Thursday, August 2, 2012

ನೀ ಹಿಂಗ ನೋಡಬೇಡ mattu ರವಿ ಬೆಳಗೆರೆ


ನೆನ್ನೆ ರಾತ್ರಿ  ರವಿ ಬೆಳಗೆರೆಯವರ "ನೀ ಹಿಂಗ ನೋಡಬೇಡ " ಕಾದಂಬರಿ ಓದಿ ಮುಗಿಸಿದೆ.
ಕೈಗೆತ್ತುಕೊಂಡದ್ದು ಮೊನ್ನೆ ರಾತ್ರಿ. ಹೇಗೆ ಓದಿಸಿಕೊಂಡು ಹೋಯ್ತೆಂದರೆ ಎಲ್ಲಿ ನಾನು ಪೂರ್ತಿ ಓದಲಿಲ್ಲವಾದಲ್ಲಿ ಶಿಶಿರಚಂದ್ರ ಶ್ರಾವಣೀನ ಕಳ್ಕೊಳ್ತಾನೋ ಅಂತ.
ದೇವರೇ ಗಿರಿಬಾಬು ಕೆಟ್ಟವನಾಗದಿರಲಿ ಅಂತ ಬೇಡ್ಕೊಂಡೆ(ಆ ದೇವರೇ ಮೂಕನಾಗಿ ಹೋಗಿದ್ದ ರವಿ ಬೆಳಗೆರೆಯವರ ನಿರೂಪಣೆಗೆ ಅನ್ಸುತ್ತೆ)
ಪ್ರತಿ ಪುಟ ಪುಟಕೂ ನವಿರು ಭಾವದೊಡನೆಯೇ ಕುತೂಹಲ , ಕುತೂಹಲದ ಅಂತ್ಯದೊಡನೆಯೇ ಯಾರ್ಯಾರ ಮೇಲೋ ಅನುಮಾನ . ಜಗನ್ ಕೆಟ್ಟವನು ಅನ್ನುತ್ತಲೇ ಅವನ ಮೇಲೊಂದು ಅನುಕಂಪದ ಅಂತ:ಕರಣ ಮೂಡಿಸೋದರಲ್ಲಿ ಅವರು ಗೆದ್ದಿದಾರೆ........ ಇದ್ದಕಿದ್ದಂತೆ ಪ್ರತ್ಯಕ್ಷವಾದ ಚಂಗಳರಾಯುಡು ಸಾಯುತ್ತಿದ್ದಂತೆಯೇ ಆ ಚಂದ್ರ ಎಂಬ ಪ್ರೀತಿಸಿದ ಎಂಬ ಕಾರಣಕ್ಕೆ  ಕೊಲೆಯಾದ ಅಮಾಯಕ ಹುಡುಗನ ಮನಸು ಮಿಡಿಯುತ್ತದೆ.... ಅವನಿಗೆ ಅಯ್ಯೋ ಅನ್ನುವುದೇ ಅಥವ ಇಲ್ಲಿಯವರೆಗೆ ಅನುಕಂಪ ಗಿಟ್ಟಿಸಿದ್ದ ಮೃಣಾಲಿನಿಯ ಮೇಲೆ ಕೋಪಗೊಳ್ಳುವುದೇ, ಅಥವ ಕಾರಣವಿಲ್ಲದೆ ಬೆಟ್ ಕಟ್ಟಿ ಇಡೀ ಸಂಸಾರವೊಂದರೊಳಗೆ ತಾನೊಂದು ಪ್ರಮುಖ ಭಾಗವಾಗಿ ಹೋದ ಶಿಶಿರನ ಮೆಚ್ಚುವುದೇ?
ಇಲ್ಲಿ ಶರ್ಮಿಳಾ ಆಂಟಿ ತುಂಬಾ ಇಷ್ಟವಾಗಿಬಿಡುತ್ತಾಳೆ............. ಎಲ್ಲಿಯೋ ಓದುಗರು ಅವಳಲ್ಲಿ ಯಾರನ್ನೋ ಗುರುತಿಸಲು ಪ್ರಯತ್ನಿಸುತ್ತಿದ್ದಂತೆ ಅವಳಿಗಿಂತ ಮೇಲೆಂಬಂತೆ ಪ್ರಶಾಂತಿನಿ ತಲೆ ಎತ್ತುತ್ತಾಳೆ....... ಅವಳು ಯಾರನ್ನ  ಹೋಲುತ್ತಿರಬಹುದು ಎಂದು ಯೋಚಿಸುತ್ತಿರುವಂತೆಯೇ ಇದ್ದಕಿದ್ದಂತೆಯೇ ಚಿರಂತ್ ಮನಸಿಗೆ ಆಪ್ತವಾಗುತ್ತಾನೆ
ಶ್ರಾವಣಿ ನನ್ನಲ್ಲೂ ಇದಾಳಾ ? ಆ ಛಲ , ಆ ಭಾವುಕತೆ ನನ್ನಲ್ಲೂ ಎಲ್ಲೋ ಒಂದಿಷ್ಟಿರಬಹುದೇ ಎಂದು ಮನಸು ಇದ್ದಕಿದ್ದ ಹಾಗೆ ಶ್ರಾವಣಿಯ ಜಾಗದಲ್ಲಿ ತನ್ನನ್ನು ಇರಿಸಲು ಪ್ರಯತ್ನಿಸುತ್ತದೆ. ಪ್ರತಿ ಪಾತ್ರಕ್ಕೂ ಅದರದ್ದೇ ಔನ್ನತೆಯನ್ನ ಅದಕ್ಕೆ ಮೂಡಿಸುತ್ತಲೇ ಅದೇ ಪಾತ್ರದ ಮತ್ತೊಂದು ಮಗ್ಗಲನ್ನೂ ಪರಿಚಯಿಸುತ್ತಾರೆ. ಇದ್ದಕಿದ್ದ ಹಾಗೆ ನೆನ್ನೆ ಶಿಶಿರ್ ಚಂದ್ರ ಎಂಬ ಆ ಟ್ಯಾನರಿ ರೋಡಿನ ಹುಡುಗನ ರೋಷಾವೇಷ ಓದುತ್ತಿದ್ದಂತೆಯೇ ರವಿಬೆಳಗೆರೆಯವರೇ ನೆನಪಾದರು............
ಇದೇ ರೀತಿ "ಹೇಳು ಹೋಗು ಕಾರಣ" ಎಂಬ ಕಾದಂಬರಿ ಓದಿದಾಗಲೂ ಆಗಿತ್ತು
ನಾನು ರವಿಬೆಳಗೆರೆಯವರ ಅಭಿಮಾನಿ ಅಲ್ಲ ಆದರೆ ಅವರ ಪ್ರತಿಯೊಂದು ಕಾದಂಬರಿ ಬರಹಗಳ ವಾಕ್ಯಗಳ ಅಭಿಮಾನಿ. ಕೆಲವೊಂದು ವಾಕ್ಯಗಳನ್ನ ಅವರು ನಮ್ಮಲ್ಲಿ ಎಷ್ಟು ಚೆನ್ನಾಗಿ ಬೇರೂರಿಸುತ್ತಾರೆ ಎಂದರೆ ತುಂಬಾ ಹಿಂದೆ ಅವರು ವಿ ಕೆ ನಲ್ಲಿ ಸೂರ್ಯ ಶಿಕಾರಿ ಎಂಬ ಕಾಲಮ್ ನಲ್ಲಿ ಬರೆಯುತ್ತಿದ್ದ ಒಂದಷ್ಟು ಹೇಳಿಕೆಗಳು ಈಗಲೂ ಮನಸಿಗೆ ತಟ್ಟಿವೆ
೧. ಒಬ್ಬ ತಾನು ಕೆಟ್ಟವನು ನಂಗೆ ಈ ಥರ ಥರ ಬ್ಯಾಡ್ ಹ್ಯಾಬಿಟ್ಸ್ ಇವೆ ಅಂದರೆ ಹುಡುಗಿ ಕರಗಿಬಿಡುತ್ತಾಳೆ . ಅದೇ ಅವಳ ದೌರ್ಬಲ್ಯ
೨.ಹೆಣ್ಣಿಗೆ ಪ್ರೀತಿಗೂ ಮುನ್ನ ಹುಟ್ಟುವುದು ಅನುಕಂಪ...
೩. ಹೊಟ್ಟೆ ಸುತ್ತಾ ಟೈರ್ ಬೆಳೆಸಿಕೊಂಡು ಗೋಣಿ ಚೀಲದಂತ ನೈಟಿ ತೊಟ್ಟು ನಿಂತರೆ ಯಾವ ಗಂಡನಿಗೆ ತಾನೆ ಹೆಂಡತಿ ಇಷ್ಟಾ ಆಗುತ್ತಾಳೆ
೪. ಕೈನಲ್ಲಿ ಬೆಲೆಬಾಳುವ ಮೊಬೈಲ್ ಇಟ್ಟುಕೊಂಡು ಸಾರ್ ನಮಗೆ ಕಷ್ಟಾ ಅಂತ ಪೋಷಕರು ನನ್ನ ಎದುರಿಗೆ ಕೂತರೆ ಸಿಡಿಮಿಡಿಗೊಳ್ಳುತ್ತೇನೆ
ಹೀಗೆ ಇನ್ನೂ ತುಂಬಾ ತುಂಬಾ ವಾಕ್ಯಗಳು

ಆದ್ದರಿಂದಲೆ ರವಿ ಸಾರ್ ಬಗ್ಗೆ ಏನೆ ವದಂತಿಗಳಿರಲಿ ನನಗೆ  ಅವರ ಈ ವಾಕ್ಯಗಳನ್ನಾಗಲಿ, ಅಥವ ಅವರ ಕಾದಂಬರಿಗಳನಾಗಲಿ ಓದುತ್ತಿದ್ದಂತೆಯೇ ಅದೆಲ್ಲಾ ಮರೆತು ಹೋಗಿ ಅವರು ಇಷ್ಟಾವಾಗಿಬಿಡುತ್ತಾರೆ. ಒಬ್ಬ ಲೇಖಕನಾಗಿ ಒಬ್ಬ ಚಿಂತಕನಾಗಿ, ಒಬ್ಬ ಸ್ಪೂರ್ತಿ ಚಿಲುಮೆಯಾಗಿ  Ravi Belagere