Tuesday, April 12, 2011

ನಟ್ಟಿರುಳೊಂದು ಅವಲೋಕನ

ನಡುರಾತ್ರಿಯಲ್ಲಿ ಎದ್ದು ಕೂತಿದ್ದೇನೆ. ಸುತ್ತಲೂ ನಿಶಬ್ದ ,. ಭಯವನ್ನ ಆ ಪಕ್ಕಕ್ಕಿಟ್ಟು ಒಬ್ಬಳೆ ಕೂತಿದ್ದೇನೆ.
ಹುಳವೊಂದು ಗೀ ಗೀ ಎಂದು ನೀನೊಬ್ಬಳೆ ಎಚ್ಚರವಾಗಿಲ್ಲ ನಾನೂ ನಿನ್ನೊಟ್ಟಿಗೆ ಇದ್ದೇನೆ ಕಿರುಚುತ್ತಿತ್ತು ನನ್ನ ಮೌನಕ್ಕೆ ತಡ ಮಾಡುತ್ತಿದ್ದ ಅದನ್ನು ಹೊಡೆದೋಡಿಸುವ ವ್ಯರ್ಥ ಪ್ರಯತ್ನ ನಡೆಯಿತು.

ಸ್ವಲ್ಪ ಸಮಯ ಅದನ್ನು ಹುಡುಕುವುದರಲ್ಲಿ ಕಳೆಯಿತು. ನನ್ನ ನೀನು ಗೆಲ್ಲಲಾರೆ ಎಂಬಂತೆ ಅದು ಕಿರುಚುತ್ತಲೇ ಇದೆ. ಇನ್ನೂ ಸಿಕ್ಕಿಲ್ಲ. ಮಂಚದಕೆಳಗೋ ಇಲ್ಲ ಎಲ್ಲೋ ಬೇರೆಡೆ ಸೇರಿಕೊಂಡು ನನ್ನನ್ನು ಆಟವಾಡಿಸುತ್ತಿದೆ.
ಸರಿ ಅದರ ಪಾಡಿಗೆ ಅದನ್ನು ಬಿಟ್ಟು ಮತ್ತೇನಾದರೂ ಮಾಡೋಣ ಎಂದು ಫೇಸ್‍ಬುಕ್‌ಗೆ ಬಂದೆ.ವಿಚಾರ ವಿನಿಮಯಿಸಿಕೊಳ್ಳಲು ಯಾವ ಫೆಂಡ್ಸ್ ಆನ್ಲೈನ್ ಇರಲಿಲ್ಲ.
ಸರಿ ಅಲ್ಲಿ ಒಂದು ಲೈನ್ ಬರೆದು ಕೊನೆಗೆ ಮೊರೆ ಹೊಕ್ಕಿದ್ದು ಬ್ಲಾಗ್ ಸ್ಪಾಟ್‍ಗೆ.
ಗಾಢ ಮೌನ, ಆಗಾಗ ಫ್ಯಾನ್ ತಿರುಗುತ್ತಿರುವ ಶಬ್ಚ, ಜ್ತೊತೆಗೆ ಹುಳದ ಹಾರಾಟ ಅದು ಬಿಟ್ಟರ ನನ್ನಮಗಳು ಆಗಾಗ ಅಮ್ಮ ಎಂದದ್ದು ಅಷ್ತೇ
ರಾತ್ರಿ ಎನ್ನುವುದು ಎಷ್ಟು ಅದ್ಭುತ ಅಲ್ಲವೇ . ಜಗತ್ತಿನ ಬಹಳಷ್ಟು ಸೃಷ್ಟಿಗಳು( ಜೀವ ಸೃಷ್ಟಿಯಿಂದ ಹಿಡಿದು ಕಾವ್ಯ ಕಥೆ, ಇನ್ನೂ ಏನೇನು ಇವೆಯೋ) ಆಗುವುದು ಈ ಹೊತ್ತಿನಲ್ಲಿಯೇ.ರಾತ್ರಿಗೆ ಮಾತ್ರ ಆ ಶಕ್ತಿ ಕೊಟ್ಟ್ಟವರಾರು
ಅಥವ ರಾತ್ರಿಯ ನೀರವತೆಗೆ ಈ ಶಕ್ತಿ ಇದೆಯೇ. ಒಂದು ವೇಳೆ ರಾತ್ರಿ ಹಗಲಾಗಿ ಹಗಲು ರಾತ್ರಿಯಾದರೆ ? ಹಗಲಿಗೆ ಇರುಳಿನ ಗರಿಗಳೆಲ್ಲಾ ಬರುತ್ತಿದ್ದವಲ್ಲವೇ.
ಹೇಗಿದ್ದರೂ ರಾತ್ರಿ ಎಂದೊಡನೆ ಒಂದು ರೀತಿಯ ಭಯ ನನಗೆ. ರೂಮಿನಿಂದ ಹಾಲಿಗೆ ಹೋಗುವಾಗಲೂ ಯಾರನ್ನಾದರೂ ಕರೆದುಕೊಂಡು ಹೋಗುವವಳು ನಾನು . ಆದರೂ ರಾತ್ರಿಯ ಈ ನಿಶ್ಯಬ್ದ ನನಗೆ ಇಷ್ಟ . ಒಂದು ರೀತಿಯಲ್ಲಿ ಎಷ್ಟೇ ಕಷ್ತವಾದರೂ ಇಷ್ತವಾಗುವ ನಲ್ಲನ ತರಹ
ಗಡಿಯಾರ ಸರಿಯಾಗಿ ಮೂರು ಘಂಟೆ ತೋರಿಸುತ್ತಿದೆ.
ಈಗಲಾದರೂ ಸ್ವಲ್ಪ ನನ್ನನ್ನ ನಾನು ಅರ್ಥ ಮಾಡಿಕೊಳ್ಳೋಣ ಎಂದುಕೊಂಡೆ;ಇದಕ್ಕಿಂತ ಬೇರೆ ಸಮಯ ಸಿಗುವುದಿಲ್ಲ. ಎಲ್ಲಾ ಮುಖವಾಡಗಳನ್ನು ಕಳಚಿಟ್ಟು ಒರಿಜಿನಲ್ ಮುಖ ನೋಡಿಕೊಳ್ಳೋಣ ಎಂದುಕೊಂಡೆ
ಊಹೂ ಆಗುತ್ತಾ ಇಲ್ಲ. ಮನಸು ಕಳಚಿಡಲು ಒಪ್ಪುತ್ತಿಲ್ಲ
ನಮಗೆ ನಾವು ಅರ್ಥವಾಗದ ಹೊರತು, ಬೇರೆಯವರು ನಮ್ಮನ್ನ ಹೇಗೆ ಅರ್ಥ ಮಾಡಿಕೊಂಡಾರು, ಹಾಗೆ ಬಯಸುವುದೂ ತಪ್ಪಲ್ಲವೆ?
ಆದರೆ ಈ ನಾನು ಎಂಬ ಪದ ಯಾವಾಗ ಹುಟ್ಟಿತೋ ಗೊತ್ತಿಲ್ಲ,
ಎಷ್ಟೆಷ್ಟು ಭಿನ್ನಾಭಿಪ್ರಾಯವನ್ನು ಹುಟ್ಟುಹಾಕುತ್ತದೆ,
ಎಂತೆಂಥ ಜಗಳಗಳನ್ನು ತರುತ್ತದೆ
ನಲ್ಮೆಯ ನಲ್ಲ ನಲ್ಲೆಯರನ್ನ ’ನಾನು ’ ಬೇರೆ ಮಾಡುತ್ತದೆ
ಹೆತ್ತ ಕರುಳುಗಳು ಮರುಗುತ್ತವೆ.
ಕರುಳ ಸಂಬಂಧಗಳು ನಲುಗುತ್ತವೆ.
ಆತ್ಮೀಯ ಸ್ನೇಹ ಬಾಡುತ್ತದೆ
ಆದರೂ ಈ ’ನಾನು’ ಎಂಬುದನ್ನು ಯಾರೂ ದೂರ ಮಾಡುತ್ತಿಲ್ಲ
ಒಂದು ರೀತಿಯ ಸ್ಮೋಕಿಂಗ್ ಆಡಿಕ್ಷನ್ ಇದ್ದಹಾಗೆ, ಕೆಟ್ಟದು ಅಂತ ಗೊತ್ತಿದ್ದರೂ ಅದನ್ನೇ ನೆಚ್ಚಿಕೊಳ್ಳುವ ಸ್ಮೋಕರ್ ಥರ
ಅದಕ್ಕೆ ಇರಬೇಕು ಕನಕದಾಸರು "ನಾನು ಹೋದರೆ ಹೋಗಬಹುದು( ದೇವರ ಬಳಿ ಅನ್ಸುತ್ತೆ)"ಎಂದು ಹೇಳಿದ್ದರು.
ಆದರೂ ’ನಾನು’ ಹೋಗುತ್ತಿಲ್ಲವಲ್ಲ.
ಚಿಕ್ಕಂದಿನಲ್ಲಿ ಹರಿಕಥೆಯೊಂದನ್ನು ಕೇಳಿದ್ದ ನೆನಪು .
ಪ್ರಪಂಚದಲ್ಲಿ ಈ ನಾನು ಅನ್ನೋದು ಹೇಗೆ ಆಗಿದೆ ಅಂದ್ರೆ
ಆ ಕೆಲಸ ಮಾಡಿದವರಾರು: ನಾನು
ಲಾಭ ತಂದುಕೊಟ್ಟವರಾರು : ನಾನು
ಹೀಗೆ ಇನ್ನೂ ಅನೇಕ ಉದಾಹರಣೆಗಳನ್ನು ಕೊಡುತ್ತಾರೆ
ಆದರೆ ಮನುಷ್ಯ ನಾನಲ್ಲ ಎನ್ನುವುದು ಈ ಕಾರಣಗಳಿಗಾಗಿ
ಈ ದುಡ್ಡು ಕದ್ದವರಾರು ನಾನಲ್ಲ
ನಷ್ಗ್ತಾ ಮಾಡಿದವಾರ್ರಾರು :ನಾನಲ್ಲ
ಹೀಗೆ ಗೆಲುವಿಗೆ ನೂರಾರು ಅಪ್ಪಂದಿರು
ಸೋಲಿಗೆ ಒಬ್ಬಾನೊಬ್ಬನೂ ಇಲ್ಲ

ಇದಕ್ಕೆ ಕಾರಣ ಈ ನಾನು ’ಅಹಂ’
ಹಾಗಾಗಿಯೇ ನಮ್ಮ ಮನಸು ನಮ್ಮಲ್ಲಿನ ಹುಳುಕುಗಳನ್ನು ತೋರಿಸಲು ಹಿಂದೇಟು ಹಾಕುತ್ತದೆ . ಏಕೆಂದರೆ ಮನಸೇ ಈ ’ನಾನು’ ಗೆ ಕಾರಣ ಅಲ್ಲವೇ?
ಹಾಗಾಗಿ "ನಾನು" ನಿಜವಾಗಿ ಏನು ಎಂಬುದನ್ನು ತಿಳಿದರೂ ತಿಳಿಯದಂತೆ ನಟಿಸುತ್ತೇವೆ. ನಾನು ಹೋದಾಗಲೇ ನಮ್ಮನ್ನ ನಾವು ಅರ್ಥ ಮಾಡಿಕೊಳ್ಳಬಹುದು. ಆದರೆ ’ನಾನು’ ಹೋಗುವುದು ನಾವು ಹೋದಾಗಲೇ ಅದೇ ವಿಪರ್ಯಾಸ.
ಬದುಕೆಲ್ಲಾ ಸ್ವಾರ್ಥ, ಕೀರ್‍ತಿ ಅಹಂಕಾರ,ಜಂಬ್ಗ ಪ್ರತಿಷ್ಟೇ. ಲಾಭ ನಷ್ಟ ಲೆಕ್ಕಾಚಾರ ಇವೆಲ್ಲಾವುದರಲ್ಲಿಯೇ ಕಳೆದುಬಿಡುವ ನಾವು , ಏನು ಗಳಿಸಿದ್ದೇನು, ಕಳೆದುಕೊಂಡದ್ದೇನು ಎಂಬುದನ್ನು ಅವಲೋಕನ ಮಾಡುವ ಗೋಜಿಗೆ ಹೋಗುವುದಿಲ್ಲ
ಏಕೆಂದರೆ ಮನಸಿನ ಕನ್ನಡಿಗೆ ಹೆದರುವವರು ನಾವು.
ಅಯ್ಯೋ ಇದೇನು ಉಪದೇಶ ಮಾಡುತ್ತಿದ್ದಿನಲ್ಲ ನಾನು.
ಮೊದಲು ನಾನು ’ನಾನು’ ಬಿಟ್ಟೇನೆ?
ಛೆ ಇಲ್ಲ ಅದು ಹೇಗೆ ಸಾಧ್ಯ , ನನ್ನ ಅಸ್ಥಿತ್ವಾನೆ ’ನಾನು’. ಅದನ್ನು ಕಳೆದುಕೊಂಡು ಬದುಕಿದರೇನು ಫಲ.

ನಾನು "ನಾನು" ಅನ್ನು ಕಳೆದುಕೊಳ್ಳಲಾರೆ
ಏಕೆಂದರೆ ನಾನೂ ಒಬ್ಬ ಹುಲು ಮಾನವಳೇ ಅಲ್ಲವೇ?
ಸಾಕು ನಿದ್ದೆಗಣ್ಣಲ್ಲಿ ಬರೆದದ್ದಲ್ಲ. ಆದರೂ ನಿದ್ದೆ ಗಣ್ಣಾಗುವ ಮುನ್ನ ಮುಗಿಸಿಬಿಡೋಣ ಅಂತ




No comments:

Post a Comment

ರವರು ನುಡಿಯುತ್ತಾರೆ