Tuesday, April 7, 2009

ಹೆಣ್ಣೇ ನೀನೇಕೆ ಹೀಗಾದೆ?

" ಕುಮಾರಿ ಪ್ರಭಾವತಿಗೆ ಜೈ ಕುಮಾರಿ ಪ್ರಭಾವತಿಗೆ ಜೈ" ಜೈಕಾರಗಳು ಮುಗಿಲು ಮುಟ್ಟಿದವು.
ಪ್ರಭಾವತಿ ರಾಜ ಗಾಂಭೀರ್ಯದಿಂದ ಕಾರಿನಿಂದ ಇಳಿದರು ೪೫ರ ವಯಸಿನಲ್ಲೂ ಗಂಡಸರ ಆಸೆಗಳನ್ನು ಕೆರಳಿಸುವಂತಹ ಮೈಕಟ್ಟು. ಸೌಂದರ್ಯ . ಮದುವೆ ಆಗಿಲ್ಲ ಅಲ್ಲವೇ ಅದಕ್ಕೆ ಅಂತಾ ಸೌಂದರ್ಯ ಹಾಗೆ ಇದೆ ಎಂದು ಅವರ ವಾರಿಗೆಯ ಹೆಂಗಸರು ಅಸೂಯೆ ಪಟ್ಟು ನುಡಿಯುತ್ತಿದ್ದರು. ಯಾರೇನೆ ಅಂದರೂ ಗಜ ಗಾಮಿನಿಯಾದ ಪ್ರಭಾವತಿ ಕೇರ್ ಮಾಡುತ್ತಿರಲಿಲ್ಲ
ಭಾರತದ ಮುಂದಿನ ಪ್ರಧಾನಿ ಇವರಾಗಬಹುದು ಎಂಬ ಲೆಕ್ಕಾಚಾರ ನಡೆಯುತ್ತಿತ್ತು. ಅವರ ಒಂದು ಮಾತಿಗೆ ಇಡೀ ಡೆಲ್ಲಿಯನ್ನೇ ನಡುಗಿಸೋ ಅಂತಹ ಶಕ್ತಿ ಇತ್ತು. ಎಂತೆಂತಹ ರಾಜಕೀಯ ಹೇಮಾ ಹೇಮಿಗಳೆಲ್ಲಾ ಇವರೆದುರಿಗೆ ನಿಂತು ಚುನಾವಣೆಯಲ್ಲಿ ಸೋತಿದ್ದರು
ತಿಂಗಳು ಗಳಾದ ನಂತರ ಬೆಂಗಳೂರಿಗೆ ಬಂದಿದ್ದರು. ನೋಡಲು ಜನಸಾಗರವೇ ನಿಂತಿತ್ತು
ಹೂವಿನ ಹಾರಗಳ ಭಾರಕ್ಕೆ ನಲುಗಿದವರಂತೆ ಕಂಡರೂ ಕಣ್ಣಲ್ಲಿ ಗೆಲುವು . ಸುತ್ತಾ ನಿಂತಿದ್ದ ಜನರನ್ನು ನೋಡಿ ಹೆಮ್ಮೆಯಾಯಿತು. ಇದಕ್ಕೆ ಅಲ್ಲವೇ ತಾನು ಇಷ್ಟೊಂದು ಕಷ್ಟ ಪಟ್ಟಿದ್ದು. ಎಷ್ಟೋ ಜನರಿಗೆ ಸೆರಗು ಹಾಸಿ ಸೆರಗನ್ನೇ ನೇಣಾಗಿ ಮಾಡಲಿಲ್ಲವೇ? ತನ್ನ ಬುದ್ದಿವಂತಿಕೆಗೆ ಮೆಚ್ಚುಗೆಯಾಯಿತು. ಮನದಲ್ಲಿ ಏನೇ ಮಂಥನ ನಡೆಯುತ್ತಿದ್ದರೂ ತುಟಿಯಲ್ಲಿ ಮಾತ್ರ ಅದೇ ಜನರನ್ನು ಮೋಡಿ ಮಾಡುವ ನಗೆ ಹೊದ್ದು ಕೈ ಮುಗಿದುಕೊಂಡು ಬರುತ್ತಿದ್ದರು. ಹಿಂದೆ ಶಾಸಕರ ದಂಡು ಅವರ ಹಿಂದೆ ಕಾರ್ಯಕರ್ತರು.
ತಮ್ಮ ಬೇಳೆ ಏನಾದರೂ ಬೇಯಬಹುದೇ ಎಂದು ಕಾಯುತ್ತಿರುವ ಉದ್ಯಮಿಗಳು ತಾನೆ ಪ್ರಭಾವತಿ ಏನೋ ಎಂಬಂತೆ ಅವರನ್ನು ಗದರಿಸುತ್ತಾ ತಡೆಯುತ್ತಿದ್ದ ಕಾರ್ಯದರ್ಶಿ ಕುಮಾರ್ .ಇವರೆಲ್ಲರ ನಡುವೆ ಹೋಗುತ್ತಿದ್ದಂತೆ ಪ್ರಭಾ ನಿಂತು ಬಿಟ್ಟರು.
ಆ ಹುಡುಗಿ ಹಾಗು ಆ ಹುಡುಗಿಯ ಹಿಂದೆ ಸೋಮೇಶ ಇಬ್ಬರೂ ಬಿಂದಿಗೆಯಲ್ಲಿ ನೀರನ್ನು ಹೊತ್ತುಕೊಂಡು ಹೋಗುತ್ತಿದ್ದರು.
ಕಾಲನ್ನು ಕೀಳಲಾಗಲಿಲ್ಲ ಪ್ರಭಾವತಿಗೆ.ಹೆಗಲ ಮೇಲೆ ಬಿಂದಿಗೆ ಹೊತ್ತು ನಡೆಯುತ್ತಿದ್ದ ಸೋಮೇಶ್ ಒಂದರೆ ಕ್ಷಣ ನಿಂತ.
ಕಣ್ಣಲ್ಲಿ ಕಣ್ಣು ನೆಟ್ಟಿತು.
ಆ ಹುಡುಗಿಯತ್ತ ನೋಡಿದ ಪ್ರಭಾಳ ಕಣ್ಣು ಅವನನ್ನು ಏನೋ ಕೇಳಿತು. ಅದಕ್ಕೆ ಅವನ ಉತ್ತರ ಕಣ್ಣಲ್ಲಿ ಹೂ ಎಂಬ ಉತ್ತರ ಬಂದಿತು
ಸಮಾರಂಭದ ಸ್ಥಳಕ್ಕೆ ಎಲ್ಲರೂ ನಡೆದರು ಪ್ರಭಾವತಿಯ ಕಾಲು ವೇದಿಯಮೇಲೆ ನಡೆಯಿತು.
ಒಬ್ಬೊಬ್ಬರಾಗಿ ಮಾತಾಡತೊಡಗಿದರು

ಮುಂದೆ ಜನ ಸ್ಥೋಮ ವೇ ಇದ್ದರೂ ಪ್ರಭಾವತಿಯವರ ಗಮನ ಮಾತ್ರ ಬಿಂದಿಗೆಯನ್ನು ಕಾಲಬಳಿ ಇಟ್ಟುಕೊಂಡು ತನ್ನನ್ನೇ ನೋಡುತ್ತಿದ್ದ ಆ ಹುಡುಗಿಯ ಮೇಲೆ . ಓಡಿ ಹೋಗಿ ಅವಳನ್ನು ಅಪ್ಪಲೇ ಎನಿಸುತ್ತಿತ್ತು.

ಅಪ್ಪ ರಾಜ್ಯದ ರಾಜಕೀಯದಲ್ಲಿ ಪ್ರಕಾಶಿಸುತ್ತಿದ್ದರು. ಹಳ್ಳಿಯಲ್ಲಿ ಇದ್ದ ಸೋಮ ಮತ್ತು ಅವಳು ಪರಸ್ಪರ ಆಕರ್ಷಿತರಾದದ್ದು. ಒಮ್ಮೆ ಹೊಲದಮನೆಯಲ್ಲಿ ಇಬ್ಬರ ಮೈ ಒಂದಾಗಿದ್ದು. ಅಚಾತುರ್ಯದ ಫಲವಾಗಿ ಬಸುರಿಯಾದದ್ದು. ಅಮ್ಮ ಅದಕ್ಕೋಸ್ಕರ ಪ್ರಭಾಳನ್ನು ಬೇರೆ ಊರಿಗೆ ಕಳಿಸಿದ್ದರು ಹೆರಿಗೆಯಾಗಿ ಹೆಣ್ಣು ಮಗುವಿಗೆ ತಾಯಿಯಾಗಿದ್ದಳು. ಇನ್ನೇನು ಸೋಮೆಶ್ನೊಡನೆ ಮದುವೆಯಾಗಬೇಕೆಂದುಕೊಳ್ಳುತ್ತಿರುವಾಗಲೇ ರಾಜಕೀಯ ದಳ್ಳುರಿಗೆ ಅಪ್ಪ ಹಾಗು ಅಮ್ಮ ಇಬ್ಬರೂ ಬಲಿಯಾಗಿದ್ದರು . ಊರವರೆಲ್ಲಾ ತಂದೆಯ ಪ್ರತಿನಿಧಿಯಾಗಬೇಕೆಂದು ಕೇಳಿದಾಗ ಮೊದಲಿನಿಂದಲೇ ಮಹತ್ವಾಕಾಂಕ್ಷೆಯುಳ್ಳ ಪ್ರಭಾ ಚುನಾವಣೆಗೆ ನಿಲ್ಲಬೇಕೆಂಬ ನಿರ್ಧಾರಕ್ಕೆ ಬಂದಳು. ಆದರೆ ಸೋಮೇಶ ಇದಕ್ಕೆ ವಿರೋಧಿಸಿದ. ವಿವಾಹ ಎಂದರೆ ಸ್ವಾತಂತ್ರ್ಯದ ಹರಣ ಎಂದು ಅಂದೇ ಅನಿಸಿತು .ಮದುವೆ ಎಂಬ ಬಂಧ ಬೇಡ ಅನಿಸಿತು ಮಗುವನ್ನು ಯಾವುದಾದರೂ ಆಶ್ರಮಕ್ಕೆ ಬಿಡಬೇಕೆಂಬ ನಿರ್ಧಾರಕ್ಕೆ ಬಂದಿದ್ದಳು. ಸೋಮೇಶ್ ತನ್ನ ಮಗುವನ್ನು ತಾನೇ ಸಾಕುವುದಾಗಿ ಹೇಳಿದ. ತಾಯ್ತನವನ್ನು ಅಧಿಕಾರದ ವ್ಯಾಮೋಹ ಗೆದ್ದಿತ್ತು. ಅದಾದನಂತರ ಇಂದೇ ಅವರಿಬ್ಬರ ಭೇಟಿ.
ಕುಮಾರ್ ಪ್ರಭರವರ ಮುಖವನ್ನೇ ನೋಡುತ್ತಿದ್ದ. ಇನ್ನೇನಾಗಬಹುದು ಎಂದು ತಿಳಿದಿತ್ತು.ಅವನಿಗೆ ಪ್ರಭಾರವರ ಪ್ರತಿಯೊಂದು ವಿಷಯವೂ ಗೊತ್ತಿತ್ತು.
ಬಳಿ ಬಂದು ಪಿಸುಗುಟ್ಟಿದ "
",ಮೇಡಂ ಕಂಟ್ರೋಲ್ ಯುವರ್ ಸೆಲ್ಪ್"
"ಕುಮಾರ್ ಅವಳು ನನ್ನ ಮಗಳು". ಪಿಸುದನಿಯಲ್ಲಿ ಗದ್ಗದಿತರಾಗಿ ನುಡಿದರು
"ಮೇಡಂ ಮೀಡಿಯಾ ಎಲ್ಲಾ ನಿಮ್ಮನ್ನೇ ಫೋಕಸ್ ಮಾಡ್ತಿದೆ. ಏನಾದರೂಕೊಂಚ ಸುಳಿವು ಸಿಕ್ರೂ ಆಪ್ಪೋಜಿಶನ್ ಅದನ್ನೇ ದೊಡ್ಡ ವಿಷಯ ಮಾಡ್ತಾರೆ . ಜನರ ಸೆಂಟಿಮೆಂಟ್‌ಗೆ ಪೆಟ್ಟು ಬೀಳುತ್ತೆ. ಯು ಮೇ ನಾಟ್ ಅಚೀವ್ ಯುವರ್ ಟಾರ್ಗೆಟ್ .ಪ್ಲೀಸ್ ಮೇಡಂ ಇಷ್ಟು ದಿನದ ನಿಮ್ಮ ಸ್ಥಾನ ಮಾನ ಎಲ್ಲಾ ಕೆಳಗಾಗುತ್ತೆ"
ಕುಮಾರನ ಪಿಸುದ್ವನಿಯಲ್ಲಿಯೇ ಎಲ್ಲವನ್ನೂ ಹೇಳಿದ್ದ.
"ಮತ್ತೆ ಅವರಿಬ್ಬರನ್ನೂ ಅಲ್ಲಿ ನೋಡೋಕಾಗ್ತಿಲ್ಲ. ಪ್ಲೀಸ್ ಸೆಂಡ್ ದೆಮ್ ಫ್ರಮ್ ಹಿಯರ್"" ಸಾವರಿಸಿಕೊಂಡಿದ್ದರು.
ಸ್ವಲ್ಪ ಹೊತ್ತಿನ ನಂತರ ಪೋಲೀಸರಿಬ್ಬರು
"ಏ ಬಿಂದಿಗೆ ಹೊತ್ಕೊಂಡು ಇಲ್ಲೇನ್ ಮಾಡ್ತಾಇದ್ದೀರ. ಹೋಗಿ ಆಕಡೆ " ಎಂದು ಆ ಬಟ್ಟಲು ಕಂಗಳ ಹುಡುಗಿಯನ್ನು ಹಾಗು ಸೋಮೇಶನನ್ನು ಬೈದು ಕಳಿಸಿದರು. ಸೋಮೇಶನ ಕಣ್ಣು ಒಮ್ಮೆ ವೇದಿಕೆಯ ಮೇಲೆ ಭಾಷಣ ಮಾಡುತ್ತಿದ್ದ ಪ್ರಭಾವತಿಯವರ ಕಡೆಗೆ ತಿರಸ್ಕಾರದಿಂದ ನೋಡಿತು.
"ಅಪ್ಪ ಯಾಕೆ ನಮ್ಮನ್ನ ಬೈದು ಕಳಿಸಿದರು ಅವರು ನಾವೇನು ಮಾಡಿದ್ವಿ? " ಆ ಹುಡುಗಿ ಕೇಳಿದಳು
"ಇಲ್ಲಮ್ಮ ನಮ್ಮಿಂದ ಅವರಿಗೆ ಯಾವ ಹಾನೀನೂ ಇಲ್ಲ. ಆದರೂ ಅವರಿಗೆ ಭಯ " ಎಂದು ಮಗಳ ಕೈನಲ್ಲಿದ್ದ ಬಿಂದಿಗೆಯನ್ನೂ ತಾನೆ ಎತ್ತಿಕೊಂಡ. ಮಗಳು ಹಿಂಬಾಲಿಸಿದಳು
ಇತ್ತ
ಪ್ರಭಾವತಿಯವರ ಭಾಷಣ ಸಾಗಿತ್ತು
"ನಮ್ಮ ದೇಶದಲ್ಲಿ ಮಹಿಳೆಯರಿಗೆ ಪ್ರಾಮುಖ್ಯತೆ ಕೊಡಬೇಕು ಅನೋದೇ ನನ್ನ ಗುರಿ. ಇದನ್ನ ಸಾಧಿಸೋಕೆ ಹೆಣ್ಣು ಅಧಿಕಾರದಲ್ಲಿರಬೇಕು....................................."

Friday, April 3, 2009

ಹೀಗೊಬ್ಬ ಸ್ಯಾಡಿಸ್ಟ್ ಪ್ರೇಮಿಗೆ

ಲೋ
ಯಾಕೋ ಮತ್ತೆ ಬಂದೆ ಜೀವನದಲ್ಲಿ. ಕಾಲೇಜಿನ ದಿನಗಳು ಒಂಬು ಗೋಲ್ಡನ್ ಎರಾ ಇದ್ದ ಹಾಗೆ ಅವು ಮತ್ತೆ ಬರಬಾರದು . ಬಂದರೆ ಜೀವನ ಹಳೇ ಕಬ್ಬಿಣಕ್ಕೆ ಹಾಕೋಕೂ ಲಾಯಕ್ಕಿರಲ್ಲ ಕಣೋ ಹಂಗಾಗಿ ಬಿಡುತ್ತೆ.
ಈ ಲಡಕಾಸಿ ಕೆಲಸದ ಸಮಯದಲ್ಲೂ ಒಂದೂದ್ಸಲ ನೀನು ನನ್ನಕಾಲೇಜ್ ಎಲ್ಲಾ ನೆನಪಾಗುತ್ತೆ ಕಣೋ ಆದ್ರೇನು ಮಾಡೋದು ಜೀವನಾನೆ ಹಂಗೆ . ಕೆಲವೊಂದು ನೆನಪಾದ್ರೂ ಮರೀಲೇಬೇಕಾಗುತ್ತೆ. ಮರೆವೇ ಕೆಲವು ಬಾರಿ ಅನಾಹುತಾನ ತಪ್ಪಿಸುತ್ತೆ
ಆದರೂ ಈಗ ನೆನಪು ಮಾಡ್ಕೋಳ್ತೀನಿ ನಂಗಾಗಿ
ಕಾಲೇಜ್ ಡೇಸ್‌ನಲ್ಲಿ ನೀನು ನಂಗೆ ಪ್ರಪೋಸ್ ಮಾಡಿದ್ದು. ಪ್ರಪೋಸ್ ನಂಗೆ ಇಷ್ಟ ಆಗಿ ಒಪ್ಪಿದ್ದು . ಮೊದಲ ಭೇಟಿ, ನಂತರ ಮೊದಲ ಸಿನಿಮಾ ಆ ಕತ್ತಲ್ಲಲ್ಲಿ ಮೊದಲ ಚುಂಬನ ಜಾಮೂನು ಸಹಾ ಹಿಂಗಿರುತ್ತೋ ಇಲ್ವೋ ಅಂದೆಯಲ್ಲ, ನಾಚಿ ನೀರಾಗಿ ಎದ್ದು ಬಂದಿದ್ದೆ ನಾನು. ಸೆಂಟ್ರಲ್ ಕಾಲೇಜಿನ ಬಳಿಯಲ್ಲಿ ಸಾಯಂಕಾಲದ ಹನಿ ಹನಿ ಮಳೆಯಲ್ಲಿ ಕೈ ಕೈ ಸೇರಿಸಿಕೊಂಡು ಒತ್ತಿಕೊಂಡು ನಡೆಯುತ್ತಿದ್ದಾಗ ಇದೇ ಏನೋ ಪ್ರಪಂಚ ಅಂತನ್ನಿಸಿ ಸ್ವರ್ಗಾನೆ ಧರೆಗಿಳೀತು ಅನ್ಕೊಂಡೆ ಕಣೋ.
ಹಿಂಗೆ ಪ್ರೇಮ ಪರಾಕಾಷ್ಟೆ ಮುಟ್ಟಿತು ಅನ್ಕೊಂಡಾಗ್ಲೇ ಬಂತು ನೋಡು ಎಕ್ಸಾಮ್ ಭೂತ
ಪ್ರೇಮದ ಎಲ್ಲಾ ನಶೇನೂ ಒಂದೇ ಸಲ ಆಚೆ ದೂಡಿಬಿಡ್ತು
ಎಲ್ಲರ ದೃಷ್ಟೀಲೂ ಜಾಣ ಹುಡುಗಿಯಾಗಿದ್ದ ನಾನು ಪರೀಕ್ಷೇಲಿ ಏನೂ ಬರೀದೆ ಇದ್ದಾಗ ಇಷ್ಟೆಲ್ಲಾ ಆಗಿದ್ದು ನಿನ್ನ ಪ್ರೀತಿ ಇಂದಾನೆ ಅನ್ನಿಸ್ತು. ನಿನ್ನ ದೂರಮಾಡಲಾರಂಭಿಸಿದೆ
ನಿಜ ಕಣೋ ನಾನುಮಾಡಿದ್ದು ತಪ್ಪು
ನಾನು ಬರೀ ಪ್ರೇಮಾನ ಬೇಕೆಂದಾಗ ಬೇಕು ಬೇಡ ಎಂದಾಗ ಬೇಡ ಅನ್ಕೊಂಡೋಳು
ಆದ್ರೆ ನೀನು ಪ್ರೇಮಾನೆ ಉಸಿರು, ಪ್ರೀತಿನೆ ಬದುಕು ಅನ್ಕೊಂಡಿದ್ದು ಗೊತ್ತೇ ಆಗಲಿಲ್ಲ
ನೀನು ವಿಷ ಕುಡಿದೆ ಅಂದಾಗಲೂ ನಂಗೆ ನಿನ್ನ ಮೇಲೆ ಜಿಗುಪ್ಸೆ ಅಸಹ್ಯ ಆಯ್ತು ಹೊರತು ಆ ಪ್ರೀತಿ ಮತ್ತೆ ಚಿಗುರಲಿಲ್ಲ.
ನೀನು ದೇವದಾಸ್ ಅದೆ. ಕುಡಿಯಲಾರಂಭಿಸಿದೆ.
ನಿನ್ನ ಪ್ರೀತಿ ದ್ವೇಷವಾಗಿ ಬದಲಾಯ್ತೇನೊ . ಸುಮ್ಮನೆ ಚಿಂದಿ ಚಿಂದಿ ಕಾಗದಗಳನ್ನು ಮನೆಗೆ ಪೋಸ್ಟ್ ಮಾಡಿದೆ . ನಾನುಕೇರ್ ಮಾಡಲಿಲ್ಲ.
ನಮ್ಮ ಮನೆಯವರು ನಿಂಗೆ ಪ್ರಾಣ ಬೆದರಿಕೆ ಹಾಕಿದ್ರು ಅಂತಾನೂ ಗೊತ್ತಾಯ್ತು
ನಂಗೆ ಮನಸು ಕರಗಲಿಲ್ಲ
ಅದಾಗಿ ವರ್ಷಗಳೇ ಕಳೆಯಿತೇನೋ
ಈಗ ಎಲ್ಲಾ ಆದಮೇಲೆ ಓದು ಮುಗೀತು ಒಂದ್ಕಡೆ ಕೆಲಸ ಮಾಡಿಕೊಂಡು ಹಾಯಾಗಿರೋಣ ಅನ್ಕೊಂಡ್ರೆ ನೀನು ಮತ್ತೆ ವಕ್ಕರಿಸಿದೆಯಲ್ಲ.
ಬೇಡ ಕಣೋ ಸುಮ್ನೆ ಅನ್ಯಾಯವಾಗಿ ಸಾಯ್ತೀಯ ನಾನು ಮದುವೆಯಾಗಲಿರೋ ಹುಡುಗ ಪೋಲಿಸ್ ಡಿಪಾರ್ಟ್ಮೆಂಟ್ನಲ್ಲಿ ಇರೋನು ಖಂಡಿತಾ ಸಾಯ್ತೀಯ.
ಈ ಪ್ರೇಮಪ್ರೀತಿ ಎಲ್ಲಾ ಸಿನಿಮಾಗೆ ಸರಿ. ನೀನು ನಿನ್ನ ಲೆವೆಲ್‌ಲ್ಲಿ ಇರೊ ಅಂತ ಹುಡುಗೀನ ಮದುವೆಯಾಗಿ ಸುಖವಾಗಿರು.
ನಾನು ಈಗ ಸಾಫ್ಟ್‌ವೇರ್ ಇಂಜಿನಿಯರ್ ನೀನೋ ನಿನ್ನ ಎಜುಕೇಶನ್ ಕಂಪ್ಲೀಟ್ ಮಾಡಿಲ್ಲ ನಿನ್ನ ಮತ್ತೆ ಪ್ರೀತಿಸಿ ನಾನು ಸುಖವಾಗಿರ್ತೀನಾ ಹೇಳು?
ಅದಕ್ಕೆ ಹೇಳೋದು ಕಾಲೇಜಿನ ದಿನಗಳು ಮತ್ತೆ ಬರಬಾರದು ಅಂತ
ಸಾಕು ಕಣೋ ಇಲ್ಲಿಗೆ

ನಾನೆಂದೂ ಇರಲಿಲ್ಲ ನಿನ್ನ ಪಾಲಿಗೆ
ನಿನ್ನ ನೆನಪೂ ಬೇಡ ನನ್ನ ಬಾಳಿಗೆ
ನಡೆಯುತ್ತಿರುವೆನಾ ಬಾಳ ಮತ್ತೊಂದು ತಿರುವಿಗೆ
ನೀ ಬಾರದಿರು ಮತ್ತೆಂದು ನನ್ನ ಹಾದಿಗೆ

ಹೀಗೊಂದಷ್ಟು ಹನಿಗಳು-೨

ಅಂದು ನಿನ್ನ ಹಾಗೆ ಯಾರೂ ಇಲ್ಲ ಕಣೆ ಎಂದು ಚುಂಬಿಸಿದ ಹುಡುಗ ಇಂದೂ ನಿನ್ನ ಹಾಗೆ ಯಾರೂ ಇಲ್ಲ ಕಣೆ ಎಂದು ದೂರ ಓಡುತ್ತಿದ್ದಾನೆ. ಹೆಂಡತಿ ಕಾಳಿಯಾಗಿದ್ದಾಳೆ
------------------------------------------------------------------------------------------------
ನಿಂಗೇನು ಬೇಕಾದ್ರೂ ಕೇಳು ಕೊಡಿಸ್ತೀನಿ ಅಂತಿದ್ದ ಅಪ್ಪ ಮಗಳು ಕೇಳಿದ ಹುಡುಗನ್ನ ಕೊಡಿಸಲಾಗದೆ ಸಿಡಿಮಿಡಿಯಾಗಿದ್ದಾನೆ
-------------------------------------------------------------------------------------------------
ನನ್ನ ಹತ್ರ ಬೇಕಾದಷ್ಟು ದುಡ್ಡಿದೆ ಅಂತ ಕುಣೀತಿದ್ದ ನಮ್ಮೂರ ಜಿಪುಣ ತಾತ ಇಂದು ಮಲಗಿದ್ದಾನೆ ಹೆಣವಾಗಿ ದುಡ್ಡೆಲ್ಲಾ ಅವನ ಮಗನ ಕೈ ಸೇರಿದೆ
---------------------------------------------------------------------------------------------
ಅಮ್ಮನ ದಿನದಂದು ಅಮ್ಮನ ಬಗ್ಗೆ ಉದ್ದದ ಭಾಷಣ ಬಿಗಿದು ಎಲ್ಲರ ಕಣ್ಣಲ್ಲಿ ನೀರು ತರಿಸಿದ ಸಮಾಜ ಸೇವಕನ ಅಮ್ಮ ಅವನನ್ನು ವೃದ್ದಾಶ್ರಮದ ಟಿ.ವಿಯಲ್ಲಿ ನೋಡಿ ನಿಟ್ಟುಸಿರು ಬಿಟ್ಟಳು
----------------------------------------------------------------------------------------------

ನೀವು ಬರೆಯೋ ಕತೆಯಲ್ಲೆಲ್ಲಾ ನಾಯಕಿಯರು ಯಾವಾಗ್ಲೂ ಸಾಯ್ತಾರೇಕೆ ಎಂದು ಪ್ರಶ್ನಿಸಿದವನ ಮುಖ ನೋಡಿ ನಕ್ಕ ಆ ಕತೆಗಾರ. ಈಗ ತಾನೆ ತನ್ನ ಮೂರನೇ ಪ್ರೇಯಸಿಯನ್ನೂ ಕೊಂದದ್ದು ನೆನಪಾಗಿರಬೇಕು.
------------------------------------------------------------------------------------------------
ಅತ್ತೆ ಹೆಂಡತಿ ಬಹಳ ಹೊತ್ತಾದರೂ ಬಾರದಿದ್ದುದ್ದನ್ನು ಕಂಡು ಬ್ಯೂಟಿ ಪಾರ್ಲರ್ ಬಾಗಿಲ ಬಳಿಯಲ್ಲಿ ನಿಂತವನಿಗೆ ಮುಂದೆ ಇದ್ದ ಇಬ್ಬರಲ್ಲಿ ಹೆಂಡತಿ ಯಾರು ಎಂಬುದು ಸಮಸ್ಯೆಯಾಯಿತು
-------------------------------------------------------------------------------------------------
ಗೆಳೆಯ ನನಗೆ ನಿನ್ನ ಅಸ್ತಿ ಬೇಡ ಬ್ಯಾಂಕ್ ಬ್ಯಾಲೆನ್ಸ್ ಬೇಡ ನೀನೊಬ್ಬನಿದ್ದರೆ ಸಾಕು ಎಂದು ಹಾಡುತ್ತಿದ್ದ ಹುಡುಗಿ ಇಂದು ಸಾರಿ ಗೆಳೆಯ ನನಗೆ ನೀನೂ ಬೇಡ ಎಂದು ಕೂಗುತ್ತಿದ್ದಾಳೆ. ಅವಳ ಹೊಸ ಬಾಯಫ್ರೆಂಡ್ ಮರ್ಸಿಡೀಸ್ ಬೆಂಜ್ ಕೊಡಿಸಿದ್ದಾನಂತೆ
-------------------------------------------------------------------------------------