Thursday, April 24, 2008

ಅನಾಮಿಕ

ಹೆಸರಿಲ್ಲದವನಿಗೆನಾನು ನೆನ್ನೆ ನಿನ್ನ ನೋಡಿದೆ ೧೦ ವರ್ಷಗಳ ಈ ಸುಧೀರ್ಘ ಅವಧಿಯ ನಂತರ. ಸಮಯ ನನ್ನಲ್ಲೂ, ನನ್ನ್ ಜೀವನದಲ್ಲೂ ಏನೇನೋ ಬದಲಾವಣೆ ಮಾಡಿದೆ. ಹಾಗೆಯೆ ನಿನ್ನ ಮುಖದಲ್ಲೂ .ಹಿಂದಿನ ಆ ದಿನಗಳನ್ನು ಮತ್ತೊಮ್ಮೆ ನೆನಪಿಸಿಕೊಂಡರೆ ಈಗಲೂ ಕಿರುನಗೆ ಬರುತ್ತದೆ.ನನ್ನ ಜೀವನದಲ್ಲಿ ಆಗಷ್ಟೆ ವಸಂತ ಕಾಲ . ಸ್ಕೂಲಿಗೆ ಹೋಗುವುದು , ಹರಟೆ ಹೊಡೆಯುವುದು, ಜಗಳ ಮಾಡುವುದು ಇವಿಷ್ಟೆ ಪ್ರಪಂಚ ನಮಗೆಲ್ಲಾ.ಆ ದಿನ ಬಸ್ ಕೆಟ್ಟು ನಿಂತು ಹೋಗಿತ್ತು ಅದೇ ಗೋವರ್ಧನ ಸ್ಟಾಪ್ ನಲ್ಲಿ .ನಮಗೆಲ್ಲ ಮನೆಗೆ ಲೇಟ್ ಆಗಿ ಹೋಗಬಹುದಲ್ಲ ಎಂಬ ಖುಷಿ .ಆಗಲೆ ಗೆಳತಿಯೊಬ್ಬಳು "ಏಯ್ ನೋಡೆ ಅಲ್ಲಿ ಯಾರೊ ಹ್ಯಾಗೆ ತಿನ್ನೋ ಹಾಗೆ ನೋಡ್ತಾ ಇದಾನೆ " ಅಂದಳು .ಇನ್ನೊಬ್ಬಳು " ಅಯ್ಯೊ ಬಿಡ್ರೆ ಅವರಿರೋದೆ ನೋಡೋಕೆ " ಅಂತ ಹೇಳಿದಳುಆದರೂ ಕಳ್ಳ ಮನಸ್ಸು ನೋಡೆ ಬಿಡುವ ಎಂದು ತಿರುಗಿದೆ. ಅದನ್ನೆ ಕಾಯುತ್ತಿರುವ್ವನಂತೆ ನೀನು ಕಣ್ಣು ಮಿಟುಕಿಸಿದೆ (ಹೊಡೆದೆ). ಕೋಪದಿಂದ ರಾಸ್ಕಲ್ ಎಂದು ಅಂದಿದ್ದನ್ನು ನೀನು ಕೇಳಿಸಿಕೋಡೆಯೇನೂ . ಸೀದಾ ನನ್ನ ಬಳಿಯೇ ಬರುವುದೇ?ನನ್ನ ಸ್ನೇಹಿತೆ" ಯಾಕೆ ಏನಾದ್ರೂ ಚಪ್ಪಲೀಲಿ ಬೇಕಿತ್ತಾ " ಅಂತ ಕೇಳಿದಾಗ ,"ಓ ಅವರು ಕೊಟ್ಟರೆ ತಗೋಳಕ್ಕೆ ರೆಡಿ " ಆಂತ ಹೇಳಿದೆ ನನ್ನತ್ತ ಕೈ ತೋರಿ.ನಾನ್ಯಾಕೆ ಅಲ್ಲಿ ನಿಂತಿರಬೇಕು? ಸ್ನೇಹಿತೆಯ ಕೈ ಹಿಡಿದು ಕೊಂಡು ಸಿಕ್ಕ ಬಸ್ ಹತ್ತಿದೆ.ಅದರೆ ನೀನು ಮತ್ತೆ ಮತ್ತೆ ನನ್ನ ಹಿಂದೆ ಬಂದು ನಿಂತೆ ಹಿಂದೆ ತಿರುಗಿದಾಗಲೆಲ್ಲಾ ಒಂದು ಸ್ಮೈಲ್ ಕೊಡುತ್ತಿದ್ದ್ದೆ
ಅಷ್ಟೆ ಅಲ್ಲ ನಾನಿಳಿಯುವ ಸ್ಟಾಪ್ ನಲ್ಲೇ ಇಳಿದೆ .
ಬಸ್ ಸ್ಟಾಪ್ ನಿಂದ ನಮ್ಮ ಮನೆಯ ವರೆಗೂ ನನ್ನ ಹಿಂದೆ ಹಿಂದೆಯೆ ಬರುತ್ತಿದ್ದಾ ಗ ಹೆದರಿಕೆ ಜಾಸ್ತಿಯೇ ಆಗಿತ್ತು.ಆದರೆ ನೀನು ನಮ್ಮ ಮನೆಯ ಮುಂದೆಯೇ ಹೋಗಿ ಇನ್ನೂ ಕೆಳಗಡೆ ಹೋದಾಗ ತಿಳಿಯಿತು ನಿಮ್ಮ ಮನೆಯೂ ಅಲ್ಲೇ ಎಂದು .ಅಂದಿನಿಂದ ಶುರು ನಿನ್ನ ಕೀಟಲೆ ನಾನು ಸ್ಕೂಲಿಗೆ ಹೊರಡುವ ಸಮಯಕ್ಕೆ ನೀನೂ ಹಾಜಾರ್ ಮನೆಯ ಮುಂದೆ . ಕಲರ್ ಡ್ರೆಸ್ ಹಾಕಿದಾಗ ನಾನ್ಯಾವ ಬಟ್ಟೆ ಹಾಕುತ್ತಿದ್ದೇನೊ ನೀನೂ ಅದೇ ಕಲರ್ ಬಟ್ಟೆ ಹಾಕುತ್ತಿದ್ದೆ. ವಾಪಸ್ ಬರುವ ಸಮಯಕ್ಕೆ ನೀನು ಬರುತ್ತಿದೆ ಹಿಂದೆಯೇ. ಕಾಲೇಜ್ ಅಟೆಂಡ್ ಮಾಡುತ್ತಿದ್ದೆಯೋ ಇಲ್ಲವೋ. ನನ್ನ ಬರ್ತ್ ಡೆ ದಿನ ದೂರದಿಂದಲೆ ನನ್ನ ಉಡುಗೆಯ ಬಗ್ಗೆ ಬೊಂಬಾಟ್ ಎಂಬ ಸನ್ನೆ ಮಾಡಿದ್ದೆ.ಗೆಳತಿಯರ ರೇಗಿಸುವಿಕೆಯಿಂದ ನಾನು ನಿನ್ನನ್ನು ಇಷ್ಟ ಪಡುತ್ತಿದ್ದ್ದೇನೆಂದು ಅಂದುಕೊಂಡೆ. ನಾವೆಲ್ಲಾ ನಿನಗೆ ಲಾಲ್ ಅಂತ ಹೆಸರಿಟ್ಟಿದ್ದೆವು (ಲಾಲ್ ಅಂದರೆ ಕೆಂಪು ಅಂತ. ನೀನು ಕೆಂಪು ಬಟ್ಟೆ ಹಾಕಿದ್ದೆ ಅಂದು ಮೊದಲ ದಿನ).ಹೀಗೆ ಗೊತ್ತಿಲ್ಲದೆ ನೀನು ನನ್ನ ನಾನು ನಿನ್ನ ಕಾಯಲು ಶುರು ಮಾಡಲಾರಂಭಿಸಿದೆವು . ಒಮ್ಮೆಯೂ ನಿನ್ನೊಡನೆ ಮಾತಾಡಿರಲಿಲ್ಲ ನಾನು. ನೀನು ಮಾತಾಡಲು ಬಂದಾಗಲೆಲ್ಲಾ ಓಡಿ ಹೋಗುತ್ತಿದ್ದೆ ನಾನು. ಮನೆಯ ಪರಿಸ್ಥಿತಿ ನನ್ನನ್ನು ದುಡುಕದಂತೆ ತಡೆದಿತ್ತು.
ಕೆಲವು ದಿನಗಳ ನಂತರ ಅಂದು ದಿನಸಿ ಅಂಗಡಿಯಲ್ಲಿ ಏನೂ ತೆಗೆದುಕೊಳಲು ಬಂದೆ ನಾನು . ಅಲ್ಲೆ ನೀನು ಕಾಣಿಸಿದೆ . ಹೆದರಿಕೆಯಿಂದ ಹೃದಯ ಹೊಡೆದುಕೊಂಡಿತು. ನಿನ್ನ ಜೊತೆಯಲ್ಲಿ ನಿಮ್ಮ ತಂದೆ ನಿಂತಿದ್ದರು. ಅವರಿಗೆ ಏನೂ ಹೇಳಿ ಓಡಿ ಬಂದವನೇ ." ನಮ್ಮ ಅಪ್ಪಂಗೆ ಬಾಂಬೆಗೆ ಟ್ರಾನ್ಸ್ಫೆರ್ ಆಗಿದೆ . ಇದು ಅಲ್ಲಿನ ಆಡ್ಡ್ರೆಸ್ . ನಾನು ಮಾತಾಡೋಕೆ ಬಂದಾಗಲೆಲ್ಲ ತುಂಬ ಹೆದರ್ಕೋತಿದ್ದ್ರಿ ನೀವು . ನಂಗೆ ನೀವಂದ್ರೆ ತುಂಬ ಇಷ್ಟ . ಐ ಲೌ ಯು " ಅಂತ ಹೇಳಿ ಯಾವುದೋ ಮಾಯ್ದಲ್ಲಿ ಕೈಗೆ ಆ ಚೀಟಿ ತುರುಕಿ ಓಡಿ ಹೋಗಿದ್ದೆ .ನಾನೋ ಹೆದರಿಕೆಇಂದ ಆ ಚೀಟಿಯನ್ನು ಅಲ್ಲೇ ಬೀಳಿಸಿ ಮನೆಗೆ ಓಡಿದ್ದೆ.ಅದಾದ ಮೇಲೆನೀನು ಕಾಣಲಿಲ್ಲನಾವೂ ಅಲ್ಲಿಂದ ಬೇರೆ ಊರಿಗೆ ಹೋದೆವು .ಅದಾದ ಮೇಲೆ ನನಗೆ ನಿನ್ನ ನೆನಪು ಬರಲೇ ಇಲ್ಲ. ಬಂದರೂ ಸಹಾ ಅದು ಕೇವಲ ಆಕರ್ಷಣೆ ಮಾತ್ರ ಅಂದುಕೊಂಡು ನನ್ನ ಗುರಿ ಸಾಧಿಸುವತ್ತ ಹೆಜ್ಜೆ ಹಾಕಿದೆ .ಈಗ ಮದುವೆಯೂ ಆಗಿದೆ ಮಗುವೂ ಇದೆ.
ಆದರೆ ನೆನ್ನೆ ನೀನು ಕಾಣಿಸಿದೆ . ಇವರಿಗೆ ನಿನ್ನ ವಿಷ್ಯ ಗೊತ್ತಿದೆ . ನಾನು ನಿನ್ನನ್ನು ತೋರಿಸಿದೆ.
ಅಷ್ಟರಲ್ಲಿ ನಿನ್ನ ಪಕ್ಕದಲ್ಲಿ ಮತ್ತೊಬ್ಬರು ಕಾಣಿಸಿಕೊಂಡಳು ಅವಳು ನಿನ್ನ ಹೆಂಡತಿ ಇರಬಹುದೆನಿಸಿತು.
ಅವಳ ಕಂಕುಳಲ್ಲೂ ಮಗು. ನಿನ್ನ ಮುಖದಲ್ಲಿ ನನ್ನನ್ನು ಕಂಡು ಗಲಿಬಿಲಿ. ಕೂಡಲೆ ಅಲ್ಲಿಂಡ ಓಟ ಕಿತ್ತೆ
ಜೀವನ ಎಷ್ಟು ವಿಚಿತ್ರ ಅಲ್ಲವೇ?
ಇತೀ ನಿನ್ನಒಂದು ಕಾಲದ ಸಹ ಪ್ರಯಾಣಿಕಳು
(ಇದು ವಿಕದ ಸಿಂಪ್ಲಿಸಿಟಿ ಪೇಜಿನ ಈ ಗುಲಾಬಿಯು ನಿನಗಾಗಿ ಯಿಂದ ಪ್ರೇರಿತ, ಇದು ಯಾರ ಕತೆ ಎಂದುದಕ್ಕೆ ಉತ್ತರ " ಎಲ್ಲರ ಕತೆ" )

RajanikaMt

ಹೋದವಾರ ಸೇಲಮ್ ನಿಂದ ಬೆಂಗಳೂರಿಗೆ ಬರುತ್ತಿದ್ದೆವುಕಾವೇರಿ ಪಟ್ಟಣಮ್ ನ ಬಳಿಯಲ್ಲಿ ಟೀ ಕುಡಿಯಲು ಕಾರ್ ನಿಲ್ಲಿಸಿದ್ದೆವು.ಟೀ ಕುಡಿದು ಹೊರಗೆ ಬರುತ್ತಿದ್ದ್ದಂತೆನಮ್ಮ ಕೆ.ಎಸ್.ಅರ್.ಟಿ.ಸಿ ಶಿವಮೊಗ್ಗ ಹರಿಹರ ಕ್ಕೆ ಹೋಗುವ ಬಸ್ ಬಂದಿತು
ಆ ಪ್ರದೇಶದವನೇ ಇರಬೇಕು ಒಬ್ಬಏನೋ ಮೂಟೆಯನ್ನು ಹೊತ್ತು ತಂದಿದ್ದಬಸ್ ಕಂಡಕ್ಟರ್ ಕರ್ನಾಟಕದವನು ಆ ಮೂಟೆಯನ್ನು ಬಸ್ ಮೇಲಿಡಬೇಕೆಂದು ಹೇಳುತ್ತಿದ್ದಈತ ಅದನ್ನು ಬಸ್ ನಲ್ಲಿಡಬೇಕೆಂದು ಹಠ ಮಾಡುತ್ತಿದ್ದ
ಕಂಡಕ್ಟರ್ ಒಪ್ಪದಾಗಏನೋ ತಮಿಳಿನಲ್ಲಿ ಬೈಯ್ತಿದ್ದ(ಇವರು ಹೇಳಿದ್ದು ನೀವು ಕನ್ನಡಾದವರು ಎಲ್ಲಾವುದಕ್ಕೂ ಗಲಾಟೆ ಮಾಡ್ತೀರ. ಮೊನ್ನೆ ನೀರು ಕೊಡಲ್ಲ ಅಂದಿರಿ, ನೆನ್ನೆ ಜಾಗ ಕೊಡಲ್ಲ ಅಂದ್ರಿ . ಈಗ ಬಸ್ ನಲ್ಲಿ ಜಾಗ ಬಿಡಲ್ಲ ಅಂತೀರಾ? ಅಂತ )ಅಷ್ಟೆ ಅಲ್ಲದೆ ವಾಂಗೊ, ವಾಡ , ಅಂತ ಎಲ್ಲಾ ಸುತ್ತಮುತ್ತಲ್ಲಿದ್ದ ತಮಿಳಿನ ಜನರನ್ನ ಕರೆದು ಬಸ್ನ ಹ್ಯಾಗೊ ಮುಂದೆ ತಗೋತೀಯ್ ನೋಡೋಣ ಎಂದು ಸವಾಲ್ ಹಾಕಿದ. ಕನಡಕಾರ್ಂಗಳ್ ಆಂತ ಬೈತಾನೆ ಇದ್ದ. ಸುತ್ತ ಮುತ್ತಲಿನ ಎಲ್ಲಾ ಜನ ಅವನ ಬೆಂಬಲಕ್ಕೆ ನಿಂತರು.ಪಾಪ ಕಂಡಕ್ಟರ ಹಾಗು ಡ್ರೈವರ್ ಅವರನ್ನು ರಮಿಸುವ ಪ್ರಯತ್ನ ಮಾಡುತ್ತಿದ್ದರು.ನಾವು ಅವರ ಪರವಾಗಿ ಮಾತಾಡೋಣ ಅಂದುಕೊಳ್ಳುತ್ತಿದ್ದಂತೆ"ಅಂಗೆ ಪಾರ ಡಾ . ಕರ್ನಾಟಕ ವಂಡಿ" ಅಂತ ಒಂದಷ್ಟು ಜನ ನಮ್ಮ ಕಾರಿನ ಬಳಿ ಬಂದರು (ನಮ್ಮದು ಕರ್ನಾಟಕ ರಿಜಿಸ್ತ್ರೇಶನ್)ಕೂಡಲೆ ಗಾಡಿ ಸ್ಟಾರ್ಟ್ ಮಾಡಿಕೊಂಡು ಅಲ್ಲಿಂದ ಜಾಗ ಖಾಲಿ ಮಾಡಿದೆವು.ಆಮೇಲಾನಾಯ್ತೊ ಅಂತ ತಿಳಿಯಲಿಲ್ಲ
ವಿವಾದದ ಸಮಯದಲ್ಲಿ ಕೊಂಚ ವಿರೋಧ ತೋರಿಸುವ ನಮ್ಮ ಚಳುವಳಿಕಾರರಿಗೆ ಒದೆಯಿರಿ ಎನ್ನುವ ರಜನಿಕಾಂತ್ ತಮ್ಮ ಬೇಳೆ ಬೇಸಿಕೊಳ್ಳಲು ಗಡಿ ನೆಪ ಮಾಡುವ ಇಂತಹ ಅವರ ತಮಿಳುನಾಡಿನ ಗಲಭೆಕೋರರಿಗೆ ಏನು ಮಾಡಬೇಕೆನ್ನುತ್ತಾರೆ?