Monday, January 5, 2009

ಹೂ ತೋಟ

"ಅಬ್ಬಾ ಏನೋ ಇದು ಇಷ್ಟು ಚೆನ್ನಾಗಿದೆ ಗಾರ್ಡನ್" ರವಿ ಉದ್ಗರಿಸಿದ , ಕಣ್ಣನ್ನು ಅಲ್ಲಿಂದ ಕೀಳಲಾಗಲಿಲ್ಲ.
ಅದೊಂದು ಸುಂದರ ತೋಟ , ಎಂಥ ತೋಟವೆಂದರೆ ನೋಡಿದ ಕಣ್ಣು ಕಾಲಿಗೆ ಮುಂದೆ ಹೋಗದಂತೆ ಆದೇಶ ನೀಡುತ್ತಿತ್ತು.. ತೋಟದ ತುಂಬೆಲ್ಲಾ ಹೂವಿನ ಘಮಘಮ , ಚೆಲುವಾದ ಗುಲಾಬಿಯಿಂದ ಹಿಡಿದು ಎಲ್ಲಾ ರೀತಿಯ ಹೂಗಳು ಅರಳಿದ್ದವು.
"ಒಂದ್ಸಲ ತೋಟದಲ್ಲಿ ಅಡ್ಡಾಡಿ ಬರೋಣ ಬಾರೋ " ಸುರೇಶನ ಕೈ ಹಿಡಿದು ಜಗ್ಗಿದ
" ಬೇಡ ಕಣೋ. ಹಾಗೆಲ್ಲಾ ಬೇರೆಯವರ ಪರ್ಮೀಶನ್ ಇಲ್ಲದೆ ಹೋಗಬಾರದು" ಸುರೇಶ ಬುದ್ದಿವಾದ ಹೇಳಿದ
"ಸರಿ ಅವರ ಪರ್ಮೀಶನ್ ತಗೊಂಡೇ ಹೋಗೋಣ ಬಾ"
ರವಿ ತೋಟದಲ್ಲಿದ್ದ ಮನೆ ಬಾಗಿಲು ತಟ್ಟಿದ
ಒಂದು ಹೆಂಗಸು ಬಾಗಿಲು ತೆರೆದಳು ಹಿಂದೆಯೇ ಚೆಲುವಾದ ಈಗಷ್ಟೆ ಅರಳಿದ ಹೂವಿನ ತಾಜಾತನದ ಹುಡುಗಿಯೂಬ್ಬಳುರವಿ "ಅದೂ ತೋಟ ತುಂಬಾ ಚೆನ್ನಾಗಿದೆ . ಒಂದಷ್ಟು ಹೊತ್ತು ನೋಡಿ ಹೋಗೋಣಾ ಅಂತ""ಅಯ್ಯೋ ಅದಕ್ಕೇನಪ್ಪ ನೋಡಿ ."
ಸ್ವಲ್ಪ ಹೊತ್ತಿನಲ್ಲಿ ರವಿ ತನ್ನ ಮಾತಿನಿಂದ ಆಪ್ತನಾದ, ರವಿಯ ಕಣ್ಣು ಚೆಲುವಾದ ಹೂವಂಥ ಹುಡುಗಿಯ ಮೇಲೆ ಹರಿಯುತ್ತಿತ್ತು. ನೋಟಕ್ಕೆ ಹುಡುಗಿ ಕರಗಿ ನೆಲ ನೋಡುತ್ತಿದ್ದಳು
ರವಿ ಲವಲವಿಕೆಯ ಹುಡುಗ, ಸುರೇಶ ಸ್ನೇಹಿತ, ಇಬ್ಬರೂ ಒಂದೇ ಕಾಲೇಜಿನಲ್ಲಿ ಓದಿ ಬೇರೆ ಬೇರೆ ಕಡೆಗಳಲ್ಲಿ ಕೆಲಸ ಮಾಡುತಿದ್ದರು. ಪಿಕ್ನಿಕ್ಗೆಂದು ಬಂದಾಗ ತೋಟ ಕಂಡಿತ್ತು.
ಹಾಗೆ ತೋಟದ ಒಡತಿಯ ಬಗ್ಗೆಯೂ ಮಾಹಿತಿ ಸಿಕ್ಕಿತು
ತೋಟದ ಒಡತಿ ಸರೋಜಾ ಒಬ್ಬ ವಿಧವೆ. ಗಂಡ ಗತಿಸಿ ಮೂರ್ನಾಲ್ಕು ತಿಂಗಳಷ್ಟೆ ಉರುಳಿದ್ದವೇನೋ. ಪ್ರಾಯಕ್ಕೆ ಬಂದ ಮುದ್ದು ಮುದ್ದು ಮಗಳು ಕಮಲ ಜೊತೆಗೆ , ಇಬ್ಬರೇ ತೋಟದಲ್ಲೊಂದು ಮನೆ ಮಾಡಿಕೊಂಡು ವಾಸವಾಗಿದರು.ಆದರೂ ತುಂಬಾ ದಿನ ತೋಟದಲ್ಲಿ ವಾಸವಿರುವುದು ಅಪಾಯ ಎಂದು ಅನ್ನಿಸಿದ್ದರಿಂದ ಸರೋಜಾ ತೋಟವನ್ನು ಮಾರಿ ಅದರಿಂದ ಬಂದ ಹಣದಲ್ಲಿ ಬೇರೆ ಎಲ್ಲಾದರೂ ಜನರಿರುವ ಕಡೆ ಬದುಕುವ ಆಸೆ ಹೊಂದಿದ್ದಳು.
ಕೊಂಚ ಹೊತ್ತು ತೋಟ ಹಾಗು ಅದಕ್ಕಿಂತಲೂ ಸುಂದರಿ ಕಮಲಾಳ ಚೆಲುವನ್ನೆಲ್ಲಾ ಕಣ್ನಲ್ಲೇ ಹೀರಿಕೊಂಡು ರೂಮಿಗೆ ಬಂದ ರವಿ."ಸುರೇಶ ನಾನು ಇನ್ನೊಂದೆರೆಡು ದಿನ ಇಲ್ಲೇ ಇರೋಣ ಅಂದ್ಕೊಂಡೀದೀನಿ"
"ಯಾಕೋ? ರಜಾ ಬೇರೆ ಮುಗೀತಲ್ಲ" "ಇಲ್ಲ ಕಣೋ ತೋಟ ತುಂಬಾ ಚೆನ್ನಾಗಿದೆ , ನಾಳೇನೂ ಹೋಗೋಣ ಅನ್ನಿಸ್ತಿದೆ"
" ತೋಟ ಮಾತ್ರಾನಾ ಹುಡುಗೀನೂನಾ?" "ಛೆ ಛೇ ಅಂಥಾ ಚೀಪೇನೋ ನಾನು?"
ಮರುದಿನವೂ ರವಿ ಸುರೇಶನ ಜೊತೆ ಸರೋಜಾರ ಮನೆಗೆ ಬಂದ . " ಆಂಟಿ , ನಮ್ತಂದೆ ಹತ್ರ ಮಾತಾಡಿದ್ದೇನೆ , ತೋಟಾನ ನೀವು ಕೊಟ್ರೆ ನಾನೆ ಕೊಂಡ್ಕೊಳೋದು ಅಂತ ಅಂದ್ಕೊಂಡೀದೀನಿ"

ಸರೋಜಾಗೆ ಪರಮಾನಂದವಾಯಿತು"ಅಲ್ಲ ನಿಮಗ್ಯಾಕೆ ತೋಟ ಇದನ್ನ ನೋಡಿಕೊಳ್ಲೋಕೆ ಆಗತ್ತಾ"

" ಅಯ್ಯೋ ನಮ್ತಂದೆ ಜನಾನ ಇಡ್ತಾರೆ , ನಮ್ತಂದೆಗೂ ತೋಟ ಬೆಳೆಸುವುದರಲ್ಲಿ ಆಸಕ್ತಿ ಜಾಸ್ತಿ , ಇದರ ಬೆಲೆ ಏನು ಹೇಳಿದರೆ ನಂಗೆ ಹಣ ಹೊಂದಿಸೋಕೆ ಸುಲಭ ಆಗುತ್ತೆ"

ಸರೋಜಾ ಹೇಳಿದರು
"ಸರಿ ಒಂದ್ಸಲ ತೋಟ ಸುತ್ತಾಡಿಕೊಂಡು ಬರ್ತೀನಿ, ನಂತರ ಬೆಲೆ ನೋಡೋಣ"

"ಆಯ್ತಪ್ಪ "ರವಿ ತೋಟ ಪೂರ್ತಿ ಸುತ್ತಾಡಿದ

ಹುಡುಗಿಯ ಕಣ್ಣು ಇವನನ್ನೇ ಗಮನಿಸುತ್ತಿತ್ತು. ರವಿಯೂ ಅವಳನ್ನು ನಿಟ್ಟಿಸಿ ನೋಡಿದ,

ಎರೆಡು ದಿನ ಬಿಟ್ಟು ಬರುವುದಾಗಿ ಹೇಳಿ ರೂಮಿಗೆ ವಾಪಸಾದ.

ಮರು ದಿನ ಎಂದಿನಂತೆ ಬೆಳಗ್ಗೆ ಹೋಗದೆ ಮದ್ಯಾಹ್ನ ರವಿ ಹೊರಟ
"ಏ ಇದೇನೋ ಇಷ್ಟು ಹೊತ್ತಿಗೆ ಎಲ್ಲೋ ಹೋಗ್ತೀದೀಯಾ" ಸುರೇಶ್ ಕೇಳಿದ
" ಯಾಕೋ ಬೋರ್ ಆಗಿದೆ ಹೊರಗಡೆ ಸುತ್ತಾಡಿಕೊಂಡು ಬರೋಣ , ನಾಳೆ ಊರಿಗೆ ಹೋಗೋಣ"
ಸ್ವಲ್ಪ ಹೊತ್ತಾದ ಮೇಲೆ ರವಿ ಬಂದ
"ಈಗಲೆ ಊರಿಗೆ ಹೋಗೋದು ಅನ್ಕೊಂಡಿದೀನಿ"
"ಯಾಕಪ್ಪ , ನಾಳೆ ಹೋಗೋಣ ಅಂದಿದ್ದೆ"
"ಊರಿನಿಂದ ಫೋನ್ ಬಂದಿತ್ತು , ಅಪ್ಪನಿಗೆ ಹುಶಾರಿಲ್ಲವಂತೆ"
"ಸರಿ ಕಣೋ "
ವ್ಯಾನ್ ಹೊರಡುತ್ತ್ದಿದ್ದಂತೆ
" ಏ ರವಿ ನೀನು ಆ ತೋಟ ಕೊಂಡ್ಕೊಳ್ತೀನಿ ಅಂತಿದ್ದ್ಯಲ್ಲ ಏನಾಯ್ತೋ?"
" ಏ ಸುಮ್ನೆ ಹೇಳ್ದೆ, ತೋಟ ಎಲ್ಲಾ ನೋಡೋಕೆ , ಎಂಜಾಯ್ ಮಾಡೋಕೆ, ಸುತ್ತಾಡೋಕೆ, ಅದನ್ನ ಮೈಂಟೇನ್ ಮಾಡಕ್ಕಾಗಲ್ಲ, ಕೊಂಡ್ಕೊಳೋಕೂ ಆಗಲ್ಲ, ಹಾಗ್ ಹೇಳಿಲ್ಲಾಂದ್ರೆ ಒಳಗಡೆ ಬಿಡ್ತಿದ್ದಳೇನೋ ಆ ಮುದ್ಕಿ "
"ಥೂ ಹಾಗೆಲ್ಲಾ ಮಾತಾಡಬಾರದು ಕಣೋ, ಆಸೆ ಹುಟ್ತಿಸಿ ಮೋಸ ಮಾಡಬಾರದು"
" ಹೋಗೋ ಹೋಗೋ, ಹಾಗಂದುಕೊಂಡ್ರೆ ಲಾಲಭಾಗ್, ಕಬ್ಬನ್ ಪಾರ್ಕ್, ನಾನು ಎಲ್ಲೆಲ್ಲಿ ಸುತ್ತಾಡಿದೀನೋ ಎಲ್ಲಾ ತಗೋಬೇಕಾಗುತ್ತೆ"
ವ್ಯಾನ್ ಸರೋಜಾರವರ ತೋಟದ ಬಳಿ ಬರುತ್ತಿದ್ದಂತೆ , ಸುರೇಶನಿಗೆ ದಂಗಾದಂತಾಯ್ತು
" ರವಿ ನೋಡೋ , ಏನಾಗಿದೆ ಅಲ್ಲಿ "
ತೋಟದ ಹೂಗಳೆಲ್ಲಾ ನೆಲಕ್ಕ ಬಿದ್ದಿದ್ದವು, ಗಿಡಗಳೆಲ್ಲಾ ನಜ್ಜು ಗುಜ್ಜಾಗಿದ್ದವು.
ಸುಂದರ ತೋಟ ಪಾಳು ಬಯಲಂತಾಗಿತ್ತು
"ಯಾವುದೋ ಪುಂಡು ದನ ನುಗ್ಗಿದ್ದಿರಬೇಕು , ಬೇಗ ಬೇಗ ಡ್ರೈವ್ ಮಾಡು ಹೋಗೋಣ" ರವಿ ಅವಸರಿಸಿದ
ವ್ಯಾನ್ ಮುಂದೆ ಹೋಯಿತು.
ಆದರೆ
ಆ ಪಾಳು ತೋಟದ ಮಧ್ಯದಿಂದ ಸೋತು ಬಸವಳಿದು ಬಿದ್ದಿದ್ದ ಆ ಹುಡುಗಿ ಬಿಕ್ಕಳಿಸುತ್ತಾ ಮೇಲೆದ್ದುದ್ದನ್ನು ಸುರೇಶ್ ಗಮನಿಸಲಿಲ್ಲ.

Tuesday, December 2, 2008

ಮಗುವೇ ತಂದೆಯ ಕೊಲೆ ಮಾಡುತ್ತದೆ

ಆಕೆ ನಡುಗಿ ಹೋದಳು. ಅವಳ ಗಂಡ ಜೋರಾಗಿ ನಕ್ಕು ಮಗುವನ್ನು ಹತ್ತಿರಕ್ಕೆಳೆದುಕೊಂಡ . ಜ್ಯೋತಿಷಿ ಮಾತ್ರ ಗಂಭೀರವಾಗಿ ಮೇಲಿನ ಮಾತನ್ನು ಹೇಳಿದ."ಸ್ವಾಮಿ ನೀವು ಹೇಳ್ತಿರೋದು ನಿಜಾನಾ? ಇನ್ನೊಂದು ಸಲ ನೋಡಿ . ಎಲ್ಲೋ ಜಾತಕ ಬದಲಾಗಿರಬೇಕು" ಆಕೆ ಗಡಿಬಿಡಿಯಿಂದ ಹೇಳಿದಳು.
"ಇಲ್ಲ ನಿಮ್ಮ ಮಗುವಿನ ರಾಶೀನೆ ಹಾಗಿದೆ.ಅವನ ಜಾತಕದಲ್ಲೇ ಈ ಥರ ಇದೆ."ಅವಳು ಜೋರಾಗಿ ಉಸಿರೆಳೆದುಕೊಂಡಳುಒಮ್ಮೆ ಮಗುವನ್ನು ಗಂಡನನ್ನು ನೋಡಿದಳು . ತನ್ನ ಮಾಂಗಲ್ಯವನ್ನು ತನ್ನ ಕರುಳ ಕುಡಿಯೇ ಕೀಳುತ್ತಾನೆಯೇ?.
ಇನ್ನೂ ಹಾಲುಗಲ್ಲದ ಮಗು .ಹತ್ತು ವರ್ಷ ಮಕ್ಕಳಿಲ್ಲದೆ ದೇವರಲ್ಲಿ ಬೇಡಿ ಕೊನೆಗೆ ಹುಟ್ಟಿದ ಮಗು. ತನ್ನ ಅಪ್ಪನನ್ನೇ ಕೊಲ್ಲುತ್ತಾನೆಯೇ?ಆತನೋ ಪ್ರಖ್ಯಾತ ಜ್ಯೋತಿಷಿ . ಅವನ ಮಾತು ಎಂದಿಗೂ ಸುಳ್ಳಾದದ್ದು ಇಲ್ಲಹೋಗಲಿ ಕೊಲೆ ಯಾವಾಗ ನಡೆಯುತ್ತದೆ ಎಂಬ ಅವಳ ಪ್ರಶ್ನೆಗೆ ಮಗುವಿಗೆ ಐದು ತುಂಬುವುದರೊಳಗಾಗಿ ಎಂದು ಉತ್ತರ ಬಂತು
ಅವಳ ಗಂಡ ಆ ಜ್ಯೊತಿಷಿಗೆ ತಲೆ ಕೆಟ್ಟಿದೆ ಎಂದ. ಯಾಕೆಂದರೆ ಮಾರನೆಯ ದಿನವೇ ಮಗುವಿನ ಐದನೆಯ ಹುಟ್ಟಿದ ಹಬ್ಬ.ಅವಳು ಮಗುವನ್ನು ಶಪಿಸಿಕೊಂಡಳು. ಇಂಥ ಕೊಲೆಗಾರ ಮಗು ಏಕೆ ಹುಟ್ಟಿತು ಎಂದು ಬೈದುಕೊಂಡಳು.
ಮಗು ಮಾತ್ರ ಮುಗ್ದವಾಗಿ ನಕ್ಕಿತು. ಗಂಡ ಅವಳಿಗೆ ಸಮಾಧಾನ ಮಾಡಿದ . ಇದನ್ನೆಲ್ಲಾ ನಂಬಬೇಡ . ದುಡ್ದು ಮಾಡುವುದಕ್ಕೆ ಒಂದು ಸುಳ್ಳು ಎಂದ.ಆಕೆ ಮಾತ್ರ ಅಳುತ್ತಲೇ ಇದ್ದಳು.
ಮಾರನೆಯ ದಿನ
ಮಗು ಬಾಲ್ಕನಿಯಲ್ಲಿ ಆಟವಾಡುತ್ತಿತ್ತು.
ಅವಳು ದೇವರ ಮುಂದೆ ಕುಳಿತಿದ್ದಳು.ಗಂಡ ಟಿ.ವಿ ನೋಡುತ್ತಿದ್ದ.ದೊಡ್ಡ ಬಂಗಲೆ ಅದು.ಮನೆಯಲ್ಲಿ ಹಲವಾರು ಜನ ಕೆಲಸ ಮಾಡುತ್ತಿದ್ದರು.ತೋಟದಾಳು ಸಿದ್ದ ಬೆಳಗ್ಗೆ ಏನೂ ತರಲೆಂದು ಹೋದವನು ಇನ್ನೂ ಬಂದಿರಲಿಲ್ಲ. ಹೆಂಡತಿ ದೇವರ ಪೂಜೆಗೆ ಸಾಮಾನು ತರಲು ಕಳಿಸಿದ್ದಳು.. ಪರಿಹಾರಕ್ಕಾಗಿ ದೊಡ್ಡ ಹೋಮ ಮಾಡಬೇಕಿತ್ತು
ಗಂಡ ಇದ್ದಕಿದ್ದಂತೆ ಎದ್ದ . ಮಗುವನ್ನು ಪಾರ್ಕಿಗೆ ಕರೆದುಕೊಂಡು ಹೋಗುತ್ತೇನೆ ಎಂದ.ಅವಳು ಇಂದು ಮಾತ್ರ ಬೇಡ . ಇಂದು ಕಳೆದರೆ ಸಾಕು ಎಂದು ಗೋಗರೆದಳುಗಂಡ ಕೇಳಲಿಲ್ಲಅದೇನಾಗುತ್ತೋ ನೋಡೋಣ ಎಂದು ಮಗುವನ್ನು ಕರೆದುಕೊಂಡು ಹೊರಟೇ ಬಿಟ್ಟ.ಹೆಂಡತಿ ಅಳು ಜೋರಾಯ್ತು.
ಇತ್ತ ಪಾರ್ಕಿನಲ್ಲಿ ಮಗುವನ್ನು ಆಟವಾಡಿಸುತ್ತಾ ಅವಳ ಗಂಡ ಆ ಘಳಿಗೆಗಾಗಿ ಕಾಯುತ್ತಿದ್ದ.
ಕೊನೆಗೂ ವ್ಯಕ್ತಿ ಕಾಣಿಸಿದಅವನನ್ನು ಮಾತಾಡಿಸಿದ"ಯಾಕೋ ಸಿದ್ದ ಮಾರ್ಕೆಟಿಗೆ ಹೋಗಿ ಬಾ ಅಂದರೆ ಇಲ್ಲೇನು ಮಾಡ್ತಾ ಇದ್ದೀಯಾ?"ಸಿದ್ದ ಮಾತಾಡಲಿಲ್ಲ
ಮಗು ಸಿದ್ದನ್ನನ್ನು ಕಂಡಕೂಡಲೆ "ಸಿದ್ದಾ" ಎಂದು ತಬ್ಬಿಕೊಂಡಿತು. ಆತ ಮಗುವನ್ನು ದೂರ ತಳ್ಳಿದ." ಸಿದ್ದ ಯಾಕೋ ಕೋಪ " ಮತ್ತೆ ಅವನ ಮೇಲೆ ಬಿದ್ದಿತು . ಅವನಿಗೊ ಮಗುವಿಗೂ ತುಂಬಾ ಪ್ರೀತಿ .
ಆತ ಮತ್ತೆ ಗಾಭರಿಯಿಂದ ನೂಕಿದ.ಮಗುವಿಗೂ ಕೋಪ ಬಂತು . ತಂದೆಯ ಕೈ ಹಿಡಿದುಕೊಂಡು ನಿಂತಿತು
ಗಂಡ ಸಿದ್ದನನ್ನು ಮನೆಗೆ ಕರೆದ . ಸಿದ್ದನಿಗೆ ಒಪ್ಪದೆ ವಿಧಿ ಇರಲಿಲ್ಲ ವಾದ್ದರಿಂದ ಅವನೊಂದಿಗೆ ಹೊರಟ
ದಾರಿಯಲ್ಲಿ"ಸಿದ್ದ ನಂಗೆಲ್ಲಾ ಗೊತ್ತು. ಏನು ಗೊತ್ತಾಗಬಾರದು ಅಂತಿದ್ರೋ ಅದು ನಂಗೆ ತಿಳೀತು ಆದರೆ ನಾನೇನು ಮಾಡಲ್ಲ ಹೆದರ್ಕೋಬೇಡ" ಸಿದ್ದ ಬೆವೆತಿದ್ದ ಗಡ ಗಡ ನಡುಗುತ್ತಿದ್ದ.ಆ ತೋಟದ ಮನೆಯ ಹತ್ತಿರ ಬರುತ್ತಿದ್ದಂತೆ "ಬುದ್ದಿ ತಪ್ಪಾಯ್ತು ನಾನೆಷ್ಟು ಹೇಳಿದರು ಅಮ್ಮಾವ್ರು ಕೇಳಲಿಲ್ಲ" ಕಾಲಿಗೆ ಬಿದ್ದ.ಹೋಗಲಿ ಬಿಡು ಅಳಬೇಡ ಆಗಿದ್ದಾಗಿ ಹೋಯ್ತು . ಇನ್ನು ಇವತ್ತು ಮಗುವಿನ ಐದನೇ ಹುಟ್ಟುಹಬ್ಬ .ಫಂಕ್ಶ್ನ‌ಗೆ ರೆಡಿ ಮಾಡೋಣ"ಮೇಲೆದ್ದ ಸಿದ್ದನಿಗೆ ಯಾರೋ ನೂಕಿದಂತಾಯ್ತು .
ಆಯ ತಪ್ಪಿದ ಆತ ಬಾವಿಗೆ ಬಿದ್ದ. ಬೀಳುವಾಗ ಆ ಮಗು ಕೇಕೆ ಹಾಕಿ ನಕ್ಕಿದ್ದು ಕಂಡಿತು.ಒಂದೇ ಚೀತ್ಕಾರದ ನಂತರ ಇಡೀ ತೋಟ ನಿಶ್ಯಬ್ಧವಾಯ್ತು .ಸಿದ್ದ ಬಿದ್ದ ಸಿದ್ದ ಬಿದ್ದ ಎಂದು ಮಗು ನಗುತ್ತಿತ್ತು
ಆಗಲೆ ಅವನು ತನ್ನನ್ನು ನೂಕಿದ ಸೇಡನ್ನು ಮಗು ತೀರಿಸಿಕೊಂಡಿತ್ತು.ಸ್ವಲ್ಪ ಸಮಯದ ನಂತರ ಆತ ಮೊಬೈಲ್ ತೆಗೆದು ಫೋನ್ ಮಾಡಿದ"ಸಾರ್ ನಿಮ್ಮಿಂದ ದೊಡ್ಡ ಸಹಾಯವಾಯ್ತು . ನನ್ನ ಮಗುವಿನ ತಂದೆಯನ್ನು ಮಗುವಿನ ಕೈನಲ್ಲೇ ಕೊಲ್ಲಿಸಿದೆ.ನನಗೆ ಈಗ ತೃಪ್ತಿಯಾಯ್ತು ""ಒಕೆ ಒಕೆ" ಅದು ಜ್ಯೋತಿಷಿಯ ದನಿ
ಸ್ವಲ್ಪ ಹೊತ್ತಿನ ನಂತರ ಮಗುವಿನ ಕೈ ಹಿಡಿದುಕೊಂಡು ಮನೆಗೆ ಬಂದ"ಆ ಜ್ಯೋತಿಷಿ ಹೇಳಿದ್ದೆಲ್ಲಾ ಸುಳ್ಳು. ಪಾಪು ಸಿದ್ದನನ್ನು ಬಾವಿಗೆ ಬೀಳಿಸ್ತು. ಸುಮ್ಮನ್ದೆ ನನ್ನ ಕೊಲೆ ಮಾಡುತ್ತೆ ಅಂತ ಹೇಳಿದ"ಅವಳ ಮುಖ ಬಿಳುಚಿಕೊಂಡಿತು."ಮಗು ಸಾಯ್ಸಿದ್ದ್ದು ಅಂತ ಯಾರಿಗೂ ಹೇಳಬೇಡ . ಸುಮ್ಮನ್ದೆ ಇಲ್ಲ ಸಲ್ಲದ ತೊಂದರೆ . ಆಯ್ತಾ "ಅವಳ ಕಂಗಳು ಕಣ್ಣೀರಿನಿಂದ ತುಂಬಿತ್ತು . ಆಯಿತು ಎನ್ನುವಂತೆ ತಲೆ ಆಡಿಸಿದಳು
ಕೊನೆ ಕೊಸರು: ಸಿದ್ದನನ್ನು ಬಾವಿಗೆ ಬೀಳಿಸಿದ್ದು ಮಗು ಅಲ್ಲ ಮಗುವಿನ ತಾಯಿಯ ಗಂಡ . ಆ ಸತ್ಯ ರಹಸ್ಯವಾಗಿಯೇ ಉಳಿಯಿತು ಹಾಗೆಯೇ ಆ ಮಗುವಿನ ತಂದೆ ಸಿದ್ದ ನೆಂಬ ರಹಸ್ಯ ತಾಯಿಗಲ್ಲದೆ ಬೇರಾರಿಗೂ ಗೊತ್ತಿಲ್ಲವೆಂದು ಅವಳು ತಿಳಿದಿದ್ದಳು ಕೊನೆಯವರೆಗೂ

ಮಕ್ಕಳ ಹಾಡುಗಳು ಮೆಲುಕುವುದಕ್ಕೆ

ನನ್ನ ಮಗಳಿಗೆ ಇಂಗ್ಲೀಷ್ ರೈಮ್ಸ್ ಅನ್ನು ಕನ್ನಡಕ್ಕೆ ಅನುವಾದಿಸಿ ಹೇಳ್ಬೇಕು ಆಗ ಹೊಳೆದ ಕೆಲವು ಸಾಲುಗಳು
ಪುಟ್ಟಿ ಜೊತೆ ಇತ್ತೊಂದು ಕುರಿಮರಿಅದರ ಆಟ ಏನ್ಹೇಳ್ತೀತಿರಿ ರೀ
ಬಣ್ಣ ಅದರದು ಬಿಳುಪು ಕಣ್ಣ್ಣು ಫಳ ಫಳ ಹೊಳಪು
ಎಲ್ಲಿಗೋದ್ರೂ ಪುಟ್ಟಿ , ಅವಳ ಬೆನ್ನು ಹತ್ತಿಮರಿ ಹೋಗ್ತಿತ್ತು ಬಿಟ್ಟು ತನ್ನ ಹಟ್ಟಿ
ಒಮ್ಮೆ ಹೋಗಿ ಪುಟ್ಟಿ ಶಾಲೆಗೆಮಾಡ್ತು ತುಂಬಾ ದಾಂಧಲೆಟೀಚರಮ್ಮ ಹೊಡ್ಯೋಕೆ ಹೋದರೆಓಡ್ತು ಬ್ಯ್ಬಾ ಬ್ಯಾ ಅಂತಲೇ
ಹೊಳೆ ಹೊಳೆಯುವ ನಕ್ಷತ್ರ ಬಾರೋ ಒಮ್ಮೆ ನನ್ಹತ್ರಅದು ಹೆಂಗೆ ಹೋಗಿ ಸೇರಿದೆ ಆಕಾಶನನ್ನೂ ಕರ್ಕೊಂಡು ಹೋಗು ಬಾಬಾರಾ
ಗುಂಡ ಗುಂಡಿ ನೀರಿಗೋದ್ರು ಕೆರೆಯ ಏರಿಗೆಗುಂಡ ಗುಂಡಿ ಜಾರಿ ಬಿದ್ರು ನಡು ದಾರಿಗೆ
ದೂರ ಹೋಗು ಮಳೆರಾಯಆಟ ಆಡ್ಬೇಕು ನಾನಯ್ಯ
ನೀನು ಬಾ ನಾಳೆಸ್ಕೂಲಿಗೆ ಹೋಗೋ ಟೈಮಲ್ಲೇಅಮ್ಮ ನೋಡಿ ನಿನ್ನ ಬೇಡ ಸ್ಕೂಲಿಗೆ ಅಂತಾಳೆ