾಮೀಜಿ ಎಂದರೆ ಗಡ್ಡ ಮೀಸೆ ಪೊದೆಗಳಿಂದ ತುಂಬಿದ ಮುಖದವರು ಎಂಬುದನ್ನು ಸುಳ್ಳುಮಾಡಿದ್ದ ಕೆಲವೇ ಕೆಲವು ಪರಮಹಂಸರಲ್ಲಿ ಅವರೂ ಒಬ್ಬರು.ನೀಟಾಗಿ ಶೇವ್ ಮಾಡಿದ ಮೊಗ. ಇನ್ನೂ ತುಂಬಾ ಚಿಕ್ಕವರೇನೋ ಎಂದನಿಸುತ್ತಿತ್ತು. ಆದ್ಯಾತ್ಮದ ಬಗ್ಗೆಗಿನ ಅವರ ಮಾತಿಗೆ ಮರುಳಾಗದವರೇ ಇರಲಿಲ್ಲ. ದೇಶೀಯರಿಗಿಂತ ವಿದೇಶಿಯ ಶಿಷ್ಯರೇ ಜಾಸ್ತಿ . ಇತ್ತೀಚಿಗೆ ಕನಕ ಪುರದಲ್ಲಿ ನೂರು ಎಕರೆಜಾಗವನ್ನು ಶಿಷ್ಯರು ಬಳುವಳಿಯಾಗಿ ಕೊಟ್ಟಿದ್ದರು . ಆ ಶಿಷ್ಯರಲ್ಲಿ ರೆಡ್ದಿಯವರೂ ಒಬ್ಬರು. ಮೂರೆಕರೆ ಜಾಗವನ್ನು ಸದಾನಂದರ ಆಶ್ರಮಕ್ಕೆ ಕೊಡಿಸಿದ್ದರು. ಹಾಗಾಗಿ ಸದಾನಂದರ ಮೆಚ್ಚಿನ ಶಿಷ್ಯರಲ್ಲಿ ರೆಡ್ಡಿಗಳು ಒಬ್ಬರಾಗಿದ್ದರು. ರೆಡ್ಡಿಯವರಿಗೆ ಆಶ್ರಮದಲ್ಲಿ ವಿಶೇಷ ಸ್ಥಾನ ಮಾನ. ಆಗಾಗ ಅವರಲ್ಲಿ ಹೋಗಿ ಬರುತ್ತಿದ್ದರು. ಸ್ವಾತಿಯೂ ಒಂದೆರೆಡು ಬಾರಿ ಹೋಗಿದ್ದಳು. ಅವರ ಮಾತು ಚೆನ್ನಾಗಿರುತ್ತಿತ್ತು. ಆ ಮಾತುಗಳನ್ನು ಕೇಳಿದರೆ ಏನೋ ನೆಮ್ಮದಿ ಸಿಗುತ್ತಿತ್ತು ಎನ್ನುವುದು ನಿಜವೂ ಆಗಿತ್ತು ಅವಳ ಪಾಲಿಗೆ. ಹೇಳಿಕೊಳ್ಳುವುದಕ್ಕೆ ಆಶ್ರಮ . ಒಳಗೆ ಅರಮನೆಯಂತಿತ್ತು
ತಮ್ಮ ಭಕ್ತರು ಕೊಟ್ಟಿದ್ದ ಚಿನ್ನದ ಲೇಪದ ಸಿಂಹಾಸನಲ್ಲಿ ಕುಳಿತ್ತಿದ್ದರು ಪರಮಹಂಸರು
ನಗುತ್ತಾ ತಾಯಿ ಮಗಳನ್ನು ಸ್ವಾಗತಿಸಿದರು. ತಮಗಾಗಿಯೇ ವಿಶೇಷವಾಗಿ ಈ ಅವಧಿಯನ್ನು ಕೊಟ್ಟಿದ್ದಾರೆ ಎಂಬುದು ಸ್ವಾತಿಗೆ ತಿಳಿಯಿತು
ಪಾರ್ವತಮ್ಮ ಸ್ವಲ್ಪ ಹೊತ್ತು ಮಾತಾಡಿದ ನಂತರ ಈಗಲೆ ಬರುವುದಾಗಿ ಹೇಳಿ ಹೊರಗೆ ಹೋದರು.
ಏನುಮಾತಾಡುವುದೆಂದು ತೋಚದೆ ಕುಳಿತಿದ್ದ ಸ್ವಾತಿಯನ್ನು ನೋಡಿ ಪರಮಹಂಸರು ಮುಗಳ್ನಕ್ಕರು
ಅವಳ ಕಣ್ಣಲ್ಲಿ ಕಣ್ಣನ್ನು ಇಟ್ಟು ಮಾತಾಡಿದರು
"ಸ್ವಾತಿ . ನಾನು ಹೇಳೋದನ್ನು ಗಮನವಿಟ್ಟು ಕೇಳಿಸಿಕೋ. ನಿನ್ನ ಹುಟ್ಟು ಆಕಸ್ಮಿಕವಾದುದಲ್ಲ . ವಿಧಿಯಾಟವೂ ಅಲ್ಲ. ನಿನ್ನಿಂದ ಈ ಜಗತ್ತಿಗೆ ಏನೋ ಬೇಕಿದೆ ಹಾಗಾಗಿಯೇ ಎಲ್ಲೋ ಹುಟ್ಟಿದ ನೀನು ಈ ಮನೆಗೆ ಬಂದಿರುವೆ. ನಿನ್ನ ಪೂರ್ವದ ಬಗ್ಗೆ ಯೋಚಿಸುತ್ತಾ ಕುಳಿತಿರುವ ಬದಲು ನಿನ್ನ ಮುಂದಿನ ಕಾರ್ಯಗಳನ್ನು ಸಾಗಿಸುವತ್ತ ನೋಡು . ನದಿಮೂಲ ಹಾಗು ಋಷಿಮುಲ ಕೆದಕಬಾರದಂತೆ ಹಾಗೆಯೇ ನೀನೂ ಸಹ ನಿನ್ನ ಗಮ್ಯಕ್ಕಿಂತ ನಿನ್ನ ಗುರಿಯೇ ಬಹಳ ಮುಖ್ಯ. ಜೀವನದಲ್ಲಿ ಹಳೆಯ ನೀರು ಕರಗಬೇಕು ಹೊಸ ನೀರು ಬರಬೇಕು ಹಾಗೆಯೇ ನಿನ್ನ ಪೂರ್ವ ಇತಿಹಾಸದ ನೆನಪು ದೂರಾಗಬೇಕು . ವರ್ತಮಾನದಲ್ಲಿ ನೀನೇನಾಗಿರುವೆ ಎಂಬುದು ಮುಖ್ಯ . ಏಕೆಂದರೆ ಈ ವರ್ತಮಾನವೇ ನಿನ್ನನ್ನು ಭವಿಷ್ಯದಲ್ಲಿ ಎಲ್ಲರೂ ನೆನಪಿಡುವ ಇತಿಹಾಸಕ್ಕೆ ಸೇರಿಸುತ್ತದೆ.ಸೋ ಫರ್‌ಗೆಟ್ ದ ಪಾಸ್ಟ್ ಗೆಟ್ ರೆಡಿ ಟು ಫೇಸ್ ದ ಪ್ರೆಸೆಂಟ್"
ಅವಳ ಹಣೆಯನ್ನು ತಮ್ಮ ಕೈಯ್ಯ ಹೆಬ್ಬೆಟ್ಟಿನಿಂದ ಒತ್ತಿದರು. ಒಂದು ತರಹ ನಿರಾಳತೆ ಮೂಡಿತು ಸ್ವಾತಿಯಲ್ಲಿ .
ನಿಶ್ಚಿಂತೆ ತುಂಬಿದಂತೆ ಅನ್ನಿಸಿತು ಅವರಿಗೆ ಕೈ ಮುಗಿದಳು.
ಹೊರಗಡೆ ಹೋಗಿದ್ದ ಪಾರ್ವತಮ್ಮ ಒಳಗೆ ಬಂದರು.
ಸ್ವಾತಿಯ ಕಣ್ಣಲ್ಲಿ ತುಂಬಿದ್ದ ನೀರು ನೋಡಿ ಪರಮಹಂಸರತ್ತ ನೋಡಿದರು. ಅವರು ತಿಳಿಯಾದ ಮುಗಳ್ನಗೆ ಬೀರಿದರು.ಎಲ್ಲವು ತಿಳಿಯಾದಂತೆ ಭಾಸವಾಯಿತು.
ಸ್ವಾತಿಯನ್ನು ಮನೆಗೆ ಕರೆದೊಯ್ದರು
ಅಂದಿನಿಂದ ಮನಸು ತಹಂಬದಿಗೆ ಬಂದಿತು. ಅಂದಿನಿಂದ ಪರಮಹಂಸರ ಆಶ್ರಮಕ್ಕೆ ವಾರಕ್ಕೊಮ್ಮೆಯಾದರೂ ಹೋಗಿಬರುತ್ತಿದ್ದಳು. ಸಹಜ ಸ್ಥಿತಿಗೆ ಬರಲಾರಂಭಿಸಿದಳು. ಮೊದಲಿನ ಹರ್ಷ ಕಾಣದಿದ್ದರೂ ತುಂಬಾ ವಿಮುಖಿಯಾಗಿರಲಿಲ್ಲ

ಎಲ್ಲವೂ ಸರಿಯಾಗಿದೆ ಎನ್ನುತ್ತಿದ್ದಂತೆ ರೆಡ್ಡಿಯವರ ಮನೆ ನಂಬರಿಗೆ ಫೋನ್ ಬಂದಿತ್ತು.

ಸ್ವಾತಿಯೇ ರಿಸೀವ್ ಮಾಡಿದಳು ಅತ್ತಲಿಂದ ತಮಿಳಿನಲ್ಲಿ ಮಾತಾಡಿದರು

"ನಾ ಕಣ್ಣಮ್ಮ ಪೇಸರೆ ರೆಡ್ಡಿ ಇರ್ಕಾಂಗಳಾ?" ನಡುಗುವ ದ್ವನಿಯಲ್ಲಿ ಕೇಳಿ ಬಂತು ಸ್ವರ

ಸ್ವಾತಿಗೆ ನಂಬಲಾಗಲಿಲ್ಲ.

ತಮಿಳು ಬರುತ್ತಿರಲಿಲ್ಲವಾದರೂ ಕಣ್ಣಮ್ಮ ಎಂಬ ಹೆಸರು ಕಿವಿಯನ್ನು ಹೊಕ್ಕಿತು
"ಕಣ್ಣಮ್ಮ ಅಮ್ಮಾ?............" ಸಂಭ್ರಮಾಶ್ಚರ್ಯಾ ಅವಳ ದನಿಯಲ್ಲಿ ಕುಣಿಯುತ್ತಿತ್ತು.
"ಆಮಾ ನಾ ಕಣ್ಣಮ್ಮಾತಾ" ದ್ವನಿ ಕೇಳುತ್ತಿದ್ದರೆ ಅವರ್ಯಾರೀ ತುಂಬಾ ವಯಸ್ಸಾದವರಂತೆ ಇತ್ತು
ತಮಿಳು ಬರದ ತನ್ನನ್ನ ತಾನೆ ಹಳಿದು ಕೊಂಡಳು. ತನ್ನ ತಾಯಿಯಾ ಇದು ? ಎಂಬ ಯೋಚನೆಯ ಜೊತೆಯಲ್ಲಿಯೇ

"ಒಂದು ನಿಮಿಷ" ಎಂದು

"ಅಪ್ಪಾ ಅಪ್ಪಾ" ತಂದೆಯನ್ನು ಕೂಗಿದಳು

ಆಫೀಸ ರೂಮಲ್ಲಿದ್ದ ರೆಡ್ಡಿಯವರು ಏನೋ ಆಗಿ ಹೋಯಿತೆಂದು ಬಗೆದು ಓಡುತ್ತಲೇ ಬಂದರು.

ಟಿವಿ ಮುಂದು ಕೂತಿದ್ದ ಪಾರ್ವತಮ್ಮನವರೂ ಹಾಲಿಗೆ ಬಂದರು

"ಅಪ್ಪಾ ಕಣ್ಣಮ್ಮ ನಮ್ಮ ತಾಯಿ.........." ಮುಂದೆ ಮಾತಾಡಲಾಗದೆ ಫೋನನ್ನು ಮಾತ್ರ ತೋರಿಸಿದಳು ಗಂಟಲಲ್ಲಿ ಸ್ವರವೇ ಹೊರಡದಂತಾಗಿತ್ತು.

ದಿಗ್ಬ್ರಾಂತ್ರರಾದ ರೆಡ್ಡಿಯವರು ಸ್ವಾತಿಯನ್ನೇ ನೋಡುತ್ತಾ ಫೋನ್ ರಿಸೀವ್ ಮಾಡಿದರು

"ಹಲ್ಲೋ .ನಾ ಕ್ರಿಷ್ಣಾರೆಡ್ಡಿ .ಸೊಲ್ಲಂಗೋ"

ಮುಂದಿನ ಮಾತುಕಥೆ ಸ್ವಾತಿಗೆ ಅರ್ಥವಾಗಲಿಲ್ಲ

ರೆಡ್ಡಿಯವರ ಮಾತು ಮುಗಿಯುವುದನ್ನೇ ಕಾದವಳಂತೆ
"ಅಪ್ಪಾ ?ಏನಂತೆ"

ಎಲ್ಲಾ ಮರೆತಿರುವಾಗ ಮತ್ತೆ ಕದಡಿತಲ್ಲ ಎಂಬ ಆಲೋಚನೆಗೆ ಬಿದ್ದರು ರೆಡ್ಡಿಯವರು.
"ಅವರು ಕಣ್ಣಮ್ಮಾನೆ ಅಂತೆ ಆ ಶಾಲು ಅವರದೇ ಅಂತೆ. ಇಲ್ಲೇ ಸಂಜಯನಗರದ ಸ್ಲಮ್ಮಲ್ಲಿ ಇದ್ದಾರೆ. .ತುಂಬಾ ವಯಸ್ಸಾಗಿದೆ ನಡೆಯೋದಕ್ಕೆ ಸಹಿತ ಆಗಲ್ಲ ಅಂತೆ ನಾವೇ ಹೋಗಿ ಅಲ್ಲಿ ನೋಡಬೇಕು"
ಏನು ಹೇಳುವುದೋ ತೋಚಲಿಲ್ಲ ಸ್ವಾತಿಗೆ.
"ಅಪ್ಪಾ ಯಾವಾಗ ಹೋಗೋಣ"
ಪಾರ್ವತಮ್ಮನವರಿಗೆ ಅಳು ತಡೆಯಲಾಗಲಿಲ್ಲ. ಇನ್ನು ಸ್ವಾತಿ ತನ್ನ ಮಗಳಲ್ಲ ಆ ಯೋಚನೆ ಅವರಿಗೆ ಆಘಾತವಾಗಿತ್ತು.ಇನ್ನು ಸ್ವಾತಿಯ ತಾಯಿ ಸಿಕ್ಕಿಬಿಟ್ಟರೆ
ದು:ಖ ಕಟ್ಟೆಯೊಡೆದು ಜೋರಾಗಿ ಅಳಲಾರಂಭಿಸಿದರು
ಅವರ ಸಂಕಟ ಅರಿವಾದರೂ ಅಸಹಾಯಕಳಾಗಿದ್ದಳು ಸ್ವಾತಿ
ತನ್ನ ಹೆತ್ತ ತಾಯಿಯನ್ನು ನೋಡಲೇ ಬೇಕೆಂಬ ಹಂಬಲದ ಎದುರಿಗೆ ಸಾಕಿದ ತಾಯಿಯ ಸಂಕಟ ನಗಣ್ಯವೆನಿಸಿತು.
ಹೆಂಡತಿಯತ್ತ ಒಮ್ಮೆ ಮಗಳತ್ತ ಇನ್ನೊಮ್ಮೆ ನೋಡಿದರು
" ಈಗಲೇ ಹೋಗೋಣ ನಡೀ ಸ್ವಾತಿ"
ಅಲ್ಲಿಂದಲೇ ಶಿವೂಗೆ ಫೋನ್ ಮಾಡಿದಳು. ಏನೋ ಸಂಭ್ರಮ
ಆಫೀಸಿಂದ ಹಾಗೆಯೇ ಬರುವುದಾಗಿ ಹೇಳಿದ.
ಸ್ವಾತಿ ಹಾಗು ರೆಡ್ಡಿಯವರಿಬ್ಬರೇ ಹೊರಟರು.
ಕೊನೆಗೂ ಸಂಜಯನಗರದ ಸ್ಲಮ್ಮಿಗೆ ಬಂದಾಗ ಸಾಯಂಕಾಲ ಆರು ಘಂಟೆಯಾಗಿತ್ತು
ಕಣ್ಣಮ್ಮನ ಮನೆಯನ್ನು ಹುಡುಕುತ್ತಾ ಹೋದಂತೆ ಯಾವುದೋ ಕಿಷ್ಕಿಂದೆಯೊಳಗೆ ಹೋದಂತೆ ಭಾಸವಾಯ್ತು.
ಪ್ರತಿ ಕ್ಷಣವೂ ಯುಗವಾದಂತೆ ಅನ್ನಿಸುತ್ತಿತ್ತು ಸ್ವಾತಿಗೆ.
ಕೊನೆಗೂ ಕಣ್ಣಮ್ಮನ ಮನೆ ಸಿಕ್ಕಿತು .ಗುಡಿಸಲಂತಹ ಮನೆಯ ಬಾಗಿಲು ತಟ್ಟಿದರು
"ವುಳ್ಳೆ ವಾಂಗೋ" ಕೆಮ್ಮುತ್ತಾ ಕರೆಯಿತು ಒಂದು ದ್ವನಿ
ಬಾಗಿಲೆಂದು ಕರೆಸಿಕೊಳ್ಳುವ ಆ ಹಲಗೆಯನ್ನು ನೂಕಿದಾಗ ಕಂಡಿದ್ದು
ಒಬ್ಬ ಹಣ್ಣು ಹಣ್ಣು ಮುದುಕಿ. ಒಂದು ಚಾಪೆಯ ಮೇಲೆ ಮಲಗಿತ್ತು.ಸ್ವಾತಿಯ ಮುಖ ಬಾಡಿತು
ವಯಸೇನಿಲ್ಲವಾದರೂ ಎಂಬತ್ತರ ಮೇಲೆ ಈಕೆ ತನ್ನ ತಾಯಿಯಾಗಲು ಸಾಧ್ಯವೇ?ಹಾಗಿದ್ದಲ್ಲಿ ಈಕೆಗೆ ನಾನ್ಯಾವಾಗ ಹುಟ್ಟಿರಬಹುದು?
ಪ್ರಶ್ನೆಗಳ ಸರಮಾಲೆಯೊಂದಿಗೆ ಒಳಗೆ ಕಾಲಿಟ್ಟಳು ಸ್ವಾತಿ
ರೆಡ್ಡಿಯವರು ಒಳಗೆ ಬಂದರು ಅಷ್ಟ್ರಲ್ಲಿ ಶಿವೂ ಸಹಾ ಬಂದ.
ರೆಡ್ಡಿಯವರು
"ಕಣ್ಣಮ್ಮಾ?"
"ಆಮಂಗೋ ನಾನ್ ದಾ ಕಣ್ಣಮ್ಮ ವಕ್ಕಾರುಂಗೋ" ಮತ್ತೆ ಕೆಮ್ಮುತ್ತಾ ಮೇಲೇಳಲು ಪ್ರಯತ್ನಿಸಿತು. ಹಾಗೆಯೇ ಉರುಟಿತು
ಸ್ವಾತಿ ಆ ಮುದುಕಿಯನ್ನೆ ಕುತೂಹಲದಿಂದ ನೋಡಲಾರಂಭಿಸಿದಳು
ಮುಂದಿನ ಮಾತುಕಥೆಗಳೆಲ್ಲಾ ನಡೆದದ್ದನ್ನು
ರೆಡ್ಡಿಯವರು ಕನ್ನಡದಲ್ಲಿ ಹೇಳಲಾರಂಭಿಸಿದರು
"ಸ್ವಾತಿ ಇವಳು ನಿನ್ನ ತಾಯಿ ಅಲ್ಲಾಂತೆ ಆದರೆ ಆ ಶಾಲು ಇವಳದೇ ಅಂತೆ. " ರೆಡ್ಡಿಯವರು ಅವಳ ಮಾತು ಮುಗಿದ ಒಡನೆ ಸ್ವಾತಿಗೆ ಹೇಳಿದರು
ಸ್ವಾತಿಗೆ ತಲೆ ಬುಡ ಅರ್ಥವಾಗಲಿಲ್ಲ. ಒಟ್ಟಿನಲ್ಲಿ ಆಕೆ ತನ್ನ ತಾಯಿ ಅಲ್ಲ ಎಂಬುದು ಮಾತ್ರ ತಿಳಿಯಿತು. ಮತ್ತೆ ತನ್ನ ತಾಯಿ ಯಾರು? ಎಲ್ಲಿದ್ದಾಳೆ?
ಆ ಪ್ರಶ್ನೆಯನ್ನು ಅಪ್ಪನಿಗೆ ದಾಟಿಸಿದಳು.
ಉತ್ತರಕ್ಕಾಗಿ ಕಾದಳು.
(ಮುಂದುವರೆಯುವುದು)

Wednesday, November 18, 2009

ಗಮ್ಯ ಹುಡುಕುತ್ತಾ ಮೂರನೆ ಕಂತು

"ಶಿವು ಏನ್ಮಾಡೋದು ಈಗಾ?" ಗೊಂದಲದ ಕಣ್ಣುಗಳಲ್ಲಿ ಮುಂದೇನು ಎಂಬ ಆತಂಕ ಮನೆ ಮಾಡಿತ್ತು


"ಸ್ವಾತಿ ಆ ಸ್ವಾಮಿ ಯಾರು ಎಲ್ಲಿಯವನು ಏನು ಗೊತ್ತಿಲ್ಲ . ಐ ಥಿಂಕ್ ಇಟ್ ಈಸ್ ಡಿಫಿಕಲ್ಟ್ ಟು ಟ್ರೇಸ್" ಕಾರ್ ಕೀ ಹಾಕುತ್ತಾ ನುಡಿದ ಮತ್ತೆಮುಂದುವರೆಸಿದ


" ಆದರೂ ಕೆಲವೊಂದು ಸಾಧ್ಯತೆಗಳನ್ನು ಊಹಿಸಬಹುದು"


ಅವನತ್ತ ಏನು ಎಂಬಂತೆ ನೋಡಿದಳು


"ಸಾಧ್ಯತೆ ಒಂದು . ನೀನು ಆ ಸ್ವಾಮಿಯ ಮಗಳಾಗಿರಬಹುದು" ಸ್ವಾತಿಯ ಮುಖ ಬಿಳುಚಿತು ಅದನ್ನು ಗಮನಿಸದವನಂತೆ ಮುಂದುವರೆಸಿದ


"ಗಂಡು ಮಗು ಬೇಕು ಅನ್ನೊ ಕಾರಣಕ್ಕೆ ಬದಲಾಯಿಸಿರಬಹುದು . ಹಾಗಿದ್ದಲ್ಲಿ ಆ ಸ್ವಾಮೀನ ಹುಡುಕಬೇಕು"


"ಸಾಧ್ಯತೆ ಎರೆಡು ಆ ಸ್ವಾಮಿ ಯಾವುದೋ ಮಾಟ ಮಂತ್ರ ಮಾಡುವವನಾಗಿದ್ದು ಗಂಡುಮಗುವನ್ನು ಬಲಿಕೊಡಬೇಕಿದ್ದುದರಿಂದ ಗಂಡು ಮಗುವನ್ನು ಕೊಂಡೊಯ್ದಿದ್ದಾನೆ. ಹಾಗಿದ್ದಲ್ಲಿ ಅವನು ನಿನ್ನನ್ನ ಎಲ್ಲಿಂದಕರೆತಂದ ಎಂಬುದನ್ನು ಪತ್ತೆ ಹಚ್ಚಬೇಕು ಅದು ಹೇಗೆ?" ಶಿವು ಕನ್ನಡಿಯಲ್ಲಿ ತನ್ನ ಮುಖವನ್ನೆ ನೋಡುತ್ತಿದ್ದ




ಸ್ವಾತಿಯ ಮೈ ಕಂಪಿಸಿತು



"ಶಿವು ನೀನುಮೊಬೈಲ್ ನಲ್ಲಿ ಮರಿಯಮ್ಮನ ಮಾತನ್ನೆಲ್ಲಾ ರೆಕಾರ್ಡ್ ಮಾಡಿಕೊಂಡಿದ್ದೀಯಲ್ಲಾ ಅದನ್ನ ಹಾಕು ಒಂದ್ಸಲ ಕೇಳೋಣ" ಮರಿಯಮ್ಮನಿಗೆ ಗೊತ್ತಾಗದ ಹಾಗೆ ಅವಳ ಮಾತನ್ನೆಲ್ಲಾ ರೆಕಾರ್ಡ್ ಮಾಡಿಕೊಳ್ಳುವ ಉಪಾಯ ಸ್ವಾತಿಯೇ ಕೊಟ್ಟಿದ್ದು




ಶಿವು ಆನ್ ಮಾಡಿದ




ಮಾತುಮುಂದುವರೆಯುತ್ತಿತ್ತು




"ಅವನು ಕೊಟ್ಟ ಹಣ ತಗೊಂಡು ಮಗೂನ ಅವನಿಗೆ ಕೊಟ್ಟು ನಿನ್ನನ್ನ ಕೈಗೆತ್ತಿಕೊಂಡೆ. ತುಂಬಾ ಚೆನ್ನಾಗಿದ್ದೆ ನೀನು. ನಿನ್ನ ಬಟ್ಟೆ ಬರೆ ಹೊದ್ಕೊಂಡಿದ್ದು ಎಲ್ಲಾನೂ ಬಿಚ್ಚಿ ಒಂದು ಬ್ಯಾಗಲ್ಲಿ ಹಾಕಿ ನಿನ್ನನ್ನ ಪಾರ್ವತಮ್ಮನ ಪಕ್ಕದಲ್ಲಿ ಮಲಗಿಸಿದೆ"




"ಶಿವು ಸ್ಟಾಪ್ ಮಾಡು" ಸ್ವಾತಿ ಏನೋ ಹೊಳೆದವಳಂತೆ ನುಡಿದಳು




"ಮರಿಯಮ್ಮ ನನ್ನ ಬಟ್ಟೇನ್ಲೆಲ್ಲಾ ಯಾವುದೋ ಬ್ಯಾಗ್‌ಲ್ಲಿ ಹಾಕಿದೆ ಅಂದಳಲ್ಲ ಅದು ಸಿಗಬಹುದಾ"


"ಹೌದಲ್ವಾ . ಆದರೂ ಆ ಬಟ್ಟೇನೆಲ್ಲಾ ಅವಳು ತಂದಿರ್ತಾಳೆ ಅಂತ ಹೇಗೆ ಹೇಳೋದು"ಶಿವೂನ ದನಿಯಲ್ಲಿ ನಿರಾಸೆ ತುಂಬಿತ್ತು

"ಆದರೂ ಒಂದು ಸಲ ಕೇಳೋಣಾ ಶಿವು"

ಕಾರಿನಿಂದ ಇಳಿದು ಮರಿಯಮ್ಮನ ಮನೆಯತ್ತ ನಡೆದರು


ಮರಿಯಮ್ಮನ ಮುಖದಲ್ಲಿ ಅಸಂತೋಷ ಎದ್ದು ಕಾಣುತ್ತಿತ್ತು

"ಅಲ್ಲಾ ಆ ಬಟ್ಟೇನಲ್ಲಾ ನಾನ್ಯಾಕೆ ತರಲಿ . ಅದನ್ನಾ ಆ ಮನೇಲೇ ಬಿಟ್ಟು ಬಂದೆ ನಂದು ಒಂದಷ್ಟು ಸಾಮಾನು ಇತ್ತು ಅಲ್ಲಿ. ಮತ್ತೆ ಮತ್ತೆ ಬಂದು ತೊಂದರೆ ಕೊಡ್ಬೇಡಿ "



ಶಿವು ಹೇಳಿದ


"ಮರಿಯಮ್ಮ ನಾವೆಷ್ಟು ಸಲ ಬರ್ತೀವೋ ಆಗೆಲ್ಲಾ ನಿಂಗೆ ಮೂರು ಮೂರು ಸಾವಿರ ರೂಪಾಯಿ ಸಿಗುತ್ತೆ . ಈಗೇನ್ ಹೇಳ್ತೀಯಾ" ಅವಳನ್ನೆ ಅವಲೋಕಿಸಿದ


ಅವಳಿಗಾದ ಸಂತೋಷ ಗೊತ್ತಾಗುತ್ತಿತ್ತು



"ಹಂಗಿದ್ರೆ ಸರಿ. ಸ್ವಾತಿ ನಿಮ್ಮ ಊರಲ್ಲಿ ಒಂದು ಹುಣಿಸೇ ಹಣ್ಣಿನ ಮರ ಇತ್ತಲ್ಲಾ ಅದು ಈಗಿದೆಯಾ?"

ಸ್ವಾತಿಗೆ ತಲೆ ಕೆಟ್ಟಿತು


"ಮರಿಯಮ್ಮ ನಂಗೆ ಬೇಕಾಗಿರೋದೇನು , ನೀನೇನು ಹೇಳ್ತಾ ಇದ್ದೀಯಾ?"


"ಹಂಗಲ್ಲಾ ಆ ಹುಣಿಸೇ ಹಣ್ಣಿನ ಮರದ ಪಕ್ಕ ಒಂದು ಸಣ್ಣ ಮನೆ ಇತ್ತು. ಅದು ಯಾರೋ ಶಿವರಾಜ್ ಗೌಡ ಅನ್ನೋರ ಮನೆ . ನಾನು ಬಾಡಿಗೆಗೆ ತಗೊಂಡಿದ್ದು ಅವರನ್ನಕೇಳಿದರೆ ಆ ಬಟ್ಟೆ ವಿಷಯ ಗೊತ್ತಾಗುತ್ತೆ ಹಾಗೆ ನನ್ನ ಪಾತ್ರೆಗಳು ಸಿಗುತ್ತೇ"


ಸ್ವಾತಿ ನೆನಪಿಸಿಕೊಳ್ಳತೊಡಗಿದಳು.


ಅವಳಾಗ ಹತ್ತನೇ ತರಗತಿಯಲ್ಲಿ ಓದುತ್ತಿದ್ದಳು. ಅಪ್ಪ ಶಿವರಾಜ್ ಗೌಡ ಎಂಬಾತನ ಜಮೀನನ್ನು ಕೊಂಡುಕೊಂಡಿದ್ದೇನೆ ಎಂದು ಹೇಳುತ್ತಿದ್ದರು.


" ಹೌದು ಈಗ ಅಲ್ಲಿ ಹುಣಿಸೇ ಮರ ಇಲ್ಲ ಅದನ್ನ ಕೆಡವಿ ಅಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಬಂದಿದೆ ಅದು ಅಪ್ಪಂದೇ "ಎಂದಂದವಳ ಮುಖವನ್ನು ನೋಡಿ ನಕ್ಕಳು ಮರಿಯಮ್ಮ


ಆ ನಗುವಿನ ಅರ್ಥ ಆಗಿ ಪೆಚ್ಚಾದಳು ಸ್ವಾತಿ. ಈಗ ರೆಡ್ಡಿಗಳು ಅವಳಪ್ಪ ಅಲ್ಲ ಎಂಬ ಗೂಢಾರ್ಥ ಅದು

"ಅದು ಇವರ ಮಾವಂದೇ" ಎಂದು ತಿದ್ದಿದಳು.


"ಹಾಗಿದ್ರೆ ಮಾವನ್ನೇ ಕೇಳೋಣ ನಡೀ" ಎಂದು ಹೇಳಿ ನಿಂತ ಶಿವು


ಮರಿಯಮ್ಮ ಅವನನ್ನೇ ನೋಡಿದಳು. ಹಣದ ಹಸಿವಿನವಳು

ಐನೂರರ ಆರು ನೋಟು ಕೊಟ್ಟ.


"ಆಗಾಗ ಬರ್ತಾ ಇರಿ" ಮರಿಯಮ್ಮ ಇಲ್ಲದ ಆತ್ಮೀಯತೆ ತೋರಿದಳು.


ಶಿವು ಸ್ವಾತಿ ಮನೆ ದಾರಿ ಹಿಡಿದರು


**********************


ರೆಡ್ಡಿಯವರು ತಲೆ ಕೆಡಿಸಿಕೊಂಡಿದ್ದರು. ಅಲ್ಲಾ ಸ್ವಾತಿ ತಲೆ ಕೆಡಿಸಿದ್ದಳು

"ಆ ಜಮೀನಿನಲ್ಲಿ ಒಂದು ಮನೆ ಇತ್ತಲ್ಲಾ ಆ ಮನೆ ಕೆಡವಿದಾಗ ಏನೇನು ಸಿಕ್ಕವು ಅಪ್ಪ ಅದೆಲ್ಲಾ ಎಲ್ಲಿವೆ" ಅವಳ ಪ್ರಶ್ನೆಗೆ ತಿಣುಕಾಡುತ್ತಿದ್ದರು


"ಸ್ವಾತಿ ಆ ಮನೆ ಹುಣಿಸೇ ಮರದ ಹತ್ರ ಇತ್ತು ಅಂತಾ ಎಲ್ಲಾ ದೆವ್ವದ ಮನೆ ಅಂತಿದ್ದರು. ಶಿವ್ರಾಜ್ ಗೌಡನೇ ಅದನ್ನ್ ಕೆಡವಿಸಿದ್ದ ನಾನು ಬರೀ ಹುಣಿಸೇಮರಾನ ಮಾತ್ರ ಕೆಡವಿಸಿದ್ದೆ" ರೆಡ್ಡಿಯವರು ತಮ್ಮ ತಲೆಯಲ್ಲಿದ್ದ ನೆನಪಿನ ಭಂಡಾರದಲ್ಲಿ ಆಯ್ದು ಕೊಟ್ಟರು.

"ಅಪ್ಪಾ ಆ ಶಿವ್ರಾಜ ಅಂಕಲ್ ಎಲ್ಲಿ ಸಿಗ್ತಾರೆ?"


"ಅವನು ಈಗ ...................."


"ಕೋರಮಂಗಲದಲ್ಲಿ ಮನೆ ಕೊಂಡ್ಕೊಂಡಿದಾನೆ ಅಂತ ಯಾರೋ ಹೇಳ್ತಿದ್ದ ಹಾಗಿತ್ತು"


"ಅಪ್ಪಾ ಪ್ಲೀಸ್ ನಂಗೆ ಅವರ ಅಡ್ರೆಸ್ ಬೇಕು "


"ಆಯ್ತಮ್ಮ ಸ್ವಾತಿ ಅಪ್ಪಾಂತ ಕರೀತಿಯ ಅಪ್ಪ ಅಮ್ಮನ್ನ ಹುಡುಕ್ತೀಯಾ . ಏನೋ ಮಾಡ್ಕೋ ಹೋಗು" ರೆಡ್ಡಿಯವರ ಕಣ್ಣಾಲಿಗಳು ತುಂಬಿದ್ದವು. ಮಗನ್ನ ಹುಡುಕಿಸುವ ಪ್ರಯತ್ನ ಅವರು ಮಾಡಿರಲಿಲ್ಲ . ಕಾಣದ ಮಗನಿಗಾಗಿ ಹಂಬಲಿಸುವುದಕ್ಕಿಂತ ಕಣ್ಮುಂದೆ ಇರುವ ಸ್ವಾತಿಯ ಸಂತೋಷವೇ ಅವರಿಗೆ ಸಾಕಾಗಿತ್ತು


"ಸ್ವಾತಿ " ಅಮ್ಮನ ದನಿ ಕೇಳಿತು ಮಮತೆ ತುಂಬಿತ್ತು ದನಿಯಲ್ಲಿ


ಐದು ದಿನಗಳಾಗಿದ್ದವು ಅಮ್ಮನ ಈ ದನಿ ಕೇಳಿ ಅವರತ್ತ ನೋಡಿದಳು

"ಸ್ವಾತಿ ಆವತ್ತು ಹೆತ್ತ ಕರುಳ ಸಂಕಟದಲ್ಲಿ ಏನೇನೋ ಅಂದುಬಿಟ್ಟೆ. ನೀನೆ ನನ್ಮಗಳು ಸ್ವಾತಿ. ಆ ಕಾಣದಿರೋ ಮಗಂಗೋಸ್ಕರ ನಾನು ನಿನ್ನ ಮನಸನ್ನ ತುಂಬಾ ನೋಯ್ಸಿಬಿಟ್ಟೆ. ನೀನ್ಯಾರನ್ನೂ ಹುಡುಕಬೇಡಾ ಕಣೆ. ನಾನೆ ನಿನ್ನಮ್ಮ ಸ್ವಾತಿ"

ಅವರ ಅಪ್ಪುಗೆಯಲ್ಲಿ ಕರಗಿದಳು. ಪಾರ್ವತಮ್ಮ ಅಂದು ಸಂಕಟದಲ್ಲಿ ಹಾಗೆಲ್ಲಾ ಮಾತಾಡಿದರೂ ಅವರ ಮನಸು ಸ್ವಾತಿಯನ್ನು ನೆನೆದು ಚುರುಕೆಂದ್ದಿತ್ತು. ಹೆತ್ತ ಮಗನೋ ಸಾಕಿದ ಮಗಳೋ ಎಂಬ ತಾಕಲಾಟದಲ್ಲಿ ಒಂಬತ್ತು ತಿಂಗಳ ನಂಟಿಗಿಂತ ಹತ್ತೊಂಬತ್ತು ವರ್ಷ್ದದ ಒಡನಾಟವೇ ಗೆದ್ದಿತ್ತು


"ಅಮ್ಮಾ ನಾನು ಯಾವತ್ತಿದ್ದರೂ ನಿಮ್ಮಿಬ್ಬರ ಮಗಳೇ ಆದರೆ ನಂಗೆ ನನ್ನ ನೆಲೇನ ಹುಡುಕಲೇಬೇಕು ಅಂತ ಮನಸಿಗೆ ಬಂದಿದೆ ಪ್ಲೀಸ್ ತಡೀಬೇಡಾಮ"

ಪಾರ್ವತಿ ಅವಳ ಕಣ್ಣೊರೆಸಿದರು.



ಅಂದು ತಾಯಿ ಮಗಳು ಜೊತೆಯಲ್ಲೇ ಮಲಗಿದರು. ರಾತ್ರಿ ಎಲ್ಲಾ ತನ್ನ ಅನ್ವೇಷಣೆ ಅದರ ಗುರಿಯ ಬಗ್ಗೆ ಮಾತಾಡುತ್ತಿದಳು ಸ್ವಾತಿ.


ಆ ದಿನ ಕಳೆಯಿತು. ಎರೆಡು ದಿನಗಳಾದವು



"ಸ್ವಾತಿ ಶಿವ್ರಾಜ್ ಗೌಡರ ಅಡ್ರೆಸ್ ಸಿಕ್ತು" ರೆಡ್ಡಿಯವರು ಕೂಗಿದರು ಲಾನ್‍ನಿಂದ

ಸ್ವಾತಿ ಒಂದೇ ಹೆಜ್ಜೆಗೆ ನುಗ್ಗಿ ಬಂದಳು.


ಅವರ ಅಡ್ರೆಸ್ ತೆಗೆದುಕೊಂಡು ಸ್ವಾತಿ ಹೊರಟಳು ಕೋರಮಂಗಲಕ್ಕೆ. ಜೊತೆಗೆ ಶಿವು .
ಡ್ರೈವ್ ಮಾಡುತ್ತಿದ್ದ ಶಿವುವನ್ನೆ ದಿಟ್ಟಿಸಿದಳು . ಏಳೆಂಟು ದಿನಗಳಾಗಿತ್ತು ಶಿವು ಕೆಲಸಕ್ಕೆ ಹೋಗಿ

"ಶಿವು ನಿಂಗೆ ರಜಾ ಸಿಕ್ತಾ ಇದ್ಯಾ?"

"ಇಲ್ಲಾ ಸ್ವಾತಿ ನಮ್ ಎಚ್ ಆರ್ ಮೂರ್ನಾಲ್ಕು ಮೇಲ್ ಹಾಕ್ತಿದ್ದಾನೆ ಬಡಕೋಳ್ಳಿ ಅಂತಾ ನಾನು ಸುಮ್ನಿದೀನಿ" ಡ್ರೈವ್ ಮಾಡುತ್ತಾ ರಸ್ತೆಯನ್ನೇ ನೋಡುತ್ತಿದ್ದ


"ನಾಳೆ ಕೆಲ್ಸದಿಂದ ತೆಗೆದು ಹಾಕಿದ್ರೆ?" ಆತಂಕದಿಂದ ಪ್ರಶ್ನಿದಳು

"ತೆಗೆದು ಹಾಕಲಿ ಕೆಲ್ಸ ನಂಗೆ ಇನ್ನೊಂದು ಸಿಗುತ್ತೆ . ಆದರೆ ನನ್ನ ಸ್ವಾತಿಗೆ ಸಂತೋಷ ಆದರೆ ಸಾಕು"

ಕಿರುನಗೆ ಮಿಂಚಿತು ಅವನ ಮುಖದಲ್ಲಿ

ತನಗಾಗಿ ಎಲ್ಲರೂ ಎಷ್ಟೊಂದು ಶ್ರಮ ವಹಿಸುತ್ತಾರೆ. ಶಿವೂ ಮೇಲೆ ಪ್ರೀತಿ ಮೂಡಿತು . ಅ

ಶಿವ್‌ರಾಜರ ಬಂಗಲೆ ದೊಡ್ಡದೇ ಆದರೂ ರೆಡ್ಡಿಯವರ ಬಂಗಲೇಯಷ್ಟೇನೂ ಇರಲಿಲ್ಲ

ಆಗಲೇ ಶಿವರಾಜರಿಗೆ ರೆಡ್ಡಿಯವರು ಫೋನ್ ಮಾಡಿ ಮಗಳು ಬರುವ ವಿಷಯ ತಿಳಿಸಿದ್ದರು. ಬಾಗಿಲು ತೆರೆದವರು ಗೌಡರ ಹೆಂಡತಿಯೇ. ಸ್ವಾಗತಿಸಿದರು


ರೆಡ್ಡಿಯವರ ಮಗಳಿಗೆ ಈ ಸ್ವಾಗತ. ಗೌಡರೂ ಬಂದರು


ಕಾಫಿ ಕುಡಿಯುತ್ತಾ ಮಾತಿಗೆ ಶುರು ಮಾಡಿದಳು


"ಅಂಕಲ್ ನಾನು ಹುಟ್ಟಿದ್ದು ನಿಮ್ಮ ಮನೇಲೇ ಅಂತೆ . ಆಗ ನಮ್ಮಜ್ಜಿ ಒಂದು ಬ್ಯಾಗ್ ಇಟ್ಟಿದ್ದರು ನನಗೆ ಅಂತ ಬಟ್ಟೆ ಜೊತೆ ಒಂದು ಇಂಪಾರ್ಟೆಂಟ್ ಡಾಕ್ಯುಮೆಂಟ್ಸ್ ಇಟ್ಟಿದ್ದರಂತೆ. ಆ ಬ್ಯಾಗ್ ನಿಮಗೇನಾದರೂ ಸಿಕ್ಕಿತ್ತಾ ತುಂಬಾ ಮುಖ್ಯಾ ಒಬ್ಬರ ಜೀವನಾನೆ ಅದರಲ್ಲಿದೆ" ಅಪ್ಪ ಹೇಳಿದ್ದರು ನಿಜ ವಿಷಯ ತಿಳಿಸಬೇಡ ಎಂದು


"ಅದೆಂಗೆ ಗೆಪ್ತಿ ಇಟ್ಟಿರಕಾಯ್ತದೆ. ಈಗಾಗ್ಲೆ ಈಟೋಂದು ವರ್ಸಾ ಆದ ಮ್ಯಾಕೆ"

ಗೌಡರು ಪೇಚಾಡಿದರು. ರೆಡ್ದಿಯವರ ಮಗಳು ಬಂದಿರೋದು ಅವರು ಕೇಳಿದ್ದನ್ನ ಕೊಟ್ಟರೆ ನಾಳೆಗೆ ತನಗೆ ಪ್ರಯೋಜನ ಅಲ್ಲವೇ? ಅವರ ಮನಸಲ್ಲಿ ಎಣಿಕೆ ಮಾಡುತ್ತಾ ಹೆಂಡತಿಯ ಕಡೆ ನೋಡಿದರು

ಅವರ ಹೆಂಡತಿ ಹೇಳಿದರು

" ಆಗಲೆ ಆ ನರ್ಸಮ್ಮ ಓಡೋದ್ ಮ್ಯಾಕೆ ಆ ಮನೆಗೆ ಯಾರೂ ಬರ್ಲಿಲ್ಲ. ಆ ಮನೆ ಹಾಳಿ ಬಾಡ್ಗೇನೋ ಕೊಟ್ಟಿರಲಿಲ್ಲ. ಹಂಗಾಗಿ ಒಂದಿಸಾ ನಾನೇ ಮನೆಗೆ ಓಗಿ ಅಲ್ಲಿಂದೆಲಾ ಬಾಚ್ಕೊಂಡು ಬಂದಿದ್ದೆ ಪಾತ್ರೇ ಸಾಮಾನು ಅಂತ ಒಂದಷ್ಟು ಇತ್ತು. ಹಂಗೆ ಬ್ಯಾಗೇನೂ ಇದ್ದಿದಂಗೆ ಗೆಪ್ತಿ ಇಲ್ಲ"

ಅವರು ನೆನಪು ಮಾಡಿಕೊಳ್ಳುತ್ತಿದ್ದರು

ಸ್ವಾತಿಯ ಮುಖ ನಿರಾಸೆ ಯಿಂದ ಬಾಡಿತ್ತು.

ಶಿವೂಗೆ ಹೋಗೋಣ ಎಂಬಂತೆ ಸನ್ನೆಮಾಡಿದಳು

"ಸರಿ ಅಂಕಲ್ ನಿಮ್ಗೇನಾದರೂ ಗೊತ್ತಾದರೆ ಹೇಳಿ " ಅವರಿಗೆ ಕೈ ಮುಗಿದು ಹೊರಬರಲಾರಂಭಿಸಿದರು

"ಇರವ್ವ ಸ್ವಾತಿ ಅದ್ರಾಗೆ ಒಂದು ಚೆಂದದ ಶಾಲು ಮತ್ತೆ ಮಗು ಬಟ್ಟೇ ಇತ್ತಾ " ಗೌಡತಿ ಕರೆದಾಗ ಸ್ವಾತಿಯ ಮುಖ ಸಂತಸದಿಂದ ಅರಳಿತು. ಹಿಂದೆ ತಿರುಗಿದಳು

"ಹಾ ಹೌದು ಆಂಟಿ . ನಿಮಗೆ ಸಿಕ್ಕಿತ್ತಾ?"



"ಔದವ್ವಾ ಈಗ ಗ್ನಾಪ್ನ ಬರ್ತಿದೆ, ಒಂದು ಬಿಳಿ ಬ್ಯಾಗಂತದ್ದು ಸಿಕ್ತು . ಪುಟ್ಟ ಮಗೂದು. ಅದನ್ನೇನು ಮಾಡೋದು ಅಂತ ನಮ್ಮ ಕೆಲ್ಸದಾಕೆಗೆ ಕೊಟ್ಟುಬಿಟ್ಟೆ.ಅವ್ಳೆಲ್ಲಿದಾಳೋ ಗೊತ್ತಿಲ್ಲ. "

ಸ್ವಾತಿಗೆ ನಿರಾಸೆಯಾಯ್ತು

"ಆದರೆ ಆ ಶಾಲು ಮಾತ್ರ ನನ್ನತ್ರಾನೆ ಇದೆ ಅನ್ಸುತ್ತೆ . ತುಂಬಾ ವೈನಾಗಿತ್ತು. ಮೆತ್ ಮೆತ್ತಗೆ ಅಂತಾದ್ದು ಈಗೆಲ್ಲೂ ಸಿಕ್ಕಲ್ಲ. ಅಂತೇಳಿ ನಾನೇ ಮಡಿಕೊಂಡಿದ್ದೆ "

"ಆಂಟಿ ಹುಡುಕುತ್ತೀರಾ ಪ್ಲೀಸ್"

" ಅಯ್ಯೋ ಬಿಡವ್ವಾ ಅಂತಾದಲ್ಲ ಅಂದ್ರೆ ಅದಕ್ಕಿಂತ ನೂರು ಪಟ್ಟು ಚೆನ್ನಾಗಿರೋದನ್ನ ಆರ್ಡ್ರ್ ಮಾಡಿ ಕೊಡಿಸ್ತಿನಿ. "

"ಇಲ್ಲಾ ಅಂಕಲ್ ನಂಗೆ ಅದೇ ಬೇಕು"

ಸ್ವಾತಿ ಮತ್ತೆ ಗೌಡತಿಯನ್ನೇ ನೋಡಿದಳು

ಏನನ್ನಿಸಿತೋ ಶಿವ್ರಾಜ್ ಗೌಡರು ಕೊಡು ಎಂದು ಸನ್ನೆ ಮಾಡಿದರು

ಗೌಡತಿ

ಆಳನ್ನ ಕರೆದು ಅಟ್ಟದ ಮೇಲಿನಿಂದ ದೊಡ್ಡ ಟ್ರಂಕನ್ನ ತೆಗೆಯಲು ಹೇಳಿದರು

ದೊಡ್ಡ ಟ್ರಂಕ್ ಅದು

ಎಲ್ಲಾ ಹಳೆಯದನ್ನೂ ತನ್ನ ಹೊಟ್ಟೆಯಲ್ಲಿಟ್ಟುಕೊಂಡಿತ್ತು


ಗೌಡತಿ ಒಂದೊಂದು ಸಾಮಾನನ್ನೂ ತೆಗೆದು ಏನನ್ನೋ ನೆನಪಿಸಿಕೊಳ್ಳುತ್ತಿದ್ದರು. ಅವರಿಗೆ ಅವರ ಗತ ಜೀವನದ ನೆನಪು .ಆದರೆ ಸ್ವಾತಿಗೆ ಅವಳ ಭೂತಕಾಲವೇ ಅವಳ ಭವಿಷ್ಯ್ದದ ನಿರ್ಣಾಯಕ ಕಾಲ.


ಕೊನೆಗೂ ಆ ಶಾಲ್ ತೆಗೆದರು

ಗುಲಾಬಿ ಬಣ್ಣದ ಶಾಲ್ ಮಗುವಿಗೆಂದೇ ಮಾಡಿಸಿದ್ದ ಹಾಗಿತ್ತು.

ನೋಡಿದೊಡನೆ ಎಂತಹವರಿಗೂ ಹಿಡಿಸುವಂತಹದ್ದು . ಮುದ್ದಾದದ್ದು

ಅದನ್ನು ಮುಟ್ಟಿದಳು ಅಪ್ಯಾಯ ಮಾನವಾಗಿ.

ಎಂತಹದ್ದೋ ಭಾವನೆ. ತನ್ನದೆನ್ನುವ ಭಾವನೆ. ತನ್ನವರು ಸಿಕ್ಕಿಯೇ ಬಿಟ್ಟರೆನ್ನುವಷ್ಟು ಸಂಭ್ರಮ

ಭಾವನೆಗಳ ಕಟ್ಟೆಯೊಡೆಯಿತು

ಅದನ್ನು ಕೈಗೆತ್ತಿಕೊಂಡು ಅಳಲಾರಂಭಿಸಿದಳು

"ಯಾಕವ್ವ ಏನಾಯ್ತು? " ಗೌಡರು ಗಾಬರಿಯಾದರು.

"ಏನಿಲ್ಲ ಅಂಕಲ್ " ಅವರಿಗೆ ಬದಲಿ ಹೇಳಿದ.

"ಈ ಶಾಲ್ ನಾವು ತಗೊಂಡು ಹೋಗ್ತೀವಿ ಅಂಕಲ್" ಶಿವೂನೆ ಮಾತಾಡಿದ.

"ಆಯ್ತಪ್ಪ ಧಾರಳವಾಗಿ. ಆದ್ರೆ ಆ ಹೆಣ್ಮಗ ಯಾಕಿಂಗೆ ಅಳ್ತಾ ಇದೆ"ಗೌಡರ ಕಾಳಜಿಗೆ ವಂದಿಸಿದ ಶಿವು ಸ್ವಾತಿಯನ್ನು ಸಮಾಧಾನ ಮಾಡುತ್ತಾ ಹೊರಗೆ ಕರೆದುಕೊಂಡು ಬಂದ.

ಕಾರಲ್ಲಿ ಕುಳಿತು ಆ ಶಾಲನ್ನೆ ದಿಟ್ಟಿಸುತ್ತಿದ್ದಳು ಸ್ವಾತಿ.

"ಶಿವು ನನ್ನ ನಿಜವಾದ ನೆಂಟ ಅಂದ್ರೆ ಇದೇ ಅಲ್ವಾ?"

"ಸ್ವಾತಿ ಇದು ಭಾವುಕತೆಗೆ ಸಮಯ ಅಲ್ಲಾ. ಆ ಶಾಲನ್ನ ಪೂರ್ತಿಯಾಗಿ ಬಿಚ್ಚು ನೋಡೋಣ" ಕಾರನ್ನು ನಿಲ್ಲಿಸಿ ನುಡಿದ
ಸ್ವಾತಿ ಶಾಲನ್ನು ಬಿಚ್ಚಿದಳು ದೊಡ್ಡದೇ .
ಎರಡನೇ ಮಡಿಕೆ ಬಿಚ್ಚಿದಳು.
ಯಾರೋ ನವಿಲಿನ ಚಿತ್ರ ಬಿಡಿಸಿದ್ದರು ಮುದ್ದು ಮುದ್ದಾಗಿತ್ತು. ಉಲ್ಲನ್ ನಿಂದ ಕುಸುರಿ ಮಾಡಿದ್ದಾಗಿದ್ದಿತ್ತು.
ಕೆಳಗೆ ಎಂತಹದ್ದೋ ಡಿಸೈನ್.
"ಇದೇನು ಡಿಸೈನ್ ಹೀಗಿದೆ ಸ್ವಾತಿ" ಶಿವು ಆ ಡಿಸೈನ್ ಮುಟ್ಟುತ್ತಾ ಕೇಳಿದ
"ಶಿವು ಇರು ಇರು ಇದು ಅಕ್ಷರ . ಹಾ ತಮಿಳು ಅಕ್ಷರ ಇದು " ಅವನ ಮಾತನ್ನು ತಡೆಯುತ್ತಾ ಕೂಗಿದಳು
"ತಮಿಳಾ ?" ಆಶ್ಚರ್ಯದಿಂದ ಅದನ್ನೇ ನೋಡುತ್ತಾ ಉದ್ಗರಿಸಿದವನ ಮನದಲ್ಲಿ ನೂರೆಂಟು ಪ್ರಶ್ನೆಗಳು .
ಸ್ವಾತಿಯ ಮನದಲ್ಲೂ ಆನಂದದ ಬುಗ್ಗೆಯ ಜೊತೆಗೆ ಎದೆಯಲ್ಲಿ ಕಂಪನವಾಯ್ತು
ಶಿವೂ ಪ್ರಶ್ನೆಗಳ ಬೊಕ್ಕೆಯಿಂದ ಒಂದನ್ನು ಆರಿಸಿ ಅವಳೆಡೆ ಎಸೆದ
"ಸ್ವಾತಿ ತಮಿಳಿನಲ್ಲಿ ಬರೆದಿರೋದು ಏನು ?"
ಸ್ವಾತಿ ತನ್ನನ್ನು ತಾನು ಪ್ರಶ್ನಿಸಿಕೊಂಡಳು
"ಹೌದು ಏನು?"
(ಮುಂದುವರೆಯುವುದು)

Tuesday, November 10, 2009

ಗಮ್ಯ ಹುಡುಕುತ್ತಾ ಭಾಗ ೨

"ನಂಗೆ ನನ್ನ ಮಗ ಬೇಕು" ಅಮ್ಮ ಜೋರಾಗಿ ಅಳುತ್ತಿದ್ದುದು ಕೇಳಿಸುತ್ತಿತ್ತು .ಮೂರು ದಿನವಾಗಿತ್ತು ಮರಿಯಮ್ಮನ ಭೇಟಿಯಾಗಿ. ಆಗಲೇ ಎಷ್ಟೊಂದು ಮಾತುಕಥೆಗಳು. ಊರಿನ ಜನಕ್ಕೆಲ್ಲಾ, ನೆಂಟರಿಗೆಲ್ಲಾ ವಿಷಯ ಗೊತ್ತಾಗಿತ್ತು. ಮೂರು ದಿನದಿಂದ ನಿದ್ದೆ ಇಲ್ಲದೆ ಒದ್ದಾಡುತ್ತಿದ್ದಳು . ಜೊತೆಗೆ ತಾನ್ಯಾರು ಎಂಬುದೂ ತಿಳಿಯದ ನತದೃಷ್ಟೆ ತಾನೆಂದು ಅಳುವುದಾಗಿತ್ತು. ಯಾವುದೋ ಯೋಚನೆಯಲ್ಲಿದ್ದ ಸ್ವಾತಿ ದಡಾರನೆ ಎದ್ದಳುತಾಯಿಯ ಮಾತು ಕೇಳಿ
ತಾನೆಲ್ಲಿದ್ದೇನೆ ಸುತ್ತಾ ನೋಡಿದಳು. ಅದು ಅವಳ ರೂಮ್. ಹಾ ತನ್ನ ರೂಮ್? ತನ್ನ ಮನೆ? ತನ್ನ ಅಮ್ಮ? ಯಾರು ಗೋಜಲಾಗತೊಡಗಿತು ಎದ್ದವಳಿಗೆ ಅಪ್ಪನ ದನಿ ಕೇಳಿಸಿ ನಿಧಾನವಾಗಿ ರೂಮಿನ ಬಾಗಿಲ ಬಳಿ ನಿಂತಳು.

"ಏಯ್ ನಿಂಗೇನಾಗಿದೆಯೇ ಬೋ**.ಇಷ್ಟು ದಿನಾ ಸ್ವಾತೀನಾ ನನ್ ಮಗಳೂ ಮಗಳೂ ಅಂತಾ ಮುದ್ದು ಮಾಡ್ತಿದ್ದೆ. ಈವಾಗ ನಿಂಗೆ ನಿನ್ನ ಮಗ ಬೇಕು ಅಂದ್ರೆ ಸಿಗ್ತಾನಾ?ಇಷ್ಟು ದಿನಾ ಸ್ವಾತಿನೆ ಮಗಳು ಅನ್ಕೊಂಡ ಹಾಗೆ ಇದ್ದು ಬಿಡೋಣ" ಅಪ್ಪನ ದನಿ

"ನಿಮ್ಗೊತ್ತಿಲ್ಲ ನಿಮ್ಮ ತಾಯಿ ನಾನು ಮತ್ತೆ ಇನ್ನೊಂದು ಮಗೂಗೆ ತಾಯಿ ಆಗಲ್ಲ ಅಂತ ಗೊತ್ತಾದಾಗ ಗಂಡು ಮಗ ಬೇಕು ಅಂತ ನನ್ನನ್ನ ಎಷ್ಟೊಂದು ಬೈತಾ ಇದ್ರು ಗೊತ್ತಾ. ನನ್ನ ಕಷ್ಟ ನಿಮಗೆ ಹೇಗೆ ಗೊತ್ತಾಗುತ್ತೆ. ನಮಗೆ ಒಬ್ಬ ಗಂಡು ಮಗ ಇದ್ದಾನೆ ಅಂದ್ರೆ ಹೇಗ್ರಿ ಬಿಟ್ಟಿರೋದು" ಪಾರ್ವತಮ್ಮನೂ ದನಿ ಏರಿಸಿದರು

"ಅದೆಂಗೆ ಇನ್ನೊಂದು ಮಗಾನ ನಿನ್ನ ಮಗು ಅನ್ಕೊಂಡು ಬೆಳೆಸ್ದೆ ನೀನು. ನಾವೂ ನಮ್ಮನೆ ಮಗೂನೆ ಅನ್ಕೊಂಡು ನಮ್ಮ ಶಿವೂಗೆ ಮದುವೆ ಮಾಡಿಕೊಡೋಣ ಅನ್ಕೊಂಡಿದ್ವಿ ಸಧ್ಯ ಮುಂಚೇನೆ ಗೊತ್ತಾಯ್ತಲ್ಲ" ಅದು ಶೀಲಾ ಅತ್ತೆ ದನಿ

ಸ್ವಾತಿಯ ಹೃದಯ ಹೊಡೆದುಕೊಳ್ಳಲಾರಂಭಿಸಿತು

"ಅಂದ್ರೆ ನೀನು ಏನುಹೇಳ್ತಾ ಇದ್ದೀಯಾ ಸ್ವಾತಿಗೆ ಶಿವು ಜೊತೆ ಮದುವೆ ಮಾಡಲ್ವಾ?" ಅಪ್ಪನ ಆತಂಕದ ದನಿ

"ಅದೆಂಗಾಯ್ತದೆ . ಹೆಂಗಿದ್ದರೂ ಅವಳು ನಿಮ್ಮಗಳಲ್ಲ.ನಿಮ್ಮಗ ಬಂದ್ಮೇಲೆ ಅವಳಿಗೆ ಯಾವ ಆಸ್ತಿ ಸಿಕ್ತೈತೆ.ಯಾವುದೋ ಅನಾಥ ಹೆಣ್ಣಿಗೆ ಮದುವೆ ಮಾಡಕಾಯ್ತದಾ?"

ಶ್ರೀಧರ್ ಮಾವನ ದನಿ

ಸ್ವಾತಿಯ ಕಣ್ಣಿಂದ ನೀರು ನುಗ್ಗಲಾರಂಭಿಸಿತು

"ಅಪ್ಪಾ ನೀನು ಹೀಗೆಲ್ಲಾ ಮಾತಾಡಬೇಡ . ನಾನು ಸ್ವಾತೀನ ಕ್ರಿಷ್ಣಾರೆಡ್ಡಿ ಮಗಳು ಅಂತ ಮದುವೆ ಆಗ್ತಾ ಇಲ್ಲ . ಅವಳು ನಂಗೆ ಹಿಡಿಸಿದಾಳೆ ಅವಳನ್ನೇ ಮದುವೆ ಆಗೋದು" ಶಿವೂನ ದನಿ ಎತ್ತರಿಸಿ ನುಡಿದ

ಸ್ವಲ್ಪ ಸಮಾಧಾನವಾಯ್ತು ಸ್ವಾತಿಗೆ

"ನಿಂಗೆ ಗೊತ್ತಾಗಲ್ಲ ಸುಮ್ನಿರೋ " ಶೀಲತ್ತೆ ಬೈದರು

ಶಿವು ತೆಪ್ಪಗಾದದ್ದು ತಿಳಿಯಿತು

"ಶೀಲು ನನ್ನ ಮಗ ಸಿಕ್ತಾನೆ ಅಂತಾ ಯಾವ ಗ್ಯಾರೆಂಟಿ . ಯಾವುದೋ ಗಡ್ಡದ ಸ್ವಾಮಿ ದುಡ್ಡು ಕೊಟ್ಟು ಮಗೂನಾ ಎತ್ಕೊಂಡ್ ಹೋದ ಅಂತಾ ಹೇಳಿದಳಲ್ಲಾ ಆ ***. ಅವನೇನು ಮಗೂನ ಬಾಳಿಸಿರ್ತಾನಾ? ಹಾಗೆ ಒಂದ್ ವೇಳೆ ನಮ್ಮಗ ಸಿಕ್ರೂ ಸ್ವಾತಿ ಹೆಸರಲ್ಲಿ ಆಸ್ತಿ ಇದ್ದೇ ಇರುತ್ತೆ. ಇಷ್ಟು ದಿನಾ ಸ್ವಾತಿನಾ ಅಷ್ಟೊಂದು ಮೆರೆಸಿ ಈಗ ಇದ್ದಕ್ಕಿದ್ದಂತೆ ಬೇಡ ಅಂದ್ರೆ ಹೇಗೆ ಒಂದು ಹೆಣ್ಣ್ ಕಣ್ಣಲ್ಲಿ ನೀರು ಹಾಕಿಸ್ಬೇಡ" ಅಪ್ಪನ ದನಿಯಲ್ಲಿ ಬೇಡಿಕೆ ಇತ್ತು

"ಸರಿ ಹಾಗಿದ್ರೆ ನಿನ್ನ ಮಗನ್ನ ಹುಡುಕಿಸಬಾರದು ಇಡೀ ಆಸ್ತಿ ಸ್ವಾತಿ ಹೆಸರಿಗೆ ಬರೀಬೇಕು . ಸ್ವಾತಿನ ದತ್ತು ತಗೋಬೇಕು " ಶ್ರೀಧರ ಮಾವನ ಅಣ್ಣ ಲಾಯರ್ raghu reddi ಹೇಳಿದ

"ಹೌದಣ್ಣಾ ಹಾಗಿದ್ರೆ ಮಾತ್ರ ನಮ್ಮ್ ಶಿವೂಗೆ ಮದುವೆ ಮಾಡಿಕೊಳ್ತೀವಿ. ಇಲ್ಲಾಂದ್ರೆ ಬೇರೆ ಯಾವ ಗಂಡಾದ್ರೂ ನೋಡು. ಗೊತ್ತಿದ್ದು ಗೊತ್ತಿದ್ದು ಹಾಳು ಬಾವಿಗೆ ಬೀಳೋಕೆ ಶಿವು ಏನು ಕುಂಟಾನ ಕುರುಡಾನಾ" ಶೀಲತ್ತೆ ಇಷ್ಟೊಂದು ಮಾತನಾಡಬಲ್ಲರೆಂದು ತಿಳಿದಿರಲಿಲ್ಲ

" ಶೀಲಾ ನಿಂಗ್ಯಾಕೆ ಇಂತಾ ಕೆಟ್ಟ ಬುದ್ದಿ ಬಂತು. ತಂದೆ ತಾಯಿಗೆ ಅವರ ಮಗನ್ನ ಹುಡುಕ ಬೇ ಡಾ ಅಂತ ದೂರ ಮಾಡ್ತೀಯಲ್ಲ ನೀನೂ ತಾಯಲ್ಲ್ವಾ. ಮಗಂಗೋಸ್ಕರ ನನ್ನಕರುಳು ಎಷ್ಟು ನರಳ್ತಿದೆ ಗೊತ್ತಾ. " ಪಾರ್ವತಿ ಅಳುತ್ತಾ ಹೇಳಿದರು

"ಆಯ್ತು ಶೀಲು. ನಮಗೊಬ್ಬಳು ಹೆಂಗಸು ಸಿಕ್ಕಳು ಅನ್ನೋದನ್ನೇ ಮರೆತುಬಿಡ್ತೀವಿ. ಇಲ್ಲಿವರೆಗೆ ಹೆಂಗಿದ್ವೋ ಹಾಗೆ ಇರೋಣ ಸ್ವಾತಿ ನನ್ನ ಮಗಳು ಅವಳ ಜೀವನ ಚೆನ್ನಾಗಿರಬೇಕು ಎಲ್ಲಾ ಆಸ್ತೀನೂ ಅವಳದ್ದೇ" ಕ್ರಿಶ್ಣಾರೆಡ್ಡಿ ದೃಡ ನಿರ್ಧಾರದಲ್ಲಿ ಹೇಳಿದರು

"ರೀ ನಂಗೆ ನನ್ನ ಮಗ ಬೇಕು. ಯಾರದ್ದೋ ಹೆಸರಿಗೆ ಆಸ್ತಿ ಯಾಕೆ ಬರೀಬೇಕು.ನನ್ನ ಮಗ ಬರಬೇಕು. ಸುಮ್ನೆ ಇರಿ " ತಾಯಿ ಪಾರ್ವತಿಯ ದನಿಯಲ್ಲೂ ಹಟದ ಛಾಯೆ

ಅವಕ್ಕಾದಳು ಸ್ವಾತಿ.ನೆನ್ನೆವರೆಗೆ ತಾನು ಈ ಮನೆ ಮಗಳು ಇಂದು ? ಯಾರೋ ಆಗಿಬಿಟ್ಟೆನಲ್ಲಾ.

"ಏಯ ಪಾರ್ವತಿ.ಅವಳು ಯಾರೋ ಹೇಗೆ ಆಗ್ತಾಳೆ ನಮ್ಮನೆ ಮಗಳು ಕಣೇ . ಇದನೆಲ್ಲಾ ಸ್ವಾತಿ ಕೇಳಿಸಿಕೊಂಡರೇ ***********" ಇನ್ನು ಏನು ಹೇಳುತ್ತಿದ್ದರೋ ಸ್ವಾತಿಯನ್ನು ನೋಡಿ ಮಾತು ನಿಂತಿತು

"ಸ್ವಾತಿ" ಅಪ್ಪ ದಂಗಾಗಿ ಕರೆದರು

"ನಿಮ್ಮನ್ನ ಅಪ್ಪ ಅಂತಾ ಕರೀಲಾ " ಸ್ವಾತಿಯ ಮಾತು ನಿಧಾನಕ್ಕೆ ಬಂದಿತು

"ಹೇಯ್ ಸ್ವಾತಿ ಇದೇನು ಹೊಸದು ನೀನ್ಯಾವತ್ತಿದ್ದರೂ ನಮ್ಮ ಮಗಳೇ. ಆ ಮುಂ*** ಹೇಳಿದ್ದೆಲ್ಲಾ ತಲೆಗೆ ಹಚ್ಕೋಬೇಡಾ ಬಾ ಇಲ್ಲಿ" ಕೃಷ್ಣಾರೆಡ್ಡಿಯವರ ಸ್ವರ ಅವರಿಗೆ ತಿಳಿಯದಂತೆ ಗದ್ಗದಿತವಾಗಿತ್ತು.

ಅಪ್ಪನ ಬಳಿ ಬಂದು ನಿಂತು ಅವರ ಎದೆಗೊರಗಿದಳು

ಅವಳ ಕಣ್ಣೀರು ಅವರ ಎದೆಯನ್ನು ತೋಯಿಸಲಾರಂಭಿಸಿತು.

"ಅಳ್ಬೇಡ ಸ್ವಾತಿ . ಛೀ ನೀನತ್ರೆ ನಮ್ಮನೆ ಲಕ್ಷ್ಮಿ ಅತ್ತ ಹಾಗೆ" ಅವಳ ತಲೆ ನೇವರಿಸಿದರು

ಸಮಾಧಾನಗೊಂಡಂತಾಗಿ ಅಲ್ಲಿಂದ ಮುಖವೆತ್ತಿ ತಾಯಿಯನ್ನು ನೋಡಿದಳು.

ಅವರ ಮುಖದಲ್ಲಿ ಅಸಮಾಧಾನದ ಛಾಯೆ ಕಾಣಿಸುತ್ತಿತ್ತು. ಅದರಲ್ಲಿ ಮೊದಲಿನ ಮಮತೆ ಕಾಣಲಿಲ್ಲ

ಅತ್ತೆ ಮಾವ ಭಾವರಹಿತವಾಗಿ ನೋಡುತ್ತಿದ್ದರು

ಶಿವು ಆತಂಕಗೊಂಡು ಸ್ವಾತಿಯತ್ತ ನೋಡುತ್ತಿದ್ದ.

ಸ್ವಾತಿ ಆಗಲೇ ನಿರ್ದಾರಮಾಡಿದ್ದಳು ತಾನು ಯಾರು ಎಂದು ತಿಳಿದುಕೊಳ್ಳಬೇಕು.ಮೂರುದಿನದಿಂದ ಮನೆಯಲ್ಲಿ ಇದೇ ಮಾತು ಕಥೆ. ಸ್ವಾತಿಯಂತೂ ಹೊರಗೇ ಬಂದಿರಲಿಲ್ಲ. ಅಲ್ಲಿನಮಾತು ಕಥೆಗಳನ್ನೆಲ್ಲಾ ಕೇಳಿ ಕೇಳಿ ಅವಳಿಗೆ ತನ್ನ ಬಗ್ಗೆ ತನ್ನ ಆ ಕಾಣದ ತಾಯಿ ತಂದೆಯ ಬಗ್ಗೆ ಜಿಗುಪ್ಸೆ ಹುಟ್ಟಿತ್ತು. ಹೇಗಾದರೂ ಮಾಡಿ ತನ್ನ ಗಮ್ಯ ತಿಳಿಯಬೇಕೆಂಬ ಛಲ ಹುಟ್ಟಿತ್ತು

"ಅಪ್ಪಾ ನಾನು ನನ್ನ ನಿಜವಾದ ಅಪ್ಪ ಅಮ್ಮ ಯಾರು ಅಂತ ತಿಳ್ಕೋಬೇಕು" ಸ್ವಾತಿಯ ದೃಡ ನಿರ್ಧಾರದ ದನಿ ಕೇಳಿ ಎಲ್ಲರೂ ಒಂದು ಕ್ಷಣ ಅಚ್ಚರಿಗೊಂಡರು

"ಸ್ವಾತಿ ಯಾಕಮ್ಮ ನಾವು ನಿಂಗೇನು ಕಡಿಮೆ ಮಾಡಿದ್ದೀವಿ. ನೀನು ಯಾರೇ ಆಗಿರು ಅದು ನಂಗೆ ಬೇಕಿಲ್ಲ. ನೀನು ನಮ್ಮನೆ ಮಗಳು . ಈ ಇಲ್ಲ ಸಲ್ಲದ ಹುಚ್ಚಾಟ ಬೇಡ" ಅಪ್ಪ ಮಾತ್ರ ಉತ್ತರಿಸಿದರು

"ಇಲ್ಲಾ ಅಪ್ಪಾ ನಾನು ಯಾರು ಅಂತ ನಂಗೆ ಗೊತ್ತಾಗಬೇಕಿದೆ. ನನ್ನನ್ನ ಯಾಕೆ ಬಿಟ್ಟು ಹೋದರು ನಾನೇನು ಅಪರಾಧ ಮಾಡಿದ್ದೆ.ನಿಮ್ಮ ಮಗನ್ನ ಯಾಕೆ ಕರೆದುಕೊಂಡು ಹೋದರು . ಹಾಗೆ ನಿಮ್ಮ ಮಗ ಎಲ್ಲಿದ್ದಾನೆ ಅಂತಾನೂ ತಿಳ್ಕೋಬೇಕಿದೆ" ಸ್ವಾತಿ ತನ್ನ ಅಂಗೈ ರೇಖೆ ನೋಡಿಕೊಂಡೇ ಉತ್ತರಿಸಿದಳು

"ಸ್ವಾತಿ ಅದೆಲ್ಲಾ ಬೇಡ . ನಮಗೆ ಅವನ್ನ ಹುಡೋಕೋ ದಾರಿ ಗೊತ್ತಿಲ್ಲ ಇನ್ನು ನೀನೇನು ಮಾಡ್ತೀಯಾ. ಎಲ್ಲಾ ಮರೆತು ನಮ್ಮನೇಲೇ ಇದ್ದುಬಿಡು.ಹೆಣ್ಣು ಹೆಂಗಸು ಎಲ್ಲಿ ಹೋಗ್ತೀಯಾ?"ಅಮ್ಮನ ಮಾತು.ಆದರೆ ಅದು ಮೂರನೇ ವ್ಯಕ್ತಿಗೆ ಹೇಳುತ್ತಿದ್ದ ಹಾಗಿತ್ತು.

"ಏನೆ ಆದರೂ ಇದು ನಿಮ್ಮ ಮನೆ ಅಮ್ಮ ನನ್ನ ಮನೆ ಆಗಲ್ಲ. ನಂಗೆ ನನ್ನದೇ ಆದ ನೆಲೆ ಬೇಕು. ನನ್ನ ಹೆತ್ತ ತಾಯಿ ತಂದೆ ಬೇಕು. ಇಲ್ಲೀವರೆಗೆ ನಾನು ನಿಮ್ಮ ಮಗಳೇ ಅಂತ ತಿಳಿದು ಪ್ರೀತಿಸುತ್ತಿದ್ದಿರಲ್ಲ ಅಂತ ಪ್ರೀತಿ ಬೇಕು . ಅದೇನೆ ಆಗಲಿ ಅದು ನಂಗೆ ಇಲ್ಲಿ ಇನ್ನು ಮುಂದೆ ಸಿಗಲ್ಲ" ಸ್ವಾತಿ ತಾಯಿಯ ಕಣ್ಣನ್ನು ದಿಟ್ಟಿಸುತ್ತಾ ಹೇಳಿದಳು.

ಪಾರ್ವತಮ್ಮ ಬದಲಿ ಹೇಳಲಿಲ್ಲ.

"ಸ್ವಾತಿ ನಿಂಗೆ ನನ್ನ ಮನೆ ಇದೆ ನಿನ್ನ ಗಂಡನಾಗುವವನ ಮನೆ ನಂಗೆ ಈ ಆಸ್ತಿ ಅಂತಸ್ತು ಇದೆಲ್ಲಾ ಬೇಡ. ಬಾ ನಾವೇ ಪ್ರತ್ಯೇಕವಾಗಿ ಮನೆ ಮಾಡಿಕೊಂಡು ಇರೋಣ ನಿನ್ನ ಸಾಕೋ ಅಷ್ಟು ಸಂಪಾದನೆ ನಂಗೆ ಇದೆ. "ಶಿವೂನ ದನಿ ಅವನತ್ತ ನೋಡಿ ನಕ್ಕಳು. ಎಷ್ಟು ಪ್ರೀತಿ ಅವನಿಗೆ ತನ್ನ ಮೇಲೆ

"ಏ ಶಿವು ಸುಮ್ನಿರೋ . ನೀನ್ಯಾಕೆ ಅವರ ವಿಷಯದಲ್ಲಿ ತಲೆ ಹಾಕ್ತೀಯಾ." ಶೀಲತ್ತೆ ಗದರಿದರು.

"ಅಮ್ಮಾ ನೀನು ಸುಮ್ನಿರು ಇದು ನನ್ನಜೀವನದಪ್ರಶ್ನೆ" ಶಿವೂ ಸಿಡುಕಿ ನುಡಿದ

"ಇಲ್ಲಾ ಶಿವು ನಿನ್ನ ನಂಟೂ ನನಗೆ ಸಿಕ್ಕಿದ್ದು ಕೃಷ್ಣಾರೆಡ್ಡಿಯವರ ಮಗಳು ಅನ್ನೋ ಕಾರಣಕ್ಕಾಗಿ. ಈಗ ಆ ಐಡೆಂಟಿಟೀನೆ ನಂಗೆ ಇಲ್ಲವಾದಾಗ ನಿನ್ನ ನಂಟಿಗೂ ಮೊದಲಿನ ಅಂಟು ಇರುತ್ತಾ? ಅಲ್ಲದೆ ನಂಗೆ ಮದುವೆಯಾಗೋ ಇರಾದೆ ಹೊರಟುಹೋಗಿದೆ ಮೊದಲು ನನ್ನನ್ನ ಹೀಗೆ ಬೇರೆ ಮನೆಯಲ್ಲಿ ಬಿಟ್ಟ ನನ್ನ ತಂದೆ ತಾಯಿಯನ್ನ ಹುಡುಕಬೇಕು . ದಯವಿಟ್ಟು ನನ್ನನ್ನ ಯಾರೂ ತಡೀಬೇಡಿ "

ಶಿವು ಏನೋ ಹೇಳಲು ಹೋದವನು ರೆಡ್ಡಿಯವರು ಮಾತನಾಡಿದ್ದಕ್ಕೆ ಸುಮ್ಮನಾದ

"ಸ್ವಾತಿ ಹಾಗಿದ್ರೆ ನಿನ್ನ ಮುಂದಿನ ನಡೆ ಏನು ಹೇಳು.ಎಲ್ಲರೂ ಸೇರಿ ನಿನ್ನಪ್ಪ ಅಪ್ಪನ್ನ ಅಮ್ಮನ್ನ ಹುಡುಕೋಣ. ಆದರೆ ಅವರು ಬದುಕಿದ್ದಾರೆ ಅನ್ನೋದಕ್ಕೆ ಏನು ಗ್ಯಾರೆಂಟಿ ಹೇಳು" ರೆಡ್ಡಿಯವರು ಕಣ್ಣೊರೆಸಿಕೊಳ್ಳುತ್ತಲೇ ನುಡಿದರು

"ಇಲ್ಲಾ ಅಪ್ಪ. ಅವರು ಬದುಕಿದಾರೆ ಅನ್ನೋ ಬೇಸ್ ಮೇಲೆ ಹುಡುಕ್ತೀನಿ . ಆದರೆ ಅವರನ್ನು ಹುಡುಕೋ ಕೆಲಸ ನಂಗೆ ಬಿಟ್ಟುಬಿಡಿ ನಂಗೆ ನಿಮ್ಮೆಲ್ಲರ ಹಾರೈಕೆಗಳಿದ್ದರೆ ಸಾಕು"

ಕೈ ಮುಗಿದು ಕುಸಿದು ಕುಳಿತಳು. ಕಣ್ಣಲ್ಲಿದ್ದ ನೀರು ಕಾಣದಿದ್ದರೆ ಸಾಕು ಎಂದು ತಲೆ ತಗ್ಗಿಸಿದ್ದಳು.

ಶಿವೂನ ತಂದೆ ತಾಯಿ ದೊಡ್ಡಪ್ಪ ಹೊರಡುತ್ತಿದ್ದರು. ಅವರನ್ನು ಬಿಟ್ಟು ಓಡಿ ಬಂದ ಶಿವು

"ಆಯ್ತು ಸ್ವಾತಿ ನಿನ್ನ ತಂದೆ ತಾಯಿ ಸಿಕ್ಕ ಮೇಲಾದರೂ ನನ್ನನ್ನ ಮದುವೆಯಾಗ್ತೀಯಲ್ಲಾ? " ಶಿವು ತನ್ನ ತಂದೆ ತಾಯಿಯರನ್ನು ಲೆಕ್ಕಿಸದೇ ಕೇಳಿದ.

ಅವನತ್ತ ನೋಡಿ ನಕ್ಕಳಷ್ಟೇ.

"ಸ್ವಾತಿ ನಿಂಗ್ಯಾವ ಸಹಾಯ ಬೇಕಾದರೂ ಈ ಶಿವು ಸದಾ ಸಿದ್ದ ಇರ್ತಾನೆ. ಅಂದ ಹಾಗೆ ನನ್ನ ನಿನ್ನ ಬಂಧ ಕೇವಲ ನನ್ನ ಮಾವ ನಿನ್ನಪ್ಪ್ಪ ಎಂಬುದರ ಮೇಲೆ ನಿಂತಿಲ್ಲ ಸ್ವಾತಿ. ನನ್ನದು ನಿನ್ನದು ಯಾವುದೋ ಜನ್ಮದ ಅಂಟು ಅದಕ್ಕೆ ನಂಟಿನ ಅವಶ್ಯಕತೆಯಿಲ್ಲ. ಇಂದಿನಿಂದ ನಿನ್ನ ಶೋಧದಲ್ಲಿ ಈ ಶಿವೂನೂ ಜೊತೆಗಾರನಾಗಿರ್ತಾನೆ"ಅವಳ ಕೈಗೆ ತನ್ನ ಕೈ ಕೂಡಿಸಿ ಬಿಗಿ ಮಾಡಿದ.

ಅದನ್ನು ತುಟಿಗೊತ್ತಿಕೊಂಡಳು ಸ್ವಾತಿ . ಶಿವು ನಿಧಾನವಾಗಿ ಕೈ ಬಿಡಿಸಿಕೊಂಡು ಹೊರಟ

ಎಲ್ಲರೂ ಒಬ್ಬೊಬ್ಬರಾಗಿ ಅಲ್ಲಿಂದ ಹೊರಟ ಮೇಲೆ ತಲೆ ಎತ್ತಿದಳು

ಅಪ್ಪ ಇನ್ನೂ ಅಲ್ಲೇ ನಿಂತಿದ್ದಾರೆ

"ಸ್ವಾತಿ ನಿಮ್ಮ ತಂದೆ ಸಿಗೋವರೆಗೆ ನೀನು ನನ್ನ ಮಗಳಾಗಿರ್ತೀಯಾ ತಾಯಿ. "

ಸ್ವಾತಿ ಇಲ್ಲೀವರೆಗೆ ತಂದೆಯ ಈ ಸ್ಥಿತಿ ನೋಡಿರಲಿಲ್ಲ

"ಅಪ್ಪಾ " ಎಂದಷ್ಟೆ ಅಂದಳು

ಅವರ ಹೃದಯ ಮಿಡಿಯುತ್ತಿರುವುದು ತಿಳಿಯುತ್ತಿತ್ತು. ಆದರೆ ಅವರು ಅಸಹಾಯಕರು. ಕೈ ಚೆಲ್ಲಿ ಹೊರಟುಹೋದರು

ಸ್ವಾತಿಯ ಯೋಚನೆ ಶುರುವಾಯ್ತು

ತಾನೇನೋ ಆವೇಶದಲ್ಲಿ ಅಪ್ಪ ಅಮ್ಮನ್ನ ಹುಡುಕುವುದಾಗಿ ಹೇಳಿದೆ ಆದರೆ ಎಲ್ಲಿ ಅಂತ ಹುಡುಕುವುದು? ಕಾಲೇಜು ಬಿಟ್ಟರೆ ಮನೆ ಗೆಳತಿಯರು ಶಿವು ಇದಿಷ್ಟುಬಿಟ್ಟರೆ ತನ್ನ ಪ್ರಪಂಚ ಬೇರೇನಾಗಿತ್ತು ಇಷ್ಟು ದಿನ

ಮರಳುಗಾಡಿನಲ್ಲಿ ಕುರುಡನನ್ನ ಬಿಟ್ಟ ಹಾಗೆ ಆಗಿ ಹೋಗಿತ್ತು ಅವಳ ಸ್ಥಿತಿ. ಆದರೆ ಧೃತಿಗೆಡಬಾರದು . ತನ್ನನ್ನ ಇಂಥ ಸ್ಥಿತಿಗೆ ನೂಕಿದ ಆ ತಂದೆ ತಾಯಿಯನ್ನು ಹುಡುಕಲೇ ಬೇಕು. ರೂಮಿಗೆ ಬಂದಳು.

ಸಿಕ್ಕಪುಸ್ತಕ ಕೈಗೆ ತೆಗೆದುಕೊಂಡು ಏನೇನು ಮಾಡಬೇಕೆಂಬ ಟಿಪ್ಪಣಿ ಬರೆಯತೊಡಗಿದಳು

ಅದರಲ್ಲಿ ಮೊದಲನೆಯ ಹಂತವೇ ಮರಿಯಮ್ಮಳನ್ನು ಭೇಟಿಯಾಗುವುದು.

ಅದನ್ನು ವೃತ್ತಾಕಾರಿಸಿಕೊಂಡಳು

*********************************************************

ಮರಿಯಮ್ಮ್ಮ ಆಗಲೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಳು

ಸ್ಟೇಷನ್ನಿಂದ ಅವಳ ವಿಳಾಸವನ್ನು ಶಿವು ತರಿಸಿಕೊಟ್ಟ . ಶಿವಾಜಿನಗರದ ಆಸ್ಟಿನ್ ಟೌನ್‍ನಲ್ಲಿ ಅವಳ ಮನೆ

ಹುಡುಕುತ್ತಾ ಶಿವು ಜೊತೆಗೆ ಮರಿಯಮ್ಮನ ಮನೆಗೆ ಬಂದಳು

ಅವಳ ಮನೆಯೂ ದೊಡ್ಡದೇ. ಚೆನ್ನಾಗಿ ಹಣಮಾಡಿದ್ದಳೆಂಬುದು ಅದರಿಂದಲೇ ತಿಳಿಯುತ್ತಿತ್ತು

ಬೆಲ್ ಮಾಡಿದಾಗ ಬಾಗಿಲು ತೆರೆದವಳು ಮರಿಯಮ್ಮ. ಸ್ಟೇಷನ್ನಿನಲ್ಲಿ ನೋಡಿದ್ದಕ್ಕೂ ಈಗಲೂ ಭಾರಿ ವ್ಯತ್ಯಾಸ ಕಾಣುತ್ತಿತ್ತು.

ತುರುಬು ಎತ್ತಿ ಕಟ್ಟಿದ್ದಳು. ಜರಿ ಸೀರೆ ಉಟ್ತಿದ್ದಳು. ಸ್ಥಿತಿವಂತಳೆಂಬುದು ಗೊತ್ತಾಗುತ್ತಿತ್ತು.

ಇವರನ್ನು ನೋಡಿ ಅಚ್ಚರಿ ಆದಂತೆ ತೋರಲಿಲ್ಲ ಅವಳಿಗೆ

"ನೀನು ಆವತ್ತು ಸ್ಟೇಶನ್‍ಗೆ ಬಂದ್ ಹುಡ್ಗಿ ತಾನೇ " ಹೌದೆಂಬಂತೆ ತಲೆ ಆಡಿಸಿದಳು

"ಇವನು?" ಶಿವು ಕಡೆ ನೋಡುತ್ತಾ ಕೇಳಿದಳು ಒಂದು ಚೂರು ಗೌರವದ ಮಾತು ಇಲ್ಲ ಅವಳಲ್ಲಿ

"ಅವರು ನಮ್ಮ ಸೋದರಮಾವನ ಮಗ" ಸ್ವಾತಿಯೇ ಉತ್ತರಿಸಿದಳು

"ಸರಿ ಬನ್ನಿ ಇಬ್ಬರೂ ಒಳಗೆ"

ಒಳಗೆ ಬಂದವರಿಗೆ ಕೂರಲು ಹೇಳಿದಳು

ಸ್ವಾತಿ ಸುತ್ತಾಮುತ್ತ ನೋಡುತ್ತಿದ್ದಳು ಮನೆ ಒಪ್ಪ ಓರಣವಾಗಿತ್ತು

"ನನ್ನ ಮನೆ ನೋಡೋಕೆ ಬಂದ್ಯಾ ಇಲ್ಲಾ ನಿನ್ನ ಮನೆ ಯಾವುದು ಅಂತ ತಿಳ್ಕೊಳೋದಿಕ್ಕೆ ಬಂದ್ಯಾ"

ಮರಿಯಮ್ಮನ ಗಡಸು ನುಡಿ
ಸ್ವಾತಿ ಪೆಚ್ಚಾದಳು . ಸಹಾಯಕ್ಕಾಗಿ ಶಿವುನನ್ನು ನೋಡಿದಳು



"ಸಾರಿ ಮರಿಯಮ್ಮ . ನಮಗೆ ಸ್ವಾತಿ ಬಗ್ಗೆ ತುಂಬಾ ವಿಷ್ಯ ಬೇಕಾಗಿದೆ" ಶಿವೂನೆ ನುಡಿದ

"ನಂಗೇನು ಸಿಗುತ್ತೆ?" ಮರಿಯಮ್ಮನ ದನಿ ಅಬ್ಬಾ ಅವಳ ದಾಷ್ಟ್ತ್ಗಕ್ಕೆ ಬೆರಗಾದಳು. ಅಥವ ಕಾಲ ಅವಳನ್ನು ಹೀಗೆ ಮಾಡಿದೆಯೇ?

"ನಿಂಗೆ ಎಷ್ಟು ದುಡ್ದು ಬೇಕೋ ಅಷ್ಟು " ಶಿವುನೂ ಗತ್ತಾಗಿ ನುಡಿದ .

"ಸರಿ ನಿಮಗೇನು ವಿಷ್ಯ ಬೇಕಾಗಿದೆ ಕೇಳಿ"

ಸ್ವಾತಿ ನುಡಿದಳು ನಿಧಾನಕ್ಕೆ

"ಮರಿಯಮ್ಮ ನಾನು ಪಾರ್ವತಮ್ಮನ ಮಗಳಲ್ಲ ಅಂದರೆ ನಾನೆಲ್ಲಿಂದ ಬಂದೆ ನನ್ನನ್ನು ನಿಮಗೆ ಯಾರು ಕೊಟ್ಟರು?ನೀವ್ಯಾಕೆ ನನ್ನನ್ನ ಬದಲಾಯಿಸಿದಿರಿ"

ಮರಿಯಮ್ಮನ ಮೊಗದಲ್ಲಿ ನಗೆ


"ನಾನೇನೇ ಮಾಡಿದರೂ ಅದು ದುಡ್ಡಿಗೋಸ್ಕರ. ಇನ್ಮೇಲ್ ನಾನ್ಯಾಕೆ ಹಾಗ್ಮಾಡಿದೆ ಅಂತ ಕೇಳ್ಬೇಡ"

"ಆಯ್ತು ಮರಿಯಮ್ಮ ಅವಳು ಎಲ್ಲಿಂದ ಬಂದಳು ಯಾರು ಕೊಟ್ಟರು ಅದನ್ನು ಮಾತ್ರ ಹೇಳು ಸರೀನಾ" ಶಿವು ಹೇಳಿದ

ಮರಿಯಮ್ಮ ಕಣ್ಣು ಮುಚ್ಚಿದಳು. ಕಣ್ಣ ಮುಂದೆ ಗತ ಜೀವನ ಹಾದು ಹೋಯಿತು
*****************************

ಮರಿಯಮ್ಮ ಮಾಡಿಕೊಂಡಿದ್ದು ನರ್ಸಿಂಗ್ ತರಬೇತಿಯಾದರೂ ಆಸ್ಪತ್ರೆಯಲ್ಲಿ ಕೆಲ್ಸ ಮಾಡುವುದು ಅವಳಿಗೆ ಹಿಡಿಸಿರಲಿಲ್ಲ. ಮೊದಲಿಗೆ ಲಕ್ಶ್ಮಿಆಗಿದ್ದ ಅವಳು ಟೋನಿ ಎಂಬಾತನನ್ನು ಪ್ರೀತಿಸಿ ಮದುವೆಯಾಗಿ ಅವನಿಂದ ಒಂದೇ ವರ್ಷದಲ್ಲಿ ದೂರವಾಗಿದ್ದಳು.ಅವಳ ಐಶಾರಾಮದ ಬಯಕೆಗಳು ಅವಳನ್ನು ಎಂತೆಂತಹದೋ ಕೆಲಸ ಮಾಡಿಸುತಿತ್ತು. ಹಾಗೆ ಅವಳು ಬಂದು ನೆಲೆಸಿದ್ದು ಪಾರ್ವತಿಯ ಊರಲ್ಲಿ. ಆಗ ಆ ಊರು ಕಾಡಿನಂತಿತ್ತು. ಸರಿಯಾದ ಬಸ್ ಸೌಕರ್ಯವಾವುದೂ ಇರಲಿಲ್ಲ. ಅಲ್ಲಿ ಇಲ್ಲಿ ಸಣ್ಣ ಪುಟ್ಟ ಕಳ್ಳತನ ಆಗಾಗ ಸಿಕ್ಕರೆ ಯಾರದಾರೂ ಗಿರಾಕಿಗಳು ಇವುಗಳಿಂದ ಅವಳ ಜೀವನ ನಡೆಯುತ್ತಿತ್ತು. ಆಗಾಗ ಸೂಲಗಿತ್ತಿಯಾಗಿಯೂ ಮಾಡುತ್ತಿದ್ದುದರಿಂದ ಹಣವೂ ಸಿಗುತ್ತಿತ್ತು .ತನ್ನ ಕೆಲಸಗಳ ಬಗ್ಗೆ ಅವಳಿಗೆ ಕೊಂಚವೂ ಬೇಸರವಿರಲಿಲ್ಲ. ಹಾಗೆಯೇ ಅದೇ ಊರಿನಲ್ಲಿದ್ದ ಪಾರ್ವತಿಯ ಅತ್ತೆ ಪರಿಚಯವಾಗಿತ್ತು.

ಅಂದು ಪಾರ್ವತಿ ಹೆರಿಗೆ ನೋವು ಎಂದು ಬಂದಾಗ ರಾತ್ರಿಯಲ್ಲಿ ಬಂದಳಲ್ಲ ಎಂದು ಬೇಸರಿಸಿಕೊಂಡೇ ಬಾಗಿಲು ತೆರೆದಳು. ಪಾರ್ವತಿಯ ಸ್ಥಿತಿ ನೋಡಿ ಹೆರಿಗೆ ಮಾಡಲು ಒಪ್ಪಿಕೊಂಡಳು.

ಹೆರಿಗೆ ಆದ ಕೂಡಲೇ ಪಾರ್ವತಿ ಅರೆ ಪ್ರಜ್ನಾವಸ್ತೆಗೆ ಜಾರಿದಳು.ಇತ್ತ ಪಾರ್ವತಿಯ ಅತ್ತೆ ಹಾಗೆ ನೆಲದ ಮೇಲೆ ಮಲಗಿದ್ದರು

ಮಗುವನ್ನು ತೊಳೆಯಲೆಂದು ಹಿತ್ತಲಿಗೆ ಬಂದ ಮರಿಯಮ್ಮ ಅಲ್ಲಿ ನಿಂತಿದ್ದ ಆಜಾನು ಬಾಹು ಆಕೃತಿಯನ್ನು ನೋಡಿ ಬೆಚ್ಚಿದಳು.

"ಯಾರು? ಯಾರದು?"

"ನಿನ್ನ ಕೈನಲ್ಲಿ ಇರೋ ಮಗು ಗಂಡಾ ಹೆಣ್ಣಾ?" ಕಂಚಿನ ದನಿಯಲ್ಲಿ ಕೇಳಿ ಬಂತು

"ಗಂಡು ಮಗು . ಯಾಕೆ ನೀವ್ಯಾರು"

" ಯಾಕೆ ಏನು ಎತ್ತ . ನಾನ್ಯಾರು ಅನ್ನೋದೆಲ್ಲಾ ಬೇಡ. ಆ ಮಗೂನ ಕೊಡು" ಆಕಡೆಯಿಂದ ಗಂಭೀರದನಿಯಲ್ಲಿ ಕೇಳಿಬಂತು ಮಾತು

ಮರಿಯಮ್ಮ ಬೆದರಿ ಒಳಗೆ ಓಡಲು ಯತ್ನಿಸಿದಳು


ಅವಳ ಕೈಯನ್ನು ಗಟ್ಟಿಯಾಗಿ ಹಿಡಿದ ಆ ವ್ಯಕ್ತಿ


ಮಂದ ಬೆಳಕಲ್ಲಿ ಆತನ ಮುಖ ನಿಧಾನವಾಗಿ ಕಾಣತೊಡಗಿತು


ಉದ್ದದ ಗಡ್ಡ . ನೋಡಿದರೆ ಯಾವುದೋ ಸ್ವಾಮೀಜಿಯಂತೆ ಕಾಣುತ್ತಿದ್ದ. ಸೊಂಟಕ್ಕೆ ಬಟ್ಟೆಯೊಂದನ್ನು ಸುತ್ತಿದ್ದ . ಒಂದು ಕೈನಲ್ಲಿ ಏನೋ ಹಿಡಿದಿದ್ದ. ಅರೆ ಅದೊಂದು ಮಗು.


ಮರಿಯಮ್ಮ ಕಿಟಾರ್ ಎಂದು ಕಿರುಚುವುದರಲ್ಲಿದ್ದಳು


ಅಷ್ಟರಲ್ಲಿ ಅವಳ ಕಣ್ಣ ಮುಂದೆ ನೋಟಿನ ಕಂತೆ ಕಾಣಿಸಿತು, ಆ ಸ್ವಾಮೀಜಿ ಅದನ್ನು ಅವಳ ಕಣ್ಣ್ ಮುಂದೆ ಆಡಿಸಲಾರಂಭಿಸಿದ


ಮರಿಯಮ್ಮ ನಿಧಾನವಾಗಿ ಸುಮ್ಮನಾದಳು. ಕಣ್ಣ ಮುಂದೆ ನೋಟಿನ ಕಂತು ಕುಣಿಯುತ್ತಿತ್ತು


"ಈ ಮಗು ತಗೊಂಡು ಆ ಮಗು ಕೊಡು" ಆತ ನಿರ್ದೇಶಿಸಿದ


"ಯಾಕೆ " ಮರಿಯಮ್ಮ ಪ್ರಶ್ನಿಸಿದಳು


ಆತ ಮತ್ತೊಂದು ನೋಟಿನ ಕಂತೆ ತೆಗೆದ


ನೂರರ ನೋಟುಗಳು


ಮರಿಯಮ್ಮನ ಕಣ್ಣುಗಳು ಅರಳಿದವು


ಮಗುಅನ್ನು ಮುಂಚಾಚಿದಳು.


ಆತ ತನ್ನ ಬಲಗೈನಲ್ಲಿದ್ದ ಮಗುವನ್ನು ಕೊಟ್ಟ


ಮಕ್ಕಳುಗಳು ಅದಲು ಬದಲಾದವು . ಹಾಗೆ ಅವಳ ಕೈ ತುಂಬಾ ನೋಟುಗಳು .ನೋಡು ನೋಡುತ್ತಿದ್ದಂತೆ ಆತ ಕತ್ತಲಲ್ಲಿ ಕರಗಿದ


ತನ್ನ ಕೈನಲ್ಲಿದ್ದ ಮಗುವನ್ನು ನೋಡಿದಳು.ಬಲು ಮುದ್ದಾಗಿತ್ತು.

ಅದು ಹುಟ್ಟಿ ಒಂದೆರೆಡು ದಿನಗಳಾಗಿದ್ದಿರಬಹುದು. ಅದರಮೈ ಮೇಲಿದ್ದ ಬಟ್ಟೆ ಹಾಗು ಹೊದಿಕೆಗಳನ್ನು ಬಿಚ್ಚಿ ಒಂದು ಬ್ಯಾಗಿಗೆ ಹಾಕಿದಳು

ತೆಗೆದುಕೊಂಡು ಹೋಗಿ ಪಾರ್ವತಿಯ ಪಕ್ಕದಲ್ಲಿ ಮಲಗಿಸಿದಳು ತಾನಿಲ್ಲೇ ಇದ್ದರೆ ಈ ವಿಷ್ಯ ಯಾರಿಗಾದರೆ ಗೊತ್ತಾದರೆ ಅಪಾಯ ಎಂದು ಬಗೆದು ತನ್ನ ಬಟ್ಟೆ ಬರೆಗಳನ್ನು ಬ್ಯಾಗಿಗೆ ತುಂಬಿಕೊಂಡು ಹಣದ ಸಮೇತ ಹಿತ್ತಲ ಬಾಗಿಲಿನಿಂದ ಹೊರ ಬಂದಳ ಬಸ್ ನಿಲ್ದಾಣದ ಕಡೆಗೆ ಕಾಲು ದಾರಿಯಲ್ಲಿ ಹೊರಟಳು.


************************************************


ಮರಿಯಮ್ಮ ಕಣ್ಣು ತೆರೆದಳು


ಸ್ವಾತಿಗೆ ಬೆಂಕಿಯಿಂದ ಬಾಣಲೆಗೆ ಬಿದ್ದ ಅನುಭವವಯ್ತು. ರಹಸ್ಯ ಇನ್ನೂ ಕಗ್ಗಂಟಾಯ್ತು.


"ಆ ಸ್ವಾಮಿ ಯಾರು ಅಂತ ಗೊತ್ತಾ ನಿಮಗೆ?" ಕೇಳಿದಳು

"ಇಲ್ಲಾ "ಎನ್ನುವಂತೆ ತಲೆ ಆಡಿಸಿದಳು ಮರಿಯಮ್ಮ.

ತನ್ನ ಗಮ್ಯ ತಾನಂದುಕೊಂಡಷ್ಟು ಸುಲಭಾವಾಗಿ ಸಿಗುವುದಿಲ್ಲ ಎಂದನಿಸಿತು ಸ್ವಾತಿಗೆ

"ಅವನನ್ನ ಎಲ್ಲಾದರೂ ಮತ್ತೆ ನೋಡಿದ್ರಾ?" ಶಿವೂ ಮರಿಯಮ್ಮನನ್ನ ಕೇಳಿದ

"ಇಲ್ಲಾ ನಾನ್ ಮತ್ತೆ ಅವನನ್ನ ಮೀಟ್ ಮಾಡಲಿಲ್ಲ .ಅವನ್ನ ಹಿಂದೆ ಎಲ್ಲೂ ಈ ಪ್ರದೇಶದಲ್ಲಿ ನೋಡಿಲ್ಲಾ . ಅದೆಲ್ಲಿಂದಾ ಬಂದನೋ ಈ ಮಗೂನಾ ಅದೆಲ್ಲಿಂದಾ ತಂದನೋ .ಗೊತ್ತಿಲ್ಲ. ಒಂದಂತೂ ನಿಜ .ಈ ಪಾರ್ವತಮ್ಮ ನೋವು ಅಂತ ನಮ್ಮನೆಗೆ ಬಂದದ್ದನ್ನು ನೋಡಿದಾನೆ. ಅದಕ್ಕೆ ಹಿತ್ತಲ ಬಾಗಿಲಿನಿಂದ ಒಳಗೆ ಬಂದಿದಾನೆ"

ಸ್ವಾತಿಯ ಮನದಲ್ಲಿ ಮತ್ತೆ ಅಂಧಾಕಾರ ಮೂಡಿತು.

ಶಿವು ತನ್ನ ಪ್ಯಾಕೆಟ್ ನಿಂದ ಸಾವಿರದ ಮೂರು ನೋಟುಗಳನ್ನು ಕೊಟ್ಟ

ಮರಿಯಮ್ಮ್ಮ ಕಾಯುತ್ತಿದ್ದವಳಂತೆ ಕಿತ್ತುಕೊಂಡಳು.

"ಆಯ್ತು ಮರಿಯಮ್ಮ. ಮುಂದೇನಾದರೂ ಸಹಾಯ ಬೇಕಿದ್ದಲ್ಲಿ ಮತ್ತೆ ಬರ್ತೀವಿ"

ಅವಳಿಗೆ ಕೈ ಮುಗಿದೆ ಹೊರಬಂದರು

ಮುಂದೇನು ಮಾಡುವುದು?

ಪ್ರಶ್ನೆ ಬೃಹದಾಕಾರವಾಯ್ತು.

Monday, November 9, 2009

ಗಮ್ಯ ಹುಡುಕುತ್ತಾ ಭಾಗ ೧

"ಸ್ವಾತಿ ತುಂಬಾ ಮುದ್ದಾಗಿದ್ದೀಯಾ ಅದು ಹೇಗೆ ಇಂತಾ ಅಪ್ಪ ಅಮ್ಮನಿಗೆ ನೀನು ಹುಟ್ಟಿಬಿಟ್ಟೆ ?" ಈ ಪ್ರಶ್ನೆ ತುಂಬಾ ಕಾಮನ್ ಆಗಿದ್ದರಿಂದ ಅದು ಸ್ವಾತಿಗೆ ಹೊಸದೆನಿಸಲಿಲ್ಲ . ಸುಮ್ಮನೆ ನಕ್ಕಳು. ಅವರ ಸ್ಟಾಪ್ ಬಂತು ಇಳಿದು ಹೋದರು. ಯಾರು ಎಂದು ಅವಳಿಗೇನು ಗೊತ್ತು. ಅಪ್ಪನಿಗೆ ತಿಳಿದವರಿರಬೇಕು ಅಥವಾ ಅಮ್ಮನಿಗೂ . ಇದ್ದರೂ ಇರಬಹುದು ಊರಿಗೆ ಗೊತ್ತಿರುವವರು ಅಪ್ಪ ಅಮ್ಮ .ಎಂದುಕೊಂಡು ಸುಮ್ಮನಾದಳು
ಹೌದು ಸ್ವಾತಿಯ ಅಪ್ಪ ಕಪ್ಪು ಬಣ್ಣಕ್ಕೆ ಸಡ್ಡು ಹೊಡೆಯುವ ಬಣ್ಣ . ಅಮಾವಾಸ್ಯೆ ದಿನ ಅಪ್ಪ ಎಲ್ಲಿ ಕತ್ತಲೆಲ್ಲಿ ಎಂದು ಹುಡುಕಬೇಕಾದ ಪರಿಸ್ಥಿತಿ ಉಂಟಾಗುತ್ತದೆ
ಅವಳ ಅಮ್ಮನೇ ವಾಸಿ ಕೊಂಚ ಬೆಳ್ಳಗೆ ಇದ್ದಾರೆ. ಆದರೋ ಮೂಗೋ ಬಿ ಎಮ್ ಟಿ ಸಿ ಬಸ್ ಸೀದಾ ಬಂದು ಅಮ್ಮನ ಮೂಗಿನ ಮೇಲೆ ಹತ್ತಿ ಪಯಣಿಸಿತ್ತೇನೋ ಎಂಬಷ್ಟು ಸಪಾಟವಾಗಿದೆ. ತಕ್ಕಂತೆ ಪುಟ್ಟ ಪುಟ್ಟ ಕಣ್ಣುಗಳು. ನಾನೇ ಮುಂದೆ ಎಂದು ಬಾಗಿರುವ ಹಲ್ಲುಗಳು.
ಸ್ವಾತಿ ಸೌಂದರ್ಯಕ್ಕೆ ಮತ್ತೊಂದು ಪರ್ಯಾಯ ಹೆಸರು. ಹಾಗಾಗೇ ಮನೆಯಲ್ಲಿ ಅವಳು ತುಂಬಾ ಮುದ್ದು ಒಬ್ಬಳೇ ಮಗಳೆಂದು ಬಲು ಮುದ್ದಾಗಿ ಸಾಕಿದ್ದರು. ಶ್ರೀಮಂತ ಕುಟುಂಬಕ್ಕೆ ಸೇರಿದ ರೆಡ್ಡಿಗಳ ಮಗಳು . ಅಪ್ಪನ ದರ್ಪ ಅಮ್ಮನ ಜಂಭ ಧಾರಾಳವಾಗಿತ್ತು ಜೊತೆಗೆ ತುಂಟತನ ಸಾಕು ಸಾಕೆನ್ನುವಷ್ಟು.ಕಾಲೇಜಿನಲ್ಲಿ ತುಂಟಿ ಎಂಬ ಹೆಸರಿನ ಜೊತೆಯೇ ಜಾಣೆ ಎಂಬ ಬಿರುದು ಇತ್ತು ಇನ್ನೂ puc ರಿಸಲ್ಟ್ ಬಂದಿರಲಿಲ್ಲ.
ಆದರೂ ಸ್ವಾತಿಗೆ ಯಾವ ಆತಂಕವೂ ಇರಲಿಲ್ಲ ಅವಳು ಪರೀಕ್ಶೆಯಲ್ಲಿ ಮೊದಲ ಸ್ಥಾನ ಬಿಟ್ಟು ಕೆಳಗಿಳಿದ್ದಿಲ್ಲ ಅಥವ ಹಾಗೇನಾದರೂ ಆದರೂ ಅವಳಿಗೇನೂ ನಷ್ಟವಿಲ್ಲ. ಅವಳು ಓದಿ ಸಂಪಾದಿಸಬೇಕಾದ್ದು ಏನು ಇರಲಿಲ್ಲ
ಬಸ್ ಸ್ಟಾಪ್ ಬಂತು.ಬಸ್ ಇಂದ ಇಳಿಯುತ್ತಿದ್ದಂತೆ ಸುತ್ತಾ ಮುತ್ತಾ ಇದ್ದ ಕಣ್ಣುಗಳೆಲ್ಲಾ ಅವಳ ಮೇಲೆ ಹಾದವು . ಅವಳಿಗೂ ಗೊತ್ತು ಎಲ್ಲರೂ ಕಂಡಕ್ಟರ್ ಹಾಗು ಡ್ರೈವರ್ ಸೇರಿದಂತೆ ತನ್ನನ್ನೇ ನೋಡ್ತಾ ಇದ್ದಾರೆ ಅಂತ . ಅದೂ ಒಂಥರಾ ಪುಳಕವೇ
ಅವಳಿಗೆ ಅಮ್ಮ ಎಷ್ಟೋ ಸಲ ಹೇಳಿದ್ದಾರೆ "ಸ್ವಾತಿ ಸ್ಕೂಟಿ ಕಲಿತ್ಕೋ ಸುಮ್ನೆ ಬಸಲ್ಲಿ ಎಲ್ಲಾ ಜನರ ಕಣ್ಣು ಬೀಳುತ್ತೆ. " ಅಂತಾ ಅಪ್ಪಾ ಅಂತೂ ಒಂದು ಹೆಜ್ಜೆ ಮುಂದೆ "ಸ್ವಾತಿ ನೀನು ಕಾರಲ್ಲೇ ಹೋಗಿ ಬಾ "ಅಂತಾರೆ
ಆದರೂ ಅವಳಿಗೆ ಬಸ್ಸಲ್ಲೇ ಓಡಾಡೋ ಆಸೆ. ಸುತ್ತಾ ಇರೋ ಜನರನ್ನ ನೋಡೋ ಆಸೆ. ಅವರ ಕಣ್ಣಲ್ಲಿ ಏನಿದೆ ಅಂತ ತಿಳಿಯೋ ಆಸೆ. ಹಿಂದೆ ಬೀಳೋ ಪುಂಡರನ್ನ ಸಾಕು ಎನಿಸುವಷ್ಟು ಗೋಳು ಹಾಕಿಕೊಳ್ಳೋ ಆಸೆ. ಹಾಗೆ ಹಿಂದೆ ಬಿದ್ದ ಹುಡುಗರು ಅಪ್ಪನ ಕೋಪಕ್ಕೆ ಸಿಕ್ಕಿ ಕೈ ಕಾಲು ಮುರಿಸಿಕೊಂಡು ಇವಳನ್ನು ನೋಡಿದರೆ ಸಾಕು ದೂರದಿಂದಲೇ ಕೈ ಮುಗಿದು ಓಡಿ ಹೋಗುವುದನ್ನು ನೋಡಿ ನಗುವ ಆಸೆ
ಬಸ್ ಸ್ಟಾಪ್ ಪೂರ್ತಿ ಜನಗಳು ಇನ್ನೇನು ಯಾವ ಬಸ್ಸೂ ಬರೋದಿಲ್ವೇನೋ ಅನ್ನೊ ಹಾಗೆ ಜನ ಕುರಿ ಮಂದೆ ಥರಾ ನುಗ್ತಾ ಇದ್ದಾರೆ. ಆ ಬಸ್ ಡ್ರೈವರ್ರೋ ಇಡಿ ಜನರನ್ನೇ ತಾನೆ ಹೊತ್ತುಕೊಂಡು ಹೋಗ್ತೀನೇನೋ ಅನ್ನೋಹಾಗೆ ಬೈತಾ ಇದ್ದಾನೆ.
ಎಷ್ಟೆ ಮುಂದುವರೆದ್ರೂ ಈ ಕಂಡಕ್ಟರ್ಸ್‌ಗೆ ಮತ್ತೆ ಡ್ರೈವರ್ಸ್‌ಗೆ ಸಾಫ್ಟ್ ಸ್ಕಿಲ್ಸ್ ಹೇಳಿಕೊಡದಿದ್ದರೆ ಬಿ ಎಮ್ ಟಿಸಿ ಬಸ್ಸಾ ಅನ್ನೋ ರಾಗ ತಪ್ಪಲ್ಲ.
ನಗುತ್ತಾ ಮನೆಯತ್ತ ನಡೆದಳು ಭವ್ಯ ಬಂಗಲೆ ಅದು . ಗೇಟ್ ತೆರೆದು ಒಳಗೆ ಹೋಗುತ್ತಿದ್ದಂತೆ
"ಸ್ವಾತಿ ಇಲ್ಲಿ ಬಾ " ಅಪ್ಪ್ಪ ಸ್ವಿಮ್ಮಿಂಗ್ ಪೂಲ್ ಬಳಿಯಲ್ಲೇ ಕೂತಿದ್ದರು . ಹೋಗಿ ಕೂತಳು . ಇಲ್ಲಿ ಕೂತು ಮಾಡುವುದೇನು ? ಅತ್ತಿತ್ತ ನೋಡತೊಡಗಿದಳು. ಅಪ್ಪ ಅವಳನ್ನ ಕರೆದದ್ದನ್ನೇ ಮರೆತವರಂತೆ ಕಿವಿಗೆ ಮೊಬೈಲ್ ಅಂಟಿಸಿಕೊಂಡಿದ್ದರು.
ಜೋರು ದ್ವನಿಯಲ್ಲಿ ಮಾತು ನಡೆಯುತ್ತಿತ್ತು
"ಲೋ ಲೋಫರ್ ಏನೋ ಮಾಡ್ತಾ ಇದ್ಯಾ ಮೊದಲು ಅವನ್ ಮನೆ ಹೊಡುಕೋ . ಎಲ್ಲಿ ಸತ್ ಬಿದ್ದಿದಾನೆ . ಹಂಗೆ ಅವನ್ ಮನೇಲಿ ಯಾರ್ಯಾರಿದ್ದಾರೆ ಅಂತ ಡೀಟೇಲ್ಸ್ ತಗೋ. ಕಕ್ಕ್ಸಿಬಿಡ್ತೀನಿ. ಈ ಕ್ರಿಷ್ಣಾರೆಡ್ಡಿ ಅಂದ್ರೆ ಉಚ್ಚೊಯ್ಕೋಬೇಕು ಹಂಗ್ ಮಾಡ್ತೀನಿ" ಇದು ಸಾಮಾನ್ಯ ಮಾತುಕತೆ
ಸ್ವಾತಿಯ ಅಪ್ಪ ಫೈನಾಂಶಿಯರ್. ಜೊತೆಗೆ ಪೇಪರ್ ಏಜೆಂಟ್, ಕೇಬಲ್ ಲಾಬಿ. ರಿಯಲ್ ಎಸ್ಟೇಟ್ ಏಜೆಂಟ್. ರಿಂಗ್ ರಸ್ತೆಯಲ್ಲಿರೋ ಚೌಲ್ಟ್ರಿಯಲ್ಲಿ ನಾಲ್ಕು ಇವರದೇ. ಇವರಿರೋ ಊರಲ್ಲಿ ಅರ್ಧ ಭಾಗ ಇವರದ್ದೇ , ಆಸಾಮಿ ಕೈಗೆ ಕಾಲಿಗೆ ಕುತ್ತಿಗೆಗೆ ಅಂತ ಸುಮಾರು ಎರೆಡು ಕೇಜಿ ಚಿನ್ನ ಹಾಕಿಕೊಳ್ಳುತ್ತಿದ್ದ.
ಫೋನ್ ಕಿವಿಯಿಂದ ಕೆಳಗೆ ಬಂತು
ಅವರ ಮಾತು ನಿಲ್ಲುವುದೇ ಕಾಯುತ್ತಿದ್ದಳು "ಏನಪ್ಪ ?"
"ಸ್ವಾತಿ ಯಾವಾಗ ರಿಸಲ್ಟ್?" ಮತ್ತದೇ ಪ್ರಶ್ನೆ ಇದೇ ಪ್ರಶ್ನೆ ಪರೀಕ್ಷೆ ಆದಾಗಿನಿಂದ ಕೇಳಿ ಕೇಳಿ ಸ್ವಾತಿಗೂ ಬೇಸರವಾಗಿತ್ತು
"ಒಂದು ಸಾವಿರ ಸಲ ಕೇಳ್ತಾ ಇದ್ದೀಯಾಪ್ಪ ಬೇರೆ ಏನಾದರೂ ಕೇಳಪ್ಪ"
ಬೇಸರ ಮಾಡಿಕೊಂಡೇ ಉತ್ತರಿಸಿದಳು
"ಸಾರಿ ಸ್ವಾತಿ ಮುಂದಿನ ತಿಂಗಳಲ್ವೇ. ಸರಿಯಾಗಿ ಇಪ್ಪತ್ತು ದಿನಗಳಾದ ಮೇಲಲ್ಲವೇ?"
"ಹೂ ಹೌದು . ಏನ್ಮಾಡಬೇಕಂತ ಇದ್ದೀಯಾ" ಪೇಪರ್ ಓದ್ತಾನೇ ಕೇಳಿದರು . ಅವರಿಗೆ ಮಗಳನ್ನು ಓದಿಸಿ ಡಾಕ್ಟರ್ ಮಾಡಬೇಕಂತಿತ್ತು. ಆದರೆ ಅವಳೋ ಆರ್ಟ್ಸ್ ಬ್ರಾಂಚ್ ತೆಗೆದುಕೊಂಡಿದ್ದಳು. ಸ್ವಾತಿ ಏನು ಹೇಳಿಯಾಳು.
ಅತ್ತಿತ್ತ ನೋಡಿ "ಒಳಗೆ ಹೋಗಿ ಕಾಫಿ ಕುಡೀಬೇಕಂತ ಅನ್ಕೊಂಡಿದ್ದೇನೆ " ಹೇಳಿ ಒಳಗೋಡಿದಳು ಕ್ರಿಷ್ಣಾ ರೆಡ್ಡಿ ಬೆಪ್ಪಾಗಿ ನಗುತ್ತಾ ಸುಮ್ಮನಾದರು
ಅವಳು ರೂಮೊಳೊಗೆ ಹೋದ ತಕ್ಷಣ ಅಮ್ಮ " ಎಲ್ಲಾದರೂ ಹೊರಗಡೆ ಹೋಗಿ ಬಂದ ಮೇಲೆ ಕಾಲು ತೊಳ್ಕೋ ಅಂದ್ರೂ ಕೇಳಲ್ಲ ಯಾವ್ಯಾವ ಜನರು ಏನೇನು ಮಾಡ್ರಿರ್ತಾರೋ ." ಗೊಣಗುತ್ತಿದ್ದರು
ಪಾರ್ವತಮ್ಮ ಜನ ತಮಗೆ ಮಾಟ ಮಂತ್ರ ಮಾಡಿಸಿರುತ್ತಾರೆ ಎಂಬ ಭಯ ಅವಳ ಅಪ್ಪನಿಗೆ ಎಲ್ಲಿ ಯಾರ್ ಯಾವತ್ತು ಮಚ್ಚು ಲಾಂಗ್ ಹಿಡ್ಕೊಂಡು ಬರ್ತಾರೋ ಅಂತ ಭಯ. ಇಲ್ಲದೇ ಏನು ಅಂಥಾ ಪಾಪಗಳನ್ನು ಮಾಡಿರೋರು ಅವರು ಮನುಷ್ಯರನ್ನು ಕೊಚ್ಚುವುದು ಅವರಿಗೊಂದು ಥರಾ ಆಟವಾಗಿತ್ತು. ಇಡೀ ಊರಿಗೆ ರೌಡಿಯ ರೀತಿ ಅವರು .
ರೂಮಿನ ಕಿಟಕಿ ಇಂದ ಅಪ್ಪಾ ಫೋನಲ್ಲಿ ಮಾತಾಡ್ತ್ತಿದ್ದುದು ಕೇಳಿಸ್ತಿತ್ತು "ಏಯ್ ಆ ** ಮಗನಿಗೆ ಏನ್ ರೋಗಾಂತೆ ಇವತ್ತು ಸಂಜೆ ಒಳಗೆ ಅಸಲು ಬಡ್ದಿ ಸಮೇತ ದುಡ್ಡುಕೊಡ್ಲಿಲ್ಲಾಂದ್ರೆ ಅವನ ಹೆಂಡ್ತೀನ ಬಾಂಬೆಗೆ ಮಾರ್ಬಿಡ್ತೀನಂತ ಹೇಳು . ಏನ್ಕಂದ್ಕೊಂಡಿದಾನೆ ************" ಅಪ್ಪನ ಬಾಯಿಂದ ಕೆಟ್ಟ ಮಾತುಗಳೇ . ಕೇಳೋಕಾಗಲ್ಲಾ ಒಂದೆರೆಡು ಸಲಾ ಅಪ್ಪನ್ನ ಬೈದಿದ್ದಳು
ಅದಕ್ಕೆ ಅವರು "ನೋಡು ಸ್ವಾತಿ ಹಿಂಗೆಲ್ಲಾ ಬೈದೆ ಹೋದ್ರೆ ನನ್ನ ದುಡ್ಡು ವಾಪಾಸ್ ಬರೋಲ್ಲಾ. ಹೀಗೆಲ್ಲಾ ಇಲ್ದೆ ಹೋದ್ರೆ ನಮ್ಮ ಹಣಾ ಸ್ಮಶಾನಕ್ಕೋದ ಹೆಣ ಅಂತನ್ಕೊಂಡು ಸುಮ್ನಾಗಬೇಕಷ್ಟೆ"
"ಸ್ವಾತಿ ಬೋಂಡ ತಿಂತೀಯಂತೆ ಬಾರೆ" ಅಮ್ಮಾ ಒಳಗಿಂದ ಕೂಗಿದರು ಮುಖ ತೊಳೆದುಕೊಂಡು ಅಡಿಗೆ ಮನೆಗೆ ಹೋದಳು. ಬೋಂಡಾ ಸಿದ್ದವಾಗಿತ್ತು. ಮೆಲ್ಲತೊಡಗಿದಳು "ಸ್ವಾತಿ ಮುಂದಿನ ತಿಂಗಳಿಗೆ ನಿಂಗೆ ಹದಿನೆಂಟು ತುಂಬುತ್ತೆ" ಅಮ್ಮಾ ಬೋಂಡಾ ಕರಿಯುತ್ತಾ ಹೇಳಿದರು
"ಮುಂದಿನವರ್ಷ ಅದೇ ತಿಂಗಳಿಗೆ ಹತ್ತೊಂಬತ್ತೂ ತುಂಬುತ್ತೆ . ಮತ್ತೆ ಅದರ ಮುಂದಿನ ವರ್ಷ್ಗ ಇಪ್ಪತ್ತೂ ತುಂಬುತ್ತೆ." ಮಾತು ಮುಂದುವರಿಸಿದಳು ಕೀಟಲೆಯಿಂದ
"ಲೇ ತರ್ಲೇ ನಾನ್ ಹೇಳ್ತಾ ಇರೋದು ಕೇಳಿಸಿಕೋ. ಶೀಲತ್ತೆ ಫೋನ್ ಮಾಡಿದ್ರು ಯಾವಾಗ ನಮ್ಹುಡುಗೀನ ಮನೆಗೆ ಕಳ್ಸ್ತೀರಾ ಅಂತಾ ."
"ಕಳಿಸಿಬಿಡು ಯಾಕೆ ಅವರ ಹುಡುಗೀನ ಇಟ್ಕೊಂಡಿದೀಯಾ" ಗೊತ್ತು ಅವಳೇನು ಹೇಳ್ತಾ ಇದಾಳಂತ ಆದರೂ ಬಾಯೊಳಗಿದ್ದ ಬೋಂಡಾ ಜೊತೆಗೆ ಮಾತಾಡಿದಳು
"ಸ್ವಾತಿ ತುಂಬಾ ತರಲೆ ಆಗ್ತಾ ಇದೀಯಾ. ಮದುವೆ ಯಾವಾಗ ಇಟ್ಕೊಳೋಣ ಅಂತಾ ಕೇಳ್ತಾ ಇದ್ದಾರೆ" "ಅಯ್ಯೋ ಶೀಲತ್ತೆಗೆ ಮತ್ತೆ ಮದುವೇನಾ ಮತ್ತೆ ಶ್ರೀದ್ಜರ ಮಾವನ ಗತಿ" ಸ್ವಾತಿ ಉದ್ಗರಿಸಿದಳು
"ಸ್ವಾತಿ ನಿನ್ನನ್ನ ಏನ್ಮಾಡ್ತೀನಿ ಅಂತ ನೋಡು" ಅಮ್ಮ ಅಟ್ಟಿಸಿಕೊಂಡು ಬಂದರು ರೂಮಿಗೆ ಓಡಿ ಬಂದು ಬಾಗಿಲು ಹಾಕಿಕೊಂಡಳು . ಕೆನ್ನೆ ಕೆಂಪಗಾಗಿತ್ತು ಮದುವೆಯ ಮಾತಲ್ಲವೇ
ಅವಳು ಇನ್ನೇನು ಕೊಂಚ ದಿನಗಳಲ್ಲೇ ಮದುವೆ ಅಂತ ಅವಳಿಗೂ ಗೊತ್ತು. ಶಿವು ಅವಳಿಗೂ ಇಷ್ಟಾನೆ ಆದರೆ ಇಷ್ಟು ಬೇಗ ಮದುವೆ ಆಗೋಕೆ ಅವಳಿಗೂ ಇಷ್ಟ ಇಲ್ಲ ಆದರೆ ರೆಡ್ದಿ ಹೆಣ್ಣು ಮಕ್ಕಳಿಗೆ ಹದಿನೆಂಟು ಹತ್ತೊಂಬತ್ತು ತುಂಬ್ತಾ ಇದ್ದ ಹಾಗೆ ಮದುವೆ ಮಾಡಿಬಿಡುವ ಕಾರ್ಯಗಳೇ ಜಾಸ್ತಿ ಜೊತೆಗೆ ಅವರ ಬಿಸಿನೆಸ್ ಸಹಾ ಒಂದು ಥರಾ ಅಪಾಯಕಾರಿಯಾದ್ದರಿಂದ ವಯಸಿಗೆ ಬಂದ ಮಗಳು ಸೆರಗಲಿಟ್ಟ ಕೆಂಡ ಎಂಬ ಆತಂಕ.
ಸ್ವಾತಿ ಮುದ್ದು ಮುದ್ದು ಹುಡುಗಿ ಶಿವು ಸಹಾ ಸಾಫ್ಟವೇರ್ ಇಂಜಿನಿಯರ್. ಒಳ್ಳೆ ಕಂಪೆನಿಯಲ್ಲಿ ಕೆಲ್ಸಕ್ಕೆ ಇದ್ದ. ಇವಳನ್ನು ಕಂಡರೆ ಪ್ರಾಣ ಇವಳಿಗೂ ಅಷ್ಟೇ. ಮೊದಲಿಂದಲೂ ಅವನೇ ತನ್ನ ಜೋಡಿ ಎಂಬ ಅಭಿಮಾನ.
ಸ್ವಾತಿ ಕಾಲಲ್ಲಿ ಅದೃಷ್ಟವನ್ನೇ ಹೊತ್ತು ತಂದವಳು ಅವಳು ಹುಟ್ಟಿದ ಮೇಲೆಯೇ ಅವಳ ಅಪ್ಪನ ಹೊಲ ಗದ್ದೆಗಳು ಬಂಗಾರಕ್ಕಿಂತಲೂ ಹೆಚ್ಚು ಬೆಲೆಬಾಳ ತೊಡಗಿ ಹಣದ ಹೊಳೆಯನ್ನೇ ಹರಿಸಿದವು. ಹಾಗಾಗಿ ಸ್ವಾತಿ ಅವರ ಪಾಲಿಗೆ ಕೇವಲ ಮಗಳಾಗಿರಲಿಲ್ಲ ಅದೃಷ್ಟ ದೇವತೆ ಆಗಿದ್ದಳು.
ಕಂಪ್ಯೂಟರ್ ಆನ್ ಮಾಡಿ ಶಿವು ಜೊತೆ ಚಾಟ್ ಮಾಡುತ್ತಿದ್ದ ಸ್ವಾತಿ ಅವನ ಸಾಲುಗಳನ್ನು ನೋಡಿ ಕೆಂಪುಕೆಂಪಾಗಿ ನಾಚುತ್ತಿದ್ದಳು.
ಹಾಗೆ ಕಿಟಕಿಯಿಂದ ನೋಡಿದವಳಿಗೆ ಶಾಕ್ ಪೋಲಿಸ್ ಕಾನ್‌ಸ್ಟೇಬಲ್ ಜೊತೆ ಅಪ್ಪ ಹೋಗುತ್ತಿದ್ದಾರೆ ಎಲ್ಲಿ ಏನಾಯ್ತೋ ಎಂಭ ಭಯದಿಂದ ಹೊರಗೆ ಓಡಿದಳು
ಅಪ್ಪ ಮಾತ್ರ ನಗುತ್ತಾ ಹೊರಟಿದ್ದರು ಜೊತೆಗೆ ಅಮ್ಮನೂ ಹೊರಟಿದ್ದಳು "ಅಪ್ಪಾ ? ?"ಕೂಗಿದಳು. ಕೂಗಿನಲ್ಲಿ ಪ್ರಶ್ನೆ ಇತ್ತು "ಏನಿಲ್ಲಾ ಸ್ವಾತಿ ಸ್ಟೇಷನ್‌ನಲ್ಲಿ ಅದ್ಯಾರೋ ನಿಮ್ಮ ತಾಯಿಯ ಹೆಸರು ಹೇಳಿದಾಳಂತೆ ಅದ್ಯಾರು ಅಂತ ನೋಡಿಕೊಂಡು ಬರೋಣ ಅಂತ"
"ಅಪ್ಪಾ ನಾನೂ ಬರ್ತೀನಿ ಪ್ಲೀಸ್" ಒಮ್ಮೆ ಹೊರಗೆ ಹೋದ
"ಸರಿ ಬರಲಿ ಬಿಡಿಸಾರ್ ಫ್ಯಾಮಿಲಿ ಟ್ರಿಪ್ ಆದಂಗೆ ಆಗುತ್ತೆ" ಪೇದೆ ಕಿಸಿದ "ಹೌದೌದು ನಿಮ್ಮ ಸ್ಟೇಷನ್ ದೊಡ್ಡ ತಾಜ್ ಮಹಲ್ ನಡ್ಯೋ ಮುಂದೆ ನೋಡ್ಕೊಂಡು"ಸ್ವಾತಿಯ ಅಪ್ಪ ಗದರಿದರು ಅವರ ದರ್ಪವೇ ಅಂತಹದ್ದು. ಎಲ್ಲರೂ ಕಾರನ್ನೇರಿದರು ಕಾರ್ ಪೋಲಿಸ್ ಸ್ಟೇಷನ್‌ನ ಮುಂದೆ ನಿಂತಿತು ಹೊರಗಡೆಯೇ ನಿಂತಿದ್ದ ಎಸ್ ಐ ಸ್ವಾಗತಿಸಿದ "ಬನ್ನಿ ಸಾರ್ . ಅದು ಈ ಹೆಂಗಸು ನಮಗೆ ಲೇಡಿ ಕರ್ಜನ್ ಹಾಸ್ಪಿಟಲ್ ಬಳಿ ಸಿಕ್ಕಳು. ಮಕ್ಕಳ ಕಳ್ಳಿ ಇವಳು" ಸ್ವಾತಿಯ ಅಪ್ಪ "ನಮ್ಮ ಮನೇಲಿ ಯಾವ ಮಕ್ಕಳೂ ಕಳೆದು ಹೋಗಿಲ್ಲ . ನಮ್ಮನ್ಯಾಕೆ ಕರೆಸಿದ್ರಿ?" ಅವರ ಧ್ವನಿಯಲ್ಲಿ ಬೇಸರ ಇತ್ತು "ಸಾರಿ ಸಾರ್ ನೀವೊಂದು ಸಲ ಆಕೆ ಹತ್ರ ಮಾತಾಡಿ ನಾನ್ಯಾಕೆ ಕರೆಸಿದೆ ಅಂತ ಗೊತ್ತಾಗುತ್ತೆ . ನಿಮ್ಮ ಮಗಳು ಇಲ್ಲೆ ಇರಲಿ" ಎಸ್ ಐ ಹೇಳಿದ ಸ್ವಾತಿ ಕೆರಳಿದಳು "ನಾನ್ಯಾಕೆ ಇಲ್ಲೆ ಇರಬೇಕು ನಾನೂ ಆ ಹೆಂಗಸನ್ನ ನೋಡಬೇಕು ನಾನ ನೂವ್ ಚೆಪ್ ನಾನಾ"ಒಮ್ಮೊಮೆ ತೆಲಗು ಬೇಡವೆಂದರೂ ನಾಲಿಗೆಗೂ ಬಂದುಬಿಡುತ್ತಿತ್ತು "ಬರಲಿ ಬಿಡ್ರಿ. ಅವಳೇನು ಬೇರೆಯವಳಾ?" ಸ್ವಾತಿಯ ಅಪ್ಪ "ಸಾರ್ ಆದರೆ ಇದು....." ಎಸ್ ಐ ತಡವರಿಸಿದ "ನೀನು ಬಾ ಸ್ವಾತಿ " ಅವನ ಮಾತನ್ನು ಗಮನಿಸದೆ ಅಪ್ಪ ಮುಂದುವರೆದರು ಸ್ವಾತಿ ಅವರನ್ನು ಹಿಂಬಾಲಿಸಿದಳು
ಶೆಲ್‌ನ ಒಳಗೆ ಆ ಹೆಣ್ಣು ಕೊತಿದ್ದಳು. ತಲೆ ತಗ್ಗಿಸಿದ್ದರಿಂದ ಮುಖ ಕಾಣಿಸಲಿಲ್ಲ. ಅವಳ ಕೈ ಮೇಲೆ ಬಾಸುಂಡಿಗಳು ಪೋಲಿಸರ ಆತಿಥ್ಯ ತಿಂದುದಕ್ಕೆ ಸಾಕ್ಷಿಯಾಗಿತ್ತು.
"ಏಯ್ ನೋಡು . ನೀನು ಹೇಳಿದ ಹಂಗೆ ಪಾರ್ವತಮ್ಮ ಬಂದಿದಾರೆ . ಬೊಗಳು. " ಪಕ್ಕದಲ್ಲೆ ನಿಂತಿದ್ದ ಲೇಡಿ ಕಾನ್‌ಸ್ಟೇಬಲ್ ಗದರಿದಳು.
ಆಕೆ ತಲೆ ಎತ್ತಿದಳು ಪಾರ್ವತಮ್ಮ ಅಂದರೆ ಸ್ವಾತಿಯ ಅಮ್ಮನಿಗೆ ಅವಳ ಗುರುತು ಹತ್ತಲಿಲ್ಲ.
ತುಂಬಾ ವಯಸಾಗಿತ್ತು. ಆ ಹೆಂಗಸಿಗೆ. ಕಣ್ಣುಗಳ ಸುತ್ತಾ ಕಪ್ಪು ವರ್ತುಲಗಳು.
"ಯಾರು? ನಾನು ನಿಂಗೆ ಗೊತ್ತಿದ್ದೀನಾ?" ಪಾರ್ವತಮ್ಮನ ದ್ವನಿಯಲ್ಲಿ ಅವರಿಗೆ ಗೊತ್ತಿಲ್ಲದ ಹಾಗೆ ನಡುಕ ಉಂಟಾಗಿತ್ತು ಆಕೆ ಎದ್ದು ನಿಂತಳು
" ನಾನ್ಯಾರು ಅಂತ ನಿಮಗೆ ನೆನಪಿರಬಹುದು. ನಾನು ನಿಮ್ಮ ಹೆರಿಗೆ ಮಾಡಿದವಳು" ಆಕೆ ಒಂದೊಂದಾಗಿ ಪದಗಳನ್ನು ಕಷ್ಟ ಪಟ್ಟು ಉರುಳಿಸಿದಳು. ಪಾರ್ವತಮ್ಮನಿಗೆ ಮಿಂಚು ಬಂದಂತಾಯ್ತು
ಆಗ ಹದಿನೆಂಟು ವರ್ಶ್ಹಗಳ ಮುಂಚೆ ಆಗಿನ್ನೂ ಅವರಿದ್ದ ಊರು ಕಾಡಿನಂತಿತ್ತು. ಸಿರಿವಂತಿಕೆಯೂ ಇರಲಿಲ್ಲ ತಾಯಿ ತಂದೆ ಇಬ್ಬರನ್ನೂ ಕಳೆದುಕೊಂಡಿದ್ದ ಪಾರ್ವತಿಗೆ ಗಂಡನ ಅಮ್ಮ ಅಂದರೆ ಅವಳ ಅಜ್ಜಿ ಮಾತ್ರ ಇದ್ದರು. ಅವರಿಗೂ ವಯಸಾಗಿತ್ತು. ಆಗ ಪಾರ್ವತಿಯ ಗಂಡ ಕ್ರಿಷ್ಣಾರೆಡ್ಡಿ ಮಹಾ ಕುಡುಕ. ಒಮ್ಮೆ ಹೊರಗೆ ಹೋದರೆ ಮತ್ತೆ ಬರುವುದು ಎಂದೋ. ಅಂತಹ ಒಂದು ದಿನದಲ್ಲೇ ತುಂಬು ಗರ್ಭಿಣಿಯಾಗಿದ್ದ ಪಾರ್ವತಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಅಲ್ಲಿಂದ ಸಿಟಿಗೆ ಬರಬೇಕಾಗಿತ್ತು. ಹೇಗೋ ಪಕ್ಕದ ಮನೆಯಲ್ಲಿದ್ದ ಆಟೋಗೆ ಹೇಳಿ ಅದರಲ್ಲಿ ಬರುತ್ತಿದ್ದಂತೆ ನೋವು ಹೆಚ್ಚಾಗತೊಡಗಿತು. ಅವಳ ಹೆರಿಗೆ ಈಗಲೆ ಆಗಬಹುದೆಂದು ಅನಿಸಿ ದಾರಿಯಲ್ಲಿ ಗೊತ್ತಿದ್ದ ಮನೆಯೊಂದರ ಬಾಗಿಲು ಬಡಿದರು.
ಆ ಮನೆಯ ಹೆಂಗಸು ಮರಿಯಮ್ಮ ಒಬ್ಬ ಸೂಲಗಿತ್ತಿಯಾದ ಕಾರಣ ಒಂದು ಘಂಟೆಯಲ್ಲಿ ಸುಸ್ಸೂತ್ರವಾಗಿ ಹೆರಿಗೆ ಮುಗಿಸಿದ್ದಳು. ಆದರೆ ಪಾರ್ವತಿಗೆ ಎಚ್ಚರವಾಗುವ ವೇಳೆಗೆ ಆ ಹೆಂಗಸು ಇರಲಿಲ್ಲ.ದೇವರೆ ಅವಳ ರೂಪದಲ್ಲಿ ಬಂದು ತನ್ನ ಹೆರಿಗೆ ಮಾಡಿಸಿದ್ದಾರೆಂದು ಧನ್ಯಳಾಗಿದ್ದಳು ಪಾರ್ವತಿ. ಆಗ ಹುಟ್ಟಿದವಳೇ ಸ್ವಾತಿ. ಆ ಹೆಂಗಸು ಇವಳೇ ಇರಬಹುದೆ ಎಂದನಿಸಿತು ಪಾರ್ವತಮ್ಮನಿಗೆ ನೆನಪು ಮಾಡಿಕೊಂಡು ಕೇಳಿದರು "ನೀನು ಮರಿಯಮ್ಮ ಅಲ್ವಾ?"
"ಹೌದೆನ್ನುವಂತೆ ತಲೆ ಆಡಿಸಿದಳು
"ಅಯ್ಯೋ ದೇವರಂಗ್ ಬಂದು ನನ್ನ ಪ್ರಾಣ ಉಳಿಸಿದೆ ತಾಯಿ ನೀನು . ಎಲ್ಲ್ ಹೊರಟೋದೆ ನೀನು ಆಮೇಲೆ?" ಪಾರ್ವತಮ್ಮ ನುಡಿಯುತ್ತಿದ್ದಂತೆ ಆ ಹೆಣ್ಣಿನ ಮುಖದಲ್ಲಿ ಒಂದು ನಗೆ ಹಾದು ಹೋಯ್ತು.
"ಮೇಡಮ್ ಇವಳು ಎಂಥಾ ಕೆಲ್ಸ ಮಾಡಿದಾಳೆ ಅಂತಾ ಗೊತ್ತಿಲ್ಲಾ ನಿಮಗೆ " ಎಸ್ ಐ ಹೇಳುತ್ತಿದ್ದಂತೆ
"ಶ್" ಎಂದು ತಡೆದರು ಕ್ರಿಷ್ನಾರೆಡ್ಡಿ "ಅವಳು ಹೇಳಲಿ ಬಿಡಿ"
ಸ್ವಾತಿಯ ಹೃದಯ ಹೊಡೆದುಕೊಳ್ಳಲಾರಂಭಿಸಿತು. ಆಕೆ ಯಾವುದೋ ಭೂಕಂಪವನ್ನು ಸೃಷ್ಟಿಸಬಹುದು ಎಂದೇ ಅನಿಸತೊಡಗಿತು.
ನಿಟ್ಟ ನೋಟದಿಂದ ಮರಿಯಮ್ಮನನ್ನೆ ನೋಡಲಾರಂಭಿಸಿದರು ಎಲ್ಲರೂ "ಆವತ್ತು ನಿಮಗೆ ಹುಟ್ಟಿದ್ದು ಗಂಡುಮಗು"
ಆಕೆ ಬಾಯಿ ಬಿಟ್ಟಳು ನೋಟ ಮತ್ತೆಲ್ಲೋ ಇತ್ತು
ದೊಡ್ಡದೊಂದು ಬಾಂಬ್ ಹಾಕಿದಂತೆ ಎಲ್ಲರೂ ಸ್ತಬ್ದರಾದರು. ಕ್ಷಣಕಾಲ ಮೌನವಾವರಿಸಿತು. ಮರಿಯಮ್ಮ ಆಗಬಹುದಾದ ಪರಿಣಾಮಗಳನ್ನು ಊಹಿಸುತ್ತಾ ಹಿಂದೆ ಸರಿಯುತ್ತಿದ್ದಂತೆ
ಕೂಡಲೇ ಚೇತರಿಸಿಕೊಂಡ ಕ್ರಿಷ್ಣಾರೆಡ್ಡಿ "ಏಯ್ ಏನೆ ಬೊಗಳ್ತಿದ್ದೀಯಾ . ಇವತ್ತು ನಿನ್ನ ಗತಿ ನೆಟ್ಟಗಿಲ್ಲ ಅನ್ಸುತ್ತೆ ಅದಕ್ಕೆ ನನ್ನಕೈನಲ್ಲಿ ಸಿಕ್ಕಿಹಾಕೊಂಡಿದ್ದೀಯಾ ಸುಳ್ಳು, ಸುಳ್ಳ್ಯ್ ಹೇಳ್ತೀಯಾ ಸೀರೆ ಬಿಚ್ಚಿ ಹೊಡೀತೀನಿ ನಿಂಗೆ ನೋಡು ನಾನು .ರಂಡೆ " ಮರಿಯಮ್ಮನ ಕೂದಲನ್ನು ಹಿಡಿದು ಜಗ್ಗಿದರು.
ಆಕೆ ನೋವಿನಿಂದ ಚೀರಿದಳು "ಸಾರ್ ಪ್ಲೀಸ್ ಸಾರ್ ಬಿಟ್ಟು ಬಿಡಿ ಇದು ಸ್ಟೇಶನ್" ಎಸ್ ಐ ಬೇಡಿಕೊಂಡ.
ಕ್ರಿಷ್ಣಾರೆಡ್ಡಿಯ ಕೈ ಸಡಿಲವಾಯ್ತು ಸ್ವಾತಿಯ ಎದೆಯ ಕಂಪನ ಜೋರಾಗಿತ್ತು.ಇದು ಯಾರ ವಿಷಯ ಹೇಳುತ್ತಾ ಇದ್ದಾಳೆ. ಅರ್ಥವಾಗಲಿಲ್ಲ
ಪಾರ್ವತಿ ತೀರ ತೆಳ್ಳಗಿದನ ಸ್ವರದಲ್ಲಿ " ನಂಗೆ ಹುಟ್ಟಿದ್ದು ಈ ಹೆಣ್ಣು ಮಗೂನೆ .ಸುಳ್ಳಾಡಬೇಡ. "ಸ್ವಾತಿಯನ್ನ ತೋರಿಸಿ ನುಡಿದರು ಪಾರ್ವತಮ್ಮ.
"ಮೇಡಮ್ ಅವಳು ಹೇಳ್ತಿರೋದು ನಿಜಾ ಮೇಡಮ್ ಈ ನಿಜಾನಾ ನಾವೆ ಹೊರಡಿಸಿದಿವಿ ಅವಳ ಬಾಯಿಂದಾ" ಎಸ್ ಐ ಹೇಳಿದಾಗ ಎಲ್ಲರೂ ಅವನತ್ತ ನೋಡಿದರು. "ಇವಳ ಕೆಲ್ಸಾನೆ ಆಗ ತಾನೆ ಹುಟ್ಟಿದ ಮಗೂನ ಕದ್ದುಕೊಂಡು ಹೋಗಿ ಮಾರೋದು . ಇಲ್ಲೀ ತನಕ ಸುಮಾರು ಗಂಡು ಮಕ್ಕಳನ್ನು ಮಾರಿದ್ದಾಳೆ . ಹಾಗೆ ಮಾರ್ತಿದ್ದ ಹಾಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಳು. ಸಕ್ಕತಾಗಿ ಚಚ್ಚಿದ ಮೇಲೆ ಒಬ್ಬೊಬ್ಬರ ಹೆಸರನ್ನೇ ಹೇಳ್ತಿದ್ದಳು ಹಂಗೆ ನಿಮ್ಮ ಹೆಸರೂ ಹೇಳಿದಳು. ಅದಕ್ಕೆ ನಿಮ್ಮನ್ನ ಕರೆಸಿದ್ದು. "

ಸ್ವಾತಿಯ ಉಸಿರು ನಿಂತಂತಾಯ್ತು ಮಾತಾಡಲು ಬಾಯಿ ಬರಲಿಲ್ಲ

ಮರಿಯಮ್ಮ ಮುಂದುವರೆಸಿದಳು "ನಾನ್ಹೇಳ್ತಾ ಇರೋದು ಏಸು ಆಣೆಗೂ ನಿಜಾ. ಈ ಮಗು ನಿಮ್ಮ ಮಗು ಅಲ್ಲಾ. ನಿಮ್ಮ ಮಗು ಒಂದು ಗಂಡು ಮಗು . ಆ ಮಗು ಮುಖ ನೋಡಿದ್ರೆ ಗೊತ್ತಾಗುವುದಿಲ್ಲವಾ ನಿಮ್ಮ ಮಗಳು ಆಗೋಕೆ ಸಾಧ್ಯಾನಾ?" ಎಲ್ಲರೂ ಸ್ವಾತಿಯತ್ತ ನೋಡಿದರು. ಸ್ವಾತಿಗೆ ಏನು ಮಾಡುವುದೆಂದು ತೋಚಲಿಲ್ಲ. ಪೆಚ್ಚು ಪೆಚ್ಚಾಗಿ ನೋಡಿದಳು.

"ನೀನೇಳ್ತಾ ಇರೋದ್ ನಿಜ ಅಂದ್ರೂ ಮತ್ತೆ ಆ ಗಂಡು ಮಗೂ ಎಲ್ಲಿ " ಕ್ರಿಷ್ಣಾರೆಡ್ಡಿ ಕರ್ಕಶವಾಗಿ ಕೇಳಿದರು
ಉತ್ತರಕ್ಕಾಗಿ ಎಲ್ಲರೂ ಮರಿಯಮ್ಮನನ್ನು ನೋಡಿದರು.
ಅವಳು ತಲೆ ತಗ್ಗಿಸಿದಳು
"ಬೊಗಳೇ ಬೇಗ ನನ್ನ ಮಗೂನ ಏನ್ ಮಾಡ್ದೆ" ಪಾರ್ವತಮ್ಮ ಕಿರುಚಿದರು
ಸ್ವಾತಿ ಪಕ್ಕನೆ ತಾಯಿಯನ್ನು ನೋಡಿದಳು. ಅಮ್ಮನ ಕಣ್ಣಲ್ಲಿ ಕಾತುರತೆ.
ಇಲ್ಲಿಯವರೆಗೆ ತನ್ನ ಮಗಳು ಅಂತಿದ್ದ ಅಮ್ಮನಿಗೆ ತನ್ನ ಮಗನ ಬಗ್ಗೆ ತಿಳಿಯಲು ಎಷ್ಟು ಕುತೂಹಲ ತವಕ. ಆಗಲೆ ಮಗನ ಬಗ್ಗೆ ವ್ಯಾಮೋಹ ಬಂದಿತೇ ? ಇನ್ನು ತನ್ನ ಮೇಲಿಟ್ಟ ಪ್ರೀತಿ ಕೇವಲ ಸಂಬಂಧ ಮಾತ್ರದಿಂದಲೇ ಬಂದಿತೇ
ಹಾಗಿದ್ದಲ್ಲಿ ತಾನು ಯಾರು? ತನ್ನ ಅಪ್ಪ ಅಮ್ಮ ಯಾರು? ಇಲ್ಲಿಯವರೆಗೆ ತನ್ನ ಮನೆಯಲ್ಲದ ಮನೆಯಲ್ಲಿ ಬದುಕಿದೆನೇ ನಾನು? ತನ್ನ ಗಮ್ಯ ಯಾವುದು . ಇಲ್ಲಿಯವರೆಗಿನ ಅಪ್ಪ ಅಮ್ಮ ತನ್ನವರಲ್ಲ
ಮುಂದೇನು ಮಾಡುವುದು? ಅವಳ ತಲೆಯಲ್ಲಿ ಪ್ರಶ್ನೆಗಳು ತಾಂಡವವಾಡತೊಡಗಿದವು
ಎಳೆಯ ಮನಸು ಕಮರತೊಡಗಿತು.
ಭಾವನೆಗಳ ತಾಕಲಾಟ ತಾಳದಂತೆ ಅವಳ ತಲೆ ಸಿಡಿದುಹೋಗುವಂತಾಯ್ತು ಅಮ್ಮಾ ಎಂದು ತಲೆ ಹಿಡಿದವಳೇ ಕೆಳಗೆ ಕುಸಿದಳು
ಸ್ವಾತಿ ಎನ್ನುತ್ತಾ ಎಲ್ಲರೂ ಅವಳತ್ತ ಓಡಿದರು.
(ಮುಂದುವರೆಯುವುದು)

Sunday, October 11, 2009

ವಯಸ್ಸಾದರೆ ನಾನೂ ಹೀಗೇನಾ

ಯಾಕೇಂತ ಗೊತ್ತಿಲ್ಲಾ ಮನಸು ತುಂಬಾ ನೊಂದುಕೊಳ್ಳುತ್ತೆ. ಅಮ್ಮಾ ನನ್ನ ಕೈ ಹಿಡಿದು ಬೆಳೆಸಿದ ಅಮ್ಮ ನಾನು ಬಿದ್ದರೆ ಅವಳ ಕಣ್ಣಲ್ಲಿ ನೀರು ನಾನು ನಕ್ಕರೆ ಅವಳ ಕಣ್ಣಲ್ಲಿ ಹೊಳಪು ಅಂತಹ ಅಮ್ಮಾ ನನ್ನಿಂದ ದೂರಾ ಆಗ್ತಿದಾಳಾ? ಅಥವಾ ನಾನೇ ದೂರಾ ನೂಕುತ್ತಿದ್ದೀನಾ? ನಾನ್ಯಾವ ರೀತೀಲಿ ಅವಳನ್ನ ನೋಯಿಸುತ್ತಿದ್ದೇನೆ? ಅವಳು ಹೇಳಿದ ಹಾಗೆ ಕೇಳ್ತಾ ಇಲ್ಲವಾ? ಅಥವ ನಾನು ಕೇಳಿದರೂ ಅವಳಿಗೆ ಹಿಡಿಸುತ್ತಿಲ್ಲವಾ? ಸಂಸಾರದ ದೊಂಬಿಯಲ್ಲಿ ನಾನೇ ಮರೆಯುತ್ತಿದ್ದೀನಾ ಅಥವಾ ನಾನು ಮರೆತಿದ್ದೇನೆ ಅಂತ ಅವಳೇ ಅಂದುಕೊಳ್ಳುತ್ತಿದ್ದಾಳಾ?ನಾನು ನಕ್ಕಾಗಲೆಲ್ಲಾ ಅವಳ ಕಣ್ಣಲ್ಲಿ ಕಾಣುತ್ತಿದ್ದ ಹರುಷ ಈಗೆಲ್ಲಿ. ಬಹುಷ ನನ್ನ ನಗೆಯಲ್ಲಿ ಪಾಲುದಾರರು ಹೆಚ್ದ್ಚಾದರೆಂದನಿಸಿತೇ?
ನಾನು ಅತ್ತಾಗಲೆಲ್ಲಾ ಅವಳ ಮೊಗದಲ್ಲಿ ಕಾಣುತ್ತಿದ್ದ ಆತಂಕವೆಲ್ಲಿ?. ಪ್ರಾಯಶ? ಕಣ್ಣೊರೆಸುವ ಕೈ ಹೆಚ್ಚದವೆಂದೆನಿಸಿತೇ?
ನನ್ನ ನೋಡಿದಾಗಲೆಲ್ಲಾ ಅರಳುತ್ತಿದ್ದ ಮೊಗವೆಲ್ಲಿ ? ನನ್ನ ಬರುವನ್ನು ಕಾಯುವ ಜೀವಗಳು ಬೇರಿದ್ದರೆನಿಸಿತೆ?
ಯಾಕೀ ಮ್ಲಾನವದನ ಅವಳಿಗೆ ನಾನ್ಯಾವತ್ತೂ ಅವಳು ಬೇರೊಬ್ಬಳೆಂದಂದುಕೊಳ್ಳಲ್ಲಿಲ್ಲ. ಸಿಡುಕು, ಕೋಪ ತಾಪ , ಹರುಷ ಮದುವೆಗೆ ಮುನ್ನವೂ ಇದ್ದವು ಈಗಲೂ ಇವೆ ಅದೇಕೆ ಅವಳಿಗೆ ಈಗಿನದು ಮಾತ್ರ ಎದ್ದು ಕಾಣುತ್ತಿದೆ. ಜೀವನದಲ್ಲಿ ನಾನು ನನ್ನಕ್ಕ ಪಯಣಿಗರಾಗಿದ್ದಾಗ ಅವಳೇ ನಾವಿಕಳಾಗಿದ್ದಳು ಸಂಸಾರದ ಹರಿಗೋಲನ್ನು ನೂಕಿ ನೂಕಿ ಅವಳಿಗೂ ಆಯಾಸವಾಗಿದೀಯೆಂದೆಣಿಸಿ ನಾನು ಹಿಡಿದದ್ದೇ ಅವಳಿಗೆ ಬೇಸರವಾಗಿದೆಯೇ? ಅಥವ ಅವಳೇ ಬೇರಾದಳೆಂದೆಣಿಸಿ ಮತ್ತೊಂದು ನೌಕೆಯಲ್ಲಿ ಬರುವ ಯೋಜನೆಯೇ?
ಇದೇಕೆ ಹೀಗೆ ಸಿಟ್ಟು ಸೆಡವು, ಸಿಡುಕು, ಅಸಹನೆ ಅಮ್ಮನಿಗೆ. ಮತ್ತೆ ಕೆಲವೊಮ್ಮೆ ಇದ್ದಕಿದ್ದಂತೆ ಅಳು . ಯಾಕೆ ಹೀಗೆ
ಬದುಕೆಲ್ಲಾ ಬರೀ ನೋವಿಂದ ಕೂಡಿದ್ದಾಗಲೂ ನಗುತ್ತಾ ನಮ್ಮನ್ನೂ ನಗಿಸುತ್ತಿದ್ದ ಅಮ್ಮ ಜೀವನದ ಮುಸ್ಸಂಜೆಯಲ್ಲಿ ಸಂತಸದ ಸುಖದ ಸರೋವರದಲ್ಲಿದ್ದಾಗಲೂ ನೋವಿಂದ ನರುಳುವುದೇಕೆ? ಅಥವಾ ಎಲ್ಲರಿಗೂ ಹೀಗೆಯೇ ಆಗುತ್ತದೆಯೇ?
ಜೀವನದ ಮುಸ್ಸಂಜೆಯಲ್ಲಿ ನಾನೂಹೀಗೆಯೇ ಆಡುತ್ತೇನಾ?

Wednesday, October 7, 2009

ಎರೆಡು ದಡಗಳ ನಡುವೆ- ಕೊನೆಯ ಭಾಗ

ಬೆಳಗ್ಗೆಯೇ ಹೊರಡಬೇಕಿತ್ತು ಮನುವಿನ ಮನೆಗೆ . ಬೆಳಗ್ಗೆಯೇ ವಿಕಾಸ್ ಮನುವಿಗೆ ಫೋನ್ ಮಾಡಿದ್ದ . ಅಲ್ಲಿಂದ ಬಂದ ಪ್ರತಿಕ್ರಿಯೆ ಮುಖಕ್ಕೆ ಹೊಡೆಯುವಂತಿತ್ತು.ಬಂದು ಸಿರಿಯನ್ನು ಕರೆದುಕೊಂಡು ಹೋಗುವಂತೆ ಹೇಳಿದ್ದ ಮನು. ಆದರೂ ಇದನ್ನು ಶೈಲಾಗೆ ಹೇಳಿರಲಿಲ್ಲ.
ಅಸಲಿಗೆ ಶೈಲಾಗೆ ಸಿರಿಯನ್ನು ನೋಡುವ ಆಸೆ ಇತ್ತೇ ವಿನಹಾ ಅವಳನ್ನು ಮನೆಗೆ ಕರೆತರುವ ಯೋಚನೇ ಏನೂ ಇರಲಿಲ್ಲ. ಯಾವ ಮುಖ ಹೊತ್ತು ಹೋಗುವುದೆಂದು ಗಲಿಬಿಲಿಗೊಂಡಿದ್ದಳು. ಆದರೂ ಸಿರಿಯನ್ನು ನೋಡಲೇಬೇಕೆಂಬ ತುಡಿತದೊಂದಿಗೆ ಮನಸಲ್ಲಿ ಭಂಡ ಧೈರ್ಯ ಮಾಡಿಕೊಂಡಿದ್ದಳು. ವಿಕಾಸ್‌ನಿಗೆ ಮನುವಿನ ಬುದ್ದಿ ಗೊತ್ತಾಗಿದ್ದರಿಂದ ಅವನ ಆ ಮುಖ ಶೈಲಾಗೂ ತಿಳಿಯಲಿ ಎಂದೇ ಅವಳನ್ನು ಆ ಮನೆಗೆ ಕರೆದೊಯ್ಯುವ ಯೋಚನೆ ಮಾಡಿದ್ದ..
ಮನೆಗೆ ಬೀಗ ಜಡಿದು ಬೈಕ್ ಹತ್ತಿ ಸ್ಟಾರ್ಟ್ ಮಾಡಿದ, ಶೈಲಾ ಹಿಂದೆ ಅವಳ ಮನಸೆಲ್ಲಾ ಸಂಗೀತಾಳ ಪತ್ರವೇ ತುಂಬಿತ್ತು. ಅಲ್ಲಿಂದ ಮನುವಿನ ಮನೆ ದೂರವೇ . ಸುಮಾರು ಅರ್ದ್ಗಘಂಟೆಯ ಪ್ರಯಾಣ. ಇಬ್ಬರ ನಡುವೇಯೂ ಮಾತಿಗೆ ಸಾಮಾಗ್ರಿಗಳೇ ಇರಲಿಲ್ಲ. ಯೋಚನೆಗಳಲ್ಲಿ ಕಳೆದು ಹೋಗಿದ್ದೆ ಬಂತು.
ಮನೆ ಹತ್ತಿರ ಬರುತ್ತಿದ್ದಂತೆ ಶೈಲಾಗೆ ಹೃದಯ ಹೊಡೆದುಕೊಳ್ಳಲಾರಂಭಿಸಿತು. ಯಾವ ಮನೆ ತನ್ನದಾಗಿತ್ತೋ ಎಲ್ಲಿ ಆಟವಾಡಿ ಬೆಳೆದಳೋ ಅದೇ ಮನೆಗೆ ಈಗ ಅಪರಿಚಿತಳಾಗಿ ಹೋಗಿದ್ದಳು.
ಗೇಟ್ ಹೊರಗಡೇಯೇ ಬೈಕ್ ನಿಲ್ಲಿಸಿದ. ಶೈಲಾಳ ಕಾಲುಗಳು ಸೋತೇ ಹೋಗಿದ್ದವೇನೋ ಎಂಬಷ್ಟು ಸೋಮಾರಿಗಳಾಗಿದ್ದವು
ಭವ್ಯ ಬಂಗಲೆಯಂತಿದ್ದ ಮನೆ ಅದು.
ಗೇಟ್ ಕೀಪರ್ ಬದಲಾಗಿದ್ದ. ಯಾರೋ ಹೊಸಬ ಇವರನ್ನು ಗೇಟ್ ಒಳಗೆ ಬಿಡಲಿಲ್ಲ. ಕೇಳಿಕೊಂಡು ಬರುವುದಾಗಿ ಮೇಲೆ ಹೋದ
ಮನುವಿನ ನೆಚ್ಚಿನ ಕಾರ್ ಇನ್ನೂ ಅಲ್ಲೇ ಇತ್ತು ಮನು ಎಲ್ಲಿಗೂ ಹೋಗಿಲ್ಲ ಎಂಬುದನ್ನು ಸೂಚಿಸುತ್ತಾ. ಸುಮಾರು ಹತ್ತು ನಿಮಿಷ ಕಾದರೂ ಗೇಟ್ ಕೀಪರ್ ಬರಲೇ ಇಲ್ಲ . ಮುಚ್ಚಿದ ಗೇಟ್ ಹಾಗೆ ಇತ್ತು
ವಿಕಾಸ್‌ಗೆ ಗೊತ್ತಾಯ್ತು ತಮ್ಮನ್ನು ಅವಮಾನ ಗೊಳಿಸಲೆಂದೇ ಮನು ಹೀಗೆ ಮಾಡುತ್ತಿದ್ದಾನೆ.
"ರಾಸ್ಕೆಲ್" ಮನಸಲ್ಲಿ ಹೇಳಿಕೊಳ್ಳಬೇಕಾದ ಪದ ಬಾಯಿಗೆ ಬಂದು ಶೈಲಾ ಕಿವಿಯನ್ನು ಹೊಕ್ಕಿತು
"ಯಾರು?" ತೀಕ್ಷ್ಣವಾಗಿ ಪ್ರಶ್ನಿಸಿದಳು
"ಇನ್ಯಾರು . ಮನ್ವಂತರ್" ವಿಕಾಸ್ ಹಲ್ಲು ಕಚ್ಚಿ ನುಡಿದ
"ವಿಕಾಸ್ . ನಿನ್ನಾಲಿಗೆ ನಾಲಿಗೆ ಹಿಡಿತದಲ್ಲಿರಲಿ. ಅಂತೋರ ಬಗ್ಗೆ ಹೀಗೆಲ್ಲಾ ಮಾತಾಡಬೇಡ." ಎಚ್ಚರಿಕೆ ನೀಡಿದಳು
"ಅವನೆಂತೋನು ಅಂತ ನಿಂಗೆ ಗೊತ್ತಿಲ್ಲ ಶೈಲಾ . ಅವನು ಗೋಮುಖ ವ್ಯಾಘ್ರ. ಸಂಗೀತ ಹೇಳಿದ್ದೆಲ್ಲಾ ನಿಜ"
"ನಿಂಗೆ ಹೇಗೆ ಗೊತ್ತಾಯ್ತು?"
ವಿಕಾಸ್ ನೆನ್ನೆ ತಾನು ಮನುವನ್ನು ಭೇಟಿ ಮಾಡಿದ್ದ ಸಂಗತಿಯನ್ನು ಹೇಳಿದ .
"ಆದರೂ ನಾನಿದನ್ನ ನಂಬಲ್ಲಾ "ಶೈಲಾ ಆಕಾಶ ನೋಡುತ್ತಾ ನುಡಿದಳು
"ಅಂದ್ರೆ ನಾನು ಸುಳ್ಳು ಹೇಳ್ತೀನಿ ಅಂತಾನಾ?" ವಿಕಾಸ್ ಆಕ್ರೋಶಿತನಾದ
"ಅದು ನಂಗೆ ಗೊತ್ತಿಲ್ಲ.ಆದರೆ ಮನು ಮಾತ್ರ ಅಂತಹವರಲ್ಲ" ದೃಷ್ಟಿ ಆಕಾಶದತ್ತಲೇ ನೆಟ್ಟಿತ್ತು
ಅಷ್ಬ್ಟರಲ್ಲಿ ಅತ್ತೆಯೇ ಗೇಟಿನ ಬಳಿ ಬಂದರು

"ಅತ್ತೆ ". ಸಂಭ್ರಮದಿಂದ ನುಡಿದಳು
ಆದರೆ ಆ ಸಂಭ್ರಮ ಅವರ ಮೊಗದಲ್ಲಿ ಇರಲಿಲ್ಲ
"ಯಾವ ಬಾಯಿಂದ ಅತ್ತೆ ಅಂತ ಕರೀತೀಯಾ ನೀನು ನನ್ನನ್ನ . ಅಷ್ಟು ಚೆನ್ನಾಗಿ ನೋಡಿಕೊಂಡ ನಮ್ಮನ್ನ ಗಂಡನ್ನ ಮಗಳನ್ನು ಬಿಟ್ಟು ಈ ಮೂರು ಕಾಸಿನವನ ಜೊತೆ ಓಡಿ ಹೋದ್ಯಲ್ಲಾ ನಾಚಿಕೆ ಆಗಲ್ಲ್ವಾ ನಿಂಗೆ. ಮತ್ಯಾಕೆ ಇಲ್ಲಿಗೆ ಬಂದಿದ್ದಿಯಾ? "
ಅತ್ತೆಯ ಅಂತಹ ರೂಪವನ್ನು ಇಲ್ಲಿಯವರೆಗೆ ಕಂಡಿದ್ದಿಲ್ಲಾ ಶೈಲಾ. ಅದೂ ವಿಕಾಸನ ಬಗ್ಗೆ ಅವರ ಕಾಮೆಂಟ್ ಹಿಡಿಸಲಿಲ್ಲ.
ವಿಕಾಸ್ ತಗ್ಗಿಸಿದ ತಲೆ ಮೇಲೆತ್ತಲಿಲ್ಲ.
"ಅತ್ತೆ ........ಅದು.... ಸಿರಿ...ಯನ್ನು ನೋಡಬೇಕಿತ್ತು"
"ಮೊದಲು ಕರ್ಕೊಂಡು ಹೋಗು ಆ ಅನಿಷ್ಟಾನಾ. ನಂಗೂ ಸಾಕಾಗಿ ಹೋಗಿದೆ . ಇಲ್ಲಾಂದರೆ ಅನಾಥಾಶ್ರಮದಲ್ಲಿ ಬಿಟ್ಟು ಬರೋಣ ಅಂತ ಅಂದ್ಕೊಂಡಿದ್ವಿ"
ಶೈಲಾ ನಂಬಲಾರದವಳಂತೆ ಅತ್ತೆಯ ಮುಖವನ್ನು ನೋಡಿದಳು ಅವರ ಕಣ್ಣಲ್ಲಿ ದ್ವೇಷದ ಕಿಡಿ ಕಾಣುತ್ತಿತ್ತು.
ಅವಳು ಬೆಳೆದದ್ದು ಅವರ ಮಡಿಲಲ್ಲಿಯೇ ತಾಯಿಯನ್ನೇ ಅವರಲ್ಲಿ ಕಂಡವಳು . ಅಂಥವರು ಹೀಗೆ ಮಾಡುತ್ತಿದ್ದಾರಲ್ಲ.
ಅಷ್ಟರಲ್ಲಿ ಮನು ಮಗುವನ್ನು ಕರೆದುಕೊಂಡು ಬಂದ
"ತಗೊಳ್ಳಿ ನಿಮ್ಮಾಸ್ತೀನಾ . ಇನ್ಮೇಲೆ ನಮ್ಮ ಮನೆ ಹತ್ರಾ ಕಾಲಿಡಬೇಡಿ. ಶೈಲಾ ನಂಗೆ ಡೈವೋರ್ಸ್ ಬೇಕು ಮೊದಲು. ನಾನು ರಮ್ಯಾ ಅನ್ನೋ ಹುಡುಗೀನ ಮದುವೆ ಆಗ್ತಾ ಇದ್ದೇನೆ. "
ಶೈಲಾಳ ತಲೆಯಲ್ಲಿ ಸಾವಿರಾರು ಪರ್ವತಗಳು ಕುಸಿದು ಬಿದ್ದ ಅನುಭವವಾಯ್ತು.
ಅವಳ ಆದರ್ಶ ಮನು ಅವಳ ಮುಂದೆಯೇ ಕುಸಿದು ಬಿತ್ತು
"ಅಂದಹಾಗೆ ನಿನ್ನ ಆಸ್ತಿ ಅಂತ ಏನೂ ಇಲ್ಲ ಶೈಲಾ ನಿನ್ನ ಸಾಕಿದ್ದು ನಿನ್ನ ಬೇಕು ಬೇಡಗಳನ್ನೆಲ್ಲಾ ಗಮನಿಸಿದ್ದು. ಓದಿಸಿದ್ದು ಎಲ್ಲಾಕ್ಕೂ ಖರ್ಚಾಗಿದೆ. ಆಸ್ತಿ ,ಜೀವನಾಂಶ ಅಂತ ಏನು ಸಿಗಲ್ಲಾ"
"ಮನು ನಂಗೆ ಆಸ್ತಿ ಹೋಯ್ತಲ್ಲಾ ಅಂತ ಬೇಜಾರಿಲ್ಲ ಆದರೆ . ನಿಮ್ಮಲ್ಲಿದ್ದ ಒಳ್ಲೇ ಗುಣ ಮಾಯವಾಯ್ತಲ್ಲಾ ಅನ್ನೋ ಆಘಾತಾ ಮನಸನ್ನ ಘಾಸಿ ಮಾಡ್ತಿದೆ"
"ಒಳ್ಳೇಯವನಾ . ಯಾರು? ನಾನು . ಅದೆಲ್ಲಾ ನಾನು ಆಡಿದ ನಾಟಕ . ನೀನು ವಿಕಾಸನ್ನ ಹಿಂದೆ ಓಡಿ ಹೋಗಿರಲಿಲ್ಲಾ ಅಂದಿದ್ದ್ರೆ ನಾನೇ ನಿನ್ನನ್ನ ದೂರ ಮಾಡ್ತಿದ್ದೆ . ಅಲ್ಲಾ ಹೆಣ್ಣಾದ ನಿಂಗೆ ಹಳೇ ಗಂಡ ಬೋರಾಗಿದ್ದ್ರೆ ನಾನು ಗಂಡ್ಸು ನಂಗೆ ಇನ್ನೆಷ್ಟು ಬೋರಾಗಿರ್ಬೇಕು ಹೇಳು? ಅದಕ್ಕೆ ನಯವಾಗಿ ಉಪಾಯವಾಗಿ ನಿನ್ನನ್ನ ವಿಕಾಸ್‌ನ ಬಳಿ ಕಳಿಸಿದೆ. ಎಲ್ಲಾ ನನ್ನದೇ ನಾಟಕ " ಮೀಸೆ ತಿರುವಿದ
ಶೈಲಾಳ ಹೃದಯದಲ್ಲಿ ನೂರಾರು ಅಲೆಗಳು ಎದ್ದವು. ಜಿಗುಪ್ಸೆ ತಾನಾಗೆ ಹರಿದು ಬಂತು. ವಿಕಾಸ್ ಮನುವಿನ ಕೈನಲ್ಲಿದ್ದ ಸಿರಿಯನ್ನು ಕರೆದುಕೊಂಡು ಹೆಗಲಿಗೇರಿಸಿಕೊಂಡ.
"ಅಬ್ಬಾ ಕೊನೆಗೂ ಪೀಡೆ ಕಳೀತು" ಅತ್ತೆ ಸಂತೋಷದಿಂದ ಉದ್ಗರಿಸಿದರು.
ಶೈಲಾಳ ಮನ ನೊಂದಿತು. ತನ್ನ ಕುಡಿಯನ್ನು ಪೀಡೆ ಅನಿಷ್ಟ ಎನ್ನುತ್ತಿದ್ದಾರಲ್ಲ . ಆದರೂ ಏನೂ ಹೇಳಲೂ ಬಾಯಿ ಬರಲಿಲ್ಲ. ತಪ್ಪು ತನ್ನದೂ ಅಲ್ಲವೇ. ತನ್ನ ಮಗಳನ್ನು ತಾನು ನೋಡ್ಕೋಬೇಕು
"ಸರಿ ಶೈಲಾ ಡೈವೋರ್ಸ್ ಪೇಪರ್ ಇದೆ ಸೈನ್ ಮಾಡು ನಿಂಗೂ ಬಿಡುಗಡೆ ನಂಗೂ ಬಿಡುಗಡೆ. ಇದೊಂದೇ ಅಡೆತಡೆ ನನ್ನ ರಮ್ಯ ಮದುವೆಗೆ ಇರೋದು. ನಿಂಗೆ ಗೊತ್ತಾ ನಾನು ಇನ್ನಷ್ಟು ಕೋಟ್ಯಾಧೀಶ ಆಗಬಲ್ಲೆ" ಗೆಲುವಿನ ನಗೆ ಬೀರುತ್ತಾ ಅವಳತ್ತ ಡೈವೋರ್ಸ್ ಪೇಪರ್ ಚಾಚಿದ.
ಅವನಂದಂತೆ ಸೈನ್ ಮಾಡಿ ಕೊಟ್ಟಳು.
"ಮನು ಇಷ್ಟು ದಿನಾ ನಿಮಗೇನೋ ಅಪರಾಧ ಮಾಡಿದ್ದೀನಿ ಅಂತಾ ಒದ್ದಾಡ್ತಿದ್ದೆ. ವಿಕಾಸ್‌ಗೂ ನೋವನ್ನು ಕೊಟ್ಟೆ ಆದರೆ ಇವತ್ತಿಂದ ನನ್ನ ಮನಸು ತಿಳಿಯಾಗಿದೆ. ನಾನು ತಪ್ಪೇನು ಮಾಡಿಲ್ಲ. ನಿಮಗೆ ಮೋಸ ಮಾಡಿಲ್ಲ. ಮೋಸ ಹೋಗಿದ್ದು ನಾನು . ನಿಮ್ಮನ್ನ ದೇವರಂತೆ ಭಾವಿಸಿದ್ದೆ. ಆದರೆ ನನ್ನ ನಂಬಿಕೇನೆಲ್ಲಾ ಬುಡಮೇಲು ಗೊಳಿಸಿದ್ರಿ ನೀವು.ನಿಮಗೂ ನಿಮ್ಮ ತಾಯಿಗೂ ಈ ಮನೆಗೂ ದೊಡ್ಡ ನಮಸ್ಕಾರ. ಇನ್ಮೇಲೆ ನೀವು ಕನಸಲ್ಲೂ ಕೂಡ ಬರೋದಿಲ್ಲ . "
ಆವೇಶ ಭರಿತಳಾಗಿ ಮಾತಾಡಿ ಬೈಕನ್ನೇರಿದಳು ಅದನ್ನೇ ಕಾಯುತ್ತಿದ್ದಂತೆ ವಿಕಾಸ್ ಗಾಡಿ ಶುರು ಮಾಡಿದ .ಮುಂದೆ ಕುಳಿತಿದ್ದ ಸಿರಿ ಕೈ ಬೀಸಿದಳು ಮನುವಿಗೆ ಹಾಗು ಅಜ್ಜಿಗೆ. ಬೈಕ್ ರೋಯ್ ಅಂದು ಮುಂದೆ ಹೋಯ್ತು. ವಿಕಾಸನನ್ನು ಹಿತವಾಗಿ ಅಪ್ಪಿದ ಶೈಲಾ. ತನ್ನ ಮುಂದಿನ ಭವಿಷ್ಯಕ್ಕಾಗಿ ಕನಸು ಕಾಣಲೆಂದು ವಿಕಾಸನ್ ಬೆನ್ನಿಗೊರಗಿದಳು. ಡೈವೋರ್ಸ್ ಸಿಕ್ಕ ಮೇಲೆ ವಿಕಾಸನನ್ನು ಮದುವೆಯಾಗುವ ಸುಂದರ ಕನಸು .

ಬೈಕ್ ಮರೆಯಾಗುತ್ತಿದ್ದಂತೆ ಮನುವಿನ ತಾಯಿಯ ದುಖ: ಕಟ್ಟೆಯೊಡೆದಿತ್ತು. ಹಾಗೆ ಕೆಳಗೆ ಕುಸಿದರು.
"ಮನು ಅವಳು ಹೊರಟು ಹೋದಳಲ್ಲಾ . ಮನೆಗೆ ಬಂದವಳನ್ನ ಬಾಯಿಗೆ ಬಂದ ಹಾಗೆ ಅಂದು ಬಿಟ್ಟೆ. ನಾನು ಆ ಮಗೂಗೆ ಅನಿಷ್ಟ ಪೀಡೆ ಅಂತೆಲ್ಲಾ ಅಂದನಲ್ಲ " ರೋಧಿಸಿದರು.
ಮನು ತಾಯಿಯನ್ನು ಸಮಾಧಾನಿಸಿದ
"ಅಮ್ಮಾ ನಾವು ಹೀಗೆ ಮಾಡಿರಲಿಲ್ಲಾ ಅಂದಿದ್ರೆ ನಮ್ಮ ಶೈಲಾ ಯಾವತ್ತಿಗೂ ಸುಖವಾಗಿರ್ತಿರಲಿಲ್ಲ. ನಾನು ಅವಳ ಪಾಲಿಗೆ ದೇವರಾಗಿದ್ದೆ ದೇವರಿಗೆ ಮೋಸ ಮಾಡಿದೆ ಎಂಬ ಚಿಂತೆ ಅವಳನ್ನ ಎಡ ಬಿಡದೆ ಕಾಡ್ತಿತ್ತು. ಅದೇ ಥರಾ ವಿಕಾಸ್ ಕೂಡ ನನ್ನಂಥವನಿಗೆ ಮೋಸ ಮಾಡಿದೆ ಅನ್ನೋದು ಅವನಿಗೆ ಚುಚ್ಚುತ್ತಿತ್ತು. ಇಬ್ಬರೂ ಮಾನಸಿಕವಾಗಿ ತುಂಬಾ ಕೊರಗ್ತಿದ್ದರು. ವಿಕಾಸ್ ಇದೇ ಚಿಂತೇಲಿ ಆಫೀಸಲ್ಲಿ ಕೆಲಸ ಸರಿಯಾಗಿ ಮಾಡ್ತಾ ಇರಲಿಲ್ಲ ಅಂತ ಅವರ ಮ್ಯಾನೇಜರ್ ಹೇಳಿದ್ರು. ಹಾಗೆ ಶೈಲಾ ಸಹಾ ಪ್ರತಿ ತಿಂಗಳಿಗೂ ಹುಷಾರು ತಪ್ಪಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಳು. ಇದಕ್ಕೆಲ್ಲಾ ನಾನೆ ಒಂದು ಅಂತ್ಯ ಹಾಡಬೇಕಿತ್ತು. ಅವರಿಬ್ಬರ ದೃಷ್ಟಿಯಲ್ಲಿ ನಾನು ಕೆಟ್ಟವನಾಗಬೇಕಿತ್ತು. ಅದಕ್ಕೆ ಎಲ್ಲಾ ತಯಾರಿ ಮಾಡಿಕೊಂಡೆ ಈ ನಾಟಕ ಆಡಿದ್ದು ಅಮ್ಮ. ಮೊದಲು ಸಂಗೀತಾಗೆ ಈ ವಿಷ್ಯ ಹೇಳಿ ಅವಳಿಂದ ಶೈಲಾಗೆ ಒಂದು ಮೇಲ್ ಕಳಿಸೋಕೆ ಹೇಳಿದೆ. ಹಾಗೆ ವಿಕಾಸನನ್ನ ಭೇಟಿ ಮಾಡಿ ಅವನ ಬಳಿ ಕೆಟ್ಟದಾಗಿ ನಡೆದುಕೊಂಡೆ. ಈಗ ನೋಡು ಇಬ್ಬರೂ ನೆಮ್ಮದಿಯಿಂದಿರ್ತಾರೆ. ನಂಗೆ ಅಷ್ಟು ಸಾಕು"

"ಅವರು ನೆಮ್ಮದಿ ಇಂದ ಇರ್ತಾರೆ ಆದರೆ ನೀನು? ಸಿರೀನೂ ಕಳಿಸಿ ನೀನು ಹೇಗಿರ್ತೀಯಾ. ಬೇರೆ ಮದುವೆ ಮಾಡಿಕೊ ಮನು "ತಾಯಿಯ ಕರುಳು ನೊಂದು ಕೇಳಿತು

"ಅಮ್ಮಾ ನಾನಾಗ್ಲೇ ಹೇಳಿದ್ದೀನಿ . ನಾನು ಶೈಲಾನ ಬಿಟ್ಟು ಬೇರೆ ಯಾವ ಹೆಣ್ಣನ್ನೂ ಹೆಂಡತಿಯಾಗಿ ಕಾಣೋಕೆ ಸಾಧ್ಯ ಇಲ್ಲಾಂತ. ಅವಳ ನೆನಪುಗಳೇ ಸಾಕು ಬದುಕೋಕೆ" ನಿಟ್ಟುಸಿರಿಟ್ಟು ಒಳಗೆ ಹೋದ ಆ ಉದಾತ್ತ ವ್ಯಕ್ತಿ ತನ್ನ ಮಗ ಎಂಬುದನ್ನು ನೆನೆಸಿಕೊಂಡು ಹೆಮ್ಮೆ ಪಟ್ಟುಕೊಳ್ಳುವ ಸಂತಸವಷ್ಟೇ ಉಳಿಯಿತು ಮನುವಿನ ತಾಯಿಯ ಪಾಲಿಗೆ

Tuesday, September 22, 2009

ಎರೆಡು ದಡಗಳ ನಡುವೆ ಭಾಗ ಐದು

ವಿಕಾಸನಿಗೆ ಸಿಡಿಲು ಬಡಿದಂತಾಯ್ತು. . ಮನುವಿನಿಂದ ದೂರವಾಗಿ ಕೇವಲ ಎಂಟು ತಿಂಗಳಾಗಿರಬಹುದು. ಇದು ಐದನೇ ಸಾರಿ ಹೀಗೆ ಶೈಲಾ ಪ್ರಜ್ನೆ ತಪ್ಪುತ್ತಿರುವುದು. ನಂತರ ಜ್ವರ ಹತ್ತು ದಿನ ಹಾಸ್ಪಿಟಲ್ ವಾಸ
ಒಳಗಡೆ ಶೈಲಾ ಕನವರಿಸುತ್ತಿದ್ದಳು
"ಮನು ನನ್ನ ಕ್ಷಮಿಸಿಬಿಡಿ. ನಾನು ನಿಮಗೆ ಮೋಸ ಮಾಡಿಬಿಟ್ಟೆ. ಅತ್ತೆ ನಂಗೂತ್ತು ನಿಮಗೆ ನನ್ನ ಮೇಲೆ ಕೋಪ ಬಂದಿದೆ ಅಂತ" ಮತ್ತೆ ಮತ್ತೆ ಅದೇ ಮಾತುಗಳನ್ನು ಉಚ್ಚರಿಸುತ್ತಿದ್ದಳು
ವಿಕಾಸ ತಲೆ ಚಿಟ್ಟು ಹಿಡಿದಂತಾಯಿತು
ಅಪ್ಪಯ್ಯನ ಮಾತುಗಳು ಕಿವಿಯಲ್ಲಿ ಪ್ರತಿಧ್ಚನಿಸಿತು
"ವಿಕಾಸ್ ನೀನು ಹೋಗುತ್ತಿರುವುದು ಮಾಯ ಜಿಂಕೆಯ ಹಿಂದೆ . ಹೆಣ್ಣು ಮಾಯೆ ಅದರಲ್ಲೂ ಕಟ್ಟಿಕೊಂಡ ಗಂಡನ್ನ ಬಿಟ್ಟು ನಿನ್ನ ಹಿಂದೆ ಬರುತ್ತೇನೆ ಅಂತಿರೋ ಆ ಹೆಂಗಸಿನ ಮನೋಭಾವ ಸರಿ ಇಲ್ಲ ಮುಂದೆ ತುಂಬಾ ತೊಂದರೆ ಅನುಭವಿಸಬೇಕಾಗುತ್ತೆ ಕಣೊ ಅವಳ ಬಾಳು ಚೆನ್ನಾಗಿರಲ್ಲ ಹಾಗೇನೆ ನಿನ್ನ ಬಾಳೂ ಅಷ್ಟೆ ನರಕ ನರಕ ಆಗುತ್ತೆ .ಅವಳಿಗಿಂತ ನೂರು ಪಟ್ಟು ಚೆನ್ನಾಗಿರೋ ಹುಡುಗೀನ ನಾನು ಹುಡುಕಿ ಮದುವೆ ಮಾಡ್ತೀನೆ ಅವಳನ್ನ ಬಿಟ್ಟು ಬಿಡು " ಅಪ್ಪ ಕೈ ಮುಗಿದ್ದಿದ್ದರು
ಅಮ್ಮ ಮಾತೇ ಆಡಲಿಲ್ಲ.
ಅಡುಗೆ ಮನೆ ಸೇರಿ ಮುಸು ಮುಸು ಅಳುತ್ತಿದ್ದರು
"ಇಲ್ಲ ಅಪ್ಪಯ್ಯಬರೀ ಹಣ , ರೂಪದಿಂದ ಅರಳಿದ ಪ್ರೀತಿ ಅಲ್ಲ. ನಾನು ಯೋಚಿಸಿ ಯೋಚಿಸಿ ತೆಗೆದುಕೊಂಡ ನಿರ್ಧಾರ. ಅದರಿಂದ ಹಿಂದೆ ಬರೋ ಯೋಚನೇನೆ ಇಲ್ಲ. ಸಾರಿ ಅವಳನ್ನ ನಿಮ್ಮ ಸೊಸೆ ಎಂದು ಸ್ವೀಕರಿಸುವುದಾದರೆ ಸ್ವೀಕರಿಸಿ ಇಲ್ಲವಾದರೆ ನಿಮಗೊಬ್ಬ ಮಗನಿದ್ದ ಎಂಬುದನ್ನ ಮರೆತು ಬಿಡಿ"
ಕಡ್ಡಿ ಎರೆಡು ಮಾಡಿದಂತೆ ಉತ್ತರಿಸಿ ತನ್ನ ಸೂಟ್‌ಕೇಸ್ ಹಿಡಿದು ಹೊರಬಂದವ ತಾನು
ಆದರೆ ಅಪ್ಪ ಹೇಳಿದ್ದೇ ನಿಜವೆನಿಸುತ್ತಿದೆ ಅಲ್ಲವಾ? ಶೈಲಾ ತನಗಾಗಿ ಮನುವನ್ನು ಬಿಟ್ಟುಬಂದಳು . ಆದರೆ ನಿಜಕ್ಕೂ ನಮ್ಮಲ್ಲಿ ಯಾರು ಸುಖವಾಗಿದ್ದಾರೆ? ನಾನಾ,ಶೈಲಾನಾ? ಇಲ್ಲಾ ಮನುವಾ? ಯಾರೂ ಇಲ್ಲ ಯಾರಿಗಾಗಿ ಈ ಬಾಳು ಯಾವ ಸಂತೋಷಕ್ಕಾಗಿ? ಮತ್ತೊಬ್ಬರ ಸಂತಸದ ಸಮಾಧಿಯ ಮೇಲೆ ಬಾಳು ಕಟ್ಟಿಕೊಂಡಂತಾಗಿ ಭೂತಕಾಲವೇ ಭೂತದಂತೆ ಕಾಡುತ್ತಿದೆಯಲ್ಲ.

ಹೀಗೇ ಮುಂದುವರೆದರೆ ಬದುಕು ನಿಜಕ್ಕೂ ನರಕವಾಗುತ್ತದೆ.
ಮಾಡುವುದೇನು?

??
ಪ್ರಶ್ನಾರ್ಥಕ ಚಿಹ್ನೆಗಳೇ ಅವನ ತಲೆಯಲ್ಲಿ ತುಂಬಿತು. ತಲೆ ಹಿಡಿದು ನಿಂತ





********************************************************

ವಾರವೆರೆಡು ಕಳೆಯಿತು . ಶೈಲಾ ಗುಣ ಮುಖಳಾದಳು ಆದರೆ ಮಾನಸಿಕವಾಗಿ ಮತ್ತಷ್ಟು ಮುದುಡುತ್ತಿದ್ದಳು . ತಾನು ಅಪರಾಧಿ
ಮನುವಿಗೆ ಮೋಸ ಮಾಡಿದೆ.ಅವನ ಮನಸನ್ನು ನೋಯಿಸಿದೆ ಎಂಬ ಭಾವನೆ ಮೂಡಿದಾಗಲೆಲ್ಲಾ ಅವಳು ಹುಚ್ಚು ಹಿಡಿದಂತಾಡುತ್ತಿದ್ದಳು. ವಿಕಾಸನ ಮೇಲೆ ವಿನಾಕಾರಣ ಕೋಪಿಸಿಕೊಳ್ಳುತ್ತಿದ್ದಳು. ವಿಕಾಸನಂತೂ ಸೋತು ಹೋಗಿದ್ದ. ಇತ್ತ ಕೆಲಸದಲ್ಲಿ ಒತ್ತಡ ಮನೆಯಲ್ಲಿ ಜಗಳ ತಪ್ಪಿದರೆ ಶೈಲಾಳ ಅಳು ಅವಳಿಗೆ ಸಾಂತ್ವಾನ ಹೇಳಿ ಹೇಳಿ ಸುಸ್ತಾಗಿದ್ದ. ಶೈಲಾ ಕೆಲಸವನ್ನು ಬಿಟ್ಟು ಮನೆಯಲ್ಲಿ ಕೂತಿದ್ದಳು. ಈ ಎಂಟು ತಿಂಗಳಲ್ಲಿ ಇದು ಎಂಟನೇ ಕೆಲಸ ಬಿಡುತ್ತಿರುವುದು. ಮಹಾರಾಣಿಯಂತಿದ್ದವಳಿಗೆ ಮತ್ತೊಬ್ಬರ ಆಳಾಗಿ ದುಡಿಯಲು ಕಷ್ಟವಾಗುತಿತ್ತು. ವಿಕಾಸನೇ ಕೆಲ್ಸ ಬಿಡಲು ಹೇಳಿದ್ದ


ಅಂದು ವಿಕಾಸನ ಮೊಬೈಲ್‌ ರಿಂಗಣಿಸಿತು
"ಹಲ್ಲೋ"
"ವಿಕಾಸ್ ಮನ್ವಂತರ್ ಹಿಯರ್. ಗೊತ್ತಾಯ್ತಾ?" ಅತ್ತಲಿಂದ ಮನುವಿನ ದ್ವನಿ ಕೇಳಿಸಿತು
ವಿಕಾಸ್ ಬಾಯಿ ತೆರೆದ ಆದರೆ ಶಬ್ಧ ಹೊರಡಲಿಲ್ಲ. ಗಲಿಬಿಲಿಯಾಗಿತ್ತು. ಏನು ಮಾತಾಡಬೇಕೆಂದು ಹೊಳೆಯಲಿಲ್ಲ. ಸುಮ್ಮನೇ ಇದ್ದ
"ವಿಕಾಸ್ . ನಾನು ನಿಮ್ಮ ಜೊತೆ ಮಾತಾಡಬೇಕು. "
"ಎಲ್ಲಿ ......................ಬರಬೇಕು... ಅಂತ ಹೇಳಿದರೆ ............" ವಿಕಾಸ್ ಒಂದೊಂದೇ ಪದಗಳನ್ನು ಉರುಳಿಸಿದ
ಮನು ಅತ್ತಲಿಂದ ಹೇಳಿದ
ಯಾಕಿರಬಹುದು? ಫೋನಿಟ್ಟ ಮೇಲೆ ತನ್ನಂತಾನೆ ಪ್ರಶ್ನಿಸಿಕೊಂಡ.
ಪ್ರಶ್ನೆಗೆ ನೂರಾರು ಉತ್ತರಗಳು ಧುಮ್ಮಿಕಿದವು
ಊಹೆಗಳ ಸರಮಾಲೆ ಅನಂತ ದೂರದವರೆಗೆ ಎಳೆಯಲಾರಂಭ್ಸಿಸಿತು
ಇನ್ನೂ ಯೋಚಿಸುವುದರಲ್ಲಿ ಅರ್ಥವಿಲ್ಲ ಎಂದನಿಸಿ ಆ ಯೋಚನೆಗಳ ಪರಿಧಿಯಿಂದ ಹೊರಬಂದ . ಹೇಗಿದ್ದರೂ ಇಂದು ಸಂಜೆ ಗೊತ್ತಾಗುತ್ತದೆಯಲ್ಲ ಎಂದು ನಿರಾಳನಾದ

**************************************************
ಮನೆಯಲ್ಲಿ ಕೂತು ನೆಟ್‌ನಲ್ಲಿ ನೋಟ ಹರಿಸುತ್ತಿದ್ದಳು ಶೈಲಾ. ಮನಸೆಲ್ಲಾ ಬರೀ ಯೋಚನೆಗಳೇ
ಅಲ್ಲ ತನ್ನ ಮನದಾಸೆಯನ್ನ ಹೇಳದೆ ಅವನೇ ತಿಳಿದುಕೊಂಡನಲ್ಲ ಮನು. ಅವನು ಅಷ್ಟು ಒಳ್ಳೆಯವನಾಗಿರಬಾರದಿತ್ತು ಅವನ ಒಳ್ಳೇಯತನ ತನ್ನನ್ನು ಬೆಂಕಿಯಂತೆ ಸುಡುತ್ತಿದೆಯಲ್ಲಾ. ಅತ್ತೆಯೂ ಅಷ್ಟೆ ಒಂದೂ ಕೆಟ್ಟ ಮಾತು ಆಡಲಿಲ್ಲ
ಆ ದಿನ ಇನ್ನೂ ನೆನಪಿದೆ.
ಮನು ಅಂದು ಪಕ್ಕದಲ್ಲಿ ಬಂದು ಕೂತು ಕೈ ಹಿಡಿದ
ಹಾವು ಮುಟ್ಟಿದಂತೆ ದೂರ ಸರಿದಳು ಶೈಲಾ. ಏನೋ ಕೆಲಸವಿರುವಂತೆ ರೂಮಿನಿಂದ ಹೊರ ನಡೆಯುತ್ತಿದ್ದವಳನ್ನ ಮನುವಿನ ಮಾತು ತಡೆಯಿತು

"ಶೈಲೂ ನಂಗೆಲ್ಲಾ ಗೊತ್ತಾಯ್ತು"
ಶೈಲಾ ಹೆಜ್ಜೆ ಕದಲಿಸಲಿಲ್ಲ . ಹಿಂದೆ ತಿರುಗಲಿಲ್ಲ . ಮುಂದೇನು ಹೇಳುತ್ತಾನೋ ಎಂಬ ಭಯ ಹುಟ್ಟಲಾರಂಭಿಸಿತು.
" ಶೈಲಾ ನಿಂಗೇನು ಇಷ್ಗ್ಟಾನೋ ಅದನ್ನ್ಲೆಲ್ಲಾ ನಾನು ನಿಂಗೆ ಕೊಟ್ಟಿದ್ದೇನೆ. ನಿನ್ನಾವ ಆಸೇನೂ ಬೇಡ ಅಂತ ಹೇಳಿಲ್ಲ. ಆದರೆ ಈ ಒಂದು ಆಸೆ ಈಡೇರಿಸೋದು ಕಷ್ಟ . ಯಾಕೆಂದರೆ ಇದು ಕೇವಲ ನಿನ್ನೊಬ್ಬಳ ಬಾಳಿನ ಪ್ರಶ್ನೆ ಅಲ್ಲ. ನಮ್ಮೆಲಾರ ಸಂತೋಷಾನೂ ಇದರಲ್ಲಿ ಅಡಗಿದೆ. ವಿಕಾಸ್‌ ನಿನಗೆ ಏಕಿಷ್ಟ ಆದ ಹೇಗೆ ಇಶ್ಟ ಆದ ಅನ್ನೋದನ್ನ ನಾನು ಕೇಳೋದಿಲ್ಲ ನಾನು ಹೇಳಿದ್ದನೆಲ್ಲಾ ನೆನೆಸಿಕೊಂಡು ಒಂದ್ಸಲ ಯೋಚನೆ ಮಾಡು. ಆಮೇಲೂನಿನಗೆ ನೀನು ಮಾಡುತ್ತಿರೋದೇ ಸರಿ ಎಂದನಿಸಿದರೆ ನಿನ್ನಾಸೆ ಪ್ರಕಾರಾನೇ ಮಾಡು"

ಸಿಡಿ ಮಿಡಿಗೊಳ್ಳುವಂತಾಯಿತು. ಮಾತಾಡದೆ ಹೊರಗಡೆ ಬಂದಳು.

ಎಲ್ಲರ ಸಂತೋಷಕ್ಕಾಗಿ ತಾನೇಕೆ ತ್ಯಾಗ ಮಾಡಬೇಕು. ತಾನಿದ್ದರೇ ತಾನೆ ಎಲ್ಲರೂ?
ತನಗೆ ಇಷ್ಟವಿರುವವರನ್ನು ಆರಿಸಿಕೊಳ್ಳುವ ಹಕ್ಕು ತನಗೂ ಇದೆ.
ವಿಕಾಸ್‌ ಜೊತೆ ಬಾಳು ಉಲ್ಲಾಸದಾಯಕವಾಗಿರುತ್ತದೆ
ಹೀಗೆ ಅವಳ ಹೆಜ್ಜೆಯನ್ನು ಸಮರ್ಥಿಸಿಕೊಳ್ಳಲು ಸಾವಿರಾರು ಕಾರಣಗಳು ಅವಳ ಮುಂದೆ ಸುಳಿದವು
ಕೂಡಲೆ ವಿಕಾಸನಿಗೆ ಫೋನ್ ಮಾಡಿದಳು. ಮನುವಿಗೆ ಗೊತ್ತಾಗಿದೆ ಎಂದೂ ಅವನು ಹೇಳಿದ್ದನ್ನೂ ತಿಳಿಸಿದಳು
ಕೂಡಲೆ ಹೊರಟು ಬರುವಂತೆ ಹೇಳಿದ. ಉಟ್ಟಬಟ್ಟೆಯಲ್ಲಿ ಬರುವಂತೆ ಹೇಳಿದ
ಇನ್ನೇನು ಹೊರಡಬೇಕು ಅಷ್ಟ್ರಲ್ಲಿ ಸಿರಿ ಬಂದು ಕೈ ಎಳೆದಳು.
ಅವಳನ್ನು ಕರೆದುಕೊಂಡು ಹೋಗಬೇಕು ಅನ್ನಿಸಿತಾದರೂ ತನ್ನ ಬದುಕೇ ಇನ್ನೂ ಅಸ್ಥಿರವಾಗಿರುವಾಗ ಅವಳೂ ಒಂದು ಪ್ರಶ್ನಾರ್ಥಕ ಚಿನ್ಹೆಯಾಗಬಹುದೆನಿಸಿತು.
ರೂಮಿನಲ್ಲಿ ಸಿರಿಯನ್ನು ಮಲಗಿಸಿ ಕೊಂಚಹೊತ್ತಾದ ಮೇಲೆ ಮಹಡಿಯಿಂದ ಕೆಳಗಿಳಿದು ಬಾಗಿಲ ಬಳಿ ಹೋಗುತ್ತಿದ್ದಂತೆ ಎದುರು ಬಂದ ಮನುವನ್ನು ಕಂಡು ಬೆಚ್ಚಿದಳು. ಮನು ತುಟಿಯಲ್ಲಿ ವಿಷಾದದ ನಗು. ತಪ್ಪಿತಸ್ತಳಂತೆ ನೆಲ ನೋಡುತ್ತಾ ನಿಂತಳು
"ಶೈಲಾ ಕೊನೆಗೂ ನಮ್ಮನ್ನೆಲ್ಲಾ ಬಿಟ್ಟು ಹೋಗಬೇಕೆಂದು ನಿರ್ಧರಿಸಿದೆಯಾ?"
ಶೈಲಾ ಮಾತಾಡಲಿಲ್ಲ. ತಲೆಯನ್ನೂ ಮೇಲೆತ್ತಲಿಲ್ಲ . ಕೊಂಚ ಹೊತ್ತಿನ ನಂತರ ನಿಟ್ಟುಸಿರಿನ ಸದ್ದು ಕೇಳಿತು
"ಸರಿ ಶೈಲಾ ಯು ಮೇ ಗೋ." ತಾನೆ ಮುಂದಾಗಿ ಬಾಗಿಲು ತೆರೆದ
ಶೈಲಾ ಮೊಗದಲ್ಲಿ ಆಶ್ಚರ್ಯ ಗೊಂದಲಗಳು ಒಮ್ಮೆಗೇ ಮೇಳೈಸಿದವು.
ಕಾಲುಗಳು ಮುಂದೆ ಹೊರಡಲು ಮುಷ್ಕರ ಹೂಡಿದವು.
ಭಾರವಾದ ಹೆಜ್ಜೆಗಳನ್ನು ನೆಲದಿಂದ ಬೇರೆ ಮಾಡುತ್ತಿದ್ದಂತೆ ಅವಳ ಮನಸಿನಿಂದ ಮನುವಿನ ಚಿತ್ರ ದೂರವಾಗತೊಡಗಿತು.
ಗೇಟಿನ ಬಳಿಯಲ್ಲೇ ನಿಂತಿದ್ದ ವಿಕಾಸ್ ಮುಂದೆ ಮನು ಹಾಗು ಹಿಂದೆ ಶೈಲಾನ ನೋಡಿ ಅವಕ್ಕಾದ . ಇನ್ನೇನು ಕಾದಿದೆಯೋ ಎಂಬ ಯೋಚನೆಯೊಂದಿಗೆ ಮುಂದಾಗುವುದಕ್ಕೆ ಸಿದ್ದನಾದ.
ಕೊನೆಗೂ ಮನು ಹೊರಗೆ ಬಂದ ಶೈಲಾ ಜೊತೆಗೆ.
ವಿಕಾಸ್‍ನ ಉಸಿರು ನಿಂತೇ ಹೋಯಿತೇನೋ ಎನ್ನುವಷ್ಟು ನಿಧಾನವಾಯ್ತು.ವಿಕಾಸನನ್ನು ನೋಡಿ ಒಮ್ಮೆ ನಕ್ಕ ಮನು. ಆ ನಗುವಿನ ಭಾವವಾವುದೋ ತಿಳಿಯಲಿಲ್ಲ ವಿಕಾಸ್‌ಗೆ. ನಗುವ ಪ್ರಯತ್ನ ಮಾಡಿದ . ಆದರೆ ಮುಖ ನಗಲಾರೆ ಎಂದು ನಕಾರ ಮಾಡಿತು. ಇದೇನು ಈ ಮನುಷ್ಯ . ಹೆಂಡತಿಯನ್ನು ಮತ್ತೊಬ್ಬನಿಗೆ ಒಪ್ಪಿಸುವಾಗಲೂ ನಗುವೇ? ಶೈಲಾಗಾಗಲಿ ವಿಕಾಸನಿಗಾಗಲಿ ಅರ್ಥವೇ ಆಗಲಿಲ್ಲ
ಯಾವ ಮಾತನ್ನೂ ಆಡದೆ ವಿಕಾಸನ ಬಳಿ ಶೈಲಾಳನ್ನು ಬಿಟ್ಟು ಮತ್ತೆ ಗೇಟಿನ ಒಳಗೆ ನಿಂತ
ವಿಕಾಸ್‌ನ ಬೈಕ್ ಏರಿದಳು ಶೈಲಾ
ಬೈಕ್ ಸ್ಟಾರ್ಟ್ ಮಾಡುತ್ತಿದ್ದಂತೆ ಮನು ಕೈ ಬೀಸಿದ ಅವನ ಕಣ್ಣಲ್ಲಿದ್ದ ನೀರು ಬೇಡವೆಂದರು ಹೊರಗೆ ಬರುವುದನ್ನು ಅವನಿಂದ ಬಚ್ಚಿಡಲಾಗಲಿಲ್ಲ.
ಆ ದೃಶ್ಯ ನೂತನ ಜೋಡಿಗಳ ಮನಸಲ್ಲಿ ಅಚ್ಚಳಿಯದೇ ನಿಂತು ಬಿಟ್ಟಿತು.
****
ಮತ್ತದೇ ದೃಶ್ಯ ಮನಸಲ್ಲಿ ಪುನಾರವರ್ತನೆಯಂತಾಗಿ ಶೈಲಾ ಮಂಚಕ್ಕೆ ಒರಗಿದಳು
--------------------------------------------------------------------
ಅಂದು ಸಂಜೆ ಮನುವನ್ನು ಭೇಟಿಯಾಗಿ ಬರುತ್ತಿದ್ದಂತೆ ವಿಕಾಸ್ ಕುದಿಯುತ್ತಿದ್ದ. ಅಬ್ಬಾ ಈ ಮನುಷ್ಯ ಇಂತಹವನೇ? ಅವನ ಮಾತುಗಳು ಮತ್ತೆ ಮತ್ತೆ ಕಿವಿಯನ್ನು ತೂತು ಮಾಡುತ್ತಿತ್ತು
"ವಿಕಾಸ್ ಪರವಾಗಿಲ್ಲ ಹಳಸಲಾದರೂ ಪಕ್ವಾನ್ನದಂತೆ ನೋಡ್ಕೋತಿದ್ದೀಯಂತೆ. ನೋಡ್ಕೋ ನೋಡ್ಕೋ ನೀನುಂಟು ನಿನ್ನ ಹೊಸ ಹೆಂಡತಿ ಅಂದ್ರೆ ನನ್ನ ಹಳೇ ಹೆಂಡತೀ ಉಂಟು . ನಂಗೂ ಅವಳ ಜೊತೆ ಇದ್ದು ಅದೇ ಹಳೇದನ್ನ ತಿಂದೂ ತಿಂದೂ ಬೇಜಾರಾಗಿ ಹೋಗಿತ್ತು. ಅದಕ್ಕೆ ಅವಳು ಹೋಗ್ತೀನಿ ಅಂದ ಕೂಡಲೇ ಅವಳನ್ನ ಓಡಿಸಿ ಬಿಟ್ಟೆ" ಒಳ್ಳೇ ಖಳನಾಯಕನಂತೆ ನಕ್ಕ
ವಿಕಾಸನ ತಲೆ ಗಿರ್ರೆ ಂ ದಿತು
ಇದೇನು ಇಂತಹ ಮಾತು
" ಅಂದಹಾಗೆ ನಾನಿಲ್ಲಿ ನಿನ್ನ ಕರೆದದ್ದು ನಿನ್ನ ಲವರ್‌ಗೆ ಹೇಳಿ ನಂಗೆ ಡೈವೋರ್ಸ್ ಕೊಡೋದಿಕ್ಕೆ ಹೇಳು ಅಂತ ಹೇಳೋಕೆ ನಂದೂ ಉಪ್ಪು ಹುಳಿ ತಿಂದ ದೇಹ ನಾನೂ ಬೇರೆ ಮದುವೆ ಮಾಡ್ಕೋಬೇಕು. ಈಗಾಗಲೆ ಹೆಣ್ಣು ಗೊತ್ತಾಗಿದೆ . ಮದುವೆ ಮಾತ್ರ ಬಾಕಿ. ಆಮೇಲೆ ಆ ಸಿರೀನ ಕರೆದುಕೊಂಡು ಹೋಗೋಕೆ ಹೇಳು. ನಂಗೂ ಒಳ್ಳೆಯವನ ಥರಾ ನಟಿಸಿ ನಟಿಸೀ ಬೇಜಾರಾಗಿ ಹೋಗಿದೆ. " ತನ್ನ ಜೋಕಿಗೆ ತಾನೆ ನಕ್ಕು ಎದ್ದು ತನ್ನ ಕಾರಿನಲ್ಲಿ ಕೂತ ಮನು ವಿಕಾಸನ ಮರು ಮಾತಿಗೆ ಕಾಯಲೂ ಇಲ್ಲ
ವಿಕಾಸನಿಗೆ ದಿಗ್ಬ್ರಮೆಯಾಗಿತ್ತು ಇದನ್ನೆಲಾ ಹೇಳಿದರೆ ನಂಬುತ್ತಾಳೇಯೇ ಶೈಲಾ.
ತಲೆ ಚಿಟ್ಟು ಹಿಡಿದಂತಾಗಿ ಮನೆಗೆ ಬಂದು ಕೂತವನಿಗೆ ಮುಸಿ ಮುಸಿ ಅಳುತ್ತಿದ್ದ ಶೈಲಾ ಕಂಡಳು.
"ಯಾಕೆ ಶೈಲಾ ಏನಾಯ್ತು ? "ಗಾಭರಿಯಾಗಿ ಕೇಳಿದವನಿಗೆ
ತನ್ನ ಮುಂದೆ ಇದ್ದ ಕಂಪ್ಯೂಟರ್ ಪರದೆಯ ಕಡೆಗೆ ಕೈ ತೋರಿದಳು
ಅವಳು ತೋರಿದತ್ತ ನೋಡಿದ
ಅದು ಸಂಗೀತಾ ಮೇಲ್.
"ಶೈಲಾ ಒಮ್ಮೊಮ್ಮೆ ನಮಗೆ ಗೊತ್ತಿಲ್ಲದ ಹಾಗೆ ವಿಧಿ ನಮ್ಮನ್ನ ಸರಿಯಾದ ದಿಕ್ಕಿಗೆ ಕರೆದುಕೊಂಡು ಹೋಗಿರುತ್ತೆ. ನಿನ್ನ ವಿಷಯದಲ್ಲೂ ಹಾಗೇನೆ ಆಗಿದೆ. ಆವತ್ತು ನೀನು ಮನುವನ್ನು ಬಿಟ್ಟು ಬಿಡ್ತೀನಿ ಅಂತಂದಾಗ ನಾನು ಚೆನ್ನಾಗಿ ಬೈದಿದ್ದೆ. ಆದರೆ ನೀನು ಮಾಡಿದ್ದೇ ಸರಿ . ಮನು ನಿಜವಾದ ಬಣ್ಣ ನನಗೆ ನೆನ್ನೆ ಗೊತ್ತಾಯ್ತು . ಮನು ನಿನ್ನ ತಂದೆ ಫ್ಯಾಕ್ಟರಿನ ನಿನ್ನ ಹೆಸರಿಂದ ತನ್ನ ಹೆಸರಿಗೆ ಮಾಡಿಕೊಂಡಿದ್ದಾನಂತೆ. ಅದಕ್ಕಾಗೇ ಅವನಿಗೆ ನಿನ್ನ ಅವಶ್ಯಕತೆ ಇರಲಿಲ್ಲ ಹೇಗೋ ಮಾಡಿ ನಿನ್ನನ್ನ ಸಾಗ ಹಾಕಿದರೆ ಸಾಕು ಅನ್ನೋ ಯೋಚನೆ ಇತ್ತಂತೆ . ಅವನಿಗೆ ಈಗಾಗಲೇ ಶ್ಯಾಮಲಾ ಗ್ರೂಪ್ ಆಫ್ ಕಂಪನಿಯ ಚೇರ್ಮನ್ ಮಗಳು ರಮ್ಯಾ ಜೊತೆ ಮದುವೆ ಗೊತ್ತಾಗಿದೆ. ಇದು ಎಂಟು ತಿಂಗಳ ಹಿಂದಿನ ವಿಷ್ಯ . ನಮ್ಮಫ್ರೆಂಡ್ ಅಣ್ಣ ಲಾಯರ್ ಅವರ ಕಡೆಯಿಂದ ಈ ವಿಷಯ ಗೊತ್ತಾಯ್ತು. ಈಗೇನೋ ನೀನು ಡೈವೋರ್ಸ್ ಕೊಡಬೇಕಂತೆ . ಹಾಗೆ ಸಿರೀನ ಹಾಸ್ಟೆಲ್‌ಗೆ ಸೇರಿಸೋ ಪ್ಲಾನ್ ಇದೆ ಅಂತಾನೂ ಹೇಳ್ತಿದ್ದರು. ರಮ್ಯಾ ಫೋಟೋ ನಾನೂ ನೋಡಿದ್ದೀನಿ ಅವಳು ಸುರ ಸುಂದರಿ ಅವಳ ಬಲೆಗೆ ಮನು ಬಿದ್ದು ಬಿಟ್ಟಿದ್ದಾರೆ . ಸಿರೀನ ನಿನ್ನ ಬಳಿ ಕರೆಸಿಕೋ ಡೈವೋರ್ಸ್ ಕೊಟ್ಟುಬಿಡು ಕೊಚ್ಚೆಯ ಜೊತೆ ಸರಸ ಬೇಡ"
ಶೈಲಾಳ ಕಣ್ಣಿಂದ ನೀರು ಧಾರಾಕಾರವಾಗಿ ಸುರಿಯುತ್ತಿತ್ತು. ವಿಕಾಸ್ ಅವಳನ್ನು ಎದೆಗೊರಗಿಸಿಕೊಂಡ .
" ವಿಕಿ ನಾನಿದನ್ನ ನಂಬಲ್ಲ ಮನು ಅಂತಹವರಲ್ಲ. ಅವರು ಆವತ್ತು ನನ್ನ ಕೈನಿಂದ ಸೈನ್ ಮಾಡಿಸಿಕೊಂಡಿದ್ದೇನೋ ನಿಜ ಆದರೆ ನನ್ನಾಸ್ತಿಗೋಸ್ಕರ ನಂಗೆ ಮೋಸ ಮಾಡೋರಲ್ಲ ಅವರು . ಅಂತೋರಲ್ಲ. " ಬಡಬಡಿಸುತ್ತಿದ್ದಳು
ಸಂಗೀತ ಹೇಳಿದ್ದು ನಿಜ ಎಂದು ಹೇಳುವ ಧೈರ್ಯವಾಗಲಿಲ್ಲ ವಿಕಾಸ್‌ಗೆ .
ಅವಳ ತಲೆ ನೇವರಿಸುತ್ತಲೇ
"ಏನಾದರಾಗಲಿ ಒಂದ್ಸಲ ಸಿರೀನ ನೋಡಿ ಬರೋಣ ಶೈಲಾ?" ನಿಧಾನಕ್ಕೆ ನುಡಿದ
ಬಿಕ್ಕಳಿಸುತ್ತಲೇ ಆಯಿತೆನ್ನುವಂತೆ ತಲೆ ಆಡಿಸಿದಳು
*******************ಮುಂದಿನ ಕಂತಿಗೆ ಮುಕ್ತಾಯ**************************************

Friday, September 11, 2009

ಅನ್ವೇಷಣೆ - ೧

"ಸ್ವಾತಿ ತುಂಬಾ ಮುದ್ದಾಗಿದ್ದೀಯಾ ಅದು ಹೇಗೆ ಇಂತಾ ಅಪ್ಪ ಅಮ್ಮನಿಗೆ ನೀನು ಹುಟ್ಟಿಬಿಟ್ಟೆ ?" ಈ ಪ್ರಶ್ನೆ ತುಂಬಾ ಕಾಮನ್ ಆಗಿದ್ದರಿಂದ ಅದು ಸ್ವಾತಿಗೆ ಹೊಸದೆನಿಸಲಿಲ್ಲ . ಸುಮ್ಮನೆ ನಕ್ಕಳು. ಅವರ ಸ್ಟಾಪ್ ಬಂತು ಇಳಿದು ಹೋದರು. ಯಾರು ಎಂದು ಅವಳಿಗೇನು ಗೊತ್ತು. ಅಪ್ಪನಿಗೆ ತಿಳಿದವರಿರಬೇಕು ಅಥವಾ ಅಮ್ಮನಿಗೂ . ಇದ್ದರೂ ಇರಬಹುದು ಊರಿಗೆ ಗೊತ್ತಿರುವವರು ಅಪ್ಪ ಅಮ್ಮ .ಎಂದುಕೊಂಡು ಸುಮ್ಮನಾದಳು
ಹೌದು ಸ್ವಾತಿಯ ಅಪ್ಪ ಕಪ್ಪು ಬಣ್ಣಕ್ಕೆ ಸಡ್ಡು ಹೊಡೆಯುವ ಬಣ್ಣ . ಅಮಾವಾಸ್ಯೆ ದಿನ ಅಪ್ಪ ಎಲ್ಲಿ ಕತ್ತಲೆಲ್ಲಿ ಎಂದು ಹುಡುಕಬೇಕಾದ ಪರಿಸ್ಥಿತಿ ಉಂಟಾಗುತ್ತದೆ
ಅವಳ ಅಮ್ಮನೇ ವಾಸಿ ಕೊಂಚ ಬೆಳ್ಳಗೆ ಇದ್ದಾರೆ. ಆದರೋ ಮೂಗೋ ಬಿ ಎಮ್ ಟಿ ಸಿ ಬಸ್ ಸೀದಾ ಬಂದು ಅಮ್ಮನ ಮೂಗಿನ ಮೇಲೆ ಹತ್ತಿ ಪಯಣಿಸಿತ್ತೇನೋ ಎಂಬಷ್ಟು ಸಪಾಟವಾಗಿದೆ. ತಕ್ಕಂತೆ ಪುಟ್ಟ ಪುಟ್ಟ ಕಣ್ಣುಗಳು. ನಾನೇ ಮುಂದೆ ಎಂದು ಬಾಗಿರುವ ಹಲ್ಲುಗಳು.
ಸ್ವಾತಿ ಸೌಂದರ್ಯಕ್ಕೆ ಮತ್ತೊಂದು ಪರ್ಯಾಯ ಹೆಸರು. ಹಾಗಾಗೇ ಮನೆಯಲ್ಲಿ ಅವಳನ್ನ ತುಂಬಾ ಮುದ್ದು ಮಾಡ್ತಾ ಇರ್ತಾರೆ . ಒಬ್ಬಳೇ ಮಗಳೆಂದು ಬಲು ಮುದ್ದಾಗಿ ಸಾಕಿದ್ದರು. ಶ್ರೀಮಂತ ಕುಟುಂಬಕ್ಕೆ ಸೇರಿದ ರೆಡ್ಡಿಗಳ ಮಗಳು . ಅಪ್ಪನ ದರ್ಪ ಅಮ್ಮನ ಜಂಭ ಧಾರಾಳವಾಗಿತ್ತು ಜೊತೆಗೆ ತುಂಟತನ ಸಾಕು ಸಾಕೆನ್ನುವಷ್ಟು.ಕಾಲೇಜಿನಲ್ಲಿ ತುಂಟಿ ಎಂಬ ಹೆಸರಿನ ಜೊತೆಯೇ ಜಾಣೆ ಎಂಬ ಬಿರುದು ಇತ್ತು
ಇನ್ನೂ puc ರಿಸಲ್ಟ್ ಬಂದಿರಲಿಲ್ಲ. ಆದರೂ ಸ್ವಾತಿಗೆ ಯಾವ ಆತಂಕವೂ ಇರಲಿಲ್ಲ ಅವಳು ಪರೀಕ್ಶೆಯಲ್ಲಿ ಮೊದಲ ಸ್ಥಾನ ಬಿಟ್ಟು ಕೆಳಗಿಳಿದ್ದಿಲ್ಲ
ಅಥವ ಹಾಗೇನಾದರೂ ಆದರೂ ಅವಳಿಗೇನೂ ನಷ್ಟವಿಲ್ಲ. ಅವಳು ಓದಿ ಸಂಪಾದಿಸಬೇಕಾದ್ದು ಏನು ಇರಲಿಲ್ಲ
ಬಸ್ ಸ್ಟಾಪ್ ಬಂತು.ಬಸ್ ಇಂದ ಇಳಿಯುತ್ತಿದ್ದಂತೆ ಸುತ್ತಾ ಮುತ್ತಾ ಇದ್ದ ಕಣ್ಣುಗಳೆಲ್ಲಾ ಅವಳ ಮೇಲೆ ಹಾದವು . ಅವಳಿಗೂ ಗೊತ್ತು ಎಲ್ಲರೂ ಕಂಡಕ್ಟರ್ ಹಾಗು ಡ್ರೈವರ್ ಸೇರಿದಂತೆ ತನ್ನನ್ನೇ ನೋಡ್ತಾ ಇದ್ದಾರೆ ಅಂತ . ಅದೂ ಒಂಥರಾ ಪುಳಕವೇ ಅವಳಿಗೆ
ಅಮ್ಮ ಎಷ್ಟೋ ಸಲ ಹೇಳಿದ್ದಾರೆ "ಸ್ವಾತಿ ಸ್ಕೂಟಿ ಕಲಿತ್ಕೋ ಸುಮ್ನೆ ಬಸಲ್ಲಿ ಎಲ್ಲಾ ಜನರ ಕಣ್ಣು ಬೀಳುತ್ತೆ. " ಅಂತಾ
ಅಪ್ಪಾ ಅಂತೂ ಒಂದು ಹೆಜ್ಜೆ ಮುಂದೆ "ಸ್ವಾತಿ ನೀನು ಕಾರಲ್ಲೇ ಹೋಗಿ ಬಾ "ಅಂತಾರೆ
ಆದರೂ ಅವಳಿಗೆ ಬಸ್ಸಲ್ಲೇ ಓಡಾಡೋ ಆಸೆ.
ಸುತ್ತಾ ಇರೋ ಜನರನ್ನ ನೋಡೋ ಆಸೆ. ಅವರ ಕಣ್ಣಲ್ಲಿ ಏನಿದೆ ಅಂತ ತಿಳಿಯೋ ಆಸೆ. ಹಿಂದೆ ಬೀಳೋ ಪುಂಡರನ್ನ ಸಾಕು ಎನಿಸುವಷ್ಟು ಗೋಳು ಹಾಕಿಕೊಳ್ಳೋ ಆಸೆ. ಹಾಗೆ ಹಿಂದೆ ಬಿದ್ದ ಹುಡುಗರು ಅಪ್ಪನ ಕೋಪಕ್ಕೆ ಸಿಕ್ಕಿ ಕೈ ಕಾಲು ಮುರಿಸಿಕೊಂಡು ಇವಳನ್ನು ನೋಡಿದರೆ ಸಾಕು ದೂರದಿಂದಲೇ ಕೈ ಮುಗಿದು ಓಡಿ ಹೋಗುವುದನ್ನು ನೋಡಿ ನಗುವ ಆಸೆ
ಬಸ್ ಸ್ಟಾಪ್ ಪೂರ್ತಿ ಜನಗಳು ಇನ್ನೇನು ಯಾವ ಬಸ್ಸೂ ಬರೋದಿಲ್ವೇನೋ ಅನ್ನೊ ಹಾಗೆ ಜನ ಕುರಿ ಮಂದೆ ಥರಾ ನುಗ್ತಾ ಇದ್ದಾರೆ. ಆ ಬಸ್ ಡ್ರೈವರ್ರೋ ಇಡಿ ಜನರನ್ನೇ ತಾನೆ ಹೊತ್ತುಕೊಂಡು ಹೋಗ್ತೀನೇನೋ ಅನ್ನೋಹಾಗೆ ಬೈತಾ ಇದ್ದಾನೆ.
ಎಷ್ಟೆ ಮುಂದುವರೆದ್ರೂ ಈ ಕಂಡಕ್ಟರ್ಸ್‌ಗೆ ಮತ್ತೆ ಡ್ರೈವರ್ಸ್‌ಗೆ ಸಾಫ್ಟ್ ಸ್ಕಿಲ್ಸ್ ಹೇಳಿಕೊಡದಿದ್ದರೆ ಬಿ ಎಮ್ ಟಿಸಿ ಬಸ್ಸಾ ಅನ್ನೋ ರಾಗ ತಪ್ಪಲ್ಲ.
ನಗುತ್ತಾ ಮನೆಯತ್ತ ನಡೆದಳು
ಭವ್ಯ ಬಂಗಲೆ ಅದು .
"ಸ್ವಾತಿ ಇಲ್ಲಿ ಬಾ " ಅಪ್ಪ್ಪ ಸ್ವಿಮ್ಮಿಂಗ್ ಪೂಲ್ ಬಳಿಯಲ್ಲೇ ಕೂತಿದ್ದರು . ಹೋಗಿ ಕೂತಳು . ಇಲ್ಲಿ ಕೂತು ಮಾಡುವುದೇನು ? ಮಾತಾಡೋಕೆ ಯಾಕೋ ಮನಸ್ಸೇ ಬರ್ತಾ ಇಲ್ಲ. ಅತ್ತಿತ್ತ ನೋಡತೊಡಗಿದಳು. ಅಪ್ಪ ಅವಳನ್ನ ಕರೆದದ್ದನ್ನೇ ಮರೆತವರಂತೆ ಕಿವಿಗೆ ಮೊಬೈಲ್ ಅಂಟಿಸಿಕೊಂಡಿದ್ದರು. ಜೋರು ದ್ವನಿಯಲ್ಲಿ ಮಾತು ನಡೆಯುತ್ತಿತ್ತು
"ಲೋ ಲೋಫರ್ ಏನೋ ಮಾಡ್ತಾ ಇದ್ಯಾ ಮೊದಲು ಅವನ್ ಮನೆ ಹೊಡುಕೋ . ಎಲ್ಲಿ ಸತ್ ಬಿದ್ದಿದಾನೆ . ಹಂಗೆ ಅವನ್ ಮನೇಲಿ ಯಾರ್ಯಾರಿದ್ದಾರೆ ಅಂತ ಡೀಟೇಲ್ಸ್ ತಗೋ. ಕಕ್ಕ್ಸಿಬಿಡ್ತೀನಿ. ಈ ಕ್ರಿಷ್ಣಾರೆಡ್ಡಿ ಅಂದ್ರೆ ಉಚ್ಚೊಯ್ಕೋಬೇಕು ಹಂಗ್ ಮಾಡ್ತೀನಿ"
ಇದು ಸಾಮಾನ್ಯ ಮಾತುಕತೆ
ಸ್ವಾತಿಯ ಅಪ್ಪ ಫೈನಾಂಶಿಯರ್. ಜೊತೆಗೆ ಪೇಪರ್ ಏಜೆಂಟ್, ಕೇಬಲ್ ಲಾಬಿ. ರಿಯಲ್ ಎಸ್ಟೇಟ್ ಏಜೆಂಟ್. ರಿಂಗ್ ರಸ್ತೆಯಲ್ಲಿರೋ ಚೌಲ್ಟ್ರಿಯಲ್ಲಿ ನಾಲ್ಕು ಇವರದೇ. ಇವರಿರೋ ಊರಲ್ಲಿ ಅರ್ಧ ಭಾಗ ಇವರದ್ದೇ , ಆಸಾಮಿ ಕೈಗೆ ಕಾಲಿಗೆ ಕುತ್ತಿಗೆಗೆ ಅಂತ ಸುಮಾರು ಎರೆಡು ಕೇಜಿ ಚಿನ್ನ ಹಾಕಿಕೊಳ್ಳುತ್ತಿದ್ದ.
ಅವರ ಮಾತು ನಿಲ್ಲುವುದೇ ಕಾಯುತ್ತಿದ್ದಳು
"ಏನಪ್ಪ ?"
"ಸ್ವಾತಿ ಯಾವಾಗ ರಿಸಲ್ಟ್?" ಮತ್ತದೇ ಪ್ರಶ್ನೆ ಇದೇ ಪ್ರಶ್ನೆ ಪರೀಕ್ಷೆ ಆದಾಗಿನಿಂದ ಕೇಳಿ ಕೇಳಿ ಸ್ವಾತಿಗೂ ಬೇಸರವಾಗಿತ್ತು
"ಒಂದು ಸಾವಿರ ಸಲ ಕೇಳ್ತಾ ಇದ್ದೀಯಾಪ್ಪ ಬೇರೆ ಏನಾದರೂ ಕೇಳಪ್ಪ" ಬೇಸರ ಮಾಡಿಕೊಂಡೇ ಉತ್ತರಿಸಿದಳು
"ಸಾರಿ ಸ್ವಾತಿ ಮುಂದಿನ ತಿಂಗಳಲ್ವೇ. ಸರಿಯಾಗಿ ಇಪ್ಪತ್ತು ದಿನಗಳಾದ ಮೇಲಲ್ಲವೇ?"

"ಹೂ ಹೌದು . ಏನ್ಮಾಡಬೇಕಂತ ಇದ್ದೀಯಾ" ಪೇಪರ್ ಓದ್ತಾನೇ ಕೇಳಿದರು . ಅವರಿಗೆ ಮಗಳನ್ನು ಓದಿಸಿ ಡಾಕ್ಟರ್ ಮಾಡಬೇಕಂತಿತ್ತು. ಆದರೆ ಅವಳೋ ಆರ್ಟ್ಸ್ ಬ್ರಾಂಚ್ ತೆಗೆದುಕೊಂಡಿದ್ದಳು.
ಸ್ವಾತಿ ಏನು ಹೇಳಿಯಾಳು. ಅತ್ತಿತ್ತ ನೋಡಿ

"ಒಳಗೆ ಹೋಗಿ ಕಾಫಿ ಕುಡೀಬೇಕಂತ ಅನ್ಕೊಂಡಿದ್ದೇನೆ " ಹೇಳಿ ಒಳಗೋಡಿದಳು ನಗು ತಡೆಯಲಾಗಲಿಲ್ಲ. ಗೊತ್ತು ಅಪ್ಪ ಬೆಪ್ಪಾಗಿರ್ತಾರೆ ಅಂತ. ಆದರೂ ಹಾಗೆಯೇ ಅವಳು

ರೂಮೊಳೊಗೆ ಹೋದ ತಕ್ಷಣ ಅಮ್ಮ " ಎಲ್ಲಾದರೂ ಹೊರಗಡೆ ಹೋಗಿ ಬಂದ ಮೇಲೆ ಕಾಲು ತೊಳ್ಕೋ ಅಂದ್ರೂ ಕೇಳಲ್ಲ ಯಾವ್ಯಾವ ಜನರು ಏನೇನು ಮಾಡ್ರಿರ್ತಾರೋ ." ಗೊಣಗುತ್ತಿದ್ದರು

ಅಮ್ಮನಿಗೆ ಒಂಥರಾ ಜನ ನಮಗೆ ಮಾಟ ಮಂತ್ರ ಮಾಡಿಸಿರ್ತಾರೆ ಅಂತ ಭಯಾನೋ ಗೊತ್ತಿಲ್ಲ. ಅಪ್ಪನಿಗೆ ಎಲ್ಲಿ ಯಾರ್ ಯಾವತ್ತು ಮಚ್ಚು ಲಾಂಗ್ ಹಿಡ್ಕೊಂಡು ಬರ್ತಾರೋ ಅಂತ ಭಯ. ಇಲ್ಲದೇ ಏನು ಅಂಥಾ ಪಾಪಗಳನ್ನು ಮಾಡಿರೋರು ಅವರು ನಗು ಬರುತ್ತಿತ್ತು
ರೂಮಿನ ಕಿಟಕಿ ಇಂದ ಅಪ್ಪಾ ಫೋನಲ್ಲಿ ಮಾತಾಡ್ತ್ತಿದ್ದುದು ಕೇಳಿಸ್ತಿತ್ತು

"ಏಯ್ ಆ ** ಮಗನಿಗೆ ಏನ್ ರೋಗಾಂತೆ ಇವತ್ತು ಸಂಜೆ ಒಳಗೆ ಅಸಲು ಬಡ್ದಿ ಸಮೇತ ದುಡ್ಡುಕೊಡ್ಲಿಲ್ಲಾಂದ್ರೆ ಅವನ ಹೆಂಡ್ತೀನ ಬಾಂಬೆಗೆ ಮಾರ್ಬಿಡ್ತೀನಂತ ಹೇಳು . ಏನ್ಕಂದ್ಕೊಂಡಿದಾನೆ ************" ಅಪ್ಪನ ಬಾಯಿಂದ ಕೆಟ್ಟ ಮಾತುಗಳೇ . ಕೇಳೋಕಾಗಲ್ಲಾ ಒಂದೆರೆಡು ಸಲಾ ಅಪ್ಪನ್ನ ಬೈದಿದ್ದಳು

ಅದಕ್ಕೆ ಅವರು

"ನೋಡು ಸ್ವಾತಿ ಹಿಂಗೆಲ್ಲಾ ಬೈದೆ ಹೋದ್ರೆ ನನ್ನ ದುಡ್ಡು ವಾಪಾಸ್ ಬರೋಲ್ಲಾ. ಹೀಗೆಲ್ಲಾ ಇಲ್ದೆ ಹೋದ್ರೆ ನಮ್ಮ ಹಣಾ ಸ್ಮಶಾನಕ್ಕೋದ ಹೆಣ ಅಂತನ್ಕೊಂಡು ಸುಮ್ನಾಗಬೇಕಷ್ಟೆ"

"ಸ್ವಾತಿ ಬೋಂಡ ತಿಂತೀಯಂತೆ ಬಾರೆ" ಅಮ್ಮಾ ಒಳಗಿಂದ ಕೂಗಿದರು

ಮುಖ ತೊಳೆದುಕೊಂಡು ಅಡಿಗೆ ಮನೆಗೆ ಹೋದಳು. ಬೋಂಡಾ ಸಿದ್ದವಾಗಿತ್ತು. ಮೆಲ್ಲತೊಡಗಿದಳು



"ಸ್ವಾತಿ ಮುಂದಿನ ತಿಂಗಳಿಗೆ ನಿಂಗೆ ಹದಿನೆಂಟು ತುಂಬುತ್ತೆ" ಅಮ್ಮಾ ಬೋಂಡಾ ಕರಿಯುತ್ತಾ ಹೇಳಿದರು

"ಮುಂದಿನವರ್ಷ ಅದೇ ತಿಂಗಳಿಗೆ ಹತ್ತೊಂಬತ್ತೂ ತುಂಬುತ್ತೆ . ಮತ್ತೆ ಅದರ ಮುಂದಿನ ವರ್ಷ್ಗ ಇಪ್ಪತ್ತೂ ತುಂಬುತ್ತೆ." ಮಾತು ಮುಂದುವರಿಸಿದಳು ಕೀಟಲೆಯಿಂದ

"ಲೇ ತರ್ಲೇ ನಾನ್ ಹೇಳ್ತಾ ಇರೋದು ಕೇಳಿಸಿಕೋ. ಶೀಲತ್ತೆ ಫೋನ್ ಮಾಡಿದ್ರು ಯಾವಾಗ ನಮ್ಹುಡುಗೀನ ಮನೆಗೆ ಕಳ್ಸ್ತೀರಾ ಅಂತಾ ."
"ಕಳಿಸಿಬಿಡು ಯಾಕೆ ಅವರ ಹುಡುಗೀನ ಇಟ್ಕೊಂಡಿದೀಯಾ" ಗೊತ್ತು ಅವಳೇನು ಹೇಳ್ತಾ ಇದಾಳಂತ ಆದರೂ ಬಾಯೊಳಗಿದ್ದ ಬೋಂಡಾ ಜೊತೆಗೆ ಮಾತಾಡಿದಳು

"ಸ್ವಾತಿ ತುಂಬಾ ತರಲೆ ಆಗ್ತಾ ಇದೀಯಾ. ಮದುವೆ ಯಾವಾಗ ಇಟ್ಕೊಳೋಣ ಅಂತಾ ಕೇಳ್ತಾ ಇದ್ದಾರೆ"
"ಅಯ್ಯೋ ಶೀಲತ್ತೆಗೆ ಮತ್ತೆ ಮದುವೇನಾ ಮತ್ತೆ ಶ್ರೀದ್ಜರ ಮಾವನ ಗತಿ" ಸ್ವಾತಿ ಉದ್ಗರಿಸಿದಳು
"ಸ್ವಾತಿ ನಿನ್ನನ್ನ ಏನ್ಮಾಡ್ತೀನಿ ಅಂತ ನೋಡು"

ಅಮ್ಮ ಅಟ್ಟಿಸಿಕೊಂಡು ಬಂದರು
ಅಮ್ಮನ ಮಾತು ಮುಂದುವರೆಯಲು ಬಿಡುವುದಿಲ್ಲ ಅವಳು
ಇನ್ನೇನು ಕೊಂಚ ದಿನಗಳಲ್ಲೇ ಮದುವೆ ಅಂತ ಅವಳಿಗೂ ಗೊತ್ತು. ಶಿವು ಅವಳಿಗೂ ಇಷ್ಟಾನೆ
ಆದರೆ ಇಷ್ಟು ಬೇಗ ಮದುವೆ ಆಗೋಕೆ ಅವಳಿಗೂ ಇಷ್ಟ ಇಲ್ಲ



ಆದರೆ ರೆಡ್ದಿ ಹೆಣ್ಣು ಮಕ್ಕಳಿಗೆ ಹದಿನೆಂಟು ಹತ್ತೊಂಬತ್ತು ತುಂಬ್ತಾ ಇದ್ದ ಹಾಗೆ ಮದುವೆ ಮಾಡಿಬಿಡುವ ಕಾರ್ಯಗಳೇ ಜಾಸ್ತಿ


ಜೊತೆಗೆ ಅವರ ಬಿಸಿನೆಸ್ ಸಹಾ ಒಂದು ಥರಾ ಅಪಾಯಕಾರಿಯಾದ್ದರಿಂದ ವಯಸಿಗೆ ಬಂದ ಮಗಳು ಸೆರಗಲಿಟ್ಟ ಕೆಂಡ ಎಂಬ ಆತಂಕ.


ಸ್ವಾತಿ ಮುದ್ದು ಮುದ್ದು ಹುಡುಗಿ ಶಿವು ಸಹಾ ಸಾಫ್ಟವೇರ್ ಇಂಜಿನಿಯರ್. ಒಳ್ಳೆ ಕಂಪೆನಿಯಲ್ಲಿ ಕೆಲ್ಸಕ್ಕೆ ಇದ್ದ. ಇವಳನ್ನು ಕಂಡರೆ ಪ್ರಾಣ ಇವಳಿಗೂ ಅಷ್ಟೇ. ಮೊದಲಿಂದಲೂ ಅವನೇ ತನ್ನ ಜೋಡಿ ಎಂಬ ಅಭಿಮಾನ.
ಸ್ವಾತಿ ಕಾಲಲ್ಲಿ ಅದೃಷ್ಟವನ್ನೇ ಹೊತ್ತು ತಂದವಳು ಅವಳು ಹುಟ್ಟಿದ ಮೇಲೆಯೇ ಅವಳ ಅಪ್ಪನ ಹೊಲ ಗದ್ದೆಗಳು ಬಂಗಾರಕ್ಕಿಂತಲೂ ಹೆಚ್ಚು ಬೆಲೆಬಾಳ ತೊಡಗಿ ಹಣದ ಹೊಳೆಯನ್ನೇ ಹರಿಸಿದವು. ಹಾಗಾಗಿ ಸ್ವಾತಿ ಅವರ ಪಾಲಿಗೆ ಕೇವಲ ಮಗಳಾಗಿರಲಿಲ್ಲ ಅದೃಷ್ಟ ದೇವತೆ ಆಗಿದ್ದಳು.
ಕಂಪ್ಯೂಟರ್ ಆನ್ ಮಾಡಿ ಶಿವು ಜೊತೆ ಚಾಟ್ ಮಾಡುತ್ತಿದ್ದ ಸ್ವಾತಿ ಅವನ ಸಾಲುಗಳನ್ನು ನೋಡಿ ಕೆಂಪುಕೆಂಪಾಗಿ ನಾಚುತ್ತಿದ್ದಳು.
ಹಾಗೆ ಕಿಟಕಿಯಿಂದ ನೋಡಿದವಳಿಗೆ ಶಾಕ್
ಪೋಲಿಸ್ ಕಾನ್‌ಸ್ಟೇಬಲ್ ಜೊತೆ ಅಪ್ಪ ಹೋಗುತ್ತಿದ್ದಾರೆ
ಎಲ್ಲಿ ಏನಾಯ್ತೋ ಎಂಭ ಭಯದಿಂದ ಹೊರಗೆ ಓಡಿದಳು
ಅಪ್ಪ ಮಾತ್ರ ನಗುತ್ತಾ ಹೊರಟಿದ್ದರು ಜೊತೆಗೆ ಅಮ್ಮನೂ ಹೊರಟಿದ್ದಳು
"ಅಪ್ಪಾ ? ?"ಕೂಗಿದಳು. ಕೂಗಿನಲ್ಲಿ ಪ್ರಶ್ನೆ ಇತ್ತು

"ಏನಿಲ್ಲಾ ಸ್ವಾತಿ ಸ್ಟೇಷನ್‌ನಲ್ಲಿ ಅದ್ಯಾರೋ ನಿಮ್ಮ ತಾಯಿಯ ಹೆಸರು ಹೇಳಿದಾಳಂತೆ ಅದ್ಯಾರು ಅಂತ ನೋಡಿಕೊಂಡು ಬರೋಣ ಅಂತ"

"ಅಪ್ಪಾ ನಾನೂ ಬರ್ತೀನಿ ಪ್ಲೀಸ್"

"ಸರಿ ಬರಲಿ ಬಿಡಿಸಾರ್ ಫ್ಯಾಮಿಲಿ ಟ್ರಿಪ್ ಆದಂಗೆ ಆಗುತ್ತೆ" ಪೇದೆ ಕಿಸಿದ
"ಹೌದೌದು ನಿಮ್ಮ ಸ್ಟೇಷನ್ ದೊಡ್ಡ ತಾಜ್ ಮಹಲ್ ನಡ್ಯೋ ಮುಂದೆ ನೋಡ್ಕೊಂಡು"ಸ್ವಾತಿಯ ಅಪ್ಪ ಗದರಿದರು
ಅವರ ದರ್ಪವೇ ಅಂತಹದ್ದು.

ಎಲ್ಲರೂ ಕಾರನ್ನೇರಿದರು


ಕಾರ್ ಪೋಲಿಸ್ ಸ್ಟೇಷನ್‌ನ ಮುಂದೆ ನಿಂತಿತು

ಹೊರಗಡೆಯೇ ನಿಂತಿದ್ದ ಎಸ್ ಐ ಸ್ವಾಗತಿಸಿದ
"ಬನ್ನಿ ಸಾರ್ . ಅದು ಈ ಹೆಂಗಸು ನಮಗೆ ಲೇಡಿ ಕರ್ಜನ್ ಹಾಸ್ಪಿಟಲ್ ಬಳಿ ಸಿಕ್ಕಳು. ಮಕ್ಕಳ ಕಳ್ಳಿ ಇವಳು"


ಸ್ವಾತಿಯ ಅಪ್ಪ


"ನಮ್ಮ ಮನೇಲಿ ಯಾವ ಮಕ್ಕಳೂ ಕಳೆದು ಹೋಗಿಲ್ಲ . ನಮ್ಮನ್ಯಾಕೆ ಕರೆಸಿದ್ರಿ?" ಅವರ ಧ್ವನಿಯಲ್ಲಿ ಬೇಸರ ಇತ್ತು


"ಸಾರಿ ಸಾರ್ ನೀವೊಂದು ಸಲ ಆಕೆ ಹತ್ರ ಮಾತಾಡಿ ನಾನ್ಯಾಕೆ ಕರೆಸಿದೆ ಅಂತ ಗೊತ್ತಾಗುತ್ತೆ . ನಿಮ್ಮ ಮಗಳು ಇಲ್ಲೆ ಇರಲಿ"


ಎಸ್ ಐ ಹೇಳಿದ


ಸ್ವಾತಿ ಕೆರಳಿದಳು


"ನಾನ್ಯಾಕೆ ಇಲ್ಲೆ ಇರಬೇಕು ನಾನೂ ಆ ಹೆಂಗಸನ್ನ ನೋಡಬೇಕು ನಾನ ನೂವ್ ಚೆಪ್ ನಾನಾ"ಒಮ್ಮೊಮೆ ತೆಲಗು ಬೇಡವೆಂದರೂ ನಾಲಿಗೆಗೂ ಬಂದುಬಿಡುತ್ತಿತ್ತು


"ಬರಲಿ ಬಿಡ್ರಿ. ಅವಳೇನು ಬೇರೆಯವಳಾ?" ಸ್ವಾತಿಯ ಅಪ್ಪ


"ಸಾರ್ ಆದರೆ ಇದು....." ಎಸ್ ಐ ತಡವರಿಸಿದ


"ನೀನು ಬಾ ಸ್ವಾತಿ " ಅವನ ಮಾತನ್ನು ಗಮನಿಸದೆ ಅಪ್ಪ ಮುಂದುವರೆದರು ಸ್ವಾತಿ ಅವರನ್ನು ಹಿಂಬಾಲಿಸಿದಳು


ಶೆಲ್‌ನ ಒಳಗೆ ಆ ಹೆಣ್ಣು ಕೊತಿದ್ದಳು. ತಲೆ ತಗ್ಗಿಸಿದ್ದರಿಂದ ಮುಖ ಕಾಣಿಸಲಿಲ್ಲ. ಅವಳ ಕೈ ಮೇಲೆ ಬಾಸುಂಡಿಗಳು ಪೋಲಿಸರ ಆತಿಥ್ಯ ತಿಂದುದಕ್ಕೆ ಸಾಕ್ಷಿಯಾಗಿತ್ತು.


"ಏಯ್ ನೋಡು . ನೀನು ಹೇಳಿದ ಹಂಗೆ ಪಾರ್ವತಮ್ಮ ಬಂದಿದಾರೆ . ಬೊಗಳು. " ಪಕ್ಕದಲ್ಲೆ ನಿಂತಿದ್ದ ಲೇಡಿ ಕಾನ್‌ಸ್ಟೇಬಲ್ ಗದರಿದಳು.

ಆಕೆ ತಲೆ ಎತ್ತಿದಳು

ಪಾರ್ವತಮ್ಮ ಅಂದರೆ ಸ್ವಾತಿಯ ಅಮ್ಮನಿಗೆ ಅವಳ ಗುರುತು ಹತ್ತಲಿಲ್ಲ. ತುಂಬಾ ವಯಸಾಗಿತ್ತು. ಆ ಹೆಂಗಸಿಗೆ. ಕಣ್ಣುಗಳ ಸುತ್ತಾ ಕಪ್ಪು ವರ್ತುಲಗಳು.

"ಯಾರು? ನಾನು ನಿಂಗೆ ಗೊತ್ತಿದ್ದೀನಾ?" ಪಾರ್ವತಮ್ಮನ ದ್ವನಿಯಲ್ಲಿ ಅವರಿಗೆ ಗೊತ್ತಿಲ್ಲದ ಹಾಗೆ ನಡುಕ ಉಂಟಾಗಿತ್ತು
ಆಕೆ ಎದ್ದು ನಿಂತಳು
" ನಾನ್ಯಾರು ಅಂತ ನಿಮಗೆ ನೆನಪಿರಬಹುದು. ನಾನು ನಿಮ್ಮ ಹೆರಿಗೆ ಮಾಡಿದವಳು" ಆಕೆ ಒಂದೊಂದಾಗಿ ಪದಗಳನ್ನು ಕಷ್ಟ ಪಟ್ಟು ಉರುಳಿಸಿದಳು.
ಪಾರ್ವತಮ್ಮನಿಗೆ ಮಿಂಚು ಬಂದಂತಾಯ್ತು

ಆಗ ಹದಿನೆಂಟು ವರ್ಶ್ಹಗಳ ಮುಂಚೆ ಆಗಿನ್ನೂ ಅವರಿದ್ದ ಊರು ಕಾಡಿನಂತಿತ್ತು. ಸಿರಿವಂತಿಕೆಯೂ ಇರಲಿಲ್ಲ
ತಾಯಿ ತಂದೆ ಇಬ್ಬರನ್ನೂ ಕಳೆದುಕೊಂಡಿದ್ದ ಪಾರ್ವತಿಗೆ ಗಂಡನ ಅಮ್ಮ ಅಂದರೆ ಅವಳ ಅಜ್ಜಿ ಮಾತ್ರ ಇದ್ದರು. ಅವರಿಗೂ ವಯಸಾಗಿತ್ತು. ಆಗ ಪಾರ್ವತಿಯ ಗಂಡ ಕ್ರಿಷ್ಣಾರೆಡ್ಡಿ ಮಹಾ ಕುಡುಕ. ಒಮ್ಮೆ ಹೊರಗೆ ಹೋದರೆ ಮತ್ತೆ ಬರುವುದು ಎಂದೋ. ಅಂತಾಹ ಒಂದು ದಿನದಲ್ಲೇ ತುಂಬು ಗರ್ಭಿಣಿಯಾಗಿದ್ದ ಪಾರ್ವತಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಅಲ್ಲಿಂದ ಸಿಟಿಗೆ ಬರಬೇಕಾಗಿತ್ತು. ಹೇಗೋ ಪಕ್ಕದ ಮನೆಯಲ್ಲಿದ್ದ ಆಟೋಗೆ ಹೇಳಿ ಅದರಲ್ಲಿ ಬರುತ್ತಿದ್ದಂತೆ ನೋವು ಹೆಚ್ಚಾಗತೊಡಗಿತು. ಅವಳ ಹೆರಿಗೆ ಈಗಲೆ ಆಗಬಹುದೆಂದು ಅನಿಸಿ ದಾರಿಯಲ್ಲಿ ಗೊತ್ತಿದ್ದ ಮನೆಯೊಂದರ ಬಾಗಿಲು ಬಡಿದರು.
ಆ ಮನೆಯ ಹೆಂಗಸು ಮರಿಯಮ್ಮ ಒಬ್ಬ ಸೂಲಗಿತ್ತಿಯಾದ ಕಾರಣ ಒಂದು ಘಂಟೆಯಲ್ಲಿ ಸುಸ್ಸೂತ್ರವಾಗಿ ಹೆರಿಗೆ ಮುಗಿಸಿದ್ದಳು. ಆದರೆ ಪಾರ್ವತಿಗೆ ಎಚ್ಚರವಾಗುವ ವೇಳೆಗೆ ಆ ಹೆಂಗಸು ಇರಲಿಲ್ಲ.ದೇವರೆ ಅವಳ ರೂಪದಲ್ಲಿ ಬಂದು ತನ್ನ ಹೆರಿಗೆ ಮಾಡಿಸಿದ್ದಾರೆಂದು ಧನ್ಯಳಾಗಿದ್ದಳು ಪಾರ್ವತಿ. ಆಗ ಹುಟ್ಟಿದವಳೇ ಸ್ವಾತಿ.

ಆ ಹೆಂಗಸು ಇವಳೇ ಇರಬಹುದೆ ಎಂದನಿಸಿತು ಪಾರ್ವತಮ್ಮನಿಗೆ
ನೆನಪು ಮಾಡಿಕೊಂಡು ಕೇಳಿದರು
"ನೀನು ಮರಿಯಮ್ಮ ಅಲ್ವಾ?"
"ಹೌದು ಅದು ನಾನೆ. ನಾನೆ ಅವಳು. "
"ಅಯ್ಯೋ ದೇವರಂಗ್ ಬಂದು ನನ್ನ ಪ್ರಾಣ ಉಳಿಸಿದೆ ತಾಯಿ ನೀನು . ಎಲ್ಲ್ ಹೊರಟೋದೆ ನೀನು ಆಮೇಲೆ?" ಪಾರ್ವತಮ್ಮ ನುಡಿಯುತ್ತಿದ್ದಂತೆ ಆ ಹೆಣ್ಣಿನ ಮುಖದಲ್ಲಿ ಒಂದು ನಗೆ ಹಾದು ಹೋಯ್ತು.
"ಮೇಡಮ್ ಇವಳು ಎಂಥಾ ಕೆಲ್ಸ ಮಾಡಿದಾಳೆ ಅಂತಾ ಗೊತ್ತಿಲ್ಲಾ ನಿಮಗೆ " ಎಸ್ ಐ ಹೇಳುತ್ತಿದ್ದಂತೆ
"ಶ್" ಎಂದು ತಡೆದರು ಕ್ರಿಷ್ನಾರೆಡ್ಡಿ
"ಅವಳು ಹೇಳಲಿ ಬಿಡಿ"
ಸ್ವಾತಿಯ ಹೃದಯ ಹೊಡೆದುಕೊಳ್ಳಲಾರಂಭಿಸಿತು. ಆಕೆ ಯಾವುದೋ ಭೂಕಂಪವನ್ನು ಸೃಷ್ಟಿಸಬಹುದು ಎಂದೇ ಅನಿಸತೊಡಗಿತು.
ನಿಟ್ಟ ನೋಟದಿಂದ ಮರಿಯಮ್ಮನನ್ನೆ ನೋಡಲಾರಂಭಿಸಿದರು ಎಲ್ಲರೂ
"ಆವತ್ತು ನಿಮಗೆ ಹುಟ್ಟಿದ್ದು ಗಂಡುಮಗು" ಆಕೆ ಬಾಯಿ ಬಿಟ್ಟಳು ನೋಟ ಮತ್ತೆಲ್ಲೋ ಇತ್ತು
ದೊಡ್ಡದೊಂದು ಬಾಂಬ್ ಹಾಕಿದಂತೆ ಎಲ್ಲರೂ ಸ್ತಬ್ದರಾದರು. ಕ್ಷಣಕಾಲ ಮೌನವಾವರಿಸಿತು. ಮರಿಯಮ್ಮ ಆಗಬಹುದಾದ ಪರಿಣಾಮಗಳನ್ನು ಊಹಿಸುತ್ತಾ ಹಿಂದೆ ಸರಿಯುತ್ತಿದ್ದಂತೆ

ಕೂಡಲೇ ಚೇತರಿಸಿಕೊಂಡ ಕ್ರಿಷ್ಣಾರೆಡ್ಡಿ

"ಏಯ್ ಏನೆ ಬೊಗಳ್ತಿದ್ದೀಯಾ . ಇವತ್ತು ನಿನ್ನ ಗತಿ ನೆಟ್ಟಗಿಲ್ಲ ಅನ್ಸುತ್ತೆ ಅದಕ್ಕೆ ನನ್ನಕೈನಲ್ಲಿ ಸಿಕ್ಕಿಹಾಕೊಂಡಿದ್ದೀಯಾ ಸುಳ್ಳು, ಸುಳ್ಳ್ಯ್ ಹೇಳ್ತೀಯಾ ಸೀರೆ ಬಿಚ್ಚಿ ಹೊಡೀತೀನಿ ನಿಂಗೆ ನೋಡು ನಾನು .ರಂಡೆ "
ಮರಿಯಮ್ಮನ ಕೂದಲನ್ನು ಹಿಡಿದು ಜಗ್ಗಿದರು.
ಆಕೆ ನೋವಿನಿಂದ ಚೀರಿದಳು
"ಸಾರ್ ಪ್ಲೀಸ್ ಸಾರ್ ಬಿಟ್ಟು ಬಿಡಿ ಇದು ಸ್ಟೇಶನ್" ಎಸ್ ಐ ಬೇಡಿಕೊಂಡ.
ಕ್ರಿಷ್ಣಾರೆಡ್ಡಿಯ ಕೈ ಸಡಿಲವಾಯ್ತು
ಸ್ವಾತಿಯ ಎದೆಯ ಕಂಪನ ಜೋರಾಗಿತ್ತು.ಇದು ಯಾರ ವಿಷಯ ಹೇಳುತ್ತಾ ಇದ್ದಾಳೆ. ಅರ್ಥವಾಗಲಿಲ್ಲ
ಪಾರ್ವತಿ ಕುಸಿದರು
" ನಂಗೆ ಹುಟ್ಟಿದ್ದು ಈ ಹೆಣ್ಣು ಮಗೂನೆ .ಸುಳ್ಳಾಡಬೇಡ. "ಸ್ವಾತಿಯನ್ನ ತೋರಿಸಿ ನುಡಿದರು ಪಾರ್ವತಮ್ಮ.
"ಮೇಡಮ್ ಅವಳು ಹೇಳ್ತಿರೋದು ನಿಜಾ ಮೇಡಮ್ ಈ ನಿಜಾನಾ ನಾವೆ ಹೊರಡಿಸಿದಿವಿ ಅವಳ ಬಾಯಿಂದಾ" ಎಸ್ ಐ ಹೇಳಿದಾಗ ಎಲ್ಲರೂ ಅವನತ್ತ ನೋಡಿದರು.
"ಇವಳ ಕೆಲ್ಸಾನೆ ಆಗ ತಾನೆ ಹುಟ್ಟಿದ ಮಗೂನ ಕದ್ದುಕೊಂಡು ಹೋಗಿ ಮಾರೋದು . ಇಲ್ಲೀ ತನಕ ಸುಮಾರು ಗಂಡು ಮಕ್ಕಳನ್ನು ಮಾರಿದ್ದಾಳೆ . ಹಾಗೆ ಮಾರ್ತಿದ್ದ ಹಾಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಳು. ಸಕ್ಕತಾಗಿ ಚಚ್ಚಿದ ಮೇಲೆ ಒಬ್ಬೊಬ್ಬರ ಹೆಸರನ್ನೇ ಹೇಳ್ತಿದ್ದಳು ಹಂಗೆ ನಿಮ್ಮ ಹೆಸರೂ ಹೇಳಿದಳು. ಅದಕ್ಕೆ ನಿಮ್ಮನ್ನ ಕರೆಸಿದ್ದು. "
ಸ್ವಾತಿಯ ಉಸಿರು ನಿಂತಂತಾಯ್ತು
ಮಾತಾಡಲು ಬಾಯಿ ಬರಲಿಲ್ಲ
ಮರಿಯಮ್ಮ ಮುಂದುವರೆಸಿದಳು
"ನಾನ್ಹೇಳ್ತಾ ಇರೋದು ಏಸು ಆಣೆಗೂ ನಿಜಾ. ಈ ಮಗು ನಿಮ್ಮ ಮಗು ಅಲ್ಲಾ. ನಿಮ್ಮ ಮಗು ಒಂದು ಗಂಡು ಮಗು . ಆ ಮಗು ಮುಖ ನೋಡಿದ್ರೆ ಗೊತ್ತಾಗುವುದಿಲ್ಲವಾ ನಿಮ್ಮ ಮಗಳು ಆಗೋಕೆ ಸಾಧ್ಯಾನಾ?"
ಎಲ್ಲರೂ ಸ್ವಾತಿಯತ್ತ ನೋಡಿದರು.

ಸ್ವಾತಿಗೆ ಏನು ಮಾಡುವುದೆಂದು ತೋಚಲಿಲ್ಲ. ಪೆಚ್ಚು ಪೆಚ್ಚಾಗಿ ನೋಡಿದಳು.
"ನೀನೇಳ್ತಾ ಇರೋದ್ ನಿಜ ಅಂದ್ರೂ ಮತ್ತೆ ಆ ಗಂಡು ಮಗೂ ಎಲ್ಲಿ " ಕ್ರಿಷ್ಣಾರೆಡ್ಡಿ ಕರ್ಕಶವಾಗಿ ಕೇಳಿದರು
ಉತ್ತರಕ್ಕಾಗಿ ಎಲ್ಲರೂ ಮರಿಯಮ್ಮನನ್ನು ನೋಡಿದರು.
ಅವಳು ತಲೆ ತಗ್ಗಿಸಿದಳು
"ಬೊಗಳೇ ಬೇಗ ನನ್ನ ಮಗೂನ ಏನ್ ಮಾಡ್ದೆ" ಪಾರ್ವತಮ್ಮ ಕಿರುಚಿದರು
ಸ್ವಾತಿ ಪಕ್ಕನೆ ತಾಯಿಯನ್ನು ನೋಡಿದಳು. ಇಲ್ಲಿಯವರೆಗೆ ತನ್ನ ಮಗಳು ಅಂತಿದ್ದ ಅಮ್ಮನಿಗೆ ತನ್ನ ಮಗನ ಬಗ್ಗೆ ತಿಳಿಯಲು ಎಷ್ಟು ಕುತೂಹಲ ತವಕ.
ಹಾಗಿದ್ದಲ್ಲಿ ತಾನು ಯಾರು? ತನ್ನ ಅಪ್ಪ ಅಮ್ಮ ಯಾರು? ಇಲ್ಲಿಯವರೆಗೆ ತನ್ನ ಮನೆಯಲ್ಲದ ಮನೆಯಲ್ಲಿ ಬದುಕಿದೆನೇ ನಾನು? ತನ್ನ ಗಮ್ಯ ಯಾವುದು . ಮುಂದೇನು ಮಾಡುವುದು?
ಅವಳ ತಲೆಯಲ್ಲಿ ಪ್ರಶ್ನೆಗಳು ತಾಂಡವವಾಡತೊಡಗಿದವು
ಎಳೆಯ ಮನಸು ಕಮರತೊಡಗಿತು.
ಭಾವನೆಗಳ ತಾಕಲಾಟ ತಾಳದಂತೆ ಅವಳ ತಲೆ ಸಿಡಿದುಹೋಗುವಂತಾಯ್ತು
ಅಮ್ಮಾ ಎಂದು ತಲೆ ಹಿಡಿದವಳೇ ಕೆಳಗೆ ಕುಸಿದಳು

Wednesday, September 2, 2009

ಎರೆಡು ದಡಗಳ ನಡುವೆ-ಭಾಗ ನಾಲಕ್ಕು

ಅಂದು ಎಂದಿನಂತೆ ಅದೇ ಉದಾಸೀನತೆಯಿಂದ ಆಫೀಸಿಗೆ ಬಂದವಳಿಗೆ ಮತ್ತೆ ರಾಬರ್ಟ್‌‍ನ ಮೇಲ್ ಕಾಣಿಸಿತು.



"ಪ್ಲೀಸ್ ಕಮ್ ಆನ್‍ಲೈನ್"



ನೆನ್ನೆ ಸಹಾ ಹೀಗೆ ಹೇಳಿದ್ದ . ಹೋದರೆ "ಹ್ಯಾಡ್ ಯುವರ್ ಬ್ರೇಕ್ ಫಾಸ್ಟ್ ?"ಅದೂ ಇದೂ ಎಂದು ತಲೆ ತಿನ್ನುತ್ತಾನೆ. ಯಾವ ಇಶ್ಯೂಸೂ ಇರುವುದಿಲ್ಲ.



ಶೈಲಾ ಚಾಟಿಂಗ್ ಸ್ವಿಚ್ ಮಾಡಲಿಲ್ಲ.



ಬೆಳಗ್ಗೆ ಉಡುಪಿ ಸಾಗರ್ ಎಂಬ ಹೆಸರಿದ್ದ ಹೋಟೆಲಿಗೆ ಹೋಗಿ ನಾಲಿಗೆ ಕೆಡಿಸಿಕೊಂಡಿದ್ದಳು. ತಿಂಡಿ ಒಂದು ಚೂರು ಚೆನ್ನಾಗಿರಲಿಲ್ಲ.



ಯಾವುದೋ ಫೈಲ್ ಕರಪ್ಟ್ ಆಗಿದೆ ಎಂದು ಕ್ಲೈಂಟ್‌ ಒಬ್ಬರ ಕಾಲ್ ಬಂತು . ಮನಸಿಲ್ಲದ ಮನಸಲ್ಲಿ ಕೆಲಸ ಶುರು ಮಾಡಿದಳು




************************************




ಸಿರಿಗೆ ಇಡ್ಲಿ ಬಡಿಸುತ್ತಿದ್ದಂತೆ ಮನುವಿನ ammana ಕೈ ಅರ್ಧಕ್ಕೆ ನಿಂತಿತು.




"ಯಾಕಮ್ಮ ಏನಯ್ತು" ಮನು ತಲೆ ಎತ್ತಿದ . ಸಿರಿ ತಲೆ ಎತ್ತಿ ಅಜ್ಜಿಯನ್ನು ನೋಡಿತು




ಅಮ್ಮನ ಕಣ್ಣಲ್ಲಿ ನೀರು .




"ಯಾಕಮ್ಮ ?"




"ಅವಳು ಹೀಗ್ಮಾಡ್ತಾಳಂತ ಅಂದ್ಕೊಂಡಿರಲಿಲ್ಲ ಕಣೋ ನಾನು. ಅವಳನ್ನ್ ಬಿಟ್ಟಿರೋದಿಕ್ಕೆ ತುಂಬಾ ಕಷ್ಟವಾಗ್ತಿದೆ. ಸೊಸೆ ಅಲ್ಲ ಮಗಳಂತೆ ಬೆಳೆಸಿದ್ದೆ. ಈ ಸಿರೀನಾ ಬೆಳೆಸ್ತಿರೋ ಕೈ ಅವಳ ಅಮ್ಮನನ್ನೂ ಬೆಳೆಸಿತು. ಎಲ್ಲಿ ಕೊರತೆಯಾಗಿತ್ತು ಕಣೋ ಅವಳಿಗೆ ನನ್ನ, ನಿನ್ನ ಪ್ರೀತಿಲಿ "ಜೋರಾಗಿ ಅಳಲಾರಂಭಿಸಿದರು. ಸಿರಿ ಬೆದರಿದಳೆನಿಸುತ್ತದೆ. ಅಳಲಾರಂಭಿಸಿದಳು




ಅವಳನ್ನು ಎತ್ತಿ ಸಮಾಧಾನ ಪಡಿಸಿದ ಮನು




ಅಮ್ಮನತ್ತ ತಿರುಗಿ




"ಅಮ್ಮಾ ಆಗಿದ್ದು ಆಗಿ ಹೋಯ್ತು. ಅವಳಿನ್ನು ನಮ್ಮ ಪಾಲಿಗಿಲ್ಲ. ಅವಳಿಲ್ಲ ಎಂಬ ನಮ್ಮ ಖೇದಕ್ಕಿಂತ ಅವಳು ಅಲ್ಲಿ ಸಂತೋಷವಾಗಿದ್ದಾಳೆ ಎಂಬುದು ಮುಖ್ಯ ಅಮ್ಮ. ಇನ್ನು ನಮ್ಮ ಪಾಲಿಗಿರೋದು ಈ ಮಗು . ಇದನ್ನ ಚೆನ್ನಾಗಿ ನೋಡಿಕೊಳ್ಳೋಣ ಇದನ್ನೇ ಶೈಲಾ ಅಂತಂದುಕೊಳ್ಳೋಣ "




ಸಿರಿಗೆ ಮುತ್ತು ನೀಡಿದ.




ಮಗುವನ್ನು ಅಮ್ಮನ ಕೈಗೆ ಕೊಟ್ಟು ಕಾರಿನೆಡೆಗೆ ನಡೆದ.




ಇದನ್ನೆಲಾ ನೋಡುತ್ತಾ ನಿಂತಿದ್ದ ರಾಮು ಕಣ್ಣೊರೆಸಿಕೊಳ್ಳುತ್ತಲೇ ಕಾರ್ ಬಾಗಿಲು ತೆರೆದ.ಅವನೂ ಶೈಲಾಳನ್ನು ಆಡಿಸಿ ಬೆಳೆಸಿದವನೇ.




ಅವನ ಬೆನ್ನು ತಟ್ಟಿ ಕಾರ್ ಹತ್ತಿದ ಮನು.




ಕಾರ್‌ಗೊರಗಿ ಕೂರುತ್ತಿದ್ದಂತೆ ಕಾರ್ ಮುಂದೆ ಓಡಿತು . ಮನುವಿನ ಮನ ಹಿಂದೆಯೇ ಉಳಿಯಿತು




**********************************************




ಮೂರು ದಿನದಲ್ಲಿ ಬರುತ್ತೇನೆಂದು ಹೇಳಿದ ವಿಕಾಸ್ ಒಂದು ತಿಂಗಳಾದರೂ ಬಾರದಿದ್ದಾಗ ಶೈಲಾ ಹುಚ್ಚಿಯಾದಂತಾದಳು. ಊಟ ನಿದ್ದೆ ಬಿಟ್ಟಳು. ಮನುವಿನ ಬಳಿಇರಲಿ ಮಗುವಿನ ಬಳಿಯಲ್ಲೂ ಆಟವಾಡಲಿಲ್ಲ. ಕಂಪ್ಯೂಟರ್ ಅನ್ನು ಒಡೆದು ಹಾಕಿದಳು . ತನ್ನ ಬಳಿ ಇದ್ದ ಪುಸ್ತಕಗಳನ್ನೆಲಾ ಹರಿದಳು. ಮೊದಲ ಬಾರಿ ಅವಳ ಬಯಕೆಯ ವಸ್ತು ಅವಳಿಗೆ ಸಿಕ್ಕಿರಲಿಲ್ಲ




ಮನು ಇದನ್ನೆಲ್ಲಾ ಗಮನಿಸುತ್ತಿದ್ದಂತೆ ಅವನ ಮನದಲ್ಲಿ ಕೋಲಾಹಲವಾಗಿತ್ತು.




ಅವಳಿಗೇನಾಯ್ತು ಎಂಬುದು ಯಾರಿಗೂ ತಿಳಿಯಲಿಲ್ಲ . ಮನು ಬಹಳವೇ ಹೆದರಿದ್ದ. ಅವಳ ಸಂಕಟ ನೋಡಲಾಗದೆ ಮನೆಯವರೆಲ್ಲಾ ಒದ್ದಾಡಿದರು




ಯಾವುದನ್ನೂ ಬಾಯಿ ಬಿಟ್ಟು ಹೇಳದ ಶೈಲಾ ಒಗಟಾಗಿದ್ದಳು. ಎಷ್ಟು ಸಮಾಧಾನ ಮಾಡಿ ಕೇಳಿದರೂ ತನಗೇನಾಗಿದೆ ಎಂಬುದನ್ನು ಅವಳು ಹೇಳಲಾರದವಳಾಗಿದ್ದಳು.




ಒಟ್ಟಿನಲ್ಲಿ ಕಂಪ್ಯೂಟರ್ ಕಲಿಯಲು ಆಗದಿದ್ದುದಕ್ಕೆ ಈ ರೀತಿ ಆಡುತ್ತಿದ್ದಾಳೆ ಎಂದು ಭಾವಿಸಿದರು




ಕೊನೆಗೊಮ್ಮೆ ವಿಕಾಸ್ ಮರಳಿದ .




*******************************************************



ಅಂದೇ ತನಗೇನಾದರೂ ತುಸು ಸುಳಿವಾದರೂ ಸಿಕ್ಕಿದ್ದರೆ ಪರಿಸ್ಥಿತಿಯನ್ನ ಇಲ್ಲಿಯವರೆಗೆ ಬರಲು ಬಿಡುತ್ತಿರಲಿಲ್ಲ ಎನಿಸಿತು ಮನೂಗೆ . ಹಾಗೆ ಗೊತ್ತಾಗಿದ್ದರೂ ಮಾಡಲಾದರೂ ಏನಿತ್ತು? ಮರುಕ್ಷಣದಲ್ಲೇ ಮನದ ಮೂಲೆಯಲ್ಲಿನ ಸತ್ಯ ವ್ಯಂಗ್ಯವಾಡಿತು. ಒಮ್ಮೆ ಅವಳ ಮನಸಲ್ಲಿ ತನ್ನ ಸ್ಥಾನ ಇನ್ನೊಬ್ಬರದಾಗಿ ಹೋದಾಗ ಮನಸನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದನಿಸಿತು.



ಅವಳ ಇಲ್ಲದಿರುವಿಕೆ ತನ್ನನ್ನೂ ಬಹಳ ಕಾಡುತ್ತಿದೆ ಎಂಬುದು ಮನೂಗೂ ಚೆನ್ನಾಗಿ ಗೊತ್ತು ಆದರೂ ಅದನ್ನು ತೋರಿಸಲು ಅವನಿಗೆ ಆಗಲಿಲ್ಲ. ಅವನು ಹಾಗೆಯೇ . ಯಾವದನ್ನೂ ಹೊರಗೆ ತೋರಿಸಿದವನಲ್ಲ . ತನ್ನಲ್ಲಿಲ್ಲದ ಯಾವ ಗುಣವನ್ನು ಅವಳು ವಿಕಾಸನಲ್ಲಿ ಕಂಡಳು ಎನ್ನುವ ಪ್ರಶ್ನೆಗೆ ಅದೇ ಉತ್ತರವಾಗಿತ್ತು ಎಂಬುದೂ ಅವನಿಗೆ ಗೊತ್ತಿರದ ವಿಷಯವೇನಾಗಿರಲಿಲ್ಲ.



ಹಿಂದೆ ಓಡುತ್ತಿದ್ದ ಮನಸನ್ನ ಮುಂದೆ ಚಲಿಸುವ ಪ್ರಯತ್ನ ಮಾಡಿದ .



***************************************************************



ವಿಕಾಸ್ ಆಫೀಸಿಗೆ ಬಂದು ಲಾಗಿನ್ ಆದ . ವಾಲ್ ಪೇಪರ್‌ನಲ್ಲಿ ನಗುತ್ತಿದ್ದಳು ಶೈಲಾ. ಈ ನಗು ಮುಗ್ಧತೆಯೇ ತನ್ನನ್ನು ಮತ್ತೆ ಊರಿನಿಂದ ಕರೆಸಿಕೊಂಡಿತಲ್ಲವೇ?



ಶೈಲಾಗೆ ತನ್ನ ಮೇಲೆ ಪ್ರೇಮವಾಗುತ್ತಿದೆ ಎಂಬುದು ತಿಳಿಯುತ್ತಲೇ ತಾನು ಅವಳಿಂದ ಮರೆಯಾಗಬಯಸಿ ಊರಿಗೆ ಬಂದದ್ದೇನೋ ನಿಜ . ತಾನೆಂದೂ ಅವರ ಬಾಳನ್ನು ಹಾಳುಮಾಡುವ ಯೋಚನೆಯನ್ನು ಮಾಡಿರಲಿಲ್ಲ.ಆದರೆ ಊರಿಗೆ ಹೋಗಿ ಕೇವಲ ಒಂದೇವಾರಕ್ಕೆ ಅವಳ ನಗು ಮಾತು ತನ್ನನ್ನು ಕಾಡಲಾರಂಭಿಸಿತು. ತಾನೇನು ಅವಳನ್ನು ಪ್ರೀತಿಸುತ್ತಿದ್ದೇನೆಯೇ ಎಂಬುದೂ ಅರ್ಥವೂ ಆಗಲಿಲ್ಲ. ಒಂದು ವೇಳೆ ಇದು ಪ್ರೀತಿಯಾಗಿದ್ದರೆ ತಪ್ಪಾಗುತ್ತದೆಯೇ ಅಥವ ಮದುವೆಯಾದವಳನ್ನು ಅದೂ ಇನ್ನೊಬ್ಬರ ಆಸ್ತಿಯನ್ನು ತನ್ನದಾಗಿಸಿಕೊಳ್ಳುವ ಯೋಚನೆಯೇ? ನಂಬಿ ತನ್ನನ್ನು ಅಲ್ಲಿ ಕೆಲಸಕ್ಕೆ ನೇಮಿಸಿಕೊಂಡಿರುವ ಆ ಸಜ್ಜನ ಮನುವಿಗೆ ದ್ರೋಹ ಬಗೆಯಬಾರದು . ಯೋಚನೆಗಳ ಸಾಲು ಸಾಲು ಮುಂದೆ ನಿಂತೆ ಅಣಕಿಸಲಾರಂಭಿಸಿದಾಗ ದಿಕ್ಕು ತೋಚದವನಾಗಿರಲಿಲ್ಲವೇ?
ಜೊತೆಗೆ ಶೈಲಾಳ ಮೇಲ್ ಸಹಾ ತನ್ನನ್ನು ಇನ್ನಷ್ಟು ಹಣ್ಣು ಮಾಡಿತು. ಅವಳು ತಾನು ಮತ್ತೆ ಬರದೇ ಇದ್ದರೆ ತನ್ನ ಪ್ರಾಣವನ್ನೇ ಕಳೆದುಕೊಳ್ಳುವುದಾಗಿ ಹೆದರಿಸಿದ್ದಳು.
ಏನೇ ಆಗಲಿ ಇದನ್ನು ಮನುವಿಗೆ ಸೂಕ್ಷ್ಮವಾಗಿ ಹೇಳಿ ನಯವಾಗಿ ತಪ್ಪಿಸಿಕೊಳ್ಳಬೇಕೆಂದು ಯೋಚಿಸಿ ತಾನೇ ತಾನು ವಾಪಾಸ್ ಬೆಂಗಳೂರಿಗೆ ಮತ್ತೆ ಬಂದದ್ದು?

ಆದರೆ ಮತ್ತೆ ಶೈಲಾಳನ್ನು ನೋಡುತ್ತಿದ್ದಂತೆ ಮನಸು ಸ್ಥಿಮಿತ ತಪ್ಪಿತು. ಕಡಿವಾಣವಿಲ್ಲದ ಕುದುರೆಯಂತೆ ಮನಸು ತಪ್ಪಾದರೂ ಸರಿ ಶೈಲಾಳನ್ನು ತನ್ನವಳನ್ನಾಗಿ ಮಾಡಿಕೊಳ್ಳಬೇಕೆಂಬ ಹುಚ್ಚು ನಿರ್ಣಯಕ್ಕೆ ಬಂದಿತು.



ಸ್ವಲ್ಪ ಹೊತ್ತು ಭೂತದಲ್ಲಿ ಅಡಗಿ ಹೋಗಿದ್ದ ಮನ ವರ್ತಮಾನಕ್ಕೆ ಬರಲೇ ಬೇಕಾಯ್ತು. ಕೆಲಸ ಮುಗಿಸದಿದ್ದರೆ ನೆನ್ನೆ ರಮೇಶ್ ಇಂದು ಪ್ರೀತಿ ನಾಳೆಯ ಹೆಸರು ತನ್ನದಾಗಿರಬಹುದು ಪಿಂಕ್ ಸ್ಲಿಪ್ ಪಡೆಯಲು ಎಂದೆನಿಸಿ ಕೋಡಿಂಗ್ ಸಾಮ್ರಾಜ್ಯದಲ್ಲಿ ತೊಡಗಿದ

********************************

"ಅಲ್ಲಾ ಕಣೇ ಶೈಲಾ ಮನು ಥರಾ ಒಳ್ಳೇ ಗಂಡನ್ನ ಬಿಟ್ಟು ವಿಕಾಸನ ಬಗ್ಗೆ ಆಕರ್ಶಣೆ ಹುಟ್ಟೋಕೆ ಕಾರಣವಾದರೂ ಏನು . ನಾನೊಂದು ಮಾತು ಹೇಳ್ತೀನಿ ಕೇಳು ನಿಂಗೆ ವಿಕಾಸ್ ಮೇಲಿರೋದು ಮೋಹ . ಅದು ಮೋಡದಲ್ಲಿರೋ ಮಳೆ ಥರ.ಬೀಳೋ ತನಕ ತವಕ . ಬಿದ್ದ ಮೇಲೆ ಸ್ವಲ್ಪಹೊತ್ತು ಪುಳಕ ಮತ್ತೆ ಜೀವನದ ಬಿಸಿಲು ಬಿದ್ದಾಗ ಅದರ ತಂಪು ಮಾಯ ಆಗಿರುತ್ತೆ . ಆದರೆ ಮನು ಒಂದು ಜೀವನದಿ ಇದ್ದ ಹಾಗೆ . ಸದಾ ಸಂತಸದ ಒರತೆ .ನಿನ್ನ ಯೋಚನೇನ ಬದಲಾಯಿಸಿಕೋ ದಯವಿಟ್ಟು. ನೀನು ಹೋಗುತ್ತಿರವ ದಾರಿ ಸರಿಯಲ"

ಗೆಳತಿ ಸಂಗೀತಾ ಮೇಲ್‌ನಲ್ಲಿ ಕಳಿಸಿದ್ದ ಮಾತುಗಳು ಮತ್ತೆ ಮತ್ತೆ ಕಣ್ಣ ಮುಂದೆ ಬಂದು ಚುಚ್ಚುತ್ತಿದ್ದವು,ಶೈಲಾಗೆ. ತಾನು ವಿಕಾಸನ ಮೋಹಕ್ಕೆ ಬಿದ್ದಾಗ ಅವಳಿಗೆ ನೆನಪಾಗಿದ್ದೇ ಸಂಗೀತ . ಅವಳ ಆತ್ಮೀಯ ಗೆಳತಿ, ಡೆಲ್ಲಿಯಲ್ಲಿದ್ದಳು. ಅವಳದೂ ಲವ್ ಮ್ಯಾರೇಜ್ . ಮನೆಯವರನ್ನೆಲ್ಲಾ ವಿರೋಧಿಸಿ ತಾ ಮೆಚ್ಚಿದ ಪ್ರತೀಕ್‌ನ್ನ ಮದುವೆಯಾಗಿದ್ದಳು. ಹಾಗಾಗಿ ಈ ವಿಷಯದಲ್ಲಿ ಅವಳ ಸಹಾಯ ಪಡೆಯುವ ಎಂದು ಅವಳಿಗೆ ಮೇಲ್ ಮಾಡಿದ್ದಳು ಶೈಲಾ . ಆದರೆ ಸಂಗೀತಾ ಮರು ಓಲೆ ಕಳಿಸಿ ಚೆನ್ನಾಗಿ ಬೈದಿದ್ದಳು. ಅದನ್ನೆಲ್ಲಾ ನೋಡಿ ಸರಿ ಹೋಗುತ್ತಿದ್ದಳೇನೋ ಶೈಲಾ ಆದರೆ ಮತ್ತೆ ಬಂದ ವಿಕಾಸ್. ಅವಳು ಎಂದೂ ಮರಳದ ದಾರಿಗೆ ಕರೆದಿದ್ದ. ಅವಳನ್ನು ಬಿಟ್ಟು ಇರಲು ಆಗದೆ ಒದ್ದಾಡಿ ವಾಪಾಸ್ ಬಂದಿದ್ದ ವಿಕಾಸ್‌ . ಅಷ್ಟೇ ಅವಳ ಕಣ್ಣು , ಮನಸು ಕುರುಡಾಯ್ತು. ವಿಕಾಸನ ಜೊತೆ ಹಾರಲು ಮನಸು ಸಿದ್ದವಾಗಿತ್ತು.

ಎವ್ರಿ ಥಿಂಗ್ ಈಸ್ ಫೇರ್ ಇನ್ ಲವ್ ಅಂಡ್ ವಾರ್ ಎನ್ನುವ ನೀತಿ ಅವಳ ನೆನಪಿಗೆ ಬರುತ್ತಿತ್ತು ಹಾಗಾಗಿ ತಾನು ಮಾಡುತ್ತಿರುವುದು ತಪ್ಪೇ ಸರಿಯೇ ಎಂಬುದನ್ನು ಯೋಚಿಸಲೂ ಸಿದ್ದಳಿರಲಿಲ್ಲ. ವಿಕಾಸ್ ಜೊತೆ ಶಾಪಿಂಗ್ ಅಲ್ಲಿ ಇಲ್ಲಿ ಸಿನಿಮಾಗೆ ಹೋಗುತ್ತಿದ್ದಳು. ಮನುವಿನಿಂದ ಉದ್ದೇಶ ಪೂರ್ವಕವಾಗಿ ದೂರವಾಗತೊಡಗಿದಳು. ಪ್ರೇಮ ಲೋಕದಲ್ಲಿ ಎರೆಡೂ ಹಕ್ಕಿಗಳೂ ಸಂತಸದಿಂದ ಕುಣಿದು ಕುಪ್ಪಳಿಸುತ್ತಿದ್ದವು.ವಿಕಾಸನ ಜೊತೆಯ ಒಡನಾಟ ಮೂರು ತಿಂಗಳವರೆಗೆ ಕದ್ದು ಮುಚ್ಚಿಯೇ ನಡೆಯುತ್ತಿತ್ತು. ಯಾರಿಗೂ ಅವಳ ಮೇಲೆ ಸಂಶಯ ಬರುತ್ತಿರಲಿಲ್ಲ.

ಆದರೆ ಹಾಗೆಯೇ ಮುಂದುವರೆಯಲು ವಿಕಾಸ್ ಇಚ್ಚಿಸಲಿಲ್ಲ. ಅವನು ಶೈಲಾಳನ್ನು ತನ್ನ ಜೊತೆಗೆ ಕರೆದೊಯ್ಯಲು ಸಿದ್ದನಾದ. ಅಂತಹ ದಿನಕ್ಕೆ ಸನ್ನದ್ದಳಾಗಬೇಕಾದ ಪರಿಸ್ಥಿತಿ ಶೈಲಾಳಿಗೆ ಎದುರಾಯ್ತು.

*************************************************----------------------*********

ಒಂದು ವೇಳೆ ವಿಕಾಸ್ ಮರಳಿ ಬಾರದಿದ್ದರೆ ತಾನು ಅವನನ್ನು ಮರೆಯುತ್ತಿದ್ದೆನೇ ಪ್ರಶ್ನಿಸಿಕೊಂಡಳು ಶೈಲಾ. ಅಲ್ಲಿಂದ ಬಂದ ಇದ್ದಿರಬಹುದೇನೋ ಎಂಬ ಉತ್ತರ ಅವಳನ್ನು ಧೃತಿ ಗೆಡಿಸಿತು. ಅಂದರೆ ಸಂಗೀತ ಹೇಳಿದಂತೆ ಇದು ಕ್ಷಣಿಕ ಮೋಹವೇ. ತಾನು ವಿಕಿಯನ್ನು ಪ್ರೀತಿಸಲಿಲ್ಲವೇ? ಮತ್ತೆ ತನಗೂ ಹೂವಿಂದ ಹೂವಿಗೆ ಹಾರುವ ದುಂಬಿಗೂ ಯಾವ ವ್ಯತ್ಯಾಸವಿಲ್ಲವೇ? ಮನುವನ್ನೂ ವಿಕಾಸನನ್ನು ಒಟ್ಟಿಗೆ ಬಯಸುತ್ತಿದ್ದೇನೆಯೇ ತಾನು ?. ಇದು ವಿಷಯ ಲಂಪಟತನವಲ್ಲವೇ?

ಶೈಲಾಳ ಮನಸು ಪ್ರಶ್ನೆಗಳ ಗೂಡಾಗುತ್ತಿದ್ದಂತೆ. ಅದನ್ನು ಹೊರಲಾರದಂತೆ ತಲೆ ಭಾರವಾಯ್ತು. ಕಣ್ಣೀರಿನಿಂದ ಕಣ್ಣು ಮಂಜಾಯ್ತು. ತಲೆ ನೋವಿನಿಂದ ಸಿಡಿಯಲಾರಂಭಿಸಿತು. ಮಾನಸಿಕ ಒತ್ತಡ ತಾಳಲಾರದೆ ದುಡುಮ್ ಎಂದು ಚೇರ್ ‌ನಿಂದ ಬಿದ್ದುದಷ್ಟೆ ಅವಳ ನೆನಪು.

ಆಫೀಸಿನಲ್ಲಿದ್ದ ಜನರೆಲ್ಲಾ ಅವಳತ್ತ ಓಡಿದರು

[ ಆತ್ಮೀಯ ಸ್ನೇಹಿತ/ತೆಯರೆ

ನಿಮ್ಮೆಲ್ಲರ ಪ್ರೋತ್ಸಾಹದ ನುಡಿಗೆ ಮೆಚ್ಚುಗೆಯ ನುಡಿಗೆ ನನ್ನ ಧನ್ಯವಾದಗಳು. ಈ ಕತೆ ಇನ್ನೂ ಒಂದೆರೆಡು ಕಂತು ಎಳೆಯುವ ಸಾಧ್ಯತೆ ಇದೆ. ಏಕೆಂದರೆ ಕತೆಯ ಹರಿವು ಬಹಳ ದೊಡ್ಡದಿದೆ (ಇದನ್ನು ಶುರು ಮಾಡಿದಾಗ ನನಗೇ ಗೊತ್ತಿರಲಿಲ್ಲ . ಆದಿ ಗೊತ್ತಿತ್ತು. ಅಂತ್ಯ ಗೊತ್ತಿತ್ತು ಆದರೆ ಅದರ ದಾರಿಯ ವಿಸ್ತಾರ ತೆರೆದುಕೊಂಡಂತೆಲ್ಲಾ ಹರಡುತ್ತಿದೆ . ಇದೇ ಪ್ರೋತ್ಸಾಹವನ್ನು ಮುಂದುವರೆಸಿ ಎಂದು ಕೇಳಿಕೊಳ್ಳುತ್ತೇನೆ ಕೆಲಸದ ಒತ್ತಡವೂ ಹಾಗೆಯೇ ಇದೆ . ಹಾಗಾಗಿ ಸಮಯಾವಕಾಶವಿದ್ದಾಗ ಬರೆಯುತ್ತಿರುತ್ತೇನೆ]

*************************ಇನ್ನೂ ಇದೆ*************************************








ಅದು ಶಾಶ್ವತ ಅಲ್ಲ ಆದರೆ ಪ

Sunday, August 30, 2009

ಎರೆಡು ದಡಗಳ ನಡುವೆ-೩

ಶೈಲಾ ಸಂತೃಪ್ತ ಗೃಹಿಣಿಯಾಗಿದ್ದಳು. ಭವ್ಯ ಬಂಗಲೆ, ನೆಮ್ಮದಿಯ ತಾಣ . ವಾತ್ಸಲ್ಯದ ಮೂರ್ತಿ ತಾಯಿಯ ಪ್ರತಿರೂಪ ಅತ್ತೆ, ಆಳು ಕಾಳುಗಳು, ಅವಳ ಮನದ ಪ್ರತಿ ಆಸೆಗಳನ್ನು ಈಡೇರಿಸುವ ಗಂಡ . ಈಗಷ್ಟೆ ಹುಟ್ಟಿದ ಮುದ್ದುಮಗು ಸಿರಿ . ಆ ಮಗುವಿನ ಪ್ರತಿಯೊಂದು ಸೇವೆಯನ್ನೂ ಅತ್ತೆಯೇ ಮಾಡುತ್ತಿದ್ದರು. ಸಿರಿಗೀಗ ಒಂದು ವರ್ಷ. ತಾಯಾಗಿ ಶೈಲಾ ಅಂಥಾ ವಾತ್ಸಲ್ಯವನ್ನೇನು ಕೊಟ್ಟಿರಲಿಲ್ಲ . ಅದು ಹೆಚ್ಚಾಗಿ ಅಜ್ಜಿಯ ಬಳಿಯಲ್ಲೇ ಬೆಳೆಯುತ್ತಿತ್ತು.
ಶೈಲಾ ಮಾಡಿದ್ದು BSc Computer science
ಆದ್ದರಿಂದ ಪ್ರೋಗ್ರಾಮಿಂಗ್ ಮೇಲೆ ಅವಳಿಗೆ ಸಹಜವಾಗಿಯೇ ಆಸಕ್ತಿ. ಕಂಪ್ಯೂಟರ್ ಮುಂದೆ ಕುಳಿತು ಅವಳಿಗಿಷ್ಟವಾದ ಪ್ರೋಗ್ರಾಮ್‌ಗಳನ್ನು ಬರೆಯುತ್ತಾ ಕುಳಿತಿರುತ್ತಿದ್ದಳು. ಅದು ಬಿಟ್ಟರೆ ಮತ್ತೆಂಥಾ ಹವ್ಯಾಸಗಳೂ ಇರಲಿಲ್ಲ. ಬೇಕಾಗಿಯೂ ಇರಲಿಲ್ಲ.
ಹೀಗಿದ್ದಾಗ ಒಮ್ಮೆ ಹೊಸದೊಂದು ಪ್ರೋಗ್ರಾಮಿಂಗ್ ಲಾಂಗ್ವೇಜ್ ಕಲಿಯಬೇಕೆಂಬ ಆಸೆ ಬಲಿಯಿತು.
ಮನು ಅವಳಿಗೆ ಬೇಕಾದ ಪುಸ್ತಕಗಳನ್ನೆಲ್ಲಾ ತಂದುಕೊಟ್ಟನು. ಅದನ್ನೆಲ್ಲಾ ಓದಿದರೂ ತಲೆಗೆ ಹತ್ತಲಿಲ್ಲ. ಅದೇ ದೊಡ್ಡ ಕೊರಗಾಗಿ ಹೋಯ್ತು.
ರಾತ್ರಿ ಎಲ್ಲಾ ಮಂಕಾಗಿರುತ್ತಿದ್ದಳು. ಯಾರೊಡನೆಯೂ ಮಾತನ್ನಾಡುತ್ತಿರಲಿಲ್ಲ. ಹೇಗಾದರೂ ಅದನ್ನು ಕಲಿಯಬೇಕೆಂಬ ತೀವ್ರ ಹಂಬಲ ಅವಳಿಗೆ. ಮನುವಿನ ಆತಂಕ ಹೆಚ್ಚಾಯ್ತು.
ಅವಳಿಗೇನು ಬೇಕು ಎಂದು ರಮಿಸಿ ಕೇಳಿದ. ಅವಳ ಆಸೆ ಕೇಳಿ ಮನಸಾರೆ ನಕ್ಕು ಅವಳಿಗೊಬ್ಬ ಟ್ಯೂಟರ್ ನೇಮಿಸಲು ಜಾಹೀರಾತು ನೀಡಿದ . ಸಂಬಳ ಹದಿನೈದು ಸಾವಿರ ತಿಂಗಳಿಗೆ .
ಬಂದ ಸಾವಿರಾರು ಅಪ್ಪ್ಲಿಕೇಷನ್ಸ್‌ನಲ್ಲಿ ಕೊನೆಗೆ ಆಯ್ಕೆಯಾಗಿದ್ದು ಕೇವಲ ನಾಲ್ಕು ಅದರಲ್ಲಿ ಮೂರು ಲೇಡಿ ಟ್ಯೂಟರ್. ಒಂದು ಮೇಲ್ ಟ್ಯೂಟರ್,
ಮನುವಿಗೆ ವಿದ್ಯಾಭ್ಯಾಸ ಹೆಚ್ಚು ಆಗಿರದಿದ್ದರೂ ನಿರ್ಣಯ ತೆಗೆದುಕೊಳ್ಳುವುದರಲ್ಲಿ ಎತ್ತಿದ ಕೈ.ಅವರೆಲ್ಲರಲ್ಲಿ ಚಾರ್ಮಿಂಗ್ ಹಾಗು ಹೆಚ್ಚು ತಿಳಿದಿದ್ದಾನೆಂದೆನಿಸಿದ ಹುಡುಗನನ್ನೇ ಆಯ್ಕೆ ಮಾಡಿದ. ವಿಕಾಸ್ ಬಹಳ ಬುದ್ದಿವಂತ ಬಿ. ಇ ಮಾಡಿ ಕೆಲಸಕ್ಕಾಗಿ ಹುಡುಕಾಡುತ್ತಿದ್ದ.
ಮನುವಿನ ತಾಯಿ ಒಮ್ಮೆ " ವಯಸಿನ ಹುಡುಗ ಬಿಟ್ಟು ಬೇರೆಯವರು ಸಿಗಲಿಲ್ಲವಾ? ನಿಂಗೆ" ಎಂದು ಆಕ್ಷೇಪಿಸಿದರು.
ಮನು ನಕ್ಕು ಬಿಟ್ಟ
" ಅಮ್ಮಾ ನಂಗೆ ಶೈಲಾ ಮೇಲೆ ನಂಬಿಕೆ ಇದೆ ಹಾಗೇನಾದರೂ ಆದರೆ ಆಗ ಶೈಲಾಗೆ ನನ್ನಲ್ಲೇನೋ ಕೊರತೆ ಇದೆ ಅಂತ ಕಂಡಿದೆ ಅಂದ್ಕೋತೀನಿ. ಅಷ್ಟಕ್ಕೂ ಹಾಗೇನೂ ಆಗಲ್ಲ ನೀನು ಸುಮ್ಮನಿರು ಅಮ್ಮ"
ಶೈಲಾ ಮರೆಯಲ್ಲಿದ್ದು ಕೇಳಿಸಿಕೊಂಡಿದ್ದಳು ಆ ಕ್ಷಣಕ್ಕೆ ಅವಳಿಗೆ ನಗು ಬಂತು. ಮನುವನ್ನು ಬಿಟ್ಟು ತಾನು ಛೇ ಎಲ್ಲಾದರೂ ಉಂಟೇ?. ಅತ್ತೆಯ ಸಂಕುಚಿತ ಬುದ್ದಿಗೆ ಬೈದುಕೊಂಡಳು
******************************************************************
ದಡಕ್ಕನೆ ಎದ್ದಳು ಶೈಲಾ ಆಗಲೇ ಐದು ವರೆಯಾಗಿತ್ತು. ಮುಖದಲ್ಲಿದ್ದ ಬೆವರನ್ನ ಒರೆಸಿಕೊಂಡಳು . ಅತ್ತೆಯ ಅನುಮಾನವೇ ನಿಜವಾಯ್ತಲ್ಲವೇ ? ಮತ್ತೆ ಯೋಚಿಸಲು ಧೈರ್ಯ ಬರಲಿಲ್ಲ
ಹಾಲು ತರಬೇಕು.ಪಕ್ಕದಲ್ಲಿದ್ದ ವಿಕಾಸ್ ಇನ್ನು ಮಲಗಿಯೇ ಇದ್ದ. ಎಬ್ಬಿಸಿದರೂ ಆತ ಏಳುವವನಲ್ಲ. ಬೆಳಗ್ಗೆ ಏಳುಘಂಟೆಗೆ ಎದ್ದೇ ಅವನಿಗೆ ಅಭ್ಯಾಸ .ಎದ್ದು ಮುಖ ತೊಳೆದುಕೊಂಡು ಹಾಲಿನಂಗಡಿಯ ಕಡೆ ಹೆಜ್ಜೆ ಹಾಕಿದಳು.
****************************************
ಶೈಲಾ ಕೂಡ ಎಂಟು ಘಂಟೆ ಕಡಿಮೆ ಏಳುತ್ತಿರಲಿಲ್ಲ. ಎದ್ದ ಕೂಡಲೆ ಆಗಲೇ ರೆಡಿಯಾಗಿರುತ್ತಿದ್ದ ಮನುವಿನಿಂದ ಹೂಮುತ್ತನೊಂದು ಪಡೆದು , ಸಿರಿಯನ್ನು ಮುದ್ದಿಸಿಯೇ ಅವಳ ಮುಂದಿನ ದಿನಚರಿ.
ಮುಖ ತೊಳೆದುಕೊಂಡು ಕೂತೊಡನೆ ಆಳು ಜಯ ಕಾಫಿ ಕೊಡುತ್ತಿದ್ದಳು . ಪೇಪರ್ ಓದುತ್ತಾ ಕಾಫಿ ಕುಡಿಯುತ್ತಿದ್ದಂತೆ ಮನು ಕಂಪೆನಿಗೆ ಹೊರಡಲು ಸಿದ್ದನಾಗುತ್ತಿದ್ದ. ಅವನಿಗೆ ಬಡಿಸುವುದು ಮಾತ್ರ ಶೈಲಾ ಕೆಲಸವೇ. ಅಷ್ಟೊತ್ತಿಗಾಗಲೇ ಸಿರಿಯ ಸ್ಜ್ನಾನ ಮುಗಿಸಿ ರಂಗಮ್ಮ ಅವಳನ್ನು ಕರೆತರುತ್ತಿದ್ದರು. ಅತ್ತೆ ಸಿರಿಗೆ ತಿಂಡಿ ತಿನ್ನಿಸುತ್ತಿದ್ದರು. ಆ ವೇಳೆಗೆ ಮನು ಕಂಪನಿಗೆ ಹೊರಡುತ್ತಿದ್ದ
ಅವನ್ನನ್ನು ಬಿಳ್ಕೊಟ್ಟು ಸ್ನಾನ ಮುಗಿಸಿ ಅತ್ತೆಯೊಡನೆ ಒಂದಷ್ಟು ಮಾತಾಡಿ ತಿಂಡಿ ಮುಗಿಸಿ ಸಿರಿಯನ್ನು ಅವರ ಬಳಿ ಕೊಟ್ಟು ಕಂಪ್ಯೂಟರ್ ಬಳಿ ಬಂದು ಕೂರುತ್ತಿದ್ದಳು.ಅಷ್ಟೇ ಅವಳ ಕೆಲಸ ನಡುನಡುವಲ್ಲಿ ಟಿವಿ ನೋಡುತ್ತಿದ್ದಳು. ಬೋರಾದಾಗ ಶಾಪಿಂಗ್‌ ಹೊರಡುತ್ತಿದ್ದಳು . ಆಗಾಗ ಗೆಳೆಯ ಗೆಳತಿಯರ ಜೊತೆ ಚಾಟಿಂಗ್ ಇಷ್ಟು ಅವಳ ಪ್ರಪಂಚವಾಗುತ್ತಿದ್ದವು. ಅದೇ ಸ್ವರ್ಗ ಅವಳಿಗೆ.
********************************************************************
ಹಾಲು ತಂದು ಕಾಯಿಸಲು ಗ್ಯಾಸ್ ಆನ್ ಮಾಡಿದಳು.
ವಿಕಾಸ್ ಹಿಂದಿನಿಂದ ಬಂದು ಅಪ್ಪಿಕೊಂಡ . ಹಾಗೆಯೇ ಅವನ ಎದೆಗೊರಗಿದಳು. "ಹೌ ಆರ್ ಯು ಫೀಲಿಂಗ್? ಶೈಲೂ"
ಅವಳನ್ನು ತನ್ನೆಡೆಗೆ ತಿರುಗಿಸಿಕೊಂಡು ಗಲ್ಲವನ್ನು ಎತ್ತಿದ.
"ಪರವಾಗಿಲ್ಲ ಈಗ"
"ಶೈಲೂ ಸಿರೀನ ಬಿಟ್ಟಿರೋದು ಕಷ್ಟ ಅಂತಾದರೆ ಲೆಟ್ ಅಸ್ ಬ್ರಿಂಗ್ ಹರ್ ಹಿಯರ್ . ಒಬ್ಬ ತಾಯಿಗೆ ಮಗೂನ ಬಿಡೋದು ಎಷ್ಟು ಕಷ್ಟ ಅಂತ ಗೊತ್ತಿದೆ ನಂಗೆ. ನಾನೆ ಅವಳನ್ನ ತುಂಬಾ ಹಚ್ಚಿಕೊಂಡು ಬಿಟ್ಟಿದ್ದೇನೆ"
ಇದು ಅವನು ಕೇಳುತ್ತಿರುವುದು ಅದೆಷ್ಟನೇ ಸಲವೋ ಲೆಕ್ಕವಿಲ್ಲ
ಶೈಲಾ ಬೇಡವೆನ್ನುವಂತೆ ತಲೆ ಆಡಿಸಿದಳು.
"ವಿಕಿ ಅವಳ ಬಾಲ್ಯ ನನ್ನ ಹಾಗೆ ಸುಂದರವಾಗಿರಲಿ ಮನು ಅಪ್ಪ ಅಮ್ಮ ಎರೆಡೂ ಆಗಿ ನೋಡ್ಕೋತಾರೆ ನಂಗೆ ಗೊತ್ತು . ಅವಳಿಗೆ ನನ್ನ ನೆನಪೇ ಬರದ ಹಾಗೆ ಕೇರ್ ತಗೋತಾರೆ . ಸಿರಿ ಅಲ್ಲಿನ ಸಿರಿತನದೊಂದಿಗೇ ಬೆಳೆಯಲಿ."
ಅವಳನ್ನು ಅಪ್ಪಿ ಹಿಡಿದಿದ್ದ ವಿಕಾಸನ ಕೈ ಸಡಿಲಾವದವು.ಅವನ ಎದುರಿಗೆ ಮನುವನ್ನು ಹೊಗಳಬಾರದಿತ್ತೇನೋ ಎಂದನಿಸಿತು.
ಅವನ ಕೈಗಳನ್ನು ತನ್ನ ಸೊಂಟದ ಸುತ್ತ ಬಿಗಿ ಮಾಡುತ್ತಾ "ಸಾರಿ ವಿಕಿ" ಅವನ ಕಣ್ಣನ್ನೇ ನೋಡಿದಳು.
"ಶೈಲಾ ಸಾರಿ ಏಕೆ? ನಾನೆ ನೋಡಿದೀನಿ ಅವರು ನಿನ್ನನ್ನ ಎಷ್ಟು ಪ್ರೀತಿ ಮಾಡ್ತಾ ಇದ್ದರಂತ. ನೆನ್ನೆ ಮನು ನಮ್ಮ ಕಂಪೆನಿ ಮುಂದೇನೆ ಕಾರ್‌ನಲ್ಲಿ ಹೋದರು. ಜೊತೆಗೆ ಸಿರಿ ಸಹಾ. ನಂಗೆ ಯಾಕೋ ಗಿಲ್ಟ್ ಫೀಲಿಂಗ್ ತುಂಬಾ ಬರ್ತಾ ಇದೆ. ಪ್ರೇಮ ಅನ್ಕೊಂಡು ನಾವು ದಾರಿ ತಪ್ಪಿದ್ವಾ ಅಂತ"
ಶೈಲಾಳನ್ನು ಬಿಟ್ಟು ಸೊಫಾಕೊರಗಿದ.
ಶೈಲಾ ಕಣ್ಣಲ್ಲಿ ನೀರು ಚಳಕ್ ಎಂದು ಚಿಮ್ಮಿತು. ಕಣ್ಣಿನ ಹನಿಗಳು ಕಾಣದಂತೆ ಗೋಡೆಯ ಕಡೆ ತಿರುಗಿದಳು
ಮೌನವೇ ರಾಜನಾಗಿತ್ತು. ಕೆಲ ಹೊತ್ತು
*****************************************
ತಾನಂದುಕೊಂಡಿದ್ದ ಸ್ವರ್ಗಕ್ಕಿಂತ ಸುಂದರವಾದುದು ಶೈಲಾಗೆ ವಿಕಾಸ್‌ನ ಮಾತಿನಲ್ಲಿ ಕಾಣಿಸಿತು.ಚುರುಕು ಮಾತಿನ ಸೊಗಸುಗಾರ ವಿಕಾಸ್. ಚಟ ಪಟ ಮಾತು ಪ್ರತಿ ಘಳಿಗೆಗೂ ಹಾಸ್ಯ ತಮಾಷೆ. ಅಂತಹ ಪರಿಸರಕ್ಕೆ ಶೈಲಾ ಒಗ್ಗಿರಲಿಲ್ಲ. ಮನು ಅವಳನ್ನು ಮಗುವಿನಂತೆ ಪ್ರೀತಿಸುತ್ತಿದ್ದ. ಅತ್ತೆ ವಾತ್ಸ್ವಲ್ಯನೀಡುತ್ತಿದ್ದರು. ಆಳು ಕಾಳುಗಳು ಅವಳಿಗೆ ಅಮ್ಮಾವ್ರ ಸ್ಥಾನ ನೀಡಿದ್ದರು. ಆದರೆ ಅವಳೊಬ್ಬ ಮೆಚೂರ್ಡ್ ಹೆಣ್ಣು ಎಂದು ತಿಳಿದು ವರ್ತಿಸುತ್ತಿದ್ದ ವಿಕಾಸ್
ತಾನೊಬ್ಬ ಹೆಣ್ಣು ಎಂಬುದು ವಿಕಾಸನ ಜೊತೆಯಲ್ಲಿ ಪಳಗಿದ ಮೇಲೆ ತಿಳಿಯಿತು. ಕ್ಲಾಸಿನಲ್ಲಿ ತಪ್ಪು ಮಾಡಿದರೆ ದಂಡಿಸುತ್ತಿದ್ದ. ಒಮ್ಮೊಮ್ಮೆ ಜಗಳವನ್ನೂ ಆಡುತ್ತಿದ್ದ. ಆಗಾಗ ಅವಳನ್ನು ಹೊಗಳುತ್ತಿದ್ದ.
ಸರಿಯಾಗಿ ಕಾಣದಿದ್ದರೆ ನೀವು ಚೆನ್ನಾಗಿ ಕಾಣುತ್ತಿಲ್ಲ ಎಂದು ನೇರವಾಗಿ ಹೇಳುತಿದ್ದ. ಇಂಥ ರೀತಿ ಶೈಲಾಗೆ ಹೊಸದು. ಕಾಲೇಜಿನಲ್ಲಿಯೂ ಶೈಲಾಗೆ ಇಂಥ ಅನುಭವಗಳಾಗಿರಲಿಲ್ಲ. ಆಗಾಗ ಸಿನಿಮಾಗಳ ಬಗ್ಗೆ ಚರ್ಚಿಸುತ್ತಿದ್ದ. ಶೈಲಾ ವಿಕಾಸ್‌ಗೆ ಬಹು ಬೇಗ ಮರುಳಾಗಿದ್ದಳು. ತಾನೇನು ಬಯಸುತ್ತಿದ್ದೇನೆ ಎಂಬುದು ಅವಳಿಗೆ ಅರ್ಥವಾಗುತ್ತಿರಲಿಲ್ಲ. ವಿಕಾಸನ ಯೌವ್ವನವನ್ನೇ? ರೂಪವನ್ನೇ? ಮಾತನ್ನೇ? ಎಂಥದೋ ಆಕರ್ಷಣೆ ಅವನಲ್ಲಿ ಕಾಣತೊಡಗಿತು.
ವಯೋ ಸಹಜ ಗಂಭೀರತೆಯನ್ನು ಮೈಗೂಡಿಸಿಕೊಂಡಿದ್ದ ಮನು ಸಪ್ಪೆ ಎನಿಸಲಾರಂಭಿಸಿದ. ವಿಕಾಸನ ತುಂಟತನ ಸಹಜವಾಗಿಯೇ ಸೆಳೆಯಿತು. ಹೊಸ ಲೋಕವನ್ನೇ ಸೃಷ್ಟಿಸುತ್ತಿದ್ದಾನೆ ಎಂದೆನಿಸಿದಾಗಲೆಲ್ಲಾ ಅವನತ್ತ ಕೊಂಚ ಕೊಂಚ ವಾಲತೊಡಗಿದಳು. ಮನುವಿನಿಂದ ದೈಹಿಕವಾಗಿ ಮಾನಸಿಕವಾಗಿ ದೂರವಾಗುತ್ತಿದ್ದಳು.
ವಿಕಾಸ್‍ಗೆ ಇದು ಅರಿವಾಗಲು ಹೆಚ್ಚು ಹೊತ್ತು ಹಿಡಿಯಲಿಲ್ಲ. . ಅವರ ಸುಮಧುರ ದಾಂಪತ್ಯಕ್ಕೆ ತಾನೇ ಗೋರಿ ಕಟ್ಟುತ್ತಿದ್ದೇನೆಂದೆನಿಸಿ ಮನುವಿಗೆ ಯಾವುದೋ ಕಾರಣ ಹೇಳಿ ಊರಿಗೆ ಹೊರಟು ಹೋದ. ಅವಳಿಂದ ತಪ್ಪಿಸಿಕೊಂಡೆ ಎಂದುಕೊಂಡ ಆದರೆ ಹಾಗಾಗಲಿಲ್ಲ
*****************************ಇನ್ನೂ ಇದೆ**********************

Saturday, August 29, 2009

ಎರೆಡು ದಡಗಳ ನಡುವೆ -2

ಘ್ಹಂಟೆ ಏಳಾಗಿತ್ತು
ಶೈಲಾ ಮನೆಗೆ ಬಂದು ಒಂದು ಘಂಟೆ ಯಾಗಿತ್ತು ವಿಕಾಸನ ಸುಳಿವಿರಲಿಲ್ಲ . ಕೋಪವಿದ್ದುದರಿಂದ ಅವನಿಗೆ ಕಾಲ್ ಮಾಡಲು ಹೋಗಲಿಲ್ಲ. ನೋಡೋಣ ಅವನೇ ಕಾಲ್ ಮಾಡಲಿ ಎಂದು ಸುಮ್ಮನಾದಳು
ಫ್ರಿಡ್ಜ್‌ನಲ್ಲಿದ್ದ ಬ್ರೆಡ್ ತಿಂದರಾಯ್ತು ಎಂದುಕೊಂಡು ಯಾವ ಅಡುಗೆಯ ತಂಟೆಗೇ ಹೋಗಲಿಲ್ಲ ಅವಳಿಗೆ ಯಾವ ಅಡುಗೆಯನ್ನೂ ಮಾಡಲು ಬರುವುದಿಲ್ಲ. ಅವಳಾದರೂ ಎಂದು ಅಡುಗೆ ಮಾಡಿದ್ದಾಳೆ?
ಮನುವಿನ ಮನೆಯಲ್ಲಿ ಅತ್ತೆ ಪ್ರೀತಿಯಿಂದ ಮಾಡಿ ಬಡಿಸುತ್ತಿದ್ದರು. ಎಷ್ಟೊಂದು ದಿನಗಳಾಗಿವೆ ಅಂತಹ ರುಚಿ ರುಚಿ ಅಡುಗೆ ತಿಂದು.
ಈ ಒಣಗಿರುವ ಬ್ರೆಡ್ ತಿನ್ನುವಾಗಲೆಲ್ಲಾ ಅತ್ತೆಯ ನೆನಪು ನುಗ್ಗಿ ನುಗ್ಗಿ ಬರುತ್ತಿತ್ತು. ಮತ್ತೆ ಹನಿಗಳು ಕಣ್ಣಂಚಿಗೆ ಬಂದು ನಿಂತವು.
ವಿಕಾಸ್ ನೋಡಿದರೆ ನೊಂದುಕೊಂಡು ಸೀದಾ ಹೋಟೆಲ್‌ಗೆ ಕರೆದೊಯ್ಯುತ್ತಾನೆ ಆದರೆ ತನಗೆ ಹೋಟೆಲ್ ತಿಂಡಿ ಮೊದಲೇ ಇಷ್ಟವಿಲ್ಲ.
ಟಿವಿ ಆನ್ ಮಾಡಿದಳು.

"ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೆ ಅಮ್ಮನು ತಾನೆ"
ಎಂದು ಪುನೀತ್ ಚಿಕ್ಕ ಹುಡುಗನಾಗಿದ್ದ ಹಾಡೊಂದು ಬರುತ್ತಿತ್ತು.ಯಾರಿವನು ಚಿತ್ರದ್ದಿರಬೇಕು.
ಟಿವಿ ಆಫ್ ಮಾಡಿದಳು.
ಅಮ್ಮ ಎನ್ನುವವಳು ದೇವತೆಯೇ? ತನ್ನಮ್ಮ ಭೂಮಿ ಮೇಲೆ ಇರಲಿಲ್ಲ ಹಾಗಾಗಿ ಅವಳು ತನಗೆ ದೇವತೆಯಾಗಿದ್ದಳೆ ಇಲ್ಲವೇ ಎಂಬುದು ಗೊತ್ತಾಗಲಿಲ್ಲ . ಆದರೆ ಮುಂದೆ ತಾನೆ ಅಮ್ಮ ಆದಾಗ ನನ್ನ ಕರ್ತವ್ಯ ನಿರ್ವಹಿಸಿದೆನೇ? ಪ್ರಶ್ನೆಗಳು ಧಾಳಿ ಇಡಲಾರಂಭಿಸಿದವು. ತನ್ನನ್ನು ಸಮರ್ಥಿಸಿಕೊಳ್ಲುವ ಉತ್ತರಕ್ಕಾಗಿ ತಡಕಾಡಿ ಸೋತಳು
**********************************
ವಯಸು ಜಾಸ್ತಿ ಎನ್ನುವುದನ್ನು ಬಿಟ್ಟರೆ
ಮನು ಅಪ್ಪಟ ಚಿನ್ನ . ಚಿನ್ಮಯಿ ಗ್ರೂಪ್ ಅಫ ಕಂಪೆನಿಯ ಸಮಸ್ತ ಆಸ್ತಿಗೂ ಆತನೇ ಒಡೆಯ. ಮನಸು ಬಂಗಾರ. ಅವನ ತಾಯಿಯಂತೂ ಧರೆಗಿಳಿದ ದೇವರೇ ಇರಬೇಕು ಅಂತಹವರು. ಮೊದಲೇ ಮೆತ್ತಗಿದ್ದ ಅವರು ಗಂಡ ಆತನ ತಂಗಿ ಚಿನ್ಮಯಿ ಅಂದರೆ ಶೈಲಾರ ಅಮ್ಮ ಹಾಗು ಶೈಲಾ ಅಪ್ಪ ಕಾರೊಂದರ ಅಪಘಾತದಲ್ಲಿ ಸಿಲುಕಿ ಸತ್ತಾಗ ಜಗತ್ತನ್ನೇ ಕಳೆದುಕೊಂಡವರಂತಾಗಿದ್ದರು. ಆಗಿನ್ನು ಮನುವಿಗೆ ಕೇವಲ ಹದಿನೆಂಟರ ಹರೆಯ . ಈ ಚಿಕ್ಕ ವಯಸಿನಲ್ಲಿಯೇ ಸಂಸಾರದ ಜವಾಬ್ದಾರಿ ಹೆಗಲ ಮೇಲೆರಿತು .ಅವನ ಕಂಪೆನಿಗಳ ಜೊತೆಗೆ ಆರರ ಹರೆಯದ ಶೈಲಾಳ ಜವಾಬ್ದಾರಿ ಹಾಗು ಅವಳ ತಂದೆಯ ಕಂಪನಿಯನ್ನು ನೋಡಿಕೊಳ್ಳಬೇಕಾಯ್ತು. ಮನು ಕಾಲೇಜು ಬಿಟ್ಟ
ತನಗಿದ್ದ ಚಾಕಚಕ್ಯತೆಯನ್ನು ಉಪಯೋಗಿಸಿಕೊಂಡು ಎಲ್ಲವನ್ನೂ ಸರಿ ದೂಗಿಸಿದ. ಬುದ್ದಿವಂತನಾದ್ದರಿಂದ ಎಲ್ಲವನ್ನು ನಿಭಾಯಿಸಿದ . ವಯಸಿನ , ಹಣದ ಅಮಲು ಅವನ ತಲೆಗೇರಲಿಲ್ಲ.
ಶೈಲಗೆ ತಂದೆ ತಾಯಿ ಕೊರತೆಯೇ ತಿಳಿಯಲಿಲ್ಲ. ಅವರಿಗಿಂತ ಹೆಚ್ಚು ಪ್ರೀತಿ, ಕಾಳಜಿ ಈ ಮನೆಯಲ್ಲಿ ಸಿಕ್ಕಿತು. ಅತಿ ಮುದ್ದಿನಿಂದ ಬೆಳೆದಳು. ಅವಳಿಗೇನು ಬೇಕೋ ಅದು ಅವಳು ಕೇಳುವ ಮುಂಚೆಯೇ ಅವಳ ಮುಂದೆ ಹಾಜಾರಾಗುತ್ತಿತ್ತು. ಮಹಾರಾಣಿಗಿಂತ ಒಂದು ಕೈ ಮೇಲೆ ಅವಳ ವೈಭೋಗವಾಗಿತ್ತು. ನೆಮ್ಮದಿ ಮನ ತುಂಬಿತ್ತು.
ಅವಳು ವಯಸಿಗೆ ಬಂದಾಗ ಹದಿನಾಲ್ಕು ವರ್ಷ . ಆಗಲೇ ಮನುವಿನ ಮೇಲೆ ಪ್ರೀತಿ ಮೊಳೆಯಲಾರಂಭಿಸಿತು. ಮನುವಿಗೂ ಅಷ್ಟೇ. ಇಲ್ಲಿಯವರೆಗೆ ಮಗುವಿನಂತಿದ್ದ ಪುಟ್ಟಿ ಮೊಗ್ಗಾಗಿ ಹೂವಾಗಿದ್ದಳು. ಸೌಂದರ್ಯದ ಖನಿ ಅಷ್ಟೆ ಅಲ್ಲಾ ಅವಳ ಮುದ್ದು ಮಾತು, ಹಠ ಎಲ್ಲವೂ ಅವನನ್ನು ಮೋಡಿ ಮಾಡಿತ್ತು. ಇವಳನ್ನು ಬಿಟ್ಟು ಬೇರೆಯವರನ್ನು ಮದುವೆಯಾದರೆ ಎಲ್ಲಿ ಅವುಗಳನ್ನು ಕಳೆದುಕೊಳ್ಳಬೇಕೋ ಎಂದು ಹೆದರಿದ್ದ. ಆದರೆ ವಯಸಿನಲ್ಲಿ ಜಾಸ್ತಿ ಅಂತರವಿದ್ದುದರಿಂದ ಅದನ್ನು ವ್ಯಕ್ತ ಪಡಿಸಲಿಲ್ಲ.
ಆದರೆ ಮನುವಿನ ತಾಯಿ ಇದನ್ನು ಗಮನಿಸಿದರು. ಅವರಾಗಲೇ ನಿರ್ಧರಿಸಿದರು ಶೈಲಾ ತಮ್ಮ ಸೊಸೆಯಾಗಬೇಕೆಂದು.
ಶೈಲಾ ಕಾಲೇಜು ಪದವಿ ಮುಗಿಸಿದಳು. ಅತ್ತೆ ಮದುವೆಯ ಮಾತು ತೆಗೆದಾಗ ಯಾವುದೇ ಮುಚ್ಚು ಮರೆಯಿಲ್ಲದೆ ಮನುವನ್ನು ಮದುವೆಯಾಗುವ ಇಂಗಿತ ವ್ಯಕ್ತ ಪಡಿಸಿದಳು.
ಮನು ಮೊದಲು ತಮ್ಮ ವಯಸಿನ ಅಂತರದ ಬಗ್ಗೆ ಹೇಳಿದ. ಶೈಲಾ ಅದೊಂದು ವಿಷ್ಯವೇ ಅಲ್ಲ ಎಂದಾಗ ಇಬ್ಬರ ಮದುವೆಗೆ ಯಾವ ಆತಂಕವೂ ಇರಲಿಲ್ಲ.
ಮದುವೆ ವಿಜ್ರಂಭಣೆಯಿಂದ ಆಯ್ತು. ಸಡಗರ ಸಂಭ್ರಮ ತುಂಬಿತು
***************************************************************************
ವಿಕಾಸ್ ಮನೆಗೆ ಬಂದಾಗ ರಾತ್ರಿ ಎಂಟು ಘಂಟೆಯ ಮೇಲಾಗಿತ್ತು. ತನ್ನ ಬಳಿ ಇದ್ದ ಕೀ ಉಪಯೋಗಿಸಿ ಬಾಗಿಲು ತೆರೆದ
ಸೋಫಾ ಮೇಲೆ ಹಾಗೆಯೇ ಬಿದ್ದುಕೊಂಡಿದ್ದ ಶೈಲಾಳ ಮೇಲೆ ಕರುಣೆ ಉಕ್ಕಿತು
ರಾಣಿಯಂತೆ ಇದ್ದವಳು. ತಾನೇ ಅವಳ ನೆಮ್ಮದಿಗೆ ಮುಳ್ಳಾದೆನೇ ಎಂದನಿಸಿತು.
ಹತ್ತಿರ ಹೋಗಿ ಅವಳ ಹಣೆಯ ಮೇಲೆ ಕೈ ಇಟ್ಟ.
ಶೈಲಾ ಎಚ್ಚರವಾದಳು.
ಮಾತಾನಾಡಲಿಲ್ಲ ಮುಖವನ್ನು ಸೋಫಾ ಕಡೆ ತಿರುಗಿಸಿ ಮುಖ ಮರೆಸಿದಳು
"ಸಾರಿ ಶೈಲಾ ನಾನು ಹಾಗೆ ಮಾತಾಡಬಾರದಿತ್ತು. ಏನ್ಮಾಡೋದು ಕೆಲಸದ ಒತ್ತಡ. ದಿನಕ್ಕೊಬ್ಬರನ್ನ ಮನೆಗೆ ಕಳಿಸ್ತಾ ಇದ್ದಾರೆ . ಅದೆಲ್ಲಾ ಸೇರಿ ಹೀಗಾಯ್ತು ತಪ್ಪಾಯ್ತು ಚಿನ್ನ " ಅವಳ ಮುಖವನ್ನು ತನ್ನೆಡೆಗೆ ತಿರುಗಿಸಿಕೊಂಡು ಹಣೆಗೆ ಚುಂಬಿಸಿದ.
ಶೈಲಾಳ ಕಣ್ಣಲ್ಲಿ ನೀರು ಕಂಡು ಗಾಭರಿಯಾದ
"ಚಿನ್ನು ಸಾರಿ ಕೇಳಿದೆನಲ್ಲಾ . ಇನ್ಯಾಕೆ ಅಳು?" ಅವಳ ಕಣ್ಣೊರೆಸಿದ
"ವಿಕಿ ನಂಗ್ಯಾಕೋ ಹೋಮ್ ಸಿಕ್‌ನೆಸ್ ಕಾಡ್ತಾ ಇದೆ. ರಿಯಲಿ ಐ ಫೀಲ್ ಆ ಯಾಮ್ ಮಿಸ್ಸಿಂಗ್ ದೆಮ್"
ಬಿಕ್ಕಳಿಸಿದಳು
ವಿಕಾಸನಿಗೆ ಅರ್ಥವಾಯ್ತು.
ಅವನೂ ಅವಳನ್ನು ಆ ನೆನಪುಗಳಿಂದ ಹೊರತರಲು ತನ್ನೆಲ್ಲಾ ಪ್ರಯತ್ನವನ್ನೂ ಮಾಡುತ್ತಿದ್ದ.
"ಚಿನ್ನೂ ಈಗ ನಾವು ಹೊಸ ಬಾಳು ನಡೆಸ್ತಾ ಇದ್ದೀವಿ ದಯವಿಟ್ಟು ಹಳೆಯ ನೆನಪುಗಳ ಹಿಂದೆ ಹೋಗಬೇಡ . ಅದರ ಹಿಂದೆ ನಡೆದರೆ ಬಾಳು ನರಕ ಆಗುತ್ತೆ. ನನ್ನ ಜೊತೆ ಹೆಜ್ಜೆ ಹಾಕು . ಪ್ರತಿ ಹೆಜ್ಜೆಯಲ್ಲೂ ನಾ ನಿನ್ನ ಜೊತೆಗಿರ್ತೇನೆ ಐ ಲವ್ ಯು ಶೈಲೂ ನೀನು ಹೀಗೆ ಮಂಕಾದರೆ ನಂಗೆ ನೋಡಕಾಗಲ್ಲ"
ಶೈಲಾಳನ್ನು ತನ್ನ ಎದೆಗೆ ಒರಗಿಸಿಕೊಂಡ. ಅಷ್ಟು ಬೇಗ ಅವಳಿಗೆ ಸಮಾಧಾನವಾಗುವುದಿಲ್ಲ ಅದು ಅವನಿಗೆ ಗೊತ್ತು ಶೈಲಾಳನ್ನು ತಾನು ಪ್ರೇಯಸಿಯಂತೆ ಕಂಡರೆ ಮನು ಅವಳನ್ನು ಮಗುವಿನಂತೆ ರಮಿಸುತ್ತಿದ್ದ ಅದು ವಿಕಾಸನಿಂದ ಆಗದ ಕೆಲಸ.
ರಾತ್ರಿ ಹೋಟೆಲಿನಿಂದ ಊಟಕ್ಕೆಂದು ತಂದ ತಿಂಡಿ ಹಾಗೆ ಉಳಿಯಿತು.
ಶೈಲಾ ತನ್ನ ಗುಂಗಿನಿಂದ ಹೊರ ಬರಲಿಲ್ಲ.
ವಿಕಾಸ್ ತನ್ನ ನೆನಪುಗಳಲಿ ಮುಳುಗಿದ.
ಅಂದಿನ ರಾತ್ರಿ ಅವರಿಬ್ಬರ ಮನಗಳಲ್ಲಿನ ಯೋಚನೆ ಮಾತ್ರ ಒಂದೇ ಆಗಿತ್ತು
*************************ಇನ್ನೂ ಇದೆ*********************************************************

Tuesday, August 25, 2009

ಎರೆಡು ದಡಗಳ ನಡುವೆ

ಮೊಬೈಲ್ ಟ್ರಿಣ್ ಟ್ರಿಣ್ ಎಂದನ್ನುತ್ತಿದ್ದಂತೆಯೇ ವಿಕಾಸನ ಕಣ್ಣುಗಳು ಆ ಹೆಸರನ್ನು ಓದಿತು .ಶೈಲಾ .... ಇದು ಬೆಳಗಿನಿಂದ ಹತ್ತನೇ ಸಾರಿ.
"ಯಾಕೆ ಮತ್ತೆ ಮತ್ತೆ ಕಾಲ್ ಮಾಡುತ್ತಿದ್ದಾಳೆ . ಇವಳು?"ಪ್ರಶ್ನೆಸಿಕೊಂಡವನಿಗೆ ಉತ್ತರ ಸಿಗಲಿಲ್ಲ
ಕಾಲ್ ರಿಸೀವ್ ಮಾಡಿದ
"ಏನು ಶೈಲಾ?" ಅವನಿಗರಿವಿಲ್ಲ್ದದಂತೆಯೇ ಅವನ ದನಿಯಲ್ಲಿ ಬೇಸರ ಕಾಣಿಸಿತು
"ವಿಕಿ . ಊಟ ಆಯ್ತಾ"ಅಲ್ಲಿಂದ ಅವಳ ದನಿ ಏನೋ ಕೇಳಲೇ ಬೇಕೆ ಎಂಬುದಕ್ಕೆ ಕೇಳಿದ್ದು ವಿಕಾಸನಿಗೆ ರೇಗಿತು.
"ಹ್ಯಾವ್ ಯು ಗಾನ್ ಮ್ಯಾಡ್?. ಇದು ನಾಲ್ಕ್ಕು ಘಂಟೆ ಊಟದ ಸಮಯಾನಾ? ಸುಮ್ ಸುಮ್ನೆ ಕಾಲ್ ಮಾಡಿ ನನ್ನ ಡಿಸ್ಟರ್ಬ್ ಮಾಡಬೇಡ ಏನ್ ಬೇಕು ಅಂತ ಹೇಳು " ವಿಕಾಸ ದನಿಯನ್ನು ಏರಿಸಿದ್ದ ಪಕ್ಕದ ಕ್ಯಾಬಿನ್‌ನಿಂದ ಸಿಮಿ ಎದ್ದು ನಿಂತು ನೋಡಿದ್ದು ಕಾಣಿಸಿತು. ಮುಜುಗರವಾಯ್ತು.
"ಸಾರಿ ವಿಕಿ."
ಫೋನ್ ಆಫ್ ಮಾಡಿದ ಸದ್ದು ಕೇಳಿತು.
ಸಿಮಿ ನೋಡುತ್ತಲೇ ನಿಂತಿದ್ದಳು ಮೊದಲೇ ತನ್ನ ಜೀವನ ನಗೆ ಪಾಟಲಾಗಿದೆ. ಇನ್ನು ಇದು ಬೇರೆ.
ವಿಕಾಸ ತಲೆ ತಗ್ಗಿಸಿದ
ಇತ್ತ
ಶೈಲಾಳ ಕಣ್ಣಲ್ಲಿ ನೀರು ಮುತ್ತುಗಳಂತೆ ಉದುರುತ್ತಿತ್ತು. ಕಂಪ್ಯೂಟರ್ ಕೀ ಬೋರ್ಡ್ ಮೇಲೆ ಬೀಳುತ್ತಿದ್ದುದು ಅವಳ ಗಮನಕ್ಕೆ ಬರಲಿಲ್ಲ.
ಯಾಕೆ ಏನಾಗಿದೆ ತನಗೆ . ಇದು ಸರೀನಾ ? ಮತ್ತೆ ಮತ್ತೆ ಏಕೆ ಅವ ನೆನಪಾಗುತ್ತಿದ್ದಾನೆ . ಮರೆತೆ ಹೋಗುತ್ತೇನೆಂದು ಎದ್ದು ಬಂದಿದ್ದಲ್ಲವೇ ತಾನು ?. ಆ ಬಂಧ ಬೇಡವೆಂದು ತಾಳಿಯ ಸಮೇತ ಕಳಚಿಟ್ಟವಳಲ್ಲವೇ ತಾನು?
ವಿಕಾಸನ ಜೊತೆಯಲ್ಲಿ ಜೀವನವೇ ಸ್ವರ್ಗವಾಗಿದೆ . ಮತ್ತೇಕೆ ಅವನ ನೆನಪು ಬೇಡವೆಂದರೂ ಒದ್ದೊದ್ದು ಬರುತಿದೆ?.
"ಪ್ಲೀಸ್ ಕಮ್ ಆನ್‌ಲೈನ್ " ಅದು ರಾಬರ್ಟನ ಮೇಲ್ ಟೊರೋಂಟೋದ ಕ್ಲೈಂಟ್ ಅವನು.
ಕೂಡಲೇ ಚಾಟಿಂಗ್‌ಗೆ ಸ್ವಿಚ್ ಮಾಡಿದಳು. ಕಣ್ಣಲ್ಲಿನ ನೀರಿನ್ನೂ ಆರಿರಲಿಲ್ಲ.
******************************
ಮೀಟಿಂಗ್ ಮುಗಿಸಿ ಬಂದು ಉಸ್ಸೆಂದು ಕುಳಿತ ವಿಕಾಸನ ದೃಷ್ಟಿ ಆಯಾಚಿತವಾಗಿ ಮೊಬೈಲ್ ಮೇಲೆ ಬಿತ್ತು.
ಆಗಿನಿಂದ ಯಾವುದೇ ಕಾಲ್ ಮಾಡಿಲ್ಲ. ಪಾಪ ಎನಿಸಿತು ಶೈಲಾ.ಛೆ ತಾನೇಕೆ ಇಷ್ಟೊಂದು ಗಡುಸಾಗಿ ವರ್ತಿಸಿದೆ. ಎಷ್ಟು ನೋವಾಯಿತೋ ಏನೋ
ಪಾಪ ಏನ್ ಹೇಳಬೇಕಿತ್ತೋ. ನನಗಾಗಿ ಎಲ್ಲವನ್ನೂ ಎಲ್ಲರನ್ನೂ ತೊರೆದು ಬಂದವಳು . ತನ್ನ ಪ್ರಾಣವ ನ್ನೇ ನನ್ನ ಪ್ರೀತಿಗೆ ಒತ್ತೆ ಇಟ್ಟವಳು. ನನಗಲ್ಲದೆ ಇನ್ನಾರಿಗೆ ಫೋನ್ ಮಾಡಬೇಕು ಅವಳು.
ಶೈಲಾಳಿಗೆ ಕಾಲ್ ಮಾಡಿದ.
ಫೋನ್ ರಿಸೀವ್ ಮಾಡಿದರೂ ಅತ್ತ ಕಡೆಯಿಂದ ಹಲೋ ಬರಲಿಲ್ಲ
"ಹಲೋ ಏಕೆ ಚಿನ್ನ? ಕೋಪಾನಾ. ಸಾರಿ ಕಣೋ ತುಂಬಾ ಬ್ಯುಸಿ ಇದ್ದೆ." ವಿಕಾಸನ ಮಾತಿಗೆ ಪ್ರತಿ ಉತ್ತರ ಬರಲಿಲ್ಲ.
ಬರೀ ನಿಟ್ಟುಸಿರು
ಆವನಿಗೆ ಗೊತ್ತು
ಅವಳು ಹಾಗೆಲ್ಲಾ ಸುಲಭಕ್ಕೆ ಕರಗುವಳಲ್ಲ ಎಂದು. ಆದರೂ ಅದು ಸ್ವಲ್ಪ ಹೊತ್ತು ಎಂಬುದೂ ಗೊತ್ತಿತ್ತು
ಫೋನ್ ಕಟ್ ಮಾಡಿದಳು.
ನಗುತ್ತಾ ಮತ್ತೆ ಫೋನ್ ಮಾಡಿದ.
ಈ ಸಲ ಶೈಲಾ ರಿಸೀವ್ ಮಾಡಲಿಲ್ಲ.

ಮನೆಗೆ ಹೋಗಿ ಮಾತಾಡೋಣ ಎನಿಸಿತು ವಿಕಾಸ್‌ಗೆ
ಮತ್ತೆ ಡಯಲ್ ಮಾಡುವ ಗೋಜಿಗೆ ಹೋಗಲಿಲ್ಲ.
**********************
ಶೈಲಾಗೆ ನಿಜಕ್ಕೂ ವಿಕಾಸನ ಮೇಲೆ ಕೋಪವಿರಲಿಲ್ಲ ಇದ್ದುದೆಲ್ಲಾ ತನ್ನ ಮೇಲೇಯೇ. ತನ್ನ ಬದಲಾಗುತ್ತಿರುವ ಮನಸಿನ ಮೇಲೆ. ತನ್ನ ಭಾವನೆಗಳ ಮೇಲೆ. ತನ್ನ ವರ್ತನೆಯ ಮೇಲೆಯೇ.
ಇದನ್ನು ಯಾರಿಗಾದರೂ ಹೇಳಿದರೆ ಒಂದೋ ಹುಚ್ಚಿ ಎನ್ನುತ್ತಾರೆ ಅಥವ ಬೇರಿನ್ನಾದರೂ ರೋಗದ ಹೆಸರು ಹೇಳಬಹುದು .
ತಲೆಯಮೇಲೆ ಹೊಡೆದುಕೊಂಡು ಮತ್ತೆ ಕೆಲಸದಲ್ಲೀ ತಲ್ಲೀನಳಾದಳು . ಆದರೂ ಆಗಾಗ ಅವನು ಮನು ಮತ್ತೆ ಮತ್ತೆ ನೆನಪಿಗೆ ಬರುತ್ತಿದ್ದಾನೆ.
************************************
ಕಂಪನಿ ಬಿಟ್ಟೊಡನೆ ಓಡೋಡಿ ಶೈಲಾಳನ್ನು ನೋಡುವ ಆಸೆ ಅಧಿಕವಾಗಿತ್ತು. ವಿಕಾಸ್ ಬೈಕ್ ಸ್ಟಾರ್ಟ್ ಮಾಡುತ್ತಿದ್ದಂತೆ ಪಕ್ಕದಲ್ಲಿದ್ದ ಕಾರ್ನಲ್ಲಿ ಮನು ಕಾಣಿಸಿದ . ಅವನು ವಿಕಾಸನೆಡೆಗೆ ನೋಡುತ್ತಲೇ ಇದ್ದಂತೆ ಕಾರ್ ಮುಂದೆ ಹೋಗಿ ಮರೆಯಾಯಿತು. ತಲೆ ಎತ್ತುವ ಧೈರ್ಯವಾಗಲಿಲ್ಲ ವಿಕಾಸ್‌ಗೆ. ಒಂದು ರೀತಿಯ ಅಪರಾಧಿ ಪ್ರಜ್ನೆ ಕಾಡತೊಡಗಿತು. ಮನುವಿನ ನೋಟ ಇವನನ್ನು ಇರಿದಂತೆ ನೋವಾಗತೊಡಗಿತು. ಹೃದಯ ಗೊತ್ತಿಲ್ಲದಂತೆ ಅಧೀರವಾಗತೊಡಗಿತು. ಹಾಗೆಯೇ ಬೈಕ್ ಓಡಿಸುತ್ತಾ ಬಂದಂತೆ ಮನೆಗೆ ಹೋಗುವ ಮನಸು ದೂರ ಹೋಯಿತು. ಪಕ್ಕದಲ್ಲಿ ಕಂಡ ಕಾಫಿ ಡೇಗೆ ನುಗ್ಗಿ ನಿಟ್ಟುಸಿರು ಬಿಡುತ್ತಾ ಕೂತ. ತಲೆ ಧಿಮ್ಮೆಂದಿತು. ಹಾಗೆ ತಲೆ ಒತ್ತಿ ಹಿಡಿದು ಕಣ್ಣು ಮುಚ್ಚಿ ಕುಳಿತ . ಕಣ್ಣ ಮುಂದೆ ನೂರೆಂಟು ಚಿತ್ರಗಳು ತಲೆಯಲ್ಲಿ ನೂರಾರು ಭಾವಗಳು ಕುಣಿಯತೊಡಗಿದವು.

******************************
ಕಾರ್ ಮುಂದೆ ಹೋಗುತ್ತಿದ್ದರೂ ಮನುವಿನ ನೋಟ ಹಿಂದೇಯೇ ಇತ್ತು .
ಎಲ್ಲಾದರೂ ಶೈಲಾ ಕಾಣಬಹುದೆನ್ನುವ ಕಾತುರತೆ ಅದು. ಆದರೆ ಗೊತ್ತು ಅವಳು ಈಗಾಗಲೇ ಈ ಕಂಪನಿ ಬಿಟ್ಟು ಬೇರೊಂದು ಕಡೆ ಸೇರಿದ್ದಾಳೆಂದು. ಅವಳು ಮಾಡಿದ ಅಪಮಾನ ಅವನಿಗೆಂದೂ ಅಪಮಾನವೆನಿಸಲೇ ಇಲ್ಲ. ಸಣ್ಣ ಮಗುವು ಚಂಡಿ ಹಿಡಿದಂತೆ ಬಾಲಿಷ ವರ್ತನೆ ಅದು.
ಬಳಿಯಲ್ಲಿದ್ದ ಸಿರಿಯನ್ನು ಅಪ್ಪಿ ಹಿಡಿದ . ಪುಟ್ಟ ಮಗು ಅಮ್ಮನ ಬಳಿಯಲ್ಲಿ ಇರಬೇಕಾದ್ದು. ಆದರೆ ಮಗುವಿನಂತಹ ಅಮ್ಮ ರಚ್ಚೆ ಹಿಡಿದು ಗೊಂಬೆ ಬದಲಾಯಿಸಿದಂತೆ ಸಂಗಾತಿಯನ್ನು ಬದಲಿಸಿಕೊಂಡಾಗ ಸಿರಿ ತಾನೆ ಏನು ಮಾಡುತ್ತಾಳೆ? ಅರಿವಿಲ್ಲದಂತೆ ಕಣ್ಣು ಒದ್ದೆಯಾಯ್ತು
ಸಿರಿ ತನ್ನ ಪುಟ್ಟಬೆರಳಿನಿಂದ ಅಪ್ಪನ ಕೆನ್ನೆಯ ಮೇಲೆ ಜಿನುಗಿದ್ದ ಹನಿಯನ್ನು ಒರೆಸಿತು.
ಅವಳ ಹಣೆಗೊಂದು ಹೂಮುತು ಕೊಟ್ಟು ಎದೆಗೊರಗಿಸಿಕೊಂಡ.
ಕನ್ನಡಿಯಲ್ಲಿ ಈ ದೃಶ್ಯ ನೋಡಿ ಡ್ರೈವರ್ ರಾಮುವಿನ ಕಂಗಳು ತುಂಬಿದವು.

****************************************************

ಶೈಲಾ ಮನುವಿಗೆ ಸೋದರತ್ತೆಯ ಮಗಳು ಇಬ್ಬರ ವಯಸಿನ ಅಂತರ ಹನ್ನೆರೆಡು ವರ್ಷಗಳು . ಶೈಲಾ ಮನುವಿನ ಮಡಿಲಲ್ಲಿಯೇ ಬೆಳೆದವಳು. ತಾಯಿ ಇಲ್ಲದ ಮಗುವೆಂದು ಸೋದರತ್ತೆ ಬಹಳ ಪ್ರೀತಿಯಿಂದ ನೋಡಿಕೊಂಡಿದ್ದರು. ಅದಕ್ಕಿಂತ ಹೆಚ್ಚಾಗಿ ಮನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ.
ರೆಪ್ಪೆಯಂತೆ ಕಣ್ಣಿನಂತೆ ಜೋಪಾನ ಮಾಡಿದ್ದ. ಅವಳೂ ಅಷ್ಟೇ ಮನುವಿನ ಸಾಂಗತ್ಯದಲ್ಲಿ ತನ್ನ ತಾಯಿ ಇಲ್ಲದ ನೋವನ್ನು ಮರೆಯುತ್ತಿದ್ದಳು
*********************************** ಇನ್ನೂ ಇದೆ .*********************

ಕಳಂಕಿತೆಯ ಮುಂದುವರೆದ ಭಾಗ ತಮ್ಮ ವಿನಯನಿಂದ

[ನಾನು ಕಥೆ ಮುಂದುವರೆಸಲಾಗದೇ ಒದ್ದಾಡುತ್ತಿದ್ದಾಗಲೇ ತಮ್ಮ ವಿನಯ ಈ ಕತೆಯನ್ನು ಹೀಗೆ ಮುಗಿಸಿದ್ದಾನೆ over to vinay]
ಕೆಲಸ ವಿಲ್ಲದ ಆಚಾರಿ ಏನೋ ಮಾಡಿದನಂತೆ ಹಾಗೆ ಸ್ವಲ್ಪ ಫ್ರೀ ಇದ್ದೆ ಅದಕ್ಕೆ ಏನೇನೋ ಗಿಚಿದ್ದೇನೆ , ಫ್ರೀ ಇದ್ದಾಗ ಓದಿ . ನಿಮ್ಮ ಕಥೆಗೆ ನಾ ಬರೆದ ಕ್ಲೈಮ್ಯಾಕ್ಸ್. ವ್ಯಾಕರಣ ತಪ್ಪಿದೆ , ಬರೆಯೋವಷ್ಟು ವ್ಯವಧಾನ ವಿರಲಿಲ್ಲ , ಹಾಗೆ ಸುಮ್ಮನೆ ಬಿಡಲು ಕೂಡ ]

ಎಷ್ಟು ಸುತ್ತಿದರೂ ಗಾಣದ ಎತ್ತಿಗೆ ಚಾಟಿಯ ಏಟು ತಪ್ಪಿದ್ದಲ್ಲ ಅನ್ನೋ ಹಾಗೆ ಒಂದು ಮುಗೀತು ಅನ್ನೋವಷ್ಟರಲ್ಲಿ ಇನ್ನೊಂದು ಬಂದು ಅಪ್ಪಳಿಸಿ ಸುಧಾಕರನನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಜರ್ಜರಿತ ಗೊಲಿಸತೊಡಗಿತು. ಮೊದಲು ಹೆಂಡತಿಯ ಮೇಲೆ ಆತ್ಯಾಚಾರ , ಅನಂತರ ಅಮ್ಮನ ಮೇಲು ಇಂತದ್ದೆ ಒಂದು ಕಳಂಕ ಬಂದಿತ್ತೆಂಬ ಸತ್ಯದ ಅರಿವು, ಈಗ ನಾನು ಯಾರನ್ನು ೩೦ ವರ್ಷದಿಂದ ಅಮ್ಮ ಎಂದು ಪ್ರಿತಿಸುತಿದ್ದೇನೋ ಆ ಅಮ್ಮ ನನ್ನಮ್ಮ ಅಲ್ಲ ಎಂಬ ಕಟ್ಹೊರ ಸತ್ಯ , ಒಂದು ರೀತಿಯಲ್ಲಿ ಗುಡುಗು ಸಿಡಿಲು ಗಳೊಂದಿಗೆ ಬಂದೆರಗಿದ ಕುಂಭದ್ರೋಣ ಮಳೆಯನಾಗಿತ್ತು ಇವೆಲ್ಲವೂ ಅವನಿಗೆ. ಮನಸಿನಲ್ಲಿ ಎಲ್ಲವೂ ತಿಳಿಯಿತಲ್ಲ ಅನ್ನೋ ಯೋಚನೆ ಬಂದರೂ ಮುಂದೆ ಇನ್ನು ಏನು ಕಾದಿದೆಯೋ ಅಂತ ಅಮ್ಮನ ಮುಖವನ್ನೇ ನೋಡುತ್ತಾ ಕುಳಿತ.ಅವನ ನಿರೀಕ್ಷೆ ಹುಸಿ ಮಾಡದಂತೆ ರಮಾ ಮುಂದುವರೆಸಿದರು. ನಿನ್ನ ತಾಯಿನೇ ಅದು ಅಂತ ಹೇಳಿದೆ ಹೊರತು ಅದು ನಾನಲ್ಲ ಅಂತ ಶುರು ಮಾಡಿಕೊಂಡರು ರಮಾ. ಅವರ ಬದುಕು ಎಂಬ ಇತಿಹಾಸದ ಒಂದೊಂದೇ ಪುಟಗಳನ್ನ ತಿರುವಿ ಹಾಕ ತೊಡಗಿದರು ರಮಾ. ಇವನ ಅಮ್ಮನ ಮೇಲೆ ಅತ್ಯಾಚಾರ ವೆಸಗಿದ ವ್ಯಕ್ತಿ ಬೇರಾರು ಅಲ್ಲ ತನ್ನ ಗಂಡ ಶಿವಾನಂದನೆ ಅನ್ನೋ ಮಾತು ಹೇಳೋವಾಗಲಂತೂ ತಾನು ಇನ್ನು ಬದುಕಿರಬೇಕಿತ್ತ ಅನ್ನೋ ಹಾಗೆ ಆಗಿ ಹೋಗಿತ್ತು ರಮಾ ಅವರಿಗೆ. ಕಲಾ ( ಸುಧಾಕರನ ಹೆತ್ತ ತಾಯಿ) ಚಂದ್ರುವಿನೊಡನೆ ಸುಖವಾಗಿ ಇದ್ದಂತೆ ಕಾಣುತ್ತಿದ್ದಲಾದಳು ಅದು ತೋರಿಕೆ ಅಷ್ಟೇ ಆಗಿತ್ತು.ಚಂದು ಮೊದ ಮೊದಲು ಚೆನ್ನಾಗೆ ಇದ್ದರೂ ಬರುಬರುತ್ತಾ ಇವಳ ಹೊಟ್ಟೆಯಲ್ಲಿ ಬೆಳೆಯುತಿದ್ದ ಮಗುವನ್ನು ನೋಡಿ ಹುಚ್ಹನಂತೆ ವರ್ತಿಸ ತೊಡಗಿದ್ದ, ಜೊತೆಗೆ ಕುಡಿತ ಬೇರೆ ಸೇರಿಹೋಯಿತು.ಇನ್ನೇನು ಹೆರಿಗೆಯ ದಿನಗಳು ಹತ್ತಿರ ಬರುತ್ತಿವೆ ಅನ್ನೋವಷ್ಟರಲ್ಲಿ ಅವನ ಈ ಪೈಶಾಚಿಕ ವರ್ತನೆ ಮಿತಿ ಮಿರಿ ಹೋಯಿತು. ನಡು ರಾತ್ರಿ ಹೊರಗಡೆ ಬಾರಿ ಮಳೆ ಆ ವೇಳೆಯಲ್ಲೇ ಮನೆಗೆ ಬೇರೊಬ್ಬ ಹೆಂಗಸಿನೊಂದಿಗೆ ಬಂದ ಚಂದ್ರು ಯಾವ ಸೂಚನೆಯನ್ನು ಕೊಡದೆ ಆ ಗರ್ಭಿಣಿಯನ್ನು ಹೊರ ಎಸೆದಿದ್ದ. ಮೊದಲೇ ತುಂಬು ಗರ್ಭಿಣಿ ಹೇಗೋ ಸುಧಾರಿಸಿಕೊಂಡು ಅಲ್ಲೇ ಸ್ವಲ್ಪ ದೂರ ಇರುವ ಸರ್ಕಾರಿ ದವಾಕಾನೆಗೆ ಬಂದಿದ್ದಳು, ಅವಳ ಅದೃಷ್ಟವೋ ಏನೋ ಸ್ವಲ್ಪ ಎದೆ ನೋವು ಎಂದು ಅದೇ ಅಪರಿಚಿತ (ಶಿವಾನಂದ) ಅಲ್ಲಿ ಸೇರಿಕೊಂಡಿದ್ದ.ಅವನನ್ನು ನೋಡಿಕೊಳ್ಳಲು ಬಂದ ರಮಾ ಕೂಡ ಅಲ್ಲೇ ಇದ್ದಳು. ಸವತಿಯಾಗಿ ಸ್ವಿಕರಿಸಲು ಇಷ್ಟವಿಲ್ಲದಿದ್ದರೂ ಕಲಾ ಮೇಲೆ ಅವಳಿಗೆ ಯಾವುದೇ ವೈಯಕ್ತಿಕ ದ್ವೇಷ ಇರಲಿಲ್ಲ , ತನ್ನ ಗಂಡನಿಂದಾಗಿ ಹೀಗಾಯಿತಲ್ಲ ಅನ್ನೋ ನೋವು ಮಾತ್ರ ಇತ್ತು. ಸಾವು ಮತ್ತು ಬದುಕಿನ ನಡುವೆ ಹೋರಾಟ ಮಾಡುತ್ತಾ ಅಲ್ಲಿಗೆ ಬಂದ ಕಲಾಳನ್ನು ತಾನೇ ಅಲ್ಲಿ ಸೇರಿಸಿ ಹೇಗಾದರು ಮಾಡಿ ಅವಳನ್ನು ಉಳಿಸಿಕೊಳ್ಳಬೇಕು ಅನ್ನೋ ಪಣ ತೊಟ್ಟಿದ್ದಳು ರಮಾ. ಅವಳು ಎಣಿಸಿದ್ದೆ ಒಂದು ವಿಧಿ ಬರೆದಿದ್ದೆ ಒಂದು ಆಗಿತ್ತು , ತೀವ್ರ ಎದೆ ನೋವಿನಿಂದ ಒಂದು ಕಡೆ ಶಿವಾನಂದ ಕೊನೆ ಉಸಿರೆಳೆದರೆ , ಬದುಕೇ ಬೇಡ ಎಂದುಕೊಂಡಿದ್ದ ಕಲಾ ಮತ್ತೊಂದು ಕಡೆ ಇಹ ವನ್ನು ತ್ಯಜಿಸಿಆಗಿತ್ತು. ಇವರಿಬ್ಬರ ಕುರುಹು ಅಂತ ಉಳಿದಿದ್ದು ಒಂದೇ ಅದೇ ಈಗ ಸುಧಾಕರ ಅನ್ನಿಸಿಕೊಂಡಿರೋ ಆ ಹಸುಳೆ ಅನ್ನೋ ಮಾತು ಹೇಳಿ ಮುಗಿಸುವಷ್ಟರಲ್ಲಿ ರಮಾಗೆ ಸಾಕು ಸಾಕಾಗಿ ಹೋಗಿತ್ತು. ಬಲೆಯಲ್ಲಿ ಸಿಕ್ಕ ಮೀನಿನಂತೆ ಎಷ್ಟು ಹಾರಿದರು ಮತ್ತೆ ಅದೇ ಬಲೆಯೊಳಗೆ ಬಿಳುವಾನ್ತಾಗಿತ್ತು ಸುಧಾಕರನ ಪರಿಸ್ಥಿತಿ ,ಇನ್ನು ಅಲ್ಲಿ ಮಾತಿಗೆ ಬೆಲೆ ಇಲ್ಲ ಎಂದು ಅರಿತ ರಮಾ ಹೊರ ಹೋಗಿ ಆಗಿತ್ತು. ಪಿಸು ಪಿಸು ದ್ವನಿ ಕೇಳಿ ಹೊರ ಬಂದಿದ್ದ ಪ್ರೀತಿಗೆ ಎಲ್ಲ ಅರಿವಾಗಿತ್ತು. ಮರುದಿನ ಬೆಳಿಗ್ಗೆ ೫ ಕ್ಕೆ ಎದ್ದು ಜಾಗಿಂಗ್ ಗೆ ಅಂತ horaಟ ಸುಧಾಕರ ತನ್ನ ಓಟ ವನ್ನ ನಿಲ್ಲಿಸುವುದಿಲ್ಲ ಅನ್ನೋ ಅರಿವು ಮುಗ್ಧ ಅತ್ತೆ ಸೊಸೆಗೆ ತಿಳಿದಿರಲಿಲ್ಲ.ಅವನ್ ಹಿಂದೆಯೇ ಪ್ರೀತಿ ಎಂಬ ಹುಡುಗಿಯ ಭವಿಷ್ಯದಲ್ಲಿ ಮತ್ತೆ ಏಳಬಹುದಾದ ಇತಿಹಾಸ ಗಳೆಂಬ ಈ ಕತೆಗಳು ಮಾರೆಯಾಗುತಿದ್ದುದ್ದು ಸ್ಪಷ್ಟವಾಗಿ ಗೋಚರವಾಗುತಿತ್ತು.
ಇಂತಿ ವಿನಯ

Wednesday, August 5, 2009

ಕಳಂಕಿತೆಯನ್ನು ಮುಂದುವರೆಸಲು ಮನಸು ಬರುತ್ತಿಲ್ಲ ಕ್ಷಮಿಸಿ

ಆತ್ಮೀಯ ಸ್ನೇಹಿತರೆ
ಇಲ್ಲಿಯವರೆಗೂ ಕಳಂಕಿತೆಗೆ ಒಂದು ಅಂತ್ಯ ಬರೆಯಲಾಗುತ್ತಿಲ್ಲ. ಇದು ನನ್ನ ಆತ್ಮೀಯ ಸ್ನೇಹಿತೆಯೊಬ್ಬಳ ಬಾಳಿನ ಭಾಗಶ: ಚರಿತ್ರೆ. ಅವಳನ್ನು ನೆನಪಿಟ್ಟುಕೊಂಡು ಇದನ್ನ ಬರೆದೆ ಆದರೆ ಅವಳಾಗಲೇ ಗಂಡನಿಂದ ಕಳಂಕಿತೆ ಎಂದು ಪರಿತ್ಯಕ್ತಳಾಗಿದ್ದಾಳೆಂದು ತಿಳಿದ ಮೇಲೂ ನನ್ನ ಕಥೆಯನ್ನು ಸುಖಾಂತ್ಯ ಗೊಳಿಸಲು ಮನಸಾಗಲಿಲ್ಲ. ಹಾಗೆಂದು ವಿಪರ್ಯಾಸದ ಅಂತ್ಯ ತೋರಿಸುವುದು ಉತ್ತಮವಲ್ಲ ಅನ್ನಿಸಿತು. ಹಾಗಾಗಿ ಮನಸು ಗೊಂದಲದ ಗೂಡಾಗಿತ್ತು .
ಕೊನೆಗೂ ನಿರ್ಧರಿಸಿದೆ ಇದರ ಅಂತ್ಯ ಮಾಡಲೇಬಾರದೆಂದು
ಮುಂದೆಂದಾದರೂ ಬಾಳಿನಲ್ಲಿ ಇಂತಹ ಸಂದರ್ಭದಲ್ಲೂ ಹೆಂಡತಿಯನ್ನುಹೆಂಡತಿಯನ್ನಾಗಿಯೇ ಸ್ವೀಕರಿಸುವವರನ್ನು ಕಂಡರೆ ಇದನ್ನು ಸುಖಾಂತ್ಯಗೊಳಿಸುತ್ತೇನೆ . ಈ ನಡುವೆ ನಿಮಗಾರಿಗಾದರೂ ಇದರ ಅಂತ್ಯ ಭಿನ್ನವಾಗಿ ಹೇಳುವ ಕಲ್ಪನೆ ಇದ್ದರೆ ಅದಕ್ಕೆ ಸ್ವಾಗತ
ನನ್ನ ಮೇಲ್ ಐಡಿ roopablrao@nobleeducation.org

Friday, July 17, 2009

ಕಳಂಕಿತೆ- ಭಾಗ ೨

ಅದು ಮದುವೆಯ ಹಾಲ್. ನಾಳೆ ಮದುವೆ . ವಧು ಗೆಳತಿಯರ ಛೇಡನೆಯಿಂದ ನಾಚಿ ನೀರಾಗಿದ್ದಳು. ಕಣ್ಣ ಮುಂದೆ ಬಣ್ಣದ ಬದುಕಿನ ಚಿತ್ತಾರ. ಮನದಲ್ಲಿ ನಲ್ಲನಾಗುವವನ ಬಗ್ಗೆ ನೂರಾರು ಕಲ್ಪನೆಯ ನವಿಲಿನ ನೃತ್ಯ. ಇವುಗಳ ಜೊತೆಯಲ್ಲಿ ಕೈಗೆ ಮದರಂಗಿ ಹಚ್ಚಿಸಿಕೊಳ್ಳುತ್ತಾ ಕುಳಿತ್ತಿದ್ದಳು ಆ ಹುಡುಗಿ ಇನ್ನೂ ಹದಿನೆಂಟರ ಹಸಿ ಮೈ ಹೊತ್ತು . ಬಟ್ಟಲಕಂಗಳಿಗೆ ಹಚ್ಚಿದ ಕಾಡಿಗೆ ಅವಳ ಕಣ್ಣುಗಳ ಸೌಂದರ್ಯಕ್ಕೆ ಸೋತು ಸೊರಗಿತ್ತು. ಅವಳ ಬಿಳುಪಿಗೆ ತಾನೇನು ಸಮವಲ್ಲ ಎಂದು ಪೌಡರ್ ಸಹ ಮಾಸಲಾಗಿತ್ತು. ಕೋಣೆಯಲ್ಲಿದ್ದ ಬೆಳಕು ತನಗ್ಯಾವ ಪ್ರತಿಸ್ಪರ್ಧಿ ಎಂದು ಇವಳ ಇವಳ ನಗುವನ್ನೇ ನೋಡುತ್ತಾ ಮಂದವಾಗಿತ್ತು.

ಅಂತಹ ಚೆಲುವೆ ಆ ಹುಡುಗಿ ಕೆನ್ನೆಯೆಲ್ಲಾ ಕೆಂಪಾಗಿತ್ತು.ಬೆಳಗಿನಿಂದ ನಡೆಸುತ್ತಿದ್ದ ಪೂಜೆ ಗಳನ್ನೆಲ್ಲಾ ಮುಗಿಸಿ ಈಗ ಗೆಳತಿಯರೊಡನೆ ಮಾತನಾಡುತ್ತಾ ಮೇಲಿನ ಕೋಣೆಗೆ ಬಂದಿದ್ದಳು.

ಬರೀ ಹುಡುಗಿಯರು

ಹಿರಿಯರು ಮಾತುಗಳಲ್ಲಿ ಮುಳುಗಿದ್ದರು. ಹೆಂಗಸರು ನಾಳಿನ ಶಾಸ್ತ್ರಕ್ಕೆ ಬೇಕಾದ ಅಣಿ ತಟ್ಟೆ ಅದು ಇದು ಸಿದ್ದ ಮಾಡುತ್ತಿದ್ದರು. ಕೆಲವರು ತಿರುಗಾಟಕ್ಕೆ ಹೋಗಿದ್ದರು. ಯುವಕರು ಇಸ್ಪೀಟ್ ಆಡಲು ತಾರಸಿಯ ಮೊರೆ ಹೋಗಿದ್ದರು.

ಒಟ್ಟಿನಲ್ಲಿ ನಗುವಿನ ಅಲೆ, ಗದ್ದಲ ಕೇಳುತ್ತಿದ್ದರೂ ಮದುವೆಯ ಹಾಲ್‌ನಲ್ಲಿ ಕಾಣುತ್ತಿದ್ದುದು ಒಂದೋ ಎರೆಡು ತಲೆಗಳು ಮಾತ್ರ.

ಆಗಲೇ ಆ ವ್ಯಕ್ತಿ ಪ್ರವೇಶಿಸಿದ. ದೃಡಕಾಯದ ಆ ವ್ಯಕ್ತಿ ಒರಟ ಎಂದು ನೋಡಿದೊಡನೆಯೇ ಹೇಳಬಹುದಾಗಿತ್ತು . ಎಲ್ಲವೂ ತಿಳಿದವನಂತೆ ಸೀದ ಆ ಹುಡುಗಿಯಿದ್ದ ಕೋಣೆಗೆ ನುಗ್ಗಿದ

ಅಪರಿಚಿತನ ಆಗಮನಕ್ಕೆ ಯುವತಿಯರು ದಂಗಾದರು. ಹುಡುಗಿ ಇವನನ್ನು ನೋಡಿದೊಡನೆಯೇ ಬೆವೆತು ಹೋದಳು ಈತ ಇಲ್ಲಿ ಬರುತ್ತಾನೆಂಬ ಕಲ್ಪನೆಯೂ ಇರಲಿಲ್ಲ.ಆತನಿಗಾಗಿದ್ದ ಅವಮಾನಕ್ಕೆ ಆತ ಮರಳಿ ಬರುತ್ತಾನೆಂಬ ಯೋಚನೆಯೂ ಇರಲಿಲ್ಲ. ಮದುವೆಯಾಗೆಂದು ಪೀಡಿಸಿದವನು ಅವನು . ಅಣ್ಣ(ಅಪ್ಪ)" ಹಾಳು ಬಾವಿಗಾದರೂ ತಳ್ಳುತ್ತೇನೆ ನಿನ್ನ ಕೈಗೆ ಕೊಡುವುದಿಲ್ಲ "ಎಂದು ನಿಷ್ಟುರವಾಗಿ ನುಡಿದ್ದಿದ್ದರು. ಕುತ್ತಿಗೆ ಹಿಡಿದು ತಳ್ಳಿದ್ದರು.ಕೈ ಹಿಡಿದ ಹೆಂಡತಿಯ ಮಾತುಕೇಳದೆ ಇವಳನ್ನು ಹಿಂಸಿಸುತ್ತಿದ್ದ. ಒಟ್ಟಾರೆ ಕ್ರೂರಿ ಆತನೊಂಥರ.

ಅಣ್ಣಾ ಎಂದು ಕಿರುಚಲು ಬಾಯಿ ಅಗಲಿಸಿದಳು ಕೂಡಲೆ ಕಬ್ಬಿಣದಂಥ ಮುಷ್ಟಿಯೊಂದು ಅದನ್ನು ಅದುಮಿತು.ಕೈಲಿದ್ದ ಚೂರಿ ತೋರಿ ಆ ಯುವತಿಯರನ್ನೆಲ್ಲಾ ಹೆದರಿಸಿ ಹೊರಗಡೆ ಕಳಿಸಿದ. ಬಾಗಿಲು ಚಿಲಕ ಹಾಕಿದ್ದು ಕೇಳಿಸಿತು.

ಹುಡುಗಿಯ ಗೆಳತಿಯರು ಚೀರಲಾರಂಭಿಸಿದರು. ಒಳಗಿನಿಂದ ಹುಡುಗಿಯ ಅರಚಾಟ, ವಸ್ತುಗಳು ಬೀಳುತ್ತಿದ್ದ ಶಬ್ಧ ಕೇಳುತ್ತಿತ್ತು.ಕೆಳಗಡೆ ಇದ್ದ ಹಿರಿಯರು ಓಡಿ ಬಂದರು.. ಮೇಲಿದ್ದ ಯುವಕರನ್ನ ಕರೆಯಲು ಒಂದು ಗುಂಪು ತಾರಸಿಯ ಕಡೆ ನುಗ್ಗಿತು.

ಅವರಿಗೆ ವಿವರಿಸಿ ಹೇಳಿ ಮುಚ್ಚಿದ್ದ ಬಾಗಿಲ ಕಡೆ ಕೈ ತೋರಿದರು

ಬಾಗಿಲನ್ನು ದಬ ದಬ ಬಡಿಯಲಾರಂಭಿಸಿದರು

ಅಷ್ಟ್ರಲ್ಲಿ ವರ ಹಾಗು ಅವನ ಗೆಳೆಯರು ಬಂದು ಬಾಗಿಲು ಮುರಿಯಬೇಕೆಂದಾಗಲೇ ಬಾಗಿಲು ತೆರೆಯಿತು.ಎಲ್ಲರೂ ದಂಗಾಗಿ ನಿಂತರು

ಆ ಅಪರಿಚಿತ ನಲುಗಿ ಹೋಗಿದ್ದ ಹೂವೊಂದನ್ನು ಅವರುಗಳ ಮೇಲೆಸೆದ.

ಅವನ ಹಿಂದೆಯೇ ಹುಡುಗಿಯೂ ಬಾಡಿ ಹೋಗಿ ಮಂಚದ ಮೇಲೆ ಬಿದ್ದಿದ್ದು ಕಾಣಿಸಿತು

ಹುಡುಗಿಯ ತಂದೆ ಸ್ಥಂಬೀಭೂತರಾದರು. ಆ ಅಪರಿಚಿತನ ಕಣ್ಣಲ್ಲಿ ಗೆಲುವಿನ ನಗೆ ಅದೆಂಥದ್ದೋ ಪಡೆದ ವಿಕೃತಿಯ ತೃಪ್ತಿ.

"ಏನು ಶಾನುಭೋಗರೆ ನಿಮ್ಮಗಳು ಹಾಳಾಗಿದ್ದಾಳೆ ಅವಳನ್ನು ನಾನು ಕೆಡಿಸಿದ್ದೇನೆ. ಈಗ ಇವಳನ್ನು ಮದುವೆಯಾಗೋಕೆ ನಿಮ್ಮ ಸೋದರಳಿಯ ರೆಡಿ ಇದಾನಾ ಕೇಳಿ?"

ವರ ಹಾಗು ಶಾನುಭೋಗರ ಸೋದರಳಿಯ ನೆಲ ನೋಡಿದ. ಅವನ ತಾಯಿ ಮಾತಾಡಿದಳು

"ಅಣ್ಣ . ಹಿಂಗಾಗಬಾರದಿತ್ತು ಆದರೇನು ಮಾಡೋದು. ನಾವಿನ್ನು ಈ ವಿಷ್ಯದಲ್ಲಿ ಮುಂದುವರೆಯೋಕೆ ಆಗಲ್ಲ . ಇನ್ನೇನು ಮಾಡೋಕಾಗಲ್ಲ. ನಾಯಿ ಮುಟ್ಟಿದ ಮಡಿಕೆ ಅದಕ್ಕೆ ಕಟ್ಟಿ ಕಳಿಸಬೇಕಷ್ಟೆ. "
ಆ ಒರಟನ ಹೆಂಡತಿಯ ಹೃದಯ ವಿಲ ವಿಲ ಒದ್ದಾಡಿತು.ತನ್ನ ಗಂಡ ತಂಗಿಯ ಜೀವನವನ್ನೇ ಹಾಳು ಮಾಡಿದನಲ್ಲ ಎಂಬ ಸಂಕಟದ ಜೊತೆಗೆ ಅವಳು ತನ್ನ ಸವತಿಯಾಗಬೇಕಾಯ್ತಲ್ಲ ಎಂಬುದಕ್ಕೆ.
ಶಾನುಭೋಗರು ತಲೆ ಎತ್ತಿದರು
ಅವರ ಕಣ್ಣಲ್ಲಿ ರೋಷ ಆವೇಶ ಕಂಡಿತು.
"ಮುಂಡೇ ಮಗನೇ ನಾನವತ್ತೇ ಹೇಳಿದನಲ್ಲ ಅವಳನ್ನ ಹಾಳು ಬಾವಿಗಾದ್ರೂ ನೂಕ್ತೀನಿ ಆದರೆ ನಿಂಗೆ ಮದುವೆ ಮಾಡಲ್ಲ ಅಂತ. ಒಬ್ಬ ಮಗಳ ಜೀವನದ ಜೊತೆ ಆಟ ಆಡಿ ಅವಳನ್ನ ಕಣ್ಣೀರ ಕೊಳದಲ್ಲಿ ಮುಳುಗಿಸಿದ್ದೀಯಾ. ಆ ಪಾಪಾನೇ ಇನ್ನೂ ನನ್ನ ಬಿಟ್ಟಿಲ್ಲ ಈಗ ಇವಳನ್ನ ಕೊಟ್ಟು ನಾನ್ಯಾವ ನರಕಕ್ಕೆ ಹೋಗಲಿ?ಇಲ್ಲ ನನ್ಮಗಳು ನಿಂಗೆ ದಕ್ಕಲ್ಲ ಅವಳು ವಿಷ ಕುಡಿದು ಸಾಯ್ತಾಳೆ ಹೊರತು ನಿನ್ಮದುವೆಯಾಗಲ್ಲ"
ಆವೇಗದಿಂದ ಎದೆ ನೋವು ಕಂಡಿತು. ಮೊದಲೆ ಮೊದಲನೆ ಮಗಳ ನರಕದ ಜೀವನದಿಂದ ನೊಂದಂಥ ಜೀವ ಅದು. ಈ ಆಘಾತವನ್ನು ತಾಳಲಾಗಲಿಲ್ಲ.
ಎದೆ ನೋವು ತೀವ್ರವಾಗಿ ಅವರು ಕುಸಿದು ಬಿದ್ದರು.
ಬಿದ್ದವರು ಮತ್ತೆ ಏಳಲಿಲ್ಲ
ಸುಮಾರು ದಿನಗಳಾದವು. ಮೊದಲೇ ತಾಯಿ ಇಲ್ಲದ ಜೀವ ಆ ಹುಡುಗಿ . ಈಗ ತಂದೆಯನ್ನೂ ಕಳೆದುಕೊಂಡಿದ್ದಳು. ಈ ನರಕಕ್ಕೆ ತನ್ನ ಗಂಡನೇ ಕಾರಣನಾದ್ದರಿಂದ ಅವಳನ್ನು ಮನೆಗೆ ಕರೆದುಕೊಂಡು ಇರಲು ಆ ಹುಡುಗಿಯ ಅಕ್ಕ ಹಿಂಜರಿದಳು
ಸೋದರತ್ತೆಯ ಮನೆಯಲ್ಲಿಯೇ ಇದ್ದ ಹುಡುಗಿಗೆ ಮೂದಲಿಕೆಯ ಮಾತುಗಳು ಶುರುವಾದವು. ಮಗನಿಗೆ ಮದುವೆ ಮಾಡಬೇಕಾದ್ದರಿಂದ ಸೋದರ ಸೊಸೆ ತಮ್ಮ ಮನೆಯಲ್ಲಿ ಇರುವುದು ಅವರಿಗೆ ಬೇಡವಾಗಿತ್ತು . ಆದ್ದರಿಂದ ಅಪ್ಪ ಸತ್ತ ಮೂರು ತಿಂಗಳಲ್ಲಿ ಮಗಳ ಮದುವೆ ಮಾಡಬಹುದೆನ್ನುವ ಶಾಸ್ತ್ರದ ಪ್ರಕಾರ ಅವಳ ಮದುವೆಯನ್ನುಅವಳಾ ಭಾವನೊಂದಿಗೇ ಮಾಡಲು ನಿಶ್ಚಯಿಸಿದರು
ಅಪ್ಪ ಯಾರೊಡನೆ ಮದುವೆ ಬೇಡೆಂದು ಕೂಗುತ್ತಾ ಕೊನೆಯುಸಿರೆಳೆದಿದ್ದರೋ ಅವನೊಡನೆಯೇ ಮದುವೆ ಹುಡುಗಿಗೆ ಜೀವನವೇ ಬೇಡೆನಿಸಿತ್ತು.
ಮನಸಿದ್ದರೂ ಸಹಾಯಕ್ಕೆ ಬರದ ಅಕ್ಕ. ಮುಖ ಸಿಂಡರಿಸುವ ಸೋದರತ್ತೆ ಮಾವ. ಕಣ್ಣಲ್ಲಿ ಗೆಲುವಿನ ಅಹಂ ತುಂಬಿರುವ ಭಾವ ಯಾರೂ ಬೇಡೆನಿಸಿತು.
ಒಂದು ತಿಂಗಳಿನಿಂದ ಮುಟ್ಟು ಬೇರೆ ಆಗಿರಲಿಲ್ಲ
ಹೆದರಿಕೆಯಿಂದ ಹೃದಯ ಕಂಪಿಸಿತು.
ತನ್ನವರೆನ್ನುವ ಒಂದು ಜೀವವೂ ಕಾಣದೆ ಹುಡುಗಿ ಕಂಗಾಲಾದಳು. ಎಲ್ಲರೆದುರಿಗೆ ಭಾವನನ್ನು ಮದುವೆಯಾಗಲಾಗುವುದಿಲ್ಲ ಎಂದು ಹೇಳಲು ಧೈರ್ಯ ಸಾಲಲಿಲ್ಲ. ಸಾವೊಂದೇ ಇದೆಲ್ಲಾವುದಕ್ಕೂ ಪರಿಹಾರ ಎಂದೆನಿಸಿತು
ಅಂದು ಹಿತ್ತಲಿನಲ್ಲಿದ್ದ ಬಾವಿಯೊಳಗೆ ಧುಮುಕಿಯೇ ಬಿಟ್ಟಳು. ಆಗಲೇ ಅವಳನ್ನು ಕಾಪಾಡಿದ್ದು ಸೋದರತ್ತೆಯ ಮೈದುನ ಚಂದ್ರ .
ಆಗಷ್ಟೆ ಪಟ್ಟಣದಿಂದ ಬಂದಿಳಿದಿದ್ದ ಚಂದ್ರನಿಗೆ ಅವಳ ವಿಷಯವೆಲ್ಲಾ ಗೊತ್ತಾಗಿದ್ದರೂ ಅವಳ ಮೇಲೇನೋ ಪ್ರೀತಿ .
ಮನೆಯವರೆಲ್ಲರ ವಿರೋಧದೊಂದಿಗೆ ಆ ಹುಡುಗಿಯನ್ನು ಮದುವೆಯಾದ. ಊರಿನ ಜನ ಬಹಿಷ್ಕಾರ ಹಾಕಿದರು. ಚಂದ್ರ ಸೊಪ್ಪು ಹಾಕಲಿಲ್ಲ
ಅದಾಗಿ ಎಂಟು ತಿಂಗಳಿಗೆ ಮಗನೊಬ್ಬ ಹುಟ್ಟಿದ. ಸಂತಸ ತುಂಬಿದ ಜೀವನ ಸಾಗುತ್ತಲೇ ಇತ್ತು . ಆ ಮಗು ಯಾರದ್ದೆಂಬ ಪ್ರಶ್ನೆಯೂ ಮೂಡಲಿಲ್ಲ ಅಲ್ಲಿ
ಆದರೆ ವಿಧಿಯ ಬರಹವೇ ಬೇರಿತ್ತು
-----------------
ಕಥೆ ಹೇಳುತ್ತಿದ್ದ ರಮಾ ಮುಂದೆ ಮಾತಾಡದೆ ಫೋಟೋವನ್ನೇ ದಿಟ್ಟಿಸಿದರು.
"ಅದು ಸರಿ ಅಮ್ಮಾ ಈ ಕಥೆ ನಂಗ್ಯಾಕೆ ಹೇಳ್ತಾ ಇದ್ದೀಯಾ? ಆಮೇಲೆನಾಯ್ತು?"
ಸುಧಾಕರ ಅಚ್ಚರಿಯಿಂದ ಪ್ರಶ್ನಿಸಿದ
ರಮಾರ ಕಂಗಳಿಂದ ನೀರು ಜಾರತೊಡಗಿತು
"ಆ ಹುಡುಗೀನೆ ನಿನ್ನ ಅಮ್ಮ ಕಣೋ". ಬಿಕ್ಕಳಿಸಿದರು
ಸುಧಾಕರ್ ಬೆಕ್ಕಸ ಬೆರಗಾದ
"ಅಮ್ಮ ಆಂದರೆ ನೀನು ?" ತಾಯಿಯನ್ನು ದಿಟ್ಟಿಸಿದ ಆ ನೋಟದಲ್ಲಿ ಸಾವಿರಾರು ಅರ್ಥಗಳು ತುಂಬಿದ್ದವು
"ಕಥೆ ಇನ್ನೂ ಮುಗಿದಿಲ್ಲಾ ಸುಧಾಕರ್"
ರಮಾ ಗಂಭೀರ ದನಿಯಲ್ಲಿ ನುಡಿದರು
ಸುಧಾಕರ ಮತ್ತೆ ಕಿವಿಯರಳಿಸಿದ
ರಮಾರ ಮಾತು ಮುಂದುವರೆಯಿತು