Wednesday, June 11, 2008

ಬಿಡುಗಡೆ

ಗಾರ್ಮೆಂಟ್ಸ್ ನಿಂದ ಆಗ ತಾನೆ ಬಂದು ಉಸ್ ಅಂತ ಕೂತವಳಿಗೆ ಮಗಳ ನೆನಪು ಬಂತು ಕೂಡಲೆ ಪಕ್ಕದ ಮನೆಗೆ ಹೋದಿ ಕರೆ ತಂದಳು.ಗಂಡ ಇನ್ನೂ ಬಂದಿರಲಿಲ್ಲ .ಮಗಳಿಗೆ ಕಾಫಿ ಕೊಟ್ಟು ತಾನುಹಾಲಿಲ್ಲದ ಕಾಫಿ ಹೀರುತ್ತಿದ್ದಂತೆ ಆ ಕಾಫಿಯ ಕಪ್ಪೆಲ್ಲ ತನ್ನ ಬದುಕಲ್ಲೆ ತುಂಬಿದಂತೆ ಭಾಸವಾಗತೊಡಗಿತು.

ಬದುಕಿನ ಅನಿಶ್ಚಿತತೆ ಕಾಡತೊಡಗಿತು

ಅವಳಿಗೆ ಗೊತ್ತಿತು ಹೀಗೆ ಆಗುತ್ತದೆ ಎಂದು

ಅವಳ ಅಮ್ಮ ಮನೆ ಚಾಕರಿ ಮಾಡುತಾ ಇವಳನ್ನೂ ಅದೇ ಚಾಕರಿಗೆ ಹಾಕಿ ಬದುಕಲ್ಲಿ ಓದಿಗೆ ಅವಕಾಶವಿಲ್ಲದಂತೆ ಮಾಡಿದಳು

ಹಾಗೆ ಚಾಕ್ರಿಗೆ ಹೋಗುತ್ತಲೆ ಸಿದ್ದನ ಪರಿಚಯವಾಗಿ ಪ್ರೇಮ ಪ್ರೀತಿ ಶುರುವಾಗಿ

ಊರಿನಿಂದ ಓಡಿ ಬಂದು ಬೆಂಗಳೂರಿಗೆ ನೆಲೆಸಿದರು.

ಮದುವೆ ಎಂಬ ಶಾಸ್ತ್ರವೂ ನಡೆಯಿತು.

ಹೊಟ್ಟೆಯಲ್ಲಿ ಮಗಳು ಇದ್ದಾಗಲೆ ಅವಳಿಗೆ ಬಡತನದ ಬೆಂಕಿ ಮುಂಚಿಗಿಂತಲೂ ತೀಕ್ಷ್ಣವಾಗಿ ಸುಡತೊಡಗಿತು

ಅಲ್ಲಿಯಾದರೆ ಅಮ್ಮ ಇವಳ ಸಮಕೂ ದುಡಿಯುತಿದ್ದಳು

ಆದರೆ ಇಲ್ಲಿ ಸಿದ್ದ ಕೆಲಸಕ್ಕೆ ಹೋಗೊ ಮಾತೆ ಆಡಲಿಲ್ಲ

ಕೆಲಸಕ್ಕೆ ಹೋಗು ಎಂದು ಕೇಳಿದರೆ ಹಿಡಿದು ಹಿಗ್ಗಾ ಮುಗ್ಗ ಹೊಡೆಯುತ್ತಿದ್ದ . ಕುಡಿತ ಇಲ್ಲದಿದ್ದರೆ ಬದುಕೇ ಇಲ್ಲ ಅವನಿಗೆ.

ಹಾಗಾಗಿ ಗಾರ್ಮೆಂಟ್ಸ್ ಒಂದರಲಿ ಕೆಲಸಕ್ಕೆ ಹೆಲ್ಪರ್ ಅಗಿ ಸೇರಿದಳು.

ಇವಳು ದುಡಿದು ತಂದ ಹಣವನ್ನೆಲ್ಲಾ ಕುಡಿತಕ್ಕೆ ಪೋಲು ಮಾಡುತ್ತಿದ್ದ.

ಮಗಳು ಹುಟ್ಟಿದ ನಂತರ ಮತ್ತೆ ಅದೇ ಬದುಕು.

ಪಕ್ಕದ ಮನೆಯಲ್ಲಿ ಮಗಳನ್ನು ಬಿಟ್ಟು ಹೋಗುತ್ತಿದ್ದಳು .

ಬದುಕು ಹೇಗೋ ಸಾಗುತ್ತಿತ್ತು ಆ ಚಂದನ್ ಎಂಬ ವ್ಯಕ್ತಿ ಇವಳ ಮಾಸ್ಟರ್ (ಸೂಪರ್ ವೈಸರ್ )ಆಗಿ ಬರುವವರೆಗೆ. ಗಾರ್ಮೆಂಟ್ಸ್ ಹೆಂಗಳೆಯರಲ್ಲಿ ಯಾರಾದರೂ ಗಮನ ಸೆಳೆಯುವಂತಿದ್ದರೆ ಅವರು ಅವನನ್ನು ಓಲೈಸಿಅಬೇಕಿತ್ತು. ಈ ಸಲ ಈಕೆ ಅವನ ಬಲಿ ಪಶುವಾಗಬೇಕಿತ್ತು ಇಲ್ಲವಾದರೆ ನಾಳೆಯಿಂದ ಅವಳು ಅಲ್ಲಿ ಇರುವಂತಿರಲಿಲ್ಲ .

ಇವತ್ತು ಏನಾದ್ರೂ ಮಾಡಿ ಸಿದ್ದನ ಅತ್ರ ಮಾತಾಡಿ ಏಳ್ಬಿಡಬೇಕು . ತನ್ನಲ್ಲಿ ಯೋಚಿಸಿಕೊಂಡಳು

ರಾತ್ರಿ ಬಂದಾಗ ತನ್ನ ಕಷ್ಟವನ್ನೆಲ್ಲಾ ಹೇಳಿಕೊಂಡು ಅತ್ತಳು . ನೀನೊಬ್ಬ ಸರಿಯಾಗಿದ್ರೆ ನಮ್ಮ ಬಾಳು ಇಂಗೆ ಇರ್ತಿರ್ಲಿಲ್ಲ ಅಂತ ಅತ್ತುಕೊಂಡಳು.

ಸಿದ್ದ ಕರಗಿ ಹೋದ

ಆಯ್ತು ಕಣೆ ಇನ್ನು ಈ ನನ್ನ ಮಗೀ ಮೇಲೆ ಆಣೆ ಇನ್ ಮ್ಯಾಕೆ ಕುಡಿಯಾಕಿಲ್ಲ. ಅವಂಗೆ ಒಂದು ಗತಿ ಕಾಣಿಸ್ತೀನಿ ನಾಳಿಕಿಂದ ನೀ ಏನ್ ಕೆಲ್ಸಕ್ಕೆ ಓಗ್ಬೇಡ ನಾನೇ ಓಯ್ತೀನಿ.

"ಎಲ್ಲಾ ಸರಿ ಆದ್ರೆ ನಾ ಮುಂಚಿದ್ನಲ್ಲ ಕೆಲ್ಸಕ್ಕೆ ಅವನತ್ರ ಕಾಸು ತಕ್ಕೊಂಡಿದೀನಿ ಅವನು ಕೆಲ್ಸ ಕೇಳೊಕೆ ಓದ್ರೆ ಕಾಸು ಕೇಳ್ತಾನೆ . ಅಲ್ಲಿ ಕೆಲ್ಸ ಬೋ ಆರಾಮಾಗಿರ್ತದೆ."

"ಏಟ್ ಕೊಡ್ವೇಕು ನೀನು ಅವಂಗೆ’ ಕೇಳಿದಳು

" ಒಂದಾರು ಸಾವ್ರ ಕೊಡ್ಬೇಕು"

"ಆಟೊಂದು ದುಡ್ದು ಯಾಕ್ ತಗೋಂಡಿದ್ದಿ ನೀನು"

"ಅದು -----------ಅದು --------- ಏ ಓಗ್ಲಿ ಬಿಡ್ಲೆ ನಾನೆ ಏನಾರ ಮಾಡಿ ಸಾಲ ತೀರ್ಸ್ಕೊಂತೀನಿ"

"ಬೇಡ ಬಿಡು ನೀ ಕೆಲ್ಸಕ್ಕೆ ಓದ್ರೆ ಏಟು ಬೇಕಾದ್ರೆ ಸಂಪಾದ್ನೆ ಮಾಡ್ಬೋದು. ನನ್ತಾವ ಒಂದೀಟು ದುಡ್ಡು ಇಟ್ಕಂಡಿದೀನಿ ಕೊಡ್ತೀನಿ ತಾಳು"

ಅಂದಿನ ಸಂವಾದ ಅವಳ ಹೊಸ ಬದುಕಿಗೆ ನಾಂದಿಯಾಯಿತು

ಮಾರನೆಯ ದಿನ ಅವಳು ಕೆಲಸಕ್ಕೆ ಹೋಗಲಿಲ್ಲ. ಸಿದ್ದ ಬೆಳಗ್ಗೆ ಬೇಗ ಎದ್ದು ಕೆಲಸಕ್ಕೆ ಹೋದ.

ಇವಳು ಮಗಳಿಗೆ ಸ್ನಾನ ಮಾಡಿಸಿ ಅಡಿಗೆ ಮಾಡಿ ಬಡಿಸಿ ಮನೆಯಲ್ಲಿ ನಲಿಯುತಲಿದ್ದಳು. ಸಂಬ್ರಮಿಸಿದಳು. ತನ್ನ ಕಷ್ಟ ಕೊನೆಯಾಗಿಸಿದ ದೇವರಿಗೆ ವಂದಿಸಿದಳು

ಸಂಜೆಯಾಯಿತು ಹೂವಾ ಮುಡಿದುಕೊಂಡು ಗಂಡನಿಗಾಗಿ ಕಾಯುತ್ತಿದ್ದಳು . ರಾತ್ರಿ ಹತ್ತಾದರೂ ಸಿದ್ದ ಕಾಣಲಿಲ್ಲ. ಮಗಳು ಮಲಗಿದ್ದಳು

ಹಾಗೆ ಮಂಪರು ಬಂದಂತಾಯಿತು.

"ಏಯ್ ಏಳೆ ಮ್ಯಾಕೆ ಹಾದ್ರ ಮಾಡಿದ್ದ ಕಾಸು ಕೊಟ್ಟು ನನ್ನ್ ಕೆಲ್ಸಕ್ಕೆ ಕಳ್ಸ್ತೀ ಏನ್ಲೆ? "ಸಿದ್ದನ ಗಡಸು ತುಂಬಿದ ದನಿಗೆ ಬೆಚ್ಚಿ ಎದ್ದಳು

ಸಿದ್ದ ಕಂಠ ಪೂರ್ತಿ ಕುಡಿದು ಜೋಲಿ ಹೊಡೆಯುತಿದ್ದ.

"ನಂಗೇನು ತಿಳ್ಯಾಕಿಲ್ವೇನೆ ನಿನ್ನ ಬುದ್ದಿ . ನಿಂತಾವ ಆಟೋಂದು ದುಡ್ಡು ಎಂಗೆ ಬತ್ತದೆ. ಯಾವ್ಯಾವನತ್ರ ಓಗಿದ್ಯೋ ಯಾರಿಗ್ ಗೊತ್ತು. "

ಅವಳು ಕಷ್ಟ ಪಟ್ಟು ಕೂಡಿಟ್ಟ ಹಣ ಅದು.

ಇನ್ನೂ ಬಯ್ಯುತ್ತಲೇ ಇದ್ದ . ಅಕ್ಕ ಪಕ್ಕದವರೆಲ್ಲಾ ನಿಂತು ತಮಾಷೆ ನೋಡುತ್ತಿದ್ದರು.

ರಾತ್ರಿ ಎಲ್ಲಾ ನಿದ್ರಿಸಲಿಲ್ಲ ಇವನು ಏಳ್ದ ಹಾಗೆ ಹಾದ್ರನಾದರೂ ಮಾಡಿದ್ರೆ ಏಟೊಂದು ದುಡ್ಡು ಸಂಪಾದ್ನೆ ಮಾಡ್ಬೋದಿತ್ತು . ನೀತಿ ನಿಯತ್ತಿಗೆ ಕಾಲವಿದಲ್ಲ ಎನಿಸಿತಾದರೂ ಮನಸ್ಸು ಬರಲಿಲ್ಲ

ಬೆಳಗಿನ ಜಾವ. ಸಿದ್ದ ರಾತ್ರಿಯ ನಶೆ ಇಂದ ಇನ್ನೊ ಎದ್ದಿರಲಿಲ್ಲ

ಇವಳು ಮಗಳನ್ನು ಕರೆದುಕೊಂಡು ಆ ಕೇರಿ ಬಿಟ್ಟು ಊರು ಬಿಟ್ಟು ಅಮ್ಮನ ಊರು ಸೇರಿಕೊಳ್ಳಲು ಮುನ್ನಡೆದಳು.




Monday, June 2, 2008

ಜವರಾಯನಿಗಿಲ್ಲ ಕರುಣೆ

ನಡುಬೀದಿಯಲ್ಲಿ ನಿಂತ ಅವಳು ಗಿರಾಕಿಗಾಗಿ ಅತ್ತಿತ್ತ ನೋಡುತ್ತಿದ್ದರೂ ಮನಸಿನ ಕಣ್ಣಿನ ಮುಂದೆ ಮಾತ್ರ ಹಸಿವು ಎಂದು ಅಳುತ್ತಿದ್ದ ತನ್ನ ಕಂದನ ಚಿತ್ರವೇ ಕುಣಿಯುತ್ತಿತು. ಯಾರದರೂ ಸಿಕ್ಕರೆ ಸಾಕು ಕಾಸು ತೆಗೆದುಕೊಂಡು ಮೊದಲು ಮಗುವಿಗೆ ಇಡ್ಲಿ ಕೊಡಿಸಿ ನಂತರ ಬರುವುದಾಗಿ ಹೇಳಬೇಕು
ನೆನ್ನೆವರೆಗೆ ಬಂದ ಹಣವನ್ನೆಲ್ಲಾ ಸಾರಾಯಿ ಅಂಗಡಿಗೆ ಸುರಿದಿದ್ದ ಅವಳನ್ನು ಈ ದಂಧೆ ಇಳಿಸಿದವ---ಬೇರಾರು ಅಲ್ಲ ಅವಳ ಗಂಡನೇ .ಆ ಊರಿನಿಂದ ಈ ಕಾಣದ ಊರಿಗೆ ಕರೆತಂದು ಒಂದು ಲಾಡ್ಜ್ನಲ್ಲಿ ಇಳಿಸಿ ಒಂದಷ್ಟು ಗಿರಾಕಿಗಳನ್ನು ಕರೆತಂದ . ನಂತರ ಅವರಿಂದ ಹಣ ಪಡೆದುಕೊಂಡವ ಪತ್ತೆಯೇ ಇಲ್ಲ ಬೆಳಗಿನಿಂದ.
ಮಗು ಹಸಿವೂ ಎಂದು ಭೋರ್‍ಗರೆದು ಅಳುತ್ತಿತು. ಬೆಳಗ್ಗೆ ಎದ್ದಾಗ ಬಿಸ್ಕೆಟ್ ಕೊಟ್ಟದ್ದಷ್ಟೆ .ಅವಳ ಹೊಟ್ಟೆಗೂ ಏನೂ ಇಲ್ಲ ಮಗುವಿಗೂ ಏನೂ ಇಲ್ಲ. ಏನಾದರಾಗಲಿ ಎಂದು ಮಗುವನ್ನು ಮಲಗಿಸಿ ಬಳಿಯಲ್ಲೇ ಇದ್ದ ಬಸ್ ಸ್ಟಾಪ್‌ಗ್ಗೆ ಬಂದು ನಿಂತಿದ್ದಳು.
ಅವಳನ್ನು ಗಂಡಸರು ನೋಡುತಿದ್ದರೇನೊ ನಿಜ ಆದರೆ ಬಳಿ ಬರುವ ಧೈರ್ಯ ಇರಲಿಲ್ಲವೆನ್ನಿಸುತವಳಿಗೆ
ಹಾಗಾಗಿ ಕಣ್ಣಲ್ಲೆ ಸನ್ನೆ ಮಾಡಿದಳು .
ಅವಳ ವಯಸು 30 ರ ಸಮೀಪ ಇರಬಹುದೇನೊ ಆದರೆ ಸಮಯ ಅದನ್ನು ಇನ್ನೂ ಹೆಚ್ಚಿಸಿತ್ತು. ಗುಳಿ ಬಿದ್ದ ಕಣ್ಣುಗಳಿಗೆ ಹಚ್ಚಿದ ಕಾಡಿಗೆ ಇಂದ ಇನ್ನೂ ಭಯಂಕರವಾಗಿ ಕಾಣುತಿದ್ದಳು.
ಹ್ಯಾಗೊ ಒಬ್ಬ ಬಂದ . ಚೌಕಾಸಿ ಮಾಡಿ 500 ರೂ ಗಳಿಂದ 200 ಕ್ಕೆ ಇಳಿಯಿತು ಅವಳ ರೇಟ್.
ಮಗುವಿಗೆ ಇಡ್ಲಿ ಕೊಡಿಸಿ ಇಲ್ಲೇ ಬರುವುದಾಗಿ ಹೇಳಿ ಬಳಿಯಲ್ಲಿನ ಅಂಗಡಿಯಿಂದ ಇಡ್ಲಿ , ಚಾಕ್ಲೆಟ್ ತೆಗೆದುಕೊಂಡು ಸಂಭ್ರಮದಿಂದ ಲಾಡ್ಜಿನೆಡ್ಗೆ ಧಾವಿಸುತ್ತಿದ್ದಂತೆ......................
ಅದ್ಲ್ಲಿದ್ದನೋ ಜವರಾಯ ಲಾರಿಯೊಂದರ ರೂಪದಲ್ಲಿ ಬಂದವನೇ ಅವಳ ಪ್ರಾಣ ಹೀರಿ ನಡೆದೇ ಬಿಟ್ಟ.
ಲಾರಿ ಹೋದ ನಂತರ ಅಲ್ಲಿದ್ದಿದ್ದು ಅವಳ ಜಜ್ಜಿ ಹೋದ ಶರೀರ ಹಾಗೂ ಚೆಲ್ಲಾಪಿಲ್ಲಿಯಾದ ಇಡ್ಲಿ , ಚಾಕ್ಲೆಟ್......................................................................


ಇತ್ತ ಮಗು ಅಮ್ಮ ಬರುತ್ತಾಳೆ ಎಂದು ಅಳುತ್ತಾ ಕಾಯುತ್ತಲೇ ಇತ್ತು................................................