ಸಿರಿ
ರಾಜೀವ್ ಹೆಸರೇ ನಂಗೆ ಮನಮೋಹಕ ಆವತ್ತು ಕೋಪ ಮಾಡಿಕೊಂಡ ಆಸಾಮಿ ಇನ್ನೂ ಫೋನ್ ಕೂಡ ಮಾಡಿಲ್ಲ
ನಾನಾದರೂ ಯಾಕೆ ಫೋನ್ ಮಾಡಲಿ ಅಂತ ಅನ್ನಿಸ್ತಿದ್ರೂ "ಐ ಲವ್ ಹಿಮ್ " ಅದಕ್ಕೋಸ್ಕರ ನಾನೆ ಸೋತೆ
ಕಡೆಗೂ ಫೋನ್ ಮಾಡಿ ಸಾರಿ ಕೇಳಿದ ಮೇಲೆ ಒಪ್ಕೊಂಡ ಮಾರಾಯ
ಹೌದು ನಂಗೆ ರಾಜೀವ ಯಾಕೆ ಇಷ್ಟ
ಅವನು ಚೆಲುವ ಅನ್ನೋ ಹಾಗೇನೂ ಇಲ್ಲ, ಅಥವ ತಿಂಗಳಿಗೆ ಲಕ್ಷಾಂತರ ರೂ ಸಂಬಳದ ಕೆಲಸವೂ ಇಲ್ಲ. ಆದರೂ ಅವನ ಒಳ್ಳೆ ಗುಣ ನನಗೆ ಇಷ್ಟವಾಯ್ತು.
ಆದರೂ ನನ್ನ ಅಭಿರುಚಿಗೆ ಅವನು ಹೊಂದೋದಿಲ್ಲ ಯಾವಾಗಲೂ ಇನ್ವೆಸ್ಟ್ಮೆಂಟ್, ಪ್ಲಾನ್, ಸಂಸಾರ, ಬರೀ ಹೀಗೆ ಬೋರು ಹೊಡೆಯೋ ವಿಷಯಗಳು.
ನನ್ನ ಕಲ್ಪನೇನೆ ಬೇರೆ
ನನ್ನ ನಲ್ಲ ಮರ್ಸಿಡೀಸ್ ಬೆಂಜ್ ನಲ್ಲಿ ಬಿಳೀ ಬಣ್ಣದ ಸೂಟ್ ಹಾಕಿಕೊಂಡು ಇಳಿಯುತ್ತಲೆ ಕೈನಲ್ಲಿರೋ ಹೂಗೊಂಚಲನ್ನು ಕೊಟ್ಟು ನನ್ನತ್ತ ಮಂಡಿಯೂರಿ ಪ್ರೇಮ ನಿವೇದಿಸಬೇಕು(ಹೌದು ದಿನಾ ಮಾಡಬೇಕು) ಎದ್ದು ಆ ಗೊಂಚಲಿಂದಲೇ ಒಂದು ಹೂವನ್ನು ತಲೆಗೆ ಇರಿಸಿ, ನನ್ನತ್ತ ಪ್ರೇಮದ ನೋಟ ಬೀರಿ ಕಣ್ಣಲ್ಲೇ ಕರೆಯಬೇಕು, ನನ್ನನ್ನು ಎದೆಗೊತ್ತಿಕೊಂಡು ಪ್ರೇಮದಿಂದ ನನ್ನನ್ನ ಚುಂಬಿಸಬೇಕು.
ಅವನ ತೋಳಿನಲ್ಲಿ ಬಂಧಿಯಾಗಿ ನಾ ಬರೆಯೋ ಹೊಸ ಕಾದಂಬರಿಯ ವಸ್ತುವನ್ನು ಕೇಳುತ್ತಾ ಅದನ್ನು ತಿದ್ದುತ್ತಾ ಪ್ರೇಮದ ಹುಸಿ ಜಗಳ ಇದ್ದರೆ ಎಷ್ಟು ಚೆನ್ನಾಗಿರುತ್ತದೆ
ಅರೆ ಈಗ ಇದೆಲ್ಲಾ ಸಾಧ್ಯ ಇಲ್ಲ, ಎಷ್ಟೋ ಬಾರಿ ಇದನ್ನ ರಾಜೀವ್ಗೆ ಹೇಳಿದ್ದಕ್ಕೆ ಅವನು ಹಾಸ್ಯ ಮಾಡಿದ್ದನಲ್ಲ
ರಾಜೀವ್ಗೆ ಇವೆಲ್ಲಾ ಇಷ್ಟಾ ಇಲ್ಲ
ಹಾಗಾಗಿ ಇದೆಲ್ಲಾ ಕಲ್ಪನೇಗೆ ಸರಿ
ನಿಟ್ಟುಸಿರು ಬಿಟ್ಟೆ.
ಚಂಚಲ ಬಂದಳು
"ಏನು ಕನಸಿನ ರಾಣಿ ಕಲ್ಪನೆ ಆಫೀಸಲ್ಲಿ ಸಾಕು, ಹೊಸ ಬಾಸ್ ಬಂದಿದಾರೆ, ಎಲ್ಲರ ಇಂಟ್ರಡಕ್ಶ್ಗನ್ ನಡೀತಾ ಇದೆ.
ನೀನೂ ಬಾ ತಾಯಿ"
ಅವಳು ಹಾಗೆಯೇ ಕನಸಿನ ರಾಣಿ ಅಂತಾನೆ ನನ್ನನ್ನು ಕರೆಯೋದು
ಎಲ್ಲರೂ ಕಾನ್ಪ್ಬರೆನ್ಸ್ ರೂಮಲ್ಲಿ ಹೋಗಿ ಕುಳಿತೆವು
ಹಿಂದಿದ್ದ ಪ್ರಾಜೆಕ್ಟ್ ಮ್ಯಾನೇಜರ್ ರಾಜೀನಾಮೆ ಕೊಟ್ಟಿದ್ದುದ್ದರಿಂದ ಈಗ ಹೊಸದಾಗಿ ಬೇರೊಬ್ಬ ಮ್ಯಾನೇಜರ್ ಬಂದಿದ್ದರು
ಕೊಂಚ ಹೊತ್ತು ಮೌನ ನಂತರ ಪ್ರಾಜೆಕ್ಟ್ ಮ್ಯಾನೇಜರ್ ಜೊತೆ ಎಚ್ ಆರ್ ಎಕ್ಸ್ದಿಕ್ಯುಟೀವ್ ಶಿಲ್ಪ ಬಂದಳು
ಅವಳು ಮ್ಯಾನೇಜರ್ ನರೇನ್ನ ಪರಿಚಯ ಮಾಡಿಕೊಟ್ಟ ಮೇಲೆ ನರೇನರೆ ಮಾತು ಶುರು ಮಾಡಿದರು
ವಯಸ್ಸು ೨೮ ಇರಬಹುದೇನೋ ರಾಜೀವನ ವಯಸ್ಸೇ
"ಸ್ನೇಹಿತರೆ ನನ್ನ ಬಗ್ಗೆ ಆಗಲೇ ಶಿಲ್ಪಾ ಹೇಳಿದಾರೆ . ಅವುಗಳನ್ನು ಬಿಟ್ಟು ನಾನು ನನ್ನ ಪರಿಚಯ ಮಾಡ್ಕೋತೀನಿ
ನಾನು ಒಬ್ಬೊಂಟಿ ಅಂದ್ರೆ ನೋ ಬ್ರದರ್ಸ್ ಮತ್ತೆ ನೋ ಸಿಸ್ಟರ್ಸ್ . ಹಾಗಾಗಿ ನಾನು ತುಸು ಸ್ನೇಹಕ್ಕಾಗಿ ಪ್ರೇಮಕ್ಕಾಗಿ ಒದ್ದಾಡೋನು ಇನ್ ಅದರ್ ವರ್ಡ್ಸ್ ನಾನು ಒಬ್ಬ ಭಾವ ಜೀವಿ.ನಿಮ್ಮೆಲ್ಲರನ್ನ ಕೇಳೋದೇನೆಂದರೆ ದಯವಿಟ್ಟು ನನಗೆ ಮಾತಿನಲ್ಲಿ ಸಾರ್, ಬಾಸ್,ಎಂದು ಕರೆಯದೆ ನರೇನ್ ಎಂದು ಪ್ರೀತಿಯಿಂದ ಕರೆಯಿರಿ. ಬರೀ ಎರೆಡು ಕೈ ಸೇರಿದರೆ ಚಪ್ಪಾಳೆ ಹೊಡೆಯದೆ ಇಲ್ಲಿರುವ ಅಷ್ಟೂ ಕೈಗಳೂ ನನ್ನ್ನ ಜೊತೆಗೂಡಲಿ .ನಿಮ್ಮ ಸಹಕಾರವೇ ಇಲ್ಲಿ ಅಗತ್ಯ . ನೊ ಸಬ್ ಆರ್ಡಿನೇಟ್ಸ್, ನೊ ಬಾಸ್, ನನ್ನ ಹಾಬೀಸ್ ಆಫೀಸ್ ಕೆಲಸ ಬಿಟ್ಟರೆ ಕತೆ, ನಾಟಕ, ಸಿನಿಮಾ, ಮ್ಯಾಚ್ ಇಷ್ಟೆ, ನಂಗೂ ನಿಮ್ಮಗಳ ಬಗ್ಗೆ ತಿಳಿಯಬೇಕೆಂಬ ಆಸೆ ಇದೆ ದಯವಿಟ್ಟುನಿಮ್ಮ ಪರಿಚಯ ಹೇಳಿ"
ಮುಗುಳು ನಗೆಯ ಮಿಂಚಿನಿಂದ ಎಲ್ಲರ ವಿಶ್ವಾಸ ಗಳಿಸಿದ ನರ್ರೇನ್
ಎಲ್ಲರಿಗೂ ತಮ್ಮ ತಮ್ಮ ಪರಿಚಯ ಹೇಳಿಕೊಂಡರು
ನಾನು ನನ್ನ ಹೆಸರನ್ನು ಹೇಳಿ ನನ್ನ ಆಸಕ್ತಿಗಳನ್ನು ವಿವರಿಸಿದೆ
"ವಾವ್ ಗ್ರೇಟ್ ಕೋಇನ್ಸಿಡೆನ್ಸ್ ಮೈ ಇಂಟರೆಸ್ಟ್ ಮ್ಯಾಚ ವಿತ್ ಯು" ನಗುತ್ತಾ ಕೈ ಕುಲುಕಿ ಹೊರಟ
ತುಂಬಾ ಸುಂದರ ಜೊತೆಗೆ ಸ್ವಲ್ಪ ಸ್ಟೈಲಿಷ್ ಎನಿಸಿತು
ಅಂದೆಲ್ಲಾ ನರೇನ್ನ ಜೊತೆ ರಾಜೀವನ ಹೋಲಿಕೆಯಲ್ಲೇ ಕಳೆಯಿತು. ಆಫೀಸ್ನಲ್ಲೂ ಅವನ ಗುಣಗಾನ ನಡೆಯುತ್ತಿತ್ತು
ಸಂಜೆಯಾಯಿತು ಹೊಸ ಚಿತ್ರ ಪ್ರೇಮಕಾಗಿ ಬಿಡುಗಡೆಯಾಗಿತ್ತು. ರಾಜೀವಗೆ ಚಿತ್ರಕ್ಕೆ ಹೋಗೋಣ ಎಂದು ಹೇಳಿದ್ದೆ ಇನ್ನೇನು ಬರಬಹುದು.
ಆಫೀಸಿನ ಎಲ್ಲರೂ ಹೊರಡುತ್ತಿದ್ದರು . ನಾನೂ ಬ್ಯಾಗ್ ತೆಗೆದುಕೊಂಡು ಲಿಫ್ಟ್ ಗೆ ಪ್ರವೇಶಿಸಿ ಗ್ರೌಂಡ್ ಫ್ಲೋರ್ ಬಟನ್ ಒತ್ತಿದೆ
"ತೇರೆ ಬಿನಾ ಜಿಂದಗಿ ಹೈನ್ ಲೇಕಿನ್" ಮೊಬೈಲ್ ಹಾಡಲು ಶುರುವಾಯ್ತು. ರಾಜೀವನ ಕಾಲ್ ಅದು ಫೋನ್ ಆನ್ ಮಾಡಿದೆ
"ಸಿರಿ ಸಾರಿ ಸಿರಿ ಇವತ್ತು ಬರಕ್ಕಾಗ್ತಿಲ್ಲ, ನಾಳೇನೂ ಆಡಿಟಿಂಗ್ ಇದೆ ಹಾಗಾಗಿ ಮುಂದಿನವಾರ ಪ್ರೋಗ್ರಾಮ್ ಹಾಕಿಕೊಳ್ಲೋಣ"
ಸಿಟ್ಟು ಒತ್ತರಿಸಿಕೊಂಡು ಬಂತು. ಯಾವ ಮಾತನ್ನೂ ಆಡದೆ ಫೋನ್ ಕಟ್ ಮಾಡಿದೆ.
ಎಷ್ಟೆಲ್ಲಾ ಆಸೆ ಇಟ್ಟುಕೊಂಡು ಟಿಕೆಟ್ ಬುಕ್ ಮಾಡಿಸಿ ಜಸ್ಟ್ ಫಿಲಮ್ಗೆ ಬಂದು ಕೂತ್ಕೊ ಅಂದ್ರೂ ಬರಕ್ಕಾಗಲ್ಲ ಅಂದ್ರೆ ......
ಮತ್ತೆ ಫೋನ್ ಬಾರಿಸಿತು , ರಾಜೀವನದೆ ಸಾರಿ ಕೇಳ್ತಾನೆ , ಬೇಡ ಇನ್ನೊಂದೆರೆಡು ದಿನಾ ಆಟ ಆಡಿಸೋಣ . ಅಲ್ಲೀವರೆಗೆ ಮಾತಾಡೋದು ಬೇಡ.ಸಿನಿಮಾಗೆ ಸುಮನಾಳಿಗೆ ಬರಲು ಹೇಳಿದರೆ ಅವಳ ಜೊತೆ ಹೋಗಬಹುದು
ಲಿಫ್ಟ್ ಗ್ರೌಂಡ್ ಫ್ಲೋರ್ ಗೆ ಬಂದು ನಿಂತಿತು
ಮೊಬೈಲ್ ಆಫ್ ಮಾಡಿ ಸ್ಕೂಟಿಯ ಬಳಿ ಬಂದು ಸ್ಟಾರ್ಟ್ ಮಾಡಿದೆ ಸ್ಕೂಟಿ ಮುಂದೆ ಹೋಗುತ್ತಿದ್ದಂತೆ ಸಿಗ್ನಲ್ ಬಂತು ಸ್ಕೂಟಿ ನಿಲ್ಲಿಸುತ್ತಿದ್ದಂತೆ ಪಕ್ಕದಲ್ಲಿ ಕಾರೊಂದು ಬಂದು ನಿಂತಿತು.
"ನರೇನ್ "
ಹಾಯ್ ಎಂದು ಕೈಯಾಡಿಸಿದ
ಅವನ ನಗು ಒಂಥರಾ ಮೋಡಿ.
ನಾನು ಕೈ ಆಡಿಸಿ ಸುಮ್ಮನಾದೆ.
ಇನ್ನೂ ರೆಡ್ ಸಿಗ್ನಲ್ ಕಳೆಯಲು ಒಂದು ನಿಮಿಷ ಬೇಕು
ಸುಮನಾಗೆ ಫೋನ್ ಮಾಡಿದೆ
"ಸಾರಿ ಸಿರಿ ಇವತ್ತು ಮನೇಗೆ ಹೋಗ್ಬೇಕು ಗಂಡಿನ ಕಡೆಯವರು ಬರ್ತಾರೆ. ಅದಕ್ಕೆ ಅಕ್ಕನ್ನ ರೆಡಿ ಮಾಡ್ಬೇಕು" ಸುಮನಾಳ ದನಿ ಕೇಳಿತು
ಛೆ
ಒಂಥರಾ ಡಿಸ್ ಅಪಾಯಿಂಟ್ ಆಯ್ತಾದರೂ
ಸರಿ ಯಾರೂ ಬೇಡ ಒಬ್ಬಳೇ ಹೋಗೋಣ ಎಂದುಕೊಂಡು ಸಿಗ್ನಲ್ ಬಿಟ್ಟ ತಕ್ಷಣ ಪಿ.ವಿ.ಆರ್ ಕಡೆ ಸ್ಕೂಟಿ ತಿರುಗಿಸಿದೆ.
ಪಿ.ವಿಆರ್ನಲ್ಲಿ ಸ್ಕೂಟಿ ಪಾರ್ಕ್ ಮಾಡಿ ಬಂದು ಎಸ್ಕಲೇಟರ್ ಮೇಲ್ ಕಾಲಿಡುತ್ತಿದ್ದಂತೆ ಪಕ್ಕದಲ್ಲಿಯೇ ನರೇನ್ ನಿಂತಿದ್ದ
ಅವ್ನು ನನ್ನನ್ನು ನೋಡಬಾರದೆಂದು ಇತ್ತ ತಿರುಗಿದೆ. ನಂತರ ಜನ ಜಂಗುಳಿಯಲ್ಲಿ ಎಲ್ಲಿ ಕರಗಿದ್ದನೋ ಗೊತ್ತಾಗಲಿಲ್ಲ
ಪಕ್ಕದ ಸೀಟು ನಾನೆ ಬುಕ್ ಮಾಡಿದ್ದುದರಿಂದ ಖಾಲಿ ಇತ್ತು
ಆಗಾಗ ಮುಂದಿದ್ದ ಹುಡುಗರು ಹಿಂದೆ ತಿರುಗಿ ನೋಡುವುದು ಬಿಟ್ಟರೆ ಏನೂ ತೊಂದರೆಯಾಗಲಿಲ್ಲ
ಸಿನಿಮಾ ಚೆನ್ನಾಗಿತ್ತು
ಪ್ರೇಮಕ್ಕಾಗಿ ಪಡಬಾರದ ಪಾಡು ಪಡುವ ಹುಡುಗ ಹುಡುಗಿ . ಮಧ್ಯೆ ಮಧ್ಯೆ ರೋಮಾನ್ಸ್, ಎಲ್ಲಾ ನನಗೆ ಇಷ್ಟ.
ಸಿನಿಮಾ ಮುಗಿದು ಹೊರ ಬರುತ್ತಿದ್ದಂತೆ ನನ್ನ ಹಿಂದೆಯೇ ನರೇನ್ ಅರೆ ಇದೇನು ಇವನೂ ಇದೇ ಸಿನಿಮಾಗೆ ಬಂದಿದ್ದನಾ?
ಈಗ ಮಾತಾಡಿಸಲೇಬೇಕೆನಿಸಿತು
ಹಿಂದೆ ತಿರುಗಿ ಮಾತಾಡಿಸಿದೆ
"ಹಾಯ್ ಎಂದೆ"
"ಅರೆ ನೀವು . ಹೇಗಿತ್ತು ಫಿಲ್ಮ್" ನನ್ನನ್ನು ಗಮನಿಸಿಯೇ ಇಲ್ಲ
"ಚೆನ್ನಾಗಿತ್ತು" ಬೇರೆ ಪ್ರಶ್ನೆ ನಿರೀಕ್ಷಿಸಿದ್ದೆ ಎಷ್ಟು ಕ್ಯಾಸುಯಲ್ ಆಗಿ ಕೇಳ್ತಾ ಇದಾನೆ ಅನ್ನಿಸಿತು
"ನಂಗೆ ಇಷ್ಟವಾಗಿರೋ ಫಿಲಮ್ ಫಸ್ಟ್ ಡೇ ಫಸ್ಟ್ ಶೋ ಫಸ್ಟ್ ಸೀಟ್ , ಇವತ್ತು ರಿಪೋರ್ಟ್ ಮಾಡ್ಕೋಬೇಕಿತ್ತಲ್ಲ ಅದಕ್ಕೆ ಸಂಜೆ ಬಂದಿದ್ದೆ"
"ಓ ನನಗೂ ಅಷ್ಟೆ ಆದರೆ ಕೆಲಸ ಇದ್ಯಲ್ಲ ಹ್ಯಾಗೆ ಬರೋಕಾಗುತ್ತೆ"
ಹಾಗೆ ಮಾತಾಡುತ್ತಾ ಕಾಫಿ ಡೇ ಕಡೆ ಹೆಜ್ಜೆ ಹಾಕಿದೆವು ಕಾಫಿ ಕುಡಿಯುತ್ತಾ ಮಾತು ಆರಂಭಿಸಿದೆವು
ಅವನಿಗೂ ನನ್ನ ಹಾಗೆಯೆ ಕತೆ ಕವನ ,ಕಾದಂಬರಿ, ನಾಟಕ ತುಂಬಾ ಪ್ರಿಯವಾದವುಗಳು ಎಂದು ತಿಳಿಯಿತು
ಆಗಾಗ ಅವನೇ ಅಶುಕವಿಯಂತೆ ಒಂದೆರೆಡು ಕವಿತೆಗಳನ್ನು ಕಟ್ಟಿದ.
ಅವನ ಜೊತೆಗಿದ್ದಂತೆ ಹತ್ತು ನಿಮಿಷಗಳು ಆಗಿದ್ದು ತಿಳಿಯಲೇ ಇಲ್ಲ.
ಸರಿ ಲೇಟ್ ಆಯ್ತು ಎಂದುಅವನೇ ಹೊರಟ
ಕೋರಮಂಗಲದ ಬಳಿಯಲ್ಲೇ ನಮ್ಮ ಪಿಜಿ ಇರೋದು
ರಾತಿ ಎಂಟುವರೆಯ ಮೇಲೆ ಹೋದರೆ ಮನೆಯಾಕೆಯ ಕಣ್ಣು ಕೆಂಪಾಗುತ್ತದೆ.
ಮೈಯ್ಯನ್ನೆಲ್ಲಾ ಕಣ್ಣಲ್ಲೇ ಸ್ಕಾನ್ ಮಾಡಿ ಒಳಗೆ ಕಳಿಸುತ್ತಾಳೆ
ಇವತ್ತೂ ಅದೇ ಗತಿ
ಸ್ಕೂಟಿ ಸ್ಟಾರ್ಟ್ ಮಾಡಿ ನರೇನ್ ಹೋದ ವಿರುದ್ದ ದಿಕ್ಕಿಗೆ ಹೊರಟೆ
ಮನದಲ್ಲಿ ಮಂಥನ ಶುರುವಾಯ್ತು. ಏಕೋ ರಾಜೀವನ ಬದಲು ಮನಸ್ಸು ನರೇನನ ಬಗ್ಗೆ ಯೋಚಿಸಲಾರಂಭಿಸಿತು.
ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ಇಲ್ಲಿ ಪ್ರತ್ಯಕ್ಷವಾಗುತ್ತವೆ
Monday, February 9, 2009
Sunday, February 8, 2009
ಪ್ರೇಮವೊಂದು ಹುಚ್ಚು ಹೊಳೆ ಭಾಗ -೧
"ಹರೀಶ್ ನೋಡೋ ಅಲ್ಲಿ" ಸೋಮು ಕೂಗಿದ
ಚಪ್ಪಲಿ ರಾಕಿನಲ್ಲಿ ಎತ್ತಿಡುತ್ತಿದ್ದ ಹರೀಶ್ನ ದೃಷ್ಟಿ ಬಾಗಿಲ ಕಡೆಗೆ ಬಿತ್ತು
ಕನಸೋ ನನಸೋ ತಿಳಿಯದಾಯಿತು
ಅವನ ಆರಾಧ್ಯ ಮೂರ್ತಿ, ಪ್ರಖ್ಯಾತ ಸಿನಿ ನಾಯಕಿ ಸ್ಮಿತ ನಿಂತಿದ್ದಳು
ಎಲ್ಲರೂ ಅವಳೆಡೆ ಓಡಿದರು
ಸ್ಮಿತಾ ಹೆಸರಿನಂತೆಯೇ ತನ್ನ ನಗುವಿನಿಂದಲೇ ಕನ್ನಡ ಸಿನಿ ರಂಗದಲ್ಲಿ ಮೋಡಿ ಮಾಡಿದ್ದಳು
ಮಾದಕ ಸುಂದರಿ, ಕಣ್ನಿನಲ್ಲೇ ಕೊಲ್ಲುವ ಹುಡುಗಿ ಕೇವಲ ಮೂರು ವರ್ಷದಲ್ಲಿ ಇಡೀ ಚಿತ್ರರಂಗವನ್ನೇ ಆಳಲಾರಂಬಿಸಿದ್ದ್ದಳು
ಅಂತಹ ನಾಯಕಿ ಇಂದು ತಾನಾಗೆ ಈ ಚಪ್ಪಲಿ ಅಂಗಡಿಗೆ ಬಂದಿದ್ದಳು
ಹರೀಶ್ ಕೆಲ್ಸ ಮಾಡಿತ್ತಿದ್ದ ಚಪ್ಪಲಿ ಅಂಗಡಿಯೂ ಯಾವ ಐಶಾರಾಮಿ ಬಂಗಲೆಗೂ ಕಡಿಮೆ ಇರಲಿಲ್ಲ. ಚಪ್ಪಲಿಯ ಬೆಲೆ ಕಡಿಮೆಯದ್ದು ಎಂದರೆ ಇಪ್ಪತ್ತೈದು ಸಾವಿರ. ಹೆಚ್ಚಿಗೆ ಎಲ್ಲೆಯೇ ಇರಲಿಲ್ಲ.
ಸ್ಮಿತಾ ಬರುತ್ತಿರುವುದು ಮೊದಲ ಬಾರಿ ಏನಲ್ಲ
ಆದರೆ ಹರೀಶ್ ಇತ್ತೀಚಿಗೆ ಈ ಅಂಗಡಿಗೆ ಕೆಲ್ಸಕ್ಕೆ ಸೇರಿದ್ದ . ಹಿಂದೆ ಇದ್ದ ಕೆಲಸ ಬಿಟ್ಟು ಸೇರಿದ್ದು ಕೇವಲ ಸ್ಮಿತ ಇಲ್ಲಿಗೆ ಬರುತ್ತಾಳೆಂದು.
ಮೊಬೈಲ್ನಲ್ಲಿ ಮಾತಾಡುತ್ತಾ ಒಳಗೆ ಬಂದ ಸ್ಮಿತಾಗೆ ಸನ್ನೆಯಲ್ಲೇ ಕೂರಲು ಹೇಳಿದ. ಆ ಮೆತ್ತನೆಯ ಸೋಫ ಕೇವಲ ಅಂತಹ ಗಣ್ಯರಿಗಾಗಿ ಮೀಸಲು. ಹರೀಶನಂತಹವರು ತಮಾಷೆಗಾಗಿಯೂ ಅಲ್ಲಿ ಕೂರುವಂತಿಲ್ಲ
ಫೋನಿನಲ್ಲೇ ಮಾತಾಡುತ್ತಾ ಕುಳಿತವಳನ್ನೇ ಎವೆ ಇಕ್ಕದೆ ನೋಡಲಾರಂಭಿಸಿದ.
ಬದುಕಿನ ಸೌಭಾಗ್ಯವೆಲ್ಲಾ ಅಲ್ಲೇ ಇದೆ ಏನೋ ಎಂಬಂತೆ ಭಾಸವಾಗತೊಡಗಿತು
ಬೇಡೆಂದರೂ ಮುಂದೆ ಬರುತ್ತಿದ್ದ ಮುಂಗುರಳನ್ನು ತನ್ನ ನೀಳ ಬೆರಳುಗಳಿಂದ ಹಿಂದೆ ಸರಿಸುತ್ತಾ ಅವಳ ತುಟಿಗಳೆರೆಡು ಒಂದರ ಮೋಡಿಗೆ ಇನ್ನೊಂದು ಒಳಗಾಗಿವೆ ಎಂಬಂತೆ ಪದೆ ಪದೆ ಮುತ್ತಿಡುತ್ತಿದ್ದಂತೆ ಇವನ ಮನದಲ್ಲಿ ಕಂಪನ ಕಣ್ಣ ಎವೆಗಳು ಅವಳ ಕಂಗಳನ್ನು ಚುಂಬಿಸಲೆಂದೆ ಬಾಗುತ್ತಿದ್ದವು. ನೀಳ ಮೂಗಿನ ಸುಂದರಿ ಅವಳು ಬೆಳ್ಳನೆ ಮೈ . ಹಾಲಿನ ಕೊಳದಲ್ಲೇ ಇದ್ದಾಳೇನೋ ಎಂಬಂಥಾ ರೂಪ ನೀಳ ಮೈ ಮಾಟ. ಹರೀಶನ ಭಾಗ್ಯಕ್ಕೆ ಎಣೆಯೇ ಇಲ್ಲವಾಗಿತ್ತು.
"ಏಯ್ ಏಳೋ ಮೇಲೆ "
ಗುಡುಗಿನ ಕೂಗಿಗೆ ಎಚ್ಚರವಾಗಿ ವಾಸ್ತವಕ್ಕೆ ಬಂದನು ಅವಳನ್ನೇ ನೋಡುತ್ತಾ ಗೊತ್ತಿಲ್ಲದೆ ಅವಳ ಎದುರಿಗಿದ್ದ ಸೋಫಾ ಮೇಲೆ ಕೂತು ಬಿಟ್ಟಿದ್ದ.
ಸ್ಮಿತಾಳ ಸೆಕ್ರೆಟರಿ ಬೊಬ್ಬೆ ಹೊಡೆಯುತ್ತಿದ್ದ.
"ಏನು ಮೇಡಮ್ ಸಮಕ್ಕೂ ಕೂತ್ಕೋತೀಯ ಈಡಿಯಟ್ ಏಳೋ ಮೇಲೆ "
ಹರೀಶ್ ನಡುಗತೊಡಗಿದ. ಏನು ಹೇಳಲು ತೋಚಲಿಲ್ಲ
ಸ್ಮಿತಾ ಕೂಡ ಫೋನ್ ಆಫ್ ಮಾಡಿ ಸೆಕ್ರೆಟರಿಯತ್ತ ಏನು ಎಂಬಂತೆ ನೋಡಿದಳು
"ಮೇಡಮ್ ನೀವು ಮಾತಾಡ್ತಾ ಇದ್ದರೆ ನಿಮ್ಮನ್ನೇ ಒಳ್ಳೆ ತಿಂದುಬಿಡೋ ಹಾಗೆ ಇಷ್ಟು ಹತ್ರದಲ್ಲಿ ಕೂತ್ಕೊಂಡು ನೋಡ್ತಿದ್ದ ಇವನು"
ಸೆಕ್ರೆಟರಿ ಆರೋಪಿಸಿ ಹರೀಶನನ್ನು ಕಡಿದುಬಿಡುವಂತೆ ನೋಡಿದ.
ಸ್ಮಿತಾ ಒಮ್ಮೆ ಹರೀಶನನ್ನು ನೋಡಿದಳು ಆ ನಡುಕದಲ್ಲಿಯೂ ಅವಳ ದೃಷ್ಟಿ ತನ್ನ ಮೇಲೆ ಹರಿದಿದ್ದಕ್ಕೆ ಜನ್ಮ ಪಾವನವಾಯ್ತು ಎಂದು ಕೊಂಡ.
ಮತ್ತೆ ಮಂದ ಸ್ಮಿತಳಾಗಿ "ರಾಜೀವ್ ಹೋಗಲಿ ಬಿಡಿ ಅವನಿಗೇ ಗೊತ್ತಿಲ್ಲದೆ ಹಾಗೆ ಮಾಡಿದ್ದಾನೆ. ಲೆಟ್ ಅಸ್ ನಾಟ್ ಮೇಕ್ ಇಟ್ ಬಿಗ್ ಇಶ್ಯೂ " ನುಡಿದಳು
ಒಮ್ಮೆ ಹರೀಶನತ್ತ ನೋಡಿ ನಕ್ಕಳು
ಇಂಗ್ಲೀಶ್ ಮಾತಾಡಲು ಬರದಿದ್ದರೂ ಅರ್ಥವಾಗುತಿತ್ತು
ಕೊನೆಗೆ ಕಸ್ಟಮರ್ ಕೇರ್ ಒಬ್ಬರು ಬಂದು ಅವಳಿಗೆ ಸ್ಲಿಪ್ಪರ್ ತೋರಿಸಲು ಕರೆದು ಕೊಂಡು ಹೋದರು.
ರಾಶಿ ಬಿದ್ದಿದ್ದ ಚಪ್ಪಲಿಗಳನ್ನೆಲ್ಲ ಎತ್ತಿಡಲು ಬಗ್ಗುತ್ತಿದ್ದಂತೆ
"ಏನೋ ಹರಿ ಸ್ಮಿತಾ ನಿಂಗೆ ಸಪ್ಪೋರ್ಟ್ ಮಾಡಿದ್ರು. ಏನ್ ವಿಷಯ" ಗುರು ಕೀಟಲೆ ಮಾಡಿದ
"ಏನೋ ಒಂಥರಾ ಏನೋ ಒಂಥರಾ " ಸೋಮ ಹಾಡತೊಡಗಿದ .
ಇವನಿಗೋ ಮನದಲ್ಲಿ ಯಾವುದೋ ವೀಣೆ ಮಿಡಿದ ಹಾಗೆ ರಕ್ತವೆಲ್ಲಾ ಮುಖಕ್ಕೆ ಚಿಮ್ಮಿತು
ಮೊದಲೇ ಬಿಳಿ ಮುಖ . ಈಗ ಕೆಂಪಗಾಗಿತ್ತು
ಸ್ಮಿತಾ ಕಾಲಿಗೆ ಹಾಕಿದ್ದ ಚಪ್ಪಲಿ ಬಿಟ್ಟು ಹೊಸ ಚಪ್ಪಲಿ ಹಾಕಿಕೊಂಡಳು. ಆ ಹಳೇ ಚಪ್ಪಲಿ ಯಾರು ಬೇಕಾದರೂ ತೆಗೆದುಕೊಳ್ಳಬಹುದಿತ್ತು.
ಅವಳ ಕಾಲಿನ ಸ್ಪರ್ಶವಾಗಿದ್ದ ಆ ಚಪ್ಪಲಿಯನ್ನು ಪ್ರೀತಿಯಿಂದ ತೆಗೆದು ಒಂದು ಬಾಕ್ಸಿನಲ್ಲಿ ಹಾಕಿಟ್ಟ . ಅದನ್ನು ಅವಳೂ ನೋಡಿದಳು
ಮತ್ತೊಮ್ಮೆ ಅವಳ ನೋಟ ಇವನ ನೋಟಕ್ಕೆ ಬೆರೆಯಿತು. ಹರೀಶನ ಆನಂದ ಮೇರೆ ಮೀರಿತು
ಹೋಗುವಾಗ ಬಾಯ್ ಹೇಳಿ ಹೊರಟಳು. ಸೆಕ್ರೆಟರಿ ಮಾತ್ರ ಸಿಡಿಮಿಡಿಗುಟ್ಟುತ್ತಿದ್ದ.
ಅದಾದ ಎರಡೆ ದಿನಕ್ಕೆ ಹರೀಶ ಕೆಲಸ ಹೋಯಿತು. ಕಾರಣ ಸ್ಮಿತಾ ಮೇಡಮ್ ತೆಗೆಯಲು ಹೇಳಿದ್ದಾರೆ ಎಂಬ ಉತ್ತರ ಬಂತು.
ಹರೀಶ ಗೋಗರೆದ ಬೇಡಿಕೊಂಡ. ಮನೆಯಲ್ಲಿ ತಂಗಿಯ ಮದುವೆಗೆ ಹಣ ಜೋಡಿಸಬೇಕು ಎಂದು ಅತ್ತ
ಮಾಲೀಕ ಮಾತ್ರ ಕಲ್ಲು ಹೃದಯಿಯಾಗಿದ್ದ
ಅಷ್ಟೆಲ್ಲಾ ಬೆಂಬಲಿಸಿದ ಸ್ಮಿತಾ ಹೀಗೇಕೆ ಮಾಡಿದ್ದಾಳೆಂದು ಯೋಚಿಸುತ್ತಲೇ ಇದ್ದ. ಸ್ವಲ್ಪ ಹೊತ್ತಿಗೆ ಅವನ ಮೊಬೈಲ್ಗೆ ಕಾಲ್ ಬಂತು
ಸ್ಮಿತಾ ಮೇಡಮ್ ಮನೆಯಿಂದ ಅದು "ಮೇಡಮ್ ಕೂಡಲೆ ಬರುವಂತೆ ಹೇಳಿದ್ದಾರೆ" ಎಂದು ಹೇಳಿದರು ಅಲ್ಲಿಂದ
ಅನಿರೀಕ್ಷಿತ ಘಟನೆ . ಅದೇನೋ ನಿಜವೋ ಭ್ರಮೆಯೋ . ಏಕಿರಬಹುದು ಅವತ್ತು ಹಾಗೆ ನೋಡಿದ್ದಕ್ಕೆ ಸ್ಮಿತಾ ಕೋಪ ಮಾಡಿಕೊಂಡು ತನ್ನನ್ನು ಹೊಡೆಸಲು ಕರೆಸಿರಬಹುದೇ ಎಂಬ ಯೋಚನೆಯೂ ಬಂತು.
ಮೊಬೈಲ್ನಲ್ಲು ಸ್ಮಿತಾ ಚಿತ್ರವೇ. ನೋಡುತ್ತಾ ಇಲ್ಲ ಅದಿರಲಿಕ್ಕಿಲ್ಲ ಎಂದುಕೊಂಡು ಧೈರ್ಯ ಮಾಡಿಕೊಂಡು ಮನೆಗೆ ಹೋದ
ವಾಚಮನ್ ಕೂಡ ಅವನನ್ನು ಒಳಗೆ ಬಿಟ್ಟ. ಮೇಲೆ ಬಾಲ್ಕನಿಯಲ್ಲಿ ಸ್ಮಿತಾ ನಿಂತಿದ್ದಳು ಜೊತೆಗೆ ಅವಳ ಗಾಡಫಾದರ್ ಅಮರ್ ಪಾಲ್ ಕೂಡ. ಇಬ್ಬರ ನಡುವೆಯ ಏನೋ ಮಾತು ಕಥೆ ನಡೆಯುತ್ತಿತ್ತು.
ಆ ಬಂಗಲೆ ನೋಡಿ ದಂಗಾಗಿ ಹೋದ
ಅಬ್ಬಾ ಏನೋ ವೈಭವ ಅಂತಹ ಮನೆಗಳನ್ನು ಕೇವಲ ಸಿನಿಮಾದಲ್ಲೆ ಮಾತ್ರ ನೋಡಿದ್ದ. ಸ್ಮಿತಾಳನ್ನು ಕಾಣಲು ಜನವೋ ಜನ . ನಿರ್ಮಾಪಕರು, ನಿರ್ಧೇಶಕರು, ನಟರು, ನಾಯಕರು . ಸುಮಾರು ಜನ ಆಳುಕಾಳುಗಳು.
ತಾನೆಲ್ಲಿ ನಿಲ್ಲುವುದು ಎಂದು ತಿಳಿಯದೆ ಹೊರಗಡೆಯೇ ನಿಂತಿದ್ದ
ಅಷ್ಟರಲ್ಲಿ ಮನೆಯ ಆಳೊಬ್ಬ ಬಂದು ಮನೆಯ ಹಿಂದಿನ ಪಾರ್ಕ್ ಬಳಿ ಹೋಗಲು ಹೇಳಿದ.
ತಡಕಾಡಿಕೊಂಡು ಅಲ್ಲಿ ಹೋದ ಸ್ಮಿತಾ ಸೆಕ್ರೆಟರಿ ರಾಜೀವ್ ಇದ್ದ ಅಲ್ಲಿಯೇ
"ನೋಡಪ್ಪ ಮೇಡಮ್ ನಿನ್ನನ್ನ ಅವರ ಮನೆಗೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಅಂತ ಇಷ್ಟ ಪಟ್ಟಿದ್ದಾರೆ ಇದೇ ಮನೆಲಿ ಕೆಲಸ ಬಂದೋರಿಗೆ ಕೂರಿಸಿ ಅವರನ್ನ ನೋಡಿಕೊಳ್ಳೋದು ಉಪಚಾರ ಮಾಡೋದು ಅಷ್ಟೆ ಸಂಬಳ ಚಪ್ಪಲಿ ಅಂಗಡೀಗಿಂತ ಜಾಸ್ತಿ ಸರೀನಾ ಇವತ್ತಿಂದಾನೆ ಜಾಯಿನ್ ಆಗು ಆಯ್ತಾ. ಅಂದ ಹಾಗೆ ನಿಂಗೊಂದು ರೂಮ್ ಕೂಡ ಇದೆ ನೀನುಇಲ್ಲೇ ಇರಬೇಕು ಗೊತ್ತಾಯ್ತಾ" ಅವನು ಹರೀಶನ ಯಾವ ಉತರಕ್ಕೂ ಕಾಯಲಿಲ್ಲ. ಇದು ಅಪ್ಪಣೆ ಎಂಬಂತೆ ಇತ್ತು ಅವನ ಮಾತಿನ ಧಾಟಿ
ಹರೀಶನ ಮನಸ್ಸು ಆಗಸದಲ್ಲಿ ಓಲಾಡಿತು.
ಎಂಥ ಭಾಗ್ಯ. ಸ್ಮಿತ ದ ಗ್ರೇಟ್ ಮೇಡಮ್ ನನ್ನನ್ನು ಅವರ ಮನೆಯ ಕೆಲಸಕ್ಕೆ ಕರೆದು ಸೇರಿಸಿಕೊಂಡಿದ್ದಾರೆ ಎಂಬುದನ್ನು ನೆನೆಸಿ ನೆನೆಸಿ ಸಂತಸ ಪಡಲಾರಂಭಿಸಿದ .
ಅಂದೇ ಅವನ ಮನೆಯಿಂದ ಅವನ ವಸ್ತುಗಳೆಲ್ಲಾ ಅವನ ಹೊಸ ರೂಮಿಗೆ ರವಾನೆಯಾದವು. ಹರೀಶನ ಅಮ್ಮ ಹಾಗು ತಂಗಿಗೂ ಖುಶಿ . ದೊಡ್ಡ ಹೀರೋಯಿನ್ ಮನೇಲಿ ಮಗ ಕೆಲ್ಸ ಮಾಡುತ್ತಾನೆ ಎಂಬುದೇ ಅವರಿಗೆ ಹಿಗ್ಗಿನ ವಿಷ್ಯ.
ಆದರೆ ಕೆಲಸಕ್ಕೆ ಬಂದ ದಿನ ಅವನಿಗೆ ನಿರಾಸೆ. ಒಟ್ತು ಹದಿನೈದು ಜನ ಕೆಲಸದವರು. ಅವರಲ್ಲಿ ಐದು ಜನ ಇದೇ ಕೆಲಸಮಾಡುತ್ತಿದ್ದವರು. ಅದರಲ್ಲಿ ಅವನಿಗೆ ಕೆಲಸವೇ ಇಲ್ಲ. ಸ್ಮಿತಾ ಬೆಳಗ್ಗೆ ಹೋಗುವಾಗ ಇವನತ್ತ ಕೈ ಬೀಸಿದಳು. ಅಷ್ಟು ಸಾಕಾಗಿತ್ತು.
ಅಂದೆಲ್ಲಾ ಕೆಲಸವಿಲ್ಲದೆ ಕೂತಿದ್ದ.
ಹೊತ್ತು ಹೊತ್ತಿಗೆ ಊಟ ಸಿಕ್ಕಿತು.
ಜೊತೆಗೆ ಕೆಲ್ಸದಾಳು ಮುನಿಯನ ಜೊತೆ ಕೂತಾಗ ಸ್ಮಿತಾಳ ಹಿಂದಿನ ವಿಷ್ಯಗಳು ತಿಳಿದವು
"ಸ್ಮಿತಾ ಹುಟ್ಟಿದ್ದು ಯಾವುದೋ ಸ್ಲಮ್ಮಿನಲ್ಲಿ ಆದರೆ ಅವಳ ರೂಪು ಲಾವಣ್ಯಗಳಿಂದ ನಿರ್ಮಾಪಕ ಅಮರ್ ಪಾಲ ಕಣ್ಣಿಗೆ ಬಿದ್ದಳು. ಅಮರ್ ಪಾಲ್ರಾ ಅಪ್ಪಣೆಯಿಲ್ಲದೆ ಅವಳು ಯಾವ ಪ್ರಾಜೆಕ್ಟ್ ಅನ್ನೂ ಕೈಗೆತ್ತಿಕೊಳ್ಳುವುದಿಲ್ಲ. ಅವಳ ಸಂಭಾವನೆಯನ್ನೂ ಅವನೆ ಗೊತ್ತು ಮಾಡುವುದು. ಮುಂದೆ ಅವರಿಬ್ಬರೂ ಮದುವೆಯಾಗಬಹುದು ಎಂದಾಗ ಮಾತ್ರ ಹರೀಶನ ಮನದಲ್ಲಿ ಕಸಿವಿಸಿಯಾಯ್ತು. ಅವಳ ವಯಸ್ಸು ಇಪ್ಪತ್ತಿರಬಹುದು . ಅಮರಪಾಲ್ ತನ್ನಪ್ಪನ ಕಾಲದಿಂದಲೂ ಚಲನ ಚಿತ್ರ ನಿರ್ಮಿಸುತ್ತಿದ್ದಾನೆ. ಏನಿಲ್ಲ ಎಂದರೂ ಐವತ್ತಕ್ಕಿಂತ ಹೆಚ್ಚು ಇರಬಹುದುಅವನ ವಯಸ್ಸು . ಅವನಂತ ಮುದಿಗೂಬೆಗೆ ಇಂತಹ ದಂತದ ಗೊಂಬೆಯೇ?
ಭಗವಂತಾ ಯಾವ್ಯಾವ ಹೂವಿನ ಮೇಲೆ ಯಾರ್ಯಾರ ಹೆಸರನ್ನು ಬರೆದಿಟ್ಟಿದ್ದೀಯೋ ಎಂದುಕೊಂಡಾಗ ಭಗವಂತ ಈ ಹೂವಲ್ಲಿ ನಿನ್ನ ಹೆಸರಿದೆ ಎಂದಂತೆ ಭಾಸವಾಗಿ ಪುಳಕೊಗೊಂಡ.
ಅಂದು ರಾತ್ರಿ ಹನ್ನೆರೆಡಾಗಿತ್ತು ಚೆನ್ನಾಗಿ ತಿಂದು ಗಡದ್ದಾಗಿ ನಿದ್ರಿಸುತ್ತಿದ್ದ .ಅವನ ಮೊಬೈಲ್ ಕೂಗಿತು . " ಬಂದಿದೆ ಬದುಕಿನ ಬಂಗಾರದಾ ದಿನ" ಎಂಬ ಹಾಡದು ಅವನ ತಂಗಿ ಸೆಟ್ ಮಾಡಿಟ್ಟಿದ್ದಳು.
ನಿದ್ದೆಗಣ್ಣು
ಆ ನಂಬರ್ ಯಾರದು ಅಂತಲೂ ತಿಳಿಯಲಿಲ್ಲ
ಯಾರಪ್ಪ ಇಷ್ಟು ಹೊತ್ತಲ್ಲಿ ಎಂದುಕೊಂಡು
"ಹಲೋ" ಎಂದ
"ಹ...ಲೋ" ಎಂಬ ಇಂಪಾದ ದನಿ ಎಲ್ಲೋ ಕೇಳಿರುವಂತಿದೆಯಲ್ಲಾ ಕೂಡಲೆ ನೆನಪಿಗೆ ಬಂತು ಸ್ಮಿತಾ ತನ್ನ ಚಿತ್ರಗಳಿಗೆ ತಾನೆ ಡಬ್ ಮಾಡುತ್ತಿದ್ದುದರಿಂದ ಅವಳ ದನಿ ಅವನಿಗೆ ಪರಿಚಿತವಾಗಿತ್ತು
"ಮೇ..................................ಡ..............................ಮ್?"
ನಡುಗುವ ದನಿಯಲ್ಲಿ ಕೇಳಿದ ಅವಳು ತನ್ನೊಂದಿಗೆ ಮಾತನಾಡಬಹುದು ಎಂಬ ಕಲ್ಪನೆಯೂ ಇರಲಿಲ್ಲ
"ನಾನು ಜೋರಾಗಿ ಮಾತಾಡೋಹಾಗಿಲ್ಲ್ಲ ದಯವಿಟ್ಟು ನೀವೂ ಜೋರಾಗಿ ಮಾತಾಡಬೇಡಿ ನಾನು ಹೇಳೋದು ಕೇಳಿಸಿಕೊಳ್ಳಿ"
ಎಂದಳು
ಇಂತಹ ಮಹಾರಾಣಿಗೆ ಮಾತನಾಡಲೂ ಕಷ್ಟವೇ . ಅಯ್ಯೋ ಎನಿಸಿತು
ಅವಳು ಮಾತಾಡತೊಡಗಿದಳು
ಎಲ್ಲವನ್ನು ಕೇಳಿಸಿಕೊಂಡ
ಅವಳು ನಾಳೆ ಮತ್ತೆ ಮಾಡುವುದಾಗಿ ಹೇಳಿ ಫೋನಿಟ್ಟಳು
ದಂಗಾಗಿ ಕುಳಿತ
ಮತ್ತೂಮೆ ಅವಳ ಮಾತುಗಳು ಮಾರ್ದನಿಸತೊಡಗಿದವು
"ಸಾರಿ ನನ್ನ ಮನಸಲ್ಲಿ ಇರೊದೆಲ್ಲಾ ಎಲ್ಲಾದ್ರೂ ಹೇಳಿಕೊಳ್ಬೇಕು ಅಂತ ಅನ್ನಿಸ್ತಿತ್ತು ಆದರೆ ಹೇಳಿಕೊಳ್ಳೋಕೆ ಕೇಳ್ಸಿಕೊಂಡು ಸಮಾಧಾನ ಮಾಡೋ ಅಂತಹ ಯಾವುದೂ ಹೃದಯಾನೂ ಸಿಗಲಿಲ್ಲ. ಆದರೆ ನಿಮ್ಮನ್ನ ಆವತ್ತು ಚಪ್ಪಲಿ ಅಂಗಡೀಲಿ ನೋಡಿದಾಗಿನಿಂದ ನೀವೆ ನನ್ನ ದನಿಗೆ ಕಿವಿಯಾಗಬಲ್ಲವರು ಅಂತ ಅನ್ನಿಸಿತು. ನಾನು ಎಲ್ಲರ ಹೃದಯಕ್ಕೂ ರಾಣಿ ಆದರೆ ನನ್ನ ರಾಜನನ್ನ ಆರಿಸೋ ಸ್ವಾತಂತ್ರ್ಯ ನಂಗೆ ಇಲ್ಲ. ನಂಗೆ ಬೀದೀಲಿ ಸುತ್ತಬೇಕು. ಸಾಮಾನ್ಯನೊಬ್ಬನ ಹೆಂಡತಿಯಾಗಬೇಕು.ಅವ್ನು ಬೀದಿಲಿ ಕೊಡಿಸೋ ಪಾನಿಪೂರಿ ಮಸಾಲೆ ಪೂರಿ ತಿನ್ನುತ್ತಾ ಥಿಯೇಟ್ರ್ ಗೆ ಹೋಗಿ ಸಿನಿಮಾ ನೋಡಬೇಕು ಅಂತೆಲ್ಲಾ ಆಸೆ ಇದೆ. ಆದರೆ ನಾನು ನನ್ನಿಷ್ಟ ಬಂದ ಹಾಗೆ ಇರೋ ಹಾಗಿಲ್ಲ . ಅಮರಪಾಲ್ ನಂಗೆ ಸಿನಿಮಾರಂಗಕ್ಕೆ ಕರೆದುಕೊಂಡು ಬಂದರು ನಿಜಾ ಆದರೆ ನಂಗೆ ಅವರು ತಂದೆ ಇದ್ದ ಹಾಗೆ ಅವರನ್ನು ಯಾವತ್ತೂ ಮದುವೆಯಾಗೋ ದು ಮನಸಲ್ಲಿ ಇಲ್ಲ . ಆದರೆ ನಾನು ಅವರನ್ನೇ ಮದುವೆಯಾಗಬೇಕು ಅಂತ ಅವರ ಒತ್ತಾಯ. ಇಲ್ಲವಾದರೆ ಬಲವಂತವಾಗಿಯಾದರೂ ನನ್ನನ್ನ ಮದುವೆಯಾಗ್ತೀನಿ ಅಂತ ಹೇಳಿದಾರೆ. ನಂಗೆ ನಿಜಕ್ಕೂ ಇಷ್ಟ ಇಲ್ಲ. ಆದರೆ ಅವರನ್ನು ಎದುರು ಹಾಕಿಕೊಳ್ಳೋದಿಕ್ಕೂ ಭಯ . ನಾನೇನ್ಮಾಡಲಿ ಅನ್ನೋದೆ ಪ್ರಶ್ನೆಯಾಗಿ ಹೋಗಿದೆ."
ಆ ಮಾತುಗಳೇ ಮತ್ತೆ ಮತ್ತೆ ಅವನ ತಲೆಯಲ್ಲಿ ಸುತ್ತತೊಡಾಗಿದವು
ಹರೀಶನ ಕಣ್ಣಲ್ಲಿ ನೀರು ಬಂತು
ಪಾಪ ದೊಡ್ಡವರ ಬಾಳೇ ಹೀಗೆಯೇ
ಹೇಗಾದರೂ ಮಾಡಿ ಸ್ಮಿತಾಗೆ ಸಹಾಯ ಮಾಡಬೇಕು
ಆದರೆ ಹೇಗೆ?
ಬಡವ ನೀ ಮಡಗಿದಂಗಿರು ಅಂತ ಸುಮ್ಮನೆ ಇರೋಣ . ನಮಗ್ಯಾಕೆ ಇವರ ವಿಷಯ ಬೆಡ್ ಶೀಟ್ ಎಳೆದುಕೊಂಡು ಮಲಗಿದ.
ಆದರೂ ಅವಳ ಬಗ್ಗೆ ಮರುಕ ಮೂಡದಿರಲಿಲ್ಲ
(ಮುಂದುವರೆಯುವುದು)
ಚಪ್ಪಲಿ ರಾಕಿನಲ್ಲಿ ಎತ್ತಿಡುತ್ತಿದ್ದ ಹರೀಶ್ನ ದೃಷ್ಟಿ ಬಾಗಿಲ ಕಡೆಗೆ ಬಿತ್ತು
ಕನಸೋ ನನಸೋ ತಿಳಿಯದಾಯಿತು
ಅವನ ಆರಾಧ್ಯ ಮೂರ್ತಿ, ಪ್ರಖ್ಯಾತ ಸಿನಿ ನಾಯಕಿ ಸ್ಮಿತ ನಿಂತಿದ್ದಳು
ಎಲ್ಲರೂ ಅವಳೆಡೆ ಓಡಿದರು
ಸ್ಮಿತಾ ಹೆಸರಿನಂತೆಯೇ ತನ್ನ ನಗುವಿನಿಂದಲೇ ಕನ್ನಡ ಸಿನಿ ರಂಗದಲ್ಲಿ ಮೋಡಿ ಮಾಡಿದ್ದಳು
ಮಾದಕ ಸುಂದರಿ, ಕಣ್ನಿನಲ್ಲೇ ಕೊಲ್ಲುವ ಹುಡುಗಿ ಕೇವಲ ಮೂರು ವರ್ಷದಲ್ಲಿ ಇಡೀ ಚಿತ್ರರಂಗವನ್ನೇ ಆಳಲಾರಂಬಿಸಿದ್ದ್ದಳು
ಅಂತಹ ನಾಯಕಿ ಇಂದು ತಾನಾಗೆ ಈ ಚಪ್ಪಲಿ ಅಂಗಡಿಗೆ ಬಂದಿದ್ದಳು
ಹರೀಶ್ ಕೆಲ್ಸ ಮಾಡಿತ್ತಿದ್ದ ಚಪ್ಪಲಿ ಅಂಗಡಿಯೂ ಯಾವ ಐಶಾರಾಮಿ ಬಂಗಲೆಗೂ ಕಡಿಮೆ ಇರಲಿಲ್ಲ. ಚಪ್ಪಲಿಯ ಬೆಲೆ ಕಡಿಮೆಯದ್ದು ಎಂದರೆ ಇಪ್ಪತ್ತೈದು ಸಾವಿರ. ಹೆಚ್ಚಿಗೆ ಎಲ್ಲೆಯೇ ಇರಲಿಲ್ಲ.
ಸ್ಮಿತಾ ಬರುತ್ತಿರುವುದು ಮೊದಲ ಬಾರಿ ಏನಲ್ಲ
ಆದರೆ ಹರೀಶ್ ಇತ್ತೀಚಿಗೆ ಈ ಅಂಗಡಿಗೆ ಕೆಲ್ಸಕ್ಕೆ ಸೇರಿದ್ದ . ಹಿಂದೆ ಇದ್ದ ಕೆಲಸ ಬಿಟ್ಟು ಸೇರಿದ್ದು ಕೇವಲ ಸ್ಮಿತ ಇಲ್ಲಿಗೆ ಬರುತ್ತಾಳೆಂದು.
ಮೊಬೈಲ್ನಲ್ಲಿ ಮಾತಾಡುತ್ತಾ ಒಳಗೆ ಬಂದ ಸ್ಮಿತಾಗೆ ಸನ್ನೆಯಲ್ಲೇ ಕೂರಲು ಹೇಳಿದ. ಆ ಮೆತ್ತನೆಯ ಸೋಫ ಕೇವಲ ಅಂತಹ ಗಣ್ಯರಿಗಾಗಿ ಮೀಸಲು. ಹರೀಶನಂತಹವರು ತಮಾಷೆಗಾಗಿಯೂ ಅಲ್ಲಿ ಕೂರುವಂತಿಲ್ಲ
ಫೋನಿನಲ್ಲೇ ಮಾತಾಡುತ್ತಾ ಕುಳಿತವಳನ್ನೇ ಎವೆ ಇಕ್ಕದೆ ನೋಡಲಾರಂಭಿಸಿದ.
ಬದುಕಿನ ಸೌಭಾಗ್ಯವೆಲ್ಲಾ ಅಲ್ಲೇ ಇದೆ ಏನೋ ಎಂಬಂತೆ ಭಾಸವಾಗತೊಡಗಿತು
ಬೇಡೆಂದರೂ ಮುಂದೆ ಬರುತ್ತಿದ್ದ ಮುಂಗುರಳನ್ನು ತನ್ನ ನೀಳ ಬೆರಳುಗಳಿಂದ ಹಿಂದೆ ಸರಿಸುತ್ತಾ ಅವಳ ತುಟಿಗಳೆರೆಡು ಒಂದರ ಮೋಡಿಗೆ ಇನ್ನೊಂದು ಒಳಗಾಗಿವೆ ಎಂಬಂತೆ ಪದೆ ಪದೆ ಮುತ್ತಿಡುತ್ತಿದ್ದಂತೆ ಇವನ ಮನದಲ್ಲಿ ಕಂಪನ ಕಣ್ಣ ಎವೆಗಳು ಅವಳ ಕಂಗಳನ್ನು ಚುಂಬಿಸಲೆಂದೆ ಬಾಗುತ್ತಿದ್ದವು. ನೀಳ ಮೂಗಿನ ಸುಂದರಿ ಅವಳು ಬೆಳ್ಳನೆ ಮೈ . ಹಾಲಿನ ಕೊಳದಲ್ಲೇ ಇದ್ದಾಳೇನೋ ಎಂಬಂಥಾ ರೂಪ ನೀಳ ಮೈ ಮಾಟ. ಹರೀಶನ ಭಾಗ್ಯಕ್ಕೆ ಎಣೆಯೇ ಇಲ್ಲವಾಗಿತ್ತು.
"ಏಯ್ ಏಳೋ ಮೇಲೆ "
ಗುಡುಗಿನ ಕೂಗಿಗೆ ಎಚ್ಚರವಾಗಿ ವಾಸ್ತವಕ್ಕೆ ಬಂದನು ಅವಳನ್ನೇ ನೋಡುತ್ತಾ ಗೊತ್ತಿಲ್ಲದೆ ಅವಳ ಎದುರಿಗಿದ್ದ ಸೋಫಾ ಮೇಲೆ ಕೂತು ಬಿಟ್ಟಿದ್ದ.
ಸ್ಮಿತಾಳ ಸೆಕ್ರೆಟರಿ ಬೊಬ್ಬೆ ಹೊಡೆಯುತ್ತಿದ್ದ.
"ಏನು ಮೇಡಮ್ ಸಮಕ್ಕೂ ಕೂತ್ಕೋತೀಯ ಈಡಿಯಟ್ ಏಳೋ ಮೇಲೆ "
ಹರೀಶ್ ನಡುಗತೊಡಗಿದ. ಏನು ಹೇಳಲು ತೋಚಲಿಲ್ಲ
ಸ್ಮಿತಾ ಕೂಡ ಫೋನ್ ಆಫ್ ಮಾಡಿ ಸೆಕ್ರೆಟರಿಯತ್ತ ಏನು ಎಂಬಂತೆ ನೋಡಿದಳು
"ಮೇಡಮ್ ನೀವು ಮಾತಾಡ್ತಾ ಇದ್ದರೆ ನಿಮ್ಮನ್ನೇ ಒಳ್ಳೆ ತಿಂದುಬಿಡೋ ಹಾಗೆ ಇಷ್ಟು ಹತ್ರದಲ್ಲಿ ಕೂತ್ಕೊಂಡು ನೋಡ್ತಿದ್ದ ಇವನು"
ಸೆಕ್ರೆಟರಿ ಆರೋಪಿಸಿ ಹರೀಶನನ್ನು ಕಡಿದುಬಿಡುವಂತೆ ನೋಡಿದ.
ಸ್ಮಿತಾ ಒಮ್ಮೆ ಹರೀಶನನ್ನು ನೋಡಿದಳು ಆ ನಡುಕದಲ್ಲಿಯೂ ಅವಳ ದೃಷ್ಟಿ ತನ್ನ ಮೇಲೆ ಹರಿದಿದ್ದಕ್ಕೆ ಜನ್ಮ ಪಾವನವಾಯ್ತು ಎಂದು ಕೊಂಡ.
ಮತ್ತೆ ಮಂದ ಸ್ಮಿತಳಾಗಿ "ರಾಜೀವ್ ಹೋಗಲಿ ಬಿಡಿ ಅವನಿಗೇ ಗೊತ್ತಿಲ್ಲದೆ ಹಾಗೆ ಮಾಡಿದ್ದಾನೆ. ಲೆಟ್ ಅಸ್ ನಾಟ್ ಮೇಕ್ ಇಟ್ ಬಿಗ್ ಇಶ್ಯೂ " ನುಡಿದಳು
ಒಮ್ಮೆ ಹರೀಶನತ್ತ ನೋಡಿ ನಕ್ಕಳು
ಇಂಗ್ಲೀಶ್ ಮಾತಾಡಲು ಬರದಿದ್ದರೂ ಅರ್ಥವಾಗುತಿತ್ತು
ಕೊನೆಗೆ ಕಸ್ಟಮರ್ ಕೇರ್ ಒಬ್ಬರು ಬಂದು ಅವಳಿಗೆ ಸ್ಲಿಪ್ಪರ್ ತೋರಿಸಲು ಕರೆದು ಕೊಂಡು ಹೋದರು.
ರಾಶಿ ಬಿದ್ದಿದ್ದ ಚಪ್ಪಲಿಗಳನ್ನೆಲ್ಲ ಎತ್ತಿಡಲು ಬಗ್ಗುತ್ತಿದ್ದಂತೆ
"ಏನೋ ಹರಿ ಸ್ಮಿತಾ ನಿಂಗೆ ಸಪ್ಪೋರ್ಟ್ ಮಾಡಿದ್ರು. ಏನ್ ವಿಷಯ" ಗುರು ಕೀಟಲೆ ಮಾಡಿದ
"ಏನೋ ಒಂಥರಾ ಏನೋ ಒಂಥರಾ " ಸೋಮ ಹಾಡತೊಡಗಿದ .
ಇವನಿಗೋ ಮನದಲ್ಲಿ ಯಾವುದೋ ವೀಣೆ ಮಿಡಿದ ಹಾಗೆ ರಕ್ತವೆಲ್ಲಾ ಮುಖಕ್ಕೆ ಚಿಮ್ಮಿತು
ಮೊದಲೇ ಬಿಳಿ ಮುಖ . ಈಗ ಕೆಂಪಗಾಗಿತ್ತು
ಸ್ಮಿತಾ ಕಾಲಿಗೆ ಹಾಕಿದ್ದ ಚಪ್ಪಲಿ ಬಿಟ್ಟು ಹೊಸ ಚಪ್ಪಲಿ ಹಾಕಿಕೊಂಡಳು. ಆ ಹಳೇ ಚಪ್ಪಲಿ ಯಾರು ಬೇಕಾದರೂ ತೆಗೆದುಕೊಳ್ಳಬಹುದಿತ್ತು.
ಅವಳ ಕಾಲಿನ ಸ್ಪರ್ಶವಾಗಿದ್ದ ಆ ಚಪ್ಪಲಿಯನ್ನು ಪ್ರೀತಿಯಿಂದ ತೆಗೆದು ಒಂದು ಬಾಕ್ಸಿನಲ್ಲಿ ಹಾಕಿಟ್ಟ . ಅದನ್ನು ಅವಳೂ ನೋಡಿದಳು
ಮತ್ತೊಮ್ಮೆ ಅವಳ ನೋಟ ಇವನ ನೋಟಕ್ಕೆ ಬೆರೆಯಿತು. ಹರೀಶನ ಆನಂದ ಮೇರೆ ಮೀರಿತು
ಹೋಗುವಾಗ ಬಾಯ್ ಹೇಳಿ ಹೊರಟಳು. ಸೆಕ್ರೆಟರಿ ಮಾತ್ರ ಸಿಡಿಮಿಡಿಗುಟ್ಟುತ್ತಿದ್ದ.
ಅದಾದ ಎರಡೆ ದಿನಕ್ಕೆ ಹರೀಶ ಕೆಲಸ ಹೋಯಿತು. ಕಾರಣ ಸ್ಮಿತಾ ಮೇಡಮ್ ತೆಗೆಯಲು ಹೇಳಿದ್ದಾರೆ ಎಂಬ ಉತ್ತರ ಬಂತು.
ಹರೀಶ ಗೋಗರೆದ ಬೇಡಿಕೊಂಡ. ಮನೆಯಲ್ಲಿ ತಂಗಿಯ ಮದುವೆಗೆ ಹಣ ಜೋಡಿಸಬೇಕು ಎಂದು ಅತ್ತ
ಮಾಲೀಕ ಮಾತ್ರ ಕಲ್ಲು ಹೃದಯಿಯಾಗಿದ್ದ
ಅಷ್ಟೆಲ್ಲಾ ಬೆಂಬಲಿಸಿದ ಸ್ಮಿತಾ ಹೀಗೇಕೆ ಮಾಡಿದ್ದಾಳೆಂದು ಯೋಚಿಸುತ್ತಲೇ ಇದ್ದ. ಸ್ವಲ್ಪ ಹೊತ್ತಿಗೆ ಅವನ ಮೊಬೈಲ್ಗೆ ಕಾಲ್ ಬಂತು
ಸ್ಮಿತಾ ಮೇಡಮ್ ಮನೆಯಿಂದ ಅದು "ಮೇಡಮ್ ಕೂಡಲೆ ಬರುವಂತೆ ಹೇಳಿದ್ದಾರೆ" ಎಂದು ಹೇಳಿದರು ಅಲ್ಲಿಂದ
ಅನಿರೀಕ್ಷಿತ ಘಟನೆ . ಅದೇನೋ ನಿಜವೋ ಭ್ರಮೆಯೋ . ಏಕಿರಬಹುದು ಅವತ್ತು ಹಾಗೆ ನೋಡಿದ್ದಕ್ಕೆ ಸ್ಮಿತಾ ಕೋಪ ಮಾಡಿಕೊಂಡು ತನ್ನನ್ನು ಹೊಡೆಸಲು ಕರೆಸಿರಬಹುದೇ ಎಂಬ ಯೋಚನೆಯೂ ಬಂತು.
ಮೊಬೈಲ್ನಲ್ಲು ಸ್ಮಿತಾ ಚಿತ್ರವೇ. ನೋಡುತ್ತಾ ಇಲ್ಲ ಅದಿರಲಿಕ್ಕಿಲ್ಲ ಎಂದುಕೊಂಡು ಧೈರ್ಯ ಮಾಡಿಕೊಂಡು ಮನೆಗೆ ಹೋದ
ವಾಚಮನ್ ಕೂಡ ಅವನನ್ನು ಒಳಗೆ ಬಿಟ್ಟ. ಮೇಲೆ ಬಾಲ್ಕನಿಯಲ್ಲಿ ಸ್ಮಿತಾ ನಿಂತಿದ್ದಳು ಜೊತೆಗೆ ಅವಳ ಗಾಡಫಾದರ್ ಅಮರ್ ಪಾಲ್ ಕೂಡ. ಇಬ್ಬರ ನಡುವೆಯ ಏನೋ ಮಾತು ಕಥೆ ನಡೆಯುತ್ತಿತ್ತು.
ಆ ಬಂಗಲೆ ನೋಡಿ ದಂಗಾಗಿ ಹೋದ
ಅಬ್ಬಾ ಏನೋ ವೈಭವ ಅಂತಹ ಮನೆಗಳನ್ನು ಕೇವಲ ಸಿನಿಮಾದಲ್ಲೆ ಮಾತ್ರ ನೋಡಿದ್ದ. ಸ್ಮಿತಾಳನ್ನು ಕಾಣಲು ಜನವೋ ಜನ . ನಿರ್ಮಾಪಕರು, ನಿರ್ಧೇಶಕರು, ನಟರು, ನಾಯಕರು . ಸುಮಾರು ಜನ ಆಳುಕಾಳುಗಳು.
ತಾನೆಲ್ಲಿ ನಿಲ್ಲುವುದು ಎಂದು ತಿಳಿಯದೆ ಹೊರಗಡೆಯೇ ನಿಂತಿದ್ದ
ಅಷ್ಟರಲ್ಲಿ ಮನೆಯ ಆಳೊಬ್ಬ ಬಂದು ಮನೆಯ ಹಿಂದಿನ ಪಾರ್ಕ್ ಬಳಿ ಹೋಗಲು ಹೇಳಿದ.
ತಡಕಾಡಿಕೊಂಡು ಅಲ್ಲಿ ಹೋದ ಸ್ಮಿತಾ ಸೆಕ್ರೆಟರಿ ರಾಜೀವ್ ಇದ್ದ ಅಲ್ಲಿಯೇ
"ನೋಡಪ್ಪ ಮೇಡಮ್ ನಿನ್ನನ್ನ ಅವರ ಮನೆಗೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಅಂತ ಇಷ್ಟ ಪಟ್ಟಿದ್ದಾರೆ ಇದೇ ಮನೆಲಿ ಕೆಲಸ ಬಂದೋರಿಗೆ ಕೂರಿಸಿ ಅವರನ್ನ ನೋಡಿಕೊಳ್ಳೋದು ಉಪಚಾರ ಮಾಡೋದು ಅಷ್ಟೆ ಸಂಬಳ ಚಪ್ಪಲಿ ಅಂಗಡೀಗಿಂತ ಜಾಸ್ತಿ ಸರೀನಾ ಇವತ್ತಿಂದಾನೆ ಜಾಯಿನ್ ಆಗು ಆಯ್ತಾ. ಅಂದ ಹಾಗೆ ನಿಂಗೊಂದು ರೂಮ್ ಕೂಡ ಇದೆ ನೀನುಇಲ್ಲೇ ಇರಬೇಕು ಗೊತ್ತಾಯ್ತಾ" ಅವನು ಹರೀಶನ ಯಾವ ಉತರಕ್ಕೂ ಕಾಯಲಿಲ್ಲ. ಇದು ಅಪ್ಪಣೆ ಎಂಬಂತೆ ಇತ್ತು ಅವನ ಮಾತಿನ ಧಾಟಿ
ಹರೀಶನ ಮನಸ್ಸು ಆಗಸದಲ್ಲಿ ಓಲಾಡಿತು.
ಎಂಥ ಭಾಗ್ಯ. ಸ್ಮಿತ ದ ಗ್ರೇಟ್ ಮೇಡಮ್ ನನ್ನನ್ನು ಅವರ ಮನೆಯ ಕೆಲಸಕ್ಕೆ ಕರೆದು ಸೇರಿಸಿಕೊಂಡಿದ್ದಾರೆ ಎಂಬುದನ್ನು ನೆನೆಸಿ ನೆನೆಸಿ ಸಂತಸ ಪಡಲಾರಂಭಿಸಿದ .
ಅಂದೇ ಅವನ ಮನೆಯಿಂದ ಅವನ ವಸ್ತುಗಳೆಲ್ಲಾ ಅವನ ಹೊಸ ರೂಮಿಗೆ ರವಾನೆಯಾದವು. ಹರೀಶನ ಅಮ್ಮ ಹಾಗು ತಂಗಿಗೂ ಖುಶಿ . ದೊಡ್ಡ ಹೀರೋಯಿನ್ ಮನೇಲಿ ಮಗ ಕೆಲ್ಸ ಮಾಡುತ್ತಾನೆ ಎಂಬುದೇ ಅವರಿಗೆ ಹಿಗ್ಗಿನ ವಿಷ್ಯ.
ಆದರೆ ಕೆಲಸಕ್ಕೆ ಬಂದ ದಿನ ಅವನಿಗೆ ನಿರಾಸೆ. ಒಟ್ತು ಹದಿನೈದು ಜನ ಕೆಲಸದವರು. ಅವರಲ್ಲಿ ಐದು ಜನ ಇದೇ ಕೆಲಸಮಾಡುತ್ತಿದ್ದವರು. ಅದರಲ್ಲಿ ಅವನಿಗೆ ಕೆಲಸವೇ ಇಲ್ಲ. ಸ್ಮಿತಾ ಬೆಳಗ್ಗೆ ಹೋಗುವಾಗ ಇವನತ್ತ ಕೈ ಬೀಸಿದಳು. ಅಷ್ಟು ಸಾಕಾಗಿತ್ತು.
ಅಂದೆಲ್ಲಾ ಕೆಲಸವಿಲ್ಲದೆ ಕೂತಿದ್ದ.
ಹೊತ್ತು ಹೊತ್ತಿಗೆ ಊಟ ಸಿಕ್ಕಿತು.
ಜೊತೆಗೆ ಕೆಲ್ಸದಾಳು ಮುನಿಯನ ಜೊತೆ ಕೂತಾಗ ಸ್ಮಿತಾಳ ಹಿಂದಿನ ವಿಷ್ಯಗಳು ತಿಳಿದವು
"ಸ್ಮಿತಾ ಹುಟ್ಟಿದ್ದು ಯಾವುದೋ ಸ್ಲಮ್ಮಿನಲ್ಲಿ ಆದರೆ ಅವಳ ರೂಪು ಲಾವಣ್ಯಗಳಿಂದ ನಿರ್ಮಾಪಕ ಅಮರ್ ಪಾಲ ಕಣ್ಣಿಗೆ ಬಿದ್ದಳು. ಅಮರ್ ಪಾಲ್ರಾ ಅಪ್ಪಣೆಯಿಲ್ಲದೆ ಅವಳು ಯಾವ ಪ್ರಾಜೆಕ್ಟ್ ಅನ್ನೂ ಕೈಗೆತ್ತಿಕೊಳ್ಳುವುದಿಲ್ಲ. ಅವಳ ಸಂಭಾವನೆಯನ್ನೂ ಅವನೆ ಗೊತ್ತು ಮಾಡುವುದು. ಮುಂದೆ ಅವರಿಬ್ಬರೂ ಮದುವೆಯಾಗಬಹುದು ಎಂದಾಗ ಮಾತ್ರ ಹರೀಶನ ಮನದಲ್ಲಿ ಕಸಿವಿಸಿಯಾಯ್ತು. ಅವಳ ವಯಸ್ಸು ಇಪ್ಪತ್ತಿರಬಹುದು . ಅಮರಪಾಲ್ ತನ್ನಪ್ಪನ ಕಾಲದಿಂದಲೂ ಚಲನ ಚಿತ್ರ ನಿರ್ಮಿಸುತ್ತಿದ್ದಾನೆ. ಏನಿಲ್ಲ ಎಂದರೂ ಐವತ್ತಕ್ಕಿಂತ ಹೆಚ್ಚು ಇರಬಹುದುಅವನ ವಯಸ್ಸು . ಅವನಂತ ಮುದಿಗೂಬೆಗೆ ಇಂತಹ ದಂತದ ಗೊಂಬೆಯೇ?
ಭಗವಂತಾ ಯಾವ್ಯಾವ ಹೂವಿನ ಮೇಲೆ ಯಾರ್ಯಾರ ಹೆಸರನ್ನು ಬರೆದಿಟ್ಟಿದ್ದೀಯೋ ಎಂದುಕೊಂಡಾಗ ಭಗವಂತ ಈ ಹೂವಲ್ಲಿ ನಿನ್ನ ಹೆಸರಿದೆ ಎಂದಂತೆ ಭಾಸವಾಗಿ ಪುಳಕೊಗೊಂಡ.
ಅಂದು ರಾತ್ರಿ ಹನ್ನೆರೆಡಾಗಿತ್ತು ಚೆನ್ನಾಗಿ ತಿಂದು ಗಡದ್ದಾಗಿ ನಿದ್ರಿಸುತ್ತಿದ್ದ .ಅವನ ಮೊಬೈಲ್ ಕೂಗಿತು . " ಬಂದಿದೆ ಬದುಕಿನ ಬಂಗಾರದಾ ದಿನ" ಎಂಬ ಹಾಡದು ಅವನ ತಂಗಿ ಸೆಟ್ ಮಾಡಿಟ್ಟಿದ್ದಳು.
ನಿದ್ದೆಗಣ್ಣು
ಆ ನಂಬರ್ ಯಾರದು ಅಂತಲೂ ತಿಳಿಯಲಿಲ್ಲ
ಯಾರಪ್ಪ ಇಷ್ಟು ಹೊತ್ತಲ್ಲಿ ಎಂದುಕೊಂಡು
"ಹಲೋ" ಎಂದ
"ಹ...ಲೋ" ಎಂಬ ಇಂಪಾದ ದನಿ ಎಲ್ಲೋ ಕೇಳಿರುವಂತಿದೆಯಲ್ಲಾ ಕೂಡಲೆ ನೆನಪಿಗೆ ಬಂತು ಸ್ಮಿತಾ ತನ್ನ ಚಿತ್ರಗಳಿಗೆ ತಾನೆ ಡಬ್ ಮಾಡುತ್ತಿದ್ದುದರಿಂದ ಅವಳ ದನಿ ಅವನಿಗೆ ಪರಿಚಿತವಾಗಿತ್ತು
"ಮೇ..................................ಡ..............................ಮ್?"
ನಡುಗುವ ದನಿಯಲ್ಲಿ ಕೇಳಿದ ಅವಳು ತನ್ನೊಂದಿಗೆ ಮಾತನಾಡಬಹುದು ಎಂಬ ಕಲ್ಪನೆಯೂ ಇರಲಿಲ್ಲ
"ನಾನು ಜೋರಾಗಿ ಮಾತಾಡೋಹಾಗಿಲ್ಲ್ಲ ದಯವಿಟ್ಟು ನೀವೂ ಜೋರಾಗಿ ಮಾತಾಡಬೇಡಿ ನಾನು ಹೇಳೋದು ಕೇಳಿಸಿಕೊಳ್ಳಿ"
ಎಂದಳು
ಇಂತಹ ಮಹಾರಾಣಿಗೆ ಮಾತನಾಡಲೂ ಕಷ್ಟವೇ . ಅಯ್ಯೋ ಎನಿಸಿತು
ಅವಳು ಮಾತಾಡತೊಡಗಿದಳು
ಎಲ್ಲವನ್ನು ಕೇಳಿಸಿಕೊಂಡ
ಅವಳು ನಾಳೆ ಮತ್ತೆ ಮಾಡುವುದಾಗಿ ಹೇಳಿ ಫೋನಿಟ್ಟಳು
ದಂಗಾಗಿ ಕುಳಿತ
ಮತ್ತೂಮೆ ಅವಳ ಮಾತುಗಳು ಮಾರ್ದನಿಸತೊಡಗಿದವು
"ಸಾರಿ ನನ್ನ ಮನಸಲ್ಲಿ ಇರೊದೆಲ್ಲಾ ಎಲ್ಲಾದ್ರೂ ಹೇಳಿಕೊಳ್ಬೇಕು ಅಂತ ಅನ್ನಿಸ್ತಿತ್ತು ಆದರೆ ಹೇಳಿಕೊಳ್ಳೋಕೆ ಕೇಳ್ಸಿಕೊಂಡು ಸಮಾಧಾನ ಮಾಡೋ ಅಂತಹ ಯಾವುದೂ ಹೃದಯಾನೂ ಸಿಗಲಿಲ್ಲ. ಆದರೆ ನಿಮ್ಮನ್ನ ಆವತ್ತು ಚಪ್ಪಲಿ ಅಂಗಡೀಲಿ ನೋಡಿದಾಗಿನಿಂದ ನೀವೆ ನನ್ನ ದನಿಗೆ ಕಿವಿಯಾಗಬಲ್ಲವರು ಅಂತ ಅನ್ನಿಸಿತು. ನಾನು ಎಲ್ಲರ ಹೃದಯಕ್ಕೂ ರಾಣಿ ಆದರೆ ನನ್ನ ರಾಜನನ್ನ ಆರಿಸೋ ಸ್ವಾತಂತ್ರ್ಯ ನಂಗೆ ಇಲ್ಲ. ನಂಗೆ ಬೀದೀಲಿ ಸುತ್ತಬೇಕು. ಸಾಮಾನ್ಯನೊಬ್ಬನ ಹೆಂಡತಿಯಾಗಬೇಕು.ಅವ್ನು ಬೀದಿಲಿ ಕೊಡಿಸೋ ಪಾನಿಪೂರಿ ಮಸಾಲೆ ಪೂರಿ ತಿನ್ನುತ್ತಾ ಥಿಯೇಟ್ರ್ ಗೆ ಹೋಗಿ ಸಿನಿಮಾ ನೋಡಬೇಕು ಅಂತೆಲ್ಲಾ ಆಸೆ ಇದೆ. ಆದರೆ ನಾನು ನನ್ನಿಷ್ಟ ಬಂದ ಹಾಗೆ ಇರೋ ಹಾಗಿಲ್ಲ . ಅಮರಪಾಲ್ ನಂಗೆ ಸಿನಿಮಾರಂಗಕ್ಕೆ ಕರೆದುಕೊಂಡು ಬಂದರು ನಿಜಾ ಆದರೆ ನಂಗೆ ಅವರು ತಂದೆ ಇದ್ದ ಹಾಗೆ ಅವರನ್ನು ಯಾವತ್ತೂ ಮದುವೆಯಾಗೋ ದು ಮನಸಲ್ಲಿ ಇಲ್ಲ . ಆದರೆ ನಾನು ಅವರನ್ನೇ ಮದುವೆಯಾಗಬೇಕು ಅಂತ ಅವರ ಒತ್ತಾಯ. ಇಲ್ಲವಾದರೆ ಬಲವಂತವಾಗಿಯಾದರೂ ನನ್ನನ್ನ ಮದುವೆಯಾಗ್ತೀನಿ ಅಂತ ಹೇಳಿದಾರೆ. ನಂಗೆ ನಿಜಕ್ಕೂ ಇಷ್ಟ ಇಲ್ಲ. ಆದರೆ ಅವರನ್ನು ಎದುರು ಹಾಕಿಕೊಳ್ಳೋದಿಕ್ಕೂ ಭಯ . ನಾನೇನ್ಮಾಡಲಿ ಅನ್ನೋದೆ ಪ್ರಶ್ನೆಯಾಗಿ ಹೋಗಿದೆ."
ಆ ಮಾತುಗಳೇ ಮತ್ತೆ ಮತ್ತೆ ಅವನ ತಲೆಯಲ್ಲಿ ಸುತ್ತತೊಡಾಗಿದವು
ಹರೀಶನ ಕಣ್ಣಲ್ಲಿ ನೀರು ಬಂತು
ಪಾಪ ದೊಡ್ಡವರ ಬಾಳೇ ಹೀಗೆಯೇ
ಹೇಗಾದರೂ ಮಾಡಿ ಸ್ಮಿತಾಗೆ ಸಹಾಯ ಮಾಡಬೇಕು
ಆದರೆ ಹೇಗೆ?
ಬಡವ ನೀ ಮಡಗಿದಂಗಿರು ಅಂತ ಸುಮ್ಮನೆ ಇರೋಣ . ನಮಗ್ಯಾಕೆ ಇವರ ವಿಷಯ ಬೆಡ್ ಶೀಟ್ ಎಳೆದುಕೊಂಡು ಮಲಗಿದ.
ಆದರೂ ಅವಳ ಬಗ್ಗೆ ಮರುಕ ಮೂಡದಿರಲಿಲ್ಲ
(ಮುಂದುವರೆಯುವುದು)
Tuesday, January 27, 2009
ಪ್ರೇಮಕ್ಕೂ ಪರೀಕ್ಷೆಯೆ?
ರಾಜೀವ್
"ಇವತ್ತು ಸಾಯಂಕಾಲ ಏಳು ಘಂಟೇಗೆ ಕಲಾ ಸಂಗಮದಲ್ಲಿ ಕತೆಗಾರ ಸೋಮಣ್ಣನವರ ಹೊಸ ಕತೆ ಬಿಡುಗಡೆಯಾಗ್ತಿದೆ . ನೀವು ಬರಲೇಬೇಕು . ಇಲ್ಲಾಂದರೆ ಮಾತಾಡೋಲ್ಲ "
ಅಂತ ಸಿರಿ ಏನೋ ಹೇಳಿದಾಳೆ. ಆಗಲೇ ಸಾಯಂಕಾಲ ಆರು ಘಂಟೆ ಆಗಿದೆ.
ಆಫೀಸಿನಿಂದ ಡೈರೆಕ್ಟ್ ಆಗಿ ಹೋಗೋಣ ಅನ್ಕೊಂಡು ಸ್ಕೂಟಿ ಸ್ಟಾರ್ಟ್ ಮಾಡಿದೆ.ಯಾರೋ ಸೋಮಣ್ಣ. ಯಾಕಪ್ಪ ನಿನ್ನ ಕಥೇನ ಬಿಡುಗಡೆ ಮಾಡಿ ಗೋಳ್ಹಾಕ್ಕೋತೀಯಾ.
ಏನ್ ಕತೇನೋ ಕವನಾನೋ, ಸಿನಿಮಾನೋ ಒಂದು ಅರ್ಥ ಆಗಲ್ಲ. ಹಾಗೆ ನೋಡಿದರೆ ನಂಗೆ ಈ ಕತೆ ಕವನ, ಸಿನಿಮಾ ಅಂತ ಭ್ರಾಮಕ ಜಗತ್ತಿನ್ನಲ್ಲಿ ಬದುಕೋದು ಒಂಚೂರು ಇಷ್ಟ ಇಲ್ಲ. ನನಗೆ ಈ ಕಲ್ಪನಾ ವಿಲಾಸಿ ಸಿರಿ ಜೋಡಿಯಾಗ್ತಿರೋದು ಒಂದು ತಮಾಷೇನೆ .ಅವಳು ಬಂದ್ರೆ ಇವತ್ತು ಉಪ್ಪಿ ಹುಟ್ಟಿದ ಹಬ್ಬ, ರಮ್ಯಾಗೆ ಅವಾರ್ಡ್ ಸಿಕ್ತು. ಪೇಪರ್ನಲ್ಲಿ ವಿಶ್ವೇಶ್ವರ್ ಭಟ್ ಹೀಗೆ ಬರೆದಿದ್ದಾರೆ, ಭೈರಪ್ಪನವರ ಕಾದಂಬರಿ ಓದಿದ್ಯಾ. ಅಂತ ತಲೆ ತಿನ್ನುತ್ತಾ ಇರುತ್ತಾಳೆ.
ಯಾರಿಗೋ ಏನೋ ಆದರೆ ನಂಗೇನು, ಇರೋ ಕೆಲಸದಲ್ಲಿ ನಿಷ್ಟೆಯಾಗಿ ದುಡಿದೋ ಮುಂದಿನ ಜೀವನ ಸುಖವಾಗಿ ಇರೋದನ್ನ ನೋಡ್ಕೊಳ್ಳೋದು ನನ್ನ ಆಸೆ, ಬೋರ್ಗಿರಾಕಿ ಇದು ಅವಳ ಬಿರುದು ನನಗೆ . ನಾನು ವಾಸ್ತವವಾದಿ ಅವಳು ಮಿಥ್ಯಾ ಲೋಕ ಸಂಚಾರಿಣಿ. ಆದರೂ ನನಗೆ ಅವಳಂದ್ರೆ ತುಂಬಾ ಇಷ್ಟ.
ಅವಳ ಪರಿಚಯ ಆಗಿದ್ದೂ ಆಕಸ್ಮಿಕಾನೆ. ಗೆಳೆಯ ತುಂಬಾ ಫೋರ್ಸ್ ಮಾಡಿ ಯಾವುದೋ ಸಂಗೀತ ಗೋಷ್ಟಿಗೆ ಕರೆದುಕೊಂಡು ಹೋಗಿದ್ದ. ಬರ್ತಾ ಇದ್ದಾಗ ಪಂಚರ್ ಆಗಿದ್ದ ಸ್ಕೂಟಿ ತಳ್ಳಲಾಗದೆ ಏಳು ಮಲ್ಲಿಗೆ ತೂಕದ ಈ ರಾಜಕುಮಾರಿ ಸಿರಿ ಒದ್ದಾಡುತ್ತಿದ್ದಳು.ಅವಳಲ್ಲದೆ ಬೇರೆ ಯಾರೆ ಇದ್ದರೂ ಸಹಾಯ ಕೇಳುತ್ತಿದ್ದರೇನೋ. ಅಷ್ಟಿದ್ದರೂ ಯಾರ ಸಹಾಯ ಪಡೆಯದೆ ತಳ್ಳಿಕೊಂಡು ಹೋಗುತ್ತಿದ್ದ ಅವಳ ಪರಿಪಾಟಲು ನೋಡಲಾಗದೆ ನನ್ನ ಸ್ಕೂಟಿಯಲಿದ್ದ ಸ್ಟೆಪ್ನಿ ಜೋಡಿಸಿಕೊಟ್ಟೆ. ನಂಗೇನು ಅದು ದೊಡ್ಡ ವಿಷಯ ಅನ್ನಿಸಲಿಲ್ಲ. ಆದರೆ ಸಿರಿಗೆ ಮಾತ್ರ ನಾನು ಅವಳ ಜೋಡಿಯಾಗಲೆಂದೆ ಆ ಸನ್ನಿವೇಶ ಸೃಷ್ಟಿಯಾಯಿತಂತೆ. ಅದನ್ನು ಹೇಳೋಕೂ ಸೇವಂತಿಗೆ ಹೂವಿನ ಎಸಳುಗಳನ್ನು ಕಿತ್ತು ಅದನ್ನು ಜೋಡಿಸಿ ಪತ್ರ ಬರೆದು ಕೊಟ್ಟಿದ್ದು ನೆನೆಸಿಕೊಂಡ್ರೆ ನಗು ಬರುತ್ತೆ.
ನಾನು ಕೇಳಿದ ಪ್ರಶ್ನೆ ಅವಳಿಗೆ ಕೋಪ ಬೇರೆ ತರಿಸಿತು. "ಅಲ್ಲಾ ಮೂರೇ ಶಬ್ದದಲ್ಲಿ ಹೇಳೋದನ್ನ ಸುಮ್ನೆ ಟೈಮ್ ವೇಸ್ಟ್ ಮಾಡಿಕೊಂಡು ಹೂವಿನಲ್ಲಿ ಜೋಡಿಸ್ತೀರಲ್ಲ ನಿಜವಾಗಲೂ ತಲೆ ಕೆಟ್ಟಿದೆ." ಅವಳು ಕೋಪ ಮಾಡಿಕೊಂಡು ಹೊರಟೆ ಹೋಗಿದ್ದಳು.
ಆಮೇಲೆ ನನಗೂ ಗೊತ್ತಾಯ್ತು.
"ಐ ಆಮ್ ಆಲ್ಸೊ ಇನ್ ಲವ್ ವಿತ್ ಹರ್"
ಕೊನೆಗೆ ಅವಳನ್ನು ಕಾಡಿಬೇಡಿ ಸಾರಿ ಕೇಳಿದ್ದಾಯ್ತು.
ಹೀಗೆ ಶುರುವಾಗಿ ಕೊನೆಗೆ ರಾಜಿಯಾಯಿತು
ಕಿರ್ರ್ ಕಿರ್ರ್ ಎನ್ನುತ್ತಾ ಸ್ಕೂಟಿ ನಿಂತಿತು ನಾನು ಬ್ರೇಕ್ ಹಾಕಿದ್ದೆ. ಮನದಲ್ಲಿ ಎಲ್ಲಾ ಯೋಚನೆ ಮಾಡುತ್ತಿದ್ದರೂ ವಿವೇಕಾ ಮಾತ್ರ ಕೈಕೊಡಲ್ಲ ನನಗೆ
ಮಿನಿ ತೊಟ್ಟ ಸುಂದರಿಯೊಬ್ಬಳು ಸ್ಕೂಟಿಯನ್ನು ತಳ್ಳುತ್ತಿದ್ದಳು, ಯಾಕೆ ನಂಗೆ ಸ್ಕೂಟಿ ಸುಂದರಿಯರೆ ಗಂಟು ಬೀಳ್ತಾರೆ ಎಂಬ ತುಂಟ ಯೋಚನೆಯೊಂದಿಗೆ
"ಕ್ಯಾನ್ ಐ ಹೆಲ್ಪ್ ಯು "ಎಂದು ವಿಚಾರಿಸಿದೆ
"ಹೌದು ಪೆಟ್ರೋಲ್ ಆಗಿ ಹೋಗಿದೆ " ಎಂದು ಅಳು ಮೋರೆ ಮಾಡಿ ಹೇಳಿದಳು
ನನ್ನ ಸ್ಕೂಟಿಯಲ್ಲಿ ಪೆಟ್ರೋಲ್ ಇದ್ದರೂ ತೆಗೆಯಲು ಯಾವುದೇ ಸಲಕರಣೆ ಇಲ್ಲ"
"ಸರಿ ನೀವು ಸ್ಕೂಟಿಯಲ್ಲಿ ಕೂತು ಡ್ರೈವ್ ಮಾಡಿ "ಎಂದು ಹೇಳಿದೆ . ಅವಳು ಅನುಮಾನದಿಂದ ನೋಡುತ್ತಲೇ ಕೂತಳು
ನನ್ನ ಸ್ಕೂಟಿಯಲ್ಲಿ ಕೂತು ಒಂದು ಕಾಲನ್ನು ಅವಳ ಸ್ಕೂಟಿಯ ಹಿಂಬದಿಯ ಚಕ್ರದ ಮೇಲೆ ಇಟ್ಟು ನನ್ನ ಸ್ಕೂಟಿ ಸ್ಟಾರ್ಟ್ ಮಾಡಿದೆ ಅವಳ ಸ್ಕೂಟಿ ಮುಂದೆ ಹೋಗಲಾರಂಭಿಸಿತು. ಅಲ್ಲ ನನ್ನ ಕಾಲು ಅದನ್ನ ತಳ್ಳುತ್ತಿತ್ತು
ಪೆಟ್ರೋಲ್ ಬಂಕ್ ಹತ್ತಿರ ಬರುತ್ತಿದ್ದಂತೆ ಅವಳಿಗೆ ಮುಂದೆ ಹೋಗಲು ಹೇಳಿದೆ.
ಸ್ವಲ್ಪ ಹೊತ್ತು ತಡೆಯಲು ಹೇಳಿದಳು .ಟೈಮ್ ಆಗುತ್ತಿದೆ ಎಂದರೂ ಒತ್ತಾಯಿಸಿದಳು
ಪೆಟ್ರೋಲ್ ಹಾಕಿಸಿಕೊಂಡು ಬರುತ್ತಿದ್ದಂತೆ
"ನಿಮ್ಮ ಜೊತೆ ಮಾತಾಡಬೇಕು " ಎಂದಳು
"ಸಾರಿ ನಂಗೆ ಟೈಮ ಆಗಿದೆ ಹೋಗಬೇಕು " ಎಂದೆ.
"ಪ್ಲೀಸ್ ಕೇವಲ ಐದೇ ನಿಮಿಷ" ಬೇಡಿಕೊಂಡಳು
ಸರಿ ಅಲ್ಲೇ ಮರದಡಿಯಲ್ಲಿ ನಿಲ್ಲುತ್ತಿದ್ದಂತೆ
"ರಾಜೀವ್ ಅಲ್ವಾ ನಿಮ್ಮಹೆಸರು" ನಾನು ಬೆಕ್ಕಸ ಬೆರಗು
"ನಿಮಗೆ ಹೇಗೆ ಗೊತ್ತಾಯ್ತು?" ಬಾಯಲ್ಲಿದ್ದ ಪ್ರಶ್ನೆ ಹೊರಗೆ ಬರುವುದರಲ್ಲಿ ಅವಳೇ ಹೇಳಿದಳು
"ನಾನು ನಿಮ್ಮನ್ನ ದಿನಾ ನಿಮ್ಮ ಆಫೀಸ್ ಹತ್ರ ನೋಡ್ತೀನಿ. " ನಾನು ಅವಳನ್ನ ಯಾವತ್ತೂ ನೋಡೇ ಇಲ್ಲ
"ರಿಯಲ್ಲಿ ಯು ಆರ್ ಸ್ಮಾರ್ಟ್ ಅಂಡ್ ಹ್ಯಾಂಡ್ಸಮ್ . ನಂಗಂತೂ ನಿಮ್ಮನ್ನ ನೋಡದೆ ಇರೋಕಾಗಲ್ಲ ಅನ್ನೋ ಲೆವೆಲಿಗೆ ಪ್ರೀತಿ ಬಂದುಬಿಟ್ಟಿದೆ. "
ನನಗೆ ತಲೆ ಚಿಟ್ಟು ಹಿಡೀತು
"ಅಲ್ಲಾರಿ ನೀವ್ಯಾರು ಏನೂ ಒಂದು ಗೊತ್ತಿಲ್ಲದೆ ಇರೋವರ ಹತ್ರ ನಿಮ್ಮನ್ನ ಪ್ರೀತಿಸ್ತೀನಿ ಅಂತೀರಲ್ಲ? ಬುದ್ದಿಇದೆಯಾ? ಇದೆಲ್ಲಾ ಆಗೋ ಕೆಲ್ಸ ಅಲ್ಲ ಇನ್ನ್ಯಾರಾದಾರೂ ಇದ್ರೆ ನೋಡ್ಕೊಳ್ಳಿ" ರೇಗಿದೆ
"ರಾಜೀವ್ ನಾನು ಐಬಿಎಮ್ ನಲ್ಲಿ ಕೆಲಸ ಕೈಗೆ ತಿಂಗಳಿಗೆ ಲಕ್ಷ ಬರುತ್ತೆ. " ನಾನು ದಂಗು ನನ್ನ ಸಂಬಳದ ಐದರಷ್ಟು ಇರಲಿ ಬಿಡು ಸಾಫ್ಟ್ವೇರ್ ಅಲ್ಲವಾ.
ಅವಳು ಹೇಳುತ್ತಲೇ ಇದ್ದಳು
"ನಿಮ್ಮ ಪ್ರೀತಿಗೋಸ್ಕರ ನಾನು ಯಾವುದಕ್ಕೂ ರೆಡಿ. ಪ್ಲೀಸ್ ಇಲ್ಲಾಂತ ಹೇಳ್ಬೇಡಿ" ಮಳೆ ಹನಿಯಲಾರಂಭಿಸಿತು. ವಾತಾವರಣ ತಣ್ಣಗಾಯ್ತು.
ಏನು ಹೇಳೋದು
"ನೋಡಿ ನಾನಾಗಲೆ ಒಬ್ಬಳ ಬಂಧಿ. ಅವಳಿಗೆ ಮೀಸಲು. ನೀವು ಬೇರೆ ಯಾರಿಗಾದರೂ ಈ ಆಫರ್ ಕೊಟ್ಟರೆ ಖಂಡಿತಾ ವರ್ಕ್ ಔಟ್ ಆಗುತ್ತೆ."
"ಅವಳು ನನಗಿಂತ ಚೆನ್ನಾಗಿದ್ದಾಳಾ?" ನನ್ನ ಕಣ್ಣಲ್ಲಿ ಕಣ್ಣನ್ನಿಟ್ಟು ಪ್ರಶ್ನಿಸಿದಳು
ನೆಟ್ಟ ಕಣ್ಣಿನಿಂದ ಇನ್ನೇನು ಕೊಂದೇಬಿಡುತ್ತಾಳೇನೋ ಎಂಬಂತೆ ನೋಡತೊಡಗಿದಳು.
ಆ ಕಣ್ಣಲ್ಲಿ ಏತಕೋ ಆಹ್ವಾನ. ತುಟಿಯಲ್ಲಿ ಮಿಂಚಿನ ನಗೆ, ಐಶ್ ಅಲ್ಲ ಯಾರೂ ಇವಳ ಮುಂದೆ ನಿಲ್ಲಲಾಗುವುದಿಲ್ಲ ಎನ್ನಿಸಿತು ಅವರ್ಯಾರು ಇರಲಿ ನಂಗೆಇವಳ ಮುಂದೆ ನಿಲ್ಲಕಾಗ್ತಿರಲಿಲ್ಲ. ಅಂತಹ ಮಾದಕ ಸೌಂದರ್ಯ ಅವಳದು . ಸಿರಿ ಇವಳ ಮುಂದೆ ಏನೂ ಅಲ್ಲ . ಗೋದಿ ಬಣ್ಣದ ಸಿರಿ ಇವಳ ಹಾಲು ಮೈಬಣ್ಣದ ಮುಂದೆ ಮಂಕಾಗಿ ಕಾಣುತ್ತಾಳೆ. ಯೋಚಿಸುತ್ತಲೇ ಇದ್ದೆ
ಸ್ವಲ್ಪ ಹೊತ್ತು ಆ ಕಂಗಳ ಮೋಡಿಗೆ ಸಿಲುಕಿದೆ. ಮೆಲ್ಲಗೆ ಬೀಳುತಿದ್ದ ತುಂತುರು ಹನಿಯಿಂದ ವಾತವರಣ ಹಿತಕರವಾಗಿತ್ತು. ಮೆಲ್ಲನೆ ಬಾ ಎನ್ನುವಂತೆ ನನ್ನತ್ತ ಕೈ ಚಾಚಿದಳು . ನಾನು ಇನ್ನೇನು ಕೈ ಚಾಚಿಬಿಡಬೇಕು. ಅಷ್ಟರಲ್ಲಿ ಸಿರಿಯ ಮುಖ ಕಣ್ಣೆದುರು ಬಂದಿತು. ನನ್ನ ಕೈ ಇದ್ದಕಿದ್ದಂತೆ ಹಿಂದೆ ಬಂದಿತು
"ಸಾರಿ ನನ್ನವಳು ಎಲ್ಲರಿಗಿಂತ ಸುಂದರಿ "ಎಂದಷ್ಟೇ ಹೇಳಿ ನನ್ನ ಸ್ಕೂಟಿಯ ಬಳಿ ಬಂದೆ
"ಪ್ಲೀಸ್" ಕೈ ಹಿಡಿದೆಳೆದಳು. ಅದೆಲ್ಲಿತ್ತೋ ಕೋಪ
"ಒಬ್ಬ ಹೆಣ್ಣಾಗಿ ಹೀಗೆ ಮಾಡಬೇಡಿ. ಬಿಹೇವ್ ಯುವರ್ಸೆಲ್ಫ್"
ಎಂದು ಹೇಳಿ ಸ್ಕೂಟಿ ಹತ್ತಿದೆ ಅವಳೇನು ಮಾಡ್ತಿದಾಳೋ ಅದನ್ನೂ ನೋಡಲಿಲ್ಲ
ಸೀದಾ ಬಂದೆ. ಸ್ವಲ್ಪ ದೂರ ಬಂದಮೇಲೆ ಮನಸ್ಸು ಸ್ಥಿಮಿತಕ್ಕೆ ಬಂದಿತು
ಅಲ್ಲೇ ಕಾಮತ್ ಹೋಟೆಲ್ನಲ್ಲಿ ಕಾಫಿ ಕುಡಿದೆ ಸಿಗರೇಟ್ ಸೇದಲೇ ಬೇಕೆನಿಸಿತು. ಸಿಗರೇಟು ತೆಗೆದು ಬಾಯಿಗಿಡುತ್ತಿದ್ದಂತೆ
"ನೀವೋ ನಿಮ್ಮಹಾಳು ಸಿಗರೇಟೋ, ನನಗೆ ಇಷ್ತಾನೆ ಇಲ್ಲ " ಎನ್ನುವ ಸಿರಿಯ ಮಾತು ನೆನಪಿಗೆ ಬಂದಿತು. ಸಿಗರೇಟ್ ಬಿಸಾಡಿದೆ
ಏಳುಘಂಟೆಗೆ ಹತ್ತು ನಿಮಿಷ ಇದೆ. ಆಮೇಲೆ ಸಿರಿ ಕೋಪಿಸಿಕೊಂಡರೆ
ಕೂಡಲೆ ಫಾಸ್ಟ್ ಆಗಿ ಡ್ರೈವ್ ಮಾಡಿಕೊಂಡು ಬಂದೆ
ಸಿರಿ ಗೇಟ್ ಬಳಿಯಲ್ಲೇ ನಿಂತಿದ್ದಳು
ರಾಜೀವ್ ಬಂದ್ರಾ ಆಗಲೆ ಪ್ರೋಗ್ರಾಮ್ ಶುರು ಆಗಿದೆ." ಸಂಭ್ರಮದಿಂದ ಒಳಗೆ ಕರೆದುಕೊಂಡು ಹೋದಳು
ಏನೋ ಪ್ರೋಗ್ರಾಮ್. ಒಂದುಪುಸ್ತಕ ಬಿಡುಗಡೆಗೆ ಇಷ್ಟೊಂದು ಪ್ರಚಾರ ಬೇಕಾ.
ಇಷ್ಟೊಂದು ಮಾತಾಡ್ತಾರಲ್ಲ ಭಾಷಣ ಅಂದ್ರೆ ತಲೆ ಕೊರಿಯುವರಿಗೊಂದು ವರ ಇದ್ದ ಹಾಗೆ. ಅದ್ಯಾರೋ ಬಂದ್ರು ಸನ್ಮಾನ ಅದೂ ಇದೂ ನಡೀತಿತ್ತು. ಒಳ್ಲೇ ಚೈನೀಸ್ ಫಿಲ್ಮ್ ನೋಡಿದ ಅನುಭವ ಆಗ್ತಿತು." ಮಾತನ್ನೂ ಸಾಹಿತ್ಯ ಭಾಷೇಲೆ ಮಾತಾಡಬೇಕಾ?" ಏನೂ ಅರ್ಥವಾಗ್ರ್ತಿರಲಿಲ್ಲ. ಯಾರು ಏನು ಅನ್ನೋದು ತಿಳೀತಿರಲಿಲ್ಲ
ಇವಳು ಮಾತ್ರ ಹಲ್ಲು ಕಿರಿದುಕೊಂಡು ಪ್ರತಿಸಲಾನು ಚಪ್ಪಾಳೆ ತಟ್ಟೋದು ಅವಳನ್ನ ನೋಡಿ ನಾನು ಚಪ್ಪಾಳೆ ತಟ್ತಾ ಇದ್ದೆ.ಏನು ಮಾಡೋದು ಎಲ್ಲಾ ಹೆಂಗಸರಿಗಾಗಿ . ಮದುವೆಗೆ ಮುಂಚೇನೆ ಹೀಗೆ, ಇನ್ನು ಮದುವೆಯಾದ ಮೇಲೆ ದೇವರೆ ಕಾಪಾಡಪ್ಪ, ಕಾಣದ ದೇವರನ್ನು ಕರೆದಿದ್ದಕ್ಕೆ ಮನಸಲ್ಲೇ ನಗು ಬಂತು
ಕೊನೆಗೆ ಆ ಪ್ರುಸ್ತಕ ಒಂದು ಘಂಟೆಯವರೆಗೆ ಅವರಿವರ ಕೈನಲ್ಲಿ ಮುಟ್ಟಿಸಿಕೊಂಡು ಬಿಡುಗಡೆಯಾಯ್ತು. ನನಗೂ ಆ ಸಮಾರಂಭದ ಸೆರೆಯಿಂದ ಬಿಡುಗಡೆ ಆಯ್ತು.
ಬರ್ತಾ ಸಿರಿಗೆ ಎಲ್ಲಾ ವಿವರಿಸಿದೆ. ಸ್ವಲ್ಪ ಹೆಮ್ಮೆಯಿಂದಲೇ.
ಅವಳು ನಗುತ್ತಾ ಹಿಂದೆ ನೋಡಿದಳು. ನಂಗೆ ದಿಗ್ಭ್ರಮೆ
ಆ ಮಿನಿ ಸುಂದರಿ ನಿಂತಿದ್ದಳು. ಅವಳು ಸಿರಿಯ ಸ್ನೇಹಿತೆ. " ರಿಯಲ್ಲಿ ಯು ಆರ್ ಲಕ್ಕಿ " ಅಂತ ಸಿರಿಗೆ ಹೇಳುತಿದ್ದಳು
ನನ್ನನ್ನ ಪರೀಕ್ಷೆ ಮಾಡೋಕಂತ ಹೀಗೆ ಮಾಡಿದ್ದಳಂತೆ
ಕೋಪ ಬಂತು. ಹೀಗಾ ಮಾಡೋದು.
ಕೋಪಿಸಿಕೊಂಡೇ ಬಂದು ಸ್ಕೂಟಿ ಶುರು ಮಾಡಿದೆ.
"ರಾಜೀವ್ ಪ್ಲೀಸ್ . ಅವಳ ಕೂಗು ಕೇಳಿ ನಿಂತೆ. ಕೋಪಏನೂ ಇರಲಿಲ್ಲ ಸುಮ್ನೆ ಹಾಗೆ ನಟಿಸುತ್ತಿದ್ದೆ. ಮನದಲ್ಲಿ ಹೆಮ್ಮೆ ನಾನು ನಿನ್ನ ಪರೀಕ್ಷೇಲಿ ಗೆದ್ದೆ.
"ಸಾರಿ ರೀ. ಅದೂ ನಾನು ನಿಮ್ಮನ್ನ ತುಂಭಾ ಹೊಗಳುತಿದ್ದೆ . ಅದಕ್ಕೆ ಒಂದು ಟೆಸ್ಟ್ ಮಾಡೋಣ ಅಂತ ನನ್ನ ಫ್ರೆಂಡ್ ಹೇಳಿದಳು. ಕೊನೆಗೂ ನಾನೆ ಗೆದ್ದೆ"
ಆ ಮಿನಿ ಸುಂದರಿ ಬಂದು "ಸಾರಿ ಮಿ ರಾಜೀವ್, ನಿಮಗೆ ಬೇಸರ ಆಗಿದ್ದರೆ. ಆದರೆ ಈ ಪರೀಕ್ಷೇಲಿ ನಿವು ಗೆದ್ದಿರಿ.ಕಂಗ್ರಾಟ್ಸ್" ಎಂದಳು
(ಮುಂದುವರೆಯುವುದು)
"ಇವತ್ತು ಸಾಯಂಕಾಲ ಏಳು ಘಂಟೇಗೆ ಕಲಾ ಸಂಗಮದಲ್ಲಿ ಕತೆಗಾರ ಸೋಮಣ್ಣನವರ ಹೊಸ ಕತೆ ಬಿಡುಗಡೆಯಾಗ್ತಿದೆ . ನೀವು ಬರಲೇಬೇಕು . ಇಲ್ಲಾಂದರೆ ಮಾತಾಡೋಲ್ಲ "
ಅಂತ ಸಿರಿ ಏನೋ ಹೇಳಿದಾಳೆ. ಆಗಲೇ ಸಾಯಂಕಾಲ ಆರು ಘಂಟೆ ಆಗಿದೆ.
ಆಫೀಸಿನಿಂದ ಡೈರೆಕ್ಟ್ ಆಗಿ ಹೋಗೋಣ ಅನ್ಕೊಂಡು ಸ್ಕೂಟಿ ಸ್ಟಾರ್ಟ್ ಮಾಡಿದೆ.ಯಾರೋ ಸೋಮಣ್ಣ. ಯಾಕಪ್ಪ ನಿನ್ನ ಕಥೇನ ಬಿಡುಗಡೆ ಮಾಡಿ ಗೋಳ್ಹಾಕ್ಕೋತೀಯಾ.
ಏನ್ ಕತೇನೋ ಕವನಾನೋ, ಸಿನಿಮಾನೋ ಒಂದು ಅರ್ಥ ಆಗಲ್ಲ. ಹಾಗೆ ನೋಡಿದರೆ ನಂಗೆ ಈ ಕತೆ ಕವನ, ಸಿನಿಮಾ ಅಂತ ಭ್ರಾಮಕ ಜಗತ್ತಿನ್ನಲ್ಲಿ ಬದುಕೋದು ಒಂಚೂರು ಇಷ್ಟ ಇಲ್ಲ. ನನಗೆ ಈ ಕಲ್ಪನಾ ವಿಲಾಸಿ ಸಿರಿ ಜೋಡಿಯಾಗ್ತಿರೋದು ಒಂದು ತಮಾಷೇನೆ .ಅವಳು ಬಂದ್ರೆ ಇವತ್ತು ಉಪ್ಪಿ ಹುಟ್ಟಿದ ಹಬ್ಬ, ರಮ್ಯಾಗೆ ಅವಾರ್ಡ್ ಸಿಕ್ತು. ಪೇಪರ್ನಲ್ಲಿ ವಿಶ್ವೇಶ್ವರ್ ಭಟ್ ಹೀಗೆ ಬರೆದಿದ್ದಾರೆ, ಭೈರಪ್ಪನವರ ಕಾದಂಬರಿ ಓದಿದ್ಯಾ. ಅಂತ ತಲೆ ತಿನ್ನುತ್ತಾ ಇರುತ್ತಾಳೆ.
ಯಾರಿಗೋ ಏನೋ ಆದರೆ ನಂಗೇನು, ಇರೋ ಕೆಲಸದಲ್ಲಿ ನಿಷ್ಟೆಯಾಗಿ ದುಡಿದೋ ಮುಂದಿನ ಜೀವನ ಸುಖವಾಗಿ ಇರೋದನ್ನ ನೋಡ್ಕೊಳ್ಳೋದು ನನ್ನ ಆಸೆ, ಬೋರ್ಗಿರಾಕಿ ಇದು ಅವಳ ಬಿರುದು ನನಗೆ . ನಾನು ವಾಸ್ತವವಾದಿ ಅವಳು ಮಿಥ್ಯಾ ಲೋಕ ಸಂಚಾರಿಣಿ. ಆದರೂ ನನಗೆ ಅವಳಂದ್ರೆ ತುಂಬಾ ಇಷ್ಟ.
ಅವಳ ಪರಿಚಯ ಆಗಿದ್ದೂ ಆಕಸ್ಮಿಕಾನೆ. ಗೆಳೆಯ ತುಂಬಾ ಫೋರ್ಸ್ ಮಾಡಿ ಯಾವುದೋ ಸಂಗೀತ ಗೋಷ್ಟಿಗೆ ಕರೆದುಕೊಂಡು ಹೋಗಿದ್ದ. ಬರ್ತಾ ಇದ್ದಾಗ ಪಂಚರ್ ಆಗಿದ್ದ ಸ್ಕೂಟಿ ತಳ್ಳಲಾಗದೆ ಏಳು ಮಲ್ಲಿಗೆ ತೂಕದ ಈ ರಾಜಕುಮಾರಿ ಸಿರಿ ಒದ್ದಾಡುತ್ತಿದ್ದಳು.ಅವಳಲ್ಲದೆ ಬೇರೆ ಯಾರೆ ಇದ್ದರೂ ಸಹಾಯ ಕೇಳುತ್ತಿದ್ದರೇನೋ. ಅಷ್ಟಿದ್ದರೂ ಯಾರ ಸಹಾಯ ಪಡೆಯದೆ ತಳ್ಳಿಕೊಂಡು ಹೋಗುತ್ತಿದ್ದ ಅವಳ ಪರಿಪಾಟಲು ನೋಡಲಾಗದೆ ನನ್ನ ಸ್ಕೂಟಿಯಲಿದ್ದ ಸ್ಟೆಪ್ನಿ ಜೋಡಿಸಿಕೊಟ್ಟೆ. ನಂಗೇನು ಅದು ದೊಡ್ಡ ವಿಷಯ ಅನ್ನಿಸಲಿಲ್ಲ. ಆದರೆ ಸಿರಿಗೆ ಮಾತ್ರ ನಾನು ಅವಳ ಜೋಡಿಯಾಗಲೆಂದೆ ಆ ಸನ್ನಿವೇಶ ಸೃಷ್ಟಿಯಾಯಿತಂತೆ. ಅದನ್ನು ಹೇಳೋಕೂ ಸೇವಂತಿಗೆ ಹೂವಿನ ಎಸಳುಗಳನ್ನು ಕಿತ್ತು ಅದನ್ನು ಜೋಡಿಸಿ ಪತ್ರ ಬರೆದು ಕೊಟ್ಟಿದ್ದು ನೆನೆಸಿಕೊಂಡ್ರೆ ನಗು ಬರುತ್ತೆ.
ನಾನು ಕೇಳಿದ ಪ್ರಶ್ನೆ ಅವಳಿಗೆ ಕೋಪ ಬೇರೆ ತರಿಸಿತು. "ಅಲ್ಲಾ ಮೂರೇ ಶಬ್ದದಲ್ಲಿ ಹೇಳೋದನ್ನ ಸುಮ್ನೆ ಟೈಮ್ ವೇಸ್ಟ್ ಮಾಡಿಕೊಂಡು ಹೂವಿನಲ್ಲಿ ಜೋಡಿಸ್ತೀರಲ್ಲ ನಿಜವಾಗಲೂ ತಲೆ ಕೆಟ್ಟಿದೆ." ಅವಳು ಕೋಪ ಮಾಡಿಕೊಂಡು ಹೊರಟೆ ಹೋಗಿದ್ದಳು.
ಆಮೇಲೆ ನನಗೂ ಗೊತ್ತಾಯ್ತು.
"ಐ ಆಮ್ ಆಲ್ಸೊ ಇನ್ ಲವ್ ವಿತ್ ಹರ್"
ಕೊನೆಗೆ ಅವಳನ್ನು ಕಾಡಿಬೇಡಿ ಸಾರಿ ಕೇಳಿದ್ದಾಯ್ತು.
ಹೀಗೆ ಶುರುವಾಗಿ ಕೊನೆಗೆ ರಾಜಿಯಾಯಿತು
ಕಿರ್ರ್ ಕಿರ್ರ್ ಎನ್ನುತ್ತಾ ಸ್ಕೂಟಿ ನಿಂತಿತು ನಾನು ಬ್ರೇಕ್ ಹಾಕಿದ್ದೆ. ಮನದಲ್ಲಿ ಎಲ್ಲಾ ಯೋಚನೆ ಮಾಡುತ್ತಿದ್ದರೂ ವಿವೇಕಾ ಮಾತ್ರ ಕೈಕೊಡಲ್ಲ ನನಗೆ
ಮಿನಿ ತೊಟ್ಟ ಸುಂದರಿಯೊಬ್ಬಳು ಸ್ಕೂಟಿಯನ್ನು ತಳ್ಳುತ್ತಿದ್ದಳು, ಯಾಕೆ ನಂಗೆ ಸ್ಕೂಟಿ ಸುಂದರಿಯರೆ ಗಂಟು ಬೀಳ್ತಾರೆ ಎಂಬ ತುಂಟ ಯೋಚನೆಯೊಂದಿಗೆ
"ಕ್ಯಾನ್ ಐ ಹೆಲ್ಪ್ ಯು "ಎಂದು ವಿಚಾರಿಸಿದೆ
"ಹೌದು ಪೆಟ್ರೋಲ್ ಆಗಿ ಹೋಗಿದೆ " ಎಂದು ಅಳು ಮೋರೆ ಮಾಡಿ ಹೇಳಿದಳು
ನನ್ನ ಸ್ಕೂಟಿಯಲ್ಲಿ ಪೆಟ್ರೋಲ್ ಇದ್ದರೂ ತೆಗೆಯಲು ಯಾವುದೇ ಸಲಕರಣೆ ಇಲ್ಲ"
"ಸರಿ ನೀವು ಸ್ಕೂಟಿಯಲ್ಲಿ ಕೂತು ಡ್ರೈವ್ ಮಾಡಿ "ಎಂದು ಹೇಳಿದೆ . ಅವಳು ಅನುಮಾನದಿಂದ ನೋಡುತ್ತಲೇ ಕೂತಳು
ನನ್ನ ಸ್ಕೂಟಿಯಲ್ಲಿ ಕೂತು ಒಂದು ಕಾಲನ್ನು ಅವಳ ಸ್ಕೂಟಿಯ ಹಿಂಬದಿಯ ಚಕ್ರದ ಮೇಲೆ ಇಟ್ಟು ನನ್ನ ಸ್ಕೂಟಿ ಸ್ಟಾರ್ಟ್ ಮಾಡಿದೆ ಅವಳ ಸ್ಕೂಟಿ ಮುಂದೆ ಹೋಗಲಾರಂಭಿಸಿತು. ಅಲ್ಲ ನನ್ನ ಕಾಲು ಅದನ್ನ ತಳ್ಳುತ್ತಿತ್ತು
ಪೆಟ್ರೋಲ್ ಬಂಕ್ ಹತ್ತಿರ ಬರುತ್ತಿದ್ದಂತೆ ಅವಳಿಗೆ ಮುಂದೆ ಹೋಗಲು ಹೇಳಿದೆ.
ಸ್ವಲ್ಪ ಹೊತ್ತು ತಡೆಯಲು ಹೇಳಿದಳು .ಟೈಮ್ ಆಗುತ್ತಿದೆ ಎಂದರೂ ಒತ್ತಾಯಿಸಿದಳು
ಪೆಟ್ರೋಲ್ ಹಾಕಿಸಿಕೊಂಡು ಬರುತ್ತಿದ್ದಂತೆ
"ನಿಮ್ಮ ಜೊತೆ ಮಾತಾಡಬೇಕು " ಎಂದಳು
"ಸಾರಿ ನಂಗೆ ಟೈಮ ಆಗಿದೆ ಹೋಗಬೇಕು " ಎಂದೆ.
"ಪ್ಲೀಸ್ ಕೇವಲ ಐದೇ ನಿಮಿಷ" ಬೇಡಿಕೊಂಡಳು
ಸರಿ ಅಲ್ಲೇ ಮರದಡಿಯಲ್ಲಿ ನಿಲ್ಲುತ್ತಿದ್ದಂತೆ
"ರಾಜೀವ್ ಅಲ್ವಾ ನಿಮ್ಮಹೆಸರು" ನಾನು ಬೆಕ್ಕಸ ಬೆರಗು
"ನಿಮಗೆ ಹೇಗೆ ಗೊತ್ತಾಯ್ತು?" ಬಾಯಲ್ಲಿದ್ದ ಪ್ರಶ್ನೆ ಹೊರಗೆ ಬರುವುದರಲ್ಲಿ ಅವಳೇ ಹೇಳಿದಳು
"ನಾನು ನಿಮ್ಮನ್ನ ದಿನಾ ನಿಮ್ಮ ಆಫೀಸ್ ಹತ್ರ ನೋಡ್ತೀನಿ. " ನಾನು ಅವಳನ್ನ ಯಾವತ್ತೂ ನೋಡೇ ಇಲ್ಲ
"ರಿಯಲ್ಲಿ ಯು ಆರ್ ಸ್ಮಾರ್ಟ್ ಅಂಡ್ ಹ್ಯಾಂಡ್ಸಮ್ . ನಂಗಂತೂ ನಿಮ್ಮನ್ನ ನೋಡದೆ ಇರೋಕಾಗಲ್ಲ ಅನ್ನೋ ಲೆವೆಲಿಗೆ ಪ್ರೀತಿ ಬಂದುಬಿಟ್ಟಿದೆ. "
ನನಗೆ ತಲೆ ಚಿಟ್ಟು ಹಿಡೀತು
"ಅಲ್ಲಾರಿ ನೀವ್ಯಾರು ಏನೂ ಒಂದು ಗೊತ್ತಿಲ್ಲದೆ ಇರೋವರ ಹತ್ರ ನಿಮ್ಮನ್ನ ಪ್ರೀತಿಸ್ತೀನಿ ಅಂತೀರಲ್ಲ? ಬುದ್ದಿಇದೆಯಾ? ಇದೆಲ್ಲಾ ಆಗೋ ಕೆಲ್ಸ ಅಲ್ಲ ಇನ್ನ್ಯಾರಾದಾರೂ ಇದ್ರೆ ನೋಡ್ಕೊಳ್ಳಿ" ರೇಗಿದೆ
"ರಾಜೀವ್ ನಾನು ಐಬಿಎಮ್ ನಲ್ಲಿ ಕೆಲಸ ಕೈಗೆ ತಿಂಗಳಿಗೆ ಲಕ್ಷ ಬರುತ್ತೆ. " ನಾನು ದಂಗು ನನ್ನ ಸಂಬಳದ ಐದರಷ್ಟು ಇರಲಿ ಬಿಡು ಸಾಫ್ಟ್ವೇರ್ ಅಲ್ಲವಾ.
ಅವಳು ಹೇಳುತ್ತಲೇ ಇದ್ದಳು
"ನಿಮ್ಮ ಪ್ರೀತಿಗೋಸ್ಕರ ನಾನು ಯಾವುದಕ್ಕೂ ರೆಡಿ. ಪ್ಲೀಸ್ ಇಲ್ಲಾಂತ ಹೇಳ್ಬೇಡಿ" ಮಳೆ ಹನಿಯಲಾರಂಭಿಸಿತು. ವಾತಾವರಣ ತಣ್ಣಗಾಯ್ತು.
ಏನು ಹೇಳೋದು
"ನೋಡಿ ನಾನಾಗಲೆ ಒಬ್ಬಳ ಬಂಧಿ. ಅವಳಿಗೆ ಮೀಸಲು. ನೀವು ಬೇರೆ ಯಾರಿಗಾದರೂ ಈ ಆಫರ್ ಕೊಟ್ಟರೆ ಖಂಡಿತಾ ವರ್ಕ್ ಔಟ್ ಆಗುತ್ತೆ."
"ಅವಳು ನನಗಿಂತ ಚೆನ್ನಾಗಿದ್ದಾಳಾ?" ನನ್ನ ಕಣ್ಣಲ್ಲಿ ಕಣ್ಣನ್ನಿಟ್ಟು ಪ್ರಶ್ನಿಸಿದಳು
ನೆಟ್ಟ ಕಣ್ಣಿನಿಂದ ಇನ್ನೇನು ಕೊಂದೇಬಿಡುತ್ತಾಳೇನೋ ಎಂಬಂತೆ ನೋಡತೊಡಗಿದಳು.
ಆ ಕಣ್ಣಲ್ಲಿ ಏತಕೋ ಆಹ್ವಾನ. ತುಟಿಯಲ್ಲಿ ಮಿಂಚಿನ ನಗೆ, ಐಶ್ ಅಲ್ಲ ಯಾರೂ ಇವಳ ಮುಂದೆ ನಿಲ್ಲಲಾಗುವುದಿಲ್ಲ ಎನ್ನಿಸಿತು ಅವರ್ಯಾರು ಇರಲಿ ನಂಗೆಇವಳ ಮುಂದೆ ನಿಲ್ಲಕಾಗ್ತಿರಲಿಲ್ಲ. ಅಂತಹ ಮಾದಕ ಸೌಂದರ್ಯ ಅವಳದು . ಸಿರಿ ಇವಳ ಮುಂದೆ ಏನೂ ಅಲ್ಲ . ಗೋದಿ ಬಣ್ಣದ ಸಿರಿ ಇವಳ ಹಾಲು ಮೈಬಣ್ಣದ ಮುಂದೆ ಮಂಕಾಗಿ ಕಾಣುತ್ತಾಳೆ. ಯೋಚಿಸುತ್ತಲೇ ಇದ್ದೆ
ಸ್ವಲ್ಪ ಹೊತ್ತು ಆ ಕಂಗಳ ಮೋಡಿಗೆ ಸಿಲುಕಿದೆ. ಮೆಲ್ಲಗೆ ಬೀಳುತಿದ್ದ ತುಂತುರು ಹನಿಯಿಂದ ವಾತವರಣ ಹಿತಕರವಾಗಿತ್ತು. ಮೆಲ್ಲನೆ ಬಾ ಎನ್ನುವಂತೆ ನನ್ನತ್ತ ಕೈ ಚಾಚಿದಳು . ನಾನು ಇನ್ನೇನು ಕೈ ಚಾಚಿಬಿಡಬೇಕು. ಅಷ್ಟರಲ್ಲಿ ಸಿರಿಯ ಮುಖ ಕಣ್ಣೆದುರು ಬಂದಿತು. ನನ್ನ ಕೈ ಇದ್ದಕಿದ್ದಂತೆ ಹಿಂದೆ ಬಂದಿತು
"ಸಾರಿ ನನ್ನವಳು ಎಲ್ಲರಿಗಿಂತ ಸುಂದರಿ "ಎಂದಷ್ಟೇ ಹೇಳಿ ನನ್ನ ಸ್ಕೂಟಿಯ ಬಳಿ ಬಂದೆ
"ಪ್ಲೀಸ್" ಕೈ ಹಿಡಿದೆಳೆದಳು. ಅದೆಲ್ಲಿತ್ತೋ ಕೋಪ
"ಒಬ್ಬ ಹೆಣ್ಣಾಗಿ ಹೀಗೆ ಮಾಡಬೇಡಿ. ಬಿಹೇವ್ ಯುವರ್ಸೆಲ್ಫ್"
ಎಂದು ಹೇಳಿ ಸ್ಕೂಟಿ ಹತ್ತಿದೆ ಅವಳೇನು ಮಾಡ್ತಿದಾಳೋ ಅದನ್ನೂ ನೋಡಲಿಲ್ಲ
ಸೀದಾ ಬಂದೆ. ಸ್ವಲ್ಪ ದೂರ ಬಂದಮೇಲೆ ಮನಸ್ಸು ಸ್ಥಿಮಿತಕ್ಕೆ ಬಂದಿತು
ಅಲ್ಲೇ ಕಾಮತ್ ಹೋಟೆಲ್ನಲ್ಲಿ ಕಾಫಿ ಕುಡಿದೆ ಸಿಗರೇಟ್ ಸೇದಲೇ ಬೇಕೆನಿಸಿತು. ಸಿಗರೇಟು ತೆಗೆದು ಬಾಯಿಗಿಡುತ್ತಿದ್ದಂತೆ
"ನೀವೋ ನಿಮ್ಮಹಾಳು ಸಿಗರೇಟೋ, ನನಗೆ ಇಷ್ತಾನೆ ಇಲ್ಲ " ಎನ್ನುವ ಸಿರಿಯ ಮಾತು ನೆನಪಿಗೆ ಬಂದಿತು. ಸಿಗರೇಟ್ ಬಿಸಾಡಿದೆ
ಏಳುಘಂಟೆಗೆ ಹತ್ತು ನಿಮಿಷ ಇದೆ. ಆಮೇಲೆ ಸಿರಿ ಕೋಪಿಸಿಕೊಂಡರೆ
ಕೂಡಲೆ ಫಾಸ್ಟ್ ಆಗಿ ಡ್ರೈವ್ ಮಾಡಿಕೊಂಡು ಬಂದೆ
ಸಿರಿ ಗೇಟ್ ಬಳಿಯಲ್ಲೇ ನಿಂತಿದ್ದಳು
ರಾಜೀವ್ ಬಂದ್ರಾ ಆಗಲೆ ಪ್ರೋಗ್ರಾಮ್ ಶುರು ಆಗಿದೆ." ಸಂಭ್ರಮದಿಂದ ಒಳಗೆ ಕರೆದುಕೊಂಡು ಹೋದಳು
ಏನೋ ಪ್ರೋಗ್ರಾಮ್. ಒಂದುಪುಸ್ತಕ ಬಿಡುಗಡೆಗೆ ಇಷ್ಟೊಂದು ಪ್ರಚಾರ ಬೇಕಾ.
ಇಷ್ಟೊಂದು ಮಾತಾಡ್ತಾರಲ್ಲ ಭಾಷಣ ಅಂದ್ರೆ ತಲೆ ಕೊರಿಯುವರಿಗೊಂದು ವರ ಇದ್ದ ಹಾಗೆ. ಅದ್ಯಾರೋ ಬಂದ್ರು ಸನ್ಮಾನ ಅದೂ ಇದೂ ನಡೀತಿತ್ತು. ಒಳ್ಲೇ ಚೈನೀಸ್ ಫಿಲ್ಮ್ ನೋಡಿದ ಅನುಭವ ಆಗ್ತಿತು." ಮಾತನ್ನೂ ಸಾಹಿತ್ಯ ಭಾಷೇಲೆ ಮಾತಾಡಬೇಕಾ?" ಏನೂ ಅರ್ಥವಾಗ್ರ್ತಿರಲಿಲ್ಲ. ಯಾರು ಏನು ಅನ್ನೋದು ತಿಳೀತಿರಲಿಲ್ಲ
ಇವಳು ಮಾತ್ರ ಹಲ್ಲು ಕಿರಿದುಕೊಂಡು ಪ್ರತಿಸಲಾನು ಚಪ್ಪಾಳೆ ತಟ್ಟೋದು ಅವಳನ್ನ ನೋಡಿ ನಾನು ಚಪ್ಪಾಳೆ ತಟ್ತಾ ಇದ್ದೆ.ಏನು ಮಾಡೋದು ಎಲ್ಲಾ ಹೆಂಗಸರಿಗಾಗಿ . ಮದುವೆಗೆ ಮುಂಚೇನೆ ಹೀಗೆ, ಇನ್ನು ಮದುವೆಯಾದ ಮೇಲೆ ದೇವರೆ ಕಾಪಾಡಪ್ಪ, ಕಾಣದ ದೇವರನ್ನು ಕರೆದಿದ್ದಕ್ಕೆ ಮನಸಲ್ಲೇ ನಗು ಬಂತು
ಕೊನೆಗೆ ಆ ಪ್ರುಸ್ತಕ ಒಂದು ಘಂಟೆಯವರೆಗೆ ಅವರಿವರ ಕೈನಲ್ಲಿ ಮುಟ್ಟಿಸಿಕೊಂಡು ಬಿಡುಗಡೆಯಾಯ್ತು. ನನಗೂ ಆ ಸಮಾರಂಭದ ಸೆರೆಯಿಂದ ಬಿಡುಗಡೆ ಆಯ್ತು.
ಬರ್ತಾ ಸಿರಿಗೆ ಎಲ್ಲಾ ವಿವರಿಸಿದೆ. ಸ್ವಲ್ಪ ಹೆಮ್ಮೆಯಿಂದಲೇ.
ಅವಳು ನಗುತ್ತಾ ಹಿಂದೆ ನೋಡಿದಳು. ನಂಗೆ ದಿಗ್ಭ್ರಮೆ
ಆ ಮಿನಿ ಸುಂದರಿ ನಿಂತಿದ್ದಳು. ಅವಳು ಸಿರಿಯ ಸ್ನೇಹಿತೆ. " ರಿಯಲ್ಲಿ ಯು ಆರ್ ಲಕ್ಕಿ " ಅಂತ ಸಿರಿಗೆ ಹೇಳುತಿದ್ದಳು
ನನ್ನನ್ನ ಪರೀಕ್ಷೆ ಮಾಡೋಕಂತ ಹೀಗೆ ಮಾಡಿದ್ದಳಂತೆ
ಕೋಪ ಬಂತು. ಹೀಗಾ ಮಾಡೋದು.
ಕೋಪಿಸಿಕೊಂಡೇ ಬಂದು ಸ್ಕೂಟಿ ಶುರು ಮಾಡಿದೆ.
"ರಾಜೀವ್ ಪ್ಲೀಸ್ . ಅವಳ ಕೂಗು ಕೇಳಿ ನಿಂತೆ. ಕೋಪಏನೂ ಇರಲಿಲ್ಲ ಸುಮ್ನೆ ಹಾಗೆ ನಟಿಸುತ್ತಿದ್ದೆ. ಮನದಲ್ಲಿ ಹೆಮ್ಮೆ ನಾನು ನಿನ್ನ ಪರೀಕ್ಷೇಲಿ ಗೆದ್ದೆ.
"ಸಾರಿ ರೀ. ಅದೂ ನಾನು ನಿಮ್ಮನ್ನ ತುಂಭಾ ಹೊಗಳುತಿದ್ದೆ . ಅದಕ್ಕೆ ಒಂದು ಟೆಸ್ಟ್ ಮಾಡೋಣ ಅಂತ ನನ್ನ ಫ್ರೆಂಡ್ ಹೇಳಿದಳು. ಕೊನೆಗೂ ನಾನೆ ಗೆದ್ದೆ"
ಆ ಮಿನಿ ಸುಂದರಿ ಬಂದು "ಸಾರಿ ಮಿ ರಾಜೀವ್, ನಿಮಗೆ ಬೇಸರ ಆಗಿದ್ದರೆ. ಆದರೆ ಈ ಪರೀಕ್ಷೇಲಿ ನಿವು ಗೆದ್ದಿರಿ.ಕಂಗ್ರಾಟ್ಸ್" ಎಂದಳು
(ಮುಂದುವರೆಯುವುದು)
Subscribe to:
Posts (Atom)